ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರಿಂದ ಮತ್ತೆ ಮಳೆ ಬಿರುಸುಗೊಂಡಿದ್ದು ಸಂಜೆಯಿಂದ ಬಿರುಗಾಳಿ ಆರಂಭವಾಗಿದೆ. ನಗರದಲ್ಲಿ ಬೆಳಗ್ಗಿನಿಂದಲೇ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿತ್ತು. ಬಿರುಗಾಳಿಗೆ ನಗರ ಮತ್ತು ಹೊರವಲಯದಲ್ಲಿ ವಿದ್ಯುತ್ ಸಂಪರ್ಕ ಕೈಕೊಟ್ಟಿದೆ. ರಾತ್ರಿ ವರೆಗೂ ವಿದ್ಯುತ್ ಸಂಪರ್ಕ ಸರಿಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ದೂರವಾಣಿ ಸಂಪರ್ಕವೂ ಕೆಟ್ಟು ಹೋಗಿದೆ.
ನಿಧನ
ಸತ್ಯವತಿ
ಮಂಜೇಶ್ವರ: ಹೊಸಂಗಡಿಯ ವ್ಯಾಪಾರಿ ಸುಂದರ ಎಂಬವರ ಪತ್ನಿ ಸತ್ಯವತಿ(56) ನಿಧನರಾದರು. ನಾಲ್ವರು ಮಕ್ಕಳಿದ್ದಾರೆ.
ಕುಞ್ಞಲಿಮಹಜ್ಜುಮ್ಮ
ಮಂಜೇಶ್ವರ: ಇಲ್ಲಿನ ಬಂದ್ಯೋಡು ಸಮೀಪದ ಚೆರುಗೋಳಿ ನಿವಾಸಿ ದಿ.ಅಬ್ದುಲ್ ರಹಮಾನ್ ಅವರ ಪತ್ನಿ ಕುಞ್ಞಲಿಮಹಜ್ಜುಮ್ಮ ಎಂಬವರು ನಿಧನರಾದರು. ಅವರಿಗೆ 104 ವಯಸ್ಸಾಗಿತ್ತು. 6 ಮಂದಿ ಮಕ್ಕಳಿದ್ದಾರೆ.
No comments:
Post a Comment