ಇಂದು ರೇಷನ್ಗೆ ರಜೆ ಇಲ್ಲ
ಕಾಸರಗೋಡು: ಓಣಂ ಹಬ್ಬದ ಪ್ರಯುಕ್ತ ಭಾನುವಾರ ರೇಷನ್ ಅಂಗಡಿಗಳು ಕಾರ್ಯಾಚರಿಸಲಿದೆ ಎಂದು ಜಿಲ್ಲಾ ಸಪ್ಲೈ ಆಫೀಸರ್ ತಿಳಿಸಿದ್ದಾರೆ.
ಸೆ.1ರಂದು ಮದ್ಯ ಮಾರಾಟ ನಿಷೇಧ
ಕಾಸರಗೋಡು: ಓಣಂ ಹಬ್ಬದ ಹಿನ್ನೆಲೆಯಲ್ಲಿ ಸೆ.1ರಂದು ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಕೇರಳ ಹೈಕೋಟರ್ು ಆದೇಶಿಸಿದೆ.ಸೆ.1ರಂದು ಮದ್ಯ ಮಾರಾಟ ಮಾಡಲು ಸಕರ್ಾರ ನಿರ್ಧರಿಸಿದ್ದನ್ನು ಪ್ರಶ್ನಿಸಿ ಶಾಸಕ ಟಿ.ಎನ್.ಪ್ರತಾಪನ್ ಮತ್ತು ತೃಶೂರು ನಿವಾಸಿ ಪಿ.ಡಿ.ಜೋಸೆಫ್ ಸಾರ್ವಜನಿಕ ಹಿತಾಸಕ್ತಿಯ ಅಜರ್ಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ಹೈಕೋಟರ್ು ಚೀಫ್ ಜಸ್ಟೀಸ್ ಎಸ್.ಆರ್.ಬನ್ನೂರುಮಠ, ಜಸ್ಟಿಸ್ ಎ.ಕೆ.ಬಶೀರ್ ಎಂಬವರನ್ನೊಳಗೊಂಡ ವಿಭಾಗೀಯ ಪೀಠ ಆದೇಶ ನೀಡಿದೆ.ಆದರೆ ಸೆ.1ರಿಂದ 4ರ ವರೆಗೆ ಓಣಂ ಹಿನ್ನೆಲೆಯಲ್ಲಿ ಮದ್ಯ ನಿಷೇಧಿಸಬೇಕು ಎಂಬ ಮನವಿಯನ್ನು ಹೈಕೋಟರ್ು ತಿರಸ್ಕರಿಸಿದೆ. ಸಾಮಾನ್ಯವಾಗಿ ತಿಂಗಳ ಮೊದಲ ದಿನ ರಾಜ್ಯದಲ್ಲಿ ಡ್ರೈ ಡೇ ಆಚರಿಸುತ್ತಿದ್ದು, ಈ ದಿನದಂದು ಮದ್ಯದಂಗಡಿಗಳು ಕಾರ್ಯಾಚರಿಸುತ್ತಿಲ್ಲ. ಓಣಂ ಪ್ರಯುಕ್ತ ಈ ನಿಧರ್ಾರವನ್ನು ಶುಕ್ರವಾರ ಸೇರಿದ ಸಚಿವ ಸಂಪುಟ ಬದಲಿಸಿ ಮದ್ಯ ಮಾರಾಟ ಮಾಡಲು ತೀಮರ್ಾನಿಸಿತ್ತು. ಹೈಕೋಟರ್ಿನ ತೀಪರ್ಿನಿಂದ ಸಕರ್ಾರಕ್ಕೆ ಮುಖಭಂಗವಾಗಿದೆ.
36 ಬಿಯರ್ ಬಾಟಲಿ: ವಶ
ಕಾಸರಗೋಡು: ನಗರದ ಎಸ್.ವಿ.ಟಿ.ರಸ್ತೆ ಸಮೀಪದ ಹೋಟೆಲೊಂದರಲ್ಲಿ ಬಚ್ಚಿಟ್ಟಿದ್ದ ಬಿಯರ್ನ 36 ಬಾಟಲಿಗಳನ್ನು ಪೊಲೀಸರು ವಶಪಡಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ಸಾಯಿನಾಥ ಎಂಬಾತನ ವಿರುದ್ಧ ದಾವೆ ಹೂಡಲಾಗಿದೆ.
ಹಡಗಿನಲ್ಲಿ ನಾಪತ್ತೆ: ದೂರುಕಾಸರಗೋಡು: ಮುಂಬೈಯಲ್ಲಿ ಕಚೇರಿ ಹೊಂದಿರುವ ಸಿಂಗಾಪುರದ ಹಡಗು ಕಂಪೆನಿಯ ನೌಕರ ಹಾಗೂ ಇಲ್ಲಿನ ಕೂಡ್ಲು ಪಾರೆಕಟ್ಟೆ ನಿವಾಸಿ ಪ್ರದೀಪ್ ರಾಜ್(26) ಎಂಬವರು ನಾಪತ್ತೆಯಾಗಿದ್ದಾರೆ ಎಂದು ನಗರ ಪೊಲೀಸರಿಗೆ ಹೆತ್ತವರು ದೂರು ನೀಡಿದ್ದಾರೆ.2009 ಮೇ 1ರ ಬಳಿಕ ಪ್ರದೀಪ್ ರಾಜ್ ಮನೆಯನ್ನು ಸಂಪಕರ್ಿಸಿಲ್ಲ. ಮೇ 2ರಂದು ಕಂಪೆನಿ ಟೆಲಿಗ್ರಾಂ ಮೂಲಕ ನಾಪತ್ತೆಯಾಗಿರುವುದಾಗಿ ಮನೆಗೆ ಸಂದೇಶ ಕಳುಹಿಸಿತ್ತು ಎಂದು ಪ್ರದೀಪ್ರಾಜ್ನ ತಂದೆ ನಾಗೇಶ್ ಚೆಟ್ಟಿಯಾರ್ ದೂರಿನಲ್ಲಿ ತಿಳಿಸಿದ್ದಾರೆ.
ಹಂದಿ ಜ್ವರ: 4 ಕೇಂದ್ರಗಳು ಆರಂಭ
ಕಾಸರಗೋಡು: ಎಚ್1ಎನ್1 ರೋಗದ ಹಿನ್ನೆಲೆಯಲ್ಲಿ ಜಿಲ್ಲೆಯ 4 ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.ಚೆಂಗಳ ಇ.ಕೆ.ನಾಯನಾರ್ ಸ್ಮಾರಕ ಸಹಕಾರಿ ಆಸ್ಪತ್ರೆ, ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಮತ್ತು ಕಾಞಂಗಾಡು ಸಜರ್ಿಕೇರ್ ಆಸ್ಪತ್ರೆಗಳಲ್ಲಿ ಈ ಕೇಂದ್ರ ತೆರೆಯಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
www.kasaragodvartha.com, Malayalam Online Newspaper from Kasaragod brings latest news from our home land. The first comprehensive local web media of KASARAGOD
Saturday, August 29, 2009
Subscribe to:
Post Comments (Atom)
No comments:
Post a Comment