ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಜಂಟಿ ಆಶ್ರಯದಲ್ಲಿ ಆ.1 ಮತ್ತು 2ರಂದು ಲಲಿತಕಲಾ ಸದನದಲ್ಲಿ ನಡೆಯುವ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿದರ್ೇಶಕ ಮನು ಬಳಿಗಾರ್ ಉದ್ಘಾಟಿಸುವರು.
ಹಿರಿಯ ಕವಿ ಕಯ್ಯಾರ ಕಿಞ್ಞಣ್ಣ ರೈ ಅಧ್ಯಕ್ಷತೆ ವಹಿಸುವರು. ಕೆ.ಶಿವರಾಮ ಶೆಟ್ಟಿ ಅವರು ಬರೆದ `ಕಾಸರಗೋಡಿನ ಸ್ವಾತಂತ್ರ್ಯ ಹೋರಾಟಗಾರರು' ಕೃತಿಯನ್ನು ಹಂಪಿ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿದರ್ೇಶಕ ಡಾ.ಮೋಹನ ಆಳ್ವ ಬಿಡುಗಡೆಗೊಳಿಸುವರು. ಸಂಸದ ಪಿ.ಕರುಣಾಕರನ್, ಶಾಸಕ ಸಿ.ಟಿ.ಅಹಮ್ಮದಾಲಿ, ದುಬೈ ಕನ್ನಡ ಸಂಘದ ಅಧ್ಯಕ್ಷ ಸಿ.ಆರ್.ಶೆಟ್ಟಿ, ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪತ್ರಕರ್ತ ಎಸ್ಕೆ ಹಳೆಯಂಗಡಿ, ಲಲಿತಕಲಾ ಸದನದ ಅಧ್ಯಕ್ಷ ವೈಎಸ್ವಿ ಭಟ್, ಸಾಹಿತಿ ಮೋಹನ ನಾಗಮ್ಮನವರ ಭಾಗವಹಿಸುವರು.
ಹೃದಯವಾಹಿನಿ ದಶಮಾನೋತ್ಸವ ಪ್ರಶಸ್ತಿಯನ್ನು ರಾಧಾಕೃಷ್ಣ ಉಳಿಯತ್ತಡ್ಕ(ಸಾಹಿತ್ಯ), ಕೆ.ವಿ.ರಮೇಶ್(ಬೊಂಬೆಯಾಟ), ಪ್ರದೀಪ್ ಕಾಸರಗೋಡು(ರಂಗಭೂಮಿ), ಪಿ.ಎಸ್.ಕಾರಂತ್(ಕನ್ನಡ ಸೇವೆ), ಡಾ.ಎಚ್.ಎಸ್.ಶಿವಶಂಕರ್(ಸಮಾಜ ಸೇವೆ), ಪದ್ಮನಾಭ ಬಿ.ಆರ್.(ಸಾಹಿತ್ಯ), ಕಾಗೋಡು ಅಣ್ಣಪ್ಪ(ರಂಗಕಲೆ), ಬಾಲಸುಬ್ರಹ್ಮಣ್ಯ(ಇಂಜಿನಿಯರಿಂಗ್), ಇಂದುದಾಸ್ ಶೆಟ್ಟಿ(ಸಮಾಜಸೇವೆ), ದೀಪಾ ರಾವ್(ಭರತನಾಟ್ಯ) ಅವರಿಗೆ ವಿತರಿಸಲಾಗುವುದು.
ಜಿಲ್ಲಾಧಿಕಾರಿ ಆನಂದ್ ಸಿಂಗ್ ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎ.ಎ.ವಿಜಯನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್, ವಿ.ಗೋಪಿನಾಥನ್, ಕೆ.ಎಂ.ಭಟ್, ಸಿ.ಕೆ.ಶ್ರೀಧರನ್ ಭಾಗವಹಿಸುವರು.
ಈ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲಿ ಜಯರಾಮ ಎನ್.ಕೆ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜತೆ ಕಾರ್ಯದಶರ್ಿ ಸಿಜಿ ಮಾಥ್ಯೂ, ಬ್ಲಾಕ್ ಕಾರ್ಯದಶರ್ಿ ಬಿ.ಎ.ಮೊಹಮ್ಮದ್, ರವೀಂದ್ರ, ಕೃಷ್ಣ ಕೆ, ಸತೀಶ ಎ, ಶಿವಪ್ರಸಾದ್, ಅರವಿಂದ ಸಿ, ಫಾರೂಕ್ ಶಿರಿಯ, ಪುರುಷೋತ್ತಮ ಬಳ್ಳೂರು, ಸದಾನಂದ ಕೋರಿಕ್ಕಾರ್, ಪಾರ್ವತಿ, ರಾಜೀವಿ ಕಳಿಯೂರು, ಶಕೀಲಾ ಕೂಳೂರು, ಮೃತ್ಯುಂಜಯ ಹಾಜರಿದ್ದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment