Saturday, July 4, 2009

ಬೆಳ್ತಂಗಡಿ ಗೋಲಿಬಾರ್

ಬೆಳ್ತಂಗಡಿಯಲ್ಲಿ ಗೋಲಿಬಾರ್ : ಸಾಕ್ಷಿ

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಗೋಲಿಬಾರ್ ತನಿಖೆ ಮುಂದುವರಿದಿದ್ದು ಕೆಲವು ಮಂದಿ ಸಾಕ್ಷಿ ನುಡಿದಿದ್ದಾರೆ.ಧರ್ಮಸ್ಥಳದ ಮೇ 1 ರಂದು ನಡೆದ ಗೋಲಿಬಾರ್ ಪ್ರಕರಣದ ನ್ಯಾಯಾಂಗ ತನಿಖೆ ಮುಂದುವರಿದಿದ್ದು ಘಟನೆಯ ಸಂದರ್ಭದಲ್ಲಿ ಪೊಲೀಸರು ಪ್ರಯಾಣಿಸುತ್ತಿದ್ದ ಎರಡು ಬಸ್ಸಿನ ಚಾಲಕರು ಹಾಗೂ ಧರ್ಮಸ್ಥಳದ ಹೊರ ಠಾಣೆಯ ಪೊಲೀಸರು ತನಿಖಾಧಿಕಾರಿ ಡಾ.ಹರೀಶ್ ಕುಮಾರ್ ಅವರ ಮುಂದೆ ಸಾಕ್ಷಿ ನುಡಿದರು.ಕುಂದಾಪುರ ಡಿಪೋಗೆ ಸೇರಿದ ಸರಕಾರಿ ಬಸ್ಸಿನ ಚಾಲಕರಾದ ಕೆ.ಬೋಜ, ವಿಜಯ ಕುಮಾರ್, ಧರ್ಮಸ್ಥಳದ ಹೊರಠಾಣೆಯ ಹೆಡ್ ಕಾನ್ಸ್ಟೇಬಲ್ ಶೀನಪ್ಪ ಗೌಡ, ಪೇದೆಗಳಾದ ರಾಜೇಶ್ ಹಾಗೂ ಚಂದ್ರಶೇಖರ ಹೇಳಿಕೆ ನೀಡಿದರು.

No comments:

Post a Comment