7 ವರ್ಷಗಳ ಹಿಂದೆ ಪ್ರದರ್ಶನ ಕಂಡಿದ್ದ ಈ ಮಲ್ಟಿ ಮೀಡಿಯ ನಾಟಕ ನೂತನ ಆವಿಷ್ಕಾರಗಳೊಂದಿಗೆ ನಗರದಲ್ಲಿ ಮತ್ತೆ ತೆರೆ ಕಾಣಲಿದೆ.
ರಂಗಕಮರ್ಿ ಸಿನಿಮಾ ನಟ ಪ್ರದೀಪ್ ಕಾಸರಗೋಡು ಅಭಿನಯದ ಈ ನಾಟಕವನ್ನು ಗೋಪಿ ಕುತ್ತಿಕೋಲ್ ನಿದರ್ೇಶಿಸಿದ್ದಾರೆ.
ಕನ್ನಡ ಸಹಿತ ಮಲೆಯಾಳ ಮತ್ತು ಇಂಗ್ಲಿಷ್ನಲ್ಲಿಯೂ ಈ ನಾಟಕವನ್ನು ದೇಶದಾದ್ಯಂತ ಪ್ರದಶರ್ಿಸಲಾಗುವುದು.
ಶನಿವಾರ ಶೋಭಾ ಕರಂದ್ಲಾಜೆ ಎಡನೀರಿಗೆ
ಕಾಸರಗೋಡು: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ನಾಳೆ(18ರಂದು) ಇಲ್ಲಿನ ಎಡನೀರು ಮಠವನ್ನು ಸಂದಶರ್ಿಸುವರು.
ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡವನ್ನು ಅವರು ಉದ್ಘಾಟಿಸುವರು.
ಅಡುಗೆ ಅನಿಲ ಸಂಪರ್ಕ : ಸಿದ್ಧತೆ
ಕಾಸರಗೋಡು: ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆ ಮಾಡದೆ ಉಳಿದಿರುವ ಅಜರ್ಿಯನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಬೇಕು ಎಂದು ಕೇಂದ್ರ ಸಕರ್ಾರ ಆದೇಶಿಸಿದ ಹಿನ್ನೆಲೆಯಲ್ಲಿ ಬರುವ ಮೂರು ತಿಂಗಳೊಳಗೆ 70 ಸಾವಿರ ಅಡುಗೆ ಅನಿಲ ಸಂಪರ್ಕ ನೀಡಲು ತೈಲ ಕಂಪೆನಿಗಳು ಸಿದ್ಧತೆ ನಡೆಸುತ್ತಿದೆ.
ರಾಜ್ಯದಲ್ಲಿ ಓಣಂ ಮತ್ತು ರಂಜಾನ್ ಹಬ್ಬದ ಹೊತ್ತಿಗೆ ಸಂಪರ್ಕ ಕಲ್ಪಿಸಲಾಗುವುದು. ಅಲ್ಲದೆ ಹೆಚ್ಚುವರಿ ಸಿಲಿಂಡರ್ ವಿತರಿಸಲು ತೀಮರ್ಾನಿಸಲಾಗಿದೆ.
ದೇವಸ್ವಂ ಮಂಡಳಿ ಅಹವಾಲು ಸ್ವೀಕಾರ
ಮಂಜೇಶ್ವರ: ಮಲಬಾರ್ ದೇವಸ್ವಂ ಮಂಡಳಿಯ ವಿಶೇಷ ಆಯುಕ್ತ ಸಿ.ಮೋಹನ್ ಇದೇ 20ರಂದು ಬೆಳಗ್ಗೆ 11 ಗಂಟೆಗೆ ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಅಹವಾಲುಗಳನ್ನು ಸ್ವೀಕರಿಸುವರು.
ಕಾಸರಗೋಡು ತಾಲೂಕಿನ ವಿವಿಧ ಕ್ಷೇತ್ರ ಸ್ಥಾನಿಕರ ಮತ್ತು ದೇವಸ್ಥಾನಗಳ ಅರ್ಚಕರು, ಸಹಾಯಕ ಅರ್ಚಕರಿಗೆ ಗೌರವ ಧನ ನೀಡಲು ಅಜರ್ಿ ಸ್ವೀಕರಿಸಲಿದ್ದಾರೆ.
No comments:
Post a Comment