Saturday, July 18, 2009

ಇಕೋ ಕ್ಲಬ್ ಉದ್ಘಾಟನೆ/Inaugaration-Eco Club-Neerchal

ನೀರ್ಚಾಲು : ನಮ್ಮ ಪರಿಸರವನ್ನು ಯಾವತ್ತೂ ಶುಚಿಯಾಗಿ ಇರಿಸಿಕೊಳ್ಳಬೇಕು. ಆ ಮೂಲಕ ಸ್ವಚ್ಚ ವಾತಾವರಣದ ನಿರ್ಮಾಣವಾಗಬೇಕು. ಶುದ್ಧ ಗಾಳಿ ನಮ್ಮ ಉಸಿರಾಗಬೇಕು. ಆರೋಗ್ಯದ ದೃಷ್ಟಿಯಿಂದ ಮಹಾಮಾರಿಗಳಾದ ಡೆಂಗ್ಯು, ಮಲೇರಿಯಾ, ಹಂದಿ ಜ್ವರದಂತಹ ಖಾಯಿಲೆಗಳನ್ನು ನಾವು ಹೊಡೆದೋಡಿಸಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಶುಕ್ರವಾರ ಆರೋಗ್ಯ ಮತ್ತು ಪರಿಸರ ಕ್ಲಬ್ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ಹಿರಿಯ ಅಧ್ಯಾಪಿಕೆ ಎ.ಭುವನೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಎಂ.ಸೂರ್ಯನಾರಾಯಣ ಸ್ವಾಗತಿಸಿ, ಎಂ.ಕೆ.ಶಿವಪ್ರಕಾಶ್ ವಂದಿಸಿದರು. ವಿದ್ಯಾರ್ಥಿ ಅನುತೇಜ್ ಕಾರ್ಯಕ್ರಮ ನಿರೂಪಿಸಿದರು.

ಮದುವೆಗೆ ಮುಂಚೆ ಕನ್ಯತ್ವ, ಗರ್ಭ ಪರೀಕ್ಷೆ!/Marriage-pregnency test


ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲೊಂದು ಸಾಮೂಹಿಕ ವಿವಾಹ. ಇನ್ನೇನು ಸಮಾರಂಭಗಳು ಆರಂಭವಾಗಬೇಕು, ಅಷ್ಟೊತ್ತಿಗೆ ಭಾವೀ ವಧುವೊಬ್ಬಳಿಗೆ ಹೆರಿಗೆ ನೋವು ಆರಂಭವಾಗಿ ಬೊಬ್ಬಿಡತೊಡಗಿದಳು. ನೆರೆದವರಿಗೆ ಆಘಾತ. ತಕ್ಷಣವೇ ನೆರೆದಿದ್ದ ಎಲ್ಲ 152 ಮಂದಿ ವಧುಗಳಿಗೆ ಕನ್ಯತ್ವ ಪರೀಕ್ಷೆ, ಗರ್ಭಧಾರಣೆ ಪರೀಕ್ಷೆಗಳನ್ನೂ ಮಾಡಿಸಲಾಯಿತು. ಅವರಲ್ಲಿ 14 ಮಂದಿ ಗರ್ಭಿಣಿಯರೆಂಬುದು ತಿಳಿದುಬಂತು!ಭೋಪಾಲದಿಂದ ಸುಮಾರು 350 ಕಿ.ಮೀ. ದೂರದ ಶಾದೂಲ್ ಎಂಬಲ್ಲಿ ಜೂನ್ 30ರಂದು ಸಾಮೂಹಿಕ ವಿವಾಹದ ಸಂದರ್ಭದಲ್ಲಿ ನಡೆದ ಈ ಘಟನೆಯು ಕಾರ್ಯಕರ್ತರಲ್ಲಿ, ಬುಡಕಟ್ಟು ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ನಡೆದದ್ದು ಕೂಡ 'ಮುಖ್ಯಮಂತ್ರಿ ಕನ್ಯಾದಾನ' ಎಂಬ ಸರಕಾರಿ ಯೋಜನೆಯಡಿಯಲ್ಲಿ. ಬಡ ಕುಟುಂಬದ ಹುಡುಗಿಯರಿಗೆ ಸರಕಾರಿ ವೆಚ್ಚದಲ್ಲಿ ವಿವಾಹ ಮಾಡಿಸುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಯೋಜನೆಯಿದು.ಈ ಯೋಜನೆಯಡಿಯಲ್ಲಿ, ಉಚಿತವಾಗಿ ವಿವಾಹ ನೆರವೇರಿಸಲಾಗುತ್ತದೆ. ಎಲ್ಲ ವ್ಯವಸ್ಥೆಗಳನ್ನು ಜಿಲ್ಲಾಡಳಿತವೇ ಮಾಡುತ್ತದೆ. ಪ್ರತಿಯೊಂದು ಜೋಡಿಗೆ ಸುಮಾರು 5000 ರೂ. ಮೊತ್ತದ ಮನೆಗೆ ಅಗತ್ಯ ಬೇಕಿರುವ ಸಾಮಗ್ರಿಗಳನ್ನು ಕೂಡ ನೀಡಲಾಗುತ್ತದೆ.ಆ ದಿನ ನಡೆದ ಘಟನೆಯಲ್ಲಿ, ತಾಳಿ ಕಟ್ಟುವ ಕೆಲವೇ ಕ್ಷಣಗಳಲ್ಲಿ ಈ ತರುಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸಂಘಟಕರು ತಕ್ಷಣವೇ ವಿವಾಹ ಸಮಾರಂಭವನ್ನು ನಿಲ್ಲಿಸಿ, ಮದುವೆಗೆ ಬಂದಿದ್ದ ಎಲ್ಲ 152 ವಧುಗಳಿಗೆ ಗರ್ಭ ಪರೀಕ್ಷೆ ಮಾಡಲಾಯಿತು. ಅವುಗಳಲ್ಲಿ 14 ಮಂದಿ 'ಗರ್ಭಿಣಿ' ವಧುಗಳು ಸಿಕ್ಕಿಬಿದ್ದರೆ, ಒಬ್ಬಾಕೆ ಅಪ್ರಾಪ್ತೆ ಎಂಬುದು ತಿಳಿದುಬಂತು. ಆ ನಂತರ, ಯೋಜನೆಯಡಿ ಉಳಿದ 138 ಮಂದಿಗೆ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸುಂದರ್ ಸಿಂಗ್, ಜಿಲ್ಲಾಧಿಕಾರಿ ಮತ್ತಿತರ ಸರಕಾರಿ ಅಧಿಕಾರಿಗಳೂ ಹಾಜರಿದ್ದರು.ಸರಕಾರಿ ಯೋಜನೆಯ ದುರುಪಯೋಗವಾಗುತ್ತಿದೆ ಎಂಬುದು ಸ್ಥಳೀಯರ ಆರೋಪ. ಕೆಲವು ದಲ್ಲಾಳಿಗಳು ಇತ್ತೀಚೆಗೆ ಮದುವೆಯಾದ ದಂಪತಿಯನ್ನೂ ಇಲ್ಲಿಗೆ ಕರೆದುತಂದು ಮತ್ತೊಂದು ಮದುವೆ ಮಾಡಿಸಿ, ಅವರಿಂದ ಕಮಿಶನ್ ಪಡೆಯುತ್ತಾರೆ ಎಂಬುದು ಸ್ಥಳೀಯರ ಆರೋಪ.ಈ ನಕಲಿ ವಿವಾಹಗಳ ಆರೋಪ ಕೇಳಿಬಂದಿದ್ದರಿಂದ ಸ್ಥಳೀಯಾಡಳಿತವು ಕನ್ಯತ್ವ ಮತ್ತು ಗರ್ಭ ಪರೀಕ್ಷೆಗೆ ಆದೇಶಿಸಿತ್ತು. ಆದರೆ, ಈಗಾಗಲೇ ಮದುವೆಯಾದವರಿಗೂ ಈ ಪರೀಕ್ಷೆ ಮಾಡಿಸುವುದು ಹಕ್ಕುಗಳ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.ಮದುವೆಗೆ ಅರ್ಹತೆಯ ಮಾನದಂಡ ರೂಪಿಸಲು ಸಾಕಷ್ಟು ಇತರ ವಿಧಾನಗಳಿವೆ. ಇಂಥ ಪರೀಕ್ಷೆಗಳು ಸ್ತ್ರೀತ್ವಕ್ಕೇ ಅವಮಾನ. ಮಹಿಳೆಯರ ಖಾಸಗಿತನ ಮತ್ತು ಮಾನವ ಹಕ್ಕುಗಳನ್ನು ಇದು ಉಲ್ಲಂಘಿಸಿದಂತಾಗುತ್ತದೆ ಎಂಬುದು ಆರಾಹ ಹಕ್ಕುಗಳ ಆಂದೋಲನದ ಕಾರ್ಯಕರ್ತರೊಬ್ಬರ ಆರೋಪ. ಅವರು ಈ ರೀತಿ ಹೇಳುವುದಕ್ಕೆ ಇನ್ನೊಂದು ಪ್ರಧಾನ ಕಾರಣವಿದೆ. ಅಲ್ಲಿನ ಹಲವಾರು ಬುಡಕಟ್ಟು ಜನಾಂಗಗಳಲ್ಲಿ, ವಿವಾಹಕ್ಕೆ ಮೊದಲೇ ಹುಡುಗ-ಹುಡುಗಿ ಒಟ್ಟಿಗೇ ವಾಸಿಸುವ ಪದ್ಧತಿಗಳಿವೆಯಂತೆ. ಮದುವೆಯಾಗಲು ನಿರ್ಧರಿಸುವ ಮುನ್ನ ಅವರು ಪರಸ್ಪರ ಅರಿತುಕೊಂಡು ಮುಂದೆ ಹೆಜ್ಜೆ ಇಡುವ ಸಂಪ್ರದಾಯವಿದು.ರಾಜ್ಯ ಸರಕಾರವು ಈ ಕನ್ಯಾದಾನ ಯೋಜನೆಗೆ ಬಜೆಟಿನಲ್ಲಿ 25 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. 2009ರ ಜನವರಿ ತಿಂಗಳಿಂದ ವಧುವಿಗೆ ಕೊಡುವ ಉಡುಗೊರೆಯ ಮೊತ್ತವನ್ನು 5000ದಿಂದ 6000 ರೂ.ಗೆ ಏರಿಸಿದೆ. ರಾಜ್ಯದ ಆರ್ಥಿಕ ಸಮೀಕ್ಷೆಯ ಪ್ರಕಾರ, ಏಪ್ರಿಲ್ 2006ದಿಂ ಮಾರ್ಚ್ 2009ರವರೆಗಿನ ಅವಧಿಯಲ್ಲಿ ಈ ಯೋಜನೆಯಡಿ ಒಟ್ಟು 88,460 ವಿವಾಹಗಳು ನೆರವೇರಿವೆ. ಈಗ ವಿವಾದ ಸೃಷ್ಟಿಯಾಗಿದೆ!

ಕಳ್ಳಭಟ್ಟಿ ದುರಂತ, ಪ್ರಮುಖ ಆರೋಪಿ ಸೆರೆ/Gujarath Hooch Tragedy-Arrest

ಅಹಮದಾಬಾದ್ : 130 ಜನರ ಸಾವಿಗೆ ಕಾರಣವಾದ ಗುಜರಾತ್ ಕಳ್ಳಭಟ್ಟಿ ದುರಂತದ ಪ್ರಮುಖ ಆರೋಪಿ ವಿನೋದ್ ಚೌಹಾನ್ ಅಲಿಯಾಸ್ ಡಗ್ರಿ ನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಬರೋಡ ನಗರದಲ್ಲಿ ಮತ್ತಿಬ್ಬರನ್ನು ಬಂಧಿಸಲಾಗಿದೆ ಎಂದು ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ವಿನೋದ್ ತನ್ನ ಹಳ್ಳಿಯಾದ ಖೇಡ್ ಜಿಲ್ಲೆಯ ಮಹೇಮಬಾದ್ ನಲ್ಲಿ ನಕಲಿ ಮಧ್ಯ ತಯಾರಿಸುತ್ತಿದ್ದ. ಪೋಲೀಸರ ಪ್ರಕಾರ ಈತ 1100 ಲೀಟರ್ ನಷ್ಟು ನಕಲಿ ಮಧ್ಯವನ್ನು ಜುಲೈ ಮೊದಲ ವಾರದಲ್ಲಿ ನಗರಕ್ಕೆ ಸರಬರಾಜು ಮಾಡಿದ್ದ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ಮದುವೆಗೆ ಮಂಗಳಸೂತ್ರ ಕಡ್ಡಾಯವಲ್ಲ : ಕೋರ್ಟ್/Madras H.Court-Mangalasutra

ಚೆನ್ನೈ : ಮದ್ರಾಸ್ ಹೈಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದ್ದು, ಹಿಂದು ಪದ್ಧತಿಯಡಿ ವಿವಾದವಾಗಿರುವುದನ್ನು ಸಾಬೀತುಪಡಿಸಲು ಹೆಣ್ಣಿನ ಕೊರಳಿಗೆ ಗಂಡು ಮಂಗಳಸೂತ್ರವನ್ನು ಕಟ್ಟುವುದು ಕಡ್ಡಾಯವೇನಲ್ಲ. ಹೆಣ್ಣಿನ ಕೊರಳಿಗೆ ಗಂಡು ಮಂಗಳಸೂತ್ರ ಕಟ್ಟದೇ ಇದ್ದರೂ ಹಿಂದೂ ವಿವಾದ ಕಾಯ್ದೆಯ ಸೆಕ್ಷನ್ 7ರಲ್ಲಿ ಹೇಳಲಾಗಿರುವಂತೆ ವಿವಾಹ ಸಮಾರಂಭವು ನಡೆದಿರುವುದಕ್ಕೆ ಇತರೆ ಯಾವುದಾದರೂ ಸಾಕ್ಷ್ಯಗಳಿದ್ದರೂ ಆಗ ಮದುವೆ ಆಗಿರುವುದು ರುಜುವಾತಾಗುತ್ತದೆ ಎಂದು ಹೇಳಿದೆ.

ಕಲಾದರ್ ಎಂಬ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಂ ಎಂ ಸುಂದರೇಶ್ ಈ ತೀರ್ಪು ನೀಡಿದ್ದಾರೆ. 21 ರ ಹರೆಯದ ಮಹಿಳೆಯ ಜೊತೆ ಕಲಾದರ್ ವಿವಾಹವಾಗಿದ್ದು ನಿಜ ಎಂದು ಕೆಳ ನ್ಯಾಯಾಲಯ ಈ ಹಿಂದೆ ತೀರ್ಪು ನೀಡಿತ್ತು. ಆದರೆ, ತಾನು ಆ ಯುವತಿಗೆ ತಾಳಿಯನ್ನೇ ಕಟ್ಟಿಲ್ಲ. ಹೀಗಾಗಿ ಅದು ಮದುವೆ ಆಗುವುದಿಲ್ಲ ಎಂದು ಕಲಾದರ್ ವಾದಿಸಿದ್ದ.

ದೇವಾಲಯದಲ್ಲಿ ಪುರೋಹಿತರ ಸಮ್ಮುಖದಲ್ಲಿ ನಾವಿಬ್ಬರು ಹಾರ ಬದಲಾಯಿಸಿದ್ದೇವೆ ಎಂದು ಯುವತಿ ವಾದಿಸಿದ್ದರು. 1987 ಡಿಸೆಂಬರ್ 13 ರಂದು ದೇವಾಲಯದಲ್ಲಿ ಈ ಇಬ್ಬರು ಹಾರ ಬದಲಿಸಿಕೊಂಡಿದ್ದರು. ವರದಕ್ಷಿಣೆದೆ ಸಂಬಂಧಿಸಿದಂತೆ ಕಲಾದರ್ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಮಹಿಳೆ ನ್ಯಾಯಾಲಯದಲ್ಲಿ ವಿವರಣೆ ನೀಡಿದ್ದಳು.

Friday, July 17, 2009

ಗಾಯಕಿ ಗಂಗೂಬಾಯಿ ಆರೋಗ್ಯಸ್ಥಿತಿ ಗಂಭೀರ/Gangubai Hanagal Serious

ತೀವ್ರ ತೆರನಾದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿರವ 97 ವರ್ಷದ ಗಂಗೂಬಾಯಿ ಅವರನ್ನು ಮಂಗಳವಾರ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರ ಆರೋಗ್ಯ ತುಂಬಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಅವರನ್ನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಗಂಗೂಬಾಯಿ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ನರಳುತ್ತಿದ್ದು, ಇದೀಗ ಚಿಕಿತ್ಸೆಗೆ ಅವರ ಆರೋಗ್ಯ ಸ್ಪಂದಿಸುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಕಾಲಾಮದನಿ ತಿಳಿಸಿದ್ದಾರೆ.
ಏತನ್ಮಧ್ಯೆ ಅನಾರೋಗ್ಯದಿಂದ ಬಳಲುತ್ತಿರುವ ಖ್ಯಾತ ಗಾಯಕಿ ಗಂಗೂಬಾಯಿ ಅವರು ಶೀಘ್ರ ಗುಣಮುಖರಾಗಲೆಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಶುಭ ಹಾರೈಸಿದ್ದಾರೆ.
 

ಕಾಸರಗೋಡಿನಲ್ಲಿ ವರುಣನ ಆರ್ಭಟಕ್ಕೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಂಗಣದಲ್ಲಿ ಹರಿದ ಮಧುವಾಹಿನಿ ನದಿಯ ಪ್ರವಾಹ.


ಶನಿವಾರ ಪುರಭವನದಲ್ಲಿ ಕಪ್ಪು ಅಕ್ಷರಗಳು/Black Letters

ಕಾಸರಗೋಡು: ಇಲ್ಲಿನ `ಸ್ಪಂದನ ಕಾಸರಗೋಡು' ಇದರ ಆಶ್ರಯದಲ್ಲಿ ನಾಳೆ(18ರಂದು) ಸಂಜೆ 6.30ಕ್ಕೆ ಕಾಸರಗೋಡು ಪುರಭವನದಲ್ಲಿ `ಕಪ್ಪು ಅಕ್ಷರಗಳು' ಎಂಬ ಸಾಮಾಜಿಕ ನಾಟಕ ಪ್ರದಶರ್ಿಸಲಾಗುವುದು.
7 ವರ್ಷಗಳ ಹಿಂದೆ ಪ್ರದರ್ಶನ ಕಂಡಿದ್ದ ಈ ಮಲ್ಟಿ ಮೀಡಿಯ ನಾಟಕ ನೂತನ ಆವಿಷ್ಕಾರಗಳೊಂದಿಗೆ ನಗರದಲ್ಲಿ ಮತ್ತೆ ತೆರೆ ಕಾಣಲಿದೆ.
ರಂಗಕಮರ್ಿ ಸಿನಿಮಾ ನಟ ಪ್ರದೀಪ್ ಕಾಸರಗೋಡು ಅಭಿನಯದ ಈ ನಾಟಕವನ್ನು ಗೋಪಿ ಕುತ್ತಿಕೋಲ್ ನಿದರ್ೇಶಿಸಿದ್ದಾರೆ.
ಕನ್ನಡ ಸಹಿತ ಮಲೆಯಾಳ ಮತ್ತು ಇಂಗ್ಲಿಷ್ನಲ್ಲಿಯೂ ಈ ನಾಟಕವನ್ನು ದೇಶದಾದ್ಯಂತ ಪ್ರದಶರ್ಿಸಲಾಗುವುದು.


ಶನಿವಾರ ಶೋಭಾ ಕರಂದ್ಲಾಜೆ ಎಡನೀರಿಗೆ
ಕಾಸರಗೋಡು: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ನಾಳೆ(18ರಂದು) ಇಲ್ಲಿನ ಎಡನೀರು ಮಠವನ್ನು ಸಂದಶರ್ಿಸುವರು.
ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡವನ್ನು ಅವರು ಉದ್ಘಾಟಿಸುವರು.

ಅಡುಗೆ ಅನಿಲ ಸಂಪರ್ಕ : ಸಿದ್ಧತೆ
ಕಾಸರಗೋಡು: ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆ ಮಾಡದೆ ಉಳಿದಿರುವ ಅಜರ್ಿಯನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಬೇಕು ಎಂದು ಕೇಂದ್ರ ಸಕರ್ಾರ ಆದೇಶಿಸಿದ ಹಿನ್ನೆಲೆಯಲ್ಲಿ ಬರುವ ಮೂರು ತಿಂಗಳೊಳಗೆ 70 ಸಾವಿರ ಅಡುಗೆ ಅನಿಲ ಸಂಪರ್ಕ ನೀಡಲು ತೈಲ ಕಂಪೆನಿಗಳು ಸಿದ್ಧತೆ ನಡೆಸುತ್ತಿದೆ.
ರಾಜ್ಯದಲ್ಲಿ ಓಣಂ ಮತ್ತು ರಂಜಾನ್ ಹಬ್ಬದ ಹೊತ್ತಿಗೆ ಸಂಪರ್ಕ ಕಲ್ಪಿಸಲಾಗುವುದು. ಅಲ್ಲದೆ ಹೆಚ್ಚುವರಿ ಸಿಲಿಂಡರ್ ವಿತರಿಸಲು ತೀಮರ್ಾನಿಸಲಾಗಿದೆ.


ದೇವಸ್ವಂ ಮಂಡಳಿ ಅಹವಾಲು ಸ್ವೀಕಾರ
ಮಂಜೇಶ್ವರ: ಮಲಬಾರ್ ದೇವಸ್ವಂ ಮಂಡಳಿಯ ವಿಶೇಷ ಆಯುಕ್ತ ಸಿ.ಮೋಹನ್ ಇದೇ 20ರಂದು ಬೆಳಗ್ಗೆ 11 ಗಂಟೆಗೆ ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಅಹವಾಲುಗಳನ್ನು ಸ್ವೀಕರಿಸುವರು.
ಕಾಸರಗೋಡು ತಾಲೂಕಿನ ವಿವಿಧ ಕ್ಷೇತ್ರ ಸ್ಥಾನಿಕರ ಮತ್ತು ದೇವಸ್ಥಾನಗಳ ಅರ್ಚಕರು, ಸಹಾಯಕ ಅರ್ಚಕರಿಗೆ ಗೌರವ ಧನ ನೀಡಲು ಅಜರ್ಿ ಸ್ವೀಕರಿಸಲಿದ್ದಾರೆ.

ಕಾಸರಗೋಡು ಸರ್ಕಾರಿ ಕಾಲೇಜಿಗೆ 3 ಕೋಟಿ ರೂ./Release Rs.2 Crore- Kasaragod Govt College


ಕಾಸರಗೋಡು: ಕಾಸರಗೋಡು ಸರ್ಕಾರಿ ಕಾಲೇಜಿನ ಸುವರ್ಣ ಸಂಭ್ರಮದ ಪ್ರಯುಕ್ತ ನಿರ್ಮಿಸುವ ಗ್ರಂಥಾಲಯ ಕಟ್ಟಡ, ವಿದ್ಯಾರ್ಥಿ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 3 ಕೋಟಿ ರೂ.ಗಳ ಯೋಜನೆಗೆ ಅಂಗೀಕಾರ ಲಭಿಸಿದೆ
ಎಂದು ಶಾಸಕ ಸಿ.ಟಿ. ಅಹಮ್ಮದಾಲಿ ತಿಳಿಸಿದ್ದಾರೆ.


ಮಾಲಿನ್ಯ ಸಮಸ್ಯೆ: ಲಾರಿ ತಡೆದ ಸ್ಥಳೀಯರು
ಕಾಸರಗೋಡು: ಇಲ್ಲಿಗೆ ಸಮೀಪದ ಕೇಳುಗುಡ್ಡೆಯಲ್ಲಿ ನಗರದ ತ್ಯಾಜ್ಯಗಳನ್ನು ರಾಶಿ ಹಾಕಿರುವ ಪ್ರದೇಶದಿಂದ ಮಲಿನ ನೀರು ರಸ್ತೆ ಮತ್ತು ಸಮೀಪದ ಮನೆಗಳ ವಠಾರಗಳಲ್ಲಿ ಹರಿಯುತ್ತಿದ್ದು, ಸ್ಥಳೀಯರು ಇಂದು ತ್ಯಾಜ್ಯ ಹೇರಿಕೊಂಡ ಬಂದ ಲಾರಿಗಳನ್ನು ತಡೆದ ಘಟನೆ ನಡೆದಿದೆ.


ನಗರ ಸಭಾ ಸದಸ್ಯನ ಬಂಧನ
ಕಾಸರಗೋಡು: ಇಲ್ಲಿನ ನಗರ ಸಭಾ ಸದಸ್ಯ ಹಾಗೂ ನ್ಯಾಶನಲ್ ಯೂತ್ ಲೀಗ್ ಜಿಲ್ಲಾ ಕಾರ್ಯದರ್ಶಿ ಮಮ್ಮು ಚಾಲ ಎಂಬವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
2006 ಅ.30ರಂದು ವಿದ್ಯಾನಗರ ಬಳಿ ಹಾರಿಸ್ ಹಾದಿಮ್ ಎಂಬವರಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ 5ನೇ ಆರೋಪಿಯಾಗಿರುವ ಮಮ್ಮು ಚಾಲ ಅವರನ್ನು ಬಂಧಿಸುವಂತೆ ನ್ಯಾಯಾಲಯ ವಾರೆಂಟ್ ಹೊರಡಿಸಿದೆ. ಆರೋಪಿ ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ.
ಇನ್ನೊಂದು ಪ್ರಕರಣದಲ್ಲಿಯೂ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.


ಕಾಸರಗೋಡಿನಲ್ಲಿ ಬಿಗ್ಬಜಾರ್: ಅನುಮತಿ ನೀಡದ ನಗರಸಭೆ
ಕಾಸರಗೋಡು: ದೇಶದ ಪ್ರಮುಖ ಸುಪರ್ ಮಾರ್ಕೆಟ್ ಕಂಪೆನಿಯಾಗಿರುವ ಬಿಗ್ಬಜಾರ್ ತನ್ನ ಶಾಖೆಯನ್ನು ಕಾಸರಗೋಡಿನಲ್ಲಿ ತೆರೆಯಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ನಗರಸಭೆ ತಿರಸ್ಕರಿಸಿದೆ.
ಹೊಸ ಬಸ್ಸು ನಿಲ್ದಾಣದ ಬಳಿ 30,000 ಚದರ ಅಡಿ ವಿಸ್ತೀರ್ಣ ಪ್ರದೇಶದಲ್ಲಿ ಸುಪರ್ ಮಾರ್ಕೆಟ್ ಕಾರ್ಯನಿರ್ವಹಿಸಲು ಸಿದ್ಧತೆಗಳು ನಡೆಯುತ್ತಿದ್ದು, ನಗರದ ವ್ಯಾಪಾರಿಗಳ ಮನವಿಯನ್ನು ಪರಿಗಣಿಸಿ ಈ ಕ್ರಮಕೈಗೊಳ್ಳಲಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ ತಿಳಿಸಿದ್ದಾರೆ.


ಪನ್ನಿಪ್ಪಾರೆ ಲೈಂಗಿಕ ದಂಧೆ: ಮಧ್ಯವರ್ತಿ ಸೆರೆ
ಕಾಸರಗೋಡು: ಪನ್ನಿಪ್ಪಾರೆ ಲೈಂಗಿಕ ದಂಧೆಯ ಮಧ್ಯವರ್ತಿ ವಾಹಿದಾ ಎಂಬಾಕೆಯನ್ನು ಶುಕ್ರವಾರ ಸಂಜೆ ನಗರ ಪೊಲೀಸರು ಬಂಧಿಸಿದರು.
ಈ ಪ್ರಕರಣದಲ್ಲಿ ಈಗಾಗಲೇ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿಗೆ ಸಮೀಪದ ಪನ್ನಿಪ್ಪಾರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ 16ರ ಹರೆಯದ ಬಾಲಕಿಯನ್ನು ಕಳೆದ ಎರಡೂವರೆ ವರ್ಷಗಳ ವರೆಗೆ ವಾಹಿದಾ ಮತ್ತು ಕೆಲವು ಮಹಿಳೆಯರು ದಂಧೆಯಲ್ಲಿ ಬಳಸಿಕೊಂಡಿದ್ದಾರೆ.
ಕೆಲವು ದಿನಗಳಿಂದ ಮೌನವಾದ ಈ ಪ್ರಕರಣದ ಕೆಲವು ಆರೋಪಿಗಳನ್ನು ಪಾರು ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದ ಬೆನ್ನಿಗೆ ಮಧ್ಯವರ್ತಿ ಪೊಲೀಸ್ ಬಲೆಗೆ ಬಿದ್ದಿದ್ದಾಳೆ.

ಬಾವಿ ಕುಸಿತ: ಸಾವು
ಕಾಸರಗೋಡು: ಪಯ್ಯನ್ನೂರು ಸಮೀಪ ಚೆರುಪುಳ ತಿಮಿರಿ ಎಂಬಲ್ಲಿ ಬಾವಿ ಕುಸಿದು ಬಿದ್ದು ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯ ಕುಞ್ಞಿರಾಮನ್(51) ಎಂಬವರು ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅಗ್ನಿಶಾಮಕ ದಳ ಶವವನ್ನು ಮೇಲಕ್ಕೆತ್ತಿದೆ.

ಯುವಕನ ಅಪಹರಣ: ದೂರು
ಕಾಸರಗೋಡು: ನಾಲ್ವರನ್ನೊಳಗೊಂಡ ತಂಡ ಯುವಕನನ್ನು ಅಪಹರಿಸಿದೆ ಎಂದು ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕುಂಬಳೆಯ ಸರ್ಫ್ರಾಸ್ ಯಾನೆ ಮುನ್ನಾ(32) ಅಪಹರಣಕ್ಕೆ ಒಳಗಾದ ಯುವಕ.
ಇತ್ತೀಚೆಗೆ ಶಿರಿಯ ಬಳಿ ನಿಂತಿದ್ದ ಈತನನ್ನು ಪೊಲೀಸ್ ವೇಷಧಾರಿಗಳ ಸಹಿತ ಬಂದ ತಂಡ ಟಾಟಾ ಸುಮೋ ಕಾರಿನೊಳಗೆ ಬಲವಂತವಾಗಿ ಕೂಡಿಹಾಕಿ ಪರಾರಿಯಾಗಿದೆ.

ಪಾಲಿಟೆಕ್ನಿಕ್ಗೆ ಬಾಂಬ್ ಬೆದರಿಕೆ
ಆರೋಪಿ ಸೆರೆ
ಕಾಸರಗೋಡು: ಇತ್ತೀಚೆಗೆ ಕಾಞಂಗಾಡು ಪಾಲಿಟೆಕ್ನಿಕ್ಗೆ ಬಾಂಬ್ ಬೆದರಿಕೆ ಒಡ್ಡಿದ ಆರೋಪಿಯನ್ನು ಪೊಲೀಸರು ಬಂಧಿದ್ದಾರೆ.
ಇದೇ ಸಂಸ್ಥೆಯ ಮೆಕಾನಿಕ್ ದ್ವಿತೀಯ ವರ್ಷದ ವಿದ್ಯಾಥರ್ಿ ಚೆರ್ಕಳದ ಬಾಲನಡ್ಕ ನಿವಾಸಿ ಶ್ಯಾಮ್ರವಿ ಎಂಬಾತನೇ ಆರೋಪಿ.
ಈತ ಇದೇ 13ರಂದು ಕಾಞಂಗಾಡು ಪೆಟ್ರೋಲ್ ಪಂಪ್ ಬಳಿಯ ನಾಣ್ಯ ಬೂತ್ನಿಂದ ಕಾಲೇಜಿಗೆ ಕರೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘರ್ಷಣೆ: ದುಬೈಯಲ್ಲಿ ಕಾಸರಗೋಡು ನಿವಾಸಿಗೆ ಇರಿತ

ಕಾಸರಗೋಡು: ಎರಡು ತಂಡಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಕಾಸರಗೋಡು ನಿವಾಸಿ ಇರಿತಕ್ಕೊಳಗಾದ ಘಟನೆ ದುಬೈಯಲ್ಲಿ ಬುಧವಾರ ನಡೆದಿದೆ.
ಕಾಸರಗೋಡಿನ ಪೊವ್ವಲ್ ನಿವಾಸಿ ಅಯೂಬ್ ಯಾನೆ ಅಬ್ದುಲ್ಲ ಮುಹಮ್ಮದಲಿ ಎಂಬಾತ ಹೊಟ್ಟೆಗೆ ಗಂಭೀರವಾಗಿ ಗಾಯಗೊಂಡು ದುಬೈಯ ರಾಶಿದ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಪಾಕಿಸ್ಥಾನ ಮತ್ತು ಬಲೂಚಿಸ್ಥಾನದ ನಿವಾಸಿಗಳು ಇರಿದಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜುಲೈ 22ರಂದು ಗ್ರಹಣಗಳ ಕೌತುಕ ನೋಡಿ/Eclipsed-July 22nd


ಕಾಸರಗೋಡು: ಜುಲೈ 22ರಂದು ಬಾನಂಗಳದಲ್ಲಿ ನಡೆಯಲಿರುವ ಭಾಗಶಃ ವೀಕ್ಷಿಸಬಹುದಾಗಿದೆ. ಆದರೆ ಅದು ಸೂರ್ಯೋದಯಕ್ಕೂ ಮುನ್ನ ಬೆಳಿಗಿನ ಜಾವ 5ಗಂಟೆ 38ನಿಮಿಷಕ್ಕೆ ಎಂದು ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಎಸ್.ಶುಕ್ರೆ ತಿಳಿಸಿದ್ದಾರೆ.ಈ ಬಾರಿ ಮೂರು ಗ್ರಹಣಗಳು ಒಂದೇ ದಿನ ಗೋಚರವಾಗಲಿದ್ದು ಇದೊಂದು ಕೌತುಕದ ಕ್ಷಣವಾಗಿದೆ. ಇದರಲ್ಲಿ ಹೆಚ್ಚಿನ ವಿಶೇಷವೇನಿಲ್ಲ. ಕೆಲ ವರ್ಷಗಳಿಗೊಮ್ಮೆ ಎರಡು ಚಂದ್ರಗ್ರಹಣಗಳ ಮಧ್ಯೆ ಒಂದು ಸೂರ್ಯಗ್ರಹಣ ಅಥವಾ ಎರಡು ಸೂರ್ಯಗ್ರಹಣಗಳ ಮಧ್ಯೆ ಒಂದು ಚಂದ್ರಗ್ರಹಣ ಗೋಚರಿಸುವುದು ಸಹಜ ಪ್ರಕ್ರಿಯೆ ಎಂದು ವಿವರಿಸಿದರು.ಬೆಂಗಳೂರಿನಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಸೂರತ್, ಇಂದೋರ್, ಭೋಪಾಲ್, ವಾರಣಾಸಿ ಮತ್ತು ಅರುಣಾಚಲ ಪ್ರದೇಶದಿಂದ ಪೂರ್ಣ ಸೂರ್ಯಗ್ರಹಣ ವೀಕ್ಷಿಸಬಹುದಾಗಿದೆ. ಬೆಂಗಳೂರಿಗರು ಸೂರ್ಯಗ್ರಹಣ ವೀಕ್ಷಣೆಗಾಗಿ ನಂದಿಬೆಟ್ಟ ಅಥವಾ ಬಹುಮಹಡಿ ಕಟ್ಟಡಗಳ ಮೇಲಿಂದ ವೀಕ್ಷಿಸಬಹುದಾಗಿದೆ. ಹಾಗಂತ ಮೂಢನಂಬಿಕೆಯಿಂದ ಸೂರ್ಯಗ್ರಹಣವನ್ನು ವೀಕ್ಷಿಸದಿರುವುದು ಮೂರ್ಖತನ. ಆದರೆ ಗ್ರಹಣವನ್ನು ಬರಿಗಣ್ಣಿನಿಂದ ಮಾತ್ರ ವೀಕ್ಷಿಸಬೇಡಿ. ಸಣ್ಣ ರಂಧ್ರದ ಮೂಲಕ ಗೋಡೆಯ ಮೇಲೆ ಬಿಂಬ ಮೂಡಿಸಿ ನೋಡುವುದು, ನೀರಿನಲ್ಲಿ ಪ್ರತಿಬಿಂಬ ಮೂಡಿಸಿ ನೋಡುವುದು ಉತ್ತಮ ಎಂದು ಶುಕ್ರೆ ತಿಳಿಸಿದರು.

ಭೂಹಗರಣ;ಇಂದಿನ ಕಲಾಪವೂ ಗದ್ದಲದಲ್ಲೇ ಅಂತ್ಯ/B'lore: Sesion

ಬೆಂಗಳೂರು : ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಅಥವಾ ಲೋಕಾಯುಕ್ತ ತನಿಖೆ ನಡೆಸಬೇಕೆಂಬ ಪ್ರತಿಪಕ್ಷಗಳ ಆಗ್ರಹ ಕಳೆದ ಎರಡು ದಿನಗಳಿಂದ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಗುರುವಾರವೂ ಕೂಡ ಕಲಾಪ ಗದ್ದಲದಲ್ಲಿಯೇ ಅಂತ್ಯ ಕಂಡಿದೆ.ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಅಧಿಕಾರ ಅವಧಿಯಲ್ಲಿ ನಡೆದಿದೆ ಎನ್ನಲಾದ ಭೂ ಹಗರಣದ ಬಗ್ಗೆ ಸಿಬಿಐ ಅಥವಾ ಲೋಕಾಯುಕ್ತರಿಂದ ತನಿಖೆ ನಡೆಸುವಂತೆ ಪ್ರತಿಪಕ್ಷಗಳ ಸದಸ್ಯರು ಇಂದೂ ಕೂಡ ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪರಿಣಾಮ ಕಲಾಪವನ್ನು ಮಧ್ನಾಹ್ನ 3ಗಂಟೆಗೆ ಮುಂದೂಡುವಂತಾಯಿತು.ಇಂದು ಬೆಳಿಗ್ಗೆ 11ಗಂಟೆಗೆ ಸದನ ಆರಂಭವಾಗಬೇಕಿತ್ತು. ಪ್ರತಿಪಕ್ಷಗಳ ಸದಸ್ಯರು ಧರಣಿ ಮುಂದುವರಿಸುವ ಸುಳಿವು ಅರಿತ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಸದನ ಪ್ರಾರಂಭಿಸುವ ಗೋಜಿಗೆ ಹೋಗದೆ ಸಂಧಾನ ಸಭೆ ಕರೆದರು. ಆದರೆ ಸಂಧಾನ ಸಭೆ ವಿಫಲವಾಯಿತು. ಮಧ್ನಾಹ್ನದ ನಂತರ ಆರಂಭದ ಕಲಾಪ ಕೂಡ ಗೊಂದಲದ ಗೂಡಾದ ಪರಿಣಾಮ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.ಸದನದೊಳಗೆ ರೇವಣ್ಣಗೆ ಮೊಬೈಲ್‌ನಿಂಗ ಗೌಡರ ಮಾರ್ಗದರ್ಶನ: ಸದನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಪುತ್ರ ರೇವಣ್ಣಗೆ ಮಾಜಿ ಪ್ರಧಾನಿ ದೇವೇಗೌಡರು ಮೊಬೈಲ್ ಮೂಲಕ ಸಂಪರ್ಕಿಸಿ ಸಲಹೆ ನೀಡುತ್ತಿದ್ದದ್ದು ಕಂಡುಬಂತು. ಸಂಧಾನ ಸಭೆಯಲ್ಲಿ ಭಾಗವಹಿಸಿದ್ದ ರೇವಣ್ಣ ಅವರು ಒಂದೆರಡು ಬಾರಿ ಸಭೆಯಿಂದ ಹೊರಬಂದು ಗೌಡರೊಂದಿಗೆ ಮೊಬೈಲ್‌ನಲ್ಲಿ ಮಾತುಕತೆ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ ಮಾಜಿ ಸಚಿವ ಬಂಡೆಪ್ಪ ಕಾಶಂಪರ್ ಅವರೂ ಗೌಡರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದು ಗುಟ್ಟಾಗಿ ಉಳಿದಿರಲಿಲ್ಲ.

ಮಾಯಾವತಿ: ಯುಪಿಸಿಸಿ ಅಧ್ಯಕ್ಷೆ ರೀಟಾ ಬಂಧನ/UPCC President Reeta Arested

ಉತ್ತರಪ್ರದೇಶ : ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ರೀಟಾ ಬಹುಗುಣ ಜೋಷಿ ಅವರನ್ನು ಇಲ್ಲಿ ಗುರುವಾರ ಬಂಧಿಸಲಾಗಿದೆ.ಬಂಧನಕ್ಕೀಡಾಗಿರುವ ಜೋಷಿ ಅವರನ್ನು ನ್ಯಾಯಾಧೀಶ ಪ್ರಶಾಂತ್ ಕುಮಾರ್ ಎದುರು ಹಾಜರು ಪಡಿಸಲಾಗಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಇಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ರೀಟಾ ಅವರು ಮಾಯಾವತಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಲಾಗಿದೆ. ಇವರು ಬುಧವಾರ ರಾತ್ರಿ ದೆಹಲಿಗೆ ತೆರಳುತ್ತಿದ್ದ ವೇಳೆ ಗಜಿಯಾಬಾದ್‌ನಲ್ಲಿ ಬಂಧಿಸಲಾಗಿದೆ."ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷೆನ್ 153ಎ(ಉದ್ರೇಕಕಾಗಿ ಭಾಷಣ) ಮತ್ತು ಸೆಕ್ಷನ್ 109 (ನಿಂದನಾ ಭಾಷೆಯ ಬಳಕೆ) ಹಾಗೂ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆಗಳನ್ವಯ ಪ್ರಕರಣ ದಾಖಲಿಸಲಾಗಿದೆ" ಎಂದು ಎಡಿಜಿಪಿ ಬ್ರಿಜ್ ಲಾಲ್ ಹೇಳಿದ್ದಾರೆ.ರೀಟಾ ಮನೆಗೆ ಬೆಂಕಿ ಅತ್ಯಂತ ಭದ್ರತಾ ವಲಯದಲ್ಲಿನ, ಸಚಿವಾಲಯಕ್ಕೆ ಸನಿಹವಾಗಿರುವ ರೀಟಾ ಅವರ ನಿವಾಸದ ಮೇಲೆ ಬುಧವಾರ ರಾತ್ರಿ ಶಂಕಿತ ಬಿಎಸ್ಪಿ ಕಾರ್ಯಕರ್ತರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ.ಮನೆಯ ಒಂದು ಭಾಗ ಬೆಂಕಿಯಿಂದ ಸುಟ್ಟುಹೋಗಿದೆ. ಅಲ್ಲದೆ ಅಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಹಾನಿಯಾಗಿದೆ. ಯಾವದೇ ಸಾವು ನೋವು ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ಬೆಂಕಿಯನ್ನು ನಂದಿಸಲಾಗಿದ್ದು, ರೀಟಾ ನಿವಾಸದ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದೆ. ಮತ್ತು ಅವರ ಅಲಹಾಬಾದ್ ನಿವಾಸಕ್ಕೂ ಭದ್ರತೆ ಒದಗಿಸಲಾಗಿದೆ ಎಂದು ಬ್ರಿಜ್‌ಲಾಲ್ ತಿಳಿಸಿದ್ದಾರೆ.ರೀಟಾ ಏನು ಹೇಳಿದ್ದರು? ಮೊರಾದಾಬಾದಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರೀಟಾ ಅವರು ಮಾಯಾ ಸರ್ಕಾರದ ಕಾರ್ಯಶೈಲಿಯನ್ನು ಟೀಕಿಸುತ್ತಾ, ಅತ್ಯಾಚಾರ ಬಲಿಪಶುಗಳು ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಲಿಯಾದವರನ್ನು ಭೇಟಿಯಾಗಲು ಡಿಜಿಪಿಯವರನ್ನು ಕಳುಹಿಸಿ 25 ಸಾವಿರ ಪರಿಹಾರ ನೀಡುವ ಸರ್ಕಾರದ ಕ್ರಮವನ್ನು ಅವರು ಖಂಡಿಸಿದ್ದರು. ಈ ವೇಳೆ "ಒಂದು ಹೆಣ್ಣಿನ ಶೀಲಕ್ಕೆ ಸರಕಾರ ಬೆಲೆ ಕಟ್ಟುತ್ತಿದೆ. ಇದೇ ರೀತಿ ಮುಖ್ಯಮಂತ್ರಿ ಮಾಯಾವತಿಗೇನಾದರೂ ಆದರೆ, ನಾವು ಒಂದು ಕೋಟಿ ರುಪಾಯಿ ಪರಿಹಾರ ನೀಡಲು ಸಿದ್ಧ" ಎಂಬ ವಿವಾದಕಾರಿ ಹೇಳಿಕೆಯನ್ನು ರೀಟಾ ಜೋಶಿ ನೀಡಿದ್ದರು. ವಿಷಾದ ಬಂಧನದ ಬಳಿಕ ಪ್ರತಿಕ್ರಿಯಿಸಿರುವ ರೀಟಾ "ನಾನು ಮಹಿಳಾ ಚಳುವಳಿಯ ಉತ್ಪನ್ನ. ಮಹಿಳೆಯರ ಬಗ್ಗೆ ನನ್ನಲ್ಲಿ ಗೌರವವಿವೆ. ಹೆಲಿಕಾಫ್ಟರಿನಲ್ಲಿ ಪ್ರಯಾಣಿಸಿದ ಡಿಜಿಪಿ ಬಲಿಪಶುಗಳಿಗೆ 25,000 ರೂಪಾಯಿ ಪರಿಹಾರ ನೀಡುವ ಕ್ರಮ ನಾಚಿಕೆಗೇಡಿನದ್ದು" ಎಂದು ಪುನರುಚ್ಚರಿಸಿದ್ದಾರೆ. ನನ್ನ ಹೇಳಿಕೆ ಮುಖ್ಯಮಂತ್ರಿಗಳಿಗೆ ನೋವುಂಟುಮಾಡಿದ್ದಲ್ಲಿ ತಾನು ತೀವ್ರ ವಿಷಾದ ಪಡಿಸುತ್ತೇನೆ ಎಂದು ರೀಟಾ ಹೇಳಿದ್ದಾರೆ.

ಸಂಗೀತ 'ಭೈರವಿ' ಡಿ.ಕೆ. ಪಾಟ್ಟ್ ಅಮ್ಮಾಳ್ ನಿಧನ /D.K.Pattammal-Obituary

ಕಾಸರಗೋಡು: ಕರ್ನಾಟಕ ಸಂಗೀತ ಲೋಕದ ಮಹಾನ್ ಕಲಾವಿದೆ, ಪದ್ಮವಿಭೂಷಣ ಡಿ.ಕೆ.ಪಟ್ಟಮ್ಮಾಳ್ (90) ಗುರುವಾರ ಚೆನ್ನೈಯ ಕೊಟ್ಟೂರುಪುರಂನ ತಮ್ಮ ನಿವಾಸದಲ್ಲಿ ನಿಧನರಾದರು.1919ರ ಮಾರ್ಚ್ 28ರಂದು ಕಾಂಚಿಪುರದ ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಪಟ್ಟಮ್ಮಾಳ್, ಕರ್ನಾಟಕ ಸಂಗೀತ ಲೋಕಕ್ಕೆ ಅಧಿಕಾರಯುತವಾಗಿ ಕಾಲಿರಿಸಿದ ಮೊದಲ ಮಹಿಳೆ ಎಂದು ಕರ್ನಾಟಕ ಸಂಗೀತದ ಮೇರು ಕಲಾವಿದ, ದಿವಂಗತ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕರೆಸಿಕೊಂಡಿದ್ದರು.ಕರ್ನಾಟಕ ಸಂಗೀತದ ತ್ರಿವಳಿ ಸ್ತ್ರೀರತ್ನಗಳಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿ, ಎಂ.ಎಲ್.ವಸಂತಕುಮಾರಿಯವರೊಂದಿಗೆ ಸೇರಿಕೊಂಡಿದ್ದ ಪಟ್ಟಮ್ಮಾಳ್ ಅವರ ಮೂಲ ಹೆಸರು ಅಲಮೇಲು. 65 ವರ್ಷಗಳ ಕಾಲ ಕರ್ನಾಟಕ ಸಂಗೀತದಲ್ಲಿ ತಮ್ಮ ಛಾಪು ಮೂಡಿಸಿದ ಪಟ್ಟಮ್ಮಾಳ್, 10 ಹರೆಯದಲ್ಲೇ ಮೊದಲ ಬಾರಿಗೆ ರೇಡಿಯೋದಲ್ಲಿ (ಅಂದಿನ ಮದ್ರಾಸ್ ಕಾರ್ಪೊರೇಶನ್ ರೇಡಿಯೋ, ಈಗ ಆಲ್ ಇಂಡಿಯಾ ರೇಡಿಯೋ) ಕಛೇರಿ ನೀಡಿದ್ದರು. ಮೂರು ವರ್ಷದ ಬಳಿಕ ಅಂದರೆ 1932ರಲ್ಲಿ ಅವರು ಮದ್ರಾಸ್ ರಸಿಕ ರಂಜನಿ ಸಭಾದಲ್ಲಿ ಮೊದಲ ಸಾರ್ವಜನಿಕ ಕಛೇರಿ ನೀಡಿದರು.ಕರ್ನಾಟಕ ಸಂಗೀತದಲ್ಲಿ ಅತ್ಯಂತ ಕ್ಲಿಷ್ಟಕರವಾಗಿದ್ದ "ರಾಗಂ, ತಾನಂ, ಪಲ್ಲವಿ"ಯನ್ನು ಸಂಗೀತ ಕಛೇರಿಗಳಲ್ಲಿ ಬಳಸಿದ ಮೊದಲ ಮಹಿಳಾರತ್ನ ಎಂಬ ಹೆಗ್ಗಳಿಕೆಯೂ ಪಟ್ಟಮ್ಮಾಳ್ ಅವರಿಗಿದೆ.

ಮಾತುಕತೆ ಇಲ್ಲ: ಸ್ಪಷ್ಟನೆಗೆ ಹೆಣಗಿದ ಪ್ರಧಾನಿ/No Discusion


ಕಾಸರಗೋಡು: ಮುಂಬೈ ಸರಣಿ ಸ್ಫೋಟದ ಬಳಿಕ ಸ್ಥಗಿತಗೊಂಡಿದ್ದ ಸಮಗ್ರ ಮಾತುಕತೆ ಪ್ರಕ್ರಿಯೆಯಿಂದ ಭಯೋತ್ಪಾದನೆಯನ್ನು ಹೊರಗಿಡಲು ಒಪ್ಪುವ ಮೂಲಕ ಭಾರತವು ಒತ್ತಡಕ್ಕೆ ಮಣಿದಂತಾಗಿದೆ ಎಂಬ ಆರೋಪಗಳ ಮಧ್ಯೆಯೇ ಸ್ಪಷ್ಟನೆ ನೀಡಿರುವ ಪ್ರಧಾನಿ ಮನಮೋಹನ್ ಸಿಂಗ್, ಸಮಗ್ರ ಮಾತುಕತೆಯ ಪುನರಾರಂಭವು, ಪಾಕ್ ಮಣ್ಣಿನಿಂದ ಹೊರಬರುವ ಉಗ್ರವಾದಿ ಕೃತ್ಯಗಳ ವಿರುದ್ಧ ನಿರ್ಣಾಯಕ ಮತ್ತು ಪರಿಣಾಮಕಾರಿ ಕ್ರಮವನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ.ಭಯೋತ್ಪಾದನೆ ಕುರಿತ ಕ್ರಮಕ್ಕಾಗಿ ಸಮಗ್ರ ಮಾತುಕತೆಯ ಪುನರಾರಂಭವು ಬಲಿಪಶುವಾಗಬಾರದು ಎಂಬ ಪಾಕಿಸ್ತಾನದ ವಾದದ ಬಗ್ಗೆ ಹಾಗೂ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿರುವ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಹೆಣಗಿದಂತೆ ಕಂಡು ಬಂದ ಸಿಂಗ್, ಉಭಯ ರಾಷ್ಟ್ರಗಳ ನಡುವಣ ಯಾವುದೇ ಸಂಬಂಧ ಮುಂದುವರಿಸಲು ಪರಿಣಾಮಕಾರಿ ಮತ್ತು ನಿರ್ಣಾಯಕ ಕ್ರಮಗಳನ್ನು ಪಾಕಿಸ್ತಾನ ಕೈಗೊಳ್ಳಬೇಕು ಎಂದರು.ಗುರುವಾರ ನಡೆದ ಸುದೀರ್ಘ ಮಾತುಕತೆಗಳ ಬಳಿಕ ಮಾತುಕತೆ ಪುನರಾರಂಭದ ಕುರಿತ ಬಿಕ್ಕಟ್ಟು ಶಮನವಾಗಿದೆಯೇ ಎಂದು ಕೇಳಿದಾಗ, ಇದಕ್ಕೆ ಕಾಲವೇ ಉತ್ತರಿಸಬೇಕು ಎಂದು ಸಿಂಗ್ ಪ್ರತಿಕ್ರಿಯಿಸಿದರು.ಭಾರತದ ವಿರುದ್ಧದ ಭಯೋತ್ಪಾದನೆಯು ಸರಕಾರೇತರ ಶಕ್ತಿಗಳಿಂದ ಆಗುತ್ತಿದೆ ಎಂಬ ಪಾಕಿಸ್ತಾನದ ವಾದದ ಫಲದಿಂದಾಗಿ ಭಯೋತ್ಪಾದನೆಯನ್ನು ಹೊರಗಿಡಲು ತೀರ್ಮಾನಿಸಲಾಯಿತೇ ಎಂದು ಕೇಳಿದಾಗ, ತಾನು ಈಗಿನ ಪಾಕಿಸ್ತಾನಿ ಸರಕಾರವನ್ನು ದೂಷಿಸುತ್ತಿಲ್ಲ. ಆದರೆ ಹಿಂದಿನ ಕೆಲವು ಅಧಿಕೃತ ಶಕ್ತಿಗಳು ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗಿದ್ದವು ಎಂದು ಹೇಳಿದರು.ಕಾಶ್ಮೀರ ವಿಷಯದ ಬಗ್ಗೆ ಜಂಟಿ ಹೇಳಿಕೆಯಲ್ಲಿ ಯಾವುದೇ ಪ್ರಸ್ತಾಪವಿಲ್ಲದಿದ್ದರೂ, "ಬಾಕಿ ಉಳಿದಿರುವ ವಿವಾದಗಳೂ ಸೇರಿದಂತೆ ಸಮಗ್ರ ವಿಷಯಗಳ ಚರ್ಚೆಗೆ ಭಾರತವು ಸಿದ್ಧವಿದೆ" ಎಂದು ಮನಮೋಹನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಗ್ರ ಮಾತುಕತೆಯಡಿ ಕಾಶ್ಮೀರ ವಿವಾದವೂ ಸೇರುತ್ತದೆ ಎಂಬುದು ಇಲ್ಲಿ ಉಲ್ಲೇಖಾರ್ಹ.ಭಯೋತ್ಪಾದನೆ ವಿರುದ್ಧ ಪಾಕಿಸ್ತಾನವು ಕ್ರಮ ಕೈಗೊಳ್ಳುವ ಬಗ್ಗೆ ನಿಖರವಾದ ಸೂಚನೆಗಳು ಲಭ್ಯವಾಗುವವರೆಗೂ ಪಾಕ್ ಜೊತೆಗೆ ಯಾವುದೇ ಮಾತುಕತೆ ಇಲ್ಲ ಎಂದು ಹೇಳುತ್ತಲೇ ಬಂದಿದ್ದ ಭಾರತವು ಈಗ ಜಂಟಿ ಹೇಳಿಕೆಯಲ್ಲಿ, ಭಯೋತ್ಪಾದನೆಯಿಂದ ಸಮಗ್ರ ಮಾತುಕತೆಯನ್ನು ಹೊರಗಿಡುವ ನಿರ್ಧಾರಕ್ಕೆ ಒಪ್ಪುವ ಮೂಲಕ ಪಾಕ್ ಒತ್ತಡಕ್ಕೆ ಮಣಿದಂತಾಗಿದೆ ಎಂದು ಭಾವಿಸಲಾಗುತ್ತಿದೆ.ಆ ಬಳಿಕ ಸುದ್ದಿಗೋಷ್ಠಿಯಲ್ಲಿ ತಮ್ಮ ನಿಲುವಿಗೆ ಸ್ಪಷ್ಟನೆ ನೀಡಲು ತ್ರಾಸಪಟ್ಟಂತೆ ಕಂಡುಬಂದ ಮನಮೋಹನ್ ಸಿಂಗ್, ಮುಂಬೈಯನ್ನು ನಡುಗಿಸಿದಂತಹ ಭಯೋತ್ಪಾದನಾ ಕೃತ್ಯಗಳಿಗೆ ಕಾರಣಕರ್ತರಾದವರನ್ನು ದಂಡಿಸುವವರೆಗೂ ಸಮಗ್ರ ಮಾತುಕತೆ ಇಲ್ಲ ಎಂದು ಹೇಳಿದರು.ಭಯೋತ್ಪಾದನಾ ಚಟುವಟಿಕೆಗಳು ಮುಂದುವರಿದರೆ, ಮಾತುಕತೆಯ ಪ್ರಶ್ನೆಯೇ ಇಲ್ಲ. ಅದರಲ್ಲಿಯೂ ಸಮಗ್ರ ಮಾತುಕತೆ ಸಾಧ್ಯವೇ ಇಲ್ಲ. ಭಯೋತ್ಪಾದನೆ ತಡೆಗೆ ಪಾಕ್ ಕ್ರಮ ಕೈಗೊಳ್ಳದಿದ್ದರೆ ಯಾವುದೇ ಮಾತುಕತೆಯೂ ಯಶಸ್ವಿಯಾಗದು ಎಂದರು.

ವಿಶ್ವದ ಅತಿ ಕಿರಿಯ ವೆಬ್ ಡಿಸೈನರ್ /Worlds Smallest Web Designer




ಕಾಸರಗೋಡು : ಆಕೆ ಕೇವಲ ಎಂಟು ವರ್ಷ ವಯಸ್ಸಿನವಳಾಗಿದ್ದಾಗ ವೆಬ್ ಡಿಸೈನಿಂಗ್ ಮಾಡಿ ವಿಶ್ವ ದಾಖಲೆ ಬರೆದವಳು; ನಂತರವೂ ಹತ್ತಾರು ವೆಬ್‌ಸೈಟ್‌ಗಳು ಆಕೆಯ ಪುಟಾಣಿ ಕೈಗಳಿಂದ ರಚಿತವಾಗಿವೆ. ಅವಳ ಹೆಸರು ಶ್ರೀಲಕ್ಷ್ಮೀ ಸುರೇಶ್. ಹುಟ್ಟಿದ್ದು 1998ರಲ್ಲಿ ಕೇರಳದ ಕೋಯಿಕೋಡ್‌ನಲ್ಲಿ.ತಾನು ಹೋಗುತ್ತಿದ್ದ ಶಾಲೆಯ ವೆಬ್‌ಸೈಟ್ (ಡಬ್ಲ್ಯೂಡಬ್ಲ್ಯೂಡಬ್ಲ್ಯೂ.ಪ್ರೆಸೆಂಟೇಶನ್ಎಚ್‌ಎಸ್‌ಎಸ್.ಕಾಮ್) ರಚಿಸಿದ್ದ ಈ ಬಾಲೆಯ ಹೆತ್ತವರಾದ ಸುರೇಶ್ ಮೆನನ್ ಕ್ಯಾಲಿಕಟ್‌ನಲ್ಲಿ ವಕೀಲ, ತಾಯಿ ವಿಜು ಸುರೇಶ್ ಶಾಲಾ ಅಧ್ಯಾಪಕಿ.ಶ್ರೀಲಕ್ಷ್ಮೀ ತನ್ನ ನಾಲ್ಕನೇ ವಯಸ್ಸಿನಲ್ಲೇ ಕಂಪ್ಯೂಟರ್ ಕಲಿಯಲಾರಂಭಿಸಿದ್ದಳು, ನಾವು ಆಕೆಗೆ ಬೇಕಾದ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಅವಳ ಪೋಷಕರು.ಈ ಅದ್ಭುತ ಬಾಲಕಿಯು ಹಲವಾರು ಗೌರವಗಳನ್ನು ಇದುವರೆಗೆ ಸ್ವೀಕರಿಸಿದ್ದಾಳೆ. ತನ್ನ ಸಾಧನೆಗಾಗಿ ವಿಶ್ವದಾದ್ಯಂತ ಹೆಸರು ಮಾಡಿದ್ದಾಳೆ. ಬಹುತೇಕ ಎಲ್ಲಾ ಪತ್ರಿಕೆ ಮತ್ತು ಇತರ ಮಾಧ್ಯಮಗಳಲ್ಲಿ ಈಗಾಗಲೇ ಅವಳು ಸುದ್ದಿಯಾಗಿದ್ದಾಳೆ.ಅದಕ್ಕಿಂತಲೂ ವಿಶೇಷ ಎಂದರೆ ಆಕೆ ತನ್ನದೇ ಸಂಸ್ಥೆಯಾದ 'ಇ-ಡಿಸೈನ್ ಟೆಕ್ನಾಲಜೀಸ್' ಎಂಬ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವುದು. 'ಇನ್ಫೋಗ್ರೂಪ್' ಎಂಬ ಮಾಹಿತಿ ತಂತ್ರಜ್ಞಾನ ಕಂಪನಿಗೆ ಶ್ರೀಲಕ್ಷ್ಮಿಯೇ ರಾಯಭಾರಿ. 'ವೈ-ಗ್ಲೋಬ್ಸ್ ಟೆಕ್ನಾಲಜೀಸ್ ಐಎನ್‌ಸಿ' ಎಂಬ ಮತ್ತೊಂದು ಕಂಪನಿಗೆ ಅವಳೇ ನಿರ್ದೇಶಕಿ.ಅವಳ ಸಾಧನೆಯನ್ನು ಗುರುತಿಸಿದ್ದು ಅಮೆರಿಕಾದ ವೆಬ್‌ಮಾಸ್ಟರ್ಸ್ ಅಸೋಸಿಯೇಷನ್. ತನ್ನ ಸದಸ್ಯೆಯನ್ನಾಗಿ ಮಾಡಿಕೊಂಡ ಆ ಸಂಸ್ಥೆಯು ಈಕೆಯೇ ಅತೀ ಕಿರಿಯ ವೆಬ್ ಡಿಸೈನರ್ ಎಂದು ಘೋಷಿಸಿದ ನಂತರ ಶ್ರೀಲಕ್ಷ್ಮಿಯ ಪುಟ್ಟ ಕೈಗಳಲ್ಲಿ ಅದೆಷ್ಟು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾಳೋ ಅವಳಿಗೇ ನೆನಪಿಲ್ಲ. ಆ ಸಂಸ್ಥೆಯ 18 ವರ್ಷದೊಳಗಿನ ಏಕೈಕ ಸದಸ್ಯೆಯೆಂಬ ಕೀರ್ತಿಯೂ ಶ್ರೀಲಕ್ಷ್ಮಿಯದ್ದು."ನಾನು ತೀರಾ ಚಿಕ್ಕವಳಿದ್ದಾಗಲೇ ಕಂಪ್ಯೂಟರ್ ಬಗ್ಗೆ ಆಸಕ್ತಿಯಿತ್ತು. ಎಲ್‌ಕೆಜಿಗೆ ಹೋಗುತ್ತಿದ್ದಾಗ ಚಿತ್ರ ಬಿಡಿಸುವುದನ್ನು ಕಲಿತಿದ್ದೆ. ನಂತರ ನೋಟ್‌ಪ್ಯಾಡ್‌ನಲ್ಲಿ ಅಕ್ಷರಗಳನ್ನು ಬರೆಯಲು ಆರಂಭಿಸಿದೆ. ಒಂದು ದಿನ ತಂದೆ ನನಗೆ ಹುಡುಗನೊಬ್ಬ ವೆಬ್ ಡಿಸೈನ್ ಮಾಡಿದ್ದ ಸುದ್ದಿಯನ್ನು ತೋರಿಸಿದರು. ಹಾಗೆ ನನಗೂ ಮಾಡಲು ಸಾಧ್ಯವೆಂದು ಯೋಚಿಸಿದ ನಾನು ತಂದೆಯಿಂದ ವೆಬ್ ಡಿಸೈನಿಂಗ್ ಬಗ್ಗೆ ಪಾಠ ಹೇಳಿಸಿಕೊಂಡೆ" ಎಂದು ಶ್ರೀಲಕ್ಷ್ಮೀ ಸುರೇಶ್ ಹೇಳುತ್ತಾಳೆ.

Thursday, July 16, 2009

Train service Stopped



Mangalore News





ಮಳೆ: ಕಾಸರಗೋಡಿನಲ್ಲಿ 2 ಕೋಟಿ ನಾಶ ನಷ್ಟ/Rain in Ksd

ಕಾಸರಗೋಡು: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷಿ ಮತ್ತು ಮನೆಗಳಿಗೆ ಹಾನಿ ಸಂಭವಿಸಿದ್ದು, 2 ಕೋಟಿ ರೂ. ಮಿಕ್ಕಿ ನಾಶ ನಷ್ಟ ಸಂಭವಿಸಿದೆ.
ಜಿಲ್ಲೆಯಲ್ಲಿ ಇದು ವರೆಗೆ 41 ಮನೆಗಳು ಧರಾಶಾಯಿಯಾಗಿದೆ. 437 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಮನೆಗಳು ಕುಸಿದು ಬಿದ್ದು 37.42 ಲಕ್ಷ ರೂ. ನಾಶ ನಷ್ಟ ಸಂಭವಿಸಿದೆ. 528.4 ಹೆಕ್ಟೇರ್ ಕೃಷಿ ಸ್ಥಳ ಹಾನಿಗೊಂಡಿದ್ದು, 1.19 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ 24 ತಾಸುಗಳಲ್ಲಿ 622 ಮಿ.ಮೀ. ಮಳೆಯಾಗಿದೆ. ಇದು ವರೆಗೆ 1,393 .3 ಮಿ.ಮೀ ಮಳೆ ಲಭಿಸಿದೆ.
ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಕುಂಬಳೆ ಸಮೀಪದ ಕೊಯಿಪ್ಪಾಡಿ-ಕೊಪ್ಪಳ ಕಡಪ್ಪುರಗಳಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, 25ಕ್ಕೂ ಅಧಿಕ ತೆಂಗಿನ ಮರಗಳು ಧರಾಶಾಯಿಯಾಗಿದೆ. ಮನೆ ಹಾನಿಗೊಂಡ 3 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. 8 ಮನೆಗಳು ಅಪಾಯದ ಭೀತಿಯಲ್ಲಿದೆ. ಎಲ್ಲಾ ನದಿಗಳಲ್ಲಿಯೂ ನೀರು ತುಂಬಿ ಹರಿಯುತ್ತಿದೆ.
ಶತಕ ವಂಚಿತ ನೋವು:
ಮಳೆಗೆ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನ ಮುಂಭಾಗ ಶತಮಾನದ ಹೊಸ್ತಿಲಲ್ಲಿದ್ದ ಬೇವಿನ ಮರ ಧರೆಗೆ ಉರುಳಿದೆ. ಸ್ಥಳೀಯ ವೈದ್ಯ ಜಿ.ಕೆ.ಭಟ್ ಉಬ್ಬಾನ ಅವರು ಈ ಮರದ ತೊಗಟೆ-ಎಲೆಯನ್ನು ಬಳಸಿ ಹಲವು ವರ್ಷಗಳಿಂದ ರೋಗಿಗಳಿಗೆ ಔಷಧಿ ನೀಡಿದ್ದರು. 98 ವರ್ಷಗಳ ಹಿಂದೆ ಶಾಲೆ ಆರಂಭವಾದಾಗ ಈ ಮರವನ್ನೂ ನೆಟ್ಟು ಬೆಳೆಸಲಾಗಿತ್ತು.
ಕೆಂಪು ಮಳೆ:
ತೃಕ್ಕರಿಪುರ ಸಮೀಪದ ಎಡಚ್ಚಕೈ ಶಾಲಾ ವಠಾರದಲ್ಲಿ ಬುಧವಾರ ಸಂಜೆ ವೇಳೆಗೆ ಕೆಂಪು ಬಣ್ಣದ ಮಳೆ ಬಿದ್ದಿದೆ. ರಸ್ತೆ, ಹಳ್ಳ, ಹೊಂಡಗಳಲ್ಲಿ ಸಂಗ್ರಹವಾದ ಕೆಂಪು ನೀರು ಸ್ಥಳೀಯರಲ್ಲಿ ಕುತೂಹಲ ಮೂಡಿಸಿತು.
ಶಸ್ತ್ರಕ್ರಿಯೆ ಇಲ್ಲ:
ಕಾಸರಗೋಡು ಜನರಲ್ ಆಸ್ಪತ್ರೆಯ ಮಹಡಿಗಳಲ್ಲಿ ನೀರು ಸಂಗ್ರಹಗೊಂಡು ರೋಗಿಗಳ ಕೊಠಡಿಗಳಿಗೆ ಹರಿಯುತ್ತಿದೆ. ಎಡೆಬಿಡದ ಮಳೆಗೆ ರೋಗಿಗಳ ಬಟ್ಟೆಬರೆಗಳನ್ನು ಒಣಗಿಸಲಾಗದೆ ಆಸ್ಪತ್ರೆಯ ಸಿಬ್ಬಂದಿಗಳು ಪರದಾಡುತ್ತಿದ್ದಾರೆ. ಬಟ್ಟೆಯನ್ನು ಒಣಗಿಸುವ ಆಧುನಿಕ ಸೌಕರ್ಯ ಆಸ್ಪತ್ರೆಯಲ್ಲಿಲ್ಲ. ಇದರಿಂದ ಶಸ್ತ್ರಕ್ರಿಯೆಯನ್ನು ಮುಂದೂಡಲಾಗಿದೆ.
ಮುನ್ನೆಚ್ಚರಿಕೆ:
ಮುಂದಿನ 48 ತಾಸುಗಳೊಳಗೆ ಜಿಲ್ಲೆಯ ಕಡಲ ತೀರದಲ್ಲಿ ಭಾರೀ ಗಾಳಿ ಬೀಸುವ ಸಂಭವವಿದ್ದು, ಸಮುದ್ರದಲ್ಲಿ ಭಾರೀ ಅಲೆಗಳು ಏಳುವ ಸಾಧ್ಯತೆ ಇದ್ದು ಮೀನುಗಾರರು ಅತೀವ ಜಾಗ್ರತೆ ವಹಿಸುವಂತೆ ಮೀನುಗಾರಿಕಾ ಉಪ ನಿದರ್ೇಶಕರು ಮುನ್ನೆಚ್ಚರಿಕೆ ನೀಡಿದ್ದಾರೆ.


ಕಾಸರಗೋಡಿನಲ್ಲಿ ಎಚ್1 ಎನ್1 ಪತ್ತೆ

ಕಾಸರಗೋಡು: ಕೊಲ್ಲಿ ರಾಷ್ಟ್ರದಿಂದ ಬಂದ ಇಲ್ಲಿನ ತೆಕ್ಕಿಲ್ನ  ಕುಟುಂಬವೊಂದರ 7 ವರ್ಷದ ಬಾಲಕನಿಗೆ ಹಂದಿ ಜ್ವರ(ಎಚ್1 ಎನ್1) ಬಾಧಿಸಿ ನಗರದ ಜನರಲ್ ಆಸ್ಪತ್ರೆಯಲ್ಲಿ ಗುರುವಾರ ದಾಖಲಿಸಲಾಗಿದೆ.
ಇತ್ತೀಚೆಗೆ ಕೊಲ್ಲಿರಾಷ್ಟ್ರದಿಂದ ಕಲ್ಲಿಕೋಟೆ ವಿಮಾನ ನಿಲ್ದಾಣ ಮೂಲಕ ಬಂದಿಳಿದ ಕುಟುಂಬವನ್ನು ತಪಾಸಣೆ ಮಾಡಿದಾಗ ಬಾಲಕನಿಗೆ ಹಂದಿ ಜ್ವರ ಇರುವುದು ಖಾತರಿಯಾಗಿತ್ತು. ಇದರಿಂದ ಬಾಲಕನನ್ನು ಕಲ್ಲಿಕೋಟೆಯ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯ ಅಧಿಕಾರಿಗಳಿಗೆ ತಿಳಿಸದೆ ಕುಟುಂಬ ಕಾಸರಗೋಡಿಗೆ ಬಂದಿದೆ. ಆದರೆ ಇವರ ಮಾಹಿತಿ ಸಂಗ್ರಹಿಸಿದ ಗುಪ್ತಚರ ವಿಭಾಗ ಕುಟುಂಬ ವಾಸವಿರುವ ಮನೆಯ ವಿಳಾಸ ಪತ್ತೆ ಹಚ್ಚಿ ನಗರ ಪೊಲೀಸರಿಗೆ ಮಾಹಿತಿ ನೀಡಿದೆ. ಇದರ ಪರಿಣಾಮ ಪೊಲೀಸ್ ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯರು ಮನೆಗೆ ತೆರಳಿ ಬಾಲಕನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಬಾಲಕನನ್ನು ತುತರ್ು ನಿಗಾ ಘಟಕದಲ್ಲಿ ಇರಿಸಲಾಗಿದೆ. 


ಕ್ವಾಲಿಸ್ ಕಾರು ಬೈಕಿಗೆ ಡಿಕ್ಕಿ: ಚಾಲಕನ ವಿರುದ್ಧ ದೂರು
ಕಾಸರಗೋಡು: ಕ್ವಾಲಿಸ್ ಕಾರು ಬೈಕಿಗೆ ಡಿಕ್ಕಿ ಹೊಡೆದು ನಾಲ್ವರು ಗಾಯಗೊಂಡ ಘಟನೆಗೆ ಸಂಬಂಧಿಸಿ ಚಾಲಕನ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾರು ಚಾಲಕ ಮುಳ್ಳೇರಿಯಾ ಸಮೀಪದ ಕುಂಟಾರು ನಿವಾಸಿ ರವೀಶ ತಂತ್ರಿ ಅವರ ವಿರುದ್ಧ ಗಾಯಾಳು ಬೈಕ್ ಸವಾರ ಮಧೂರು ಚೇನೆಕ್ಕೋಡು ನಿವಾಸಿ ಚಂದ್ರಶೇಖರ ದೂರು ನೀಡಿದ್ದಾರೆ.

ಪಾಣತ್ತೂರು ಕ್ಷೇತ್ರ ಕಳವು
ಆರೋಪಿಯ ಬಂಧನ
ಕಾಸರಗೋಡು: ಇಲ್ಲಿನ ಹೊಸದುರ್ಗ ಸಮೀಪದ ಪಾಣತ್ತೂರು ಶ್ರೀ ಅಯ್ಯಪ್ಪ ಕ್ಷೇತ್ರದಿಂದ ಪಂಚಲೋಹ ವಿಗ್ರಹ, ಬೆಳ್ಳಿಯ ಕಿರೀಟಗಳನ್ನು ಕದ್ದ ಆರೋಪಿಯನ್ನು ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ.
ತಳಿಪರಂಬ ಚೆರುಪುಳ ನಿವಾಸಿ ಜೋಬಿ ಎಂಬಾತನೇ ಬಂಧಿತ ವ್ಯಕ್ತಿ. ಕಾರು ಕಳವು ಪ್ರಕರಣದಲ್ಲಿಯೂ ಈತ ಶಾಮೀಲಾಗಿದ್ದಾನೆ.
9 ಕಿಲೋ ಭಾರವಿರುವ ಪಂಚಲೋಹ ವಿಗ್ರಹ ಮತ್ತು 5 ಕಿಲೋ ಬೆಳ್ಳಿಯ ಕಿರೀಟವನ್ನು ಮಾರುತ್ತಿದ್ದ ವೇಳೆ ಪೊಲೀಸರು ಬಂಧಿಸಿದರು. ಗ್ರಾಹಕರ ಸೋಗಿನಲ್ಲಿ ಬಂದ ಪೊಲೀಸರು ಆರೋಪಿಯನ್ನು ಕೈಯಾರೆ ಸೆರೆ ಹಿಡಿದರು. ಕಳೆದ 6ರಂದು ಕಳವು ನಡೆದಿತ್ತು.

ಕುಸಿದು ಬಿದ್ದು ಸಾವು
ಕಾಸರಗೋಡು: ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಲ್ಲಿನ ಪೆರಿಯ ಬಸ್ಸು ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಆಲಕ್ಕೋಡು ದೇವಕಿ ಎಂಬವರ ಪುತ್ರ ಮಹೇಂದ್ರನ್(45) ಸಾವನ್ನಪ್ಪಿದವರು.


ಚೆಕ್ ಪೋಸ್ಟ್ ವಿಸ್ತರಣೆಗೆ ಕ್ಷೇತ್ರ ಸ್ಥಳ ಮುಟ್ಟುಗೋಲು :
ಹೈಕೋಟರ್ು ತಡೆಯಾಜ್ಞೆ
ಮಂಜೇಶ್ವರ: ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನದ ಸ್ಥಳವನ್ನು ಚೆಕ್ ಪೋಸ್ಟ್ ವಿಸ್ತರಣೆಗೆ ಮುಟ್ಟುಗೋಲು ಹಾಕಿದ ಸಕರ್ಾರದ ಕ್ರಮದ ವಿರುದ್ಧ ಹೈಕೋಟರ್ು ತಡೆಯಾಜ್ಞೆ ನೀಡಿದೆ.
ಕ್ಷೇತ್ರ ಸ್ಥಳವನ್ನು ವಶಪಡಿಸಬಾರದು ಎಂದು ಆಗ್ರಹಿಸಿ ಕ್ಷೇತ್ರದ ಭಕ್ತಾದಿಗಳು ಶಾಸಕರಿಗೆ ಮನವಿ ಸಲ್ಲಿಸಿದ್ದರು. ಆದರೆ ಸಕರ್ಾರದಿಂದ ಯಾವುದೇ ಫಲ ಲಭಿಸದ ಕಾರಣ ಕ್ಷೇತ್ರದ ಭಕ್ತಾದಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.


ನಾಪತ್ತೆಯಾದ ಯುವತಿ ಠಾಣೆಯಲ್ಲಿ ಹಾಜರು
ಮಂಜೇಶ್ವರ : ನಾಪತ್ತೆಯಾಗಿದ್ದ ಯುವತಿಯನ್ನು ಮಂಜೇಶ್ವರ ಪೊಲೀಸರು ಕಾಸರಗೋಡು ಪ್ರಥಮ ದಜರ್ೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.
ಪೈವಳಿಕೆ ಜೋಡುಕಲ್ಲು ನವೋದಯ ನಗರದ ನಿವಾಸಿ ಕೃಷ್ಣನ್ ಎಂಬವರು ತಮ್ಮ ಪುತ್ರಿ ಚಂದ್ರಿಕಾ ಕಳೆದ ಜೂನ್ 26ರಂದು ನಾಪತ್ತೆಯಾಗಿದ್ದಾಳೆ ಎಂದು ದೂಉ ನೀಡಿದ್ದರು. ಯುವತಿ ಬುಧವಾರ ಬೆಳಗ್ಗೆ ಮಂಜೇಶ್ವರ ಠಾಣೆಯಲ್ಲಿ ಹಾಜರಾಗಿದ್ದಳು. ಯುವತಿಯ ಇಚ್ಛೆಯಂತೆ ನ್ಯಾಯಾಲಯ ಆಕೆಯನ್ನು ಹೆತ್ತವರ ಜತೆ ತೆರಳುವಂತೆ ಅನುಮತಿ ನೀಡಿದೆ.

ರಸ್ತೆ ತಡೆ: 30 ಮಂದಿ ವಿರುದ್ಧ ಪ್ರಕರಣ ದಾಖಲು
ಮಂಜೇಶ್ವರ: ರಸ್ತೆ ತಡೆ ನಿಮರ್ಿಸಿ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಬುಧವಾರ 8 ಮಂದಿಯನ್ನು ಬಂಧಿಸಲಾಗಿದ್ದು, 30 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೆಟ್ಟು ಹೋದ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಉಪ್ಪಳ ಗೇಟ್ ಬಳಿ ಲೀಗ್ ಕಾರ್ಯಕರ್ತರು ಬುಧವಾರ ರಸ್ತೆ ತಡೆ ನಡೆಸಿದ್ದರು.

ನಾಳೆ ಕೆ.ಎಸ್.ಟಿ.ಎ. ಧರಣಿ/KSTA Dharna

ಕಾಸರಗೋಡು: ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆ.ಎಸ್.ಟಿ.ಎ.) ನೇತೃತ್ವದಲ್ಲಿ ಇದೇ 18ರಂದು ಬೆಳಗ್ಗೆ 10 ಗಂಟೆಗೆ ಡಿ.ಡಿ.ಇ. ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಪದಾಧಿಕಾರಿಗಳು ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅರ್ಧಯಾಪಕರ ಹುದ್ದೆ ಸಂರಕ್ಷಣೆ ಖಾತರಿಪಡಿಸಬೇಕು, ಮೇನೇಜರುಗಳ ಅಧಿಕಾರ ಕೊನೆಗೊಳಿಸಬೇಕು, ಪಂಚಾಯ್ತಿ ಶಾಲೆಗಳ ಅಧ್ಯಾಪಕರನ್ನೂ ಸಕರ್ಾರಿ ಶಾಲಾ ಅಧ್ಯಾಪಕರಾಗಿ ಪರಿಗಣಿಸಬೇಕು, ಆದಾಯ ರಹಿತ ಶಾಲೆಗಳ ನೇಮಕಾತಿಗೆ ಅಂಗೀಕಾರ ನೀಡಬೇಕು ಮೊದಲಾದ 19 ಬೇಡಿಕೆಗಳನ್ನು ಮುಂದಿರಿಸಿ ಧರಣಿ ನಡೆಸಲಾಗುವುದು ಎಂದವರು ವಿವರಿಸಿದರು.
ಧರಣಿಯನ್ನು ಸಂಘಟನೆಯ ಉಪಾಧ್ಯಕ್ಷ ಕೆ.ಜಿ.ಬಾಬು ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಎಂ. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ನಾರಾಯಣನ್ ಮಾಸ್ಟರ್ ಟಿ.ವಿ, ಎಂ. ಬಾಲಕೃಷ್ಣನ್, ಕೆ.ರಾಘವನ್, ಕೆ.ವಿ.ಗೋವಿಂದನ್, ಪಿ.ವಿ.ಶ್ರೀದೇವಿ ಹಾಜರಿದ್ದರು.

ಉಚಿತ ಸಮವಸ್ತ್ರ ವಿತರಣೆ
ಕಾಸರಗೋಡು: ತ್ಯಾಗ ಹಾಗೂ ಸೇವಾ ಮನೋಭಾವಗಳನ್ನು ರೂಪಿಸುವ ಮೂಲಕ ಉತ್ತಮ ಸಮಾಜ ನಿಮರ್ಾಣ ಸಾಧ್ಯ ಎಂದು ಡಾ.ಅನಂತ ಕಾಮತ್ ಅಭಿಪ್ರಾಯಪಟ್ಟರು.
ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಎ.ಬಿ.ವಿ.ಪಿ. ರಾಮದಾಸ ನಗರ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಸಮಿತಿ ಸದಸ್ಯ ಕೃಷ್ಣ ದಾಸ್ ವೈ ಅಧ್ಯಕ್ಷತೆ ವಹಿಸಿದ್ದರು. ಕೂಡ್ಲು ಶಾಲಾ ಮೇನೇಜರ್ ಸದಾಶಿವ ಶ್ಯಾನುಭೋಗ್, ಮುಖ್ಯೋಪಾಧ್ಯಾಯ ವೆಂಕಟರಮಣ ಭಟ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣಯ್ಯ, ಅಧ್ಯಾಪಕರಾದ ನರಸಿಂಹ ಮಯ್ಯ, ಅರವಿಂದ ಎಂ.ಕೆ. ಹಾಜರಿದ್ದರು.
ಘಟಕ ಅಧ್ಯಕ್ಷ ಶ್ರೀನಾಥ್ ಸ್ವಾಗತಿಸಿ, ಅಧ್ಯಾಪಕ ವೇಣುಗೋಪಾಲ ಕೆ. ಕಾರ್ಯಕ್ರಮ ನಿರೂಪಿಸಿದರು.
 

ಚೆನ್ನಾಗಿ ಓದಿ, ಭಾರತವನ್ನು ಹಿಂದಿಕ್ಕಿ: ಒಬಾಮಾ ಉಪದೇಶ/Study well-Defeat India-OBAMA

'ಚೀನಾ ಮತ್ತು ಭಾರತದ ವಿದ್ಯಾರ್ಥಿಗಳು ದಾಪುಗಾಲಿಡುತ್ತಿದ್ದಾರೆ. ನೀವೂ ಕೂಡ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ, ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಕೊಡಿ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ' ಅಮೆರಿಕದ ಪೋಷಕರಿಗೆ ಹೇಳಿದ ಹಿತನುಡಿ.

ತಾವು 21ನೇ ಶತಮಾನದಲ್ಲಿ ಚೀನಾ ಮತ್ತು ಭಾರತ ಜತೆ ಸ್ಪರ್ಧಿಸಲು ಅಮೆರಿಕಕ್ಕೆ ನೆರವಾಗುವಂತಹ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ ಹಾಕುತ್ತಿರುವುದಾಗಿ ಒಬಾಮಾ ತಿಳಿಸಿದರು. ಚೀನಾ ಮತ್ತು ಭಾರತದ ಜತೆ ಶಿಕ್ಷಣದಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶ ಕಲ್ಪಿಸುವ ಅಡಿಪಾಯ ನಿರ್ಮಾಣಕ್ಕೆ ಈಗಾಗಲೇ ನಾವು ಕೆಲವು ಕ್ರಮಗಳನ್ನು ಕೈಗೊಂಡಿರುವುದಾಗಿ 'ಅಮೆರಿಕ ಪದವಿ ಉಪಕ್ರಮ' ಪ್ರಕಟಿಸಿದ ವಾರನ್ ಮಿಚಿಗನ್‌ನಲ್ಲಿ ಜನರ ಗುಂಪಿನ ಹರ್ಷೋದ್ಗಾರದ ನಡುವೆ ತಿಳಿಸಿದರು.

ಶ್ವೇತಭವನಕ್ಕೆ ಪ್ರವೇಶಿಸಿದ ಕೂಡಲೇ ಮತ್ತು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೂಡ ಅಮೆರಿಕ ಪೋಷಕರಿಗೆ ಈ ಕುರಿತು ಒತ್ತಾಯಿಸಿದ್ದರು. ಆಡಳಿತಕ್ಕೆ ಕಾಲಿಡುವ ಸಂದರ್ಭದಲ್ಲಿ ಅಮೆರಿಕಕ್ಕೆ ಗುರಿಯೊಂದನ್ನು ಇರಿಸಿದ್ದಾಗಿ ಅವರು ತಿಳಿಸಿದರು. 2020ರೊಳಗೆ ಈ ರಾಷ್ಟ್ರದಲ್ಲಿ ಮತ್ತೊಮ್ಮೆ ವಿಶ್ವದಲ್ಲೇ ಕಾಲೇಜು ಪದವೀಧರರ ಅತ್ಯಧಿಕ ಪ್ರಮಾಣವಿರುತ್ತದೆ.

ನಾವು ಅದನ್ನು ಪುನಃ ಪಡೆಯುತ್ತೇವೆ ಎಂದು ಒಬಾಮಾ ಸಭಿಕರ ಕರತಾಡನದ ನಡುವೆ ಹೇಳಿದರು.ವಿಶ್ವದಲ್ಲೇ ಅತ್ಯಧಿಕ ಕಾಲೇಜು ಪದವೀಧರ ಪ್ರಮಾಣದ ಗುರಿಯನ್ನು ಮುಟ್ಟುವ ಉದ್ದೇಶ ಹೊಂದಿರುವ ಅಮೆರಿಕ ಪದವೀಧರ ಉಪಕ್ರಮವನ್ನು ಪ್ರಕಟಿಸಿದ ಅವರು, ಮುಂದಿನ 10 ವರ್ಷಗಳಲ್ಲಿ ನಾವು ಅದನ್ನು ಸಾಧಿಸುತ್ತೇವೆಂದು ಹೇಳಿದರು.

ಇರಾಕ್ ಆತ್ಮಾಹುತಿ ಬಾಂಬರ್ ದಾಳಿಗೆ 6 ಬಲಿ/Irak-6 Death

ಇರಾಕ್ : ಇರಾಕಿನ ನಗರ ರಾಮಾಡಿಯಲ್ಲಿ ಬುಧವಾರ ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡಿದ್ದರಿಂದ ಕನಿಷ್ಠ 6 ಜನರು ಸತ್ತಿದ್ದಾರೆ ಮತ್ತು 17 ಜನರು ಗಾಯಗೊಂಡಿದ್ದಾರೆ. ನಗರದ ಕೇಂದ್ರದಲ್ಲಿ ಆತ್ಮಾಹುತಿ ದಾಳಿಕೋರ ಸ್ಫೋಟಕಗಳಿಂದ ತುಂಬಿದ ಮಿನಿ ಬಸ್ಸನ್ನು ಚೆಕ್‌ಪಾಯಿಂಟ್‌ನೊಳಗೆ ನುಗ್ಗಿಸಿದ್ದರಿಂದ ಈ ಅನಾಹುತ ಸಂಭವಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಕನಿಷ್ಠ ಇಬ್ಬರು ಟ್ರಾಫಿಕ್ ಪೊಲೀಸರು ದಾಳಿಯಲ್ಲಿ ಸತ್ತಿದ್ದು, ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.ರಮಾಡಿ ಅನ್ಬಾರ್ ಪಶ್ಚಿಮ ಪ್ರಾಂತ್ಯದ ಮುಖ್ಯ ನಗರವಾಗಿದ್ದು, ಸುನ್ನಿ ಭಯೋತ್ಪಾದಕತೆಯ ಮುಂಚಿನ ಕೇಂದ್ರವಾಗಿದೆ. ಆದರೆ ಕಳೆದ ಎರಡು ತಿಂಗಳಿಂದ ಬುಡಕಟ್ಟು ನಾಯಕರು ಉಗ್ರರ ನಂಟನ್ನು ತ್ಯಜಿಸಿ ಅಮೆರಿಕ ನೇತೃತ್ವದ ಪಡೆಗಳಿಗೆ ಬೆಂಬಲಿಸಿದ್ದರಿಂದ ಹಿಂಸಾಚಾರವು ತೀವ್ರವಾಗಿ ತಗ್ಗಿದೆ.

ಚೆಕ್ ಪಾಯಿಂಟ್ ಬಳಿ ವಾಹನಗಳನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾಗ ಸಾಲಿನ ಕೊನೆಯಲ್ಲಿದ್ದ ವಾಹನವೊಂದು ಹಠಾತ್ತನೇ ಸ್ಫೋಟಿಸಿತೆಂದು ಪೊಲೀಸ್ ಲೆಫ್ಟಿನೆಂಟ್ ಹತೀಂ ಅಬೀದ್ ತಿಳಿಸಿದ್ದಾರೆ. ಗಾಯಗೊಂಡರವರಲ್ಲಿ ಕೆಲವರು ಗಂಭೀರ ಸ್ಥಿತಿಯಲ್ಲಿದ್ದು ಸತ್ತವರ ಸಂಖ್ಯೆ ಇನ್ನೂ ಹೆಚ್ಚಬಹುದೆಂದು ರಾಮಾಡಿ ಆಸ್ಪತ್ರೆಯ ವೈದ್ಯ ತಿಳಿಸಿದ್ದಾರೆ. ಅಮೆರಿಕ ಪಡೆಗಳು ಇರಾಕ್ ಪಟ್ಟಣಗಳು ಮತ್ತು ನಗರಗಳಿಂದ ಸಂಪೂರ್ಣವಾಗಿ ಹಿಂತೆಗೆದುಕೊಂಡ ಎರಡು ವಾರಗಳಲ್ಲೇ ಆತ್ಮಾಹುತಿ ಬಾಂಬ್ ದಾಳಿ ಸಂಭವಿಸಿದೆ.


ಉಗ್ರರಿಗೆ ಬೆಂಬಲಿಸುವಂತೆ ಜವಾಹರಿ ಒತ್ತಾಯ/ Al qaeda

ಅಮೆರಿಕ ನೇತತ್ವದ ಧರ್ಮಯುದ್ಧದ ವಿರುದ್ಧ ಹೋರಾಟದಲ್ಲಿ ಉಗ್ರಗಾಮಿಗಳಿಗೆ ಬೆಂಬಲಿಸುವಂತೆ 'ಅಲ್ ಖಾಯಿದಾ ನಂಬರ್ 2' ಅಯಮಾನ್ ಅಲ್ ಜವಾಹಿರಿ ತಿಳಿಸಿದ್ದಾನೆ. 8 ನಿಮಿಷಗಳು, 49 ಸೆಕೆಂಡ್ ಕಾಲಾವಧಿಯ 'ನನ್ನ ಮುಸ್ಲಿಂ ಸೋದರರು ಮತ್ತು ಸೋದರಿಯರು' ಹೆಸರಿನ ಇಂಗ್ಲೀಷ್ ಭಾಷೆಯ ವಿಡಿಯೊದಲ್ಲಿ ಪಾಕಿಸ್ತಾನದ ಮಿಲಿಟರಿ ಮತ್ತು ರಾಜಕೀಯದಲ್ಲಿ ಅಮೆರಿಕದ ಮಧ್ಯಸ್ಥಿಕೆಯಿಂದ ಅಣ್ವಸ್ತ್ರ ಸಜ್ಜಿತ ರಾಷ್ಟ್ರ ಚೂರಾಗಲು ಸಾಧ್ಯವೆಂದು ಜವಾಹಿರಿ ಹೇಳಿದ್ದಾನೆ.

ಜಿಹಾದಿ ವೆಬ್ ವೇದಿಕೆಗಳಲ್ಲಿ ವಿಡಿಯೊ ಚಿತ್ರವನ್ನು ಪೋಸ್ಟ್ ಮಾಡಲಾಗಿದೆಯೆಂದು ಸೈಟ್ ಗುಪ್ತಚರ ಮಾಹಿತಿ ತಿಳಿಸಿದೆ. ಪಾಕಿಸ್ತಾನವು ಎರಡು ಶಕ್ತಿಗಳ ನಡುವೆ ಭೀಕರ ಆಂತರಿಕ ಸಂಘರ್ಷದಲ್ಲಿ ಆಳವಾಗಿ ಮುಳುಗಿದೆ.

ಒಂದು ಇಸ್ಲಾಮಿಕ್ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ ಮತ್ತು ಇನ್ನೊಂದು ಪಾಶ್ಚಿಮಾತ್ಯ ಹಿತಾಸಕ್ತಿಯನ್ನು ಬೆದರಿಸುವ ಹೋರಾಟಗಾರರನ್ನು ನಿಸ್ಸತ್ವಗೊಳಿಸುವ ಅಮೆರಿಕ ನೇತೃತ್ವದ ಧರ್ಮಯುದ್ಧವೆನ್ನುವುದು ನಿಚ್ಚಳವಾಗಿದೆಯೆಂದು ಜವಾಹಿರಿ ತಿಳಿಸಿದ್ದಾನೆ. ನಾವು ಮುಜಾಹಿದ್ದೀನ್‌ಗೆ ಬೆಂಬಲ ನೀಡದೇ ಜಡವಾಗಿದ್ದರೆ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ನಾಶಕ್ಕೆ ಕೊಡುಗೆ ನೀಡುತ್ತೇವಲ್ಲದೇ, ಅಲ್ಲಾನ ನೋವಿನ ಶಿಕ್ಷೆಗೆ ಅರ್ಹರಾಗುತ್ತೇವೆ ಎಂದು ಜವಾಹಿರಿ ಹೇಳಿದ್ದಾನೆ.


ನ್ಯೂಜಿಲೆಂಡ್‌ನಲ್ಲಿ ಪ್ರಬಲ ಭೂಕಂಪ/Erthquake-New zealand

ವೆಲ್ಲಿಂಗ್‌ಟನ್: ದಕ್ಷಿಣ ನ್ಯೂಜಿಲೆಂಡ್‌ನಲ್ಲಿ ಭೀಕರ ಭೂಕಂಪ ಅಪ್ಪಳಿಸಿದೆಯೆಂದು ವರದಿಯಾಗಿದ್ದು ಅಪಾರ ಪ್ರಮಾಣದ ಸಾವುನೋವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ರಿಕ್ಟರ್‌ಮಾಪಕದಲ್ಲಿ 7.8 ತೀವ್ರತೆಯ ಭೂಕಂಪವು ಇನ್ವರ್‌ಕಾರ್ಗಿಲ್ ಪಶ್ಚಿಮಕ್ಕೆ 161 ಕಿಮೀ.ದೂರದ ನೈರುತ್ಯ ನ್ಯೂಜಿಲೆಂಡ್‌ನಲ್ಲಿ ಅಪ್ಪಳಿಸಿದ್ದಾಗಿ ಅಮೆರಿಕ ಬೌಗೋಳಿಕ ಸಮೀಕ್ಷೆ ವರದಿ ತಿಳಿಸಿದೆ. ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.

ಆದಾಗ್ಯೂ, ಪೆಸಿಫಿಕ್ ಸಾಗರದಲ್ಲಿ ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಭೂಕಂಪದಿಂದಾಗಿ ನ್ಯೂಜಿಲೆಂಡ್ ದಕ್ಷಿಣ ದ್ವೀಪದಲ್ಲೂ ಕಂಪನ ಉಂಟಾಗಿದೆ.ಯಾವುದೇ ಸಾವುನೋವಿನ ಬಗ್ಗೆ ವರದಿಯಾಗಿಲ್ಲ ಮತ್ತು ಭೂಕಂಪದಿಂದ ಸುನಾಮಿ ಎದ್ದಿರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಇಷ್ಟೊಂದು ತೀವ್ರತೆಯ ಭೂಕಂಪದಿಂದ ವಿನಾಶಕಾರಿ ಸುನಾಮಿ ಅಲೆಗಳು ಏಳುವ ಸಾಮರ್ಥ್ಯ ಹೊಂದಿದ್ದು, ಭೂಕಂಪಕೇಂದ್ರ ಬಿಂದುವಿನ ಬಳಿಯ ಕರಾವಳಿ ತೀರಗಳನ್ನು ಅಪ್ಪಳಿಸಬಹುದೆಂದು ಮುನ್ನೆಚ್ಚರಿಕೆ ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ.

ಸ್ಥಳೀಯ ಕಾಲಮಾನ ರಾತ್ರಿ 9.22ಕ್ಕೆ ಭೂಕಂಪವನ್ನು ಗುರುತಿಸಲಾಗಿದೆಯೆಂದು ವರದಿಗಳು ತಿಳಿಸಿವೆ. ನ್ಯೂಜಿಲೆಂಡ್ ಉತ್ತರ ದ್ವೀಪದಲ್ಲಿ ಕಳೆದ ತಿಂಗಳು 13 ಗಂಟೆಗಳಲ್ಲಿ 8 ಭೂಕಂಪಗಳ ಸರಣಿ ಅಪ್ಪಳಿಸಿದೆ. ನ್ಯೂಜಿಲೆಂಡ್ ಸುತ್ತಮುತ್ತ ಪ್ರತಿವರ್ಷ 10,000ದಿಂದ 15,000 ಭೂಕಂಪಗಳು ಅಪ್ಪಳಿಸುತ್ತಿವೆ. ನ್ಯೂಜಿಲೆಂಡ್‌ನಲ್ಲಿ ಅತ್ಯಂತ ಭೀಕರ ಭೂಕಂಪವು 1855ರಲ್ಲಿ ಸಂಭವಿಸಿದ ವೈರಾರಾಪ ಭೂಕಂಪವಾಗಿದೆ.


ಇರಾನ್ ವಿಮಾನ ಅಪಘಾತ: 168 ಜನರ ಸಾವು/Iran Plane Accident

ಇರಾನ್ :ವಾಯವ್ಯ ಇರಾನ್‌ನಲ್ಲಿ ಬುಧವಾರ ಸುಮಾರು 168 ಜನರಿದ್ದ ಪ್ರಯಾಣಿಕರ ವಿಮಾನ ಜನತಾಬಾದ್ ಗ್ರಾಮದಲ್ಲಿ ಅಪಘಾತಕ್ಕೀಡಾಗಿ ಎಲ್ಲ ಪ್ರಯಾಣಿಕರೂ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ.

ಟೆಹರಾನ್‌ನಿಂದ ಆರ್ಮೇನಿಯ ರಾಜಧಾನಿ ಯೆರೆವಾನ್ ಕಡೆಗೆ ತೆರಳುತ್ತಿದ್ದ ಕಾಸ್ಪಿಯನ್ ಏರ್‌ಲೈನ್ಸ್ ಜೆಟ್ ವಿಮಾನವು ಕಾಜ್ವಿನ್ ನಗರದ ಹೊರಗೆ ಜನ್ನತಾಬಾದ್ ಗ್ರಾಮದ ಬಳಿ ಪತನಗೊಂಡಿತೆಂದು ರಾಷ್ಟ್ರ ಸ್ವಾಮ್ಯದ ಟೆಲಿವಿಷನ್ ತಿಳಿಸಿದೆ. ವಿಮಾನವು ಅಪಘಾತದಿಂದ ಸಂಪೂರ್ಣ ನಾಶವಾಗಿದ್ದು, ಚೂರುಚೂರಾಗಿದೆಯೆಂದು ಮತ್ತು ಅವಶೇಷವು ಬೆಂಕಿಯ ಜ್ವಾಲೆಗೆ ತಿರುಗಿದ್ದಾಗಿ ಕಾಜ್ವಿನ್ ತುರ್ತು ಸೇವೆ ನಿರ್ದೇಶಕ ಹೊಸೈನ್ ಬಹಜಡ್‌ಪೋರ್ ತಿಳಿಸಿದ್ದಾರೆ.


ಕಾಸ್ಪಿಯನ್ ಏರ್‌ಲೈನ್ಸ್ ರಷ್ಯಾ-ಇರಾನ್ ಜಂಟಿ ಯೋಜನೆಯಾಗಿದ್ದು 1993ರಲ್ಲಿ ನಿರ್ಮಿಸಲಾಗಿದೆ. ಇರಾನ್‌ನಲ್ಲಿ ಆಗಾಗ್ಗೆ ವಿಮಾನ ಅಪಘಾತಗಳು ಉಂಟಾಗುತ್ತಿದ್ದು, ಅಮೆರಿಕದ ದಿಗ್ಬಂಧನದಿಂದಾಗಿ ಹಳೆಯ ವಿಮಾನಗಳಿಗೆ ಬಿಡಿಭಾಗ ಸಿಗುವುದು ಕಷ್ಟಾವಾದ್ದರಿಂದ ವಿಮಾನ ಅಪಘಾತಗಳು ಉಂಟಾಗುತ್ತಿದೆಯೆಂದು ಅಮೆರಿಕದ ಮೇಲೆ ಆರೋಪ ಹೊರಿಸಿದೆ.

 

ಉಡುಪಿ ಪರ್ಯಾಯಕ್ಕೆ 'ಕಟ್ಟಿಗೆ ಮುಹೂರ್ತ'/Udupi Paryaya


ಉಡುಪಿ: ಮುಂದಿನ ಪರ್ಯಾಯ ಪೀಠದ ಸ್ವಾಮೀಜಿಗಳಾದ ಶಿರೂರು ಮಠದ ಲಕ್ಷ್ಮೀವರತೀರ್ಥರು ತೃತೀಯ ಕೃಷ್ಣಪೂಜಾ ಪರ್ಯಾಯದ ಪೂರ್ವಭಾವಿ ಕಾರ್ಯಕ್ರಮ 'ಕಟ್ಟಿಗೆ ಮುಹೂರ್ತ'ಕ್ಕೆ ಮಂಗಳವಾರ ಮಧ್ವತೀರ್ಥದ ಬಳಿ ಚಾಲನೆ ನೀಡಿದರು.

ಸಾಂಪ್ರದಾಯಿಕ ರೀತಿಯಲ್ಲಿ ಸಿಂಗರಿಸಿದ ಶಿರೂರು ಮಠದಿಂದ ಡೋಲು, ತಮಟೆ, ನಗಾರಿ, ಆನೆಯ ಮೆರವಣಿಗೆಯೊಂದಿಗೆ ಸುಮುಹೂರ್ತ ಪ್ರಾರಂಭಿಸಿದ ಸ್ವಾಮೀಜಿ ಚಂದ್ರಮೌಳೇಶ್ವರ, ಅನಂತೇಶ್ವರ, ಕೃಷ್ಣಮಠ ಮತ್ತು ಮುಖ್ಯಪ್ರಾಣದೇವರ ಗುಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.


ಕನಕನ ಕಿಂಡಿಯಿಂದ ಕೃಷ್ಣನನ್ನು ನೋಡಿದರು, ಅಷ್ಟಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಅಲ್ಲಿಂದ ಕಟ್ಟಿಗೆ ಹೊತ್ತ ತಂಡದೊಂದಿಗೆ ರಥಬೀದಿಯನ್ನು ಸುತ್ತುಹಾಕಿ ಬಳಿಕ ಮಧ್ವಮಠದ ಬಳಿ ಬಂದು ಕಟ್ಟಿಗೆಯನ್ನು ಕಂಬಕ್ಕೆ ಆನಿಸಿ ಪುರೋಹಿತರಿಂದ ಅದನ್ನು ಪೂಜಿಸಿ ಕಟ್ಟಿಗೆ ಮುಹೂರ್ತಕ್ಕೆ ಅಧಿಕೃತ ಚಾಲನೆ ನೀಡಿದರು.

ಅಲ್ಲದೇ ಮಧ್ನಾಹ್ನ 12ರಿಂದ ರಾತ್ರಿ 12ರವರೆಗೆ ನಿರಂತರವಾಗಿ ಭಕ್ತರಿಗೆ ಅನ್ನಸಂತರ್ಪಣೆ ಮಾಡುವ ಮಹತ್ತರವಾದ ಉದ್ದೇಶ ಹೊಂದಿರುವುದಾಗಿ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಭಾಗಮಂಡಲದಲ್ಲಿ ವರುಣನ ರೌದ್ರಾವತಾರ; ಒಬ್ಬ ಬಲಿ/Rain-Bhagamandala-1Death


ರಾಜ್ಯದ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಬುಧವಾರವೂ ಕುಂಭದ್ರೋಣ ಮಳೆಯ ರೌದ್ರಾವತಾರ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಡಿಕೇರಿಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಹಲವಾರು ಮನೆಗಳು ಕುಸಿತಗೊಂಡಿದೆ.

ವರುಣನ ರೌದ್ರಾವತಾರದಿಂದಾಗಿ ರಸ್ತೆ ಸಂಚಾರ ಕಡಿದು ಹೋಗಿದೆ. ಕೆಲ ಜಿಲ್ಲೆಗಳ ಗ್ರಾಮಗಳು ಜಲಾವೃತವಾಗಿ ದ್ವೀಪಗಳಾಗಿ ಹೋಗಿವೆ. ಯುಗಚಿ ಜಲಾಶಯ ಭರ್ತಿಯಾಗಿದ್ದು, ಹಾರಂಗಿ ಜಲಾಶಯವೂ ಭರ್ತಿ ಆಗುತ್ತ ಸಾಗಿದೆ. ಭಾಗಮಂಡಲದಲ್ಲಿ ಅತೀ ಹೆಚ್ಚು ಅಂದರೆ ಸುಮಾರು 30 ಸೆಂಮೀ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಮಡಿಕೇರಿಯ ಭಾಗಮಂಡಲ ದ್ವೀಪವಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಕಡಿದು ಹೋಗಿದೆ. ತಲಕಾವೇರಿ-ಭಾಗಮಂಡಲ ವ್ಯಾಪ್ತಿಯಲ್ಲಿಯೂ ಮಳೆಯ ರೌದ್ರಾವತಾರ ಜೋರಾಗಿದ್ದು, ತ್ರಿವೇಣಿ ಸಂಗಮ ಮತ್ತೆ ಜಲಾವೃತವಾಗಿದೆ. ಭಾಗಮಂಡಲ-ಮಡಿಕೇರಿ ರಸ್ತೆಯ ಚಿಕ್ಕ ಕೊಳ್ಳದಂತಾಗಿದ್ದು, ರಸ್ತೆಯಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ. ಮಡಿಕೇರಿ-ಮೆಟ್ಟಳ್ಲಿ ಮತ್ತು ಮಡಿಕೇರಿ-ಮೂರ್ನಾಡು ನಡುವಿನ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. ಮಡಿಕೇರಿಯ ಮರಗೋಡು ಗ್ರಾಮದ ಕಾಫಿತೋಟದಲ್ಲಿ ಮರ ಉರುಳಿದ್ದರಿಂದ ಕಾರ್ಮಿಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಲಾಗಿದೆ.

ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಾಳಿಯೂ ಕೂಡಾ ಹುಚ್ಚೆದ್ದು ಬೀಸತೊಡಗಿದೆ. ಅಪಾಯ ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿರುವ ವರದಿಯಾಗಿದೆ. ಕೆಲವಡೆ ಭೂಕುಸಿತ ಉಂಟಾಗಿದೆ. ಮಲೆನಾಡಿನ ಸೆರಗು ಜಿಲ್ಲೆ ಹಾವೇರಿ ಜಿಲ್ಲೆಯಲ್ಲಿ ಕೂಡಾ ಮಳೆ ತೀವ್ರತೆ ಹೆಚ್ಚಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಭಾಗಮಂಡಲ-30, ಕೊಟ್ಟಿಗೆಹಾರ, ಕಮ್ಮರಡಿ-25, ಹಂಚದಕಟ್ಟೆ-23, ಕೊಲ್ಲೂರು-22, ಪೊನ್ನಂಪೇಟೆ-21, ಸಿದ್ದಾಪುರ-20, ಭಟ್ಕಳ-18, ಖಾನಾಪುರ, ಹೊಸನಗರ, ತೀರ್ಥಹಳ್ಳಿ-17, ಲಿಂಗನಮಕ್ಕಿ, ಜಯಪುರ-16, ಜಗಲ್ ಪೇಟೆ-15, ಸಿದ್ದಾಪುರ-14, ಧರ್ಮಸ್ಥಳ, ಯಲ್ಲಾಪುರ, ಮೂಡಿಗೆರೆ, ಮಡಿಕೇರಿ, ಎನ್ ಆರ್ ಪುರ-13 ಸೆಂ ಮೀನಷ್ಟು ಭಾರಿ ಮಳೆ ಬಿದ್ದಿದೆ.

ಪೇಜಾವರಶ್ರೀ ಸೇರಿ 11ಮಠಾಧೀಶರಿಗೆ ಭದ್ರತೆ/Security for Pejavara

ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಉಗ್ರರ ಬೆದರಿಕೆಯ ನಡುವೆ ಮಠಾಧೀಶರಿಗೂ ಬೆದರಿಕೆ ಕರೆ ಬರುತ್ತಿರುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ, ಪೇಜಾವರ ಮಠದ ಶ್ರೀವಿಶ್ವೇಶ್ವರತೀರ್ಥ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠಾಧೀಶ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸೇರಿದಂತೆ ರಾಜ್ಯದ 11 ಮಂದಿ ಮಠಾಧೀಶರಿಗೆ ರಾಜ್ಯ ಸರ್ಕಾರ ಭದ್ರತೆ ಒದಗಿಸಿದೆ.

ಸ್ವಾಮೀಜಿಗಳಿಗೆ ವಿವಿಧ ರೀತಿಯ ಬೆದರಿಕೆಗಳಿದ್ದು, ಬೆದರಿಕೆಯ ಸ್ವರೂಪ ಮತ್ತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸ್ವಾಮೀಜಿಗಳಿಗೆ ಭದ್ರತೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರ ವಾರ್ಷಿಕ 54.67ಲಕ್ಷ ರೂ.ವ್ಯಯಿಸುತ್ತಿದೆ.


ಜೆಡಿಎಸ್‌ನ ಎಸ್.ಬಸವರಾಜನ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹಸಚಿವ ವಿ.ಎಸ್.ಆಚಾರ್ಯ ಮಂಗಳವಾರ ಸದನದಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿವರ ನೀಡಿದ್ದಾರೆ.

ಈ ಸ್ವಾಮೀಜಿಗಳಿಗೆ ತಗಲುವ ಖರ್ಚನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಇದೇ ವೇಳೆ ರಾಜ್ಯದಲ್ಲಿ ಕೆಲವು ಖಾಸಗಿ ವ್ಯಕ್ತಿಗಳಿಗೂ ಭದ್ರತೆ ನೀಡಲಾಗುತ್ತಿದ್ದು, ಅದರ ವೆಚ್ಚವನ್ನು ಖಾಸಗಿ ವ್ಯಕ್ತಿಗಳೇ ಭರಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಬೆಂಗಳೂರಿನ ನಿಡುಮಾಮಿಡಿ ಮಠದ ಶ್ರೀವೀರಭದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಎಸ್.ಎಸ್.ಮುರುಘರಾಜೇಂದ್ರ ಸ್ವಾಮೀಜಿ, ಶೃಂಗೇರಿ ಮಠದ ಭಾರತೀತೀರ್ಥ ಸ್ವಾಮೀಜಿ, ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮುರುಘಾಮಠದ ಡಾ.ಶಿವಮೂರ್ತಿ ಮುರುಘ ಶರಣರು, ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ, ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಸುಜ್ಞೇಂದ್ರ ತೀರ್ಥ ಸ್ವಾಮೀಜಿಗಳಿಗೆ ಭದ್ರತೆ ಒದಗಿಸಿದೆ.


 

Wednesday, July 15, 2009

ರಿಕ್ಷಾ-ಕಾರು ಡಿಕ್ಕಿ: ಸಾವನ್ನಪ್ಪಿದ ಹಸುಗೂಸು/Payyannur Accident-Baby Death

ಕಾಸರಗೋಡು: ಆಟೋರಿಕ್ಷಾ ಮತ್ತು ಕಾರು ಡಿಕ್ಕಿ ಹೊಡೆದ ಪರಿಣಾಮ 4 ತಿಂಗಳ ಹಸುಗೂಸು ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಪಯ್ಯನ್ನೂರು ಬಳಿ ನಡೆದಿದೆ.
ಘಟನೆಯಲ್ಲಿ ಮಗು(ಮುಹಮ್ಮದ್ ದಾವೂದ್)ವಿನ ತಂದೆ ಸಿ.ಟಿ.ಅಬ್ದುಲ್ಲ, ತಾಯಿ ಸಜಿನಾ ಮತ್ತು ಆಟೋಚಾಲಕ ಶ್ರೀಧರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾದಲ್ಲಿ ಸಂಚರಿಸುತ್ತಿದ್ದ ಇವರ ಮಗು ರಸ್ತೆಗೆ ಬಿದ್ದು ಅಲ್ಲೇ ಸಾವನ್ನಪ್ಪಿದೆ.

ಮಳೆ-ಗಾಳಿ: ಕೈಕೊಟ್ಟ ವಿದ್ಯುತ್/Rain-power cut

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರಿಂದ ಮತ್ತೆ ಮಳೆ ಬಿರುಸುಗೊಂಡಿದ್ದು ಸಂಜೆಯಿಂದ ಬಿರುಗಾಳಿ ಆರಂಭವಾಗಿದೆ. ನಗರದಲ್ಲಿ ಬೆಳಗ್ಗಿನಿಂದಲೇ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿತ್ತು. ಬಿರುಗಾಳಿಗೆ ನಗರ ಮತ್ತು ಹೊರವಲಯದಲ್ಲಿ ವಿದ್ಯುತ್ ಸಂಪರ್ಕ ಕೈಕೊಟ್ಟಿದೆ. ರಾತ್ರಿ ವರೆಗೂ ವಿದ್ಯುತ್ ಸಂಪರ್ಕ ಸರಿಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ದೂರವಾಣಿ ಸಂಪರ್ಕವೂ ಕೆಟ್ಟು ಹೋಗಿದೆ.
 


ನಿಧನ
ಸತ್ಯವತಿ
ಮಂಜೇಶ್ವರ: ಹೊಸಂಗಡಿಯ ವ್ಯಾಪಾರಿ ಸುಂದರ ಎಂಬವರ ಪತ್ನಿ ಸತ್ಯವತಿ(56) ನಿಧನರಾದರು. ನಾಲ್ವರು ಮಕ್ಕಳಿದ್ದಾರೆ.

ಕುಞ್ಞಲಿಮಹಜ್ಜುಮ್ಮ
ಮಂಜೇಶ್ವರ: ಇಲ್ಲಿನ ಬಂದ್ಯೋಡು ಸಮೀಪದ ಚೆರುಗೋಳಿ ನಿವಾಸಿ ದಿ.ಅಬ್ದುಲ್ ರಹಮಾನ್ ಅವರ ಪತ್ನಿ ಕುಞ್ಞಲಿಮಹಜ್ಜುಮ್ಮ ಎಂಬವರು ನಿಧನರಾದರು. ಅವರಿಗೆ 104 ವಯಸ್ಸಾಗಿತ್ತು. 6 ಮಂದಿ ಮಕ್ಕಳಿದ್ದಾರೆ.

ಬಸ್ಸು ಉರುಳಿ 20 ಮಂದಿಗೆ ಗಾಯ/Bus Accident-20 injured

ಕಾಸರಗೋಡು: ನೀಲೇಶ್ವರದಿಂದ ತೈಕಡಪ್ಪುರಕ್ಕೆ ಹೋಗುತ್ತಿದ್ದ ಬಸ್ಸು ಉರುಳಿ ಬಿದ್ದು 20 ಮಂದಿ ಗಾಯಗೊಂಡ ಘಟನೆ ಬುಧವಾರ ಸಂಜೆ ನೀಲೇಶ್ವರ ಬಳಿ ಕಣಿಚ್ಚಿರ ಎಂಬಲ್ಲಿ ನಡೆದಿದೆ.
ಜೀಪಿಗೆ ಸರಿದು ಹೋಗುತ್ತಿದ್ದಂತೆ ಬಸ್ಸು ಉರುಳಿದೆ. ಗಾಯಾಳುಗಳನ್ನು ನೀಲೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಬಾಲಕಿಗೆ ಕಿರುಕುಳ: ಯುವಕನ ಸೆರೆ
ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ 8 ವರ್ಷದ ಬಾಲಕಿಗೆ ಕಿರುಕುಳ ನೀಡಿದ ಯುವಕನನ್ನು ನಗರ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
ಮೊಗ್ರಾಲ್ ಪುತ್ತೂರು ನಿವಾಸಿ ಆಟೋ ಚಾಲಕ ಆರೋಪಿಯಾಗಿದ್ದು, ಈತನನ್ನು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಮತ್ತು ಬಾಲಕಿಯ ಸಂಬಂಧಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಆಸ್ಪತ್ರೆಗೆ ರೋಗಿಯನ್ನು ಭೇಟಿ ಮಾಡುವ ಸೋಗಿನಲ್ಲಿ ಬಂದು ಮಂಗಳವಾರ ಬಾಲಕಿಗೆ ಕಿರುಕುಳ ನೀಡಿದ್ದು, ಇಂದು ಅದೇ ರೀತಿ ಬಂದ ಈತನ ಕೀಟಲೆಯನ್ನು ಸಹಿಸದ ಬಾಲಕಿ ಸಂಬಂಧಿಕರಿಗೆ ತಿಳಿಸಿದ್ದಳು.

 

ರಾಷ್ಟ್ರೀಯ ಹೆದ್ದಾರಿ ಕೆಟ್ಟುಹೋದ ರಾಷ್ಟ್ರೀಯ ಹೆದ್ದಾರಿ
ಮುಸ್ಲಿಂ ಯೂತ್ ಲೀಗ್ ರಸ್ತೆ ತಡೆ

ಮಂಜೇಶ್ವರ: ಉಪ್ಪಳದಿಂದ ಹೊಸಂಗಡಿ ವರೆಗೆ ರಾಷ್ಟ್ರೀಯ ಹೆದ್ದಾರಿ ಕೆಟ್ಟುಹೋಗಿದ್ದು, ಸಂಬಂಧಪಟ್ಟವರ ನಿರ್ಲಕ್ಷ್ಯವನ್ನು ಖಂಡಿಸಿ ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಮಂಡಲ ಸಮಿತಿಯ ನೇತೃತ್ವದಲ್ಲಿ ಬುಧವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ತಾಸುಗಳ ವರೆಗೆ ರಸ್ತೆ ತಡೆ ನಡೆಸಿದರು.
ಉಪ್ಪಳ ಗೇಟ್ ಬಳಿ ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷ ಚೆರ್ಕಳ ಅಬ್ದುಲ್ಲ ಉದ್ಘಾಟಿಸಿದರು. ಮಂಡಲ ಉಪಾಧ್ಯಕ್ಷ ಉಮ್ಮರ್ ಅಪೋಲೊ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಲೀಗ್ ಉಪಾಧ್ಯಕ್ಷ ಕಲ್ಲಡ ಮಾಹಿನ್, ಕಾರ್ಯದಶರ್ಿ ಕೆ.ಕೆ.ಅಬ್ದುಲ್ಲ ಕುಞ್ಞಿ ಚೆರ್ಕಳ, ಉಪಾಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಜಿಲ್ಲಾ ಕಾರ್ಯದಶರ್ಿ ಯೂಸೆಫ್ ಉಳುವಾರು, ಹನೀಫ್, ಎಂ.ಕೆ.ಆಲಿ ಮಾಸ್ಟರ್, ಬಿ.ಎಚ್.ಅಬ್ದುಲ್ಲ ಕುಞ್ಞಿ, ಬಿ.ಎಂ. ಮಾಹಿನ್, ಹಮೀದ್ ಕಲ್ಪನ, ಅಶ್ರಫ್ ಸಿಟಿಸನ್, ಎಂ.ಎಂ.ಇಬ್ರಾಹಿಂ, ಕೆ.ವಿ.ಯೂಸೆಫ್ ಹಾಜರಿದ್ದರು.



ಚಂದನದಲ್ಲಿ ಕಾಸರಗೋಡು ಚಿನ್ನಾ/Interview Kasaragod Chinna

ಕಾಸರಗೋಡು:  ಬೆಂಗಳೂರು ದೂರದರ್ಶನ ಪ್ರಸ್ತುತಪಡಿಸುವ `ಸಂಚಯ' ಕಾರ್ಯಕ್ರಮದಲ್ಲಿ ರಂಗನಟ, ನಿದರ್ೇಶಕ ಕಾಸರಗೋಡು ಚಿನ್ನಾ ಅವರ ಸಂದರ್ಶನ ಇದೇ 18ರಂದು ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದೆ.
ಇದೇ ಕಾರ್ಯಕ್ರಮ ಮರುದಿನ ಬೆಳಗ್ಗೆ 10 ಗಂಟೆಗೆ ಮರುಪ್ರಸಾರವಾಗಲಿದೆ. ಮೈಸೂರಿನ ಖ್ಯಾತ ಬರಹಗಾರ ಹಾಗೂ ಅಂಕಣಕಾರ ರವೀಂದ್ರ ಜೋಶಿ ಸಂದರ್ಶನ ನಡೆಸಿದ್ದಾರೆ.
 
 
ಬಿ.ಜೆ.ಪಿ. ಚೆಂಗಳ ಪಂಚಾಯ್ತಿ ಸಮಿತಿ ಸಭೆ
ಕಾಸರಗೋಡು: ಬಿ.ಜೆ.ಪಿ. ಚೆಂಗಳ ಪಂಚಾಯ್ತಿ ಮಟ್ಟದ ಚುನಾವಣಾ ಅವಲೋಕನಾ ಸಭೆ ಎಡನೀರಿನಲ್ಲಿ ಇತ್ತೀಚೆಗೆ ಜರುಗಿತು.
ಎಡನೀರು ವಿಷ್ಣುಮಂಗಲ ದೇವಸ್ಥಾನದಿಂದ ಚೆಂಬ್ರಪಾಡಿ ದೈವಸ್ಥಾನದ ವರೆಗೆ ರಸ್ತೆಯಲ್ಲಿಯೇ ಕೊಳಚೆ ನೀರು ಹರಿಯುತ್ತಿದ್ದು, ಶೀಘ್ರದಲ್ಲಿಯೇ ಚರಂಡಿಯನ್ನು ದುರಸ್ತಿಪಡಿಸಬೇಕು ಎಂದು ಸಭೆ ಆಗ್ರಹಿಸಿದೆ.
ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಗದೀಶ್ ಸಭೆಯನ್ನು ಉದ್ಘಾಟಿಸಿದರು. ಎಂ.ಕೆ.ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಮಂಡಲಾಧ್ಯಕ್ಷ ಎಸ್.ಕುಮಾರ್ ಹಾಜರಿದ್ದರು.
ರವಿಚಂದ್ರ ಕೆಮ್ಮಂಗಯ ಸ್ವಾಗತಿಸಿ, ಮಧುಸೂದನ ಕೆಮ್ಮಂಗಯ ವಂದಿಸಿದರು.


ಸಮಾಲೋಚನಾ ಸಭೆ
ಕಾಸರಗೋಡು: ಇಲ್ಲಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಮತ್ತು ಮಂಗಳೂರಿನ ಹೃದಯವಾಹಿನಿ ಪತ್ರಿಕೆ ಜಂಟಿ ಆಶ್ರಯದಲ್ಲಿ ಆ.1 ಮತ್ತು 2ರಂದು ಕಾಸರಗೋಡಿನ ಲಲಿತಕಲಾ ಸದನದಲ್ಲಿ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದ್ದು, ಇದರ ಯಶಸ್ವಿಗೆ ಇದೇ 18ರಂದು ಸಂಜೆ 3.30ಕ್ಕೆ ಸ್ವಾಗತ ಸಮಿತಿ ಸಮಾಲೋಚನಾ ಸಭೆ ನಡೆಯಲಿದೆ.

 

 

'ತುಳುವರು ಸಂಘರ್ಷ ಪ್ರಿಯರಲ್ಲ'/Tulu Certificate Cource

ಕಾಸರಗೋಡು: ತುಳುವರು ಸಂಘರ್ಷ ಪ್ರಿಯರಲ್ಲ. ಆದರೆ ತುಳುವರ ಜಗಳ-ಬೈಗುಳ ಕುತೂಹಲಕರವಾಗಿದೆ ಎಂದು ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಬುಧವಾರ ಇಲ್ಲಿ ವಿಶ್ಲೇಷಿಸಿದರು.
ಕಾಸರಗೋಡು ಸಕರ್ಾರಿ ಕಾಲೇಜಿನಲ್ಲಿ ಕೇರಳ ತುಳು ಅಕಾಡೆಮಿ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ ತುಳು ಸಟರ್ಿಫಿಕೆಟ್ ಕೋಸರ್ು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನರ್ಾಟಕದಲ್ಲಿ ತುಳುವಿನ ಬಗ್ಗೆ ಗಮನಾರ್ಹ ಕೆಲಸ ಇದು ವರೆಗೆ ನಡೆದಿಲ್ಲ ಎಂದು ಆರೋಪಿಸಿದ ಅವರು, ಕೇರಳ ತುಳು ಅಕಾಡೆಮಿಯ ಪಾಲಿಗೆ ಇದು(ತುಳು ಭಾಷಾ ಕಲಿಕೆ) ಚರಿತ್ರಾರ್ಹ ಸಾಧನೆ ಎಂದು ಶ್ಲಾಘಿಸಿದರು.
ನಿತ್ಯ ಹರಿದ್ವರ್ಣ ಭಾಷೆ:
ಕರಾವಳಿಯ ಮಣ್ಣು ತುಳು ಧಾಮರ್ಿಕ-ಭಾಷಾ ಸೌಹಾರ್ದತೆಯ ಸೇತುವಾಗಿದೆ. ಯುನೆಸ್ಕೋ ವರದಿಯ ಪ್ರಕಾರ ತುಳು ಕ್ಷೀಣಿಸುತ್ತಿರುವ ಭಾಷೆಯಲ್ಲ. ಅದು
ನಿತ್ಯ ಹರಿದ್ವರ್ಣ ಭಾಷೆಯಾಗಿದೆ ಎಂದೂ ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಆನಂದ್ ಸಿಂಗ್ ಮಾತನಾಡಿ, 5 ಪ್ರಾಚೀನ ಭಾಷೆಗಳಲ್ಲಿ ತುಳು ಒಂದು ಎಂದು ಒತ್ತಿ ಹೇಳಿದರು. ಕಾಸರಗೋಡಿನಿಂದ ಉಡುಪಿ ಜಿಲ್ಲೆಯ ವರೆಗೆ 30 ಲಕ್ಷದಷ್ಟು ಮಂದಿ ತುಳು ಭಾಷೆಯನ್ನಾಡುತ್ತಿದ್ದಾರೆ. ಸಟರ್ಿಫಿಕೆಟ್ ಕೋಸರ್ಿನಿಂದ ಭವಿಷ್ಯದಲ್ಲಿ ಸಂಶೋಧನೆಗೆ ವಿಪುಲ ಅವಕಾಶಗಳಿವೆ ಎಂದವರು ನುಡಿದರು.
ಅಕಾಡೆಮಿಯ ಅಧ್ಯಕ್ಷ ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಪ್ರಾಂಶುಪಾಲ ಮಾಧವನ್ ನಂಬ್ಯಾರ್, ತುಳು ಅಕಾಡೆಮಿ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಗೀತಾ ಸಾಮನಿ ಹಾಜರಿದ್ದರು. ಉಮೇಶ್ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಸಿ.ಎಚ್.ರಾಮ ಭಟ್ ಸ್ವಾಗತಿಸಿ, ಅಕಾಡೆಮಿಯ ಕಾರ್ಯದಶರ್ಿ ಎಂ.ಜಿ.ನಾರಾಯಣ ರಾವ್ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.


 

Tuesday, July 14, 2009

ರಿಯಾನ:10 ದಿನದೊಳಗೆ ಪತ್ತೆ ಮಾಡಲು ಹೈಕೋಟರ್ು ಆದೇಶ/RIyana:High Court

ಕಾಸರಗೋಡು: ಇಲ್ಲಿನ ಚೆಂಗಳ ತೈವಳಪ್ಪು ನಿವಾಸಿ ರಿಯಾನ ಎಂಬ ಬಾಲಕಿಯನ್ನು 10 ದಿನದೊಳಗೆ ಪತ್ತೆ ಮಾಡುವಂತೆ ಕೇರಳ ಹೈಕೋಟರ್ು ಆದೇಶ ನೀಡಿದೆ.
ಪತ್ತೆ ಮಾಡಿದ ಆಕೆಯನ್ನು ಕಾಸರಗೋಡು ಜ್ಯೂಡೀಶಿಯಲ್ ಪ್ರಥಮ ದಜರ್ೆ ಮೆಜಿಸ್ಟ್ರೇಟರ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕು ಎಂದು ಹೈಕೋಟರ್ು ವಿಭಾಗೀಯ ಪೀಠ ಕಟ್ಟಪ್ಪಣೆ ಮಾಡಿದೆ.
ಸಕರ್ಾರದ ವಕೀಲ ಪ್ರಕರಣದ ಬಗ್ಗೆ ಡಿವೈಎಸ್ಪಿ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸಮಜಾಯಿಷಿ ನೀಡಿದರೂ ನ್ಯಾಯಾಲಯ ತನ್ನ ಅತೃಪ್ತಿ ಪ್ರಕಟಿಸಿ ಈ ಆದೇಶ ನೀಡಿದೆ. ಅಲ್ಲದೆ ಇದೇ 24ರಂದು ರಿಯಾನಳನ್ನು ಹೈಕೋಟರ್ಿನಲ್ಲಿ ಹಾಜರುಪಡಿಸಬೇಕು ಎಂದೂ ಆದೇಶಿಸಿದೆ.
ಜನಪರ ನ್ಯಾಯ ವೇದಿಕೆ ಮತ್ತು ರಿಯಾನಳ ತಾಯಿ ಫೌಸಿಯಾ ಹೈಕೋಟರ್ಿನ ಮೆಟ್ಟಿಲೇರಿ ಹೇಬಿಯಸ್ ಕಾರ್ಪಸ್ ಅಜರ್ಿ ಸಲ್ಲಿಸಿದ್ದರು.
ಕಾಸರಗೋಡಿನ ವಿದ್ಯಾನಗರ ಸಮೀಪದ ನಾಯಮ್ಮಾರ್ಮೂಲೆಯ ಖಾಸಗಿ ಶಾಲೆಯ ವಿದ್ಯಾಥರ್ಿನಿಯಾಗಿದ್ದ ರಿಯಾನ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಳು.


ಕಾಞಂಗಾಡಿನಲ್ಲಿ ಹುಸಿ ಬಾಂಬ್ ಬೆದರಿಕೆ
ಕಾಸರಗೋಡು: ಕಾಞಂಗಾಡಿನ ನಿತ್ಯಾನಂದ ಪಾಲಿಟೆಕ್ನಿಕ್ ವಿದ್ಯಾ ಸಂಸ್ಥೆಯಲ್ಲಿ ಬಾಂಬ್ ಬೆದರಿಕೆ ಒಡ್ಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಸಂಸ್ಥೆಯ ಪ್ರಾಂಶುಪಾಲರಿಗೆ ಅನಾಮಿಕ ವ್ಯಕ್ತಿ ಎರಡು ಬಾರಿ ಕರೆ ಮಾಡಿ ಬಾಂಬ್ ಬೆದರಿಕೆ ಒಡ್ಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಡಿವೈಎಸ್ಪಿ ಹಬೀಬ್ ರಹಮಾನ್, ಸಿ.ಐ. ಕೆ.ಅಶ್ರಫ್ ವಿದ್ಯಾಥರ್ಿಗಳು ಮತ್ತು ಅಧ್ಯಾಪಕರನ್ನು ಹೊರಗೆ ಕಳುಹಿಸಿ ತಪಾಸಣೆ ನಡೆಸಿದರು. ನಗರದಿಂದ ಶ್ವಾನದಳ ಪರಿಶೀಲನೆ ನಡೆಸಿದಾಗ ಹುಸಿ ಬೆದರಿಕೆ ಎಂಬುದು ಖಾತರಿಯಾಯಿತು.
  
 
ಸಮುದ್ರದಲ್ಲಿ ನಾಪತ್ತೆಯಾದ ಬಾಲಕನ ಶವ ಪತ್ತೆ
 
ಕಾಸರಗೋಡು: ಕಾಞಂಗಾಡು ಬಳಿ ಮುಟ್ಟತ್ತಲ ಕೋತ್ತಿಂಗಾಲ್ ಅಳಿವೆ ಪ್ರದೇಶದಲ್ಲಿ ಸಮುದ್ರಕ್ಕೆ ಆಟವಾಡಲು ಇಳಿದು ಭಾನುವಾರ ನಾಪತ್ತೆಯಾಗಿದ್ದ ಬಾಲಕನ ಶವ ಮಂಗಳವಾರ ಮುಂಜಾನೆ  ಪತ್ತೆಯಾಗಿದೆ.
ಮುಟ್ಟತ್ತಲ ನಿವಾಸಿ ಆಲಿ ಅವರ ಪುತ್ರ ಮುಹಮ್ಮದ್ ಕುಞ್ಞಿ(15) ಪತ್ತೆಯಾದ ಬಾಲಕ. ಈತ ತನ್ನ ಸಹೋದರನ ಜತೆಯಲ್ಲಿ  ಆಟವಾಡುತ್ತಿದ್ದಾಗ ಅಲೆಗಳ ಹೊಡೆತಕ್ಕೆ ಸಿಕ್ಕಿ ನಾಪತ್ತೆಯಾಗಿದ್ದನು.
ಮೀನುಗಾರಿಕಾ ಇಲಾಖೆಯ ಬೋಟ್, ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು.

ಬಾವಿಗೆ ಬಿದ್ದು ಯುವಕ ಸಾವು
ಮಂಜೇಶ್ವರ: ಯುವಕನೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿದ  ಘಟನೆ ಮಂಗಳವಾರ ಬೆಳಗ್ಗೆ ಪೆಮರ್ುದೆ ಸಮೀಪ ಮುನ್ನೂರಿನಲ್ಲಿ  ನಡೆದಿದೆ.
ಮುನ್ನೂರಿನ ಮಂಜಪ್ಪ ಮೂಲ್ಯರ ಪುತ್ರ ಸತೀಶ್ ಕುಲಾಲ್(30) ಸಾವನ್ನಪ್ಪಿದ ವ್ಯಕ್ತಿ. ನೀರು ಸೇದುವ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ. ಕೂಲಿ ಕಾಮರ್ಿಕರಾಗಿದ್ದರು. ವಿಷಯ ತಿಳಿದು ನಗರದಿಂದ ಬಂದ ಅಗ್ನಿಶಾಮಕ ದಳ ಶವವನ್ನು ಮೇಲಕ್ಕೆತ್ತಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ.

ಅಪರಿಚಿತ ವ್ಯಕ್ತಿಗೆ ರೈಲು ಡಿಕ್ಕಿ
ಕಾಸರಗೋಡು: ರೈಲಿನಿಂದ ಬಿದ್ದು ಗಂಭೀರ ಗಾಯಗೊಂಡ ಅಪರಿಚಿತ ವ್ಯಕ್ತಿಯೊಬ್ಬರು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಕುಂಬಳೆ ಸಮೀಪದ ಶಿರಿಯ ದೇವಸ್ಥಾನದ ಬಳಿಯ ರೈಲ್ವೇ ಹಳಿಯಲ್ಲಿ ರಕ್ತಸಿಕ್ತ ದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ಯಾಂಟ್ ಮತ್ತು ಅಂಗಿ ಧರಿಸಿದ್ದು, 45 ವರ್ಷ ಅಂದಾಜಿಸಲಾಗಿದೆ.

ಕಾಡುಹಂದಿ ಆಕ್ರಮಿಸಿ ಇಬ್ಬರು ಆಸ್ಪತ್ರೆಗೆ
ಕಾಸರಗೋಡು: ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಕಾಡುಹಂದಿ ಆಕ್ರಮಿಸಿದ ಪರಿಣಾಮ ಸವಾರರು ಗಾಯಗೊಂಡ ಘಟನೆ ಬೋವಿಕ್ಕಾನ ಬಳಿ ಸೋಮವಾರ ರಾತ್ರಿ ನಡೆದಿದೆ.
ಬೋವಿಕ್ಕಾನ ಸಮೀಪದ ಕಾಟಿಪಳ್ಳ ನಿವಾಸಿಗಳಾದ ಕೆ.ಅಜೀರ್ ಮತ್ತು ಕೆ.ರಫೀಕ್ ಗಾಯಗೊಂಡವರು. ಬೈಕ್ನ ಹಿಂಭಾಗದಿಂದ  ಹಂದಿ ಆಕ್ರಮಿಸಿದೆ ಎಂದು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳು ತಿಳಿಸಿದ್ದಾರೆ.

 
ಬೈಕ್ಗಳಿಗೆ ಕಾರು ಡಿಕ್ಕಿ: ನಾಲ್ವರು ಆಸ್ಪತ್ರೆಗೆ
 
ಕಾಸರಗೋಡು: ಕ್ವಾಲಿಸ್ ಕಾರು ಬೈಕುಗಳಿಗೆ ಡಿಕ್ಕಿ ಹೊಡೆದು ನರ್ಸರಿ ವಿದ್ಯಾಥರ್ಿ ಸಹಿತ ನಾಲ್ವರು ಗಾಯಗೊಂಡ ಘಟನೆ ವಿದ್ಯಾನಗರದ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.
ಆಲಂಪಾಡಿ ಎಮರ್ಾಳ ನಿವಾಸಿ ಮೊಯ್ದೀನ್, ನರ್ಸರಿ ವಿದ್ಯಾಥರ್ಿಯಾಗಿರುವ ಇವರ ಪುತ್ರ ಮನ್ಸೂರ್, ಚರ್ಲಡ್ಕದ ನಾರಾಯಣ, ಚೇನೆಕ್ಕೋಡಿನ ಚಂದ್ರಶೇಖರ ಗಾಯಗೊಂಡವರು.
ನಾರಾಯಣ ಅವರು ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 
 
ನಾಳೆಯಿಂದ ಸ್ಕೌಟ್ ಅಧ್ಯಾಪಕರಿಗೆ ತರಬೇತಿ
ಕಾಸರಗೋಡು: ಸ್ಕೌಟ್ ವಿಭಾಗದಲ್ಲಿ ಬೇಸಿಕ್ ಕೋಸರ್ಿನ ಅಂಗವಾಗಿ 16 ಮತ್ತು 17ರಂದು ಕಾಸರಗೋಡು ಸ್ಕೌಟ್ ಭವನದಲ್ಲಿ ತರಬೇತಿ ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಘಟಕಗಳು ಇಲ್ಲದ ಹಾಗೂ ನಿಷ್ಕ್ರಿಯವಾಗಿರುವ ಶಾಲೆಗಳ ಅಧ್ಯಾಪಕರು ಭಾಗವಹಿಸಬೇಕು ಎಂದು ಜಿಲ್ಲಾ ಸ್ಕೌಟ್ ಆಯುಕ್ತರಾದ ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನ್ದಾಸ್ ತಿಳಿಸಿದ್ದಾರೆ.
 
 
ಮಂಜೇಶ್ವರ ಕಾಲೇಜನಲ್ಲಿ ಸೀಟು 
ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಕರ್ಾರಿ ಕಾಲೇಜಿನಲ್ಲಿ ಪ್ರಥಮ ವರ್ಷ ಬಿ.ಎ., ಟಿ.ಟಿ.ಎಂ. ಕೋಸರ್ುಗಳಿಗೆ ಪರಿಶಿಷ್ಟ ವಿಭಾಗದ ಸೀಟು ತೆರವಾಗಿದೆ. ಅರ್ಹತೆ ಇರುವ ವಿದ್ಯಾಥರ್ಿಗಳು ಇದೇ 17ರಂದು ಬೆಳಗ್ಗೆ 10.30ಕ್ಕೆ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.
 

'ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರ ಪಾತ್ರ ಮಹತ್ತರ'/NSS Prog in Govt College

ಕಾಸರಗೋಡು: ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ಕಾಸರಗೋಡು ಸಕರ್ಾರಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಸುಭಾಶ್ ಇತ್ತೀಚೆಗೆ ಹೇಳಿದರು.
ವಿಶ್ವಜನಸಂಖ್ಯೆ ದಿನಾಚರಣೆಯ ಅಂಗವಾಗಿ ಕಾಸರಗೋಡು ಸಕರ್ಾರಿ ಕಾಲೇಜಿನ ಎನ್.ಎಸ್.ಎಸ್. ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಮಾಧವನ್ ನಂಬ್ಯಾರ್ ಉದ್ಘಾಟಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರನಾರಾಯಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸ ಶ್ರೀನಾಥ್ ಎ., ಯೋಜನಾಧಿಕಾರಿ ಮಹಮ್ಮದಾಲಿ ಪೆರ್ಲ ಹಾಜರಿದ್ದರು.
ಕಾರ್ಯದಶರ್ಿ ಮಹೇಶ್ ಸ್ವಾಗತಿಸಿ, ಜಿನೇಶ್ ವಂದಿಸಿದರು.
 

ಕಸಿಕಟ್ಟುವ ವಿಧಾನ: ಪ್ರಾತ್ಯಕ್ಷಿಕೆ
ಬೇಳ(ಕಾಸರಗೋಡು): ನರ್ಸರಿಗಳಿಗೆ ದುಬಾರಿ ಹಣ ನೀಡದೆ ಸ್ವತಃ ಕಸಿ ಕಟ್ಟಬಹುದಾಗಿದ್ದು, ಇದಕ್ಕೆ ಪ್ರಾಯೋಗಿಕತೆ ಮತ್ತು ನಿರಂತರ ತರಬೇತಿ ಅತ್ಯಗತ್ಯ ಎಂದು ಪೆರ್ಲ ಸತ್ಯನಾರಾಯಣ ಶಾಲೆಯ ನೇಚರ್ ಕ್ಲಬ್ಬಿನ ಸಂಚಾಲಕ ಉಮೇಶ್ ಕೆ. ಪೆರ್ಲ ಅಭಿಪ್ರಾಯಪಟ್ಟರು.
ಬೇಳ ಸಂತ ಬಾರ್ತಲೋಮೆಯ ಶಾಲೆಯಲ್ಲಿ 7ನೇ ತರಗತಿಯ ಮಕ್ಕಳಿಗೆ ಕಸಿಕಟ್ಟುವ ವಿಧಾನ ಬಗ್ಗೆ ಇತ್ತೀಚೆಗೆ ಏರ್ಪಡಿಸಿದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.
ಪ್ರಾತ್ಯಕ್ಷಿಕೆಯಲ್ಲಿ ಗುಲಾಬಿ, ಮಾವು, ಹಾಗೂ ದಾಸವಾಳಗಳಿಗೆ ಕಸಿ ಕಟ್ಟುವ ವಿಧಾನಗಳಾದ ಗ್ರಾಫ್ಟಿಂಗ್, ಬಡ್ಡಿಂಗ್, ಲೇಯರಿಂಗ್ ಬಗ್ಗೆ ಮಾಹಿತಿ ನೀಡಿದರು.
ನೇಚರ್ ಕ್ಲಬ್ಬಿನ ಸದಸ್ಯರಾದ ರತನ್ ಕುಮಾರ್ ಹಾಗೂ ಕೃತಿಕಾ ಸಹಕರಿಸಿದರು.
ಶಾಲಾ ಸಾವನ್ ಡೇಮಿಯನ್ ಡಿ'ಸೋಜಾ ವಂದಿಸಿದರು.
 
 
ವಿದ್ಯಾಥರ್ಿಗೆ ಕ್ಯಾನ್ಸರ್: ಸಹಾಯಕ್ಕೆ ಮೊರೆ
ಕಾಸರಗೋಡು: ಕ್ಯಾನ್ಸರ್ ಬಾಧಿಸಿದ ಬಾಲಕನ ಕುಟುಂಬ ಚಿಕಿತ್ಸೆ ನಡೆಸಲು ಆಥರ್ಿಕ ಸೌಲಭ್ಯವಿಲ್ಲದೆ ಕಂಗೆಟ್ಟಿದೆ.
ಮಧೂರು ಉಳಿಯತ್ತಡ್ಕ ಸಮೀಪದ ಚೇನೆಕ್ಕೋಡು ನಿವಾಸಿ ಸಿ.ಎಚ್.ಬಾಲಕೃಷ್ಣ ಅವರ ಪುತ್ರ ಉದಯಕುಮಾರ್ ಎಂಬಾತ ಸಂಕಷ್ಟಕ್ಕೆ ಒಳಗಾದವನು. ಈತನ ಊದಿಕೊಂಡಿದ್ದ ಎಡಗಾಲನ್ನು ತಪಾಸಣೆ ಮಾಡಿದ ವೈದ್ಯರು ಕ್ಯಾನ್ಸರ್ ಬಾಧಿಸಿದ್ದನ್ನು ಖಾತರಿಪಡಿಸಿದ್ದು, ಇದರ ಚಿಕಿತ್ಸೆಗೆ ಸು.4 ಲಕ್ಷ ರೂ. ಅಗತ್ಯವಿದೆ.
ಈತ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವಿದ್ಯಾಥರ್ಿಯಾಗಿದ್ದ ಈತ ಕಳೆದ ಶೈಕ್ಷಣಿಕ ವರ್ಷ ರೋಗದಿಂದ ಎಸ್.ಎಸ್.ಎಲ್.ಸಿ.ಯ ಎಲ್ಲಾ ಪರೀಕ್ಷೆಯನ್ನೂ ಬರೆದಿಲ್ಲ. ಹೀಗಾಗಿ ಶೈಕ್ಷಣಿಕ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಉದಯ ಕುಮಾರ್ನ ತಾಯ್ತಂದೆಯರು ಬಡವರಾಗಿದ್ದು, ಕೂಲಿ ಕಾಮರ್ಿಕರಾಗಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ಕಂಗಾಲಾಗಿದ್ದಾರೆ. ಮಧೂರು ಸೇವಾ ಸಹಕಾರಿ ಬ್ಯಾಂಕಿನಲ್ಲಿ ಬಾಲಕನ ತಂದೆ ಬಾಲಕೃಷ್ಣರ ಹೆಸರಲ್ಲಿ 1659 ಸಂಖ್ಯೆಯ ಉಳಿತಾಯ ಖಾತೆ ತೆರೆಯಲಾಗಿದೆ. ಸಂಘ-ಸಂಸ್ಥೆ ಮತ್ತು ದಾನಿಗಳು ಆಥರ್ಿಕ ಸಹಾಯ ನೀಡುವಂತೆ ಬಾಲಕನ ಹೆತ್ತವರು ಮನವಿ ಮಾಡಿದ್ದಾರೆ.

 
ಚಿಕಿತ್ಸಾ ಯೋಜನೆ ಜಾರಿಗೆ ಪಿಂಚಣಿದಾರರ ಆಗ್ರಹ
 
ಕಾಸರಗೋಡು: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಪಿಂಚಣಿಯನ್ನು ಪರಿಷ್ಕರಿಸಬೇಕು, ನೂತನ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಪಿಂಚಣಿದಾರರ ಮಧೂರು ಪಂಚಾಯ್ತಿ ಘಟಕದ ವಿಶೇಷ ಸಭೆ ಆಗ್ರಹಿಸಿದೆ.
ಸೋಮವಾರ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಜರುಗಿದ ಸಭೆಯನ್ನು ಸಂಘಟನೆಯ ಕಾಸರಗೋಡು ಗ್ರಾಮಾಂತರ ಬ್ಲಾಕ್ ಸಮಿತಿ ಅಧ್ಯಕ್ಷ ಜನಾರ್ದನನ್ ನಂಬ್ಯಾರ್ ಉದ್ಘಾಟಿಸಿದರು. ಹೊಸ ಸದಸ್ಯತ್ವವನ್ನು ಬಿ.ಪ್ರಭಾಕರ ಅಗ್ಗಿತ್ತಾಯ ಉದ್ಘಾಟಿಸಿದರು.
ಎ.ರಾಮ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಎಂ.ಕುಞ್ಞಿಕಣ್ಣನ್ ನಂಬ್ಯಾರ್, ಎ.ರಾಧಾಕೃಷ್ಣನ್ ನಾಯರ್, ಇ.ಪ್ರಭಾಕರ ಪೊದುವಾಳ್, ಬಿ.ಪುರುಷೋತ್ತಮ, ಕೆ.ರಘು, ಕೆ.ಸಿ.ಅಚ್ಯುತನ್, ಕೆ.ಸೀತಾರಾಮ ಹಾಜರಿದ್ದರು. ಪಿ.ಪಿ.ಕುಞ್ಞಿಕಣ್ಣನ್ ವರದಿ ಮಂಡಿಸಿದರು. 
ಬಿ.ಬಾಲಕೃಷ್ಣ ಅಗ್ಗಿತ್ತಾಯ ಸ್ವಾಗತಿಸಿ, ನಿರ್ಮಲ್ ಕುಮಾರ್ ವಂದಿಸಿದರು.
 

Monday, July 13, 2009

ಹಾಡುಹಗಲೇ ಮನೆಗೆ ನುಗ್ಗಿ 60 ಪವನ್ ಚಿನ್ನಾಭರಣ ಕಳವು/Stolen - Gold


ಕಾಸರಗೋಡು: ಹಾಡುಹಗಲೇ ಮನೆಗೆ ನುಗ್ಗಿ 60 ಪವನ್ ಚಿನ್ನಾಭರಣ ಕಳವು ಮಾಡಿದ ಘಟನೆ ಇಲ್ಲಿನ ಬೋವಿಕ್ಕಾನದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ನಿವಾಸಿ, ಬೋವಿಕ್ಕಾನ ಶಾಲೆಯ ಶಿಕ್ಷಕಿ ಸರೋಜ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೋಡಿಕೊಂಡು ಕಳವು ನಡೆಸಲಾಗಿದೆ. ಮಧ್ಯಾಹ್ನ ಸರೋಜ ಅವರು ಶಾಲೆಯಿಂದ ಮನೆಗೆ ಬಂದಾಗ ಅಡುಗೆ ಕೋಣೆಯ ಬಾಗಿಲು ತೆರೆದಿತ್ತು. ಮಲಗುವ ಕೋಣೆಯ ಕಪಾಟಿನಲ್ಲಿದ್ದ ಆಭರಣಗಳನ್ನು ಕಳವು ಮಾಡಲಾಗಿದೆ. ಎರಡು ಸರ, ಒಂದು ನೆಕ್ಲೆಸ್, 10 ಬಳೆಗಳು, ಆರು ಜತೆ ಬೆಂಡೋಲೆಗಳು, ಮೂರು ಕೈಸರಗಳು ಕಳ್ಳರ ಪಾಲಾಗಿದೆ. ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

 
ಪೆರಿಯ ಗ್ರಾಮೀಣ ಬ್ಯಾಂಕಿನಲ್ಲಿ ಕಳವು
ಆರೋಪಿಗಳ ಸುಳಿವು ಲಭ್ಯ
ಕಾಸರಗೋಡು: ಇಲ್ಲಿನ ಪೆರಿಯ ನಾತರ್್ ಮಲಬಾರ್ ಗ್ರಾಮೀಣ ಬ್ಯಾಂಕಿನಲ್ಲಿ ಕಳವು ನಡೆಸಿದ ಆರೋಪಿಗಳ ಬಗ್ಗೆ ತನಿಖಾ ತಂಡಕ್ಕೆ ಸುಳಿವು ಲಭಿಸಿದೆ.
ಉಪ್ಪಳದ ತಂಡ ಕಳವು ನಡೆಸಲು ಸ್ಕೆಚ್ ಹಾಕಿದೆ. ಆದರೆ ವಿಯೂರ್ ಕೇಂದ್ರೀಯ ಜೈಲ್ನಿಂದ ಶಿಕ್ಷೆ ಮುಗಿದು ಹೊರ ಬಂದ ಮೂವರು ತಮಿಳರು ಕಳವು ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.
ಪಿಕ್ಪಾಕೆಟ್ ಪ್ರಕರಣದಲ್ಲಿ ವಿಯೂರ್ ಜೈಲಿನಲ್ಲಿರುವ ಇಲ್ಲಿನ ಪೊಯಿನಾಚಿಯ ಆರೋಪಿಯೋರ್ವನನ್ನು ವಿಚಾರಣೆಗೆ ಒಡ್ಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ತಾನು ಕಾಸರಗೋಡಿನಲ್ಲಿ ನಡೆಸಿದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದೇನೆ ಎಂದೂ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂಬ ವಿಶ್ವಾಸವನ್ನು ಪೊಲೀಸರು ಪ್ರಕಟಿಸಿದ್ದಾರೆ.
 
 
ರಿಯಾನ ನಾಪತ್ತೆ ಪ್ರಕರಣ
ನಗರದಲ್ಲಿ ಸತ್ಯಾಗ್ರಹ
ಕಾಸರಗೋಡು: ನಾಪತ್ತೆಯಾದ ರಿಯಾನ ಎಂಬ ಬಾಲಕಿಯನ್ನು ಪತ್ತೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಜನಪರ ನ್ಯಾಯ ವೇದಿಕೆ ಕಾಸರಗೋಡು ಹೊಸ ಬಸ್ಸು ನಿಲ್ದಾಣದ ವಠಾರದಲ್ಲಿ ಸೋಮವಾರ ಸತ್ಯಾಗ್ರಹ ನಡೆಸಿತು.
ಹೈಕೋಟರ್ು ವಕೀಲ ಕೆ.ವಿ.ರಾಮಚಂದ್ರನ್ ಉದ್ಘಾಟಿಸಿದರು. ಅಧ್ಯಕ್ಷ ಮಮ್ಮು ಚಾಲ ಅಧ್ಯಕ್ಷತೆ ವಹಿಸಿದರು. ನಾರಾಯಣನ್ ಪೆರಿಯ, ಪತ್ರಕರ್ತ ಕೆ.ಎಂ.ಅಹಮ್ಮದ್, ಟಿ.ಕೆ.ರಾಜನ್, ಎನ್.ಎ.ನೆಲ್ಲಿಕುಂಜೆ, ಕರಿವೆಳ್ಳೂರು ವಿಜಯನ್ ಹಾಜರಿದ್ದರು.
ತನಿಖೆ:
ರಿಯಾನಳ ಪತ್ತೆಗಾಗಿ ಪೊಲೀಸರು ಕನರ್ಾಟಕ ಮತ್ತು ಚೆನ್ನೈಯಲ್ಲಿ ತನಿಖೆ ನಡೆಸುತ್ತಿದ್ದಾರೆ.
ಕನರ್ಾಟಕದ ಮಂಗಳೂರು, ಪುತ್ತೂರು, ಸುಳ್ಯ ಎಂಬಲ್ಲಿ ತನಿಖೆ ನಡೆಸಲಾಗಿದೆ. ವಸತಿ ಗೃಹ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿಯೂ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನೊಂದು ಪಾಲಕ್ಕಾಡು ಮತ್ತು ಕೊಯಂಬತ್ತೂರಿನಲ್ಲಿ ತನಿಖೆ ನಡೆಸಿದೆ. ಚೆನ್ನೈಯಲ್ಲಿ ತಂಡ ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆರೆಗೆ ಬಿದ್ದು ಸಾವು
ಕಾಸರಗೋಡು: ಸ್ನಾನ ಮಾಡಲು ಕೆರೆಗೆ ಇಳಿದ ವ್ಯಕ್ತಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕುಂಬಳೆ ಸಮೀಪದ ಪುತ್ತಿಗೆಯಲ್ಲಿ ಇಂದು ನಡೆದಿದೆ.
ಪುತ್ತಿಗೆ ಧೂಮಣ್ಣ ರೈ ಅವರ ಪುತ್ರ ವಿಠಲ ರೈ(48) ಸಾವನ್ನಪ್ಪಿದ ವ್ಯಕ್ತಿ. ಪತ್ನಿ ಜಯಂತಿ ಮತ್ತು ನಾಲ್ವರು ಮಕ್ಕಳಿದ್ದಾರೆ.
ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಾವು
ಕಾಸರಗೋಡು: ಆಟೋರಿಕ್ಷಾ ಮಗುಚಿ ದಾದಿ ಸಾವನ್ನಪ್ಪಿದ ಘಟನೆ ಕಾಞಂಗಾಡು ಸಮೀಪದ ಪೊತಾವೂರ್ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಪೋತಾವೂರು ನಿವಾಸಿ ಅಂಜಲಿ(19) ಸಾವನ್ನಪ್ಪಿದ ವ್ಯಕ್ತಿ. ಈಕೆ ಪಯ್ಯನ್ನೂರಿನ ಆಸ್ಪತ್ರೆಯೊಂದರಲ್ಲಿ ದಾದಿಯಾಗಿದ್ದಳು.


ಮಹಿಳೆಯ ಹೊಟ್ಟೆಯಲ್ಲಿ 12 ಕಿಲೋ ಗಡ್ಡೆ
ಕಾಸರಗೋಡು: ಮಹಿಳೆಯೊಬ್ಬರ ಹೊಟ್ಟೆಯಿಂದ 12 ಕಿಲೋ ಗಡ್ಡೆಯನ್ನು ಶಸ್ತ್ರಕ್ರಿಯೆ ಮೂಲಕ ಹೊರತೆಗೆದ ಘಟನೆ ಸೋಮವಾರ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೇಲ್ಪರಂಬ ನಿವಾಸಿ ಮೊಯ್ದೀನ್ ಕುಞ್ಞಿ ಅವರ ಪತ್ನಿ ಆಯಿಷಾ ಕೆ. ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

 



ಮಲೆನಾಡು ಹೆದ್ದಾರಿ: ಕಾಸರಗೋಡಿಗೆ ಆದ್ಯತೆ/Malnad Highway

ಕಾಸರಗೋಡು: ಮಲೆನಾಡು ಹೆದ್ದಾರಿ(ಮಲೆನಾಡ್ ಹೈವೇ) ಸಾಕ್ಷ್ಯಾತ್ಕಾರಕ್ಕೆ ರಾಜ್ಯ ಸಕರ್ಾರ ಬದ್ಧವಾಗಿದ್ದು, ಜಿಲ್ಲೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವ ಮೋನ್ಸ್ ಜೋಸೆಫ್ ಭಾನುವಾರ ಹೇಳಿದರು.
ಮಂಜೇಶ್ವರದ ಉಪ್ಪಳದಲ್ಲಿ ಪತ್ವಾಡಿ ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
2021ರಲ್ಲಿ ಗುರಿ ಇರಿಸಿ ಕೇಂದ್ರ ಸಕರ್ಾರ ರೂಪೀಕರಿಸಿದ ರಸ್ತೆ ಕಾಯ್ದೆಗೆ ಅನುಸಾರವಾಗಿ ರಾಜ್ಯದಲ್ಲಿಯೂ ರಸ್ತೆ ಕಾಯ್ದೆ ರೂಪಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ 47 ಮತ್ತು 17ನ್ನು 45 ಮೀ. ಆಗಿ ನವೀಕರಿಸಲಾಗುವುದು.
ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪ್ರತ್ಯೇಕ ಆದ್ಯತೆ ನೀಡಿ  ಮಲಬಾರ್ ಪ್ಯಾಕೇಜ್ನ ಅಂಗವಾಗಿ ಜಿಲ್ಲೆಯ ರಸ್ತೆ ಮತ್ತು ಸೇತುವೆಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದವರು ತಿಳಿಸಿದರು.
ರಾಜ್ಯದಲ್ಲಿ ಕೆಟ್ಟುಹೋದ ರಸ್ತೆಗಳ ದುರಸ್ತಿ ಕಾರ್ಯ ಮಳೆಗಾಲ ಕಳೆದ ಬಳಿಕ ಆರಂಭಿಸಲಾಗುವುದು. ಮಂಜೇಶ್ವರ-ಉಪ್ಪಳ ರಸ್ತೆ ನವೀಕರಣ ಯೋಜನೆ ಕೇಂದ್ರೀಯ ರಸ್ತೆ ಪ್ರಾಜೆಕ್ಟ್ನಲ್ಲಿ ಸೇರಿಸಿ ಜಾರಿಗೊಳಿಸಲಾಗುವುದು ಎಂದೂ ಅವರು ಹೇಳಿದರು.
ಉಪ್ಪಳ ಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಞ್ಞಂಬು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ, ಬಿ.ಎಚ್.ಅಬ್ದುಲ್ಲ ಕುಞ್ಞಿ, ಮಂಗಲ್ಪಾಡಿ ಪಂಚಾಯ್ತಿ ಅಧ್ಯಕ್ಷ ಎಂ. ಆನಂದ, ಮೀಂಜ ಪಂಚಾಯ್ತಿ ಅಧ್ಯಕ್ಷ ಕೆ.ಅಬ್ದುಲ್ಲ, ಯು.ಎ.ಖಾದರ್, ಡಿ.ಪ್ರಭಾಕರ ಚೌಟ, ಅನ್ನಮ್ಮ, ಬಿ.ಎಂ.ಮಾಯಿನ್ ಹಾಜರಿದ್ದರು.
ಬಳಿಕ ಚೆಮ್ನಾಡು-ಚೆಂಗಳ ಪಂಚಾಯ್ತಿಗಳನ್ನು ಸಂಪಕರ್ಿಸುವ ಪೆರುಂಬಳಕಡವು ಸೇತುವೆಯನ್ನು ಸಚಿವರು ಉದ್ಘಾಟಿಸಿದರು.
ಪೆರುಂಬಳದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ವಿ.ಕುಞ್ಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ.ಟಿ.ಅಹಮ್ಮದಾಲಿ, ಸಿ.ಎಚ್.ಕುಞ್ಞಂಬು, ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ, ಚೆಮ್ನಾಡು ಪಂಚಾಯ್ತಿ ಅಧ್ಯಕ್ಷ ಪಾದೂರು ಕುಞ್ಞಂಬು, ಚೆಂಗಳ ಪಂಚಾಯ್ತಿ ಅಧ್ಯಕ್ಷೆ ಆಯಿಷಾ ಚೆರ್ಕಳ ಅಬ್ದುಲ್ಲ ಹಾಜರಿದ್ದರು.
 
ಇಂದು ಕಾವುಗೋಳಿಯಲ್ಲಿ ಪಿಂಚಣಿದಾರರ ಸಮಾವೇಶ
ಕಾಸರಗೋಡು: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಮೊಗ್ರಾಲ್ ಪುತ್ತೂರು ಪಂಚಾಯ್ತಿ ಘಟಕದ ವಿಶೇಷ ಸಮಾವೇಶ ಇದೇ 14ರಂದು ಸಂಜೆ 3 ಗಂಟೆಗೆ ಕೂಡ್ಲು  ಕಾವುಗೋಳಿಯಲ್ಲಿ ಜರುಗಲಿದೆ.
ಪಿಂಚಣಿದಾರರ ಬೇಡಿಕೆ ಈಡೇರಿಸುವಂತೆ ಇದೇ 29ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಸಂಚಾಲಕ ಬಿ.ಬಾಲಕೃಷ್ಣ ಅಗ್ಗಿತ್ತಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
 
ಪಿ.ಅಪ್ಪುಕುಟ್ಟನ್ ಮಾಸ್ಟರ್ಗೆ ನಾಂಗಿ ಪುರಸ್ಕಾರ

ಕಾಸರಗೋಡು: ಪತ್ರಕರ್ತ, ಅಧ್ಯಾಪಕ ನಾಂಗಿ ಅಬ್ದುಲ್ಲ ಮಾಸ್ಟರ್ ಸ್ಮಾರಕ ಟ್ರಸ್ಟ್ ಪುರಸ್ಕಾರಕ್ಕೆ ಪಿ.ಅಪ್ಪುಕುಟ್ಟನ್ ಮಾಸ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟಿನ ಪದಾಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
10,001 ರೂ. ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು. ಇದೇ ತಿಂಗಳ ಕೊನೆಯ ವಾರ ನಗರದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪತ್ರಕರ್ತ ಕೆ.ಎಂ.ಅಹಮ್ಮದ್, ಟ್ರಸ್ಟಿನ ಎನ್.ಎ.ಮುಹಮ್ಮದಾಲಿ, ನಾರಾಯಣನ್ ಪೆರಿಯ, ಕೆ.ಎಂ.ಅಬ್ಬಾಸ್, ಬಕ್ಕರ್ ಚೆರ್ಕಳ, ಅಶ್ರಫ್ ಐಪ ಹಾಜರಿದ್ದರು.
 
ಮಿಸಿರಿಯಾ ಪ್ರಕರಣ: 18ರಂದು ಧರಣಿ
 
ಕಾಸರಗೋಡು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯ ಬಳಿಕ ಹಾಸಿಗೆ ಹಿಡಿದ ಪೊವ್ವಲ್ ನಿವಾಸಿ ಮಿಸಿರಿಯಾ ಪ್ರಕರಣವನ್ನು ಖಂಡಿಸಿ ಸಂಯುಕ್ತ ಹೋರಾಟ ಸಮಿತಿ ಇದೇ 18ರಂದು ನಗರದ ಹೊಸ ಬಸ್ಸು ನಿಲ್ದಾಣದಲ್ಲಿ ಧರಣಿ ನಡೆಸಲಿದೆ ಎಂದು ಸಮಿತಿಯ ಪದಾಧಿಕಾರಿಗಳು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೊಂದ ಕುಟುಂಬಕ್ಕೆ 5 ಲಕ್ಷ ನಷ್ಟ ಪರಿಹಾರ ಬಯಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಸಮಿತಿ ತಿಳಿಸಿದೆ.
 
ತುಳು ಸಟರ್ಿಫಿಕೇಟ್ ಕೋಸರ್ು
ಕಾಸರಗೋಡು: ಕೇರಳ ತುಳು ಅಕಾಡೆಮಿಯ ಆಶ್ರಯದಲ್ಲಿ ತುಳು ಸಟರ್ಿಫಿಕೇಟ್ ಕೋಸರ್ು ಆರಂಭಿಸಲು ನಿರ್ಧರಿಸಲಾಗಿದ್ದು, ಇದೇ 15ರಂದು ಕಾಸರಗೋಡು ಸಕರ್ಾರಿ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಆನಂದ್ ಸಿಂಗ್ ಉದ್ಘಾಟಿಸುವರು ಎಂದು ಕೇರಳ ತುಳು ಅಕಾಡೆಮಿಯ ಪದಾಧಿಕಾರಿಗಳು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತುಳು 8ನೇ ಪರಿಚ್ಛೇದಕ್ಕೆ ಸೇರಿದರೆ ಕೋಸರ್ಿನಿಂದ ಪ್ರಯೋಜನ ಲಭಿಸಲಿದೆ. ಜಿಲ್ಲೆಯ ಕಾಲೇಜು ವಿದ್ಯಾಥರ್ಿಗಳ ಸಹಿತ ಆಸಕ್ತರು ಕೋಸರ್ಿಗೆ ಅಜರ್ಿ ಸಲ್ಲಿಸಬಹುದು. ಕಾಸರಗೋಡು ಸಕರ್ಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಕೋಸರ್ು ನಡೆಯಲಿದೆ ಎಂದವರು ವಿವರಿಸಿದರು.
ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ  ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ, ಕಾರ್ಯದಶರ್ಿ ಎಂ.ಜಿ.ನಾರಾಯಣ ರಾವ್ ಮತ್ತು ಸದಸ್ಯ ಉಮೇಶ್ ಸಾಲಿಯಾನ್ ಹಾಜರಿದ್ದರು.
 
 
ಹಜ್ ಯಾತ್ರೆ ಸಿದ್ಧತಾ ತರಬೇತಿ ಶಿಬಿರ
ಮಂಜೇಶ್ವರ: ಹಜ್ ಯಾತ್ರೆ ಸಿದ್ಧತಾ ತರಬೇತಿ ಶಿಬಿರ ಉಪ್ಪಳದ ಅಲ್ ವಫಾ ಹಜ್ ಉಮ್ರಾ ಸವರ್ಿಸ್ನ ನೇತೃತ್ವದಲ್ಲಿ ಉಪ್ಪಳ ಸಿ.ಎಚ್.ಸೌಧದಲ್ಲಿ ಇದೇ 18ರಂದು ಜರುಗಲಿದೆ.
ಅಂದು ಬೆಳಗ್ಗೆ 9.30ಕ್ಕೆ ಆಲಿಕುಞ್ಞಿ ಮುಸ್ಲಿಯಾರ್ ಉದ್ಘಾಟಿಸುವರು. ಎಂ.ಪಿ.ಇಬ್ರಾಹಿಂ ಫೈಸಿ ಶಿಬಿರ ನಡೆಸುವರು.

 


Sunday, July 12, 2009

ಆಟವಾಡಲು ಸಮುದ್ರಕ್ಕಿಳಿದ ಬಾಲಕ ನಾಪತ್ತೆ/Missed Boy Near Ajanur

ಕಾಸರಗೋಡು: ಇಲ್ಲಿನ ಅಜಾನೂರು ಮುಟ್ಟಂತಲ ಕೋತ್ತಿಕ್ಕಾಲ್ ಕಡಪ್ಪುರದಲ್ಲಿ ಈಜಾಡಲು ಸಮುದ್ರಕ್ಕಿಳಿದ 10ನೇ ತರಗತಿಯ ಬಾಲಕ ನಾಪತ್ತೆಯಾದ ಘಟನೆ ಭಾನುವಾರ ಸಂಜೆ ನಡೆದಿದೆ.
ಕಾಞಂಗಾಡಿನ ಇಕ್ಬಾಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾಥರ್ಿ ಹಾಗೂ ಮುಟ್ಟಂತಲ ಕೋತ್ತಿಕ್ಕಾಲ್ ನಿವಾಸಿ ಆಲಿ ಕುಟ್ಟಿಪ್ಪುರ ಅವರ ಪುತ್ರ ಮುಹಮ್ಮದ್ ಕುಞ್ಞಿ(15) ಎಂಬ ಬಾಲಕನೇ ಕಾಣೆಯಾದವನು.
ತನ್ನ ಸಹೋದರ ಸಕೀರ್ನ ಜತೆಯಲ್ಲಿ ನೀರಿಗಿಳಿದ ಈತ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕಿ ಮುಳುಗಿ ನಾಪತ್ತೆಯಾಗಿದ್ದಾನೆ.
ಕಾಸರಗೋಡಿನಿಂದ ಬಂದ ಅಗ್ನಿಶಾಮಕ ದಳ ರಾತ್ರಿ ವರೆಗೂ ಸಮುದ್ರದಲ್ಲಿ ಹುಟುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೂ ಸ್ಥಳದಲ್ಲಿದ್ದಾರೆ.



ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕು/Kalathur Bank

ಕಾಸರಗೋಡು: ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಕಳತ್ತೂರು ಶಾಖೆಯನ್ನು
ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಇತ್ತೀಚೆಗೆ ಉದ್ಘಾಟಿಸಿದರು.
ಬ್ಯಾಂಕಿನ ಅಧ್ಯಕ್ಷ ಎಚ್.ಶಿವರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಭದ್ರತಾ
ಕೊಠಡಿಯನ್ನು ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ವಿ.ಕೋಮನ್
ನಂಬ್ಯಾರ್ ಉದ್ಘಾಟಿಸಿದರು. ಠೇವಣಿ ಪತ್ರವನ್ನು ಸಹಕಾರಿ ಇಲಾಖೆಯ ನೋಂದಣಿ ಅಧಿಕಾರಿ
ಕೆ.ಎನ್. ಜಗದೀಶನ್ ನಂಬ್ಯಾರ್ ವಿತರಿಸಿದರು. ಸಾಲಪತ್ರವನ್ನು ಪುತ್ತಿಗೆ ಪಂಚಾಯ್ತಿ
ಅಧ್ಯಕ್ಷ ತೋಮಸ್ ಡಿ'ಸೋಜಾ ವಿತರಿಸಿದರು.
ಬೇಳ ಶೋಕ ಮಾತಾ ದೇವಾಲಯದ ಪ್ರಧಾನ ಧರ್ಮಗುರು ಬಾಸಿಲ್ ವಾಸ್, ಸರ್ಕಲ್ ಸಹಕಾರಿ
ಯೂನಿಯನ್ ಕಾಸರಗೋಡು ಜಿಲ್ಲಾಧ್ಯಕ್ಷ ಪಿ.ವಿ.ಜಯರಾಜನ್, ಸಹಕಾರಿ ಇಲಾಖೆಯ
ವಿ.ಸುಧಾಕರನ್, ಕುಂಬಳೆ ಪಂಚಾಯ್ತಿ ಸದಸ್ಯ ಕೆ.ಸುರೇಶ್ ಕುಮಾರ್ ಶೆಟ್ಟಿ, ಪುತ್ತಿಗೆ
ಪಂಚಾಯ್ತಿ ಸದಸ್ಯ ಜಿ.ವಿಶ್ವನಾಥ್, ಸಹಕಾರ ಭಾರತಿ ಜಿಲ್ಲಾ ಕಾರ್ಯದಶರ್ಿ ಐತ್ತಪ್ಪ
ಪಿ.ಮವ್ವಾರ್, ಬ್ಯಾಂಕಿನ ಸ್ಥಾಪಕ ಎಚ್. ರಘುರಾಮ ಆಳ್ವ. ಕುಂಬಳೆ ಸಹಕಾರಿ ಬ್ಯಾಂಕಿನ
ಅಧ್ಯಕ್ಷ ಬಿ.ವಿಶ್ವನಾಥ ಆಳ್ವ, ಮುಗು ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಸ್.ನಾರಾಯಣ,
ಅಂಗಡಿಮೊಗರು ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಿ.ಪಿ.ಮಂಜುನಾಥ ಭಂಡಾರಿ, ನೀಚರ್ಾಲು
ಕೃಷಿಕರ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ಜಿ.ವಿಶ್ವೇಶ್ವರ ಭಟ್ ಪುತ್ತಿಗೆ, ಎಣ್ಮಕಜೆ
ಅರ್ಬನ್ ಸೇವಾ ಸಂಘದ ಎಂ. ಗಣೇಶ್ ರಾವ್, ವ್ಯಾಪಾರಿ ವ್ಯವಸಾಯ ಏಕೋಪನಾ ಸಮಿತಿಯ
ಕಳತ್ತೂರು ಘಟಕದ ಅಧ್ಯಕ್ಷ ಶ್ರೀನಿವಾಸ ಆಳ್ವ, ಕೇರಳ ಸಹಕಾರಿ ಎಂಪ್ಲಾಯೀಸ್ ಯೂನಿಯನ್ನ
ಜಿಲ್ಲಾಧ್ಯಕ್ಷ ಎಂ.ಅಶೋಕ್ ರೈ ಹಾಜರಿದ್ದರು.
ಬ್ಯಾಂಕಿನ ಕಾರ್ಯದರ್ಶಿ ಎ.ಕೃಷ್ಣಭಟ್ ವರದಿ ಮಂಡಿಸಿದರು. ನಿದರ್ೇಶಕರಾದ ಜಯಂತ ಪಾಟಾಳಿ
ಸ್ವಾಗತಿಸಿ, ಹರಿಣಿ ಜಿ.ಕೆ.ನಾಯಕ್ ವಂದಿಸಿದರು.


ಪತ್ವಾಡಿ ಸೇತುವೆ ಉದ್ಘಾಟನೆ
ಕಾಸರಗೋಡು: ಮಂಜೇಶ್ವರ ಉಪ್ಪಳ ಸಮೀಪದ ಪತ್ವಾಡಿ ಸೇತುವೆಯನ್ನು ರಾಜ್ಯ ಲೋಕೋಪಯೋಗಿ
ಸಚಿವ ಮೋನ್ಸ್ ಜೋಸೆಫ್ ಭಾನುವಾರ ಉದ್ಘಾಟಿಸಿದರು.
ಉಪ್ಪಳ ಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಞ್ಞಂಬು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ, ಬಿ.ಎಚ್.ಅಬ್ದುಲ್ಲ ಕುಞ್ಞಿ, ಮಂಗಲ್ಪಾಡಿ ಪಂಚಾಯ್ತಿ
ಅಧ್ಯಕ್ಷ ಎಂ. ಆನಂದ, ಮೀಂಜ ಪಂಚಾಯ್ತಿ ಅಧ್ಯಕ್ಷ ಕೆ.ಅಬ್ದುಲ್ಲ, ಯು.ಎ.ಖಾದರ್,
ಡಿ.ಪ್ರಭಾಕರ ಚೌಟ, ಅನ್ನಮ್ಮ, ಬಿ.ಎಂ.ಮಾಯಿನ್ ಹಾಜರಿದ್ದರು.
ಬಳಿಕ ಚೆಮ್ನಾಡು-ಚೆಂಗಳ ಪಂಚಾಯ್ತಿಗಳನ್ನು ಸಂಪಕರ್ಿಸುವ ಪೆರುಂಬಳಕಡವು ಸೇತುವೆಯನ್ನು
ಸಚಿವರು ಉದ್ಘಾಟಿಸಿದರು.
ಪೆರುಂಬಳದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ವಿ.ಕುಞ್ಞಿರಾಮನ್ ಅಧ್ಯಕ್ಷತೆ
ವಹಿಸಿದ್ದರು. ಶಾಸಕರಾದ ಸಿ.ಟಿ.ಅಹಮ್ಮದಾಲಿ, ಸಿ.ಎಚ್.ಕುಞ್ಞಂಬು, ಮಾಜಿ ಶಾಸಕ ಚೆರ್ಕಳ
ಅಬ್ದುಲ್ಲ, ಚೆಮ್ನಾಡು ಪಂಚಾಯ್ತಿ ಅಧ್ಯಕ್ಷ ಪಾದೂರು ಕುಞ್ಞಂಬು, ಚೆಂಗಳ ಪಂಚಾಯ್ತಿ
ಅಧ್ಯಕ್ಷೆ ಆಯಿಷಾ ಚೆರ್ಕಳ ಅಬ್ದುಲ್ಲ ಹಾಜರಿದ್ದರು.


ಸಮುದ್ರ ತೀರದ ಗ್ರಾಮಗಳಲ್ಲಿ ಜನಗಣತಿ
ಕಾಸರಗೋಡು: ಜಿಲ್ಲೆಯ ಸಮುದ್ರ ತೀರದ ಗ್ರಾಮಗಳಲ್ಲಿ ಜನಗಣತಿ ನಡೆಸುವ ಕ್ರಮ ಆರಂಭಗೊಂಡಿದೆ.
ಇದಕ್ಕೆ ಸಂಬಂಧಿಸಿ ಜಿಲ್ಲೆಯ 15 ಗ್ರಾಮಗಳ ಜನಗಣತಿ ಪ್ರಕ್ರಿಯೆ ಆಗಸ್ಟ್ ತಿಂಗಳಲ್ಲಿ
ನಡೆಯಲಿದೆ. ಕುಂಜತ್ತೂರು, ಕಡಂಬಾರ್, ಉಪ್ಪಳ, ಇಚ್ಲಂಗೋಡು, ಬೇಳ, ಬಂಬ್ರಾಣ,
ಕೊಯಿಪ್ಪಾಡಿ, ಕಳನಾಡು, ಪಳ್ಳಿಕ್ಕೆರೆ, ಚಿತ್ತಾರಿ, ಅಜಾನೂರು, ಪಡನ್ನ, ಉದಿನೂರು,
ಸೌತ್ ತೃಕ್ಕರಿಪುರ ಗ್ರಾಮಗಳಲ್ಲಿ ಜನಗಣತಿ ನಡೆಯಲಿದೆ. ಜನಗಣತಿ ನಡೆಸಲು 359
ಮಂದಿಯನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ.
ಕೇಂದ್ರ ಜನಗಣತಿ ನಿರ್ದೇಶನಾಲಯ, ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ಗಳ ಸಹಕಾರದಲ್ಲಿ
ಜನಗಣತಿ ನಡೆಯಲಿದೆ. ಪ್ರತಿ ಮನೆಗಳಲ್ಲಿಯೂ 15 ಪ್ರಶ್ನಾವಳಿಗಳ ಉತ್ತರಗಳನ್ನು
ಲ್ಯಾಪ್ಟಾಪ್ ಕಂಪ್ಯೂಟರ್ಗಳಲ್ಲಿ ದಾಖಲಿಸಲಾಗುವುದು.
ಇದಕ್ಕೆ ಸಂಬಂಧಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಕಂದಾಯ,
ಪಂಚಾಯ್ತಿ, ಮೀನುಗಾರಿಕಾ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಆನಂದ್ ಸಿಂಗ್
ಅಧ್ಯಕ್ಷತೆ ವಹಿಸಿದ್ದರು.
ಜನಗಣತಿ ಉಪ ನಿರ್ದೇಶಕ ಫ್ರಾನ್ಸಿಸ್ ಕೆ.ಮ್ಯಾನ್ವೆಲ್, ಇಂಡಿಯನ್ ಟೆಲಿಫೋನ್
ಇಂಡಸ್ಟ್ರೀಸ್ ಜನರಲ್ ಮೇನೇಜರ್ ಬಶೀರ್ ಮುಹಮ್ಮದ್, ಎ.ಡಿ.ಎಂ. ಸಿ.ವಾಸುದೇವ
ಹಾಜರಿದ್ದರು.


ಜಿಲ್ಲಾ ಪಂಚಾಯ್ತಿ : 56 ಪ್ರಾಜೆಕ್ಟ್ಗಳಿಗೆ ಅಂಗೀಕಾರ
ಕಾಸರಗೋಡು: ಜಿಲ್ಲಾ ಪಂಚಾಯ್ತಿ ಅಭಿವೃದ್ಧಿ ವಿಚಾರಸಂಕಿರಣದಲ್ಲಿ ಮಂಡಿಸಿದ 56
ಪ್ರಾಜೆಕ್ಟ್ಗಳಿಗೆ ಅಂಗೀಕಾರ ಲಭಿಸಿದೆ.
ಹೊಸ ಪ್ರಾಜೆಕ್ಟ್ಗಳಿಗೆ 11.60 ಕೋಟಿ ರೂ. ಮೀಸಲಿಡಲಾಗಿದೆ. ಉತ್ಪಾದನೆ ವಲಯದಲ್ಲಿ
ಕೃಷಿ ಸಂಬಂಧಿ ಯೋಜನೆಗಳಿಗೆ 2.67 ಕೋಟಿ ರೂ., ಶಿಕ್ಷಣ, ಅಂಗವಿಕಲರ ಕಲ್ಯಾಣ, ಕುಡಿಯುವ
ನೀರು, ಅಂಗನವಾಡಿ ಮೊದಲಾದ ಸೇವಾ ವಲಯಕ್ಕೆ 4.05 ಕೋಟಿ ರೂ., ರಸ್ತೆ ಕಾಮಗಾರಿಗಳಿಗೆ
88 ಲಕ್ಷ ರೂ., ಪರಿಶಿಷ್ಟ ಜಾತಿ ಕಲ್ಯಾಣ ಯೋಜನೆಗಳಿಗೆ 2.22 ಕೋಟಿ ರೂ., ಪರಿಶಿಷ್ಟ
ವರ್ಗ ಕಲ್ಯಾಣ ಯೋಜನೆಗಳಿಗೆ 1.75 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಹಣ
ಮೀಸಲಿಡಲಾಗಿದೆ.
200 ಹೆಕ್ಟೇರ್ ಪ್ರದೇಶದಲ್ಲಿ ಅನ್ನಪೂರ್ಣ ಭತ್ತ ಕೃಷಿ ಅಭಿವೃದ್ದಿ ಯೋಜನೆಗೆ 15 ಲಕ್ಷ
ರೂ, ಕುಟುಂಬಶ್ರೀ ತರಕಾರಿ ಕೃಷಿಗೆ 12 ಲಕ್ಷ ರೂ. ಕೃಷಿ ಉಪಕರಣಗಳನ್ನು ವಿತರಿಸಲು 75
ಲಕ್ಷ ರೂ., ಸಮಗ್ರ ತೆಂಗು ಕೃಷಿ ಅಭಿವೃದ್ಧಿ ಯೋಜನೆಗೆ 70 ಲಕ್ಷ ರೂ., ಬೀಜೋತ್ಪಾದನಾ
ಕೇಂದ್ರಗಳ ಅಭಿವೃದ್ಧಿಗೆ 10 ಲಕ್ಷ ರೂ., ಅಡಿಕೆ ಕೃಷಿ ಅಭಿವೃದ್ಧಿಗೆ 15 ಲಕ್ಷ ರೂ.,
ಕುಟುಂಬಶ್ರೀ ಉತ್ಪನ್ನಗಳ ಮಾರಾಟ ಕೇಂದ್ರಗಳಿಗೆ 50 ಲಕ್ಷ ರೂ. ಕಾಯ್ದಿರಿಸಲಾಗಿದೆ.
ಸೇವಾ ವಲಯದಲ್ಲಿ ಐ.ಎ.ವೈ. ಗೃಹ ನಿರ್ಮಾಣ ಯೋಜನೆಗೆ 1.17 ಕೋಟಿ ರೂ., ಬಹು
ಮಾಧ್ಯಮ(ಮಲ್ಟಿ ಮೀಡಿಯ) ತರಗತಿ ಕೊಠಡಿ ನಿರ್ಮಾಣಕ್ಕೆ 80 ಲಕ್ಷ ರೂ., ಎಸ್.ಎಸ್.ಎ.
ಯೋಜನೆಗೆ 58.58 ಲಕ್ಷ ರೂ., ಅಂಗನವಾಡಿ ಕಟ್ಟಡ ಮತ್ತು ಕುಡಿಯುವ ನೀರು ಪೂರೈಕೆಗೆ 30
ಲಕ್ಷ ರೂ., ಆಶ್ರಯ ಯೋಜನೆಗೆ 20 ಲಕ್ಷ ರೂ., ಎಚ್.ಐ.ವಿ. ಬಾಧಿತರ ಪುನರ್ವಸತಿಗೆ 10
ಲಕ್ಷ ರೂ., ಝೀರೋ ವೇಸ್ಟ್ ಯೋಜನೆಗೆ 10 ಲಕ್ಷ ರೂ.ಗಳನ್ನು ತೆಗೆದಿರಿಸಲಾಗಿದೆ.
ಜಿಲ್ಲೆಯಲ್ಲಿ 18 ರಸ್ತೆಗಳ ಯೋಜನೆಗೆ 88 ಲಕ್ಷ ರೂ. ಮೌಲ್ಯದ ಯೋಜನೆಗಳನ್ನು
ರೂಪಿಸಲಾಗಿದೆ. ಕುಂಬಳೆಯ ಪೂಕಟ್ಟೆ-ಬಾಯಿಕಟ್ಟೆ-ಬತ್ತೇರಿ ರಸ್ತೆ(4 ಲಕ್ಷ ರೂ.),
ಕೊಟ್ಟೋಡಿ-ವಾವಡ್ಕ ರಸ್ತೆ(3.5 ಲಕ್ಷ ರೂ.), ದೈಗೋಳಿಯ ಮೀಯಪದವು-ಚಿಗುರುಪಾದೆ
ರಸ್ತೆ(6 ಲಕ್ಷ ರೂ.), ನಯಾಬಜಾರ್-ಅಂಬಾರ್ ರಸ್ತೆ(7 ಲಕ್ಷರೂ.), ಬಾಂಬುಳಿಮೂಲೆ
ಸಾಯ-ಮರಕ್ಕಿಣಿ ರಸ್ತೆ(5 ಲಕ್ಷ ರೂ.) ಸಹಿತ 18 ರಸ್ತೆಗಳನ್ನು ಈ ಯೋಜನೆಯಡಿ
ಅಭಿವೃದ್ಧಿಪಡಿಸಲಾಗುವುದು.
ವಿಚಾರಸಂಕಿರಣವನ್ನು ಜಿಲ್ಲಾಧಿಕಾರಿ ಆನಂದ್ ಸಿಂಗ್ ಉದ್ಘಾಟಿಸಿದರು. ಜಿಲ್ಲಾ
ಪಂಚಾಯ್ತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಗೀತಾಕೃಷ್ಣನ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ವಿ.ನಾರಾಯಣ್,
ಪಿ.ಬಿ.ಅಬ್ದುಲ್ ರಸಾಕ್, ವಿ.ಪಿ.ಪಿ.ಮುಸ್ತಫಾ ಹಾಜರಿದ್ದರು.


ನಿಧನ
ಮೊಹಮ್ಮದ್
ಮಂಜೇಶ್ವರ: ಇಲ್ಲಿನ ವರ್ಕಾಡಿ ಸಮೀಪದ ಕೆದಂಬಾಡಿ ನಿವಾಸಿ ಮೊಹಮ್ಮದ್(44)
ಹೃದಯಾಘಾತದಿಂದ ನಿಧನರಾದರು.
ಸಿ.ಪಿ.ಐ. ಕೆದಂಬಾಡಿ ಶಾಖಾ ಜತೆ ಕಾರ್ಯದರ್ಶಿಯಾಗಿದ್ದರು. ಪತ್ನಿ ಶಕೀಲ ಮತ್ತು ಮೂವರು
ಮಕ್ಕಳಿದ್ದಾರೆ.