ದಿನಾಂಕ 26/07/09 ರಂದು 17:00 ಗಂಟೆಗೆ ಹಾವಂಜೆ ಗ್ರಾಮದ ದಖರ್ಾಸು ಮನೆ ಎಂಬಲ್ಲಿ ಆರೋಪಿತರಾದ 1) ಶ್ಯಾಮರಾಜ್ ಬಿತರ್ಿ, ಬ್ರಹ್ಮಾವರ, 2) ಮಂಜುನಾಥ ಗಿಳಿಯಾರು, 3) ಗುಜ್ಜರಬೆಟ್ಟಿನ ಸುಂದರ ಮತ್ತು ಇತರರು ಸಮಾನ ಉದ್ದೇಶದಿಂದ ದಾಸುರವರ ಮಗನಾದ ಶೇಖರ (18 ವರ್ಷ) ಹಾಗೂ ಅವರ ತಮ್ಮನ ಮೇಲಿನ ದ್ವೇಷದಿಂದ ಶೇಖರರವರ ತಮ್ಮನಿಗೆ ಕೈಯಿಂದ ಹೊಡೆದು ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಶೇಖರರವರ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 131/09 ಕಲಂ 323, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 26/07/09 ರಂದು 23:15 ಗಂಟೆಗೆ ಹಾವಂಜೆ ಗ್ರಾಮದ ದಖರ್ಾಸು ಮನೆ ಎಂಬಲ್ಲಿ ಸ್ಥಳೀಯ ಆರೋಪಿತರಾದ 1) ಸತೀಶ್, 2) ಶೇಖರ, 3) ಲಿಂಗಪ್ಪ, 4) ರಮೇಶ್, 5) ಮೋಹನ, 6) ಶ್ಯಾಮ, 7) ಶ್ರೀನಿವಾಸ 8) ಸಂಜೀವ ಮತ್ತು 9) ವಿಠಲ ಎಂಬವರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಸಂಘದ ಮೀಟಿಂಗ್ ಮಾಡುವ ಚಪ್ಪರವನ್ನು ಕಿತ್ತು ಹಾಕಲಿಕ್ಕೆ ಬಂದಿದ್ದು ಈ ಬಗ್ಗೆ ಹಾವಂಜೆಯ ದಿನೇಶ್ರವರ ಪತ್ನಿ ಶ್ರೀಮತಿ ಮೈನಾ (25 ವರ್ಷ)ರವರು ಹಾಗೂ ಇತರರು ಪ್ರಶ್ನಿಸಿದಾಗ ಆರೋಪಿ ಶೇಖರರವರು ಮೈನಾರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ ಲಿಂಗಪ್ಪರವರು ಶ್ರೀಮರಿ ಮೈನಾರವರಿಗೆ ಕೈಯಿಂದ ಹೊಡೆದು ಆರೋಪಿತರುಗಳು ಅವರ ಬಟ್ಟೆಯನ್ನು ಎಳೆದು ಹಾಕಲು ಯತ್ನಿಸಿದಲ್ಲದೇ ಆರೋಪಿ ಸತೀಶ ಮತ್ತು ಇತರರು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರಾಗಿ ಶ್ರೀಮತಿ ಮೈನಾರವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 132/09 ಕಲಂ 143, 147, 504, 323, 354, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಮೋಟಾರು ಸೈಕಲ್ ಕಳವು ಪ್ರಕರಣ
ದಿನಾಂಕ 24/07/2009 ರಂದು 9.30 ಗಂಟೆಗೆ ಗಿರೀಶ್ ಹೆಬ್ಬಾರ್ ತಂದೆ:ದಿ:ವೆಂಕಟೇಶ್ ಹೆಬ್ಬಾರ್. ವಾಸ :ಮನೆ ನಂ 52/02 ಕೋಣಿ ಗ್ರಾಮ ,ಕುಂದಾಪುರ ತಾಲೂಕು ಎಂಬವರು ಮೋಟಾರು ಸೈಕಲ್ ನಂಬ್ರ ಕೆ.ಎ.20.ಎಲ್. 7231 ನೇದನ್ನು ಎಚ್.ಎಮ್.ಟಿ ರಸ್ತೆ ಕೋಣಿಯಲ್ಲಿರುವ ಅವರ ಮನೆ ನಂಬ್ರ 52/02 ರ ಹೆಬ್ಬಾಗಿಲಿನ ಒಳಗಿನ ಅವರಣದಲ್ಲಿ ನಿಲ್ಲಿಸಿ ಹಾಂಡಲ್ ಲಾಕ್ ಮಾಡಿ ಮಲಗಿದ್ದು ರಾತ್ರಿ 02.00 ಗಂಟೆಗೆ ಎದ್ದು ನೋಡಿದಾಗ ಮೋಟಾರು ಸೈಕಲ್ ಇಲ್ಲದೇ ಇದ್ದುದನ್ನು ಕಂಡು ಮನೆಯ ಹತ್ತಿರದ ಅಸುಪಾಸಿನ ರಸ್ತೆಯಲ್ಲಿ ಹುಡುಕಾಡಿದಾಗ ಸಿಗದೇ ಇದ್ದು ಯಾರೋ ಮೋಟಾರು ಸೈಕಲನ್ನು ಕಳವು ಮಾಡಿ ಕೊಂಡು ಹೋಗಿರುತ್ತಾರೆ ಈ ಬಗ್ಗೆ ಗಿರೀಶ್ ಹೆಬ್ಬಾರ್ ರವರು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 221/09 ಕಲಂ. 379, ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
ದಿನಾಂಕ 25.07.09 ರಂದು 11:00 ಗಂಟೆಗೆ ಲಲಿತ ಶೆಡ್ತಿ (64ವರ್ಷ), ಗಂಡ: ವಿಠಲ ಶೆಟ್ಟಿ, ವಾಸ: ನಂಚಾರು ಬೈದರಮಕ್ಕಿ, ನಂಚಾರು ಗ್ರಾಮ.ಉಡುಪಿ ತಾಲೂಕು ಇವರು ತನ್ನ ಮನೆಯ ಎದುರಿನ ತೋಟದಲ್ಲಿರುವಾಗ ಹುಬ್ಬಳ್ಳಿ ಬೆಟ್ಟು ಎಂಬಲ್ಲಿಯ ಕರಿಯಣ್ಣ ಶೆಟ್ಟಿ ಎಂಬುವರ ಹೆಣ್ಣುಮಕ್ಕಳಾದ ಕುಸುಮ, ವಸಂತಿ ಹಾಗೂ ಶಂಕರ ಶೆಟ್ಟಿ ರವರ ಮಗಳಾದ ಶೈಲ ಎಂಬುವರು ಬಂದು ಅವಾಚ್ಯ ಶಬ್ದಗಳಿಂದ ಬೈದು ಜೋರಾಗಿ ಕೂಗಿ ಅವರುಗಳ ಪೈಕಿ ಶೈಲ ಮತ್ತು ಕುಸುಮ ಎಂಬುವರು ಲಲಿತ ಶೆಡ್ತಿಯವರನ್ನು ಹಿಡಿದುಕೊಂಡು ವಸಂತಿ ಎಂಬುವರು ತನ್ನ ಕೈಯಲ್ಲಿದ್ದ ಕಾಟು ಮರದ ದೊಣ್ಣೆಯಿಂದ ಕಾಲಿಗೆ ಜೋರಾಗಿ ಬೀಸಿದ್ದು ಪರಿಣಾಮ ಬಲಕಾಲಿನ ಉಗುರಿನ ಜಾಗಕ್ಕೆ ಬಲವಾಗಿ ತಾಗಿದ್ದು, ಬಲಗಾಲ ಹೆಬ್ಬರಳಿಗೆ ರಕ್ತಗಾಯವಾಗಿರುತ್ತದೆ. ಆಗ ಕೂಗಿಕೊಂಡಾಗ ವಿಠಲ ಶೆಟ್ಟಿ ಅಲ್ಲಿಗೆ ಬರುವುದನ್ನು ನೋಡಿ 3 ಜನರು "ಮುಂದಕ್ಕೆ ನಿಮ್ಮನ್ನು ನೋಡಿಕೊಳ್ಳುತ್ತೇವೆ" ಎಂದು ಹೇಳಿ ಓಡಿಹೋಗಿರುತ್ತಾರೆ. ನಂತರ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯಾದಿಕಾರಿಯವರು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಕೃತ್ಯಕ್ಕೆ ಜಾಗದ ತಕರಾರೇ ಕಾರಣವಾಗಿರುತ್ತದೆ. ಈ ಬಗ್ಗೆ ಲಲಿತ ಶೆಡ್ತಿ (64ವರ್ಷ),ರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 179/09, ಕಲಂ 504, 341, 324 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಆತ್ಮಹತ್ಯೆ ಪ್ರಕರಣ
ದಿನಾಂಕ 26/07/09 ರಂದು 12.00 ರಿಂದ 13.30 ಗಂಟೆಯ ನಡುವಿನ ಅವಧಿಯಲ್ಲಿ ಉಷಾ(30) ಗಂಡ:ರಮೇಶ ವಾಸ:ಶ್ರೀ ಮೂಕಾಂಬಿಕ ಚಚರ್್ ರಸ್ತೆ ಹತ್ತಿರ, 76 ಬಡಗಬೆಟ್ಟು, ಇಂದಿರಾ ನಗರ, ಕುಕ್ಕಿಕಟ್ಟೆ, ಉಡುಪಿ ಇವರ ತಂದೆ ಮಹಾಬಲ ಮರಕಾಲ(72ವರ್ಷ) ಎಂಬವರು ತಮಗಿರುವ ಕ್ಯಾನ್ಸರ್ ಕಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಉಡುಪಿ ಕುಕ್ಕಿಕಟ್ಟೆ 76 ಬಡಗಬೆಟ್ಟು ಚಚರ್್ ರಸ್ತೆ ಹತ್ತಿರ ಇರುವ ಮನೆಯ ಮಾಡಿನ ಪಕ್ಕಾಸಿಗೆ ಲುಂಗಿ ಕಟ್ಟೆ ಕುತ್ತಿಗೆಗೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಷಾ(30) ರವರು ನೀಡಿದ ದೂರಿನ ಮೇರೆಗೆ ಉಡುಪಿನಗರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 24/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪರಿಚಿತ ಗಂಡಸಿನ ಮೃತದೇಹ ಪತ್ತೆ ಪ್ರಕರಣ
ದಿನಾಂಕ: 26/07/09 ರಂದು ಸಂಜೆ 19:30 ಗಂಟೆಗೆ ಕುಂದಾಪುರ ತಾಲೂಕು, ತ್ರಾಸಿ ಗ್ರಾಮದ ಅರಬ್ಬಿ ಸಮುದ್ರದ ಕಿನಾರೆಯಲ್ಲಿ ಸುಮಾರು 50 ರಿಂದ 55 ವರ್ಷದ ಅಪರಿಚಿತ ಗಂಡಸಿನ ಮೃತ ಶರೀರವು ಪತ್ತೆಯಾಗಿದ್ದು ಈ ಬಗ್ಗೆ ಸಮುದ್ರ ಕಿನಾರೆಯಲ್ಲಿ ಬಲೆ ಕೆಲಸ ಮಾಡಿಕೊಂಡಿದ್ದ ಗೋಪಾಲ ಖಾವರ್ಿ (40) ತಂದೆ ದಿ: ನರಸಿಂಹ ಖಾವರ್ಿ ವಾಸ ಹೊಸಪೇಟೆ ತ್ರಾಸಿ ಗ್ರಾಮದವರು ಒಂದು ಲಿಖಿತ ಪಿರ್ಯಾದಿಯನ್ನು ನೀಡಿದ್ದು ಮೃತ ವ್ಯಕ್ತಿಯು ಯಾವುದೋ ತನ್ನ ವೈಯಕ್ತಿಕ ಕಾರಣದಿಂದ ಎಲ್ಲಿಯೋ ಸಮುದ್ರದಲ್ಲಿ ಅಥವಾ ಹೊಳೆಯಲ್ಲಿ ಹಾರಿ ಅತ್ಮಹತ್ಯ ಮಾಡಿಕೊಂಡಿರಬಹುದು ಅಥವಾ ಆಕಸ್ಮಿಕವಾಗಿ ಸಮುದ್ರ ಅಥವಾ ಹೊಳೆಗೆ ಬಿದ್ದು ನೀರಿನಲ್ಲಿ ಉಸಿರು ಕಟ್ಟಿ ಮೃತಪಟ್ಟಿರಬಹುದು. ಅಪರಿಚಿತ ಮೃತದ ಚಹರೆ ಗುರುತು : ಪ್ರಾಯ ಸುಮಾರು 50- 55ವರ್ಷಕಪ್ಪು ಮೈ ಬಣ್ಣ, ಗುಂಗುರು ಕಪ್ಪು ಮಿಶ್ರಿತ ಬಿಳಿ ಬಣ್ಣ ದ ತಲೆಕೂದಲು. ಎತ್ತರ: 5' 6" ಕ್ರೀಮ್ ಕಲರ್ನ ತುಂಬು ತೋಳಿನ ಶಟರ್್ ಹಾಗೂ ಬಿಳಿ ತುಂಬು ತೋಳಿನ ಬಿನಿಯಾನ್ ಧರಿಸಿರುತ್ತಾರೆ. ಈ ಬಗ್ಗೆ ಗೋಪಾಲ ಖಾವರ್ಿ (40) ರವರು ನೀಡಿದ ದೂರಿನಂತೆ ನಗರ ಗಂಗೊಳ್ಳಿ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 24/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ
ದಿನಾಂಕ 01/09/08 ರಿಂದ ಶ್ರೀಮತಿ ಎಸ್ ಸುನಂದ, ಪ್ರ.ದಜರ್ೆ.ಸಹಾಯಕಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಡುಪಿ ಉಡುಪಿ ಜಿಲ್ಲೆ ಇವರು ಪ್ರ.ದಜರ್ೆ ಸಹಾಯಕಿಯಾಗಿ ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು ಆಪಾದಿತರು ಸತ್ಯನಾರಾಯಣ ಶೆಟ್ಟಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಉಡುಪಿ ಎಂಬವರು ತನ್ನ ಕಛೇರಿಯಲ್ಲಿ ಅಧೀಕ್ಷಕರ ಕೆಲಸವನ್ನು ಮಾಡಬೇಕೆಂದು ಒತ್ತಾಯಿಸುತ್ತಾ ಪದೇಪದೇ ಕಛೇರಿಯಲ್ಲಿ ಹಿಂಸೆ ಕಿರುಕುಳ ನೀಡುತ್ತಿದ್ದು ನಂತರ ದಿ.18/07/09ರ ವರೆಗೆ ಬೈದು ಜಾತಿನಿಂದನೆ ಜಾತಿ ನಿಂದನೆ ಮಾಡುತ್ತಿದ್ದುದ್ದಾಗಿದೆ.ಎಂಬುದಾಗಿ ಶ್ರೀಮತಿ ಎಸ್ ಸುನಂದ ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 242/09 ಕಲಂ. 3() (ಥ) ಎಸ್.ಸಿ ಮತ್ತು ಎಸ್.ಟಿ. ಕಾಯ್ದೆ 1989 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ
ದಿನಾಂಕ 26-07-09 ರಂದುಕೊಲ್ಲೂರು ಠಾಣಾ ಸರಹದ್ದಿನ ಕೊಲ್ಲೂರು ದೇವಸ್ಥಾನದ ಸೌರ್ಪಣಿಕ ಸ್ನಾನ ಗಟ್ಟದಲ್ಲಿ ಶರವಣ್ಣನ್ (30) ತಂದೆ: ಶಿವಲಿಂಗಂ, ಈಚಂಬಾಡಿ, ಆರೂರು, ಧರ್ಮಪುರಿ, ತಮಿಳುನಾಡು ಎಂಬವರು ತನ್ನ ಗೆಳೆಯರೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ದರ್ಶನಕ್ಕೆ ಆಗಮಿಸಿದ್ದು, ಬೆಳಿಗ್ಗೆ 10.30 ಗಂಟೆಗೆ ತನ್ನ ಸ್ನೇಹಿತರೊಂದಿಗೆ ಕೊಲ್ಲೂರಿನ ಸೌಪಣರ್ಿಕ ಸ್ನಾನ ಘಟ್ಟದಲ್ಲಿ ಸ್ನಾನ ಮಾಡುತ್ತಿರುವಾಗ ಅವರ ಪೈಕಿ 32 ವರ್ಷ ಪ್ರಾಯದ ರಾಜಶೇಖರ ಎಂಬವರು ಅಕಸ್ಮಾತ್ತಾಗಿ ನದಿಯ ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗಿದ್ದು, ಹುಡುಕಾಡಿದಲ್ಲಿ ಪತ್ತೆಯಾಗದೇ ಕಾಣಿಯಾಗಿರುವುದಾಗಿದೆ. ಈ ಬಗ್ಗೆ ಶರವಣ್ಣನ್ (30ವರ್ಷ) ರವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 45/09 ಕಲಂ. ಗಂಡಸುಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
-- www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment