ಕೃಷಿಕರಿಗೆ ಕಿಸಾನ್ ಅಭಿಮಾನ್ ಪಿಂಚಣಿ ಯೋಜನೆ
ಕಾಸರಗೋಡು: ಕೇರಳ ರಾಜ್ಯದ ಕೃಷಿಕರಿಗೆ ಇಳಿವಯಸ್ಸಿನಲ್ಲಿ ಆಧಾರವಾಗಲು 'ಕಿಸಾನ್ ಅಭಿಮಾನ್' ಎಂಬ ವಿನೂತನ ಪಿಂಚಣಿ ಯೋಜನೆಯನ್ನು ಜುಲೈ 10ರಿಂದ ಜಾರಿಗೊಳಿಸಲು ಸಕರ್ಾರ ನಿರ್ಧರಿಸಿದೆ.1 ಹೆಕ್ಟೇರ್ಗಿಂತ ಕಡಿಮೆ ಕೃಷಿ ಭೂಮಿ, ಕೃಷಿಯೇ ಪ್ರಧಾನ ಆದಾಯ ಮೂಲವಾಗಿದ್ದು, 2009 ಏಪ್ರಿಲ್ 1ರಂದು 60 ವರ್ಷ ಪೂರ್ಣಗೊಂಡವರು ಅಜರ್ಿ ಸಲ್ಲಿಸಬಹುದು. ಕನಿಷ್ಠ 10 ಸೆಂಟ್ಸ್ ಸ್ಥಳದಲ್ಲಿ ಭತ್ತ ಕೃಷಿ ಮಾಡುವವರೂ ಅಜರ್ಿ ಸಲ್ಲಿಸಬಹುದು. 10 ವರ್ಷಗಳಿಂದ ಕೃಷಿ ರಂಗದಲ್ಲಿ ತೊಡಗಿರಬೇಕು. ಕುಟುಂಬದ ಓರ್ವ ಸದಸ್ಯನಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಆಯ್ಕೆಯಾದ ಕೃಷಿಕರು 100 ರೂ. ನೋಂದಣಿ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ-ವರ್ಗದವರಿಗೆ ಇದು ಬಾಧಕವಲ್ಲ. ಹೆಚ್ಚಿನ ಮಾಹಿತಿಗೆ ಕೃಷಿ ಭವನವನ್ನು ಸಂಪಕರ್ಿಸಬಹುದು. ಜುಲೈ 25 ಅಜರ್ಿ ಸಲ್ಲಿಸಲು ಅಂತಿಮ ದಿನ.
ಜ್ವರ: ಕೌಂಟರ್ ಆರಂಭ
ಕಾಸರಗೋಡು: ಜಿಲ್ಲೆಯಲ್ಲಿ ಸಾಂಕ್ರಾಮಿಕ ಜ್ವರ ವ್ಯಾಪಕಗೊಳ್ಳುವ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಸಾಂಕ್ರಾಮಿಕ ಜ್ವರ ನಿಯಂತ್ರಣಕ್ಕೆ ವಿಶೇಷ ಕೌಂಟರ್ ತೆರೆಯಲಾಗಿದೆ.ಬೆಳಗ್ಗೆ 8ರಿಂದ ಮಧ್ಯಾಹ್ನ 1ರ ವರೆಗೆ ಈ ಸೇವೆ ಲಭ್ಯವಿದೆ.
ಇಂದು ಆಟೋ-ಟಾಕ್ಸಿ ಮುಷ್ಕರ
ಕಾಸರಗೋಡು: ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ಜುಲೈ 4ರಂದು ಕೇರಳ ರಾಜ್ಯದೆಲ್ಲೆಡೆ ಆಟೋ-ಟಾಕ್ಸಿ ಮುಷ್ಕರ ನಡೆಸಲು ಕಾಮರ್ಿಕ ಸಂಘಟನೆಗಳು ತೀಮರ್ಾನಿಸಿದೆ.
ವಿಷ ಸೇವಿಸಿ ಯುವತಿ ಸಾವು
ಕಾಸರಗೋಡು: ಇಲ್ಲಿನ ಧರ್ಮತ್ತಡ್ಕ ಸಮೀಪದ ಬಾಯಾರು ಎಂಬಲ್ಲಿ ಯುವತಿಯೊಬ್ಬಳು ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ನಡೆದಿದೆ.ಬಾಯಾರಿನ ಕನಿಯಾಲ ನಿವಾಸಿ ಮೊಯ್ದೀನ್ ಎಂಬವರ ಪುತ್ರಿ ಸಬೀನಾ(22) ಸಾವನ್ನಪ್ಪಿದ ಯುವತಿ.
ಗಾಳಿ-ಮಳೆ: ಮನೆಗೆ ಹಾನಿ
ಕಾಸರಗೋಡು: ಇಲ್ಲಿಗೆ ಸಮೀಪದ ತಳಂಗೆರೆ ಬಾಂಗೋಡು ಮೊಯ್ದೀನ್ ಕುಞ್ಞಿ ಎಂಬವರ ಮನೆ ಕುಸಿದಿದೆ. ಮನೆಯ ಮಾಡು ಸಂಪೂರ್ಣ ಕುಸಿದಿದೆ. 1 ಲಕ್ಷ ನಷ್ಟ ಅಂದಾಜಿಸಲಾಗಿದೆ.
Friday, July 3, 2009
Subscribe to:
Post Comments (Atom)
No comments:
Post a Comment