ಭಾರತದ ಅಣೆಕಟ್ಟು ಯೋಜನೆ: ಬಾಂಗ್ಲಾದಲ್ಲಿ ಕೋಲಾಹಲ
ಢಾಕಾ: ನೆರೆಯ ಎರಡು ರಾಷ್ಟ್ರಗಳು ಹಂಚಿಕೊಳ್ಳುವ ಬಾರಕ್ ನದಿಯಲ್ಲಿ ಅಣೆಕಟ್ಟನ್ನು ನಿರ್ಮಿಸಲು ಯೋಜಿಸಿರುವ ಭಾರತದ ಜತೆ ತುರ್ತು ದ್ವಿಪಕ್ಷೀಯ ಮಾತುಕತೆ ನಡೆಸುವಂತೆ ಸಂಪುಟದ ಸಚಿವರು ಮತ್ತು ಆಡಳಿತರೂಢ ಅವಾಮಿ ಲೀಗ್ ಸದಸ್ಯರು ಬಾಂಗ್ಲಾದೇಶ ಸರ್ಕಾರಕ್ಕೆ ಒತ್ತಡ ಹೇರಿದ್ದಾರೆ. ಯೋಜನೆ ಸ್ಥಳಕ್ಕೆ ಸಂಸದೀಯರ ನಿಯೋಗ ಕಳಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದಂತೆ ಒತ್ತಡಗಳು ಹೆಚ್ಚುತ್ತಿವೆ. ತಿಪಾಯ್ಮುಖ್ನಲ್ಲಿ ಉದ್ದೇಶಿತ ಅಣೆಕಟ್ಟು ನಿರ್ಮಾಣದಿಂದ ಕೆಳಮಟ್ಟದಲ್ಲಿರುವ ಬಾಂಗ್ಲಾದೇಶದಲ್ಲಿ ನೈಸರ್ಗಿಕ ಪ್ರವಾಹ ಉಂಟಾಗಬಹುದೆಂದು ಅವಾಮಿ ಲೀಗ್ ಸದಸ್ಯರು ಮತ್ತು ಸಂಪುಟ ಸದಸ್ಯರು ಶಂಕಿಸಿದ್ದಾರೆ.ಪ್ರತಿಭಟನೆ ನಡೆಸುತ್ತಿರುವ ಪರಿಸರವಾದಿಗಳು, ಎನ್ಜಿಒ ಮತ್ತಿತರರ ಜತೆ ಪ್ರತಿಪಕ್ಷಗಳು ಸೇರಿದ್ದು, ಕೆಲವರು ಬೀದಿಗಿಳಿದಿದ್ದಾರೆ. ದ್ವಿಪಕ್ಷೀಯ ಮಾತುಕತೆಯಲ್ಲಿ ಮತ್ತು ನದಿನೀರಿನ ಸಮಾನ ಹಂಚಿಕೆಯಲ್ಲಿ ರಾಷ್ಟ್ರದ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದಾಗಿ ಸರ್ಕಾರ ತಿಳಿಸಿದೆ. ಉದ್ದೇಶಿತ ಅಣೆಕಟ್ಟು ನಮ್ಮ ರಾಷ್ಟ್ರಕ್ಕೆ ಒಳ್ಳೆಯದಲ್ಲ ಮತ್ತು ಪರಿಸರ ಮತ್ತು ನಿಸರ್ಗಕ್ಕೆ ವಿರುದ್ಧವಾಗಿದೆಯೆಂದು ವಿತ್ತ ಸಚಿವ ಅಬುಲ್ ಮಾಲ್ ಅಬ್ದುಲ್ ಮುಹಿತ್ ತಿಳಿಸಿದ್ದಾರೆ.
Subscribe to:
Post Comments (Atom)
No comments:
Post a Comment