Saturday, August 1, 2009

ಓದುವಿಕೆಯೇ ನಿಜವಾದ ಸಂಸ್ಕೃತಿ/Kannada Sammelana

ಕಾಸರಗೋಡು: ಪ್ರೀತಿಗೆ ಮಣಿಯುವುದೇ ಸಂಸ್ಕೃತಿ. ಓದುವಿಕೆಯೇ ನಿಜವಾದ ಸಂಸ್ಕೃತಿ ಎಂದು ಸಮ್ಮೇಳನಾಧ್ಯಕ್ಷ ವಿ.ಗ ನಾಯಕ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
ಕಾಸರಗೋಡಿನ ಲಲಿತಕಲಾ ಸದನದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಸಹಯೋಗದಲ್ಲಿ ಆಯೋಜಿಸಿದ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಟಿವಿಯಿಂದ ನಮ್ಮ ಸಂಸ್ಕೃತಿ ನಾಶವಾಗುತ್ತಿದೆ. ಕಚ್ಚಾಡುವ ಕೆಲಸ ಕನರ್ಾಟಕದಲ್ಲಿ ಹೆಚ್ಚಾಗಿದೆ. ಆದರೆ ಒಗ್ಗಟ್ಟಾಗುವ ಮೂಲಕ ಕನ್ನಡದ ಸಂಸ್ಕೃತಿಯನ್ನು ಉಳಿಸಬಹುದು. ಇಡೀ ಕನರ್ಾಟಕದ ಕನ್ನಡಕ್ಕಿಂತ ಕಾಸರಗೋಡಿನ ನೆಲದ ಕನ್ನಡ ಶುದ್ಧ, ಸುಂದರವಾಗಿದೆ ಎಂದೂ ಅವರು ಹೇಳಿದರು.
ದುಬೈ ಕನ್ನಡ ಸಂಘದ ಅಧ್ಯಕ್ಷ ಸಿ.ಆರ್.ಶೆಟ್ಟಿ ಸಮ್ಮೇಳನವನ್ನು ಉದ್ಘಾಟಿಸಿದರು. ರಾಮಚಂದ್ರ ಬೈಕಂಪಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಪ್ರಸಾರಾಂಗದ ನಿದರ್ೇಶಕ ಮೋಹನ್ ಕುಂಟಾರು `ಕಾಸರಗೋಡು ಸ್ವಾತಂತ್ರ್ಯ ಹೋರಾಟಗಾರರು' ಎಂಬ ಕೃತಿಯನ್ನು ಬಿಡುಗಡೆಗೊಳಿಸಿದರು. ಕೃತಿ ರಚಿಸಿದ ಕೆ.ಶಿವರಾಮ ಶೆಟ್ಟಿ ಕಾಸರಗೋಡು,  ಸ್ವಾತಂತ್ರ್ಯ ಹೋರಾಟಗಾರ ನಾಮದೇವ ಶೆಣೈ, ಶಾಸಕ ಸಿ.ಟಿ. ಅಹಮ್ಮದಾಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕ.ಸಾ.ಪ. ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕಲ್ಕೂರ, ಲಲಿತಾ ಕಲಾ ಸದನದ ಅಧ್ಯಕ್ಷ ವೈ.ಎಸ್.ವಿ.ಭಟ್, ಪತ್ರಕರ್ತ ಎಸ್.ಕೆ.ಹಳೆಯಂಗಡಿ ಬರೋಡ ಹಾಜರಿದ್ದರು.
ಡಾ.ಎಚ್.ಎಸ್. ಶಿವಶಂಕರ್, ಇಂದುದಾಸ್ ಶೆಟ್ಟಿಬರೋಡಾ(ಸಮಾಜಸೇವೆ), ಪದ್ಮನಾಭ ಬಿ.ಆರ್. ದೊಡ್ಡಬಳ್ಳಾಪುರ, ರಾಧಾಕೃಷ್ಣ ಕೆ.ಉಳಿಯತ್ತಡ್ಕ(ಸಾಹಿತ್ಯ), ಕಾಗೋಡು ಅಣ್ಣಪ್ಪ(ರಂಗಕಲೆ), ಬಾಲಸುಬ್ರಹ್ಮಣ್ಯ ಎಂ.(ಎಂಜಿನಿಯರಿಂಗ್), ವಿದುಷಿ ದೀಪಾ ರಾವ್ ದಾವಣಗೆರೆ(ಭರತನಾಟ್ಯ), ಪ್ರದೀಪ್ ಕಾಸರಗೋಡು(ರಂಗಭೂಮಿ) ಎಂಬವರಿಗೆ ಹೃದಯವಾಹಿನಿ ದಶಮಾನೋತ್ಸವ ಪ್ರಶಸ್ತಿ ವಿತರಿಸಲಾಯಿತು.
ಉದ್ಘಾಟನಾ ಸಮಾರಂಭದ ಮೊದಲು ನೃತ್ಯ ವೈವಿಧ್ಯ ಹಾಗೂ ಪುತ್ತೂರಿನ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ `ಬಾರಿಸು ಕನ್ನಡ ಡಿಂಡಿಮ', ಚಿತ್ರಕಲಾವಿದ ವೀರೇಶ್ ಬಾದಾಮಿ ಅವರ ಏಕವ್ಯಕ್ತಿ  ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.
ಶಿವರಾಮ ಕಾಸರಗೋಡು ಸ್ವಾಗತಿಸಿ, ದೀಪಾ ರಾವ್ ಕಾರ್ಯಕ್ರಮ ನಿರೂಪಿಸಿದರು.


 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Friday, July 31, 2009

ಶಿವಮೊಗ್ಗದ ಯುವತಿ ಸಾವು/Sajila Death

ಕಾಸರಗೋಡು: ಮನೆಗೆಲಸಕ್ಕಿದ್ದ ಯುವತಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಇಲ್ಲಿನ ತಳಂಗೆರೆಯಲ್ಲಿ ನಡೆದಿದೆ.ಮೂಲತಃ ಶಿವಮೊಗ್ಗ ನಿವಾಸಿ ಸಜಿಲ(18) ಸಾವನ್ನಪ್ಪಿದ ಯುವತಿ. ಈಕೆ ತಳಂಗೆರೆ ಕೆ.ಎ.ಇಬ್ರಾಹಿಂ ಎಂಬವರ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಮನೆಗೆಲಸಕ್ಕಿದ್ದಳು. ಗುರುವಾರ ಸಂಜೆ ವೇಳೆಗೆ ಸಾವು ಸಂಭವಿಸಿದೆ. ಗ್ರೈಂಡರ್ಗೆ ಶಾಲು ಸಿಲುಕಿ ಕುತ್ತಿಗೆ ಬಿಗಿದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಆದರೆ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿರುವ ಯುವತಿಯ ಹೆತ್ತವರು ಶವವನ್ನು ಶುಕ್ರವಾರ ಪರಿಯಾರಂ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ದಿದ್ದಾರೆ.ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶಾಸಕರಿಗೆ ಅಗೌರವ: ಅಮಾನತು

ಕಾಸರಗೋಡು: ತಿರುವನಂತಪುರದಿಂದ ಕಾಸರಗೋಡಿಗೆ ಮಾವೇಲಿ ಎಕ್ಸ್ಪ್ರೆಸ್ಸಿನಲ್ಲಿ ಸಂಚರಿಸುತ್ತಿರುವಾಗ ಶಾಸಕ ಸಿ.ಟಿ.ಅಹಮ್ಮದಾಲಿ ಅವರೊಂದಿಗೆ ಅಗೌರವದಿಂದ ವತರ್ಿಸಿದ ಆರ್.ಪಿ.ಎಫ್. ಕಾನ್ಸ್ಟೇಬಲ್ ಪಿ.ಸಿ.ಜೋಸೆಫ್ ಎಂಬಾತನನ್ನು ಅಮಾನತುಗೊಳಿಸಲಾಗಿದೆ.ಇತ್ತೀಚೆಗೆ ಎನರ್ಾಕುಳಂ ಎಂಬಲ್ಲಿ ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಶಾಸಕರು ರೈಲ್ವೆ ಉಪ ಸಚಿವ ಇ.ಅಹಮ್ಮದ್ಗೆ ದೂರು ನೀಡಿದ್ದರು. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರೈಲ್ವೇ ಸುರಕ್ಷಾ ಆಯುಕ್ತರಿಗೂ ಶಾಸಕರು ಮನವಿ ಮಾಡಿದ್ದಾರೆ.

ಡೆಂಗ್ಯು ಜ್ವರ: ಆಸ್ಪತ್ರೆಗೆ

ಕಾಸರಗೋಡು: ಸೀತಾಂಗೋಳಿಯ ರಾಜೀವ್ ನಗರ ಕಾಲನಿ ಸಮೀಪದ ನಿವಾಸಿಗಳಾದ ದಂಪತಿಗಳು ಡೆಂಗ್ಯು ಜ್ವರ ಬಾಧಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಸ್ಥಳೀಯ ಜೋಸೆಫ್ ಡಿ'ಸೋಜಾ ಅವರ ಪುತ್ರ ರಾಜು ಸ್ಟೀಫನ್ ಮತ್ತು ಅವರ ಪತ್ನಿ ವೀಣಾ ಡಿ'ಸೋಜಾ ಅವರು ಇತ್ತೀಚೆಗೆ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ವೇಳೆ ಇವರಿಗೆ ಡೆಂಗ್ಯು ಜ್ವರ ಇದೆ ಎಂದು ವೈದ್ಯರು ದೃಢೀಕರಿಸಿದ್ದರು.

ಕಿಚ್ಚಿಟ್ಟು ಬೈಕ್ ನಾಶ

ಕಾಸರಗೋಡು: ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಪೆಟ್ರೋಲ್ ಸುರಿದು ಕಿಚ್ಚಿಟ್ಟು ನಾಶಪಡಿಸಿದ ಘಟನೆ ಶುಕ್ರವಾರ ಮುಂಜಾನೆ ನಗರದಲ್ಲಿ ನಡೆದಿದೆ.ನಗರದ ಟ್ರಾಫಿಕ್ ಪೊಲೀಸ್ ಠಾಣೆಯ ಎದುರು ಇರುವ ಅಬೂಬಕ್ಕರ್ ಕೋಯ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜ್ವರ ಬಾಧಿಸಿ ವಿದ್ಯಾರ್ಥಿ ಸಾವು

ಕಾಸರಗೋಡು: ಜ್ವರ ಬಾಧಿಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಕುಂಬಳೆಯಲ್ಲಿ ನಡೆದಿದೆ.ಕುಂಬಳೆ ಆರಿಕ್ಕಾಡಿ ನಿವಾಸಿ ಅಬ್ದುಲ್ಲಕುಞ್ಞಿ ಅವರ ಪುತ್ರ ಕಲಂದರ್ ಶಫೀಕ್(22) ಸಾವನ್ನಪ್ಪಿದ ಯುವಕ. ಈತ ಬೆಂಗಳೂರಿನಲ್ಲಿ ಎಂ.ಬಿ.ಎ.ಈ ಮೂಲಕ ಜಿಲ್ಲೆಯಲ್ಲಿ ಜ್ವರ ಬಾಧಿಸಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೇರಿದೆ. ಸಾಂಕ್ರಾಮಿಕ ಜ್ವರಗಳಾದ ಚಿಕುನ್ಗುನ್ಯಾ, ಡೆಂಗ್ಯೂ ಜಿಲ್ಲೆಯಲ್ಲಿ ಹರಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿಯೇ 2 ಸಾವಿರಕ್ಕೂ ಅಧಿಕ ಮಂದಿ ದಾಖಲಾಗಿದ್ದಾರೆ.

ಹಲ್ಲೆ

ಕಾಸರಗೋಡು: ಗುತ್ತಿಗೆದಾರನೋರ್ವನ ತಲೆಗೆ ತಂಡವೊಂದು ಮಾರಕವಾಗಿ ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ಚೆರ್ಕಳದಲ್ಲಿ ನಡೆದಿದೆ.ಚೆರ್ಕಳದ ಕೆ.ಎಂ.ಅಬ್ದುಲ್ ರಹಿಮಾನ್ ಗಾಯಾಳು.ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪೂರ್ವದ್ವೇಷ ಘಟನೆಗೆ ಕಾರಣೆಂದು ನಗರ ಪೊಲೀಸರು ತಿಳಿಸಿದ್ದಾರೆ.

ವರದಕ್ಷಿಣೆ ಕಿರುಕುಳ: ದೂರು

ಕಾಸರಗೋಡು: ವರದಕ್ಷಿಣೆಗೆ ಸಂಬಂಧಿಸಿ ಕಿರುಕುಳ ನೀಡಿದ ಆರೊಪಿಗಳ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಪೆರಿಯಡ್ಕದ ಕೆ.ಎಚ್.ಮೊಯ್ದೀನ್ ಅವರ ಪುತ್ರಿ ಆಯಿಷತ್ ಷಬಾನ ದೂರು ನೀಡಿದ್ದಾರೆ. ಈಕೆಯ ಪತಿ ಚೆಮ್ನಾಡ್ ನಿವಾಸಿ ಮುಹಮ್ಮದ್ ರಾಫಿ, ಆತನ ತಂದೆ ಮೊಯ್ದು, ತಾಯಿ ರುಖಿಯ, ಸಹೋದರ ಖಬೀರ್ ಎಂಬವರ ವಿರುದ್ಧ ದೂರು ದಾಖಲಿಸಲಾಗಿದೆ.

--www.kasaragodvartha.comthe first local online news paper in Malayalam.brings latest news in Malayalam & English links our home land to the world.:::: the signature of Kasaragod ::::

ಬ್ರಾಡ್ ಬ್ಯಾಂಡ್ ಸೇವಾ ದರ ಇಳಿಸಿದ ಏರ್ ಟೆಲ್/Airtel Broadband Price war

ನವದೆಹಲಿ: ಬ್ರಾಡ್ ಬ್ಯಾಂಡ್ ಸೇವಾ ದರವನ್ನು ಇಳಿಸುವ ಮೂಲಕ ಭಾರತಿ ಏರ್ ಟೆಲ್ ಸಂಸ್ಥೆ ರಾಷ್ಟ್ರದ ಬ್ರಾಡ್ ಬ್ಯಾಂಡ್ ಕ್ಷೇತ್ರದಲ್ಲಿ ಬೆಲೆ ಸಮರಕ್ಕೆ ನಾಂದಿ ಹಾಡಿದೆ.
1 ಎಂಬಿಪಿಎಸ್ ಬ್ರೌಸಿಂಗ್ ವೇಗದ ಯೋಜನೆಗೆ ತಿಂಗಳಿಗೆ 1699 ರು.ಗಳನ್ನು ಚಂದಾದಾರರಿಂದ ತೆಗೆದುಕೊಳ್ಳುತ್ತಿದೆ. 512 ಎಂಬಿಪಿಎಸ್ ಗೆ 1099 ರು.ಗಳನ್ನು ಶುಲ್ಕ ವಿಧಿಸುತ್ತಿದೆ. ಉಚಿತ ಮೌಲ್ಯವರ್ಧಿತ ಸೇವೆ (VAS) ಪ್ಯಾಕೇಜಿಗೆ ಕೇವಲ 500 ರು. ಶುಲ್ಕ ವಿಧಿಸುವ ಯೋಚನೆಯನ್ನೂ ಭಾರತಿ ಏರ್ ಟೆಲ್ ಹೊಂದಿದೆ.
ಈ ದರ ಇಳಿಕೆ ಸುದ್ದಿ ಹೊರಬೀಳುತ್ತಿದ್ದಂತೆ ಭಾರತಿ ಸ್ಪರ್ಧಿಗಳಾದ ಮಹಾನಗರ ಟೆಲಿಫೋನ್ ನಿಗಮ ಲಿ.(ಎಮ್ ಟಿಎನ್ಎಲ್) ಮತ್ತು ಭಾರತ್ ಸಂಚಾರ ನಿಗಮ ಲಿ.(ಬಿಎಸ್ಎನ್ಎಲ್) ಸಂಸ್ಥೆಗಳು ಕೂಡ ಭಾರತಿಗಿಂತ ದರ ಇಳಿಸುವುದಾಗಿ ಹೇಳಿ ನೀಡಿವೆ.
ಈಕುರಿತು ಎಮ್ ಟಿಎನ್ಎಲ್ ತಾಂತ್ರಿಕ ನಿರ್ದೇಶಕ ಕುಲದೀಪ್ ಸಿಂಗ್ ಹೇಳಿಕೆ ನೀಡಿದ್ದು, ನಮ್ಮ ಸ್ಪರ್ಧಿಗಳು ಬೆಲೆ ಇಳಿಸಿದರೆ ನಾವೂ ದರ ಪರಿಶೀಲನೆ ಮಾಡಬೇಕಾಗುತ್ತದೆ ಎಂದಿದ್ದಾರೆ. ಬಿಎನ್ಎನ್ಎಲ್ ಸಂಸ್ಥೆ ಕೂಡ ಇದೇ ನಿಟ್ಟಿನಲ್ಲಿ ಚಿಂತಿಸುತ್ತಿದೆ.
ಒಟ್ಟಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ದಿನ ಸಕ್ಕರೆ ಸೇರಿದಂತೆ ಅಕ್ಕಿ, ಬೇಳೆ, ಹೂವು, ಹಣ್ಣು, ತರಕಾರಿ ಬೆಲೆಗಳು ಆಕಾಶಮುಖಿಯಾಗಿದ್ದರೆ, ಬ್ರಾಡ್ ಬ್ಯಾಂಡ್ ಸೇವೆಗಳು ಇಳಿಮುಖವಾಗಿ ಗ್ರಾಹಕರಿಗೆ ಸಂತಸ ತರಲಿವೆ.



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಗಾಂಜಾ ವಶ/Gaanja-Arrest

ಮಂಗಳೂರು: ಸಿ.ಓ.ಡಿ ಡಿ.ವೈಎಸ್.ಪಿಯವರಾದ ಶ್ರೀ. ಸುಬಾಶ್ಚಂದ್ರ ರವರು ನೀಡಿದ ಮಾಹಿತಿಯನ್ನು ಅನುಸರಿಸಿ ಈ ದಿನ ತಾರೀಕು 30/07/2009 ರಂದು ಮಂಗಳೂರು ನಗರದ ಸವರ್ಿಸ್ ಬಸ್ಸುನಿಲ್ದಾಣದ ಬಳಿ ಬಾಗಲಕೋಟೆ ತಾಲೂಕಿನ ಸರಗಪ್ಪ ಎಂಬವನನ್ನು ಬಂಧಿಸಿ ಆತನಿಂದ ಸುಮಾರು 50,000/- ರೂಪಾಯಿ ಮೌಲ್ಯದ 2 ಕಿಲೋ 100 ಗ್ರಾಂ ನಿಷೇಧಿತ ಮಾಧಕ ವಸ್ತುವಾದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಡಿ.ಸಿ.ಐ.ಬಿ. ಇನ್ಸ್ಪೆಕ್ಟರ್ ಹೆಚ್.ಎನ್.ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡವು ಯಶಸ್ವಿಯಾಗಿರುತ್ತದೆ.
ಖಚಿತ ವರ್ತಮಾನದಂತೆ ಸುರತ್ಕಲ್ನಿಂದ ಮಂಗಳೂರಿಗೆ ಗಾಂಜಾ ಮಾರಾಟ ಮಾಡುವ ಕುರಿತು ಗೋಣಿ ಚೀಲದಲ್ಲಿ ಗಾಂಜಾವನ್ನು ತರುತ್ತಿದ್ದಾನೆ ಎಂಬ ಮಾಹಿತಿಯಂತೆ ಈ ದಿನ ತಾರೀಕು 30/07/2009 ರಂದು ಬೆಳಗ್ಗಿನ ಜಾವ 0730 ಗಂಟೆಗೆ ನಗರ ಮಂಗಳೂರು ಸವರ್ಿಸ್ ಬಸ್ಸ್ನಿಲ್ದಾಣದ ಬಳಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಮಣ್ಣಿಕೇರಿ ಗ್ರಾಮ ದೇವಿ ದೇವಸ್ಥಾನದ ಬಳಿಯ ರಾಮಪ್ಪ ಎಂಬವರ ಮಗ 35 ವರ್ಷದ ಸಗರಪ್ಪ ಯಾನೆ ಶಂಕರ ಎಂಬವನನ್ನು ವಶಕ್ಕೆ ಪಡೆದು ಆತನಿಂದ ಸುಮಾರು 50,000/- ರೂಪಾಯಿ ಮೌಲ್ಯದ 2 ಕಿಲೋ 100 ಗ್ರಾಂ ನಿಷೇಧಿತ ಮಾಧಕ ವಸ್ತುವಾದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾಯರ್ಾಚರಣೆಯಲ್ಲಿ ಡಿ.ಸಿ.ಐ.ಬಿ ಇನ್ಸ್ಪೆಕ್ಟರ್ ಹೆಚ್.ಎನ್.ವೆಂಕಟೇಶ್ ಪ್ರಸನ್ನ ಮತ್ತು ಎಎಸ್ಐ ನಾರಾಯಣ ಮಣಿಯಾಣಿ, ಸಿಬ್ಬಂದಿಗಳಾದ ಶಶಿಧರ ಶೆಟ್ಟಿ, ಸಂತೋಷ್ ಪಡೀಲ್, ಗಣೇಶ್ ಕಲ್ಲಡ್ಕ, ಚಂದ್ರ, ಚೇತನ್ ಬೊಟ್ಯಾಡಿ, ದಿನೇಶ್ ಬೇಕಲ್, ಕುಮಾರ, ಪ್ರಶಾಂತ್, ಧಮರ್ೇಂದ್ರ, ಶಾಂತಶೆಟ್ಟಿ ಹಾಗೂ ದೇವಯ್ಯ ಮತ್ತು ಎನ್ಡಿಪಿಎಸ್ ಘಟಕದ ಸಿಬ್ಬಂಧಿ ಕೃಷ್ಣ ರವರು ಮೇಲಿನ ಕಾಯರ್ಾಚರಣೆಗಳಲ್ಲಿ ಭಾಗವಹಿಸಿರುತ್ತಾರೆ.

 
ಕುಸಿದು ಬಿದ್ದು ಸಾವು
 
ದಿನಾಂಕ 30/07/09 ರಂದು ಕೋಟಾ ಠಾಣಾ ಸರಹದ್ದಿನ ತೆಕ್ಕಟ್ಟೆಯ ರಾಘವೇಂದ್ರ ಸ್ವಾಮಿ ಮಠದ ಹತ್ತಿರದ ವಾಸಿ ಬಿಡುಗು ಪೂಜಾರಿ (65 ವರ್ಷ)ರವರು ಸಂಜೆ 5:30 ಗಂಟೆಗೆ ತೆಕ್ಕಟ್ಟೆಯ ಮಲ್ಯಾಡಿ ನೀರಿನ ಹೊಂಡದಲ್ಲಿ ಬಲೆಯನ್ನು ಕಟ್ಟಿ ಮೀನು ಹಿಡಿಯಲು ಹೋದವರು ಸುಸ್ತಾಗಿ ಅಲ್ಲಿಯೇ ಹೊಂಡದ ಬಳಿ ಕುಸಿದು ಬಿದ್ದು ಮೃತಪಟ್ಟಿರುತ್ತಾರೆ. ಮೃತ ದೇಹವು ದಿನಾಂಕ 31/07/09ರ ಬೆಳಿಗ್ಗೆ ಪತ್ತೆಯಾಗಿದ್ದು ಈ ಬಗ್ಗೆ ಅವರ ಮಗನಾದ ರಾಜುರವರು ಕೋಟಾ ಠಾಣೆಯಲ್ಲಿ ಪಿರ್ಯಾದು ನೀಡಿದ್ದು ಅದರಂತೆ ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 27/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನದಿ ನೀರಿನಲ್ಲಿ ಕೊಚ್ಚಿ ಹೋದವರ ಮೃತ ದೇಹ ಪತ್ತೆ
ದಿನಾಂಕ 26/07/09 ರಂದು ಬೆಳಿಗ್ಗೆ 10.30 ಗಂಟೆಗೆ ತಮಿಳುನಾಡಿನ ಈಚಂಬಾಡಿ ವಾಸಿ ರಾಜಶೇಖರನ್ (32 ವರ್ಷ) ಎಂಬವರು ಸೌಪಣರ್ಿಕಾ ಸ್ನಾನಘಟ್ಟದಲ್ಲಿ ಸ್ನಾನ ಮಾಡುತ್ತಿರುವಾಗ ಅಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಈ ದಿನ ದಿನಾಂಕ 31/07/09 ರಂದು 10.30 ಗಂಟೆಗೆ ಕೊಲ್ಲೂರು ಗ್ರಾಮದ ಮಾವಿನಕಾರು ಸೇತುವೆಯ ಬಳಿ ಸೌಪಣರ್ಿಕ ಹೊಳೆಯಲ್ಲಿ ರಾಜಶೇಖರನ್ರ ಮೃತ ದೇಹ ಪತ್ತೆಯಾಗಿರುತ್ತದೆ. ಈ ಬಗ್ಗೆ ಜಯಚಂದ್ರ ತಂದೆ: ರಾಜು ಪೂಜಾರಿ, ಸೌಪಣರ್ಿಕಾ ಸ್ನಾನಘಟ್ಟ, ಕೊಲ್ಲೂರು ಗ್ರಾಮ, ಕುಂದಾಪುರರವರು ನೀಡಿದ ದೂರಿನ ಮೇರೆಗೆ ಕೊಲ್ಲುರು ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 04/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣ
 
ದಿನಾಂಕ 31/07/09 ರಂದು ಶಂಕರನಾರಾಯಣ ಠಾಣಾ ವ್ಯಾಪ್ತಿಯ ಹಾಲಾಡಿ ಕಡೆುಂದ ಅಂಪಾರು ಕಡೆಗೆ ಆರೋಪಿ ಪ್ರಕಾಶ ಕುಲಾಲ (25 ವರ್ಷ) ಎಂಬವರು ತನ್ನ ಕೆಎ 20 ಎ 7779 ನಂಬ್ರದ ತೂಪಾನ್ ಟ್ರಾಕ್ಸ್ನ್ನು ಚಲಾಯಿಸಿಕೊಂಡು ಬಂದು ಬೆಳಿಗ್ಗೆ 07:45 ಗಂಟೆ ಸುಮಾರಿಗೆ ಶಂಕರನಾರಾಯಣ ಗ್ರಾಮದ ಹೆರವಳ್ಳಿ ಎಂಬಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಆತನ ನಿಯಂತ್ರಣ ತಪ್ಪಿ ಟೆಂಪೋ ಟ್ರಾಕ್ಸ್ ಪಲ್ಟಿಯಾಗಿ ರಸ್ತೆಗೆ ಅಡ್ಡಬಿದ್ದ ಪರಿಣಾಮ ಟೆಂಪೋ ಟ್ರಾಕ್ಸ್ನಲ್ಲಿ ಗಿರಿಜಾ ಕ್ಲೇ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಲು ಪ್ರಯಾಣಿಸುತ್ತಿದ್ದ ಫಾಜಿಲ್ (21 ವರ್ಷ) ತಂದೆ: ಅಬ್ದುಲ ಮಜೀದ್, ವಾಸ: ಗುಡಿಕೆರೆ, 74 ಉಳ್ಳೂರು ಕುಂದಾಪುರ ತಾಲೂಕು, ರಾಘವೇಂದ್ರ ನಾಯ್ಕ, ಗಂಗಮ್ಮ ಶೆಡ್ತಿ, ಸಾವಿತ್ರಿ ನಾಯ್ಕ, ಯಶೋಧ ಕುಲಾಲ್ತಿ ಎಂಬವರಿಗೆ ಸಾದಾ ಸ್ವರೂಪದ ಗಾಯವಾಗಿರುತ್ತದೆ. ಈ ಅಪಘಾತದ ಬಗ್ಗೆ ಗಾಯಾಳು ಫಾಜಿಲ್ರವರು ನೀಡಿದ ದೂರಿನ ಮೇರೆಗೆ ಶಂಕರನಾರಾಯಣ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 103/09 ಕಲಂ 279, 337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 

ಕಳವು ಪ್ರಕರಣ
 
ಶ್ರೀ ಮೂಡುರ ಪೂಜಾರಿ ತಂದೆ: ತಿಮ್ಮಪ್ಪ ಪ್ರೂಜಾರಿ ವಾಸ: ಹಕ್ಲಾಡಿ ಗ್ರಾಮದವರು ಹಕ್ಲಾಡಿ ಹೋರ್ಬೊಬ್ಬರ್ಯ ದೇವಸ್ಥಾನದಲ್ಲಿ ದರ್ಶನ ಪಾತ್ರಿಯಾಗಿ ಕೆಲಸ ಮಾಡಿಕೊಂಡಿದ್ದು, ಹೋರ್ ಬೊಬ್ಬರ್ಯ ದೇವಸ್ತಾನದ ದರ್ಶನ ಸೇವೆಗೆ ಬೇಕಾಗುವ ಎಲ್ಲಾ ಚಿನ್ನ ಮತ್ತು ಬೆಳ್ಳಿಯ ದರ್ಶನ ಸಾಮಾಗ್ರಿಗಳನ್ನು ದರ್ಶನದ ಬಳಿಕ ದೇವಸ್ಥಾನದ ಆಡಳಿತ ಸಮಿತಿಯವರ ಅನುಮತಿಯಂತೆ ತಮ್ಮ ಬಳಿ ಇಟ್ಟುಕೊಂಡಿದ್ದು, ದಿನಾಂಕ 25-07-09 ರಂದು ತ್ರಾಸಿ ಗ್ರಾಮದಲ್ಲಿ ದರ್ಶನ ಸೇವೆಯನ್ನು ಮಾಡಿ ಎಲ್ಲಾ ಸೊತ್ತುಗಳನ್ನು ಒಂದು ಚೀಲದಲ್ಲಿ ಹಾಕಿ ಅವರ ಮನೆಯೊಳಗಿನ ಕಿಂಡಿ ಕೋಣೆಯಲ್ಲಿ ಇಟ್ಟಿದ್ದನ್ನು ದಿನಾಂಕ: 29-07-09ರಂದು ಮಧ್ಯಾಹ್ನ 2:00 ಗಂಟೆಗೆ ಕೋಣೆಗೆ ಹೋಗಿ ನೋಡಿದಾಗ ಅವರು ಇಟ್ಟಿದ್ದ ಸೊತ್ತುಗಳ ಸಮೇತ ಚೀಲ ಕಾಣೆಯಾಗಿದ್ದು, ಈ ಬಗ್ಗೆ ಅವರ ಮನೆಯವರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರೆಯದೇ ಇದ್ದು, ಸದ್ರಿ ಸೊತ್ತುಗಳನ್ನು ಯಾರೋ ಮನೆಯೊಳಗೆ ಬಂದು ಸದ್ರಿ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಸದ್ರಿ ಕಳವು ಮಾಡಿಕೊಂಡು ಹೋಗಿರುವ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 70,000/- ಆಗಬಹುದು ಎಂಬುದಾಗಿ ಶ್ರೀ ಮೂಡುರ ಪೂಜಾರಿ ರವರು ನೀಡಿದ ಪಿರ್ಯಾದಿಯಂತೆ ಗಂಗೊಳ್ಳಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 76/09 ಕಲಂ 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ವರದಕ್ಷಿಣೆ ನಿಷೇಧ ಕಾಯ್ದೆ ಪ್ರಕರಣ
 
ಶ್ರೀಮತಿ ರೇಷ್ಮಾ (22 ವರ್ಷ) ಗಂಡ: ಆದಿಲ್ ಶೇರ್ ವಾಸ: ಹಿಲಾಫಿ ಮೊಹಲ್ಲಾ, ಹಾಸನ ರವರು ದಿನಾಂಕ: 25.08.05ರಂದು ಆದಿಲ್ ಶೇರ್ನನ್ನು ಮದುವೆಯಾಗಿ 2 ಮಕ್ಕಳಾಗಿರುತ್ತವೆ. ವಿವಾಹವಾದ ಕೆಲವೇ ದಿನಗಳಲ್ಲಿ ಅದಿಲ್ ಶೇರ್ ಮತ್ತು ಅವನ ಮನೆಯವರಾದ ಅಲ್ಲಾಹ್ ಬಕ್ಷ್, ಶಕೀಲ, ಜರೀನಾ, ನಯಾಜ್ ಅಹ್ಮದ್ ಮತ್ತು ಅಮೀರ್ ಜಾನ್ ರವರು ರೇಷ್ಮಾರವರಿಗೆ ವರದಕ್ಷಿಣೆ ನೀಡುವಂತೆ ಪೀಡಿಸುತ್ತಾ ಕಠಿಣವಾದ ಕೆಲಸ ಮಾಡಿಸುತ್ತಿದ್ದು, ಪದೇ ಪದೇ ಅವರಿಗೆ ಮತ್ತು ಮಕ್ಕಳಿಗೆ ಹಿಯಾಳಿಸುವುದು ಹಾಗೂ ದೈಹಿಕವಾಗಿ ಹಿಂಸೆ ನೀಡಲಾರಂಬಿಸಿದರು. ಕೆಲವು ದಿನಗಳ ನಂತರ ಅವರ ಗಂಡನ ಹಾಗೂ ಅವರ ಮನೆಯವರ ಕಿರುಕುಳವನ್ನು ಸಹಿಸಲಾಗದೇ ತಮ್ಮ ತವರು ಮನೆಗೆ ಹಿಂದಿರುಗಿರುತ್ತಾರೆ. ದಿನಾಂಕ: 19.04.09 ಬೆಳಿಗೆ 10:30 ಗಂಟೆಗೆ ಅವರ ಗಂಡ ಮತ್ತು ಆತನ ಮನೆಯವರು ತವರು ಮನೆಗೆ ಬಂದಿದ್ದ ರೇಷ್ಮಾರವರನ್ನು ಮನೆಯಿಂದ ಹೊರಗೆ ಎಳೆದು ಹಾಕಿ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ಒದ್ದು ಹಲ್ಲೆ ಮಡಿರುತ್ತಾರೆ. ಹಾಗೂ ಹಿಂದಿರುಗಿ ಹೋಗುವಾಗ ಈ ಮೊದಲೇ ಬೇಡಿಕೆ ಇಟ್ಟ ಚಿನ್ನಾಭರಣ ತಂದುಕೊಡದಿದ್ದರೆ ರೇಷ್ಮಾರವರನ್ನು ಮತ್ತು ಅವರ ಮಕ್ಕಳನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ರೇಷ್ಮಾರವರು ಖಾಸಾಗಿ ಪಿರ್ಯಾದಿ ನೀಡಿದ್ದು ಅದರಂತೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: ಅ.ಕ್ರ. 151/09 ಕಲಂ 498 ಎ, 506 ಜೊತೆಗೆ 149 ಕಲಂ 3 ಮತ್ತು 4 ವರದಕ್ಷಿಣೆ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣ
 
ದಿನಾಂಕ: 29/07/2009 ರಂದು ಮುಲ್ಲಾ ಮಹಮ್ಮದ್ ಸಾಬ್ ರವರು ಅವರ ಹೆಂಡತಿ ಪಾತಿಮಾಬಿ ಎಂಬವರೊಂದಿಗೆ ವಡೇರಹೋಬಳಿ ಗ್ರಾಮದ ವಿನಾಯಕ ಜಂಕ್ಷನ್ ಬಳಿ ಬಸ್ಸಿನಿಂದಿಳಿದು ರಸ್ತೆ ದಾಟುವರೇ ರಾ.ಹೆ.17 ರಲ್ಲಿ ನಿಂತಿರುವಾಗ ಸಮಯ ಸುಮಾರು 10-45 ಗಂಟೆಗೆ ಕೆ.ಎ.20 ಎಸ್. 9183 ನೇ ಮೋಟಾರು ಸೈಕಲನ್ನು ಅದರ ಚಾಲಕನು ಕೋಟೇಶ್ವರ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಾತಿಮಾಬಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಯ ಹಿಂಭಾಗ, ಬಲ ತೊಡೆಗೆ ಹಾಗೂ ಬಲ ಭಾಗದ ಕೆನ್ನೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಮುಲ್ಲಾ ಮಹಮ್ಮದ್ ಸಾಬ್ ರವರು ನೀಡಿದ ಪಿರ್ಯಾದಿಯಂತೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 226/09 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ: 29/07/09 ರಂದು 16.45 ಗಂಟೆಗೆ ಆದಿ ಉಡುಪಿ ಕೃಷಿ ಮತ್ತು ತೋಟಗಾರಿಕಾ ಇಲಾಖಾ ಕಛೇರಿ ಬಳಿ ಮೊಟಾರು ಸೈಕಲ್ ನಂಬ್ರ ಕೆಎ-20-ಕೆ-2870ನೇದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಕರಾವಳಿ ಜಂಕ್ಷನ್ ಕಡೆಯಿಂದ ಚಲಾಯಿಸಿಕೊಂಡು ಬರುತ್ತಿರುವ ವೇಳೆ ರಸ್ತೆಯಲ್ಲಿದ್ದ ಹೊಂಡವನ್ನು ತಪ್ಪಿಸುವ ಭರದಲ್ಲಿ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಅಂದರೆ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಬಾಗ್ಯರಾಜ್ (22 ವರ್ಷ) ತಂದೆ:ಕೆ ಬಾಬು ವಾಸ: ಅಂಬಲಪಾಡಿ, ಪಂದುಬೆಟ್ಟು, ಉಡುಪಿ ರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ನಂ ಕೆಎ-30-ಕೆ-0938ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಗ್ಯರಾಜ್ ರವರ ತುಟಿಗೆ ರಕ್ತಗಾಯ ಹಾಗೂ ತಲೆಗೆ, ಕೈಗೆ ಹಾಗೂ ಸೊಂಟಕ್ಕೆ ಜಜ್ಜಿದ ಒಳಗಾಯವಾಗಿರುತ್ತದೆ ಮತ್ತು ಆಪಾದಿತ ಮೋಟಾರು ಸೈಕಲ್ ಸವಾರನಿಗೂ ಗಾಯವಾಗಿರುತ್ತದೆ. ಈ ಬಗ್ಗೆ ಬಾಗ್ಯರಾಜ್ ರವರು ನೀಡಿದ ಪಿರ್ಯಾದಿಯಂತೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 249/09 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಹಲ್ಲೆ ಪ್ರಕರಣ
 
ದಿನಾಂಕ: 30/07/09 ರಂದು ರಾತ್ರಿ ಸಮಯ 9.15 ಗಂಟೆಗೆ ಉಡುಪಿ ಕರಾವಳಿ ಜಂಕ್ಷನ್ ಬಳಿ ಇರುವ ಐ.ಓ.ಸಿ ಪೆಟ್ರೋಲ್ ಬಂಕ್ನಲ್ಲಿ ಕೆ ಬಾಲಕೃಷ್ಣ ಶೆಣೈ ತಂದೆ: ಕೆ ವಾಸುದೇವ ಶೆಣೈ ವಾಸ: ದ್ವಾರಕ, ಡಿ-60, ಅನಂತ ನಗರ, ಮಣಿಪಾಲ ರವರು ಕಾರ್ ನಂಬ್ರ ಕೆಎ-20-ಎಂ-4182ನೇದಕ್ಕೆ ಪೆಟ್ರೋಲ್ ತುಂಬಿಸಿದ್ದು, ಆ ವೇಳೆ ಬಸ್ ನಂ ಕೆಎ-20-ಸಿ-6789ನೇ ಬಸ್ಸನ್ನು ಅದರ ಚಾಲಕನು ಅವರ ಕಾರಿಗೆ ಅಡ್ಡವಾಗಿ ನಿಲ್ಲಿಸಿದಾಗ ಅದನ್ನು ಹಿಂತೆಗೆಯುವರೇ ಆತನ ಬಳಿ ಹೇಳಿದಾಗ ಆತ ಒಪ್ಪದೇ ಗಲಾಟೆಗೆ ಪ್ರಾರಂಭಿಸಿ, ಬಸ್ಸಿನ ಮಾಲಕ ಹಾಗೂ ಇತರ ಮೂರು ಮಂದಿ ಬಾಲಕೃಷ್ಣ ಶೆಣೈ ಹಾಗೂ ಅವರ ಮಗ ಸಂದೀಪನಿಗೆ ಆವಾಚ್ಯ ಶಬ್ದಗಳಿಂದ ಬೈದು, ಕಾರನ್ನು ಪುಡಿ ಮಾಡುವುದಾಗಿ ಬೆದರಿಸಿ, ಅವರಿಗೆ ಹೊಡೆದು ಕೈಗೆ ಗಾಯಗೊಳಿಸಿ, ಕತ್ತಿಗೆ ಕೈ ಹಾಕಿ ದೂಡಿದ್ದು, ಅಲ್ಲದೇ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ ಈ ಬಗ್ಗೆ ಬಾಲಕೃಷ್ಣ ಶೆಣೈ ಯವರು ನೀಡಿದ ಪಿರ್ಯಾದಿಯಂತೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 250/09 ಕಲಂ 323, 324, 504, 506, 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ: 30/07/09 ರಂದು ರಾತ್ರಿ 9.00 ಗಂಟೆಗೆ ಉಡುಪಿ ಕರಾವಳಿ ಜಂಕ್ಷನ್ ಬಳಿ ಇರುವ ರೋಹಿಣಿ ಪೆಟ್ರೊಲ್ ಬಂಕ್ನಲ್ಲಿ 2 ಜನರು ಕಾರ್ ನಂಬ್ರ ಕೆಎ-20-ಎಂ-4182ನೇದಕ್ಕೆ ಪೆಟ್ರೋಲ್ ಹಾಕಲು ಬಂದಿದ್ದು, ಸದ್ರಿ ಕಾರಿನ ಎದುರು ಸುದಾರ್ ಬಸ್ಸ್ ಡಿಸೇಲ್ ಹಾಕಲು ನಿಂತಿದ್ದು, ಕಾರಿಗೆ ಪೆಟ್ರೋಲ್ ಹಾಕಿದ ಬಳಿಕ ಬಸ್ಸಿನವರಲ್ಲಿ ಬಸ್ಸು ತೆಗೆಯಿರಿ ಎಂದು ಹೇಳಿದಾಗ ಬಸ್ಸಿನವರು ಸ್ವಲ್ಪ ನಿಲ್ಲಿ ಮತ್ತೆ ಬಸ್ಸು ತೆಗೆಯುತ್ತೇನೆ ಎಂದಾಗ ಬಸ್ಸಿನ ಎದುರು ಹೋಗಿ ಕುಳಿತು ಬಸ್ಸನ್ನು ತೆಗೆಯಲು ಬಿಡುವುದಿಲ್ಲ ಎಂದು ಜಗಳ ಪ್ರಾರಂಭಿಸಿ ಬಸ್ಸಿನವರೊಂದಿಗೆ ಹೊಡೆದಾಡಿಕೊಂಡರು. ಆಗ ರಾಜೇಶ್ ಶೆಟ್ಟಿ ತಂದೆ:ನಾರಾಯಣ ಶೆಟ್ಟಿ ವಾಸ: ನಿಟ್ಟೂರು, ಉಡುಪಿ ರವರು ಹಾಗೂ ನಿತಿನ್, ಕುಮಾರ್ ರವರು ಜಗಳವನ್ನು ಬಿಡಿಸಿದ್ದ ವೇಳೆ ಅವರನ್ನು ಉದ್ದೇಶಿಸಿ ನಿಮಗೆ ಡಿಸೇಲ್ ಹಾಕುವಾಗ ಬಸ್ಸನ್ನು ಸರಿಯಾಗಿ ನಿಲ್ಲಿಸಲು ಆಗುವುದಿಲ್ಲವಾ ಎಂದು ಕಾರಿನಲ್ಲಿದ್ದವರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ರಾಜೇಶ್ ಶೆಟ್ಟಿ, ನಿತಿನ್ ಮತ್ತು ಕುಮಾರ ಎಂಬವರಿಗೆ ಹೊಟ್ಟೆಗೆ ಬೆನ್ನಿಗೆ ಕೈಗೆ ಹೊಡೆದರು. ಗಲಾಟೆ ಜಾಸ್ತಿಯಾದ ಸಮಯ ಬಸ್ಸಿನವರು ಮತ್ತು ಇತರರು ಬಂದಾಗ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಕಾರ್ ಚಲಾಯಿಸಿಕೊಂಡು ಹೋಗಿರುವುದಾಗಿದೆ ಈ ಬಗ್ಗೆ ರಾಜೇಶ್ ಶೆಟ್ಟಿ ಯವರು ನೀಡಿದ ಪಿರ್ಯಾದಿಯಂತೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 251/09 ಕಲಂ 323, 504, 506, 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಇತರ ಪ್ರಕರಣ
 
ದಿನಾಂಕ: 30/7/09 ರಂದು ಹರೀಶ (40 ವರ್ಷ) ತಂದೆ: ಪರದೇಶಿ ವಾಸ: ಕಂಚಿನಡ್ಕ, ನಡ್ಸಾಲು ಗ್ರಾಮದವರು ಅವರ ಮಗಳೊಂದಿಗೆ ಬಜಾಜ್ ಎಂ. 80 ವಾಹನದಲ್ಲಿ ಹೋಗುತ್ತಿದ್ದಾಗ ನಡ್ಸಾಲು ಗ್ರಾಮದ ಕಾರ್ಕಳ ಜಂಕ್ಷನ್ ಬಳಿ 16:00 ಘಂಟೆಗೆ ಶಿವ, ಗಣೇಶ ಮತ್ತು ಗೋವಿಂದ ಎಂಬವರು ಸಮಾನ ಉದ್ದೇಶದಿಂದ ಮೋಟಾರ್ ಸೈಕಲ್ನಲ್ಲಿ ಬಂದು ಅವರನ್ನು ತಡೆದು ನಿಲ್ಲಿಸಿ, ಕೈಕಾಲುಗಳನ್ನು ಕಡಿದು ಹಾಕುವುದಾಗಿ ಜೀವಬೆದರಿಕೆ ಹಾಕಿರುವುದಾಗಿದೆ. ಹಳೇ ದ್ವೇಷದಿಂದ ಅವರು ಈ ಕೃತ್ಯವೆಸಗಿದ್ದಾಗಿದೆ ಎಂಬುದಾಗಿ ಹರೀಶ್ ರವರು ನೀಡಿದ ಪಿರ್ಯಾದಿಯಂತೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 129/09 ಕಲಂ: 341, 506, ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಕಳವಾದ ಬೈಕಿನ ಸಹಿತ ಆರೋಪಿಗಳ ಸೆರೆ
 
ದಿನಾಂಕ 24/07/2009ರಂದು ರಾತ್ರಿ ಸಮಯದಲ್ಲಿ ಕುಂದಾಪುರ ಕೋಣಿ ಗ್ರಾಮದ ಹೆಚ್.ಎಂ.ಟಿ., ರಸ್ತೆಯ ಬಳಿ ವಾಸವಿರುವ ಗಿರೀಶ್ ಹೆಬ್ಬಾರ್ರವರು ಮನೆಯ ಎದುರು ಪಾಕರ್್ ಮಾಡಲಾಗಿದ್ದ ಹೀರೋಹೋಂಡಾ ಮೋಟಾರು ಬೈಕ್ ಕೆಎ 20 ಎಲ್ 7231ನ್ನು ಕದ್ದ ಇಬ್ಬರು ಆರೋಪಿಗಳನ್ನು ಕೇವಲ ಐದು ದಿನಗಳಲ್ಲಿ ಉಡುಪಿ ಕಲ್ಯಾಣಪುರ ಸಂತೆಕಟ್ಟೆ ಬಳಿ ಖಚಿತ ವರ್ತಮಾನದಂತೆ ಮಾರಾಟಕ್ಕೆ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿದ್ದು ಆರೋಪಿಗಳನ್ನು ಕುಂದಾಪುರ ತಾಲೂಕಿನ ವಡೇರಹೋಬಳಿಯ ಸಂತೋಷ (27 ವರ್ಷ) ಹಾಗೂ ಕೋಣಿಯ ರತ್ನಾಕರ (27 ವರ್ಷ) ಎಂದು ಗುರುತಿಸಲಾಗಿದೆ. ಬೈಕಿನ ಅಂದಾಜು ಬೆಲೆ 23,000/- ರೂಪಾಯಿ ಆಗಿರುತ್ತದೆ. ಈ ಕಾಯರ್ಾಚರಣೆಯನ್ನು ದಿನಾಂಕ 29/07/2009ರ ರಾತ್ರಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರವೀನ್ ಮಧುಕರ್ ಪವಾರ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕಾಶೀನಾಥ್ ಎಸ್. ತಳಗೇರಿರವರ ನಿದರ್ೇಶನದಂತೆ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಜಯಂತ್ ವಿ.ಶೆಟ್ಟಿರವರ ಮಾರ್ಗದರ್ಶನದಲ್ಲಿ ಡಿ.ಸಿ.ಐ.ಬಿ., ಪೊಲೀಸ್ ನಿರೀಕ್ಷಕರಾದ ಶ್ರೀ ಗಣೇಶ್ ಎಂ. ಹೆಗಡೆ ಮತ್ತು ಅವರ ಸಿಬ್ಬಂದಿಯವರಾದ ಶ್ರೀಯುತರಾದ ದಾಮೋದರ ಪುತ್ತೂರು, ಮಹಾಬಲ ಶೆಟ್ಟಿ, ನಾರಾಯಣ, ಸತೀಶ್ ಬಲ್ಲಾಳ್, ಉದಯ್ ಕುಂದರ್, ದಿನೇಶ್ ಶೆಟ್ಟಿ, ವಾಮನ, ರತ್ನಾಕರ, ಮನೋಹರ ಉದ್ಯಾವರರವರು ನಡೆಸಿರುತ್ತಾರೆ. ವಶಪಡಿಸಿಕೊಂಡ ಬೈಕ್ ಮತ್ತು ಆರೋಪಿಗಳನ್ನು ಕುಂದಾಪುರ ಠಾಣೆಗೆ ಹಸ್ತಾಂತರಿಸಲಾಗಿದೆ.
 
ಅನುಮಾನಾಸ್ಪದ ವ್ಯಕ್ತಿಯ ಬಂಧನ
ದಿನಾಂಕ 29/07/09 ರಂದು ರಾತ್ರಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ.ರವರು ಠಾಣಾ ಸಿಬ್ಬಂದಿಯವರೊಂದಿಗೆ ಗಸ್ತು ಕರ್ತವ್ಯದಲ್ಲಿರುವಾಗ ರಾತ್ರಿ ಸುಮಾರು 2:30 ಘಂಟೆಗೆ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ಬೆಳ್ಮಣ್ ಕಾಪರ್ೊರೇಶನ್ ಬ್ಯಾಂಕ್ ಬಳಿ ಇರುವ ಕಟ್ಡಡದ ಬಳಿ ಓರ್ವ ವ್ಯಕ್ತಿ ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸಿದ್ದನ್ನು ಕಂಡು ಆತನು ಯಾವುದೋ ಬೇವಾರಂಟು ತಕ್ಷೀರು ಮಾಡುವ ಇರಾದೆಯಲ್ಲಿದ್ದಾನೆ ಎಂಬ ಬಲವಾದ ಗುಮಾನಿಯ ಮೇರೆಗೆ ಮುಂಜಾಗ್ರತಾ ಕ್ರಮಕ್ಕಾಗಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಲ್ಲಿ ತನ್ನ ಹೆಸರು ವಿಶಾಲ್ ರಾಥೋಡ್ ಅಲಿಯಾಸ ವಿಶ್ವನಾಥ ಅಲಿಯಾಸ್ ಭೋಲ (21 ವರ್ಷ), ತಂದೆ ದಿವಂಗತ ರಮೇಶ್ ರಾಥೋಡ್ ವಾಸ: ಎಮ್.ಆರ್.ಎಮ್.ಸಿ. ಮೆಡಿಕಲ್ ಕಾಲೇಜು ಎದುರುಗಡೆ, ಸೇಡಂ ರಸ್ತೆ, ಗುಲ್ಬರ್ಗ ಎಂದು ತಿಳಿಸಿದ್ದು ಆತನಿಂದ ಸದ್ವರ್ತನೆಗಾಗಿ ಮುಚ್ಚಳಿಕೆ ಪಡೆಯುವರೇ ಕಾರ್ಕಳ ತಾಲೂಕು ದಂಢಾಧಿಕಾರಿಯವರಿಗೆ ಠಾಣಾ ಅಪರಾಧ ಕ್ರಮಾಂಕ 88/09 ಕಲಂ 109 ಸಿ.ಆರ್.ಪಿ.ಸಿ.ಯಂತೆ ವರದಿ ಸಲ್ಲಿಸಲಾಗಿದೆ.
 
 
ಅಪಘಾತ ಪ್ರಕರಣಗಳು
 
ದಿನಾಂಕ 29-07-09 ರಂದು ಮದ್ಯಾಹ್ನ 3.15 ಗಂಟೆಗೆ ಕೊಲ್ಲೂರು ಠಾಣಾ ಸರಹದ್ದಿನ ಉಳಿಕೋಣು, ಮುದೂರು ಗ್ರಾಮದ ಕುಂದಾಪುರ ವಾಸಿ ಶೀನ ಪೂಜಾರಿ(48) ತಂದೆ: ದಿ ಗೋವಿಂದ ಪೂಜಾರಿ, ಎಂಬವರು ಕೊಲ್ಲೂರಿಗೆ ಬರುವರೇ ತನ್ನ ಮೋಟಾರ್ ಸೈಕಲ್ ನಂಬ್ರ ಕೆ.ಎ. 20 ಕೆ 5484 ರಲ್ಲಿ ಹಿಂಬದಿ ಕುಳಿತಿದ್ದು, ಮಂಜುನಾಥರವರು ಚಲಾಯಿಸಿಕೊಂಡು ಬರುತ್ತಿರುವಾಗ, ಜಡ್ಕಲ್ ಶಾಲೆಯ ಬಳಿ ತಿರುವಿನಲ್ಲಿ ಆರೋಪಿ ತನ್ನ ಕಾರುಚಾಲಕ ನಂಬ್ರ ಕೆ.ಎ.424110 ನ್ನು ಕೊಲ್ಲೂರಿನಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋ.ಸೈಕಲ್ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಶೀನ ಪೂಜಾರಿರವರಿಗೆ ಸಾಧಾರಣ ಗಾಯವಾಗಿದ್ದು, ಮೋ.ಸೈಕಲ್ ಚಲಾಯಿಸುತ್ತಿದ್ದ ಮಂಜುನಾಥನಿಗೆ ಬಲಕಾಲಿಗೆ ಮೂಳೆ ಮುರಿತದ ಗಾಯ ಉಂಟಾಗಿರುವುದಾಗಿದೆ. ಈ ಅಪಘಾತದ ಬಗ್ಗೆ ಶೀನ ಪೂಜಾರಿ ರವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 46/09 ಕಲಂ. 279,337,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 28/7/09 ರಂದು ಬೋಜ.ಡಿ.ಕೊಟ್ಯಾನ್ ಎಂಬವರು ತನ್ನ ಬಜಾಜ್ ಎಂ80 ನಂಬ್ರ ಕೆಎ 20 ಎಲ್ 4629 ನ್ನು ಸವಾರಿ ಮಾಡಿಕೊಂಡು ಮನೆ ಕಡೆಗೆ ಸುಲ್ತಾನ್ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು 22.00 ಘಂಟೆಗೆ ಕುಂದರ್ ಮೂಲ ಸ್ಥಾನದ ಬಳಿ ತಲ್ಫಿದಾಗ ಎದುರಿನಿಂದ ಅಂದರೆ ಕೋಡಿ ಕಡೆಯಿಂದ ಸುಲ್ತಾನ್ ರಸ್ತೆ ಕಡೆಗೆ ಆರೋಪಿ ತನ್ನ ಮೋಟಾರ್ ಸೈಕಲ್ ನಂಬ್ರ ಕೆಎ14-ಜೆ-673 ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಎಂ80 ಸವಾರರಿಗೆ ಡಿಕ್ಕಿ ಹೊಡೆದು ಅಪಘಾತವೆಸಗಿರುತ್ತಾರೆ. ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಎಂ80 ಸವಾರ ಭೋಜ ರವರ ಎಡಕಾಲಿಗೆ ರಕ್ತಗಾಯ ಹಾಗೂ ಎಡಕಣ್ಣಿಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ವತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯಾಧಿಕಾರಿಯವರು ಅವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಅಪಘಾತದ ಬಗ್ಗೆ ಮನೋಹರ (29) ತಂದೆ; ವೆಂಕಪ್ಪ ಕಕರ್ೆರ ವಾಸ; ಕಾಂಚನ್ ಐಸ್ ಪ್ಲಾಂಟ್ ಬಳಿ ಹೆಜಮಾಡಿ ಗ್ರಾಮ ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಪಡುಬಿದ್ರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/09 ಕಲಂ. 279,337,ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ರಮೇಶ ತಂದೆ: ಲೋಕಯ್ಯ ಕಲ್ಲಾರಿ ಮನೆ, ಬೆಳ್ತಂಗಡಿ ಎಂಬವರು ಕೆ.ಎ. 20/ಎ 4046 ನೇ ಲಾರಿಯಲ್ಲಿ ಕ್ಲಿನರ್ ಆಗಿದ್ದು, ದಿನಾಂಕ 28/07/09 ರಂದು ಉಡುಪಿ ನಿಟ್ಟೂರಿನಿಂದ ಮಾರ್ಬಲ್ ತುಂಬಿಸಿಕೊಂಡು ವಾಲ್ತೂರು ಕಡೆಗೆ ಬರುತ್ತಾ ಕುಂದಾಪುರ ಕಂಡ್ಲೂರು-ವಾಲ್ತೂರು ರಸ್ತೆಯ ಸಾಗರ ಎಸ್ಟೇಟ್ ಹತ್ತಿರ ತಲುಪುವಾಗ್ಗೆ ರಾತ್ರಿ ಸಮಯ 11:15 ಗಂಟೆಗೆ ಆರೋಪಿ ಕೆ.ಎ. 20/ ಎ 4046 ನೇ ಲಾರಿ ಚಾಲಕ ರಮೇಶ್ ರೆಡ್ಡಿಯು ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಲಾರಿಯು ಮುಗುಚಿ ಬಿದ್ದು, ಲಾರಿಯ ಒಳಗಿದ್ದ, ಕೂಲಿಯಾಳುಗಳಾದ ಮಂಜುನಾಥ ಮತ್ತು ಸಿದ್ದಪ್ಪರವರಿಗೆ ಗಾಯಗಳಾಗಿದ್ದು, ಅಲ್ಲದೇ ಲಾರಿ ಚಾಲಕ ರಮೇಶ್ ರೆಡ್ಡಿ ಇವರಿಗೂ ಗಾಯವಾಗಿರುತ್ತದೆ. ಈ ಬಗ್ಗೆ ರಮೇಶರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 225/09 ಕಲಂ. 279,337,ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 29/07/09 ರಂದು ಜೆಸಿಂತ್ ಸಿ. ಮೆಂಡೋನ್ಸ, ಗಂಡ: ಚಾಲ್ಸ್ ಮೆಂಡೋನ್ಸ್, ವಾಸ: ಮನೆ ನಂ. 4-709, ರಾಜೀವ ನಗರ, ಅಲೆವೂರ್ ರೋಡ್, ಮಣಿಪಾಲ್, ಉಡುಪಿ. ಎಂಬವರು ತಮ್ಮ ಮನೆ ರಾಜೀವ ನಗರಕ್ಕೆ ಹೋಗುವರೇ ತಮ್ಮ ಕಾರ್ ನಂಬ್ರ: ಕೆ.ಎ-20-ಎನ್-970ನ್ನು ಚಲಾಯಿಸಿಕೊಂಡು ತೆಂಕುಪೇಟೆ ಮಾರ್ಗವಾಗಿ ಸಮಯ ಸುಮಾರು 17:00 ಗಂಟೆಗೆ ಬೀಡಿನಗುಡ್ಡೆ ಜಂಕ್ಷನ್ ಬಳಿ ತಲುಪುವಾಗ್ಗೆ ಆಪಾದಿತ ಕೆ.ಎ-19-ಎಂ-7474ನೇ ಮಹೇಂದ್ರ ಜೀಪ್ನ ಚಾಲಕ ತನ್ನ ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಿಟ್ಪಾಡಿ ಕಡೆಯಿಂದ ಬೀಡಿನಗುಡ್ಡೆ ಕಡೆಗೆ ಚಲಾಯಿಸಿಕೊಂಡು ಬಂದು ಕಾರಿಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎದುರಿನ ಭಾಗ ಸಂಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ರಮೇಶರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 225/09 ಕಲಂ. 279,337,ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 29/07/09 ರಂದು ವೆಂಕಟೇಶ (31),ತಂದೆ: ದಿ: ಸೋಮನಾಥ ಶೇವರ್ೆಗಾರ, ವಾಸ: ತೆಂಕಬೆಟ್ಟು, ಉಪ್ಪೂರು ಗ್ರಾಮ, ಉಡುಪಿ ಎಂಬವರು ತನ್ನ ಮಾವ ಯು.ರಾಧಾಕೃಷ್ಣ ರವರೊಂದಿಗೆ ಆದಿ ಉಡುಪಿ ಸಂತೆಗೆ ಬಂದಿದ್ದು ಸಂತೆಯಲ್ಲಿ ಸಾಮಾನುಗಳನ್ನು ಖರೀದಿಸಿಕೊಂಡು ವಾಪಾಸು ಕರಾವಳಿ ಜಂಕ್ಷನ್ ಕಡೆಗೆ ಮಾವನವರೊಂದಿಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸಂಜೆ ಸುಮಾರು 4:00 ಗಂಟೆ ಸಮಯಕ್ಕೆ ಆದಿ ಉಡುಪಿ ಆರ್.ಟಿ.ಓ ಕಛೇರಿಯ ಎದುರುಗಡೆ ತಲುಪುವರಷ್ಟರಲ್ಲಿ ಮಲ್ಪೆ ಕಡೆಯಿಂದ ಒಂದು ಪಿ.ಎಂ.ಟಿ ಬಸ್ಸು ನಂಬ್ರ ಕೆಎ 20 ಬಿ 4144 ನೇ ಚಾಲಕನು ತನ್ನ ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮಾವ ರಾಧಾಕೃಷ್ಣರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತೀವೃ ಗಾಯಗೊಂಡಿರುತ್ತಾರೆ. ಈ ಅಪಘಾತದ ಬಗ್ಗೆ ವೆಂಕಟೇಶ್ ರವರು ನೀಡಿದ ದೂರಿನ ಮೇರೆಗೆ ಉಡುಪಿನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 248/09 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
ಮನುಷ್ಯಕಾಣೆ ಪ್ರಕರಣ
 
ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ಪೊಸ್ಟ್ನ ಬ್ಯೂಟಿ ಹೋಮ್, ಮೇಘದಶರ್ಿನಿ ಹೋಟೆಲ್ ಹಿಂದುಗಡೆಯ ವಾಸಿ ಮಾಶರ್ೆಲ್ ರೋಶನ್ ಡಿಸೋಜ ಪ್ರಾಯ: 36 ವರ್ಷ, ಇವರ ತಂದೆಯಾದ ಹೆನ್ರಿ ಡಿಸೋಜ ಪ್ರಾಯ: 68 ವರ್ಷ ಎಂಬವರು ಇತ್ತೀಚೆಗೆ ಮಾನಸಿಕ ಅಸ್ವಸ್ಥರಾಗಿದ್ದು, ನೆನಪಿನ ಶಕ್ತಿ ತೀರಾ ಕಡಿಮೆಯಾಗಿದ್ದು, ವಿಪರೀತ ಅಮಲು ಪದಾರ್ಥ ಸೇವಿಸುವ ಚಟವುಳ್ಳವರಾಗಿದ್ದು. ಈ ಬಗ್ಗೆ ಸುಮಾರು ಒಂದು ತಿಂಗಳುಗಳ ಕಾಲ ಎ.ವಿ. ಬಾಳಿಗಾ ಆಸ್ಪತ್ರೆಯಲ್ಲಿ ವ್ಶೆದ್ಯರಿಂದ ಚಿಕಿತ್ಸೆ ಪಡೆದುಕೊಂಡು ದಿ: 27/07/09 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದವರು. ದಿನಾಂಕ 29/07/09 ರಂದು ಬೆಳಿಗ್ಗೆ ಸುಮಾರು 6:00 ಗಂಟೆ ಸಮಯಕ್ಕೆ ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂಬುದಾಗಿ ಮಾಶರ್ೆಲ್ ರೋಶನ್ ಡಿಸೋಜರವರು ನೀಡಿದ ದೂರಿನ ಮೇರೆಗೆ ಉಡುಪಿನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 246/09 ಕಲಂ ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಸಾಮಾಜಿಕ ವಿಪತ್ತಾಗಿ ಪರಿಣಮಿಸಿದೆ/Raging Dist Level Inauguration

ಕಾಸರಗೋಡು: ವಿದ್ಯಾಮಂದಿರಗಳಲ್ಲಿ ರೇಗಿಂಗ್ ಒಂದು ಸಾಮಾಜಿಕ ವಿಪತ್ತಾಗಿ ಪರಿಣಮಿಸಿದೆ. ಇದನ್ನು ನಿವಾರಿಸಲು ವಿದ್ಯಾರ್ಥಿಗಳ ಸಹಿತ ಹೆತ್ತವರೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ನ್ಯಾಯಾಧೀಶೆ ಎಂ.ಕೆ.ಪ್ರೇಮಲತಾ ಗುರುವಾರ ಇಲ್ಲಿ ತಿಳಿಸಿದರು.
ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ರೇಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೇಗಿಂಗ್ ಕಾನೂನಿನ
ಮೂಲಕ ಎದುರಿಸಲಾಗುವುದು. ಜಿಲ್ಲೆಯಲ್ಲಿ 110 ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ರೇಗಿಂಗ್ ವಿರೋಧಿ ಸಮಿತಿ ಮತ್ತು ರೇಗಿಂಗ್ ವಿರೋಧಿ ದಳವನ್ನು ರೂಪೀಕರಿಸಲಾಗುವುದು ಎಂದೂ ಅವರು ವಿವರಿಸಿದರು.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎ.ಎ.ವಿಜಯನ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಕನಸುಗಳೇ ಇಲ್ಲ; ಆದರೂ ಉತ್ತಮ ಕೌಟುಂಬಿಕ ವಾತಾವರಣ, ಅಧ್ಯಾಪಕ-ವಿದ್ಯಾರ್ಥಿಗಳ ಮಧ್ಯೆ ಸ್ನೇಹ ಸಂಬಂಧ ಮತ್ತು ಆರೋಗ್ಯಕರ ವಾಚನಾ ಅಭಿರುಚಿಯಿಂದ ರೇಗಿಂಗ್ ಪಿಡುಗನ್ನು ನಿರ್ಮೂಲನ
ಮಾಡಲು ಸಾಧ್ಯ ಎಂದರು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಸಾಮಾಜಿಕ ವಿಪತ್ತನ್ನು ನಿವಾರಿಸಬಹುದು. ಆದರೆ ಕಾನೂನು ಕ್ರಮವೇ ಅಂತಿಮ ಅಸ್ತ್ರವಲ್ಲ. ವಿದ್ಯಾರ್ಥಿಗಳು ಆತ್ಮಪರಿಶೋಧನೆ ನಡೆಸಿದರೆ ಇಂಥ ಅಮಾನುಷ ವರ್ತನೆಯನ್ನು ನಿವಾರಿಸಲು ಸಾಧ್ಯವಿದೆ ಎಂದೂ ಅವರು ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್, ಕಾಲೇಜು ಶಿಕ್ಷಣ ವಿಭಾಗದ ಉಪನಿರ್ದೇಶಕ
ವಿ.ಗೋಪಿನಾಥನ್, ಕಾಸರಗೋಡು ಬಾರ್ ಅಸೋಸಿಯೇಶನ್ನ ಅಧ್ಯಕ್ಷ ಕೆ.ಎಂ. ಭಟ್, ಹೊಸದುರ್ಗ ಬಾರ್ ಅಸೋಸಿಯೇಶನ್ನ ಅಧ್ಯಕ್ಷ ಸಿ.ಕೆ.ಶ್ರೀಧರನ್, ಕಾಲೇಜು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪಿ.ಎಸ್.ಅಜಯಕುಮಾರ್ ನಾಯರ್ ಹಾಜರಿದ್ದರು. ಜಿಲ್ಲಾಧಿಕಾರಿ ಆನಂದ ಶರ್ಮ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಪ್ರಾಂಶುಪಾಲ ಕೆ.ಮಾಧವನ್ ನಂಬ್ಯಾರ್ ಸ್ವಾಗತಿಸಿ, ಕೆ.ರಮೇಶ್ ಭಾ ವಂದಿಸಿದರು.


ಆ.1 ಮತ್ತು 2ರಂದು ಕನ್ನಡ ಸಂಸ್ಕೃತಿ ಸಮ್ಮೇಳನ


ಕಾಸರಗೋಡು: 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ-2009 ಆ.1 ಮತ್ತು 2ರಂದು ಇಲ್ಲಿನ ಲಲಿತ ಕಲಾ ಸದನದಲ್ಲಿ ಜರುಗಲಿದೆ ಎಂದು ಕಾರ್ಯಕ್ರಮದ ಸಂಘಟಕರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು..
ಸಂಜೆ 3 ಗಂಟೆಗೆ ನಡೆಯುವ ಸಮ್ಮೇಳನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ.ಕಯ್ಯಾರ ಕಿಞ್ಞಣ್ಣ ರೈ ಸಮ್ಮೇಳನದ ಅಧ್ಯಕ್ಷತೆ ವಹಿಸುವರು.
ಬಳಿಕ ಹಾಸ್ಯ-ಲಾಸ್ಯ, ನೃತ್ಯ ವೈಭವ, ಕವಿಗೋಷ್ಠಿ, ಕರಗ ನೃತ್ಯ ಜರುಗಲಿದೆ.
2ರಂದು ಬೆಳಗ್ಗೆ 9.30ಕ್ಕೆ ದಾಸ ಸಂಕೀರ್ತನೆ, 10.15ಕ್ಕೆ ಕವಿಗೋಷ್ಠಿ, ಜನಪದ ವೈವಿಧ್ಯ, ಮಧ್ಯಾಹ್ನ 12.45ಕ್ಕೆ ತಬಲ ವಾದನ, 2.30ಕ್ಕೆ ಮನೆ ಮನೆಯಲ್ಲಿ ಭರತ ನಾಟ್ಯ ಸರಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ, ಸಂಜೆ 3.30ಕ್ಕೆ ಹೊರನಾಡು-ಗಡಿನಾಡು ಕನ್ನಡಿಗ ಗೋಷ್ಠಿ, 4.30ಕ್ಕೆ ಹನಿ ಹಾಸ್ಯ ನಡೆಯಲಿದೆ.
ಕನರ್ಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಚಂದ್ರ ಬೈಕಂಪಾಡಿ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಲಿದೆ.
ಹೃದಯವಾಹಿನಿ ದಶಮಾನೋತ್ಸವ ಪ್ರಶಸ್ತಿ:
ಪಿ.ಎಸ್.ಕಾರಂತ್(ಕನ್ನಡ ಸೇವೆ), ಡಾ.ಎಚ್.ಎಸ್.ಶಿವಶಂಕರ್, ಇಂದು ದಾಸ್ ಶೆಟ್ಟಿ(ಸಮಾಜ ಸೇವೆ), ಪದ್ಮನಾಭ ಬಿ.ಆರ್, ರಾಧಾಕೃಷ್ಣ ಉಳಿಯತ್ತಡ್ಕ(ಸಾಹಿತ್ಯ), ಕಾಗೋಡು ಅಣ್ಣಪ್ಪ(ರಂಗಕಲೆ), ಬಾಲಸುಬ್ರಹ್ಮಣ್ಯ ಎಂ.(ಎಂಜಿನಿಯರಿಂಗ್), ದೀಪಾ ರಾವ್(ಭರತನಾಟ್ಯ), ಕೆ.ವಿ.ರಮೇಶ್(ಬೊಂಬೆಯಾಟ), ಪ್ರದೀಪ್ ಕಾಸರಗೋಡು(ರಂಗಭೂಮಿ) ಎಂಬವರಿಗೆ ಹೃದಯವಾಹಿನಿ ದಶಮಾನೋತ್ಸವ ಪ್ರಶಸ್ತಿ ನೀಡಲಾಗುವುದು.
ಹೃದಯವಂತರು ಪ್ರಶಸ್ತಿ:
ಕೆ.ಎಸ್.ಪ್ರಭಾಕರ್(ಆಡಳಿತ), ಜಯಪ್ರಕಾಶ್ ರಾವ್ ಪುತ್ತೂರು(ಸಾರ್ವಜನಿಕ ಸಂಪರ್ಕ), ಕೆ.ಎಂ.ಕೋಟ್ಯಾನ್ ಮುಂಬೈ, ಮಧುಕರ ರೈ ಕೊರೆಕ್ಕಾನ(ಸಮಾಜ ಸೇವೆ), ಡಾ.ಕೆ.ಬಿ.ನಾಗೂರು ಬಿಜಾಪುರ(ಆಯುವರ್ೇದ), ಎ.ನರಸಿಂಹ ಭಟ್(ಸಾಹಿತ್ಯ), ಡಾ.ವೆಂಕಟರಮಣ ಹೆಗ್ಡೆ ಸಿರ್ಸಿ (ಪ್ರಕೃತಿ ಚಿಕಿತ್ಸೆ), ಶಂಸುದ್ದೀನ್ ಸಾಲ್ಮರ ಪುತ್ತೂರು(ನಾಟಿ ವೈದ್ಯ), ಆರ್.ಧನರಾಜ್ ಮಂಗಳೂರು(ತುಳು ಚಿತ್ರರಂಗ), ಜಿ.ಎ.ಸಿದ್ಧಪ್ಪ ಬೆಂಗಳೂರು(ಪುಷ್ಪಾಲಂಕಾರ), ಭಾಸ್ಕರ ರೈ ಕುಕ್ಕುವಳ್ಳಿ(ಯಕ್ಷಗಾನ), ಪೆಡರ್ೂರು ಪ್ರಭಾಕರ್ ಕಲ್ಯಾಣಿ ಮಂಡ್ಯ(ರಂಗಭೂಮಿ), ರಂಗಪುತ್ಥಳಿ ರಘುನಂದನ್(ಬೊಂಬೆಯಾಟ), ವಾಪಿ ಕರ್ನಾಟಕ ಸಂಘ(ಕನ್ನಡ ಸೇವೆ).
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ.ಮಂಜುನಾಥ್, ಸ್ವಾಗತ ಸಮಿತಿ ಅಧ್ಯಕ್ಷ ಶಿವರಾಮ ಕಾಸರಗೋಡು, ವಿ.ಬಾಲಕೃಷ್ಣ ಶೆಟ್ಟಿ, ಬಾಲಕೃಷ್ಣ ಅಗ್ಗಿತ್ತಾಯ, ಶಿವರಾಮ ಶೆಟ್ಟಿ, ಜಗದೀಶ್ ಕೂಡ್ಲು ಹಾಜರಿದ್ದರು.


--

http://www.kasaragodvartha.com/

the first local online news paper in Malayalam.

brings latest news in Malayalam & English links our home land to the world.

:::: the signature of Kasaragod ::::

ಕನ್ನಡ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ/Kannada Student Award

ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಧ್ಯಮ ಅಧ್ಯಾಪಕ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಪ್ರೊ.ಚಾಪಾಡಿ ವಾಸುದೇವ ಪ್ರಾಯೋಜಿತ `ಕಾಸರಗೋಡು ಕನ್ನಡ ವಿದ್ಯಾರ್ಥಿ ಪ್ರಶಸ್ತಿ' ವಿತರಣಾ ಸಮಾರಂಭ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ.ಪ್ಲಸ್ ಪಡೆದ ಶರತ್ ಕುಮಾರ್ ಜಿ.ಎಸ್.ಶೇಣಿ ಮತ್ತು ರೇಷ್ಮಾ ಕೆ.ಎಸ್. ಅಂಗಡಿಮೊಗರು ಇವರಿಗೆ ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನ್ದಾಸ್ ಸ್ಮರಣಕೆ ಸಹಿತ ನಗದು ಪುರಸ್ಕಾರ ವಿತರಿಸಿದರು. ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ ಕೆ.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಘಟಕದ ಅಧ್ಯಕ್ಷ ಎಸ್.ವಿ.ಭಟ್, ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಟಿ.ಡಿ. ಸದಾಶಿವ ಹಾಜರಿದ್ದರು.
ಪ್ರಧಾನ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಎಂ.ವಿ. ಮಹಾಲಿಂಗೇಶ್ವರ ಭಟ್ ವಂದಿಸಿದರು.ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎಂ.ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

ಇಂದು ಮತ್ಸ್ಯವಿಜ್ಞಾನ ಕೇಂದ್ರ ಕಟ್ಟಡ ಉದ್ಘಾಟನೆ


ಕಾಸರಗೋಡು: ರಾಜ್ಯ ಮೀನುಗಾರಿಕಾ ಇಲಾಖೆಯ ಕರಾವಳಿ ಅಭಿವೃದ್ಧಿ ಏಜೆನ್ಸಿ ಹಾಗೂ `ಮತ್ಸ್ಯಫೆಡ್'ನ ಆಶ್ರಯದಲ್ಲಿ ಸಮಗ್ರ ಕರಾವಳಿ ಅಭಿವೃದ್ಧಿ ಯೋಜನೆಯಡಿ ಇಲ್ಲಿನ ಕಸಬ ಕಡಪ್ಪುರದಲ್ಲಿ ನಿಮರ್ಿಸಿದ ಮತ್ಸ್ಯವಿಜ್ಞಾನ ಕೇಂದ್ರದ ಕಟ್ಟಡವನ್ನು ಇದೇ 31ರಂದು ಮೀನುಗಾರಿಕಾ ಸಚಿವ ಎಸ್.ಶರ್ಮ ಉದ್ಘಾಟಿಸುವರು.
ಶಾಸಕ ಸಿ.ಟಿ.ಅಹಮ್ಮದಾಲಿ ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಕರುಣಾಕರನ್ ಉತ್ತಮ ಮೀನು ಕಾಮರ್ಿಕರನ್ನು ಸನ್ಮಾನಿಸುವರು.


ಆ.2ರಂದು ಸುಗಮ ಸಂಗೀತ ಶಿಬಿರ


ಕಾಸರಗೋಡು: ಇಲ್ಲಿನ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಆ.2ರಂದು ಸುಗಮ ಸಂಗೀತ ಶಿಬಿರ ಜರುಗಲಿದೆ.
ಶಾಲೆಯ ಮೆನೇಜರ್ ಸದಾಶಿವ ಶ್ಯಾನುಭೋಗ್ ಶಿಬಿರ ಉದ್ಘಾಟಿಸುವರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣಯ್ಯ ಅಧ್ಯಕ್ಷತೆ ವಹಿಸುವರು. ಜಿಲ್ಲಾ ವಿದ್ಯಾಧಿಕಾರಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಎನ್.ಕೆ.ಮೋಹನ್ದಾಸ್, ಮುಖ್ಯೋಪಾಧ್ಯಾಯ ವೆಂಕರಮಣ ಭಟ್ ಭಾಗವಹಿಸುವರು.
ಕಾಸರಗೋಡಿನ ವಿಜಯ ಸಂಗೀತ ಪ್ರತಿಷ್ಠಾನ, ಪುತ್ತೂರಿನ ಸ್ವರಾಂಜಲಿ ನೃತ್ಯ ಸಂಗೀತ ಶಾಲೆ, ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ದಳ ಮತ್ತು ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಜಂಟಿ ಆಶ್ರಯದಲ್ಲಿ ನಡೆಯುವ ಶಿಬಿರದಲ್ಲಿ ಗಾಯಕಿಯರಾದ ರಾಧಾ ಮುರಳೀಧರ್, ಶೋಭಿತಾ ಸತೀಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು.



ಕನ್ನಡ ವಾಚನ ವಿಜೇತರು


ಕಾಸರಗೋಡು: ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಆಯೋಜಿಸಿದ ಪ್ರೌಢಶಾಲಾ ವಿಭಾಗದ ಕನ್ನಡ ವಾಚನ ಸ್ಪಧರ್ೆಯಲ್ಲಿ ತಾಲೂಕು ಮಟ್ಟದಲ್ಲಿ ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ಶೋಭಿತ್ ಎಂ. ಪ್ರಥಮ ಸ್ಥಾನ ಗಳಿಸಿದ್ದಾರೆ.
ಪೆರಡಾಲ ನವಜೀವನ ಪ್ರೌಢಶಾಲೆಯ ಶ್ರುತಿ ಎಸ್.ಶೇಟ್ ದ್ವಿತೀಯ ಮತ್ತು ಕಾಟುಕುಕ್ಕೆ ಎಸ್.ಎಸ್. ಪ್ರೌಢಶಾಲೆಯ ಕೇಶವ ಪ್ರಸಾದ್ ಎಸ್. ತೃತೀಯ ಸ್ಥಾನ ಗಳಿಸಿದ್ದಾರೆ.



ಇ-ವಿದ್ಯಾ ತರಬೇತಿ: ಅಜರ್ಿ ಆಹ್ವಾನ


ಕಾಸರಗೋಡು: ಮಧೂರು ಗ್ರಾಮ ಪಂಚಾಯ್ತಿಯ ಅಕ್ಷಯ 2ನೇ ಹಂತದ ಕಂಪ್ಯೂಟರ್ ಕಲಿಕಾ ಯೋಜನೆಯ ಇ-ವಿದ್ಯಾ ತರಬೇತಿಗೆ ಅಜರ್ಿ ಆಹ್ವಾನಿಸಲಾಗಿದೆ. ಅಜರ್ಿಗಳನ್ನು ಆ.10ರೊಳಗೆ ಪಂಚಾಯ್ತಿ ಕಚೇರಿಗೆ ಸಲ್ಲಿಸಬಹುದು.



ವಿಶ್ವ ಹಿಂದೂ ಪರಿಷತ್ತು ಘಟಕ ರೂಪೀಕರಣ


ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ತು, ಭಜರಂಗ ದಳದ ಮಂಜೇಶ್ವರ ನೂತನ ಘಟಕದ ಘೋಷಣೆ ಮತ್ತು ಪದಗ್ರಹಣ ಕಾರ್ಯಕ್ರಮ ಇತ್ತೀಚೆಗೆ ಹೊಸಂಗಡಿ ಅಯ್ಯಪ್ಪ ಕ್ಷೇತ್ರದಲ್ಲಿ ಜರುಗಿತು.
ಭಜರಂಗ ದಳದ ಸಂಚಾಲಕ ಸಂತೋಷ್ ಕೆ.ಜೆ. ಅಧ್ಯಕ್ಷತೆ ವಹಿಸಿದ್ದರು. ವಿ.ಎಚ್.ಪಿ. ಮಂಗಳೂರು ಗ್ರಾಮಾಂತರ ಕಾರ್ಯದಶರ್ಿ ಎಸ್.ನಾರಾಯಣ ಭಟ್, ಬಾಲಕೃಷ್ಣ ಶೆಟ್ಟಿ, ವಿ.ಎಚ್.ಪಿ. ಮಂಜೇಶ್ವರ ಮಾತೃ ಮಂಡಳಿ ಅಧ್ಯಕ್ಷೆ ಗಿರಿಜಾ ಎಸ್.ಬಂಗೇರಾ, ಭಜರಂಗದಳ ಸಂಚಾಲಕ ಶರಣ್ ಹಾಜರಿದ್ದರು.
ಪದಾಧಿಕಾರಿಗಳು: ಆನಂದ ಆಚಾರ್ಯ(ಗೌರವಾಧ್ಯಕ್ಷ), ಹರೀಶ್ ಶೆಟ್ಟಿ ಮಾಡ(ಅಧ್ಯಕ್ಷ), ಹರೀಶ್ ಕನಿಲ, ಪುರುಷೋತ್ತಮ(ಉಪಾಧ್ಯಕ್ಷ), ತಾರಾನಾಥ ಹೊಸಂಗಡಿ(ಪ್ರಧಾನ ಕಾರ್ಯದಶರ್ಿ), ರಮೇಶ್ ಭಂಡಾರಿ(ಕೋಶಾಧಿಕಾರಿ), ಉಪೇಂದ್ರ ಆಚಾರ್ಯ(ಸಂಪರ್ಕ ಪ್ರಮುಖ) ಅವರನ್ನೊಳಗೊಂಡ ವಿಶ್ವ ಹಿಂದೂ ಪರಿಷತ್ತು ಘಟಕವನ್ನು ರೂಪೀಕರಿಸಲಾಯಿತು.
ಸಂತೋಷ್ ಕೆ.ಜೆ(ಪ್ರಧಾನ ಸಂಚಾಲಕ), ಉದಯ್ ಕುಮಾರ್(ಸಂಚಾಲಕ), ಪ್ರವೀಣ್ ಶೆಟ್ಟಿ, ಮಹೇಶ್ ಬೆಜ್ಜ, ಪುಂಡಲೀಕ ಮಂಜೇಶ್ವರ(ಸಹಸಂಚಾಲಕರು) ಎಂಬವರನ್ನು ಒಳಗೊಂಡ ಭಜರಂಗ ದಳ ಮಂಜೇಶ್ವರ ಘಟಕದ ಪದಾಧಿಕಾರಿಗಳನ್ನು ಆರಿಸಲಾಯಿತು.



ಕನ್ನಡ ನಂದಾದೀಪ ಸಮಾರಂಭ


ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲೂಕು ಘಟಕದ ಆಶ್ರಯದಲ್ಲಿ ಕನ್ನಡ ನಂದಾದೀಪ ಸಮಾರಂಭ ಇದೇ 31ರಂದು ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಜರುಗಲಿದೆ.
ಮಧ್ಯಾಹ್ನ 2 ಗಂಟೆಗೆ ಕವಿ ಶ್ರೀಕೃಷ್ಣಯ್ಯ ಅನಂತಪುರ ಉದ್ಘಾಟಿಸುವರು. ಕ.ಸಾ.ಪ. ಕೇರಳ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು. ರವಿ ಅಲೆವೂರಾಯ ವಕರ್ಾಡಿ ಅವರಿಂದ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.


--

www.kasaragodvartha.com

the first local online news paper in Malayalam.

brings latest news in Malayalam & English links our home land to the world.

:::: the signature of Kasaragod ::::

Thursday, July 30, 2009

ವಿದ್ಯುತ್ ಶಾಕ್: ಕೃಷಿಕನ ಸಾವು/Electricity Shock-Dead


ಕಾಸರಗೋಡು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಕಾಲಿಗೆ ಸಿಕ್ಕಿ ಕೃಷಿಕನೋರ್ವ ಸಾವನ್ನಪ್ಪಿದ ಘಟನೆ ಚೆಮ್ನಾಡು ಸಮೀಪ ಗುರುವಾರ ನಡೆದಿದೆ.
ಸ್ಥಳೀಯ ಎ.ಕೃಷ್ಣನ್ ನಾಯರ್(68) ಎಂದು ಗುರುತಿಸಲಾಗಿದೆ. ಇವರು ಮನೆ ಬಳಿಯ ಹಿತ್ತಿಲಿಗೆ ಹುಲ್ಲು ತರಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಬೆಳಗ್ಗೆ ಹೋದವರು ಮನೆಗೆ ಬಾರದಿದ್ದಾಗ ಪತ್ನಿ ಕಾತ್ಯರ್ಾಯಿನಿ ಹುಡುಕುತ್ತಾ ಹೊರಟಾಗ ಸತ್ತು ಮಲಗಿದ್ದರು. ನಾಲ್ವರು ಮಕ್ಕಳಿದ್ದಾರೆ.
 

ರಿಯಾನ : ಲೈಂಗಿಕ ಜಾಲದ ಕಪಿಮುಷ್ಠಿಯಲ್ಲಿ?

ಕಾಸರಗೋಡು: ಚೆಂಗಳ ತೈವಳಪ್ಪು ಎಂಬಲ್ಲಿಂದ ನಿಗೂಢ ರೀತಿಯಲ್ಲಿ ನಾಪತ್ತೆಯಾದ ರಿಯಾನ ಎಂಬ 16ರ ಹರೆಯದ ಬಾಲಕಿಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಲವಾರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬಾಲಕಿಯನ್ನು ಕೆಲಸಕ್ಕಾಗಿ ವಿದೇಶಕ್ಕೆ ಸಾಗಿಸಲಾಗಿದೆ ಎಂಬ ಸುಳಿವನ್ನು ಕೇಂದ್ರೀಕರಿಸಿ ನಿರುದ್ಯೋಗಿ ಯುವತಿಯರನ್ನು ಕಳುಹಿಸುವ ಕಲ್ಲಿಕೋಟೆ ನಿವಾಸಿ ಲಾಟರಿ ಷಾಜಿ ಎಂಬ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವೇಶ್ಯಾವಾಟಿಕೆ ಪ್ರಕರಣದಲ್ಲಿ ಈಗಾಗಲೇ ಸೆರೆ ಸಿಕ್ಕಿರುವ ಮುಹಮ್ಮದ್ ಹಾಗೂ ಆತನ ಪತ್ನಿಯನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಮಲಪ್ಪುರ, ಕಲ್ಲಿಕೋಟೆ, ಪೆರುಂದಲ್ಮಣ್ಣ, ಅರಿಕ್ಕೋಡ್ ಎಂಬಲ್ಲಿಗೆ ತನಿಖೆೆಯನ್ನು ಪೊಲೀಸರು ವಿಸ್ತರಿಸಿದ್ದಾರೆ. ಲೈಂಗಿಕ ಜಾಲದ ಕಪಿಮುಷ್ಠಿಯಲ್ಲಿ ರಿಯಾನ ಸಿಲುಕಿದ್ದಾಳೆ ಎಂಬುದು ಪೊಲೀಸರ ಇತ್ತೀಚಿನ ಊಹೆ.

 
ಕಾರು ಪತ್ತೆ
ಕಾಸರಗೋಡು: ವಾರಸುದಾರರು ಇಲ್ಲದ ಇನ್ನೋವಾ ಕಾರು ಇಲ್ಲಿನ ಹೊಸ ಬಸ್ಸು ನಿಲ್ದಾಣದ ಬಳಿ ಇಂದು ಪತ್ತೆಯಾಗಿದೆ.
ಎರಡು ದಿನಗಳಿಂದ ಕಾರು ಇಲ್ಲಿಯೇ ಇತ್ತು ಎಂದು ಸ್ಥಳೀಯ ವ್ಯಾಪಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ. ನಗರ ಪೊಲೀಸರು ಕಾರನ್ನು ವಶಪಡಿಸಿ ತನಿಖೆ ನಡೆಸುತ್ತಿದ್ದಾರೆ.
 
ಗೂಂಡಾ ಕಾಯ್ದೆಯಡಿ ಬಂಧನ
ಕಾಸರಗೋಡು: ಯುವಕನೋರ್ವನನ್ನು ಗೂಂಡಾ ಕಾಯ್ದೆಯಡಿ ಪೋಲೀಸರು ಬಂಧಿಸಿದ್ದಾರೆ.
ಕೇಳುಗುಡ್ಡೆಯ ಅಯ್ಯಪ್ಪ ನಗರದ ನಿವಾಸಿ ಗಿರೀಶ್ ಯಾನೆ ವಳಂಗರ ಗಿರೀಶ್ ಬಂಧನಕ್ಕೊಳಗಾದವನು. ಈತ 2006 ಜ.22ರಿಂದ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಬಸ್ಸು-ಕಾರು ಡಿಕ್ಕಿ; ಒಂದು ಸಾವು
ಮಂಜೇಶ್ವರ: ಇಲ್ಲಿನ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕನರ್ಾಟಕ ಸುವರ್ಣ ಸಾರಿಗೆ ಬಸ್ಸು ಮತ್ತು ಮಾರುತಿ ಸ್ವಿಫ್ಟ್ ಕಾರು ಡಿಕ್ಕಿ ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಕಣ್ಣೂರಿನ ಆಲಿ ಷಾಜಿ(60) ಸಾವನ್ನಪ್ಪಿದ ವ್ಯಕ್ತಿ. ಇವರ ಪುತ್ರ ಮುನೀರ್, ಸಂಬಂಧಿಕ ಅಬ್ದುಲ್ ಖಾದರ್, ಕಾರು ಚಾಲಕ ಮೊಯ್ದೀನ್ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಣ್ಣೂರಿನಿಂದ ಮಂಗಳೂರಿನ ಆಸ್ಪತ್ರೆಗೆ ಕಾರಿನಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ನಿಧನ
ಡಾ.ರಾಮವರ್ಮರಾಜ
ಕಾಸರಗೋಡು: ಇಲ್ಲಿನ ಮಾಯಿಪ್ಪಾಡಿ ಅರಸು ಮನೆತನದ 12ನೇ ರಾಜ ಡಾ.ರಾಮವರ್ಮರಾಜ ಯಾನೆ ರಾಮಾಂತರಸುಗಳು(81) ಗುರುವಾರ ಬೆಳಗ್ಗೆ ಮಾಯಿಪ್ಪಾಡಿ ಅರಮನೆಯಲ್ಲಿ ನಿಧನರಾದರು.
ಕಳೆದ 10 ವರ್ಷಗಳ ಹಿಂದೆ ಮಾಯಿಪ್ಪಾಡಿ ಅರಸರಾಗಿ ಪಟ್ಟವೇರಿದ್ದರು. ಕುಂಬಳೆ ಸೀಮೆಯ ಅಡೂರು-ಮಧೂರು-ಕಾವು(ಮುಜುಂಗಾವು)-ಕಣಿಪುರ(ಕುಂಬಳೆ) ಎಂಬ 4 ಪ್ರಧಾನ ಕ್ಷೇತ್ರಗಳ ಆಡಳಿತ ಮೊಕ್ತೇಸರರಾಗಿದ್ದರು. ಮೂವರು ಮಕ್ಕಳಿದ್ದಾರೆ.

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಸಾಮಾಜಿಕ ವಿಪತ್ತಾಗಿ ಪರಿಣಮಿಸಿದೆ.../Raging Dist Level Inauguration

ಮನೆ ಮನೆ ಅಭಿಯಾನ ಕಾರ್ಯಕ್ರಮ
ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲೂಕು ಘಟಕದ ಮನೆ ಮನೆ ಅಭಿಯಾನ ಕಾರ್ಯಕ್ರಮ ಹಾಗೂ ಪಿ.ಗುರುಗಂಗಯ್ಯ ಬಲ್ಲಾಳ್ ಸಂಸ್ಮರಣಾ ಕಾರ್ಯಕ್ರಮ ಇತ್ತೀಚೆಗೆ ಚೇರಾಲು ವಸಂತ ಕುಮಾರ್ ಅವರ ವಸಂತ ಮಹಲಿನಲ್ಲಿ ಜರುಗಿತು.
ರಂಗಕಮರ್ಿ ಸುಬ್ಬಣ್ಣ ಶೆಟ್ಟಿ ಅಭಿಯಾನವನ್ನು ಉದ್ಘಾಟಿಸಿದರು. ಕ.ಸಾ.ಪ. ಕೇರಳ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಧ್ಯಾಪಕ ಎಸ್.ನಾರಾಯಣ ಭಟ್, ಲೇಖಕಿ ವಿಜಯ ಸುಬ್ರಹ್ಮಣ್ಯ, ಅಧ್ಯಾಪಕ ಬಿ.ಎಸ್.ಪದಕಣ್ಣಾಯ, ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಸಿ.ರಾಘವ ಬಲ್ಲಾಳ್, ಗೌರವ ಕಾರ್ಯದಶರ್ಿ ರಾಮಚಂದ್ರ ಭಟ್, ಸೇರಾಜೆ ಶ್ರೀನಿವಾಸ ಭಟ್ ಹಾಜರಿದ್ದರು. ವಸಂತ ಕುಮಾರ್ ಸ್ವಾಗತಿಸಿ, ರತ್ನಾಕರ ಮಲ್ಲಮೂಲೆ ವಂದಿಸಿದರು. ಹಮೀದ್ ಚೇರಾಲ್, ಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





ಮಜಿಬೈಲು ಗದ್ದೆ ಬಯಲು ಸಮಿತಿ ಮಹಾಸಭೆ


ಮಂಜೇಶ್ವರ: ಮೀಂಜ ಕೃಷಿ ಭವನ ವ್ಯಾಪ್ತಿಯ ಮಜಿಬೈಲು ಗದ್ದೆ ಬಯಲು ಸಮಿತಿಯ ಮಹಾಸಭೆ ಇತ್ತೀಚೆಗೆ ಜರುಗಿತು.
ಮೀಂಜ ಗ್ರಾಂ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಕರಿಯಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಭವನದ ಉಪ ಕೃಷಿ ಅಧಿಕಾರಿ ಸೆಬಾಸ್ಟಿಯನ್ ಹಾಜರಿದ್ದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಪಂಚಾಯ್ತಿ ಸದಸ್ಯ ಜಯರಾಮ ಬಲ್ಲಂಗುಡೇಲು , ಸಂಚಾಲಕರಾಗಿ ಅಣ್ಣಪ್ಪ ಹೆಗ್ಡೆ, ಉಪಾಧ್ಯಕ್ಷರಾಗಿ ಹೆನ್ರಿ ಡಿ.ಸೋಜಾ, ಸದಸ್ಯರಾಗಿ ರವೀಂದ್ರ ಶೆಟ್ಟಿ ಕರಿಬೈಲು, ಇಬ್ರಾಹಿಂ ಕೊಡ್ಡೆ, ಚಿಕ್ಕಪ್ಪ ಮಾಡ, ವಿಶ್ವನಾಥ ಆಳ್ವ, ಆನಂದ ಆಳ್ವ ಮಾಟೆ, ಗೋಪಾಲಕೃಷ್ಣ ಆಳ್ವ ಕೊಡ್ಡೆ ಆಯ್ಕೆಯಾದರು.
ಇತ್ತೀಚೆಗೆ ಸುರಿದ ಮಳೆಗೆ ಭತ್ತ ಸಹಿತ ಇತರ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿದ್ದು, ಕೃಷಿಕರಿಗೆ ನಷ್ಟ ಪರಿಹಾರ ನೀಡುವಂತೆ ಸಭೆ ಆಗ್ರಹಿಸಿದೆ.



--

http://www.kasaragodvartha.com/

the first local online news paper in Malayalam.

brings latest news in Malayalam & English links our home land to the world.

:::: the signature of Kasaragod ::::

Tuesday, July 28, 2009

ಅಪಘಾತ ಪ್ರಕರಣ/Accident Udupi-News

ಉಡುಪಿ:  27ರಂದು 12:45 ಗಂಟೆಗೆ ಉಡುಪಿ ತಾಲೂಕು ಆತ್ರಾಡಿ ಗ್ರಾಮದ ಆತ್ರಾಡಿ ಬಸ್ ನಿಲ್ದಾಣದ ಸಮೀಪ ಹಿರಿಯಡಕ ಉಡುಪಿ ರಸ್ತೆಯಲ್ಲಿ ಪ್ರಸಾದ್ ಶೆಟ್ಟಿ ಪ್ರಾಯ 39 ವರ್ಷ ತಂದೆ: ಹಿರಿಯಣ್ಣ ಶೆಟ್ಟಿ ವಾಸ ದೇವಿ ಪ್ರಸಾದ್ ಮನೆ ಪಡ್ಡಾಂ ಪಡುಭಾಗ ಬೊಮ್ಮರಬೆಟ್ಟು ಗ್ರಾಮ ಇವರು ತನ್ನ ಮೋಟಾರ್ ಸೈಕಲ್ ನಂ. ಕೆಎ 19 ಎಸ್ 5720ನೇದನ್ನು ಹಿರಿಯಡಕ ಕಡೆಗೆ ಸವಾರಿಮಾಡಿಕೊಂಡು ಬರುತ್ತಿರುವಾಗ ಹಿರಿಯಡಕ ಕಡೆಯಿಂದ ಮೋಟಾರ್ ಸೈಕಲ್ ನಂ. ಕೆಎ 20 ಯು 2372ನೇದರ ಸವಾರ ಮೊಹಮ್ಮದ್ ಅಝಂ ಸದರ್ಾರ್ ಎಂಬವವರು ತನ್ನ ಮೋಟಾರ್ ಸೈಕಲ್ನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಸಾದ್ ಶೆಟ್ಟಿಯವರಿಗೂ ಹಾಗೂ ಆಪಾದಿತ ಮೊಹಮ್ಮದ್ ಅಝಂ ಸದರ್ಾರ್ರ ಮೋಟಾರ್ ಸೈಕಲ್ ಹಿಂದುಗಡೆ ಕುಳಿತ ಮೌಲಾನಾ ಅಬ್ದುಲ್ ಹಮೀದ್ ರವರಿಗೆ ಗಾಯವಾಗಿರುತ್ತದೆ ಈ ಅಪಘಾತದ ಬಗ್ಗೆ ಪ್ರಸಾದ್ ಶೆಟ್ಟಿ ರವರು ನೀಡಿದ ದೂರಿನ ಮೇರೆಗೆ ಹಿರಿಯಡ್ಕ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 56/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಿನಾಂಕ 27-07-09 ರಂದು ಸಂಜೆ 5:30 ಗಂಟೆಗೆ ಶ್ರೀಧರ್ ಉಪಾಧ್ಯ (30 ವರ್ಷ)ತಂದೆ: ರಾಮಚಂದ್ರ ಉಪಾಧ್ಯಯ ವಾಸ: ಜನನಿ ಕಟ್ಬೆಲ್ತೂರು ಗ್ರಾಮ ಕುಂದಾಪುರ ಇವರ ಮಾವನಾದ 51 ವರ್ಷ ಪ್ರಾಯದ ಗೋವಿಂದ ಹೆಬ್ಬಾರ್ ಇವರು ಕಟ್ೆಲ್ತೂರು ಗ್ರಾಮದ ಕಟ್ಬೆಲ್ತೂರು ಜಂಕ್ಷನ್ನಲ್ಲಿ ನಡೆದುಕೊಂದು ಬರುವಾಗ್ಗೆ ಆರೋಪಿ ಎಸ್.ಜಿ.ಗಣೇಶ್ ಕೆ.ಎ 20/ ಟ 6642 ನೇ ಟಿ.ವಿ.ಎಸ್. ವಿಕ್ಟರ್ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ನ್ನು ಹೆಮ್ಮಾಡಿ ಕಡೆಯಿಂದ ವಂಡ್ಸೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗೋವಿಂದ ಹೆಬ್ಬಾರ್ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಗೋವಿಂದ ಹೆಬ್ಬಾರ್ ಹಾಗೂ ಮೋಟಾರ್ ಸೈಕಲ್ ಸವಾರ ಎಸ್.ಜಿ.ಗಣೇಶ್ ಮತ್ತು ಸಹಸವಾರ ವಸಂತ ಎಂಬವರು ರಸ್ತೆಗೆ ಬಿದ್ದು, ಗೊವಿಂದ ಹೆಬ್ಬಾರ್ಗೆ ಹಣೆಗೆ ಗುದ್ದಿದ ಗಾಯ ಉಂಟಾಗಿ ವಸಂತ ಎಂಬವರಿಗೆ ಮುಖಕ್ಕೆ ಗಾಯಗಳಾಗಿದ್ದು, ಚಿಕಿತ್ಸೆಯ ಬಗ್ಗೆ ಕುಂದಾಪುರಕ್ಕೆ ತಂದು ವಸಂತ ಇವರನ್ನು ಸಕರ್ಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಗೊಂವಿಂದ ಹೆಬ್ಬಾರ್ ಇವರನ್ನು ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲಕ್ಕೆ ಕೊಂಡುಹೊಗುವಾಗ ದಾರಿ ಮಧ್ಯದಲ್ಲಿ ಆರೋಗ್ಯ ಸ್ಥಿತಿ ವಿಷಮಗೊಂಡವರನ್ನು ವಾಪಾಸು ಕುಂದಾಪುರ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಚಿಕಿತ್ಸೆಯಲ್ಲಿರುವಾಗ್ಗೆ ರಾತ್ರಿ 11:45 ಗಂಟೆಗೆ ಮೃತಪಟ್ಟಿದ್ದಾಗಿರುತ್ತದೆ. ಈ ಅಪಘಾತದ ಬಗ್ಗೆ ಶ್ರೀಧರ್ ಉಪಾಧ್ಯ (30 ವರ್ಷ)ರವರು ನೀಡಿದ ದೂರಿನ ಮೇರೆಗೆ ಕುಂದಾಪುರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 222/09 ಕಲಂ 279, 337,304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಿನಾಂಕ: 27/07/09 ರಂದು ರಾತ್ರಿ 20:30 ಗಂಟೆ ಸಮಯಕ್ಕೆ ಚೆನ್ನಪ್ಪ (60) ತಂದೆ: ರಾಮ ಪೂಜಾರಿ,,ವಾಸ: ನಿಸರ್ಗ ಮನೆ, ಗರಡಿ ರೋಡ್, ಬನ್ನಂಜೆ, ಉಡುಪಿ ಇವರು .ಶ್ರೀ ದೇವಪ್ಪ ಗೌಡ ಪ್ರಾಯ: 50 ವರ್ಷ ಎಂಬವರೊಂದಿಗೆ ನಡೆದುಕೊಂಡು ಹೊರಟು ಮರುದಿನದ ಕರ್ತವ್ಯದ ವಿಷಯವನ್ನು ಮಾತನಾಡುತ್ತ ಉಡುಪಿ ಸಿಟಿ ಬಸ್ಸ್ಟ್ಯಾಂಡ್ನಿಂದ ಶಂಕರ ನಾರಾಯಣ ದೇವಸ್ಥಾನದ ಹತ್ತಿರ ತಲುಪುವಾಗ್ಗೆ ಆಪಾದಿತ ಮಾಧವ ಶೆಣೈ ಎಂಬವರು ತಮ್ಮ ಕೆ.ಎ-20-ಕೆ-3415ನೇ ಹೀರೋ ಹೊಂಡಾ ಬೈಕನ್ನು ಉಡುಪಿ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಮಣಿಪಾಲದ ಕಡೆಗೆ ಅತೀ ವೇಗ ಮತ್ತು ಅಜಾಗಕರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಶ್ರೀ ದೇವಪ್ಪ ಗೌಡ ಎಂಬವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಶ್ರೀ ದೇವಪ್ಪ ಗೌಡರವರು ಕೆಳಗೆ ಬಿದ್ದು ತಲೆಗೆ, ಕೈಗೆ ತೀವ್ರ ಪೆಟ್ಟಾಗಿ ಮೂಗಿನಲ್ಲಿ ರಕ್ತ ಸುರಿಯುತ್ತಿದ್ದು. ಹತ್ತಿರದ ಗಾಂಧಿ ಆಸ್ಪತ್ರೆಗೆ ಒಂದು ಅಂಬ್ಯುಲೆನ್ಸ್ನಲ್ಲಿ ಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಅಪಘಾತದ ಬಗ್ಗೆ ಚೆನ್ನಪ್ಪ ರವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 243/09 ಕಲಂ 279, 338,ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
ಜೀವ ಬೆದರಿಕೆ
ದಿನಾಂಕ: 27-07-09 ರಂದು 19-35 ಗಂಟೆಗೆ ಜನಾರ್ಧನ ಆಚಾರಿ(43ವರ್ಷ), ತಂದೆ: ಗುರುವಯ್ಯ ಆಚಾರಿ, ವಾಸ: ಬಡಾನಿಡಿಯೂರು ಜಿಲ್ಲಾ ಪಂಚಾಯತ್ ಶಾಲೆಯ ಬಳಿ, ಬಡಾನಿಡಿಯೂರು ಗ್ರಾಮ ಎಂಬವರು ತನ್ನ ಟಿಎಂಟಿ ಬಸ್ಸು ಕೆಎ.21.ಪಿ.9999 ನ್ನು ಚಲಾಯಿಸಿ ಕೆಮ್ಮಣ್ಣು ಶಿಕಾ ಬಾರ್ ಹತ್ತಿರ ನಿಲ್ಲಿಸಿದಾಗ ಎದುರುಗಡೆಯಿಂದ ಆರೋಪಿ ಸಂದೇಶ ಎಂಬವನು ತನ್ನ ಮಾರುತಿ ಕಾರನ್ನು ಬಸ್ಸಿಗೆ ಅಡ್ಡ ನಿಲ್ಲಿಸಿ ಮುಂದೆ ಹೋಗದಂತೆ ತಡೆದಾಗ ಕಾರನ್ನು ತೆಗೆಯುವರೇ ತಿಳಿಸಿದಾಗ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ತಡೆಯಲು ಬಂದ ಕಂಡೆಕ್ಟರ್ ಮತ್ತು ಕ್ಲೀನರ್ಗೂ ಕೈಯಿಂದ ಹೊಡೆದು ಅವಾಚ್ಯ ಶಬ್ದದಿಂದ ಬೈದು ಮುಂದೆ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ ಈ ಬಗ್ಗೆ ಜನಾರ್ಧನ ಆಚಾರಿರವರ ದೂರಿನಂತೆ ಮಲ್ಪೆ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 71/09 ಕಲಂ : 341, 323, 504, 506 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
 
ಬಾವಿಗೆ ಹಾರಿ ಆತ್ಮಹತ್ಯೆ ಪ್ರಕರಣ
ದಿನಾಂಕ 28.7.09 ರಂದು ಮಧ್ಯಾಹ್ನ ಸುಮಾರು 11:00 ಗಂಟೆಯ ವೇಳೆಗೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರು ನಿವಾಸಿ ಸುಮಾರು 72 ವರ್ಷ ಪ್ರಾಯದ ನಾರಾಯಣ ಆಚಾರ್ಯ ಇವರು ತನಗೆ ಸುಮಾರು 15 ವರ್ಷಗಳಿಂದ ಇರುವ ಮಾನಸಿಕ ಅಸ್ವಸ್ತತೆಗೆ ತಜ್ಞ ವ್ಶೆದ್ಯರಿಂದ ಚಿಕಿತ್ಸೆ ಮಾಡಿಸಿದರೂ, ಖಾಯಿಲೆಯು ಗುಣ ಮುಖವಾಗದ ಕಾರಣ ಜೀವನದಲ್ಲಿ ಜುಗುಪ್ಸೆಗೊಂಡು, ತನ್ನ ಮನೆಯ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.ಈ ಬಗ್ಗೆ ಮೃತರ ಮಗನಾದ ಜಗದೀಶ ಆಚಾರ್ಯ (37) ತಂದೆ: ನಾರಾಯಣ ಆಚಾರ್ಯ, ವಾಸ: ಅತ್ತೂರು ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ರವರು ಕಾರ್ಕಳ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಂತೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 26/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ವರದಕ್ಷಿಣೆ ನಿಷೇಧ ಕಾಯಿದೆ ಪ್ರಕರಣ
ಉಡುಪಿ ತಾಲೂಕು ಮೂಡ ಹಡು ಗ್ರಾಮ ಸಾಸ್ತಾನದ ಅಜ್ಜಿ ಮನೆಯ ವಾಸಿ ಶ್ರೀಮತಿ ಶಾಲಿನಿ(23ವರ್ಷ) ಗಂಡ ಸುಧಾಕರ ಮರಕಾಲ ಇವರು ದಿನಾಂಕ: 7/04/06 ರಂದು ಆಪಾದಿತರಾದ ಸುಧಾಕರ ಮರಕಾಲರನ್ನು ಹಿಂದೂ ವಿವಾಹ ಪದ್ದತಿಯಂತೆ ಶ್ರೀ ದುಗರ್ಾಪರಮೇಶ್ವರಿ ಕಲ್ಯಾಣ ಮಂಟಪ ಮಂದಾತರ್ಿಯಲ್ಲಿ ವಿವಾಹವಾಗಿದ್ದು ಆಪಾದಿತರು ವಿವಾಹ ಸಮಯ 1,00,000/- ರೂ ವರದಕ್ಷಿಣೆ ಹಾಗೂ 10 ಪವನ್ ಚಿನ್ನವನ್ನು ಕೇಳಿದ್ದು, ಆ ಪ್ರಕಾರ 55,000/- ರೂ ವರದಕ್ಷಿಣೆ ಹಾಗೂ 10 ಪವನ್ ಚಿನ್ನದ ಆಭರಣಗಳನ್ನು ಮದುವೆ ಸಮಯ ನೀಡಿದ್ದು ತದನಂತರ ಆಪಾದಿತ ಮತ್ತು ಅವರ ಮನೆಯವರೊಂದಿಗೆ ವಾಸ್ತವಿದ್ದುದಾಗಿದೆ. ಆ ಸಮಯ ಸುಧಾಕರ ಮರಕಾಲ ಅಸೌಖ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಇದ್ದಾಗ ಆಪಾದಿತರ ಒತ್ತಡದಿಂದ ಆಸ್ಪತ್ರೆಯ ವೆಚ್ಚರೂ 10,000/- ನ್ನು ಶ್ರೀಮತಿ ಶಾಲಿನಿಯವರೇ ಪಾವತಿಸಿದ್ದು ನಂತರದ ದಿನಗಳಲ್ಲಿ ಆಪಾದಿತರು ಹಾರ್ವಸೆ ಗ್ರಾಮದ ಕಲ್ಕೋಡ್ಲು ವಾಸಿಗಳಾದ ಪಾರ್ವತಿ ಮರಕಾಲ್ತಿ (60) ಗಂಡ: ಆನಂದ ಮರಕಾಲ, ಆನಂದ ಮರಕಾಲ(65) ತಂದೆ: ದ್ಯಾವ ಮರಕಾಲ್ತಿ, ಶಾರದಾ ಮರಕಾಲ ತಂದೆ: ಆನಂದ ಮರಕಾಲ, ರವರುಗಳು ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ, ಹಿಂಸೆ ನೀಡಿ, ಅವಾಚ್ಯವಾಗಿ ಬೈಯ್ದು, ಹೊಡೆಯುತ್ತಿದ್ದು, ಸರಿಯಾಗಿ ನೋಡಿಕೊಳ್ಳದೆ ಮನೆಯಿಂದ ಹೊರಗೆ ಹಾಕಿ ವರದಕ್ಷಿಣೆ ತಾರದೇ ಮನೆಗೆ ಬಂದರೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿದೆ. ಈ ಬಗ್ಗೆ ದಿನಾಂಕ: 28/07/09 ರಂದು ಮಾನ್ಯ ನ್ಯಾಯಾಲಯದಿಂದ ಬಂದ ಖಾಸಗಿ ಪಿರ್ಯಾಧಿ ನಂ 151/09 ರಂತೆ ಶ್ರೀಮತಿ ಶಾಲಿನಿ(23ವರ್ಷ)ರವರು ಕೋಟಾ ಠಾಣೆಗೆ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 182/09 ಕಲಂ : 498(ಎ), 323, 504, 506 ಐ.ಪಿ.ಸಿ.ಮತ್ತು ಕಲಂ 4, ವರದಕ್ಷಿಣೆ ನಿಷೇಧ ಕಾಯಿದೆ 1961 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
 
ಇತರೆ ಪ್ರಕರಣ
ದಿನಾಂಕ: 27/07/09 ರಂದು ಕೋಟಾ ಠಾಣೆಯ ಹೆಡ್ ಕಾನಸ್ಟೇಬಲ್ 721 ನೇ ನಾರಾಯಣ ದೇವಾಡಿಗರವರುರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ಸಾಲಿಗ್ರಾಮ, ಕೋಟ, ಮಣೂರು, ತೆಕ್ಕಟ್ಟೆ ಕಡೆಗಳಲ್ಲಿ ಸಂಚರಿಸಿ ದಿನಾಂಕ: 28/07/09 ರಂದು ಬೆಳಿಗ್ಗಿನ ಜಾವ 3:15 ಗಂಟೆಗೆ ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಪಂಚಾಯತ್ ಬಳಿ ಒಂದು ಮರದ ಬುಡದ ಬಳಿ ಒಬ್ಬ ವ್ಯಕ್ತಿ ಕತ್ತಲಲ್ಲಿ ತನ್ನ ಇರುವಿಕೆಯನ್ನು ಮರೆಮಾಚುವ ಉದ್ದೇಶದಿಂದ ನಿಂತುಕೊಂಡಿದ್ದು ಟಾಚರ್್ ಬೆಳಕಿನ ಸಹಾಯದಿಂದ ನೋಡಲಾಗಿ ಆತನು ಅಲ್ಲಿಂದ ಓಡಲು ಯತ್ನಿಸಿದಾಗ ಬೆನ್ನಟ್ಟಿ ಹಿಡಿದು ಆತನ ಹೆಸರು ವಿಳಾಸ ಹಾಗೂ ರಾತ್ರಿ ವೇಳೆ ಆತನ ಇರುವಿಕೆ ಬಗ್ಗೆ ವಿಚಾರಿಸಿದಲ್ಲಿ ಸರಿಯಾದ ಉತ್ತರ ನೀಡಲು ಅಸಮರ್ಥನಾಗಿದ್ದು ಆತನು ರಾತ್ರಿ ವೇಳೆಯಲ್ಲಿ ಯಾವುದೋ ಬೇವಾರಂಟು ತಕ್ಷೀರು ಮಾಡುವ ಉದ್ದೇಶದಿಂದ ಅಲ್ಲಿ ನಿಂತುಕೊಂಡಿರಬಹುದೆಂಬ ಉದ್ದೇಶದಿಂದ ಆತನನ್ನು 4:20 ಗಂಟೆಗೆ ದಸ್ತಗಿರಿಮಾಡಿ ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಈತನು ಶಂಕರ(26ವರ್ಷ) ತಂದೆ: ದಿ. ಕೃಷ್ಣ ವಾಸ: ಜಲಜಮರಕಾಲ್ತಿ ಮನೆ, ಹೊಳೆಬದಿ, ಗುಂಡ್ಮಿ ಗ್ರಾಮ, ಉಡುಪಿ ತಾಲೂಕು ಎಂಬುದಾಗಿದ್ದು ಈ ಬಗ್ಗೆ ನಾರಾಯಣ ದೇವಾಡಿಗ ಹೆಡ್ ಕಾನಸ್ಟೇಬಲ್ ಕೋಟಾ ಠಾಣೆರವರು ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 181/09 ಕಲಂ 96 ಕನರ್ಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
ಹಲ್ಲೆ ಪ್ರಕರಣ
ದಿನಾಂಕ 26/07/09 ರಂದು ಮಧ್ಯಾಹ್ನ 3:00 ಗಂಟೆಗೆ ಕೋಟಾ ಮಧುವನದ ಎಂ.ಜಿ. ಕಾಲೊನಿಯ ವಾಸಿಯಾದ ಮುಸ್ತಾಫಾರವರ ಮಕ್ಕಳಾದ ರಿಯಾದ್ (15 ವರ್ಷ) ಮತ್ತು ಅಬ್ದುಲ್ ಖಾಲಿದ್ (6 ವರ್ಷ)ರವರು ಆಟವಾಡಲೆಂದು ಹೋದವರು ವಾಪಾಸ್ಸು ಮನೆ ಕಡೆಗೆ ಬರುತ್ತಿರುವಾಗ ವಡ್ಡಸರ್ೆ ಗ್ರಾಮದ ಮಧುವನದ ಮೂಸ ಎಂಬವರ ಮನೆ ಬಳಿ ತಲುಪುವಾಗ ಆರೋಪಿತರಾದ 1] ಮಹಮ್ಮದ್ ಖಾಸಿಂ (46) ತಂದೆ: ಅಬ್ದುಲ್ ಸಾಹೇಬ್ ವಾಸ: ಮಧುವನ ವಡ್ಡಸರ್ೆ ಗ್ರಾಮ 2] ಮೂಸ ಬ್ಯಾರಿ (45) ತಂದೆ: ಹುಸೇನ್ ಬ್ಯಾರಿ ವಾಸ: ಮಧುವನ ವಡ್ಡಸರ್ೆ ಗ್ರಾಮ ಮತ್ತು 3] ರೆಹಮಾನ್ (34) ತಂದೆ: ವಿ ಹಸನ್ ಬ್ಯಾರಿ ವಾಸ: ಮುಬಾರಕ್ ಮಂಜಿಲ್ ಮಧುವನ ವಡ್ಡಸರ್ೆ ಗ್ರಾಮರವರು ರಿಯಾದ್ ಮತ್ತು ಅಬ್ದುಲ್ ಖಾಲಿದ್ರವರನ್ನು ಅಡ್ಡತಡೆದು ಅವಾಚ್ಯ ಶಬ್ದಗಳಿಂದ ಬೈದು ಗುಜರಿ ಅಂಗಡಿಯ ಬಾಟಲಿಗಳನ್ನು ಹಿಡಿದುಕೊಂಡು ಎಲ್ಲಿಗೆ ಮಾರಿದ್ದೀರಿ ಎಂದು ಹೇಳಿ ಅಬ್ದುಲ್ ಖಾಲಿದ್ನ ಕಾಲಿಗೆ ರೆಹಮತ್ ಎಂಬವರು ಕೋಲಿನಿಂದ ಹೊಡೆದು ಉಳಿದಿಬ್ಬರು ರಿಯಾದ್ ಮತ್ತು ಅಬ್ದುಲ್ ಖಾಲಿದ್ ಇಬ್ಬರಿಗೂ ಕೈಯಿಂದ ತಲೆಗೆ ಬೆನ್ನಿಗೆ ಹೊಡೆದು ಈ ವಿಷಯವನ್ನು ಮನೆಯವರಲ್ಲಿ ಹೇಳಿದರೆ ಜೀವ ಸಹಿತ ಬಿಡುವುದಿಲ್ಲವಾಗಿ ಕೊಲೆಬೆದರಿಕೆ ಹಾಕಿರುತ್ತಾರೆ. ರಿಯಾದ್ ಮತ್ತು ಅಬ್ದುಲ್ ಖಾಲಿದ್ರವರು ಮೂಸ ಎಂಬವರ ಅಂಗಡಿಯಿಂದ ಬಾಟಲಿಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ತಪ್ಪಾಗಿ ತಿಳಿದು ಆರೋಪಿತರು ಈ ಕೃತ್ಯ ಮಾಡಿರುತ್ತಾರೆ ಎಂಬುದಾಗಿ ರಿಯಾದ್ ಮತ್ತು ಅಬ್ದುಲ್ ಖಾಲಿದ್ರವರ ತಾಯಿಯಾದ ಶ್ರೀಮತಿ ಸೆಲಿಕಾ (33 ವರ್ಷ)ರವರು ತನ್ನ ದೂರಿನಲ್ಲಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 180/09 ಕಲಂ 341 323 324 504 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 27/07/09 ರಂದು ಮಧ್ಯಾಹ್ನ 1:15 ಗಂಟೆಗೆ ಕೆರೆಬೆಟ್ಟು ಗ್ರಾಮದ ತುಳಸಿ ನಿಲಯ ಎಂಬಲ್ಲಿ ಸುರೇಶ್ ಪೂಜಾರಿ (23 ವರ್ಷ) ತಂದೆ ಸಂಜೀವ ಪೂಜಾರಿರವರ ಮನೆಯಲ್ಲಿ, ಆರೋಪಿಯಾದ ಸುರೇಶ್ರವರ ಅಕ್ಕನ ಗಂಡ ಅಮರ್ ಪ್ರಸಾದ್ರವರು ತನ್ನ ಹೆಂಡತಿಗೆ ಹಲ್ಲೆ ಮಾಡಲು ಹೋದಾಗ ಬಿಡಿಸಲು ಬಂದ ಸುರೇಶ್ ಹಾಗೂ ಸಂಜೀವ ಪೂಜಾರಿಗೆ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ಇನ್ನು ಮುಂದೆ ನೀವು ಈ ಮನೆಯಲ್ಲಿ ಇದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ಸುರೇಶ್ ಪೂಜಾರಿರವರು ಹೆಬ್ರಿ ಠಾಣೆಯಲ್ಲಿ ದೂರು ನೀಡಿದ್ದು ಆ ಮೇರೆಗೆ ಠಾಣಾ ಅಪರಾಧ ಕ್ರಮಾಂಕ 72/09 ಕಲಂ 504, 323, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಕಳವು ಪ್ರಕರಣ
ದಿನಾಂಕ 27/07/09 ರಂದು 17:30 ಗಂಟೆಗೆ ಶ್ರೀಮತಿ ಬಿ.ಕೆ ಧನಲಕ್ಷ್ಮಿ (55) ಗಂಡ: ದಿವಂಗತ ಎನ್. ವೆಂಕಟೇಶ್ ಭಟ್ರವರು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದು ತನ್ನ ದೂರಿನಲ್ಲಿ ಅವರು ಉಡುಪಿ ತಾಲೂಕು ಹೆಗರ್ಾ ಗ್ರಾಮದ ಪರ್ಕಳ ಶಕ್ತಿನಗರದದ ಪರೀಕ ಅರಮನೆ ರಸ್ತೆಯಲಿರುವ ಜಗದೀಶ್ವರಿ ಮನೆ ನಂಬ್ರ 6-6ಸಿ5ರಲ್ಲಿ ಬಾಡಿಗೆಗೆ ಇದ್ದು ಅವರು ತನ್ನ ಮಗ ವಿಶ್ವಾಸ್ ವಿ ಭಟ್ ಎಂಬವರೊಂದಿಗೆ ದಿನಾಂಕ 25/07/09 ರಂದು ಬೆಳಿಗ್ಗೆ 9:00 ಗಂಟೆಗೆ ಮನೆಗೆ ಬೀಗ ಹಾಕಿ ಗಂಡನ ಮನೆಗೆ ಹೋಗಿದ್ದು ಅವರ ಮಗ ದಿನಾಂಕ 27/07/09 ರಂದು ಮಧ್ಯಾಹ್ನ 2:45 ಗಂಟೆಗೆ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲಿನ ಬೀಗ ಒಡೆದಿದ್ದು ಒಳಗೆ ಹೋಗಿ ನೋಡಲಾಗಿ ಕಪಾಟುಗಳು ತೆರೆದಿದ್ದು ಅದರಲ್ಲಿದ್ದ 1 ಬಂಗಾರದ ಚೈನು, 1 ಮುತ್ತಿನ ಸರ, 3000 ರೂಪಾಯಿ ನಗದು ಹಾಗೂ ದೇವರ ಪೂಜೆಗೆ ಉಪಯೋಗಿಸುವ ಸಾಮಾಗ್ರಿ ಒಟ್ಟು ರೂಪಾಯಿ 50,000 ಮೌಲ್ಯದ ಸೊತ್ತನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರಾಗಿ ತಿಳಿಸಿರುತ್ತಾರೆ. ಅವರ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 134/09 ಕಲಂ 454, 457, 380 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಜೀವ ಬೆದರಿಕೆ ಪ್ರಕರಣ
ದಿನಾಂಕ 26/07/09 ಮಧ್ಯಾಹ್ನ ಶಂಕರಪುರದಲ್ಲಿ ಶ್ರೀಮತಿ ಜೆಸಿಂತ ಡಿಸೋಜಾ ಗಂಡ ಅಶೋಕ ಡಿ'ಸೋಜಾ, ವಾಸ:-ಶಂಕರಪುರ, ಉಡುಪಿ ತಾಲೂಕುರವರು ತಮ್ಮ ಸೇಂಟ್ ಆಂತೋನಿ ಜ್ಯೂಸ್ ಸೆಂಟರ್ನಲ್ಲಿರುವಾಗ ಆರೋಪಿ ವಿಜಯಾ ವಿಲ್ಫ್ರೆಡ್ ಡೇಸಾ ಎಂಬಾತನು ಬಂದು ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ನಿನ್ನ ಗಂಡನನ್ನು ಕೊಂದು ಹಾಕುತ್ತೇನೆ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಶ್ರೀಮತಿ ಜೆಸಿಂತ ಡಿಸೋಜಾರವರ ದೂರಿನಂತೆ ಶಿವರ್ಾ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 148/09 ಕಲಂ 504,506 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಅಪಘಾತ ಪ್ರಕರಣ

ದಿನಾಂಕ 27/07/09 ರಂದು ಬೆಳಿಗ್ಗೆ 09:30 ಗಂಟೆಗೆ ಜೀಪು ನಂಬ್ರ ಎಂ.ವೈ.ಝೆಡ್ 9964ರ ಚಾಲಕ ಹೆನ್ರಿ ಗೋಮ್ಸ್ ಎಂಬವರು ತನ್ನ ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರ್ಕಳ ತಾಲೂಕು ಕಸಬ ಗ್ರಾಮದ ಸಾಲ್ಮರದ ಪ್ರಭಾತ್ ಲೆದರ್ ವಕ್ಸರ್್ನ ಬಳಿ ಯಾವುದೇ ಮುನ್ಸೂಚನೆ ನೀಡದೇ ಒಮ್ಮೆಲೇ ಬಲಬದಿಗೆ ತಿರುಗಿಸಿದ ಪರಿಣಾಮ ಜಯಂತಿ ನಗರದ ಕಡೆಯಿಂದ ಮೂರುಮಾರ್ಗದ ಕಡೆಗೆ ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ ಕೆಎ 20 ಆರ್ 3378ಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರರಾದ ಸತೀಶ ರಾವ್ (45) ತಂದೆ: ದಿವಂಗತ ಎ.ಸಂಜೀವ ಆಚಾರ್ಯ ವಾಸ: ತಾಲೂಕು ಕಛೇರಿ ಬಳಿ ಕುಕ್ಕುಂದೂರು ಗ್ರಾಮರವರು ಹಾಗೂ ಸಹಸವಾರ ನಿತಿನ್ ರಾವ್ರವರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಇಬ್ಬರಿಗೂ ಸಾಮಾನ್ಯ ಸ್ವರೂಪದ ರಕ್ತಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ನಸರ್ಿಂಗ್ ಹೋಂ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಅಪಘಾತದ ಬಗ್ಗೆ ಸತೀಶ ರಾವ್ರವರು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 100/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಿನಾಂಕ 27/07/2009 ರಂದು ಬೆಳಿಗ್ಗೆ 09:15 ಗಂಟೆಗೆ ಉದ್ಯಾವರ ಗ್ರಾಮದ, ಗುಡ್ಡೆಯಂಗಡಿ ಬಳಿಯ ರಾ.ಹೆ.17 ರಲ್ಲಿ ಹರ್ಮನ್ ನರೋನ್ನ (34 ವರ್ಷ), ತಂದೆ ಥೊಮಸ್ ನರೋನ್ನ, ವಾಸ ಮೂಡಬೆಟ್ಟು ಹೌಸ್, ಮಣಿಪುರ ಗ್ರಾಮ, ಉಡುಪಿ ತಾಲೂಕುರವರು ತಮ್ಮ ಮೊಟಾರು ಸೈಕಲ್ನಲ್ಲಿ ಉಡುಪಿ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಬರುತ್ತಿದ್ದ ಟೆಂಪೋ ನಂಬ್ರ. ಕೆ.ಎ. 19 ಎ 3014ನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ ಓವರ್ ಟೇಕ್ ಮಾಡುವ ಭರದಲ್ಲಿ ಮೋಟಾರು ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಹರ್ಮನ್ ನರೋನ್ನರವರಿಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಹರ್ಮನ್ ನರೋನ್ನರವರ ದೂರಿನ ಮೇರೆಗೆ ಕಾಪು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 149/09 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಆ.1ರಂದು ಕನ್ನಡ ಸಂಸ್ಕೃತಿ ಸಮ್ಮೇಳನ/Kannada Cultural Convention

ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಜಂಟಿ ಆಶ್ರಯದಲ್ಲಿ ಆ.1 ಮತ್ತು 2ರಂದು ಲಲಿತಕಲಾ ಸದನದಲ್ಲಿ ನಡೆಯುವ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿದರ್ೇಶಕ ಮನು ಬಳಿಗಾರ್ ಉದ್ಘಾಟಿಸುವರು.
ಹಿರಿಯ ಕವಿ ಕಯ್ಯಾರ ಕಿಞ್ಞಣ್ಣ ರೈ ಅಧ್ಯಕ್ಷತೆ ವಹಿಸುವರು. ಕೆ.ಶಿವರಾಮ ಶೆಟ್ಟಿ ಅವರು ಬರೆದ `ಕಾಸರಗೋಡಿನ ಸ್ವಾತಂತ್ರ್ಯ ಹೋರಾಟಗಾರರು' ಕೃತಿಯನ್ನು ಹಂಪಿ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿದರ್ೇಶಕ ಡಾ.ಮೋಹನ ಆಳ್ವ ಬಿಡುಗಡೆಗೊಳಿಸುವರು. ಸಂಸದ ಪಿ.ಕರುಣಾಕರನ್, ಶಾಸಕ ಸಿ.ಟಿ.ಅಹಮ್ಮದಾಲಿ, ದುಬೈ ಕನ್ನಡ ಸಂಘದ ಅಧ್ಯಕ್ಷ ಸಿ.ಆರ್.ಶೆಟ್ಟಿ, ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪತ್ರಕರ್ತ ಎಸ್ಕೆ ಹಳೆಯಂಗಡಿ, ಲಲಿತಕಲಾ ಸದನದ ಅಧ್ಯಕ್ಷ ವೈಎಸ್ವಿ ಭಟ್, ಸಾಹಿತಿ ಮೋಹನ ನಾಗಮ್ಮನವರ ಭಾಗವಹಿಸುವರು.
ಹೃದಯವಾಹಿನಿ ದಶಮಾನೋತ್ಸವ ಪ್ರಶಸ್ತಿಯನ್ನು ರಾಧಾಕೃಷ್ಣ ಉಳಿಯತ್ತಡ್ಕ(ಸಾಹಿತ್ಯ), ಕೆ.ವಿ.ರಮೇಶ್(ಬೊಂಬೆಯಾಟ), ಪ್ರದೀಪ್ ಕಾಸರಗೋಡು(ರಂಗಭೂಮಿ), ಪಿ.ಎಸ್.ಕಾರಂತ್(ಕನ್ನಡ ಸೇವೆ), ಡಾ.ಎಚ್.ಎಸ್.ಶಿವಶಂಕರ್(ಸಮಾಜ ಸೇವೆ), ಪದ್ಮನಾಭ ಬಿ.ಆರ್.(ಸಾಹಿತ್ಯ), ಕಾಗೋಡು ಅಣ್ಣಪ್ಪ(ರಂಗಕಲೆ), ಬಾಲಸುಬ್ರಹ್ಮಣ್ಯ(ಇಂಜಿನಿಯರಿಂಗ್), ಇಂದುದಾಸ್ ಶೆಟ್ಟಿ(ಸಮಾಜಸೇವೆ), ದೀಪಾ ರಾವ್(ಭರತನಾಟ್ಯ) ಅವರಿಗೆ ವಿತರಿಸಲಾಗುವುದು.

 
ನಾಳೆ ರ್ಯಾಗಿಂಗ್ ತಿಳಿವಳಿಕಾ ಶಿಬಿರ
ಕಾಸರಗೋಡು: ರ್ಯಾಗಿಂಗ್ ವಿರುದ್ಧ ತಿಳಿವಳಿಕಾ ಶಿಬಿರವನ್ನು ಇದೇ 30ರಂದು ಕಾಸರಗೋಡು ಸಕರ್ಾರಿ ಕಾಲೇಜಿನಲ್ಲಿ ಜಿಲ್ಲಾ ನ್ಯಾಯಾಧೀಶೆ ಎಂ.ಕೆ.ಪ್ರೇಮಲತಾ ಉದ್ಘಾಟಿಸುವರು.
ಜಿಲ್ಲಾಧಿಕಾರಿ ಆನಂದ್ ಸಿಂಗ್ ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎ.ಎ.ವಿಜಯನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್, ವಿ.ಗೋಪಿನಾಥನ್, ಕೆ.ಎಂ.ಭಟ್, ಸಿ.ಕೆ.ಶ್ರೀಧರನ್ ಭಾಗವಹಿಸುವರು.
 
 
ಕೆಎಸ್ಆರ್ಟಿಸಿಯಲ್ಲಿ ಪಾಸ್ ಸೌಲಭ್ಯ: ಡಿವೈಎಫ್ಐ ಆಗ್ರಹ
ಮಂಜೇಶ್ವರ: ಕಾಸರಗೋಡು-ಮಂಗಳೂರು ದಾರಿಯಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ವಿದ್ಯಾಥರ್ಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ಸೌಲಭ್ಯವನ್ನು ನೀಡಬೇಕು ಎಂದು ಡಿವೈಎಫ್ಐ ಮಂಜೇಶ್ವರ ಬ್ಲಾಕ್ ಸಮಿತಿ ರಾಜ್ಯ ಸಾರಿಗೆ ಸಚಿವರಿಗೆ ಮನವಿ ಮಾಡಿದೆ.
ಈ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲಿ ಜಯರಾಮ ಎನ್.ಕೆ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜತೆ ಕಾರ್ಯದಶರ್ಿ ಸಿಜಿ ಮಾಥ್ಯೂ, ಬ್ಲಾಕ್ ಕಾರ್ಯದಶರ್ಿ ಬಿ.ಎ.ಮೊಹಮ್ಮದ್, ರವೀಂದ್ರ, ಕೃಷ್ಣ ಕೆ, ಸತೀಶ ಎ, ಶಿವಪ್ರಸಾದ್, ಅರವಿಂದ ಸಿ, ಫಾರೂಕ್ ಶಿರಿಯ, ಪುರುಷೋತ್ತಮ ಬಳ್ಳೂರು, ಸದಾನಂದ ಕೋರಿಕ್ಕಾರ್, ಪಾರ್ವತಿ, ರಾಜೀವಿ ಕಳಿಯೂರು, ಶಕೀಲಾ ಕೂಳೂರು, ಮೃತ್ಯುಂಜಯ  ಹಾಜರಿದ್ದರು.
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Monday, July 27, 2009

ಹಲ್ಲೆ ಪ್ರಕರಣಗಳು/Udupi News

 
ದಿನಾಂಕ 26/07/09 ರಂದು 17:00 ಗಂಟೆಗೆ ಹಾವಂಜೆ ಗ್ರಾಮದ ದಖರ್ಾಸು ಮನೆ ಎಂಬಲ್ಲಿ ಆರೋಪಿತರಾದ 1) ಶ್ಯಾಮರಾಜ್ ಬಿತರ್ಿ, ಬ್ರಹ್ಮಾವರ, 2) ಮಂಜುನಾಥ ಗಿಳಿಯಾರು, 3) ಗುಜ್ಜರಬೆಟ್ಟಿನ ಸುಂದರ ಮತ್ತು ಇತರರು ಸಮಾನ ಉದ್ದೇಶದಿಂದ ದಾಸುರವರ ಮಗನಾದ ಶೇಖರ (18 ವರ್ಷ) ಹಾಗೂ ಅವರ ತಮ್ಮನ ಮೇಲಿನ ದ್ವೇಷದಿಂದ ಶೇಖರರವರ ತಮ್ಮನಿಗೆ ಕೈಯಿಂದ ಹೊಡೆದು ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಶೇಖರರವರ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 131/09 ಕಲಂ 323, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 26/07/09 ರಂದು 23:15 ಗಂಟೆಗೆ ಹಾವಂಜೆ ಗ್ರಾಮದ ದಖರ್ಾಸು ಮನೆ ಎಂಬಲ್ಲಿ ಸ್ಥಳೀಯ ಆರೋಪಿತರಾದ 1) ಸತೀಶ್, 2) ಶೇಖರ, 3) ಲಿಂಗಪ್ಪ, 4) ರಮೇಶ್, 5) ಮೋಹನ, 6) ಶ್ಯಾಮ, 7) ಶ್ರೀನಿವಾಸ 8) ಸಂಜೀವ ಮತ್ತು 9) ವಿಠಲ ಎಂಬವರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಸಂಘದ ಮೀಟಿಂಗ್ ಮಾಡುವ ಚಪ್ಪರವನ್ನು ಕಿತ್ತು ಹಾಕಲಿಕ್ಕೆ ಬಂದಿದ್ದು ಈ ಬಗ್ಗೆ ಹಾವಂಜೆಯ ದಿನೇಶ್ರವರ ಪತ್ನಿ ಶ್ರೀಮತಿ ಮೈನಾ (25 ವರ್ಷ)ರವರು ಹಾಗೂ ಇತರರು ಪ್ರಶ್ನಿಸಿದಾಗ ಆರೋಪಿ ಶೇಖರರವರು ಮೈನಾರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ ಲಿಂಗಪ್ಪರವರು ಶ್ರೀಮರಿ ಮೈನಾರವರಿಗೆ ಕೈಯಿಂದ ಹೊಡೆದು ಆರೋಪಿತರುಗಳು ಅವರ ಬಟ್ಟೆಯನ್ನು ಎಳೆದು ಹಾಕಲು ಯತ್ನಿಸಿದಲ್ಲದೇ ಆರೋಪಿ ಸತೀಶ ಮತ್ತು ಇತರರು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರಾಗಿ ಶ್ರೀಮತಿ ಮೈನಾರವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 132/09 ಕಲಂ 143, 147, 504, 323, 354, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣ

ದಿನಾಂಕ 25.07.09 ರಂದು 16.00 ಗಂಟೆಗೆ ಕಿಶೋರ್ ಕುಮಾರ್ (38) ತಂದೆ: ಬೋಜ ಶ್ರೀಯಾನ್ ವಾಸ: ಸ್ವಾಗತ್ ರೈಸ್ ಮಿಲ್ ಬಳಿ ಉಚ್ಚಿಲ ಬಡಾ ಗ್ರಾಮ , ಉಡುಪಿ ತಾಲೂಕು ಎಂಬವರು ತೆಂಕ ಎಮರ್ಾಳ್ ಗ್ರಾಮದ ಪುನ್ಕೆದಡಿ ಎಂಬಲ್ಲಿ ಇವರ ಮಾವನಾದ ರಾಮ ಕೆ ಪುತ್ರನ್ ಇವರು ರಾಹೆ 17ರಲ್ಲಿ ರಸ್ತೆ ದಾಟಲು ಪೂರ್ವ ಬದಿಯಲ್ಲಿ ನಿಂತುಕೊಂಡಿರುವಾಗ್ಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ 19 ಎಸಿ 1111 ನೇ ಬಸ್ಸನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಾದಾಚಾರಿ ರಾಮ ಕೆ ಪುತ್ರನ್ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಕೈಗೆ , ಸೊಂಟಕ್ಕೆ ಒಳ ಜಖಂ ಉಂಟಾಗಿ ಉಡುಪಿ ಹೈಟೆಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಬಗ್ಗೆ ಕಿಶೋರ್ ಕುಮಾರ್ (38) ರವರು ನೀಡಿದ ದೂರಿನಂತೆ ಪಡುಬಿದ್ರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/09 ಕಲಂ. 279,337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಮೋಟಾರು ಸೈಕಲ್ ಕಳವು ಪ್ರಕರಣ
ದಿನಾಂಕ 24/07/2009 ರಂದು 9.30 ಗಂಟೆಗೆ ಗಿರೀಶ್ ಹೆಬ್ಬಾರ್ ತಂದೆ:ದಿ:ವೆಂಕಟೇಶ್ ಹೆಬ್ಬಾರ್. ವಾಸ :ಮನೆ ನಂ 52/02 ಕೋಣಿ ಗ್ರಾಮ ,ಕುಂದಾಪುರ ತಾಲೂಕು ಎಂಬವರು ಮೋಟಾರು ಸೈಕಲ್ ನಂಬ್ರ ಕೆ.ಎ.20.ಎಲ್. 7231 ನೇದನ್ನು ಎಚ್.ಎಮ್.ಟಿ ರಸ್ತೆ ಕೋಣಿಯಲ್ಲಿರುವ ಅವರ ಮನೆ ನಂಬ್ರ 52/02 ರ ಹೆಬ್ಬಾಗಿಲಿನ ಒಳಗಿನ ಅವರಣದಲ್ಲಿ ನಿಲ್ಲಿಸಿ ಹಾಂಡಲ್ ಲಾಕ್ ಮಾಡಿ ಮಲಗಿದ್ದು ರಾತ್ರಿ 02.00 ಗಂಟೆಗೆ ಎದ್ದು ನೋಡಿದಾಗ ಮೋಟಾರು ಸೈಕಲ್ ಇಲ್ಲದೇ ಇದ್ದುದನ್ನು ಕಂಡು ಮನೆಯ ಹತ್ತಿರದ ಅಸುಪಾಸಿನ ರಸ್ತೆಯಲ್ಲಿ ಹುಡುಕಾಡಿದಾಗ ಸಿಗದೇ ಇದ್ದು ಯಾರೋ ಮೋಟಾರು ಸೈಕಲನ್ನು ಕಳವು ಮಾಡಿ ಕೊಂಡು ಹೋಗಿರುತ್ತಾರೆ ಈ ಬಗ್ಗೆ ಗಿರೀಶ್ ಹೆಬ್ಬಾರ್ ರವರು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 221/09 ಕಲಂ. 379, ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಹಲ್ಲೆ ಪ್ರಕರಣ
ದಿನಾಂಕ 25.07.09 ರಂದು 11:00 ಗಂಟೆಗೆ ಲಲಿತ ಶೆಡ್ತಿ (64ವರ್ಷ), ಗಂಡ: ವಿಠಲ ಶೆಟ್ಟಿ, ವಾಸ: ನಂಚಾರು ಬೈದರಮಕ್ಕಿ, ನಂಚಾರು ಗ್ರಾಮ.ಉಡುಪಿ ತಾಲೂಕು ಇವರು ತನ್ನ ಮನೆಯ ಎದುರಿನ ತೋಟದಲ್ಲಿರುವಾಗ ಹುಬ್ಬಳ್ಳಿ ಬೆಟ್ಟು ಎಂಬಲ್ಲಿಯ ಕರಿಯಣ್ಣ ಶೆಟ್ಟಿ ಎಂಬುವರ ಹೆಣ್ಣುಮಕ್ಕಳಾದ ಕುಸುಮ, ವಸಂತಿ ಹಾಗೂ ಶಂಕರ ಶೆಟ್ಟಿ ರವರ ಮಗಳಾದ ಶೈಲ ಎಂಬುವರು ಬಂದು ಅವಾಚ್ಯ ಶಬ್ದಗಳಿಂದ ಬೈದು ಜೋರಾಗಿ ಕೂಗಿ ಅವರುಗಳ ಪೈಕಿ ಶೈಲ ಮತ್ತು ಕುಸುಮ ಎಂಬುವರು ಲಲಿತ ಶೆಡ್ತಿಯವರನ್ನು ಹಿಡಿದುಕೊಂಡು ವಸಂತಿ ಎಂಬುವರು ತನ್ನ ಕೈಯಲ್ಲಿದ್ದ ಕಾಟು ಮರದ ದೊಣ್ಣೆಯಿಂದ ಕಾಲಿಗೆ ಜೋರಾಗಿ ಬೀಸಿದ್ದು ಪರಿಣಾಮ ಬಲಕಾಲಿನ ಉಗುರಿನ ಜಾಗಕ್ಕೆ ಬಲವಾಗಿ ತಾಗಿದ್ದು, ಬಲಗಾಲ ಹೆಬ್ಬರಳಿಗೆ ರಕ್ತಗಾಯವಾಗಿರುತ್ತದೆ. ಆಗ ಕೂಗಿಕೊಂಡಾಗ ವಿಠಲ ಶೆಟ್ಟಿ ಅಲ್ಲಿಗೆ ಬರುವುದನ್ನು ನೋಡಿ 3 ಜನರು "ಮುಂದಕ್ಕೆ ನಿಮ್ಮನ್ನು ನೋಡಿಕೊಳ್ಳುತ್ತೇವೆ" ಎಂದು ಹೇಳಿ ಓಡಿಹೋಗಿರುತ್ತಾರೆ. ನಂತರ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯಾದಿಕಾರಿಯವರು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಕೃತ್ಯಕ್ಕೆ ಜಾಗದ ತಕರಾರೇ ಕಾರಣವಾಗಿರುತ್ತದೆ. ಈ ಬಗ್ಗೆ ಲಲಿತ ಶೆಡ್ತಿ (64ವರ್ಷ),ರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 179/09, ಕಲಂ 504, 341, 324 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಆತ್ಮಹತ್ಯೆ ಪ್ರಕರಣ
ದಿನಾಂಕ 26/07/09 ರಂದು 12.00 ರಿಂದ 13.30 ಗಂಟೆಯ ನಡುವಿನ ಅವಧಿಯಲ್ಲಿ ಉಷಾ(30) ಗಂಡ:ರಮೇಶ ವಾಸ:ಶ್ರೀ ಮೂಕಾಂಬಿಕ ಚಚರ್್ ರಸ್ತೆ ಹತ್ತಿರ, 76 ಬಡಗಬೆಟ್ಟು, ಇಂದಿರಾ ನಗರ, ಕುಕ್ಕಿಕಟ್ಟೆ, ಉಡುಪಿ ಇವರ ತಂದೆ ಮಹಾಬಲ ಮರಕಾಲ(72ವರ್ಷ) ಎಂಬವರು ತಮಗಿರುವ ಕ್ಯಾನ್ಸರ್ ಕಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಉಡುಪಿ ಕುಕ್ಕಿಕಟ್ಟೆ 76 ಬಡಗಬೆಟ್ಟು ಚಚರ್್ ರಸ್ತೆ ಹತ್ತಿರ ಇರುವ ಮನೆಯ ಮಾಡಿನ ಪಕ್ಕಾಸಿಗೆ ಲುಂಗಿ ಕಟ್ಟೆ ಕುತ್ತಿಗೆಗೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಷಾ(30) ರವರು ನೀಡಿದ ದೂರಿನ ಮೇರೆಗೆ ಉಡುಪಿನಗರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 24/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಅಪರಿಚಿತ ಗಂಡಸಿನ ಮೃತದೇಹ ಪತ್ತೆ ಪ್ರಕರಣ
ದಿನಾಂಕ: 26/07/09 ರಂದು ಸಂಜೆ 19:30 ಗಂಟೆಗೆ ಕುಂದಾಪುರ ತಾಲೂಕು, ತ್ರಾಸಿ ಗ್ರಾಮದ ಅರಬ್ಬಿ ಸಮುದ್ರದ ಕಿನಾರೆಯಲ್ಲಿ ಸುಮಾರು 50 ರಿಂದ 55 ವರ್ಷದ ಅಪರಿಚಿತ ಗಂಡಸಿನ ಮೃತ ಶರೀರವು ಪತ್ತೆಯಾಗಿದ್ದು ಈ ಬಗ್ಗೆ ಸಮುದ್ರ ಕಿನಾರೆಯಲ್ಲಿ ಬಲೆ ಕೆಲಸ ಮಾಡಿಕೊಂಡಿದ್ದ ಗೋಪಾಲ ಖಾವರ್ಿ (40) ತಂದೆ ದಿ: ನರಸಿಂಹ ಖಾವರ್ಿ ವಾಸ ಹೊಸಪೇಟೆ ತ್ರಾಸಿ ಗ್ರಾಮದವರು ಒಂದು ಲಿಖಿತ ಪಿರ್ಯಾದಿಯನ್ನು ನೀಡಿದ್ದು ಮೃತ ವ್ಯಕ್ತಿಯು ಯಾವುದೋ ತನ್ನ ವೈಯಕ್ತಿಕ ಕಾರಣದಿಂದ ಎಲ್ಲಿಯೋ ಸಮುದ್ರದಲ್ಲಿ ಅಥವಾ ಹೊಳೆಯಲ್ಲಿ ಹಾರಿ ಅತ್ಮಹತ್ಯ ಮಾಡಿಕೊಂಡಿರಬಹುದು ಅಥವಾ ಆಕಸ್ಮಿಕವಾಗಿ ಸಮುದ್ರ ಅಥವಾ ಹೊಳೆಗೆ ಬಿದ್ದು ನೀರಿನಲ್ಲಿ ಉಸಿರು ಕಟ್ಟಿ ಮೃತಪಟ್ಟಿರಬಹುದು. ಅಪರಿಚಿತ ಮೃತದ ಚಹರೆ ಗುರುತು : ಪ್ರಾಯ ಸುಮಾರು 50- 55ವರ್ಷಕಪ್ಪು ಮೈ ಬಣ್ಣ, ಗುಂಗುರು ಕಪ್ಪು ಮಿಶ್ರಿತ ಬಿಳಿ ಬಣ್ಣ ದ ತಲೆಕೂದಲು. ಎತ್ತರ: 5' 6" ಕ್ರೀಮ್ ಕಲರ್ನ ತುಂಬು ತೋಳಿನ ಶಟರ್್ ಹಾಗೂ ಬಿಳಿ ತುಂಬು ತೋಳಿನ ಬಿನಿಯಾನ್ ಧರಿಸಿರುತ್ತಾರೆ. ಈ ಬಗ್ಗೆ ಗೋಪಾಲ ಖಾವರ್ಿ (40) ರವರು ನೀಡಿದ ದೂರಿನಂತೆ ನಗರ ಗಂಗೊಳ್ಳಿ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 24/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಜಾತಿ ನಿಂದನೆ ಪ್ರಕರಣ
ದಿನಾಂಕ 01/09/08 ರಿಂದ ಶ್ರೀಮತಿ ಎಸ್ ಸುನಂದ, ಪ್ರ.ದಜರ್ೆ.ಸಹಾಯಕಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಡುಪಿ ಉಡುಪಿ ಜಿಲ್ಲೆ ಇವರು ಪ್ರ.ದಜರ್ೆ ಸಹಾಯಕಿಯಾಗಿ ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು ಆಪಾದಿತರು ಸತ್ಯನಾರಾಯಣ ಶೆಟ್ಟಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಉಡುಪಿ ಎಂಬವರು ತನ್ನ ಕಛೇರಿಯಲ್ಲಿ ಅಧೀಕ್ಷಕರ ಕೆಲಸವನ್ನು ಮಾಡಬೇಕೆಂದು ಒತ್ತಾಯಿಸುತ್ತಾ ಪದೇಪದೇ ಕಛೇರಿಯಲ್ಲಿ ಹಿಂಸೆ ಕಿರುಕುಳ ನೀಡುತ್ತಿದ್ದು ನಂತರ ದಿ.18/07/09ರ ವರೆಗೆ ಬೈದು ಜಾತಿನಿಂದನೆ ಜಾತಿ ನಿಂದನೆ ಮಾಡುತ್ತಿದ್ದುದ್ದಾಗಿದೆ.ಎಂಬುದಾಗಿ ಶ್ರೀಮತಿ ಎಸ್ ಸುನಂದ ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 242/09 ಕಲಂ. 3() (ಥ) ಎಸ್.ಸಿ ಮತ್ತು ಎಸ್.ಟಿ. ಕಾಯ್ದೆ 1989 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಗಂಡಸು ಕಾಣೆ ಪ್ರಕರಣ
ದಿನಾಂಕ 26-07-09 ರಂದುಕೊಲ್ಲೂರು ಠಾಣಾ ಸರಹದ್ದಿನ ಕೊಲ್ಲೂರು ದೇವಸ್ಥಾನದ ಸೌರ್ಪಣಿಕ ಸ್ನಾನ ಗಟ್ಟದಲ್ಲಿ ಶರವಣ್ಣನ್ (30) ತಂದೆ: ಶಿವಲಿಂಗಂ, ಈಚಂಬಾಡಿ, ಆರೂರು, ಧರ್ಮಪುರಿ, ತಮಿಳುನಾಡು ಎಂಬವರು ತನ್ನ ಗೆಳೆಯರೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ದರ್ಶನಕ್ಕೆ ಆಗಮಿಸಿದ್ದು, ಬೆಳಿಗ್ಗೆ 10.30 ಗಂಟೆಗೆ ತನ್ನ ಸ್ನೇಹಿತರೊಂದಿಗೆ ಕೊಲ್ಲೂರಿನ ಸೌಪಣರ್ಿಕ ಸ್ನಾನ ಘಟ್ಟದಲ್ಲಿ ಸ್ನಾನ ಮಾಡುತ್ತಿರುವಾಗ ಅವರ ಪೈಕಿ 32 ವರ್ಷ ಪ್ರಾಯದ ರಾಜಶೇಖರ ಎಂಬವರು ಅಕಸ್ಮಾತ್ತಾಗಿ ನದಿಯ ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗಿದ್ದು, ಹುಡುಕಾಡಿದಲ್ಲಿ ಪತ್ತೆಯಾಗದೇ ಕಾಣಿಯಾಗಿರುವುದಾಗಿದೆ. ಈ ಬಗ್ಗೆ ಶರವಣ್ಣನ್ (30ವರ್ಷ) ರವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 45/09 ಕಲಂ. ಗಂಡಸುಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಘರ್ಷಣೆ: ಪೊಲೀಸರ ಸಹಿತ 6 ಮಂದಿಗೆ ಗಾಯ/6 Injured Near Cherangai

ಕಾಸರಗೋಡು: ಇಲ್ಲಿಗೆ ಸಮೀಪದ ನೆಲ್ಲಿಕುಂಜೆ ಚೇರಂಗೈ ಕಡಲ ತೀರದಲ್ಲಿ ನಡೆದ ಘರ್ಷಣೆಯಲ್ಲಿ ಪೊಲೀಸರ ಸಹಿತ 6 ಮಂದಿ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ಕಾವುಗೋಳಿಯ ವಿ.ಕೆ.ಮುರಳಿ, ಆರ್.ಕೆ.ಸುರೇಶ್, ಟಿ.ಕೆ.ಪ್ರಣಾಮ್, ನಗರ ಠಾಣೆಯ ಪೊಲೀಸರಾದ ಎಂ.ಬಿನು, ಬಿಜೇಶ್ ವಗರ್ಿಸ್ ಗಾಯಗೊಂಡವರು. ಸಿ.ಐ. ಟಿ.ಪಿ.ಪ್ರೇಮರಾಜನ್ ಅವರಿಗೂ ಕಲ್ಲುತೂರಾಟದಿಂದ ಗಾಯಗಳಾಗಿದೆ.
ನಿನ್ನೆ ಚೇರಂಗೈಯಲ್ಲಿ ಬೀಚ್ಗೆ ಆಗಮಿಸಿದ ಮಂದಿಯನ್ನು ಹೀಯಾಳಿಸಿದ ಹಿನ್ನೆಲೆಯಲ್ಲಿ ಘರ್ಷಣೆ ನಡೆದಿದೆ. ಘಟನೆಗೆ ಬಂಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೆ ತಂಡ ಹಿಂಸೆಗೆ ಇಳಿದಿದೆ.
ಘಟನೆಗೆ ಸಂಬಂಧಿಸಿದಂತೆ 8 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗಾಯಾಳು ಸಾವು

ಕಾಸರಗೋಡು: ಬೈಕ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದರು.
ಚೆಂಗಳ ಸಮೀಪದ ಸಂತೋಷ್ನಗರದ ನಿವಾಸಿ ಬಿ.ಕೆ.ಅಬ್ದುಲ್ ನಿಯಾಜ್(26) ಸಾವನ್ನಪ್ಪಿದ ವ್ಯಕ್ತಿ. ಜ.24ರಂದು ರಸ್ತೆ ಬದಿ ನಡೆಯುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿತ್ತು.
 
ಹಲ್ಲೆ
 
ಕಾಸರಗೋಡು: ಕಾಸರಗೋಡಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಎಕ್ಸ್ಪ್ರೆಸ್ ಬಸ್ಸಿನ ಚಾಲಕನಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಭಾನುವಾರ ಸಂಜೆ ಕುಂಬಳೆ ಸಮೀಪದ ಆರಿಕ್ಕಾಡಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ಸಾರಾಯಿ ಪ್ರಕರಣದ ವಾರೆಂಟ್ ಆರೋಪಿಯೂ ಆಗಿರುವ ಆರಿಕ್ಕಾಡಿಯ ಹಮೀದ್ ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಗಾಯಾಳು ಪಂಜಿಕಲ್ಲು ನಿವಾಸಿ ಪ್ರಭಾಕರ ಎಂಬವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
 
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಗಮಕ ಮಾಸಾಚರಣೆ ಉದ್ಘಾಟನೆ/Gamaka

ಕಾಸರಗೋಡು: ಕನರ್ಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಗಮಕ ಮಾಸಾಚರಣೆಯನ್ನು ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಇತ್ತೀಚೆಗೆ ಮಠದಲ್ಲಿ ಉದ್ಘಾಟಿಸಿದರು.
ಟಿ.ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಹಾಜರಿದ್ದರು.
ಟಿ. ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಮಾತನಾಡಿದರು.
ಘಟಕದ ಪ್ರಧಾನ ಕಾರ್ಯದಶರ್ಿ ಕಾಸರಗೋಡು ಚಿನ್ನಾ ಸ್ವಾಗತಿಸಿ, ಬೆಳ್ಳಿಗೆ ನಾರಾಯಣ ಮಣಿಯಾಣಿ ವಂದಿಸಿದರು.

ಬಿ.ಎಂ.ಎಸ್. ಸ್ಥಾಪಕ ದಿನಾಚರಣೆ

ಕಾಸರಗೋಡು: ಬಿ.ಎಂ.ಎಸ್. ಸ್ಥಾಪಕ ದಿನಾಚರಣೆ ಕುಂಬಳೆ ಸಮೀಪದ ನಾಯ್ಕಾಪಿನಲ್ಲಿ ಇತ್ತೀಚೆಗೆ ಜರುಗಿತು.
ಬಿ.ಎಂ.ಎಸ್.ಘಟಕ ಅಧ್ಯಕ್ಷ ಪ್ರಸಾದ್ ಪಾಟಾಳಿ ಉದ್ಘಾಟಿಸಿದರು. ಕುಂಬಳೆ ವಲಯ ಅಧ್ಯಕ್ಷ ಐತ್ತಪ್ಪ ಕುಲಾಲ್, ಕುಂಬಳೆ ಸಹಕಾರಿ ಬ್ಯಾಂಕಿನ ನಿದರ್ೇಶಕ ಮುರಳೀಧರ ಯಾದವ್, ದಯಾನಂದ ನಾಯ್ಕಾಪು, ಶಿವಕುಮಾರ್ ಕುಲಾಲ್, ಚರಣ್, ಮಹೇಂದ್ರ ಕುಮಾರ್, ಜಿತೇಶ್ ಹೆಗ್ಡೆ, ಚಿನ್ನು, ಬಾಲಕೃಷ್ಣ ಪೂಜಾರಿ, ವೇಣು ಕರಿವೆಳ್ಳೂರು ಹಾಜರಿದ್ದರು.
ರಾಜಗಟ್ಟಿ ನಾಯ್ಕಾಪು ಪ್ರಾಸ್ತಾವಿಕ ಮಾತನಾಡಿದರು.
ವಿಠಲ ಸ್ವಾಗತಿಸಿ, ಅಶೋಕ್ ಗಟ್ಟಿ ಮೂಲದ್ವಾರ ವಂದಿಸಿದರು.
 
ವಿದ್ಯಾಥರ್ಿಗಳಿಗೆ ಎನ್.ಎಸ್.ಎಸ್.ನಿಂದ ಸ್ವಾಗತ

ಕಾಸರಗೋಡು: ಕಾಸರಗೋಡು ಸಕರ್ಾರಿ ಕಾಲೇಜಿನ ಪ್ರಥಮ ಪದವಿ ವಿದ್ಯಾಥರ್ಿಗಳಿಗೆ ಎನ್.ಎಸ್.ಎಸ್. ಘಟಕದ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು.
ಕಾಲೇಜು ಪ್ರಾಂಶುಪಾಲ ಪ್ರೊ.ಮಾಧವನ್ ನಂಬ್ಯಾರ್ ಮಾತನಾಡಿ, ರ್ಯಾಗಿಂಗ್ ವಿರುದ್ಧ ಪ್ರತಿಯೊಬ್ಬ ವಿದ್ಯಾಥರ್ಿಯೂ ಪ್ರತಿಭಟಿಸಬೇಕು ಎಂದು ಕರೆ ನೀಡಿದರು.
ರ್ಯಾಗಿಂಗ್ ವಿರೋಧಿ ಸಮಿತಿ ಸಂಚಾಲಕ ಶ್ರೀನಾಥ್ ಎ., ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಮಹಮ್ಮದಾಲಿ ಪೆರ್ಲ, ರತ್ನಾಕರ ಮಲ್ಲಮೂಲೆ, ಪ್ರೊ.ನರೇಂದ್ರ, ಸ್ಮಿತಾ ಪಾರ್ವತಿ, ಎನ್.ಸಿ.ಸಿ. ಅಧಿಕಾರಿ ಸಿಜಿನ್ ಕುಮಾರ್, ಎನ್.ಎಸ್.ಎಸ್. ಕಾರ್ಯದಶರ್ಿಗಳಾದ ಖಾಲಿದ್, ನಯನ, ಮಹೇಶ್, ಜಿನೇಶ್ ಹಾಜರಿದ್ದರು.

ಅಭಿನಂದನೆ

ಕಾಸರಗೋಡು: ಭಾರತೀಯ ಯುವ ಸಂಚಲನದ ಬೇಳ ಘಟಕದ ಆಶ್ರಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ವಿಜೇತ ವಿದ್ಯಾಥರ್ಿಗಳಿಗೆ ಅಭಿನಂದನಾ ಕಾರ್ಯಕ್ರಮ ಇತ್ತೀಚೆಗೆ ಬೇಳ ಶೋಕಮಾತಾ ದೇವಾಲಯದಲ್ಲಿ ಜರುಗಿತು.
ಕಾಸರಗೋಡು ವಲಯ ಪ್ರಧಾನ ಧರ್ಮಗುರು ಬಾಸಿಲ್ ವಾಸ್ ವಿದ್ಯಾಥರ್ಿಗಳನ್ನು ಅಭಿನಂದಿಸಿದರು. ಕಣ್ಣೂರು ವಿಶ್ವವಿದ್ಯಾನಿಲಯದ ಬಿಎಸ್ಸಿ ಪದವಿ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಗಳಿಸಿದ ಲಿಡಿಯಾ ಡಿ'ಸೋಜಾ ಅವರಿಗೆ ಸ್ಮರಣಿಕೆ ಸಹಿತ ನಗದು ಬಹುಮಾನ ನೀಡಿ ಗೌರವಿಸಿದರು.
ಪುತ್ತಿಗೆ ಪಂಚಾಯ್ತಿ ಅಧ್ಯಕ್ಷ ತೋಮಸ್ ಡಿ'ಸೋಜಾ, ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ ಬೇಳ ಘಟಕದ ಅಧ್ಯಕ್ಷ ಸಂತೋಷ್, ಅರುಣ್, ವಿನೋದ್, ಎಡ್ವಡರ್್, ಸಂದೇಶ್ ಹಾಜರಿದ್ದರು.

ರೇಷನ್ ಅಂಗಡಿಗಳಲ್ಲಿ ಅವ್ಯವಹಾರ: ಡಿ.ವೈ.ಎಫ್.ಐ. ಎಚ್ಚರಿಕೆ

ಮಂಜೇಶ್ವರ: ರೇಷನ್ ಅಂಗಡಿಗಳಲ್ಲಿ ವ್ಯಾಪಕವಾಗಿ ನಡೆಯುವ ಅವ್ಯವಹಾರವನ್ನು ಕೊನೆಗೊಳಿಸಬೇಕು ಎಂದು ಡಿ.ವೈ.ಎಫ್.ಐ. ಮಂಜೇಶ್ವರ ಬ್ಲಾಕ್ ಸಮಿತಿ ಆಗ್ರಹಿಸಿದೆ.
ರೇಷನ್ ಅಂಗಡಿಗಳಲ್ಲಿ `ಅನ್ನಪೂರ್ಣ' ಕಾಡರ್ುದಾರರಿಗೆ 10 ಕಿಲೋ ಉಚಿತ ಅಕ್ಕಿ, `ಅಂತ್ಯೋದಯ ಅನ್ನ ಯೋಜನೆ'ಯಡಿ ಪ್ರತಿ ತಿಂಗಳಿಗೆ 2 ರೂ.ದರದಲ್ಲಿ 35 ಕಿಲೋ, ಬಿ.ಪಿ.ಎಲ್. ಕಾಡರ್ುದಾರರಿಗೆ 2 ರೂ. ದರದಲ್ಲಿ 25 ಕಿಲೋ ಅಕ್ಕಿ ಅಥವಾ ಗೋಧಿ, ಬಿ.ಪಿ.ಎಲ್., ಎ.ಎ.ವೈ ಕಾಡರ್ುದಾರರಿಗೆ 13.50 ರೂ. ದರದಲ್ಲಿ ಪ್ರತಿ ಸದಸ್ಯನಿಗೆ 400 ಗ್ರಾಂ ಸಕ್ಕರೆ, ಎ.ಪಿ.ಎಲ್. ಕಾಡರ್ುದಾರರಿಗೆ 8.90 ರೂ.ದರದಲ್ಲಿ 10 ಕಿಲೋ ಅಕ್ಕಿ, 6.70 ರೂ ದರದಲ್ಲಿ 2 ಕಿಲೋ ಗೋಧಿ, ವಿದ್ಯುತ್ ಸಂಪರ್ಕವಿಲ್ಲದ ಕಾಡರ್ುದಾರರಿಗೆ 5 ಲೀ., ವಿದ್ಯುತ್ ಸಂಪರ್ಕವಿರುವ ಕಾಡರ್ುದಾರರಿಗೆ 2 ಲೀ  ಸೀಮೆಎಣ್ಣೆ 9.50ರಿಂದ 9.70 ರೂ.ದರದಲ್ಲಿ ಲಭಿಸುತ್ತಿದೆ.
ಆಶ್ರಯ, ಪರಿಶಿಷ್ಟ ಜಾತಿ-ವರ್ಗ, ಪ್ರಕೃತಿ ವಿಕೋಪಕ್ಕೆ ಒಳಗಾದವರಿಗೆ, ಮೀನು ಕಾಮರ್ಿಕರಿಗೆ ಕಾಲೋಚಿತವಾಗಿ ಸಕರ್ಾರ ವಿತರಿಸುವ ಸೌಲಭ್ಯವನ್ನು ಗ್ರಾಹಕರಿಗೆ ವಿತರಿಸದೆ ಜನತೆಗೆ ದ್ರೋಹವೆಸಗುತ್ತಿರುವ ರೇಷನ್ ಮಾಫಿಯಾಗಳ ಚಲನವಲನಗಳನ್ನು ಡಿ.ವೈ.ಎಫ್.ಐ. ಗಮನಿಸಿ ಹೋರಾಟಕ್ಕೆ ಇಳಿಯಲು ಮುಂದಾಗಿದೆ. ರೇಷನ್ ವ್ಯಾಪರಿಗಳ ವಂಚನೆಯ ಬಗ್ಗೆ ಸುಳಿವು ಲಭಿಸುವ ಸಾರ್ವಜನಿಕರು ಡಿ.ವೈ.ಎಫ್.ಐಯನ್ನು ಸಂಪಕರ್ಿಸುವಂತೆ ಮನವಿ ಮಾಡಲಾಗಿದೆ.
ಇತ್ತೀಚೆಗೆ ಹೊಸಂಗಡಿ ಎ.ಕೆ.ಜಿ. ಮಂದಿರದಲ್ಲಿ ನಡೆದ ಡಿ.ವೈ.ಎಫ್.ಐ. ಬ್ಲಾಕ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎನ್.ಕೆ.ಜಯರಾಮ ಅಧ್ಯಕ್ಷತೆ ವಹಿಸಿದ್ದರು.
ಅರವಿಂದ ಚಿಗುರುಪಾದೆ, ಫಾರುಕ್ ಶಿರಿಯ, ಶಿವಪ್ರಸಾದ್ ಚೆರುಗೋಳಿ, ಪಾರ್ವತಿ ಬೇಕೂರು, ಉಮೇಶ್ ಕನ್ನಟಿಪಾರೆ, ಅಬ್ಬಾಸ್ ಮುನ್ನೂರು, ಸತೀಶ ಎಲಿಯಾಣ, ಚಂದ್ರಹಾಸ ಕಾನ, ಬ್ಲಾಕ್ ಕಾರ್ಯದಶರ್ಿ ಬಿ.ಎ.ಮೊಹಮ್ಮದ್ ಹಾಜರಿದ್ದರು.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಈದ್ಗಾ ಮೈದಾನ ವಿವಾದ ಮತ್ತೆ ಸುಪ್ರೀಂ ಕೋರ್ಟ್‌ಗೆ/Idgah Maidan-Supreme Court

ಬೆಂಗಳೂರು: ಎರಡು ದಶಕಗಳಿಗೂ ಹಳೆಯದಾದ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಬಗೆಹರಿಸಲು ರಾಜ್ಯ ಸರಕಾರ ವಿಫಲವಾದ ಹಿನ್ನಲೆಯಲ್ಲಿ ವಿವಾದ ಮತ್ತೆ ಸುಪ್ರಿಂ ಕೋರ್ಟ್ ಮೆಟ್ಟಲೇರಿದೆ.ಈ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಬಾರಿ ಬಿಜೆಪಿ ಸರ್ಕಾರ ಉಭಯ ಬಣಗಳ ನಡುವೆ ಸಂಧಾನಕ್ಕೆ ಯತ್ನಿಸಿದರೂ, ಅದು ವಿಫಲವಾಗಿದ್ದರಿಂದ ಅಂತಿಮವಾಗಿ ಸುಪ್ರಿಂಕೋರ್ಟ್ ಬಾಗಿಲು ತಟ್ಟಿದ್ದು, ಮುಂದಿನ ತಿಂಗಳ 4ರಂದು ಅಂತಿಮ ವಿಚಾರಣೆ ನಂತರ ಪರಿಹಾರ ಸಿಗಬೇಕಾಗಿದೆ.ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ, ಸಂಧಾನ ಪ್ರಕ್ರಿಯೆಗೆ ಕಾಲಾವಕಾಶ ನೀಡುವಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಯಾರೂ ಮನವಿ ಮಾಡಿಲ್ಲ. ಜತೆಗೆ ಎರಡೂ ಬಣಗಳು ತಮ್ಮ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ಕುರಿತು ಸುಪ್ರಿಂಕೋರ್ಟ್ನಲ್ಲಿ ಮಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.ಘಟನೆ ಹಿನ್ನೆಲೆ: ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಈದ್ಗಾ ಮೈದಾನ ಹಕ್ಕು ಮತ್ತು ಸ್ವತ್ತಿನ ವಿವಾದಕ್ಕೆ ಆರು ಮಂದಿ ಬಲಿಯಾಗಿದ್ದರು. ಈ ಪ್ರಕರಣ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ದಾಟಿ ಸುಪ್ರಿಂ ಕೋರ್ಟಿಗೆ ಹೋಗಿತ್ತು.ಇದು ತುಂಬಾ ಭಾವನಾತ್ಮಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಹೊಂದಿದ್ದು, ಉಭಯ ಧರ್ಮೀಯರನ್ನು ಒಗ್ಗೂಡಿಸಿ ಯಾರಿಗೂ ನೋವು ಆಗದ ರೀತಿಯಲ್ಲಿ ಪರಸ್ಪರ ಮಾತುಕತೆ ಹಾಗೂ ಸೌಹಾರ್ದಯುತವಾಗಿ ಬಗೆಹರಿಸಿ ಎಂದು ಸುಪ್ರಿಂಕೋರ್ಟ್ ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು.ಆದರೆ ಈ ಪ್ರಕರಣವನ್ನು ಇತ್ಯರ್ಥಗೊಳಿಸುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದ್ದರಿಂದ ಪ್ರಕರಣ ಮತ್ತೆ ಸರ್ವೋಚ್ಚ ನ್ಯಾಯಲಯಕ್ಕೆ ತೆರಳಿದೆ.
www.kasaragodvartha.com, Malayalam Online Newspaper from Kasaragod brings latest news from our home land. The first comprehensive local web media of KASARAGOD

ರೈತರ ಆತ್ಮಹತ್ಯೆ: ಕರ್ನಾಟಕವೇ ನಂಬರ್ ವನ್/Farmers Suicide-Karnataka No.1

ನವದೆಹಲಿ: ರೈತರ ಆತ್ಮಹತ್ಯೆ ವಿಚಾರದಲ್ಲಿ ಇತರೆಲ್ಲಾ ರಾಜ್ಯಗಳನ್ನು ಮೀರಿ ನಿಂತಿರುವ ಕರ್ನಾಟಕವು ಕಳೆದೊಂದು ವರ್ಷದಲ್ಲಿ 113 ರೈತರ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಕೃಷಿ ಮತ್ತು ಆಹಾರ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.ರಾಜ್ಯ ಸಭೆಯಲ್ಲಿ ಮಹಾರಾಷ್ಟ್ರದ ಅನಂತ್ ಶರದ್ ಜೋಷಿಯವರು ಸಾಲ ಮನ್ನಾ ಕುರಿತು ಕೇಳಿದ್ದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿರುವ ಪವಾರ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.ರೈತರ ಆತ್ಮಹತ್ಯೆ ಪ್ರಕರಣದಲ್ಲಿ ನಂ.1 ಸ್ಥಾನ ಕರ್ನಾಟಕದ್ದು. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ಪಂಜಾಬ್, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡುಗಳಿವೆ.ಮಹಾರಾಷ್ಟ್ರದಲ್ಲಿ 2009ರ ಜೂನ್ 18ರ ತನಕ 71 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2009ರ ಪ್ರಸಕ್ತ ತಿಂಗಳಿನವರೆಗೆ ಪಂಜಾಬ್‌ನಲ್ಲಿ 11 ಮಂದಿ, ಆಂಧ್ರಪ್ರದೇಶದಲ್ಲಿ ಜೂನ್‌ ತನಕ ನಾಲ್ವರು, ಕೇರಳದಲ್ಲಿ ಮೇ ತನಕ ಮತ್ತು ತಮಿಳುನಾಡಿನಲ್ಲಿ 2008ರ ಡಿಸೆಂಬರ್‌ವರೆಗೆ ತಲಾ ಒಬ್ಬೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಚಿವರು ತನ್ನ ಉತ್ತರದಲ್ಲಿ ತಿಳಿಸಿದ್ದಾರೆ.ಈ ಹಿಂದಿನ 2006ರಿಂದ ಇತ್ತೀಚಿನ ವರ್ಷಗಳವರೆಗೆ ಹೋಲಿಸಿದರೆ 2008-09ರ ಅವಧಿಯಲ್ಲಿ ಮಹಾರಾಷ್ಟ್ರದ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಮಾಣದಲ್ಲಿ ಕುಸಿತ ಕಂಡಿದೆ. ರೈತರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರಕಾರ ತಕ್ಕ ಕ್ರಮಗಳನ್ನು ರೂಪಿಸಿದೆ ಎಂದು ಪವಾರ್ ವಿವರಣೆ ನೀಡಿದರು.ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳ ರಾಜ್ಯಗಳ 31 ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗುರುತಿಸಲಾಗಿದ್ದು, ಅಲ್ಲಿಗೆ ಪುನಶ್ಚೇತನ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
www.kasaragodvartha.com, Malayalam Online Newspaper from Kasaragod brings latest news from our home land. The first comprehensive local web media of KASARAGOD

ನಾಗರಪಂಚಮಿ/Nagarapanchami

ಕಾಸರಗೋಡಿನ ಪುತ್ತಿಗೆ ಸಮೀಪದ ಅಮೆತ್ತೋಡು ಬಂಜನ್ ಕುಲಾಲ ಸಮುದಾಯದ ಆದಿಮೂಲ ದೈವಸ್ಥಾನದಲ್ಲಿ ನಾಗರಪಂಚಮಿಯ ಪ್ರಯುಕ್ತ ಭಾನುವಾರ ನಾಗದೇವರಿಗೆ ಹಾಲಿನ ಅಭಿಷೇಕ ನಡೆಯಿತು.
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Sunday, July 26, 2009

ವ್ಯಾಸ ಸ್ಮರಣೆ/Vyasa Smarane


ಕಾಸರಗೋಡು: ವ್ಯಾಸರ ಕೃತಿಗಳಿಂದ ಕಾಸರಗೋಡು ಕನರ್ಾಟಕಕ್ಕೆ ಮತ್ತಷ್ಟು ಹತ್ತಿರವಾಗಿದೆ ಎಂದು ಪತ್ರಕರ್ತ, ಸಾಹಿತಿ ಜಿ.ಪಿ.ಬಸವರಾಜು ಭಾನುವಾರ ಇಲ್ಲಿ ನುಡಿದರು.
ಚನ್ನಪಟ್ಟಣದ ಪಲ್ಲವ ಪ್ರಕಾಶನ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಹಯೋಗದಲ್ಲಿ ಕಾಸರಗೋಡಿನ ಬೀರಂತಬೈಲು ಲಯನ್ಸ್ ಸೇವಾ ಮಂದಿರದಲ್ಲಿ ಎಂ.ವ್ಯಾಸ ಸ್ಮರಣೆ ಮತ್ತು ವ್ಯಾಸರ ಕೆಂಡ(ಕತೆಗಳು) ಮತ್ತು ಮೌನಗರ್ಭ(ಲೇಖನಗಳು) ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವ್ಯಾಸರು ಓರ್ವ ಬೆಚ್ಚಗಿನ ಸ್ನೇಹಿತ; ಆತ್ಮೀಯ ವ್ಯಕ್ತಿ ಎಂದವರು ಗುಣಗಾನ ಮಾಡಿದರು.
ವ್ಯಾಸರ ಬಗ್ಗೆ ಸಂಸ್ಮರಣಾ ಭಾಷಣ ಮಾಡಿದ ಎಚ್.ರಮೇಶ್ ಕೆದಿಲಾಯ, ವ್ಯಾಸರು ಸಾಹಿತಿಯಾಗಿ ಹುಟ್ಟು-ಸಾವನ್ನು ಅತ್ಯಂತ ತೀವ್ರವಾಗಿ ಅನುಭವಿಸಿದರು. ಬದುಕಿನ ಅರ್ಧ ಸತ್ಯಗಳನ್ನು ಪೂರ್ಣ ಮಾಡಲು ಹೊರಟವರು. ಅವರು ಸಾವಿಗೆ ಎಂದೂ ಹೆದರಿದವರಲ್ಲ. ಆದರೆ ಅವರ ಹೃದಯದಲ್ಲಿ ಹಾಸ್ಯಗಾರನಿದ್ದ ಎಂದು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು.
ಡಾ.ವರದರಾಜ ಚಂದ್ರಗಿರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಸುಕುಮಾರ ಆಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.



ಕಳವು ಪ್ರಕರಣ


ಕೋಟತಟ್ಟು ಕಲ್ಮಾಡಿ ರಸ್ತೆ ನಿವಾಸಿ ರಾಮ ಮರಕಾಲರ ಮಗನಾದ 28 ವರ್ಷ ಪ್ರಾಯದ ರವಿಚಂದ್ರ ಕೆ. ಎಂಬವರು ದಿನಾಂಕ: 25/07/09ರಂದು ರಾತ್ರಿ ಸಮಯ ಸುಮಾರು 8:30 ಕ್ಕೆ ತನ್ನ ಸ್ವಾತಿ ಸ್ಟುಡಿಯೋದ ಸಾಮಾಗ್ರಿಗಳನ್ನು ಒಳಗೆ ಇಟ್ಟು ಬಾಗಿಲು ಹಾಕಿ ಮನೆಗೆ ಹೋಗಿದ್ದು, ದಿನಾಂಕ: 26/07/09 ರಂದು ಬೆಳಿಗ್ಗೆ 7:30 ಗಂಟೆಗೆ ಅವರು ಮನೆಯಲ್ಲಿರುವಾಗ ಸ್ಟುಡಿಯೋದ ಕೆಲಸದವನಾದ ಸಂತೋಷ್ ಎಂಬಾತನು ಪೋನ್ ಮಾಡಿ ಸ್ಟುಡಿಯೋದ ಬಾಗಿಲನ್ನು ಒಡೆದಿರುವುದಾಗಿ ತಿಳಿಸಿದ ಮೇರೆಗೆ ರವಿಚಂದ್ರ ರವರು ಅವರ ಸ್ವಾತಿ ಸ್ಟುಡಿಯೋಗೆ ಬಂದು ನೋಡಿದಾಗ ಸ್ಟುಡಿಯೋದ ಮುಖ್ಯದ್ವಾರದ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು, ಸ್ಟುಡಿಯೋದ ಒಳಗಿದ್ದ ಲೆನೆವೋ ಲ್ಯಾಪ್ಟಾಪ್ ಕಂಪ್ಯೂಟರ್ - 1, ಬೆಲೆ ರೂ. 47,000/- ಮತ್ತು ನೆಕೋನ್ ಡಿ 40 ಡಿಜಿಟಲ್ ಕೆಮರಾ ಜೊತೆಗೆ ಚಾರ್ಜರ್ ಮತ್ತು ಪ್ಲಾಶ್, ಬೆಲೆ ರೂ. 27,000/- ಹಾಗೂ ಡ್ರಾವರ್ನಲ್ಲಿಟ್ಟಿದ್ದ 1,000/ ರೂ ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳುವಾದ ಸೊತ್ತಿನ ಓಟ್ಟು ಮೌಲ್ಯ 75,000/-ರೂ ಆಗಬಹುದು ಎಂದು ರವಿಚಂದ್ರ ಕೆ. ರವರು ನೀಡಿದ ಪಿರ್ಯಾದಿಯಂತೆ ಕೋಟಾ ಠಾಣಾ ಅಪರಾಧ ಕ್ರಮಾಂಕ: 178/09 ಕಲಂ 457, 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣದ ಪ್ರಕರಣ


ದಿನಾಂಕ 25.07.09 ರಂದು ಮಧ್ಯಹ್ನ 12.30 ಗಂಟೆಯ ಮೊದಲು ಶ್ರೀ ಗೋಪಾಲ ನಾಯ್ಕ (42 ವರ್ಷ) ತಂದೆ: ಬಚ್ಚ ನಾಯ್ಕ, ವಾಸ: ನಿಲ್ಸ್ಕಿಲ್ ಪೋಸ್ಟ್, ಕರಿಮನೆ ಗ್ರಾಮ, ಹೊಸನಗರ, ಶಿವಮೊಗ್ಗ ಜಿಲ್ಲೆ ಯವರ ತಂಗಿಯಾದ ರತ್ನ ನಾಯ್ಕ ಎಂಬವರು ಕೆಳಾರ್ಕಳಬೆಟ್ಟು ಗ್ರಾಮದ ತನ್ನ ವಾಸದ ಮನೆಯಲ್ಲಿ ಮನೆ ಬಾಗಿಲಿಗೆ ಚಿಲಕ ಹಾಕಿ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರನ್ನು ಸುಮಾರು 16 ವರ್ಷದ ಹಿಂದೆ ಕೆಲಾರ್ಕಳಬೆಟ್ಟು ಗ್ರಾಮದ ಪ್ರಭಾಕರ ನಾಯ್ಕ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು ಮೃತರ ಗಂಡ ಸಂಪಾದನೆ ಮಾಡಿದ್ದನ್ನು ಕುಡಿದು ಖಚರ್ು ಮಾಡುತ್ತಿದ್ದು ಮನೆ ಕಡೆ ನೋಡದೇ ಇದ್ದು ಅಲ್ಲದೇ ಮೃತರಿಗೆ ಒಂದು ವರ್ಷದ ಹಿಂದೆ ಗರ್ಭ ಕೋಶದ ಶಸé್ರ ಚಿಕಿತ್ಸೆ ಮಾಡಿಸಿದ್ದು ಈ ಎಲ್ಲಾ ಕಾರಣಗಳಿಂದ ಬೇಸರಗೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿರುತ್ತದೆ ಎಂಬುದಾಗಿ ಗೋಪಾಲ ನಾಯ್ಕರವರು ನೀಡಿದ ಪಿರ್ಯಾದಿಯಂತೆ ಮಲ್ಪೆ ಠಾಣಾ ಯು.ಡಿ.ಆರ್ ನಂಬ್ರ 21/09 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣಗಳು


ದಿನಾಂಕ: 25/07/09 ರಂದು 16:30 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಜಂಕ್ಷನ್ ಬಳಿ ಸಂತೋಷ ಶೆಟ್ಟಿ ತಂದೆ: ಕೃಷ್ಣಯ್ಯ ಶೆಟ್ಟಿ ಪಾಲಡ್ಕ ಗ್ರಾಮ ಮೂಡಬಿದ್ರೆ ಈತನು ಬದಲಿ ನಿವರ್ಾಹಕನಾಗಿ ಕೆಲಸ ಮಾಡುತ್ತಿದ್ದ ವಿಶಾಲ್ ಬಸ್ ನಂ: ಕೆ.ಎ. 20 ಬಿ. 1788 ನೇ ಬಸ್ನಲ್ಲಿ ಬರುತ್ತಿರುವಾಗ ಆಪಾದಿತರಾದ ಕುಷಾ ರೈ , ರಂಜಿತ್, ಉಮೇಶ್, ಇವರುಗಳು ಕೆ.ಎ. 20 ಎ. 4747 ನೇ ದುಗರ್ಾಪರಮೇಶ್ವರಿ ಬಸ್ಸನ್ನು ಅಡ್ಡ ಇಟ್ಟಾಗ ಬಸ್ನ್ನು ತೆಗೆಯುವಂತೆ ತಿಳಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಕಡಿದು, ನಂತರ ಆಪಾದಿರೆಲ್ಲರೂ ರಾಡ್ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಸಂತೋಷ ಶೆಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 98/09 ಕಲಂ. 341, 323, 324, 326, 504, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ 23/07/09 ರಂದು ಮಧ್ಯಾಹ್ನ 01:45 ಗಂಟೆಗೆ ಹೆಬ್ರಿ ಠಾಣಾ ಸರಹದ್ದಿನ ಹೆಬ್ರಿ ಗ್ರಾಮದ ಕೆಳಪೇಟೆ ಜಂಕ್ಷನ್ ಬಳಿ ಆರೋಪಿ ಸುರೇಶ ಹಾಗೂ ಇತರೆ 7-8 ಜನರು ಆಕ್ರಮ ಕೂಟ ಸೇರಿಕೊಂಡು, ಅನಿಲ್ ವಾಸ್ ಶರಾವತಿ ನಗರ, ಶಿವಮೊಗ್ಗ ಎಂಬವರು ಚಲಾಯಿಸುತ್ತಿದ್ದ ಕೆ.ಎ14-ಎ-4392ನೇ ಬಸ್ನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಡ್ರೈವರ್ ಸೀಟಿನಿಂದ ಕೆಳಗೆ ಹಾಕಿ, ಆರೋಪಿ ಸುರೇಶನು ಬಸ್ ಕಂಡಕ್ಟರ್ ಹನುಮಂತಪ್ಪ @ ಭೀಮಪ್ಪ ಎಂಬವರಿಗೆ ಕಬ್ಬಿಣದ ರಾಡಿನಿಂದ ಹೊಡೆದು ಹಾಗೂ ಇತರೆ 7-8 ಜನ ಆರೋಪಿಗಳು ಕೈಯಿಂದ ಹೊಡೆದು ಗಾಯಗೊಳಿಸಿದಲ್ಲದೇ ನಿಮ್ಮನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾಗಿದೆ ಈ ಬಗ್ಗೆ ಅನಿಲ್ ವಾಸ್ ರವರು ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 71/09, ಕಲಂ 143,147, 148,323, 324,504, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ: 25/07/09 ರಂದು 16:30 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಜಂಕ್ಷನ್ ಬಳಿ ಕéುಶ ರೈ ತಂದೆ: ಕಿಟ್ಟಣ್ಣ ರೈ ವಾಸ: ಬೋಲಂಬಳ ಮನೆ ಕೊಣಾಜೆ ಅಂಚೆ ಪುತ್ತೂರು ತಾಲೂಕು ಇವರು ಚಾಲಕನಾಗಿ ಕೆಲಸ ಮಾಡುತ್ತಿದ್ದ ದುಗರ್ಾಪರಮೇಶ್ವರಿ ಬಸ್ ಕೆ.ಎ. 20 ಎ. 4747 ನೇದನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಆಪಾದಿತ ರಾದಯಶೋಧರ , ಪ್ರಕಾಶ,ಸಂತೋಷ, ಸುಧಾಕರ ಪ್ರಸಾದ ಪದ್ಮ ಕುಮಾರ್ ಎಂಬವರುಗಳು ಕೆ.ಎ. 20 ಬಿ. 1788 ನೇ ವಿಶಾಲ್ ಬಸ್ಸನ್ನು ಬಸ್ನ ಮುಂದೆ ನಿಲ್ಲಿಸಿ ಆಪಾದಿತರಾದ ಸಂತೋಷ ಕುಮಾರ್ ಶೆಟ್ಟಿ ಮತ್ತು ಪ್ರಸಾದ ವೀಲ್ ಬಾಕ್ಸ್ ಮತ್ತು ಲಿವರ್ನಿಂದ ಹೊಡೆದು ಉಳಿದ ಆರೋಪಿಗಳು ಕೈಗಳಿಂದ ಹೊಡೆದು ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ ಈ ಬಗ್ಗೆ ಸಂತೋಷ ಶೆಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/09 ಕಲಂ. 143,147, 148, 323, 324, 504, 506 ಜೊತೆಗೆ 149 ಐ.ಪಿ.ಸಿ ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಬಾವಿಗೆ ಹಾರಿ ಆತ್ಮಹತ್ಯೆ ಪ್ರಕರಣ

ಕಾಡ್ಯ (40) ತಂದೆ: ದಿ. ಮೆಣ್ಕ ವಾಸ: ಪೊಸರುಗುಡ್ಡೆ ಮಿಯಾರು ಗ್ರಾಮ ಕಾರ್ಕಳ. ಎಂಬವರ ಅಣ್ಣನಾದ ಪೊರಂಕ್ಲ (65ವರ್ಷ) ಎಂಬವರು ದಿನಾಂಕ: 25/7/09 ರಂದು ಬೆ. 08:30 ಗಂಟೆಯ ವೇಳೆಗೆ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಪೊಸರುಗುಡ್ಡೆ ಎಂಬಲ್ಲಿ ಮನೆಯ ಪಕ್ಕದ ಬಾವಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೃತ ಪೊರಂಕ್ಲ ಎಂಬವರು ಈಗ್ಗೆ ಕೆಲವು ದಿನಗಳಿಂದ ಟಿ.ಬಿ ಖಾಯಿಲೆಯಿಂದ ಬಲಳುತ್ತಿದ್ದು ಔಷಧಿ ಮಾಡಿದರೂ ಗುಣಮುಖವಾಗದೇ ಇದ್ದು, ಇದೇ ಕಾರಣದಿಂದ ಮಾನಸಿಕವಾಗಿ ನೊಂದು ಬಾವಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾಡ್ಯ (40) ರವರು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 21/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಮೋಸ ಪ್ರಕರಣ


ಉಡುಪಿ ತಾಲೂಕು ಮಲ್ಲಾರು ಗ್ರಾಮದ ಪಕೀರ್ಣಕಟ್ಟೆ ವಾಸಿ ಇಸ್ಮಾಯಿಲ್ ತಂದೆ: ಮೂಸಬ್ಬ ಎಂಬವರು ದಿನಾಂಕ: 11/10/02ರಂದು ಅನ್ಸಿರಾ ಬಾನುನ್ನು ಮದುವೆಯಾಗಿ 2 ಮಕ್ಕಳಾಗಿರುತ್ತವೆ. ಇಸ್ಮಾಯಿಲ್ ಕಳೆದ ಮೂರು ವರ್ಷಗಳಿಂದ ವಿದೇಶದಲ್ಲಿ ನೌಕರಿ ಮಾಡಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಊರಿಗೆ ಬಂದಾಗ ಮಲ್ಲಾರು ಗ್ರಾಮದ ಪಕೀರ್ಣಕಟ್ಟೆ ಎಂಬಲ್ಲಿ 0.5 ಸೆಂಟ್ಸ್ ಜಾಗದ ಮನೆಯನ್ನು ಜ್ಯೋತಿ ಎಂಬವರಿಂದ ಖರೀದಿಸಿ ಮುಂಗಡ ಹಣ ನೀಡಿ ಅನ್ಸಿರಾ ಬಾನುವಿನ ಹೆಸರಿನಲ್ಲಿ ಕರಾರು ಮತ್ತು ಅಧಿಕಾರ ಪತ್ರ ಮಾಡಿಸಿ ವಿದೇಶದಿಂದ ಬಂದ ನಂತರ ತನ್ನ ಹೆಸರಿಗೆ ಮಾಡಿಸುವುದಾಗಿ ಒಪ್ಪಂದ ಮಾಡಿ ವಿದೇಶಕ್ಕೆ ಹೋಗಿದ್ದು, ಈ ವರ್ಷ ಊರಿಗೆ ಬಂದಾಗ ದಿನಾಂಕ: 14.06.09 ರಂದು ಸಂಜೆ 6:00 ಗಂಟೆಗೆ ಆರೋಪಿಗಳಾದ ಅನ್ಸಿರಾ ಬಾನು 2.ಮೊಹಮ್ಮದ್ ಶೇಕಬ್ಬ 3. ಅಮೀನಾ 4. ಅಬ್ದುಲ್ ಎಮ್.ಕೆ. 5. ಅಶ್ರಫ್ 6. ಸಾದಿಕ್ 7. ಜಮಾಲ್ ಎಂಬವರುಗಳು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಮನೆಗೂ ನಿನಗೂ ಸಂಬಂಧವಿಲ್ಲವೆಂದು ಮನೆಗೆ ಪ್ರವೇಶ ಮಾಡಿದರೆ ಸೊಂಟ ಮುರಿದು ಹಾಕುತ್ತೇನೆಂದು ಬೆದರಿಸಿ, ಹೊರ ದೇಶದಲ್ಲಿ ಸಂಪಾದಿಸಿದ ಹಣದಲ್ಲಿ ಖರೀದಿಸಿದ ಜಾಗ ಮತ್ತು ಮನೆಯನ್ನು ಮೋಸ ಮಾಡುವ ಉದ್ದೇಶದಿಂದ ಇತರ ಆರೋಪಿಗಳ ಬೆಂಬಲದಿಂದ ಮನೆಯನ್ನು ಕಾನೂನು ಬಾಹಿರವಾಗಿ ಸ್ವಾಧೀನಕ್ಕೆ ದಾಖಲೆಗಳನ್ನು ಸೃಷ್ಟಿಸಲು ತಯಾರು ಮಾಡುತ್ತಿದ್ದಾರೆ ಎಂಬುದಾಗಿ ಮಾನ್ಯ ನ್ಯಾಯಾಲಯ ಪಿರ್ಯಾದು ನಂ.380/09ರಲ್ಲಿ ದೂರು ನೀಡಿದ್ದು ಈ ಬಗ್ಗೆ ಇಸ್ಮಾಯಿಲ್ರವರು ಕಾಪು ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 147/09 ಕಲಂ 341,407,420,504,506, ಜೊತೆಗೆ 143 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಇತರೆ ಪ್ರಕರಣಗಳು


ಕಾರ್ಕಳನಗರ ಠಾಣೆಯ ಪೊಲೀಸ್ ಉಪನೀರೀಕ್ಷಕರು ಶ್ರೀ ರಾಮಚಂದ್ರನಾಯಕ್ ರವರು ದಿನಾಂಕ: 25/07/09 ರಂದು 15:00 ಗಂಟೆಗೆ ಪ್ರೋಬೆಷನರಿ ಪಿ.ಎಸ್.ಐ ಕಾಂತರಾಜ್ ಮತ್ತು ಸಿಬ್ಬಂದಿಯವರು ಗಸ್ತಿನಲ್ಲಿರುವಾಗ ದೊರೆತ ಖಚಿತ ವರ್ತಮಾನದಂತೆ ಕಾರ್ಕಳ ಕಸಬಾ ಗ್ರಾಮದ ಕಾಳಿಕಾಂಬಾ ದೇವಸ್ಥಾನದ ಬಳಿ ಯಾರೋ ಒಬ್ಬ ಯುವಕ ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಾರೆ ಅವರ ಬಗ್ಗೆ ಸಂಶಯವಿರುತ್ತದೆ. ಎಂಬುವುದಾಗಿ ತಿಳಿಸಿದಂತೆ ಸ್ಥಳಕ್ಕೆ ಹೋಗಿ, ಅಸಾಮಿಯವರನ್ನು ವಿಚಾರಿಸಿದಾಗ ಅವರ ಇರುವಿಕೆಯ ಬಗ್ಗೆ ಸಮರ್ಪಕ ಉತ್ತರ ನೀಡದೇ ಇದ್ದ ಕಾರಣ ಇವರು ಯಾವುದೋ ಬೇವಾರಂಟು ತಕ್ಸೀರು ಮಾಡಲು ಹೊಂಚು ಹಾಕುತ್ತಿದ್ದವರನ್ನು ದಸ್ತಗಿರಿ ಮಾಡಿ ವಿಚಾರಿಸಿದಾಗ ಅಬ್ದುಲ್ ಮಲಿಕ್ (28) ತಂದೆ: ಎಸ್ ಮೊಹಮ್ಮದ್ ಸಾಲ್ಮರ ಮನೆ ಚಿಕ್ಮದ್ಮೂರು ಪುತ್ತೂರು ದ.ಕ ಜಿಲ್ಲೆ ಎಂಬುದಾಗಿ ಈತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಈ ಬಗ್ಗೆ ಪೊಲೀಸ್ ಉಪನೀರೀಕ್ಷಕರು ಶ್ರೀ ರಾಮಚಂದ್ರನಾಯಕ್ ರವರು ಕಾರ್ಕಳನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 241/09 ಕಲಂ 41(1) 109 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
--

http://www.kasaragodvartha.com/

the first local online news paper in Malayalam.

brings latest news in Malayalam & English links our home land to the world.

:::: the signature of Kasaragod ::::