Saturday, July 4, 2009
ಬೆಳ್ತಂಗಡಿ ಗೋಲಿಬಾರ್
ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಗೋಲಿಬಾರ್ ತನಿಖೆ ಮುಂದುವರಿದಿದ್ದು ಕೆಲವು ಮಂದಿ ಸಾಕ್ಷಿ ನುಡಿದಿದ್ದಾರೆ.ಧರ್ಮಸ್ಥಳದ ಮೇ 1 ರಂದು ನಡೆದ ಗೋಲಿಬಾರ್ ಪ್ರಕರಣದ ನ್ಯಾಯಾಂಗ ತನಿಖೆ ಮುಂದುವರಿದಿದ್ದು ಘಟನೆಯ ಸಂದರ್ಭದಲ್ಲಿ ಪೊಲೀಸರು ಪ್ರಯಾಣಿಸುತ್ತಿದ್ದ ಎರಡು ಬಸ್ಸಿನ ಚಾಲಕರು ಹಾಗೂ ಧರ್ಮಸ್ಥಳದ ಹೊರ ಠಾಣೆಯ ಪೊಲೀಸರು ತನಿಖಾಧಿಕಾರಿ ಡಾ.ಹರೀಶ್ ಕುಮಾರ್ ಅವರ ಮುಂದೆ ಸಾಕ್ಷಿ ನುಡಿದರು.ಕುಂದಾಪುರ ಡಿಪೋಗೆ ಸೇರಿದ ಸರಕಾರಿ ಬಸ್ಸಿನ ಚಾಲಕರಾದ ಕೆ.ಬೋಜ, ವಿಜಯ ಕುಮಾರ್, ಧರ್ಮಸ್ಥಳದ ಹೊರಠಾಣೆಯ ಹೆಡ್ ಕಾನ್ಸ್ಟೇಬಲ್ ಶೀನಪ್ಪ ಗೌಡ, ಪೇದೆಗಳಾದ ರಾಜೇಶ್ ಹಾಗೂ ಚಂದ್ರಶೇಖರ ಹೇಳಿಕೆ ನೀಡಿದರು.
ಟ್ಯಾಕ್ಸಿ ಮುಷ್ಕರ
ಜೀಪು ಮತ್ತು ಬೈಕ್ ಡಿಕ್ಕಿ
ಕಾಸರಗೋಡು: ಕುಂಬಳೆ ಸಮೀಪದ ಆರಿಕ್ಕಾಡಿಯಲ್ಲಿ ಜೀಪು ಮತ್ತು ಬೈಕ್ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ 11 ಗಂಟೆಗೆ ನಡೆದಿದೆ.ಉಪ್ಪಳ ಕೈಕಂಬ ನಿವಾಸಿ ರಿಸ್ವಾನ್(35) ಸಾವನ್ನಪ್ಪಿದ ವ್ಯಕ್ತಿ. ಈತನ ತಂದೆ ಹುಸೈನ್ ಅವರೂ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರ ಜತೆ ಪುತ್ರ ಬೈಕಿನಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಬಸ್ಸು ತೋಡಿಗೆ ಬಿದ್ದು ಮೂರು ಮಂದಿ ಸಾವು
ಕಾಸರಗೋಡು: ಕೊಲ್ಲಂ ಜಿಲ್ಲೆಯ ಪುನಲೂರು ಸಮೀಪದ ಮಣಿಯಾರಿನಲ್ಲಿ ಖಾಸಗಿ ಬಸ್ಸು ತೋಡಿಗೆ ಬಿದ್ದು ಮೂರು ಮಂದಿ ಸಾವನ್ನಪ್ಪಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.ಮಣಿಯಾರ್ ನಿವಾಸಿಗಳಾದ ಭವಾನಿ, ಚೆಲ್ಲಮ್ಮ, ಜೋಯಿ ಸಾವನ್ನಪ್ಪಿದವರು.
ನಿಧನ
ಮುಹಮ್ಮದ್ ಕುಞ್ಞಿ
ಕಾಸರಗೋಡು: ಇಲ್ಲಿನ ಐ.ಎನ್.ಎಲ್. ನೆಲ್ಲಿಕುಂಜೆ ಶಾಖೆಯ ಉಪಾಧ್ಯಕ್ಷ ನೆಲ್ಲಿಕುಂಜೆ ನಿವಾಸಿ ಮುಹಮ್ಮದ್ ಕುಞ್ಞಿ(66) ಶುಕ್ರವಾರ ನಿಧನರಾದರು.ಪತ್ನಿ ಜಮೀಲಾ ಮತ್ತು 9 ಮಕ್ಕಳು ಇದ್ದಾರೆ.
ಕಾಞಂಗಾಡಿನಲ್ಲಿ ಕಾರು-ಬಸ್ಸು ಡಿಕ್ಕಿ

Friday, July 3, 2009
'ಹಸಿರು' 'ಮಮತಾ'
ಝೀರೋ ವೇಸ್ಟ್/Zero Waste
ಕಿಸಾನ್ ಅಭಿಮಾನ್ ಪಿಂಚಣಿ ಯೋಜನೆ
ಕಾಸರಗೋಡು: ಕೇರಳ ರಾಜ್ಯದ ಕೃಷಿಕರಿಗೆ ಇಳಿವಯಸ್ಸಿನಲ್ಲಿ ಆಧಾರವಾಗಲು 'ಕಿಸಾನ್ ಅಭಿಮಾನ್' ಎಂಬ ವಿನೂತನ ಪಿಂಚಣಿ ಯೋಜನೆಯನ್ನು ಜುಲೈ 10ರಿಂದ ಜಾರಿಗೊಳಿಸಲು ಸಕರ್ಾರ ನಿರ್ಧರಿಸಿದೆ.1 ಹೆಕ್ಟೇರ್ಗಿಂತ ಕಡಿಮೆ ಕೃಷಿ ಭೂಮಿ, ಕೃಷಿಯೇ ಪ್ರಧಾನ ಆದಾಯ ಮೂಲವಾಗಿದ್ದು, 2009 ಏಪ್ರಿಲ್ 1ರಂದು 60 ವರ್ಷ ಪೂರ್ಣಗೊಂಡವರು ಅಜರ್ಿ ಸಲ್ಲಿಸಬಹುದು. ಕನಿಷ್ಠ 10 ಸೆಂಟ್ಸ್ ಸ್ಥಳದಲ್ಲಿ ಭತ್ತ ಕೃಷಿ ಮಾಡುವವರೂ ಅಜರ್ಿ ಸಲ್ಲಿಸಬಹುದು. 10 ವರ್ಷಗಳಿಂದ ಕೃಷಿ ರಂಗದಲ್ಲಿ ತೊಡಗಿರಬೇಕು. ಕುಟುಂಬದ ಓರ್ವ ಸದಸ್ಯನಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಆಯ್ಕೆಯಾದ ಕೃಷಿಕರು 100 ರೂ. ನೋಂದಣಿ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ-ವರ್ಗದವರಿಗೆ ಇದು ಬಾಧಕವಲ್ಲ. ಹೆಚ್ಚಿನ ಮಾಹಿತಿಗೆ ಕೃಷಿ ಭವನವನ್ನು ಸಂಪಕರ್ಿಸಬಹುದು. ಜುಲೈ 25 ಅಜರ್ಿ ಸಲ್ಲಿಸಲು ಅಂತಿಮ ದಿನ.
ಜ್ವರ: ಕೌಂಟರ್ ಆರಂಭ
ಕಾಸರಗೋಡು: ಜಿಲ್ಲೆಯಲ್ಲಿ ಸಾಂಕ್ರಾಮಿಕ ಜ್ವರ ವ್ಯಾಪಕಗೊಳ್ಳುವ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಸಾಂಕ್ರಾಮಿಕ ಜ್ವರ ನಿಯಂತ್ರಣಕ್ಕೆ ವಿಶೇಷ ಕೌಂಟರ್ ತೆರೆಯಲಾಗಿದೆ.ಬೆಳಗ್ಗೆ 8ರಿಂದ ಮಧ್ಯಾಹ್ನ 1ರ ವರೆಗೆ ಈ ಸೇವೆ ಲಭ್ಯವಿದೆ.
ಇಂದು ಆಟೋ-ಟಾಕ್ಸಿ ಮುಷ್ಕರ
ಕಾಸರಗೋಡು: ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ಜುಲೈ 4ರಂದು ಕೇರಳ ರಾಜ್ಯದೆಲ್ಲೆಡೆ ಆಟೋ-ಟಾಕ್ಸಿ ಮುಷ್ಕರ ನಡೆಸಲು ಕಾಮರ್ಿಕ ಸಂಘಟನೆಗಳು ತೀಮರ್ಾನಿಸಿದೆ.
ವಿಷ ಸೇವಿಸಿ ಯುವತಿ ಸಾವು
ಕಾಸರಗೋಡು: ಇಲ್ಲಿನ ಧರ್ಮತ್ತಡ್ಕ ಸಮೀಪದ ಬಾಯಾರು ಎಂಬಲ್ಲಿ ಯುವತಿಯೊಬ್ಬಳು ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ನಡೆದಿದೆ.ಬಾಯಾರಿನ ಕನಿಯಾಲ ನಿವಾಸಿ ಮೊಯ್ದೀನ್ ಎಂಬವರ ಪುತ್ರಿ ಸಬೀನಾ(22) ಸಾವನ್ನಪ್ಪಿದ ಯುವತಿ.
ಗಾಳಿ-ಮಳೆ: ಮನೆಗೆ ಹಾನಿ
ಕಾಸರಗೋಡು: ಇಲ್ಲಿಗೆ ಸಮೀಪದ ತಳಂಗೆರೆ ಬಾಂಗೋಡು ಮೊಯ್ದೀನ್ ಕುಞ್ಞಿ ಎಂಬವರ ಮನೆ ಕುಸಿದಿದೆ. ಮನೆಯ ಮಾಡು ಸಂಪೂರ್ಣ ಕುಸಿದಿದೆ. 1 ಲಕ್ಷ ನಷ್ಟ ಅಂದಾಜಿಸಲಾಗಿದೆ.
Press Day In Puthur
ಪತ್ರಿಕಾ ದಿನಾಚರಣೆ
ಪತ್ರಕರ್ತರು ಪ್ರತಿದಿನವೂ ಒತ್ತಡದಲ್ಲಿರುವುದು ಸಹಜ. ಬಹುತೇಕ ಸಂದರ್ಭದಲ್ಲಿ ಅದೆಲ್ಲವೂ ನಗರದ ಒಳಗಡೆಗೇ ಸೀಮಿತವಾಗಿರುತ್ತದೆ. ಹೀಗಾಗಿ ಅನೇಕ ಗ್ರಾಮೀಣ ಪ್ರದೇಶದ ನೈಜ ಸಮಸ್ಯೆಗಳು ಹಾಗೂ ಅದರ ಒಳಗಿನ ತಲ್ಲಣಗಳು ಹೊರ ಜಗತ್ತಿಗೆ ಅರ್ಥವಾಗಿರುವುದಿಲ್ಲ. ಇಂತಹ ಸಮಸ್ಯೆಗಳನ್ನು ಹೊತ್ತ ಗ್ರಾಮ-ಹಳ್ಳಿಗಳು ರಾಜ್ಯದಲ್ಲಿವೆ. ಆದರೆ ಅವುಗಳಿಗೆ ಕಾಯಕಲ್ಪ ನೀಡುವ ಕೆಲಸ ಇದುವರೆಗೆ ಆಗಿಲ್ಲ. ಹೀಗಾಗಿ ಪತ್ರಿಕಾ ದಿನಾಚರಣೆಯ ಅಂಗವಾಗಿ ಪುತ್ತೂರು ಪತ್ರಕರ್ತರ ಸಂಘದ ವತಿಯಿಂದ ತಾಲೂಕಿನ ಅತ್ಯಂತ ಹಿಂದುಳಿದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿತುಕೊಂಡು ಮಾಧ್ಯಮದ ಮೂಲಕ ಹೊರಜಗತ್ತಿಗೆ ತಂದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು.
ತಾಲೂಕು ಪತ್ರಕರ್ತರ ಈ ಕಾರ್ಯಕ್ರಮವು ಗ್ರಾಮದ ಜನತೆಗೆ ಸಂತಸ ಮೂಡಿಸಿದೆ. ಇದರಿಂದಾಗಿ ಊರಿನ ಸಮಸ್ಯೆಗಳು ಹೊರಜಗತ್ತಿಗೆ ತಿಳಿದು ಊರಿನ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಹೇಳುತ್ತಾರೆ. ಈ ನಡುವೆ ಬಹುತೇಕ ಪತ್ರಕರ್ತರು ಕೂಡಾ ಈ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಂಡು ಗ್ರಾಮದ ಮೂಲಭೂತ ಸೌಲಭ್ಯಗಳ ಕೊರತೆಯ ಕುರಿತು ಊರವರೊಂದಿಗೆ ಮಾತನಾಡಿದರು. ಈ ವರದಿಗಳು ಪತ್ರಿಕೆಗಳಲ್ಲಿ ಬಂದ ಬಳಿಕ ಆಗಾಗ ಈ ಸಮಸ್ಯೆಗಳ ನಿವಾರಣೆಯ ಬಗ್ಗೆ ಕಾಳಜಿ ವಹಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಈ ಕಾರ್ಯಕ್ರಮವು ಎಲ್ಲರ ಗಮನ ಸೆಳೆದಿದೆ. ಮಾತ್ರವಲ್ಲ ಪತ್ರಿಕೋದ್ಯಮದ ಮೂಲಕ ಇಡೀ ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲದ್ದರೂ ಹಳ್ಳಿಯೊಂದಕ್ಕೆ ಮೂಲಭೂತ ಸೌಲಭ್ಯವನ್ನು ಒದಗಿಸುವ ಕಾರ್ಯವನ್ನಾದರೂ ಮಾಡಬಹುದು ಎಂಬ ಯೋಚನೆ ಅವರಲ್ಲಿದೆ.
Thursday, July 2, 2009
Varsha Vallari
ಕಾಸರಗೋಡು: ನಗರದ ರಂಗಚಿನ್ನಾರಿಯ ಆಶ್ರಯದಲ್ಲಿ ಜರುಗಿದ ವರ್ಷ ವಲ್ಲರಿ ಎಂಬ ಸಿತಾರ್ ವಾದನ ಸಂಗೀತ ಪ್ರಿಯರಿಗೆ ರಸದೌತಣ ಉಣಬಡಿಸಿತು.
ಕಾಸರಗೋಡು ನಗರಸಭಾ ಸಮ್ಮೇಳನಾ ಸಭಾಂಗಣದಲ್ಲಿ ಏರ್ಪಡಿಸಿದ ಈ ಕಾರ್ಯಕ್ರಮವನ್ನು ವಿದ್ವಾನ್ ಬಾಬು ರೈ ಉದ್ಘಾಟಿಸಿದರು.
ಖ್ಯಾತ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಮತ್ತವರ ಶಿಷ್ಯ ಅಂಕುಶ್ ಎನ್.ನಾಯಕ್ ಅವರ ಕೈಚಳಕದಿಂದ ಮೂಡಿ ಬಂದ ಸಿತಾರ್ನ ಸ್ವರ ಮಾಧುರ್ಯ ಸಂಗೀತ ರಸಿಕರನ್ನು ಮುದಗೊಳಿಸಿತು.
ರಂಗಚಿನ್ನಾರಿಯ ನಿದರ್ೇಶಕ ಕಾಸರಗೋಡು ಚಿನ್ನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.
Kannur BA Rank
ಬಿ.ಎ.ಪದವಿ ಪರೀಕ್ಷೆ ಫಲಿತಾಂಶ
ಕಾಸರಗೋಡು: ಕಣ್ಣೂರು ವಿಶ್ವವಿದ್ಯಾನಿಲಯದ ಅಂತಿಮ ಬಿ.ಎ.ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲಾಗಿದ್ದು, ಕಾಸರಗೋಡಿಗೆ 11 ರ್ಯಾಂಕುಗಳು ಲಭಿಸಿದೆ. ಶೇ.66ರಷ್ಟು ಫಲಿತಾಂಶ ಬಂದಿದೆ.ಕನ್ನಡ, ಅರಬಿ ಮತ್ತು ಟ್ರಾವೆಲ್ ಆ್ಯಂಡ್ ಟೂರಿಸಂ ವಿಷಯಗಳಲ್ಲಿ ಮೂರೂ ರ್ಯಾಂಕ್ಗಳೂ ಕಾಸರಗೋಡಿಗೆ ಲಭಿಸಿದೆ.ಬಿ.ಎ.ಕನ್ನಡದಲ್ಲಿ ಕಾಸರಗೋಡು ಸಕರ್ಾರಿ ಕಾಲೇಜಿನ ಎಂ.ತಾಹಿರಾ, ಬಿ.ಗಾಯತ್ರಿ ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಕರ್ಾರಿ ಕಾಲೇಜಿನ ಎನ್.ಸ್ಮಿತಾ ಎಂಬವರಿಗೆ ಕ್ರಮವಾಗಿ 1, 2, 3ನೇ ರ್ಯಾಂಕ್ಗಳು ಲಭಿಸಿದೆ. ಬಿ.ಎ. ಅರಬಿಯಲ್ಲಿ ಕಾಸರಗೋಡು ಸಕರ್ಾರಿ ಕಾಲೇಜಿನ ಕೆ.ಶಹರ್ಬಾನ್, ಎ.ಅಷರ್ಾದ್, ಕೆ.ಸಿನಾಸ್ಗೆ ಕ್ರಮವಾಗಿ 1,2, 3ನೇ ರ್ಯಾಂಕ್ಗಳು ಸಿಕ್ಕಿದೆ. ಇತಿಹಾಸದಲ್ಲಿ ಕಾಸರಗೋಡು ಸಕರ್ಾರಿ ಕಾಲೇಜಿನ ಸಿ.ಮೋಹಿನಿ ಮತ್ತು ಎಸ್.ರೇಷ್ಮಾಳಿಗೆ ಕ್ರಮವಾಗಿ 2 ಮತ್ತು 3ನೇ ರ್ಯಾಂಕ್ ಲಭಿಸಿದೆ. ಟ್ರಾವೆಲ್ ಆ್ಯಂಡ್ ಟೂರಿಸಂನಲ್ಲಿ ಚಟ್ಟಂಚಾಲ್ ಎಂ.ಐ.ಸಿ.ಕಾಲೇಜಿನ ಎ.ಎಚ್.ಸೈನಬಾ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಕರ್ಾರಿ ಕಾಲೇಜಿನ ವಿಪಿನಾ ಪಾಲಾಯಿ ಮತ್ತು ಇದೇ ಕಾಲೇಜಿನ ಅಬ್ದುಲ್ ಖಾದರ್ ಕ್ರಮವಾಗಿ 1, 2, 3ನೇ ರ್ಯಾಂಕ್ ಗಳಿಸಿದ್ದಾರೆ.
ಪತ್ರಿಕೆಗಳು ಸಮುದ್ರ...
ಕಾಸರಗೋಡು: ಪತ್ರಿಕೆಗಳು ಮಾಹಿತಿ ಮತ್ತು ವಿಷಯಗಳ ಸಮುದ್ರವಾಗಿದೆ ಎಂದು ನಿವೃತ್ತ ಅಧ್ಯಾಪಕ, ಸಾಹಿತಿ ಎ.ನರಸಿಂಹ ಭಟ್ ಬುಧವಾರ ನಗರದಲ್ಲಿ ಹೇಳಿದರು.
ಇಲ್ಲಿಗೆ ಸಮೀಪದ ನುಳ್ಳಿಪ್ಪಾಡಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಕನ್ನಡ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸರಕಾರಿ ಕಾಲೇಜಿನ ಉಪನ್ಯಾಸಕ ಎ.ಶ್ರೀನಾಥ್, ಕೃಷ್ಣ ಪೈ ಬದಿಯಡ್ಕ, ಬಾಲಕೃಷ್ಣ ಅಗ್ಗಿತ್ತಾಯ, ಬೊಂಬೆಯಾಟ ಕಲಾವಿದ ಕೆ.ವಿ.ರಮೇಶ್ ಹಾಜರಿದ್ದರು.
ಜಗದೀಶ್ ಕೂಡ್ಲು ಸ್ವಾಗತಿಸಿ, ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.
Kannada Pathrika dina
ಈ ಪತ್ರಿಕೆಯ ಜನ್ಮದಿನ
ಸುರೇಶ್ ಕೆ. ಎಡನಾಡು.
Nerkazcha_Rain
the first specialized local news portal in malayalam; it is KASARAGOD's OWN PORTAL
brings Latest MALAYALAM and English news from your homeland. The portal also covers ethnicity, views, art, culture, education, career, sports, business, entertainment etc. along with state news, national and world news. Actually it is linking our homeland to Malayalees in Kerala, Karnataka, Maharashtra, Tamilnadu, Delhi, Andrapradesh, Gujarat and the world specially Gulf countries simultaneously