ಕಾಸರಗೋಡು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಕಾಲಿಗೆ ಸಿಕ್ಕಿ ಕೃಷಿಕನೋರ್ವ ಸಾವನ್ನಪ್ಪಿದ ಘಟನೆ ಚೆಮ್ನಾಡು ಸಮೀಪ ಗುರುವಾರ ನಡೆದಿದೆ.
ಸ್ಥಳೀಯ ಎ.ಕೃಷ್ಣನ್ ನಾಯರ್(68) ಎಂದು ಗುರುತಿಸಲಾಗಿದೆ. ಇವರು ಮನೆ ಬಳಿಯ ಹಿತ್ತಿಲಿಗೆ ಹುಲ್ಲು ತರಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಬೆಳಗ್ಗೆ ಹೋದವರು ಮನೆಗೆ ಬಾರದಿದ್ದಾಗ ಪತ್ನಿ ಕಾತ್ಯರ್ಾಯಿನಿ ಹುಡುಕುತ್ತಾ ಹೊರಟಾಗ ಸತ್ತು ಮಲಗಿದ್ದರು. ನಾಲ್ವರು ಮಕ್ಕಳಿದ್ದಾರೆ.
ರಿಯಾನ : ಲೈಂಗಿಕ ಜಾಲದ ಕಪಿಮುಷ್ಠಿಯಲ್ಲಿ?
ಕಾಸರಗೋಡು: ಚೆಂಗಳ ತೈವಳಪ್ಪು ಎಂಬಲ್ಲಿಂದ ನಿಗೂಢ ರೀತಿಯಲ್ಲಿ ನಾಪತ್ತೆಯಾದ ರಿಯಾನ ಎಂಬ 16ರ ಹರೆಯದ ಬಾಲಕಿಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಲವಾರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬಾಲಕಿಯನ್ನು ಕೆಲಸಕ್ಕಾಗಿ ವಿದೇಶಕ್ಕೆ ಸಾಗಿಸಲಾಗಿದೆ ಎಂಬ ಸುಳಿವನ್ನು ಕೇಂದ್ರೀಕರಿಸಿ ನಿರುದ್ಯೋಗಿ ಯುವತಿಯರನ್ನು ಕಳುಹಿಸುವ ಕಲ್ಲಿಕೋಟೆ ನಿವಾಸಿ ಲಾಟರಿ ಷಾಜಿ ಎಂಬ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವೇಶ್ಯಾವಾಟಿಕೆ ಪ್ರಕರಣದಲ್ಲಿ ಈಗಾಗಲೇ ಸೆರೆ ಸಿಕ್ಕಿರುವ ಮುಹಮ್ಮದ್ ಹಾಗೂ ಆತನ ಪತ್ನಿಯನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಮಲಪ್ಪುರ, ಕಲ್ಲಿಕೋಟೆ, ಪೆರುಂದಲ್ಮಣ್ಣ, ಅರಿಕ್ಕೋಡ್ ಎಂಬಲ್ಲಿಗೆ ತನಿಖೆೆಯನ್ನು ಪೊಲೀಸರು ವಿಸ್ತರಿಸಿದ್ದಾರೆ. ಲೈಂಗಿಕ ಜಾಲದ ಕಪಿಮುಷ್ಠಿಯಲ್ಲಿ ರಿಯಾನ ಸಿಲುಕಿದ್ದಾಳೆ ಎಂಬುದು ಪೊಲೀಸರ ಇತ್ತೀಚಿನ ಊಹೆ.
ಎರಡು ದಿನಗಳಿಂದ ಕಾರು ಇಲ್ಲಿಯೇ ಇತ್ತು ಎಂದು ಸ್ಥಳೀಯ ವ್ಯಾಪಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ. ನಗರ ಪೊಲೀಸರು ಕಾರನ್ನು ವಶಪಡಿಸಿ ತನಿಖೆ ನಡೆಸುತ್ತಿದ್ದಾರೆ.
ಕೇಳುಗುಡ್ಡೆಯ ಅಯ್ಯಪ್ಪ ನಗರದ ನಿವಾಸಿ ಗಿರೀಶ್ ಯಾನೆ ವಳಂಗರ ಗಿರೀಶ್ ಬಂಧನಕ್ಕೊಳಗಾದವನು. ಈತ 2006 ಜ.22ರಿಂದ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಣ್ಣೂರಿನ ಆಲಿ ಷಾಜಿ(60) ಸಾವನ್ನಪ್ಪಿದ ವ್ಯಕ್ತಿ. ಇವರ ಪುತ್ರ ಮುನೀರ್, ಸಂಬಂಧಿಕ ಅಬ್ದುಲ್ ಖಾದರ್, ಕಾರು ಚಾಲಕ ಮೊಯ್ದೀನ್ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಣ್ಣೂರಿನಿಂದ ಮಂಗಳೂರಿನ ಆಸ್ಪತ್ರೆಗೆ ಕಾರಿನಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ನಿಧನ
ಡಾ.ರಾಮವರ್ಮರಾಜ
ಕಾಸರಗೋಡು: ಇಲ್ಲಿನ ಮಾಯಿಪ್ಪಾಡಿ ಅರಸು ಮನೆತನದ 12ನೇ ರಾಜ ಡಾ.ರಾಮವರ್ಮರಾಜ ಯಾನೆ ರಾಮಾಂತರಸುಗಳು(81) ಗುರುವಾರ ಬೆಳಗ್ಗೆ ಮಾಯಿಪ್ಪಾಡಿ ಅರಮನೆಯಲ್ಲಿ ನಿಧನರಾದರು.
ಕಳೆದ 10 ವರ್ಷಗಳ ಹಿಂದೆ ಮಾಯಿಪ್ಪಾಡಿ ಅರಸರಾಗಿ ಪಟ್ಟವೇರಿದ್ದರು. ಕುಂಬಳೆ ಸೀಮೆಯ ಅಡೂರು-ಮಧೂರು-ಕಾವು(ಮುಜುಂಗಾವು)-ಕಣಿಪುರ(ಕುಂಬಳೆ) ಎಂಬ 4 ಪ್ರಧಾನ ಕ್ಷೇತ್ರಗಳ ಆಡಳಿತ ಮೊಕ್ತೇಸರರಾಗಿದ್ದರು. ಮೂವರು ಮಕ್ಕಳಿದ್ದಾರೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment