ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಇತ್ತೀಚೆಗೆ ಉದ್ಘಾಟಿಸಿದರು.
ಬ್ಯಾಂಕಿನ ಅಧ್ಯಕ್ಷ ಎಚ್.ಶಿವರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಭದ್ರತಾ
ಕೊಠಡಿಯನ್ನು ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ವಿ.ಕೋಮನ್
ನಂಬ್ಯಾರ್ ಉದ್ಘಾಟಿಸಿದರು. ಠೇವಣಿ ಪತ್ರವನ್ನು ಸಹಕಾರಿ ಇಲಾಖೆಯ ನೋಂದಣಿ ಅಧಿಕಾರಿ
ಕೆ.ಎನ್. ಜಗದೀಶನ್ ನಂಬ್ಯಾರ್ ವಿತರಿಸಿದರು. ಸಾಲಪತ್ರವನ್ನು ಪುತ್ತಿಗೆ ಪಂಚಾಯ್ತಿ
ಅಧ್ಯಕ್ಷ ತೋಮಸ್ ಡಿ'ಸೋಜಾ ವಿತರಿಸಿದರು.
ಬೇಳ ಶೋಕ ಮಾತಾ ದೇವಾಲಯದ ಪ್ರಧಾನ ಧರ್ಮಗುರು ಬಾಸಿಲ್ ವಾಸ್, ಸರ್ಕಲ್ ಸಹಕಾರಿ
ಯೂನಿಯನ್ ಕಾಸರಗೋಡು ಜಿಲ್ಲಾಧ್ಯಕ್ಷ ಪಿ.ವಿ.ಜಯರಾಜನ್, ಸಹಕಾರಿ ಇಲಾಖೆಯ
ವಿ.ಸುಧಾಕರನ್, ಕುಂಬಳೆ ಪಂಚಾಯ್ತಿ ಸದಸ್ಯ ಕೆ.ಸುರೇಶ್ ಕುಮಾರ್ ಶೆಟ್ಟಿ, ಪುತ್ತಿಗೆ
ಪಂಚಾಯ್ತಿ ಸದಸ್ಯ ಜಿ.ವಿಶ್ವನಾಥ್, ಸಹಕಾರ ಭಾರತಿ ಜಿಲ್ಲಾ ಕಾರ್ಯದಶರ್ಿ ಐತ್ತಪ್ಪ
ಪಿ.ಮವ್ವಾರ್, ಬ್ಯಾಂಕಿನ ಸ್ಥಾಪಕ ಎಚ್. ರಘುರಾಮ ಆಳ್ವ. ಕುಂಬಳೆ ಸಹಕಾರಿ ಬ್ಯಾಂಕಿನ
ಅಧ್ಯಕ್ಷ ಬಿ.ವಿಶ್ವನಾಥ ಆಳ್ವ, ಮುಗು ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಸ್.ನಾರಾಯಣ,
ಅಂಗಡಿಮೊಗರು ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಿ.ಪಿ.ಮಂಜುನಾಥ ಭಂಡಾರಿ, ನೀಚರ್ಾಲು
ಕೃಷಿಕರ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ಜಿ.ವಿಶ್ವೇಶ್ವರ ಭಟ್ ಪುತ್ತಿಗೆ, ಎಣ್ಮಕಜೆ
ಅರ್ಬನ್ ಸೇವಾ ಸಂಘದ ಎಂ. ಗಣೇಶ್ ರಾವ್, ವ್ಯಾಪಾರಿ ವ್ಯವಸಾಯ ಏಕೋಪನಾ ಸಮಿತಿಯ
ಕಳತ್ತೂರು ಘಟಕದ ಅಧ್ಯಕ್ಷ ಶ್ರೀನಿವಾಸ ಆಳ್ವ, ಕೇರಳ ಸಹಕಾರಿ ಎಂಪ್ಲಾಯೀಸ್ ಯೂನಿಯನ್ನ
ಜಿಲ್ಲಾಧ್ಯಕ್ಷ ಎಂ.ಅಶೋಕ್ ರೈ ಹಾಜರಿದ್ದರು.
ಬ್ಯಾಂಕಿನ ಕಾರ್ಯದರ್ಶಿ ಎ.ಕೃಷ್ಣಭಟ್ ವರದಿ ಮಂಡಿಸಿದರು. ನಿದರ್ೇಶಕರಾದ ಜಯಂತ ಪಾಟಾಳಿ
ಸ್ವಾಗತಿಸಿ, ಹರಿಣಿ ಜಿ.ಕೆ.ನಾಯಕ್ ವಂದಿಸಿದರು.
ಪತ್ವಾಡಿ ಸೇತುವೆ ಉದ್ಘಾಟನೆ
ಕಾಸರಗೋಡು: ಮಂಜೇಶ್ವರ ಉಪ್ಪಳ ಸಮೀಪದ ಪತ್ವಾಡಿ ಸೇತುವೆಯನ್ನು ರಾಜ್ಯ ಲೋಕೋಪಯೋಗಿ
ಸಚಿವ ಮೋನ್ಸ್ ಜೋಸೆಫ್ ಭಾನುವಾರ ಉದ್ಘಾಟಿಸಿದರು.
ಉಪ್ಪಳ ಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಞ್ಞಂಬು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ, ಬಿ.ಎಚ್.ಅಬ್ದುಲ್ಲ ಕುಞ್ಞಿ, ಮಂಗಲ್ಪಾಡಿ ಪಂಚಾಯ್ತಿ
ಅಧ್ಯಕ್ಷ ಎಂ. ಆನಂದ, ಮೀಂಜ ಪಂಚಾಯ್ತಿ ಅಧ್ಯಕ್ಷ ಕೆ.ಅಬ್ದುಲ್ಲ, ಯು.ಎ.ಖಾದರ್,
ಡಿ.ಪ್ರಭಾಕರ ಚೌಟ, ಅನ್ನಮ್ಮ, ಬಿ.ಎಂ.ಮಾಯಿನ್ ಹಾಜರಿದ್ದರು.
ಬಳಿಕ ಚೆಮ್ನಾಡು-ಚೆಂಗಳ ಪಂಚಾಯ್ತಿಗಳನ್ನು ಸಂಪಕರ್ಿಸುವ ಪೆರುಂಬಳಕಡವು ಸೇತುವೆಯನ್ನು
ಸಚಿವರು ಉದ್ಘಾಟಿಸಿದರು.
ಪೆರುಂಬಳದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ವಿ.ಕುಞ್ಞಿರಾಮನ್ ಅಧ್ಯಕ್ಷತೆ
ವಹಿಸಿದ್ದರು. ಶಾಸಕರಾದ ಸಿ.ಟಿ.ಅಹಮ್ಮದಾಲಿ, ಸಿ.ಎಚ್.ಕುಞ್ಞಂಬು, ಮಾಜಿ ಶಾಸಕ ಚೆರ್ಕಳ
ಅಬ್ದುಲ್ಲ, ಚೆಮ್ನಾಡು ಪಂಚಾಯ್ತಿ ಅಧ್ಯಕ್ಷ ಪಾದೂರು ಕುಞ್ಞಂಬು, ಚೆಂಗಳ ಪಂಚಾಯ್ತಿ
ಅಧ್ಯಕ್ಷೆ ಆಯಿಷಾ ಚೆರ್ಕಳ ಅಬ್ದುಲ್ಲ ಹಾಜರಿದ್ದರು.
ಸಮುದ್ರ ತೀರದ ಗ್ರಾಮಗಳಲ್ಲಿ ಜನಗಣತಿ
ಕಾಸರಗೋಡು: ಜಿಲ್ಲೆಯ ಸಮುದ್ರ ತೀರದ ಗ್ರಾಮಗಳಲ್ಲಿ ಜನಗಣತಿ ನಡೆಸುವ ಕ್ರಮ ಆರಂಭಗೊಂಡಿದೆ.
ಇದಕ್ಕೆ ಸಂಬಂಧಿಸಿ ಜಿಲ್ಲೆಯ 15 ಗ್ರಾಮಗಳ ಜನಗಣತಿ ಪ್ರಕ್ರಿಯೆ ಆಗಸ್ಟ್ ತಿಂಗಳಲ್ಲಿ
ನಡೆಯಲಿದೆ. ಕುಂಜತ್ತೂರು, ಕಡಂಬಾರ್, ಉಪ್ಪಳ, ಇಚ್ಲಂಗೋಡು, ಬೇಳ, ಬಂಬ್ರಾಣ,
ಕೊಯಿಪ್ಪಾಡಿ, ಕಳನಾಡು, ಪಳ್ಳಿಕ್ಕೆರೆ, ಚಿತ್ತಾರಿ, ಅಜಾನೂರು, ಪಡನ್ನ, ಉದಿನೂರು,
ಸೌತ್ ತೃಕ್ಕರಿಪುರ ಗ್ರಾಮಗಳಲ್ಲಿ ಜನಗಣತಿ ನಡೆಯಲಿದೆ. ಜನಗಣತಿ ನಡೆಸಲು 359
ಮಂದಿಯನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ.
ಕೇಂದ್ರ ಜನಗಣತಿ ನಿರ್ದೇಶನಾಲಯ, ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ಗಳ ಸಹಕಾರದಲ್ಲಿ
ಜನಗಣತಿ ನಡೆಯಲಿದೆ. ಪ್ರತಿ ಮನೆಗಳಲ್ಲಿಯೂ 15 ಪ್ರಶ್ನಾವಳಿಗಳ ಉತ್ತರಗಳನ್ನು
ಲ್ಯಾಪ್ಟಾಪ್ ಕಂಪ್ಯೂಟರ್ಗಳಲ್ಲಿ ದಾಖಲಿಸಲಾಗುವುದು.
ಇದಕ್ಕೆ ಸಂಬಂಧಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಕಂದಾಯ,
ಪಂಚಾಯ್ತಿ, ಮೀನುಗಾರಿಕಾ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಆನಂದ್ ಸಿಂಗ್
ಅಧ್ಯಕ್ಷತೆ ವಹಿಸಿದ್ದರು.
ಜನಗಣತಿ ಉಪ ನಿರ್ದೇಶಕ ಫ್ರಾನ್ಸಿಸ್ ಕೆ.ಮ್ಯಾನ್ವೆಲ್, ಇಂಡಿಯನ್ ಟೆಲಿಫೋನ್
ಇಂಡಸ್ಟ್ರೀಸ್ ಜನರಲ್ ಮೇನೇಜರ್ ಬಶೀರ್ ಮುಹಮ್ಮದ್, ಎ.ಡಿ.ಎಂ. ಸಿ.ವಾಸುದೇವ
ಹಾಜರಿದ್ದರು.
ಜಿಲ್ಲಾ ಪಂಚಾಯ್ತಿ : 56 ಪ್ರಾಜೆಕ್ಟ್ಗಳಿಗೆ ಅಂಗೀಕಾರ
ಕಾಸರಗೋಡು: ಜಿಲ್ಲಾ ಪಂಚಾಯ್ತಿ ಅಭಿವೃದ್ಧಿ ವಿಚಾರಸಂಕಿರಣದಲ್ಲಿ ಮಂಡಿಸಿದ 56
ಪ್ರಾಜೆಕ್ಟ್ಗಳಿಗೆ ಅಂಗೀಕಾರ ಲಭಿಸಿದೆ.
ಹೊಸ ಪ್ರಾಜೆಕ್ಟ್ಗಳಿಗೆ 11.60 ಕೋಟಿ ರೂ. ಮೀಸಲಿಡಲಾಗಿದೆ. ಉತ್ಪಾದನೆ ವಲಯದಲ್ಲಿ
ಕೃಷಿ ಸಂಬಂಧಿ ಯೋಜನೆಗಳಿಗೆ 2.67 ಕೋಟಿ ರೂ., ಶಿಕ್ಷಣ, ಅಂಗವಿಕಲರ ಕಲ್ಯಾಣ, ಕುಡಿಯುವ
ನೀರು, ಅಂಗನವಾಡಿ ಮೊದಲಾದ ಸೇವಾ ವಲಯಕ್ಕೆ 4.05 ಕೋಟಿ ರೂ., ರಸ್ತೆ ಕಾಮಗಾರಿಗಳಿಗೆ
88 ಲಕ್ಷ ರೂ., ಪರಿಶಿಷ್ಟ ಜಾತಿ ಕಲ್ಯಾಣ ಯೋಜನೆಗಳಿಗೆ 2.22 ಕೋಟಿ ರೂ., ಪರಿಶಿಷ್ಟ
ವರ್ಗ ಕಲ್ಯಾಣ ಯೋಜನೆಗಳಿಗೆ 1.75 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಹಣ
ಮೀಸಲಿಡಲಾಗಿದೆ.
200 ಹೆಕ್ಟೇರ್ ಪ್ರದೇಶದಲ್ಲಿ ಅನ್ನಪೂರ್ಣ ಭತ್ತ ಕೃಷಿ ಅಭಿವೃದ್ದಿ ಯೋಜನೆಗೆ 15 ಲಕ್ಷ
ರೂ, ಕುಟುಂಬಶ್ರೀ ತರಕಾರಿ ಕೃಷಿಗೆ 12 ಲಕ್ಷ ರೂ. ಕೃಷಿ ಉಪಕರಣಗಳನ್ನು ವಿತರಿಸಲು 75
ಲಕ್ಷ ರೂ., ಸಮಗ್ರ ತೆಂಗು ಕೃಷಿ ಅಭಿವೃದ್ಧಿ ಯೋಜನೆಗೆ 70 ಲಕ್ಷ ರೂ., ಬೀಜೋತ್ಪಾದನಾ
ಕೇಂದ್ರಗಳ ಅಭಿವೃದ್ಧಿಗೆ 10 ಲಕ್ಷ ರೂ., ಅಡಿಕೆ ಕೃಷಿ ಅಭಿವೃದ್ಧಿಗೆ 15 ಲಕ್ಷ ರೂ.,
ಕುಟುಂಬಶ್ರೀ ಉತ್ಪನ್ನಗಳ ಮಾರಾಟ ಕೇಂದ್ರಗಳಿಗೆ 50 ಲಕ್ಷ ರೂ. ಕಾಯ್ದಿರಿಸಲಾಗಿದೆ.
ಸೇವಾ ವಲಯದಲ್ಲಿ ಐ.ಎ.ವೈ. ಗೃಹ ನಿರ್ಮಾಣ ಯೋಜನೆಗೆ 1.17 ಕೋಟಿ ರೂ., ಬಹು
ಮಾಧ್ಯಮ(ಮಲ್ಟಿ ಮೀಡಿಯ) ತರಗತಿ ಕೊಠಡಿ ನಿರ್ಮಾಣಕ್ಕೆ 80 ಲಕ್ಷ ರೂ., ಎಸ್.ಎಸ್.ಎ.
ಯೋಜನೆಗೆ 58.58 ಲಕ್ಷ ರೂ., ಅಂಗನವಾಡಿ ಕಟ್ಟಡ ಮತ್ತು ಕುಡಿಯುವ ನೀರು ಪೂರೈಕೆಗೆ 30
ಲಕ್ಷ ರೂ., ಆಶ್ರಯ ಯೋಜನೆಗೆ 20 ಲಕ್ಷ ರೂ., ಎಚ್.ಐ.ವಿ. ಬಾಧಿತರ ಪುನರ್ವಸತಿಗೆ 10
ಲಕ್ಷ ರೂ., ಝೀರೋ ವೇಸ್ಟ್ ಯೋಜನೆಗೆ 10 ಲಕ್ಷ ರೂ.ಗಳನ್ನು ತೆಗೆದಿರಿಸಲಾಗಿದೆ.
ಜಿಲ್ಲೆಯಲ್ಲಿ 18 ರಸ್ತೆಗಳ ಯೋಜನೆಗೆ 88 ಲಕ್ಷ ರೂ. ಮೌಲ್ಯದ ಯೋಜನೆಗಳನ್ನು
ರೂಪಿಸಲಾಗಿದೆ. ಕುಂಬಳೆಯ ಪೂಕಟ್ಟೆ-ಬಾಯಿಕಟ್ಟೆ-ಬತ್ತೇರಿ ರಸ್ತೆ(4 ಲಕ್ಷ ರೂ.),
ಕೊಟ್ಟೋಡಿ-ವಾವಡ್ಕ ರಸ್ತೆ(3.5 ಲಕ್ಷ ರೂ.), ದೈಗೋಳಿಯ ಮೀಯಪದವು-ಚಿಗುರುಪಾದೆ
ರಸ್ತೆ(6 ಲಕ್ಷ ರೂ.), ನಯಾಬಜಾರ್-ಅಂಬಾರ್ ರಸ್ತೆ(7 ಲಕ್ಷರೂ.), ಬಾಂಬುಳಿಮೂಲೆ
ಸಾಯ-ಮರಕ್ಕಿಣಿ ರಸ್ತೆ(5 ಲಕ್ಷ ರೂ.) ಸಹಿತ 18 ರಸ್ತೆಗಳನ್ನು ಈ ಯೋಜನೆಯಡಿ
ಅಭಿವೃದ್ಧಿಪಡಿಸಲಾಗುವುದು.
ವಿಚಾರಸಂಕಿರಣವನ್ನು ಜಿಲ್ಲಾಧಿಕಾರಿ ಆನಂದ್ ಸಿಂಗ್ ಉದ್ಘಾಟಿಸಿದರು. ಜಿಲ್ಲಾ
ಪಂಚಾಯ್ತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಗೀತಾಕೃಷ್ಣನ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ವಿ.ನಾರಾಯಣ್,
ಪಿ.ಬಿ.ಅಬ್ದುಲ್ ರಸಾಕ್, ವಿ.ಪಿ.ಪಿ.ಮುಸ್ತಫಾ ಹಾಜರಿದ್ದರು.
ನಿಧನ
ಮೊಹಮ್ಮದ್
ಮಂಜೇಶ್ವರ: ಇಲ್ಲಿನ ವರ್ಕಾಡಿ ಸಮೀಪದ ಕೆದಂಬಾಡಿ ನಿವಾಸಿ ಮೊಹಮ್ಮದ್(44)
ಹೃದಯಾಘಾತದಿಂದ ನಿಧನರಾದರು.
ಸಿ.ಪಿ.ಐ. ಕೆದಂಬಾಡಿ ಶಾಖಾ ಜತೆ ಕಾರ್ಯದರ್ಶಿಯಾಗಿದ್ದರು. ಪತ್ನಿ ಶಕೀಲ ಮತ್ತು ಮೂವರು
ಮಕ್ಕಳಿದ್ದಾರೆ.
No comments:
Post a Comment