ಕಾಸರಗೋಡು: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷಿ ಮತ್ತು ಮನೆಗಳಿಗೆ ಹಾನಿ ಸಂಭವಿಸಿದ್ದು, 2 ಕೋಟಿ ರೂ. ಮಿಕ್ಕಿ ನಾಶ ನಷ್ಟ ಸಂಭವಿಸಿದೆ.
ಜಿಲ್ಲೆಯಲ್ಲಿ ಇದು ವರೆಗೆ 41 ಮನೆಗಳು ಧರಾಶಾಯಿಯಾಗಿದೆ. 437 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಮನೆಗಳು ಕುಸಿದು ಬಿದ್ದು 37.42 ಲಕ್ಷ ರೂ. ನಾಶ ನಷ್ಟ ಸಂಭವಿಸಿದೆ. 528.4 ಹೆಕ್ಟೇರ್ ಕೃಷಿ ಸ್ಥಳ ಹಾನಿಗೊಂಡಿದ್ದು, 1.19 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ 24 ತಾಸುಗಳಲ್ಲಿ 622 ಮಿ.ಮೀ. ಮಳೆಯಾಗಿದೆ. ಇದು ವರೆಗೆ 1,393 .3 ಮಿ.ಮೀ ಮಳೆ ಲಭಿಸಿದೆ.
ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಕುಂಬಳೆ ಸಮೀಪದ ಕೊಯಿಪ್ಪಾಡಿ-ಕೊಪ್ಪಳ ಕಡಪ್ಪುರಗಳಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, 25ಕ್ಕೂ ಅಧಿಕ ತೆಂಗಿನ ಮರಗಳು ಧರಾಶಾಯಿಯಾಗಿದೆ. ಮನೆ ಹಾನಿಗೊಂಡ 3 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. 8 ಮನೆಗಳು ಅಪಾಯದ ಭೀತಿಯಲ್ಲಿದೆ. ಎಲ್ಲಾ ನದಿಗಳಲ್ಲಿಯೂ ನೀರು ತುಂಬಿ ಹರಿಯುತ್ತಿದೆ.
ಶತಕ ವಂಚಿತ ನೋವು:
ಮಳೆಗೆ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನ ಮುಂಭಾಗ ಶತಮಾನದ ಹೊಸ್ತಿಲಲ್ಲಿದ್ದ ಬೇವಿನ ಮರ ಧರೆಗೆ ಉರುಳಿದೆ. ಸ್ಥಳೀಯ ವೈದ್ಯ ಜಿ.ಕೆ.ಭಟ್ ಉಬ್ಬಾನ ಅವರು ಈ ಮರದ ತೊಗಟೆ-ಎಲೆಯನ್ನು ಬಳಸಿ ಹಲವು ವರ್ಷಗಳಿಂದ ರೋಗಿಗಳಿಗೆ ಔಷಧಿ ನೀಡಿದ್ದರು. 98 ವರ್ಷಗಳ ಹಿಂದೆ ಶಾಲೆ ಆರಂಭವಾದಾಗ ಈ ಮರವನ್ನೂ ನೆಟ್ಟು ಬೆಳೆಸಲಾಗಿತ್ತು.
ಕೆಂಪು ಮಳೆ:
ತೃಕ್ಕರಿಪುರ ಸಮೀಪದ ಎಡಚ್ಚಕೈ ಶಾಲಾ ವಠಾರದಲ್ಲಿ ಬುಧವಾರ ಸಂಜೆ ವೇಳೆಗೆ ಕೆಂಪು ಬಣ್ಣದ ಮಳೆ ಬಿದ್ದಿದೆ. ರಸ್ತೆ, ಹಳ್ಳ, ಹೊಂಡಗಳಲ್ಲಿ ಸಂಗ್ರಹವಾದ ಕೆಂಪು ನೀರು ಸ್ಥಳೀಯರಲ್ಲಿ ಕುತೂಹಲ ಮೂಡಿಸಿತು.
ಶಸ್ತ್ರಕ್ರಿಯೆ ಇಲ್ಲ:
ಕಾಸರಗೋಡು ಜನರಲ್ ಆಸ್ಪತ್ರೆಯ ಮಹಡಿಗಳಲ್ಲಿ ನೀರು ಸಂಗ್ರಹಗೊಂಡು ರೋಗಿಗಳ ಕೊಠಡಿಗಳಿಗೆ ಹರಿಯುತ್ತಿದೆ. ಎಡೆಬಿಡದ ಮಳೆಗೆ ರೋಗಿಗಳ ಬಟ್ಟೆಬರೆಗಳನ್ನು ಒಣಗಿಸಲಾಗದೆ ಆಸ್ಪತ್ರೆಯ ಸಿಬ್ಬಂದಿಗಳು ಪರದಾಡುತ್ತಿದ್ದಾರೆ. ಬಟ್ಟೆಯನ್ನು ಒಣಗಿಸುವ ಆಧುನಿಕ ಸೌಕರ್ಯ ಆಸ್ಪತ್ರೆಯಲ್ಲಿಲ್ಲ. ಇದರಿಂದ ಶಸ್ತ್ರಕ್ರಿಯೆಯನ್ನು ಮುಂದೂಡಲಾಗಿದೆ.
ಮುನ್ನೆಚ್ಚರಿಕೆ:
ಮುಂದಿನ 48 ತಾಸುಗಳೊಳಗೆ ಜಿಲ್ಲೆಯ ಕಡಲ ತೀರದಲ್ಲಿ ಭಾರೀ ಗಾಳಿ ಬೀಸುವ ಸಂಭವವಿದ್ದು, ಸಮುದ್ರದಲ್ಲಿ ಭಾರೀ ಅಲೆಗಳು ಏಳುವ ಸಾಧ್ಯತೆ ಇದ್ದು ಮೀನುಗಾರರು ಅತೀವ ಜಾಗ್ರತೆ ವಹಿಸುವಂತೆ ಮೀನುಗಾರಿಕಾ ಉಪ ನಿದರ್ೇಶಕರು ಮುನ್ನೆಚ್ಚರಿಕೆ ನೀಡಿದ್ದಾರೆ.
ಕಾಸರಗೋಡಿನಲ್ಲಿ ಎಚ್1 ಎನ್1 ಪತ್ತೆ
ಕಾಸರಗೋಡು: ಕೊಲ್ಲಿ ರಾಷ್ಟ್ರದಿಂದ ಬಂದ ಇಲ್ಲಿನ ತೆಕ್ಕಿಲ್ನ ಕುಟುಂಬವೊಂದರ 7 ವರ್ಷದ ಬಾಲಕನಿಗೆ ಹಂದಿ ಜ್ವರ(ಎಚ್1 ಎನ್1) ಬಾಧಿಸಿ ನಗರದ ಜನರಲ್ ಆಸ್ಪತ್ರೆಯಲ್ಲಿ ಗುರುವಾರ ದಾಖಲಿಸಲಾಗಿದೆ.
ಇತ್ತೀಚೆಗೆ ಕೊಲ್ಲಿರಾಷ್ಟ್ರದಿಂದ ಕಲ್ಲಿಕೋಟೆ ವಿಮಾನ ನಿಲ್ದಾಣ ಮೂಲಕ ಬಂದಿಳಿದ ಕುಟುಂಬವನ್ನು ತಪಾಸಣೆ ಮಾಡಿದಾಗ ಬಾಲಕನಿಗೆ ಹಂದಿ ಜ್ವರ ಇರುವುದು ಖಾತರಿಯಾಗಿತ್ತು. ಇದರಿಂದ ಬಾಲಕನನ್ನು ಕಲ್ಲಿಕೋಟೆಯ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯ ಅಧಿಕಾರಿಗಳಿಗೆ ತಿಳಿಸದೆ ಕುಟುಂಬ ಕಾಸರಗೋಡಿಗೆ ಬಂದಿದೆ. ಆದರೆ ಇವರ ಮಾಹಿತಿ ಸಂಗ್ರಹಿಸಿದ ಗುಪ್ತಚರ ವಿಭಾಗ ಕುಟುಂಬ ವಾಸವಿರುವ ಮನೆಯ ವಿಳಾಸ ಪತ್ತೆ ಹಚ್ಚಿ ನಗರ ಪೊಲೀಸರಿಗೆ ಮಾಹಿತಿ ನೀಡಿದೆ. ಇದರ ಪರಿಣಾಮ ಪೊಲೀಸ್ ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯರು ಮನೆಗೆ ತೆರಳಿ ಬಾಲಕನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಬಾಲಕನನ್ನು ತುತರ್ು ನಿಗಾ ಘಟಕದಲ್ಲಿ ಇರಿಸಲಾಗಿದೆ.
ಕ್ವಾಲಿಸ್ ಕಾರು ಬೈಕಿಗೆ ಡಿಕ್ಕಿ: ಚಾಲಕನ ವಿರುದ್ಧ ದೂರು
ಕಾಸರಗೋಡು: ಕ್ವಾಲಿಸ್ ಕಾರು ಬೈಕಿಗೆ ಡಿಕ್ಕಿ ಹೊಡೆದು ನಾಲ್ವರು ಗಾಯಗೊಂಡ ಘಟನೆಗೆ ಸಂಬಂಧಿಸಿ ಚಾಲಕನ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾರು ಚಾಲಕ ಮುಳ್ಳೇರಿಯಾ ಸಮೀಪದ ಕುಂಟಾರು ನಿವಾಸಿ ರವೀಶ ತಂತ್ರಿ ಅವರ ವಿರುದ್ಧ ಗಾಯಾಳು ಬೈಕ್ ಸವಾರ ಮಧೂರು ಚೇನೆಕ್ಕೋಡು ನಿವಾಸಿ ಚಂದ್ರಶೇಖರ ದೂರು ನೀಡಿದ್ದಾರೆ.
ಪಾಣತ್ತೂರು ಕ್ಷೇತ್ರ ಕಳವು
ಆರೋಪಿಯ ಬಂಧನ
ಕಾಸರಗೋಡು: ಇಲ್ಲಿನ ಹೊಸದುರ್ಗ ಸಮೀಪದ ಪಾಣತ್ತೂರು ಶ್ರೀ ಅಯ್ಯಪ್ಪ ಕ್ಷೇತ್ರದಿಂದ ಪಂಚಲೋಹ ವಿಗ್ರಹ, ಬೆಳ್ಳಿಯ ಕಿರೀಟಗಳನ್ನು ಕದ್ದ ಆರೋಪಿಯನ್ನು ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ.
ತಳಿಪರಂಬ ಚೆರುಪುಳ ನಿವಾಸಿ ಜೋಬಿ ಎಂಬಾತನೇ ಬಂಧಿತ ವ್ಯಕ್ತಿ. ಕಾರು ಕಳವು ಪ್ರಕರಣದಲ್ಲಿಯೂ ಈತ ಶಾಮೀಲಾಗಿದ್ದಾನೆ.
9 ಕಿಲೋ ಭಾರವಿರುವ ಪಂಚಲೋಹ ವಿಗ್ರಹ ಮತ್ತು 5 ಕಿಲೋ ಬೆಳ್ಳಿಯ ಕಿರೀಟವನ್ನು ಮಾರುತ್ತಿದ್ದ ವೇಳೆ ಪೊಲೀಸರು ಬಂಧಿಸಿದರು. ಗ್ರಾಹಕರ ಸೋಗಿನಲ್ಲಿ ಬಂದ ಪೊಲೀಸರು ಆರೋಪಿಯನ್ನು ಕೈಯಾರೆ ಸೆರೆ ಹಿಡಿದರು. ಕಳೆದ 6ರಂದು ಕಳವು ನಡೆದಿತ್ತು.
ಕುಸಿದು ಬಿದ್ದು ಸಾವು
ಕಾಸರಗೋಡು: ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಲ್ಲಿನ ಪೆರಿಯ ಬಸ್ಸು ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಆಲಕ್ಕೋಡು ದೇವಕಿ ಎಂಬವರ ಪುತ್ರ ಮಹೇಂದ್ರನ್(45) ಸಾವನ್ನಪ್ಪಿದವರು.
ಚೆಕ್ ಪೋಸ್ಟ್ ವಿಸ್ತರಣೆಗೆ ಕ್ಷೇತ್ರ ಸ್ಥಳ ಮುಟ್ಟುಗೋಲು :
ಹೈಕೋಟರ್ು ತಡೆಯಾಜ್ಞೆ
ಮಂಜೇಶ್ವರ: ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನದ ಸ್ಥಳವನ್ನು ಚೆಕ್ ಪೋಸ್ಟ್ ವಿಸ್ತರಣೆಗೆ ಮುಟ್ಟುಗೋಲು ಹಾಕಿದ ಸಕರ್ಾರದ ಕ್ರಮದ ವಿರುದ್ಧ ಹೈಕೋಟರ್ು ತಡೆಯಾಜ್ಞೆ ನೀಡಿದೆ.
ಕ್ಷೇತ್ರ ಸ್ಥಳವನ್ನು ವಶಪಡಿಸಬಾರದು ಎಂದು ಆಗ್ರಹಿಸಿ ಕ್ಷೇತ್ರದ ಭಕ್ತಾದಿಗಳು ಶಾಸಕರಿಗೆ ಮನವಿ ಸಲ್ಲಿಸಿದ್ದರು. ಆದರೆ ಸಕರ್ಾರದಿಂದ ಯಾವುದೇ ಫಲ ಲಭಿಸದ ಕಾರಣ ಕ್ಷೇತ್ರದ ಭಕ್ತಾದಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
ನಾಪತ್ತೆಯಾದ ಯುವತಿ ಠಾಣೆಯಲ್ಲಿ ಹಾಜರು
ಮಂಜೇಶ್ವರ : ನಾಪತ್ತೆಯಾಗಿದ್ದ ಯುವತಿಯನ್ನು ಮಂಜೇಶ್ವರ ಪೊಲೀಸರು ಕಾಸರಗೋಡು ಪ್ರಥಮ ದಜರ್ೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.
ಪೈವಳಿಕೆ ಜೋಡುಕಲ್ಲು ನವೋದಯ ನಗರದ ನಿವಾಸಿ ಕೃಷ್ಣನ್ ಎಂಬವರು ತಮ್ಮ ಪುತ್ರಿ ಚಂದ್ರಿಕಾ ಕಳೆದ ಜೂನ್ 26ರಂದು ನಾಪತ್ತೆಯಾಗಿದ್ದಾಳೆ ಎಂದು ದೂಉ ನೀಡಿದ್ದರು. ಯುವತಿ ಬುಧವಾರ ಬೆಳಗ್ಗೆ ಮಂಜೇಶ್ವರ ಠಾಣೆಯಲ್ಲಿ ಹಾಜರಾಗಿದ್ದಳು. ಯುವತಿಯ ಇಚ್ಛೆಯಂತೆ ನ್ಯಾಯಾಲಯ ಆಕೆಯನ್ನು ಹೆತ್ತವರ ಜತೆ ತೆರಳುವಂತೆ ಅನುಮತಿ ನೀಡಿದೆ.
ರಸ್ತೆ ತಡೆ: 30 ಮಂದಿ ವಿರುದ್ಧ ಪ್ರಕರಣ ದಾಖಲು
ಮಂಜೇಶ್ವರ: ರಸ್ತೆ ತಡೆ ನಿಮರ್ಿಸಿ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಬುಧವಾರ 8 ಮಂದಿಯನ್ನು ಬಂಧಿಸಲಾಗಿದ್ದು, 30 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೆಟ್ಟು ಹೋದ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಉಪ್ಪಳ ಗೇಟ್ ಬಳಿ ಲೀಗ್ ಕಾರ್ಯಕರ್ತರು ಬುಧವಾರ ರಸ್ತೆ ತಡೆ ನಡೆಸಿದ್ದರು.
No comments:
Post a Comment