Tuesday, July 14, 2009

'ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರ ಪಾತ್ರ ಮಹತ್ತರ'/NSS Prog in Govt College

ಕಾಸರಗೋಡು: ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ಕಾಸರಗೋಡು ಸಕರ್ಾರಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಸುಭಾಶ್ ಇತ್ತೀಚೆಗೆ ಹೇಳಿದರು.
ವಿಶ್ವಜನಸಂಖ್ಯೆ ದಿನಾಚರಣೆಯ ಅಂಗವಾಗಿ ಕಾಸರಗೋಡು ಸಕರ್ಾರಿ ಕಾಲೇಜಿನ ಎನ್.ಎಸ್.ಎಸ್. ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಮಾಧವನ್ ನಂಬ್ಯಾರ್ ಉದ್ಘಾಟಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರನಾರಾಯಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸ ಶ್ರೀನಾಥ್ ಎ., ಯೋಜನಾಧಿಕಾರಿ ಮಹಮ್ಮದಾಲಿ ಪೆರ್ಲ ಹಾಜರಿದ್ದರು.
ಕಾರ್ಯದಶರ್ಿ ಮಹೇಶ್ ಸ್ವಾಗತಿಸಿ, ಜಿನೇಶ್ ವಂದಿಸಿದರು.
 

ಕಸಿಕಟ್ಟುವ ವಿಧಾನ: ಪ್ರಾತ್ಯಕ್ಷಿಕೆ
ಬೇಳ(ಕಾಸರಗೋಡು): ನರ್ಸರಿಗಳಿಗೆ ದುಬಾರಿ ಹಣ ನೀಡದೆ ಸ್ವತಃ ಕಸಿ ಕಟ್ಟಬಹುದಾಗಿದ್ದು, ಇದಕ್ಕೆ ಪ್ರಾಯೋಗಿಕತೆ ಮತ್ತು ನಿರಂತರ ತರಬೇತಿ ಅತ್ಯಗತ್ಯ ಎಂದು ಪೆರ್ಲ ಸತ್ಯನಾರಾಯಣ ಶಾಲೆಯ ನೇಚರ್ ಕ್ಲಬ್ಬಿನ ಸಂಚಾಲಕ ಉಮೇಶ್ ಕೆ. ಪೆರ್ಲ ಅಭಿಪ್ರಾಯಪಟ್ಟರು.
ಬೇಳ ಸಂತ ಬಾರ್ತಲೋಮೆಯ ಶಾಲೆಯಲ್ಲಿ 7ನೇ ತರಗತಿಯ ಮಕ್ಕಳಿಗೆ ಕಸಿಕಟ್ಟುವ ವಿಧಾನ ಬಗ್ಗೆ ಇತ್ತೀಚೆಗೆ ಏರ್ಪಡಿಸಿದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.
ಪ್ರಾತ್ಯಕ್ಷಿಕೆಯಲ್ಲಿ ಗುಲಾಬಿ, ಮಾವು, ಹಾಗೂ ದಾಸವಾಳಗಳಿಗೆ ಕಸಿ ಕಟ್ಟುವ ವಿಧಾನಗಳಾದ ಗ್ರಾಫ್ಟಿಂಗ್, ಬಡ್ಡಿಂಗ್, ಲೇಯರಿಂಗ್ ಬಗ್ಗೆ ಮಾಹಿತಿ ನೀಡಿದರು.
ನೇಚರ್ ಕ್ಲಬ್ಬಿನ ಸದಸ್ಯರಾದ ರತನ್ ಕುಮಾರ್ ಹಾಗೂ ಕೃತಿಕಾ ಸಹಕರಿಸಿದರು.
ಶಾಲಾ ಸಾವನ್ ಡೇಮಿಯನ್ ಡಿ'ಸೋಜಾ ವಂದಿಸಿದರು.
 
 
ವಿದ್ಯಾಥರ್ಿಗೆ ಕ್ಯಾನ್ಸರ್: ಸಹಾಯಕ್ಕೆ ಮೊರೆ
ಕಾಸರಗೋಡು: ಕ್ಯಾನ್ಸರ್ ಬಾಧಿಸಿದ ಬಾಲಕನ ಕುಟುಂಬ ಚಿಕಿತ್ಸೆ ನಡೆಸಲು ಆಥರ್ಿಕ ಸೌಲಭ್ಯವಿಲ್ಲದೆ ಕಂಗೆಟ್ಟಿದೆ.
ಮಧೂರು ಉಳಿಯತ್ತಡ್ಕ ಸಮೀಪದ ಚೇನೆಕ್ಕೋಡು ನಿವಾಸಿ ಸಿ.ಎಚ್.ಬಾಲಕೃಷ್ಣ ಅವರ ಪುತ್ರ ಉದಯಕುಮಾರ್ ಎಂಬಾತ ಸಂಕಷ್ಟಕ್ಕೆ ಒಳಗಾದವನು. ಈತನ ಊದಿಕೊಂಡಿದ್ದ ಎಡಗಾಲನ್ನು ತಪಾಸಣೆ ಮಾಡಿದ ವೈದ್ಯರು ಕ್ಯಾನ್ಸರ್ ಬಾಧಿಸಿದ್ದನ್ನು ಖಾತರಿಪಡಿಸಿದ್ದು, ಇದರ ಚಿಕಿತ್ಸೆಗೆ ಸು.4 ಲಕ್ಷ ರೂ. ಅಗತ್ಯವಿದೆ.
ಈತ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವಿದ್ಯಾಥರ್ಿಯಾಗಿದ್ದ ಈತ ಕಳೆದ ಶೈಕ್ಷಣಿಕ ವರ್ಷ ರೋಗದಿಂದ ಎಸ್.ಎಸ್.ಎಲ್.ಸಿ.ಯ ಎಲ್ಲಾ ಪರೀಕ್ಷೆಯನ್ನೂ ಬರೆದಿಲ್ಲ. ಹೀಗಾಗಿ ಶೈಕ್ಷಣಿಕ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಉದಯ ಕುಮಾರ್ನ ತಾಯ್ತಂದೆಯರು ಬಡವರಾಗಿದ್ದು, ಕೂಲಿ ಕಾಮರ್ಿಕರಾಗಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ಕಂಗಾಲಾಗಿದ್ದಾರೆ. ಮಧೂರು ಸೇವಾ ಸಹಕಾರಿ ಬ್ಯಾಂಕಿನಲ್ಲಿ ಬಾಲಕನ ತಂದೆ ಬಾಲಕೃಷ್ಣರ ಹೆಸರಲ್ಲಿ 1659 ಸಂಖ್ಯೆಯ ಉಳಿತಾಯ ಖಾತೆ ತೆರೆಯಲಾಗಿದೆ. ಸಂಘ-ಸಂಸ್ಥೆ ಮತ್ತು ದಾನಿಗಳು ಆಥರ್ಿಕ ಸಹಾಯ ನೀಡುವಂತೆ ಬಾಲಕನ ಹೆತ್ತವರು ಮನವಿ ಮಾಡಿದ್ದಾರೆ.

 
ಚಿಕಿತ್ಸಾ ಯೋಜನೆ ಜಾರಿಗೆ ಪಿಂಚಣಿದಾರರ ಆಗ್ರಹ
 
ಕಾಸರಗೋಡು: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಪಿಂಚಣಿಯನ್ನು ಪರಿಷ್ಕರಿಸಬೇಕು, ನೂತನ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಪಿಂಚಣಿದಾರರ ಮಧೂರು ಪಂಚಾಯ್ತಿ ಘಟಕದ ವಿಶೇಷ ಸಭೆ ಆಗ್ರಹಿಸಿದೆ.
ಸೋಮವಾರ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಜರುಗಿದ ಸಭೆಯನ್ನು ಸಂಘಟನೆಯ ಕಾಸರಗೋಡು ಗ್ರಾಮಾಂತರ ಬ್ಲಾಕ್ ಸಮಿತಿ ಅಧ್ಯಕ್ಷ ಜನಾರ್ದನನ್ ನಂಬ್ಯಾರ್ ಉದ್ಘಾಟಿಸಿದರು. ಹೊಸ ಸದಸ್ಯತ್ವವನ್ನು ಬಿ.ಪ್ರಭಾಕರ ಅಗ್ಗಿತ್ತಾಯ ಉದ್ಘಾಟಿಸಿದರು.
ಎ.ರಾಮ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಎಂ.ಕುಞ್ಞಿಕಣ್ಣನ್ ನಂಬ್ಯಾರ್, ಎ.ರಾಧಾಕೃಷ್ಣನ್ ನಾಯರ್, ಇ.ಪ್ರಭಾಕರ ಪೊದುವಾಳ್, ಬಿ.ಪುರುಷೋತ್ತಮ, ಕೆ.ರಘು, ಕೆ.ಸಿ.ಅಚ್ಯುತನ್, ಕೆ.ಸೀತಾರಾಮ ಹಾಜರಿದ್ದರು. ಪಿ.ಪಿ.ಕುಞ್ಞಿಕಣ್ಣನ್ ವರದಿ ಮಂಡಿಸಿದರು. 
ಬಿ.ಬಾಲಕೃಷ್ಣ ಅಗ್ಗಿತ್ತಾಯ ಸ್ವಾಗತಿಸಿ, ನಿರ್ಮಲ್ ಕುಮಾರ್ ವಂದಿಸಿದರು.
 

No comments:

Post a Comment