Saturday, August 22, 2009

ಕೆರೆಗೆ ಬಿದ್ದು ಇಬ್ಬರು ಬಾಲಕರ ಸಾವು


ಕಾಸರಗೋಡು: ಇಲ್ಲಿನ ಚೆಮ್ನಾಡು ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯ ಇಬ್ಬರು ವಿದ್ಯಾಥರ್ಿಗಳು ಕೆರೆಗೆ ಬಿದ್ದು ಸಾವನ್ನಪ್ಪಿಧ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ನಗರದ ತೆರುವತ್ ಸಿರಾಮಿಕ್ಸ್ ರಸ್ತೆ ಬಳಿಯ ನಿರ್ಮಲಾಕ್ಷ ಎಂಬವರ ಪುತ್ರ ಜನೀಶ್ಚಂದ್ರನ್(15) ಮತ್ತು ಮಧೂರು ಬಟ್ಟಂಪಾರೆಯ ಅಪ್ಪಕುಞ್ಞಿಯ ಪುತ್ರ ರತೀಶ್(15) ಮೃತಪಟ್ಟವರು.
ಶಾಲೆಯಲ್ಲಿ ಓಣಂ ಕಾರ್ಯಕ್ರಮ ನಡೆಯುತ್ತಿರುವ ವಿರಾಮದ ವೇಳೆ ಇವರಿಬ್ಬರೂ ಸೈಕಲ್ನಲ್ಲಿ ಸವಾರಿ ಹೊರಟಿದ್ದರು. ಚೆಮ್ನಾಡಿನ ರಸ್ತೆ ಬಳಿಯಿದ್ದ ಖಾಸಗಿ ಕೆರೆಗೆ ಸೈಕಲ್ ಸವಾರಿ ಮಾಡುತ್ತಾ ಆಟವಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ವಿದ್ಯಾಥರ್ಿಗಳ ಗೆಳೆಯರು ತಿಳಿಸಿದ್ದಾರೆ. ಸೈಕಲ್ನಲ್ಲಿ ವಿವಿಧ ಬಗೆಯ ಆಟವಾಡುತ್ತಾ ಕೆರೆಗೆ ಬೀಳುತ್ತಿದ್ದರು. ಈಜು ಗೊತ್ತಿದ್ದ ಅವರು ಸತ್ತು ನೀರಿನ ಮೇಲೆ ತೇಲಿದಾಗಲೇ ಗೆಳೆಯರಿಗೆ ಸಾವನ್ನಪ್ಪಿರುವುದು ತಿಳಿದುಬಂದು ಬೊಬ್ಬಿಟ್ಟರು. ಇದನ್ನು ಕೇಳಿ ಬಂದ ಜನರು ಶವಗಳನ್ನು ಮೇಲೆತ್ತಿದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಯಿತು. ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 
ನಿದ್ದೆಯಲ್ಲಿ ಹಸುಳೆಯ ಸಾವು
 
ಕಾಸರಗೋಡು: ಆಹಾರ ಸೇವಿಸಿ ಮಲಗಿದ್ದ ಪುಟ್ಟ ಮಗು ನಿದ್ರೆಯಲ್ಲಿಯೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಚೆಮ್ನಾಡು ಕೋಳಿಯಡ್ಕ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಸ್ಥಳೀಯ ರಮ್ಯಾ ಎಂಬವರ ಒಂದೂವರೆ ವರ್ಷದ ಅಭಿನವ್ ಎಂಬ ಮಗು ನಿದ್ದೆಯಿಂದ ಏಳದಿರುವುದನ್ನು ಕಂಡು ಮುಟ್ಟದಾಗ ದೇಹ ತಣ್ಣಗಾಗಿ ನಿಶ್ಚಲವಾಗಿತ್ತು.
ತಕ್ಷಣ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಫಲಕಾರಿಯಾಗಲಿಲ್ಲ. ಅಷ್ಟರಲ್ಲಿ ಮಗು ಸತ್ತು ಒಂದು ತಾಸು ಕಳೆದಿತ್ತು. ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಒಯ್ಯಲಾಯಿತು.
 
 
ಯುವಕ ಕಾಣೆ: ದೂರು 
 
ಕಾಸರಗೋಡು: ಪುತ್ರ ಕಾಣೆಯಾಗಿದ್ದಾನೆ ಎಂದು ವಿದ್ಯಾನಗರ ನಿವಾಸಿ ರಮ್ಲಾ ಎಂಬವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಹ್ಯಾರಿಸ್(23) ಎಂಬಾತ ಜುಲೈ 25ರಿಂದ ಕಾಣೆಯಾಗಿದ್ದಾನೆ.
 
 
ಮಟ್ಕಾ-ಜೂಜಾಟ: 14 ಮಂದಿ ಸೆರೆ
 
ಕಾಸರಗೋಡು :ಇಲ್ಲಿನ ಅಶ್ವಿನಿ ನಗರ ಮತ್ತು ಮಾಕರ್ೆಟ್ ಗುಡ್ಡೆಯಲ್ಲಿ ಮಟ್ಕಾ ಜೂಜಾಟ ಕೇಂದ್ರಗಳಿಗೆ ಪೊಲೀಸರು ಮಿಂಚಿನ ದಾಳಿ ನಡೆಸಿ 14 ಮಂದಿಯನ್ನು ಸೆರೆ ಹಿಡಿದು 11,170 ರೂ.ಗಳನ್ನು ವಶಪಡಿಸಿದ್ದಾರೆ.
 
ನಿಧನ
ಕೆ.ಯಜ್ಞೇಶ್
ಕಾಸರಗೋಡು: ನಗರದ ಕೊರಕ್ಕೋಡು ಮಥುರಾನಗರ ನಿವಾಸಿ, ನೃತ್ಯ ಕಲಾವಿದ ಕೆ.ಯಜ್ಞೇಶ್(27) ಗುರುವಾರ ರಾತ್ರಿ ನಿಧನರಾದರು. ಹೃದಯಾಘಾತವೇ ಸಾವಿಗೆ ಕಾರಣ.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ನೀಚರ್ಾಲು ಶಾಲೆಯಲ್ಲಿ ಓಣಂ


ಕಾಸರಗೋಡು: ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ವಿದ್ಯಾಥರ್ಿಗಳಿಗೆ ಶುಕ್ರವಾರ ಸಂಭ್ರಮದ ದಿನ. ರಂಝಾನ್ ಹಬ್ಬದ ನಿಮಿತ್ತ ವಾರ ಮುಂಚಿತವಾಗಿ ಓಣಂ ಔತಣ ಸವಿಯುವ ಸೌಭಾಗ್ಯ.
ಹಬ್ಬದ ನಿಮಿತ್ತ ಹಗ್ಗ ಜಗ್ಗಾಟ, ಹೂ ರಂಗವಲಿ(ಪೂಕ್ಕಳಂ) ಇತ್ಯಾದಿ ಸ್ಪಧರ್ೆಗಳು ನಡೆಯಿತು. ಬದಿಯಡ್ಕ ಗ್ರಾಮ ಪಂಚಾಯ್ತಿ ಸದಸ್ಯ ಅಬ್ಬಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್, ಪ್ರಾಥಮಿಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮುಖ್ಯೋಪಾಧ್ಯಾಯರುಗಳಾದ ಯು.ರವಿಕೃಷ್ಣ, ಪಿ.ಗೋವಿಂದ ಭಟ್ ಇದ್ದರು.

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Tuesday, August 18, 2009

ದೇಶೀಯ ಅಧ್ಯಾಪಕ ಪರಿಷತ್ತಿನ ಜಿಲ್ಲಾ ಧರಣಿ

ಕಾಸರಗೋಡಿನ ಹೊಸ ಬಸ್ಸುನಿಲ್ದಾಣದ ವಠಾರದಲ್ಲಿ ದೇಶೀಯ ಅಧ್ಯಾಪಕ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲಾ ಧರಣಿಯನ್ನು ಪರಿಷತ್ತಿನ ರಾಜ್ಯ ಕೋಶಾಧಿಕಾರಿ ಅಶೋಕ್ ಬಾಡೂರು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

 
ದೇಶೀಯ ಅಧ್ಯಾಪಕ ಪರಿಷತ್ತಿನ ಜಿಲ್ಲಾ ಧರಣಿ

ಕಾಸರಗೋಡು: ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಬೇಕು ಎಂದು ದೇಶೀಯ ಅಧ್ಯಾಪಕ ಪರಿಷತ್ತಿನ ರಾಜ್ಯ ಕೋಶಾಧಿಕಾರಿ ಅಶೋಕ್ ಬಾಡೂರು ಆಗ್ರಹಿಸಿದ್ದಾರೆ.
ದೇಶೀಯ ಅಧ್ಯಾಪಕ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಗರದ ಹೊಸ ಬಸ್ಸುನಿಲ್ದಾಣದ ವಠಾರದಲ್ಲಿ ಜರುಗಿದ ಜಿಲ್ಲಾ ಧರಣಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದ ಅಧ್ಯಾಪಕರು ಮತ್ತು ಸಕರ್ಾರಿ ನೌಕರರಿಗೆ 2007 ಜುಲೈಯಿಂದ ಲಭಿಸಬೇಕಿದ್ದ ವೇತನ ಪರಿಷ್ಕರಣೆಯ ಬಗ್ಗೆ ಸಕರ್ಾರ ನಿರ್ಲಕ್ಷ್ಯ ವಹಿಸಿದೆ. ಈ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಮೌನ ವಹಿಸಿದೆ ಎಂದೂ ಅವರು ಆರೋಪಿಸಿದರು.
ಎನ್.ಟಿ.ಯು. ಜಿಲ್ಲಾಧ್ಯಕ್ಷ ಬಿ.ಭಾಸ್ಕರ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಎನ್.ಜಿ.ಒ. ಸಂಘದ ಕೇರಳ ರಾಜ್ಯ ಉಪಾಧ್ಯಕ್ಷ ಭಾಸ್ಕರ, ಈಶ್ವರ ನಾಕ್, ಸೀತಾರಾಮ ರಾವ್, ನರಸಿಂಹ ಮಯ್ಯ, ವೇಣುಗೋಪಾಲ ಕೆ, ಚಂದ್ರಹಾಸ ಸಿ, ಪ್ರಭಾಶಂಕರ ಎ, ಅರವಿಂದ ವೈ, ಪ್ರೇಮಲತಾ ಕೆ, ರೇವತಿ ಟೀಚರ್, ಶ್ಯಾಮಲ ಕೆ, ಅಶೋಕ ಅರಳಿತ್ತಾಯ, ಶಿವಶಂಕರ ಭಟ್, ಶ್ರೀಧರ ರಾವ್, ಅರವಿಂದ ಭಂಡಾರಿ, ನಾರಾಯಣ ಎ, ಗೋಪಾಲಕೃಷ್ಣ ಪಿ, ಅರವಿಂದ ಎಂ.ಕೆ, ವೆಂಕಪ್ಪ ಶೆಟ್ಟಿ ಇದ್ದರು.
ಕೈಲಾಸಮೂತರ್ಿ ಸ್ವಾಗತಿಸಿ, ವೇಣುಗೋಪಾಲ ವಂದಿಸಿದರು.



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಲಾರಿ-ಬಸ್ಸು ಡಿಕ್ಕಿ: 6 ಮಂದಿಗೆ ಗಾಯ

ಕಾಸರಗೋಡಿನ ಕುಂಬಳೆ ಬಳಿ ಸೋಮವಾರ ಸಂಜೆ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ನಜ್ಜುಗುಜ್ಜಾದ ಬಸ್ಸನ್ನು ನೋಡುತ್ತಿರುವ ಜನರು.

 
ಕುಂಬಳೆಯಲ್ಲಿ ಲಾರಿ-ಬಸ್ಸು ಡಿಕ್ಕಿ: 6 ಮಂದಿಗೆ ಗಾಯ
 
ಕಾಸರಗೋಡು: ಇಲ್ಲಿನ ಕುಂಬಳೆ ಹೊಳೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಕೇರಳ ರಾಜ್ಯದ  ಮಲಬಾರ್ ಬಸ್ಸು  ಮತ್ತು ಲಾರಿ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಗಾಯಾಳುಗಳ ಪೈಕಿ ಬಸ್ಸಿನ ಚಾಲಕ ಕಣ್ಣೂರು ಪುದಿಯ ತೆರುವಿನ ವಿನೋದ್(40) ಮತ್ತು ಲಾರಿ ಚಾಲಕ ಮಹಾರಾಷ್ಟ್ರದ ಅಮುಲ್ ನಗರದ ಸಂತೋಷ್(30) ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿದ್ದ ಸುಳ್ಯ ಬಲ್ಲಾರ ನಿವಾಸಿಗಳಾದ ಇಬ್ರಾಹಿಂ, ಸಿದ್ದಿಕ್, ಕಾಸರಗೋಡಿನ ಮುನಾವರ್, ಹಾಗೂ ಮಂಗಳೂರಿನ ವೈದ್ಯರೊಬ್ಬರು ಗಾಯಗೊಂಡವರು.
ಸಂಜೆ 3.30ರ ವೇಳೆಗೆ ಕುಂಬಳೆಯ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯದ ಬಳಿ ಈ ಘಟನೆ ನಡೆದಿದೆ. ಮಂಗಳೂರಿನಿಂದ ತಲಶ್ಶೇರಿಗೆ ಸಂಚರಿಸುತ್ತಿದ್ದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಮಲಬಾರ್ ಬಸ್ಸು ಮತ್ತು ತೃಶೂರಿನಿಂದ ಮುಂಬೈಗೆ ಮರ ಹೇರಿಕೊಂಡು ಸಂಚರಿಸುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಚಾಲಕ ಕುಳಿತುಕೊಳ್ಳವ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮುಂಭಾಗದ ವಾಹನವೊಂದನ್ನು ಹಿಂಬಲಿಸಲು ಯತ್ನಿಸಿದ ಲಾರಿ ಹೊಂಡವೊಂದಕ್ಕೆ ಬಿದ್ದು ನಿಯಂತ್ರಣ ತಪ್ಪಿ ಬಸ್ಸಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ತೀವ್ರತೆಗೆ ಬಸ್ಸಿನ ಹಿಂಭಾಗದ ಚಕ್ರ ಕಳಚಿ ರಸ್ತೆ ಬದಿಗೆ ಬಿದ್ದಿದೆ. ಜೆ.ಸಿ.ಬಿ. ಬಳಸಿ ಲಾರಿಯನ್ನು ರಸ್ತೆ ಬದಿಗೆ ಹಾಕಿದ ಬಳಿಕ ಏಕಮುಖಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇದರಿಂದ ಕಿ.ಮೀ. ದೂರದವರೆಗೆ ವಾಹನಗಳು ಸಾಲು ನಿಲ್ಲಬೇಕಾಯಿತು.
 
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಕಳಪೆ ಕಾಮಗಾರಿ: ಕ್ರಮಕ್ಕೆ ಸಿ.ಪಿ.ಐ. ಆಗ್ರಹ


ಮಂಜೇಶ್ವರ: ಮಂಜೇಶ್ವರದಿಂದ ಉಪ್ಪಳ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿ.ಪಿ.ಐ. ಬಂಗ್ರ ಮಂಜೇಶ್ವರ  ಶಾಖೆಯ ಸಮ್ಮೇಳನ ಆಗ್ರಹಿಸಿದೆ.
ಹೊಸಂಗಡಿ ಪೇಟೆಯ ಸಮಗ್ರ ಅಭಿವೃದ್ಧಿಗೆ ಮಲಬಾರ್ ಪ್ಯಾಕೇಜ್ನಲ್ಲಿ ಸೇರ್ಪಡೆಗೊಳಿಸಬೇಕು, ಉಪ್ಪಳ ಹೊಳೆಗೆ ಮಾಲಿನ್ಯ ಸುರಿಯುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅಂಗವಿಕಲರಿಗೆ ಉದ್ಯೋಗ ಕಲ್ಪಿಸುವ ಪ್ರತ್ಯೇಕ ಯೋಜನೆಗೆ ಚಾಲನೆ ನೀಡಬೇಕು, ಬಾಕಿ ಉಳಿದಿರುವ ಪಿಂಚಣಿಯನ್ನು ಶೀಘ್ರದಲ್ಲಿಯೇ ಒದಗಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿದೆ.
ಮಂಡಲ ನಿವರ್ಾಹಕ ಸಮಿತಿ ಸದಸ್ಯ ಸುಧಾನಂದ ಸಮ್ಮೇಳನವನ್ನು ಉದ್ಘಾಟಿಸಿದರು. ಎ.ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸದಸ್ಯ ಬಿ.ಎಂ.ಕೇಶವ ಧ್ವಜಾರೋಹಣ ಮಾಡಿದರು. ಯತೀಶ್ ಮತ್ತು ಶ್ರೀಲತಾ ಠರಾವು ಮಂಡಿಸಿದರು. 
ಜಿಲ್ಲಾ ನಿವರ್ಾಹಕ ಸಮಿತಿ ಸದಸ್ಯ ಬಿ.ವಿ.ರಾಜನ್, ಕಾರ್ಯದಶರ್ಿ ಬಿ.ಎಂ.ಯತೀಶ್, ಕಬೀರ್, ನಾರಾಯಣಿ, ಭಾರತಿ, ನವೀನ, ರತೀಶ್, ಕೇಶವ, ಗಂಗಾಧರ ಹಾಜರಿದ್ದರು.
ನೂತನ ಕಾರ್ಯದಶರ್ಿಯಾಗಿ ಬಿ.ಎಂ.ಯತೀಶ್, ಜತೆ ಕಾರ್ಯದಶರ್ಿಯಾಗಿ ರತೀಶ್ ಆಯ್ಕೆಯಾದರು.
 
 
 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಸೋಣೊಗು ಸುಗಿಪು/Farmers Day


ಸೀತಾಂಗೋಳಿ ಸಮೀಪದ ಗುಂಡ್ಯಡ್ಕ ಜಿ.ಪಾಕರ್್ನಲ್ಲಿ ಕೇರಳ ತುಳು ಅಕಾಡೆಮಿ, ಕಿಸಾನ್ ಸೇನೆ, ತುಳುವೆರೆ ಆಯನೊ ಕೂಟ, ಫೋಕ್ ಲ್ಯಾಂಡ್ ಮತ್ತು ಗ್ರಾಮೀಣ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಜಂಟಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ ಕೃಷಿಕರ ದಿನಾಚರಣೆ ಮತ್ತು ಸೋಣೊಗು ಸುಗಿಪು ಸಮಾರೋಪ ಸಮಾರಂಭದಲ್ಲಿ ಮಲಬಾರ್ ದೇವಸ್ವ ಮಂಡಳಿಯ ಸದಸ್ಯ ಎಂ.ದಾಸಪ್ಪ ಶೆಟ್ಟಿ ಮಾತನಾಡಿದರು.

 
 

ಜನಪದ ಸಂಸ್ಕೃತಿ ಅಳಿದರೆ ವಿಶ್ವಕ್ಕೆ ಮಾರಕ

ಕಾಸರಗೋಡು: ಜನಪದ ಸಂಸ್ಕೃತಿ ಅಳಿದರೆ ವಿಶ್ವಕ್ಕೆ ಮಾರಕ ಎಂದು ಕೇರಳ ಲಲಿತ ಕಲಾ ಅಕಾಡೆಮಿಯ ಮಾಜಿ ಸದಸ್ಯ ಕೆ.ಕೆ.ಮಾರಾರ್ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.
ಸೀತಾಂಗೋಳಿ ಸಮೀಪದ ಗುಂಡ್ಯಡ್ಕ ಜಿ.ಪಾಕರ್್ನಲ್ಲಿ ಕೇರಳ ತುಳು ಅಕಾಡೆಮಿ, ಕಿಸಾನ್ ಸೇನೆ, ತುಳುವೆರೆ ಆಯನೊ ಕೂಟ, ಫೋಕ್ ಲ್ಯಾಂಡ್ ಮತ್ತು ಗ್ರಾಮೀಣ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕೃಷಿಕರ ದಿನಾಚರಣೆ ಮತ್ತು ಸೋಣೊಗು ಸುಗಿಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದ ಬಹುತೇಕ ಕಲೆಗಳು ತುಳುನಾಡಿನ ಕೊಡುಗೆಯಾಗಿದೆ ಎಂದೂ ಅವರು ವಿಶ್ಲೇಷಿಸಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಸದಸ್ಯ ರಾಜೇಶ್ ಆಳ್ವ, ಫೋಕ್ಲ್ಯಾಂಡಿನ ಅಧ್ಯಕ್ಷ ಡಾ.ವಿ.ಜಯರಾಜನ್, ಪುತ್ತಿಗೆ ಪಂಚಾಯ್ತಿ ಅಧ್ಯಕ್ಷ ತೋಮಸ್ ಡಿ'ಸೋಜಾ, ಡಾ.ವಿದ್ಯಾಮೋಹನ್ದಾಸ್ ರೈ, ತುಳುಕೂಟದ ಕಾರ್ಯದಶರ್ಿ ಬಿ.ಪಿ.ಶೇಣಿ, ರಘುರಾಮ ಆಳ್ವ ಪಳ್ಳತ್ತಡ್ಕ ಹಾಜರಿದ್ದರು. ಜಿ.ಶಂಕರನಾರಾಯಣ ಭಟ್ಟರನ್ನು ಸನ್ಮಾನಿಸಲಾಯಿತು.
ಬಳಿಕ ಆಟಿಕಳೆಂಜ, ಸೋಣ ಜೋಗಿ, ಕನ್ಯಾಪು, ಮಾದಿರ ಮೊದಲಾದ ತುಳು ಜನಪದ ಕುಣಿತದ ಪ್ರದರ್ಶನ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ತುಳು ಅಕಾಡೆಮಿಯ ಸದಸ್ಯ ಸುಧಾಕರ ಮಾಸ್ಟರ್, ಕಿಸಾನ್ ಸೇನೆಯ ಅಧ್ಯಕ್ಷ ಗುಂಡ್ಯಡ್ಕ ವೆಂಕಟರಮಣ ಭಟ್, ಮಲಬಾರ್ ದೇವಸ್ವ ಮಂಡಳಿಯ ಸದಸ್ಯ ಎಂ.ದಾಸಪ್ಪ ಶೆಟ್ಟಿ, ಪುತ್ತಿಗೆ ಪಂಚಾಯ್ತಿ ಸದಸ್ಯ ಸುಬ್ಬಣ್ಣ ಆಳ್ವ ಹಾಜರಿದ್ದರು.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಸೋಣ ಜೋಗಿ

ಸೀತಾಂಗೋಳಿ ಸಮೀಪದ ಗುಂಡ್ಯಡ್ಕ ಜಿ.ಪಾಕರ್್ನಲ್ಲಿ ಕೇರಳ ತುಳು ಅಕಾಡೆಮಿ, ಕಿಸಾನ್ ಸೇನೆ, ತುಳುವೆರೆ ಆಯನೊ ಕೂಟ, ಫೋಕ್ ಲ್ಯಾಂಡ್ ಮತ್ತು ಗ್ರಾಮೀಣ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಜಂಟಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ ಕೃಷಿಕರ ದಿನಾಚರಣೆ ಮತ್ತು ಸೋಣೊಗು ಸುಗಿಪು ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಸೋಣ ಜೋಗಿ.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಆಟಿಕಳೆಂಜ

ಸೀತಾಂಗೋಳಿ ಸಮೀಪದ ಗುಂಡ್ಯಡ್ಕ ಜಿ.ಪಾಕರ್್ನಲ್ಲಿ ಕೇರಳ ತುಳು ಅಕಾಡೆಮಿ, ಕಿಸಾನ್ ಸೇನೆ, ತುಳುವೆರೆ ಆಯನೊ ಕೂಟ, ಫೋಕ್ ಲ್ಯಾಂಡ್ ಮತ್ತು ಗ್ರಾಮೀಣ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಜಂಟಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ ಕೃಷಿಕರ ದಿನಾಚರಣೆ ಮತ್ತು ಸೋಣೊಗು ಸುಗಿಪು ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಆಟಿಕಳೆಂಜ.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಮಾದಿರ ಕುಣಿತ/Farmers Day


ಸೀತಾಂಗೋಳಿ ಸಮೀಪದ ಗುಂಡ್ಯಡ್ಕ ಜಿ.ಪಾಕರ್್ನಲ್ಲಿ ಕೇರಳ ತುಳು ಅಕಾಡೆಮಿ, ಕಿಸಾನ್ ಸೇನೆ, ತುಳುವೆರೆ ಆಯನೊ ಕೂಟ, ಫೋಕ್ ಲ್ಯಾಂಡ್ ಮತ್ತು ಗ್ರಾಮೀಣ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಜಂಟಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ ಕೃಷಿಕರ ದಿನಾಚರಣೆ ಮತ್ತು ಸೋಣೊಗು ಸುಗಿಪು ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಮಾದಿರ ಕುಣಿತ.

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಆ.22ರಂದು ಕುಶ ಲವ ಜನನ ಮಾಸಾಚರಣೆ

 
 
ಕಾಸರಗೋಡು: ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನರ್ಾಟಕ ಗಮಕ ಕಲಾ ಪರಿಷತ್ತಿನ ಆಶ್ರಯದಲ್ಲಿ ಕುಶ ಲವ ಜನನ ಮಾಸಾಚರಣೆ ಸಮಾರೋಪ ಸಮಾರಂಭ ಇದೇ 22ರಂದು ನಗರದ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಅಂದು ಬೆಳಗ್ಗೆ 9.30ಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಉದ್ಘಾಟಿಸುವರು. ಕನರ್ಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬೆ.ಗೋ.ರಮೇಶ್ ಅಧ್ಯಕ್ಷತೆ ವಹಿಸುವರು.
ಹಿರಿಯ ವಿದ್ವಾಂಸ ಖಂಡಿಗೆ ಶ್ಯಾಮ ಭಟ್ ಅವರನ್ನು ಸನ್ಮಾನಿಸಲಾಗುವುದು.
10.30ಕ್ಕೆ ನಡೆಯುವ ವಿಚಾರಸಂಕಿರಣದಲ್ಲಿ ಆದಿ ಗಮಕಿಗಳಾದ ಕುಶಲವರು ಎಂಬ ವಿಷಯದಲ್ಲಿ ಸಿ.ಗೋಪಾಲ ಕೃಷ್ಣ ಶಾಸ್ತ್ರೀ ಉಪನ್ಯಾಸ ನೀಡುವರು. ಬಳಿಕ ಕಾವ್ಯ ವಾಚನ ನಡೆಯಲಿದೆ.
11.45ಕ್ಕೆ ಗದುಗಿನ ಭಾರತ ಕುರಿತು ಡಾ.ಉಪ್ಪಂಗಳ ಶಂಕರ ನಾರಾಯಣ ಭಟ್ ಮಾತನಾಡುವರು. ಟಿ.ಎಸ್.ಅನ್ನಪೂರ್ಣ ಭಕ್ರವತ್ಸಲ ಅವರಿಂದ ಗಮಕ ವಾಚನ, ಮಧ್ಯಾಹ್ನ 2.15ಕ್ಕೆ ಜೈಮಿನಿ ಭಾರತ ಬಗ್ಗೆ ಗೋಪಾಲಕೃಷ್ಣ ಮಧುರಕಾನನ ಮಾತನಾಡುವರು. ತೆಕ್ಕೇಕೆರೆ ಸುಬ್ರಹ್ಮಣ್ಯ ಭಟ್ ಅವರಿಂದ ಗಮಕ ವಾಚನ, ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ರಮಾನಂದ ಬನಾರಿ ಸಮಾರೋಪ ಭಾಷಣ ಮಾಡುವರು. ಟಿ.ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸುವರು.

 
ಯು.ಪಿ.ಕುಣಿಕುಳ್ಳಾಯ ಸಂಸ್ಮರಣೆ
 
ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಶ್ರಯದಲ್ಲಿ ಇತ್ತೀಚೆಗೆ ಕನ್ನಡ ಹೋರಾಟಗಾರ ಯು.ಪಿ.ಕುಣಿಕುಳ್ಳಾಯ ಸಂಸ್ಮರಣಾ ಕಾರ್ಯಕ್ರಮ ಜರುಗಿತು.
ಐ.ವಿ. ಭಟ್, ಎ.ವಿ.ಶ್ಯಾನುಭೋಗ್, ಅಡೂರು ಉಮೇಶ್ ನಾಯ್ಕ್  ಸಂಸ್ಮರಣಾ ಭಾಷಣ ಮಾಡಿದರು.
ಘಟಕದ ಅಧ್ಯಕ್ಷ ಎಸ್.ವಿ.ಅಧ್ಯಕ್ಷತೆ ವಹಿಸಿದ್ದರು.
ಸುಕುಮಾರ ಆಲಂಪಾಡಿ ಸ್ವಾಗತಿಸಿ, ರಾಮಚಂದ್ರ ಭಟ್ ವಂದಿಸಿದರು. ರತ್ನಾಕರ ಮಲ್ಲಮೂಲೆ ನಿರೂಪಿಸಿದರು.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಸ್ವಾತಂತ್ರ್ಯ: ಶಾಲಾ ಮಕ್ಕಳ ಮೆರವಣಿಗೆ

ಕಾಸರಗೋಡಿನ ಬೇಳ ಸಂತ ಬಾರ್ತಲೋಮೆಯಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲಿ ರಾಷ್ಟ್ರೀಯ ಭಾವೈಕ್ಯತಾ ನೃತ್ಯ ರೂಪಕಗಳು ರಂಜಿಸಿತು.


ಗಮನ ಸೆಳೆದ ಶಾಲಾ ಮಕ್ಕಳ ಮೆರವಣಿಗೆ
ಕಾಸರಗೋಡು: ಇಲ್ಲಿನ ಬೇಳ ಸಂತ ಬಾರ್ತಲೋಮೆಯಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶನಿವಾರ ಆಕರ್ಷಕ ಮೆರವಣಿಗೆ ಮತ್ತು ರಾಷ್ಟ್ರೀಯ ಭಾವೈಕ್ಯತಾ ನೃತ್ಯ ರೂಪಕಗಳು ನಡೆಯಿತು.
ಸೀತಾಂಗೋಳಿ ಮತ್ತು ವಿಷ್ಣುಮೂತರ್ಿ ನಗರದಿಂದ ಶಾಲೆಯತ್ತ ಎರಡು ಪ್ರತ್ಯೇಕ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು. ಶಾಲಾ ನಾಯಕರಾದ ಸಾವನ್ ಡೀಮೆನ್ ಡಿ'ಸೋಜಾ ಮತ್ತು  ಲಹರಿ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ವಿವಿಧ ಪ್ರದೇಶಗಳಲ್ಲಿ ನಾಗರಿಕರ ಭವ್ಯ ಸ್ವಾಗತ ಮತ್ತು ಸಿಹಿ ತಿಂಡಿ ವಿತರಣೆ ನಡೆಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘ ಮತ್ತು ವಿದ್ಯಾಭಿಮಾನಿಗಳ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ವಿದ್ಯಾಥರ್ಿಗಳೇ ಮುಖ್ಯ ಪಾತ್ರ ವಹಿಸಿದ್ದರು. 
ಶಾಲೆಯಲ್ಲಿ ಬದಿಯಡ್ಕ ಪಂಚಾಯ್ತಿ ಸದಸ್ಯೆ ಸುಮತಿ ಧ್ವಜಾರೋಹಣ ಮಾಡಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಿ.ಕೆ.ಭಟ್ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾನಿ ಸಿ.ನೆಲ್ಲಿ ಹಾಜರಿದ್ದರು. ಸ್ವಾತಂತ್ರ್ಯ ಹೋರಾಟಗಾರರ ವ್ಯಕ್ತಿ-ಚಿತ್ರವನ್ನೊಳಗೊಂಡ ಹಸ್ತಪತ್ರಿಕೆಯನ್ನು ಸಿ.ಜೆನೆವೆವ್ ಬಿಡುಗಡೆಗೊಳಿಸಿದರು. ವಿವಿಧ ಸ್ಪಧರ್ೆಗಳ  ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ರಾಷ್ಟ್ರೀಯ ಭಾವೈಕ್ಯತೆ ಕುರಿತು ವಿದ್ಯಾಥರ್ಿಗಳು ಪ್ರದಶರ್ಿಸಿದ ನೃತ್ಯ ರೂಪಕಗಳು ಮಕ್ಕಳನ್ನು ರಂಜಿಸಿತು.
ಅನ್ನಾ ಮರಿಯ ಮತ್ತು ಕ್ಷಮಾ ಸ್ವಾಗತಿಸಿ, ಅಪೇಕ್ಷಾ ವಂದಿಸಿದರು. ಪ್ರಿಯಾ ಮತ್ತು ಸೂರಜ್ ನಿರೂಪಿಸಿದರು,


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಬೇಳ ಶಾಲೆಯ ಸ್ವಾತಂತ್ರ್ಯ ದಿನಾಚರಣೆ ಮೆರವಣಿಗೆ

ಕಾಸರಗೋಡಿನ ಬೇಳ ಸಂತ ಬಾರ್ತಲೋಮೆಯಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಮೆರವಣಿಗೆಯಲ್ಲಿ ಮಕ್ಕಳದೇ ಕಲರವ.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಶುಚೀಕರಣ ಯಜ್ಞ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾಸರಗೋಡು ಸಮುದಾಯ ಪೊಲೀಸರ ಆಶ್ರಯದಲ್ಲಿ ನಗರದ 7 ಪ್ರದೇಶಗಳಲ್ಲಿ ಶುಚೀಕರಣ ಯಜ್ಞ ನಡೆಯಿತು.

ಪೋಲಿಸರಿಂದ ಶುಚೀಕರಣ ಯಜ್ಞ

ಕಾಸರಗೋಡು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾಸರಗೋಡು ಸಮುದಾಯ ಪೊಲೀಸರ ಆಶ್ರಯದಲ್ಲಿ ನಗರದ 7 ಪ್ರದೇಶಗಳಲ್ಲಿ ಶುಚೀಕರಣ ಯಜ್ಞ ನಡೆಯಿತು.
ಕಾಸರಗೋಡು ಜನರಲ್ ಆಸ್ಪತ್ರೆ, ವಿದ್ಯಾನಗರ ಬಸ್ಸು ನಿಲ್ದಾಣ, ಸಕರ್ಾರಿ ಪ್ರೌಢಶಾಲೆ ವಠಾರ, ತಳಂಗೆರೆ ಸಿರಾಮಿಕ್ಸ್ ರಸ್ತೆ ಮೊದಲಾದ ಪ್ರದೇಶಗಳಲ್ಲಿ ಶುಚೀಕರಣ ನಡೆಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಡಿವೈಎಸ್ಪಿ ಕೆ.ಅಬ್ದುಲ್ ಗಫೂರ್, ಸಿ.ಐ.ಕೆ.ಪ್ರೇಮ್ರಾಜ್, ಎಸ್.ಐ.ವಿಶ್ವಂಭರನ್, ಇ.ಚಂದ್ರಶೇಖರನ್ ನಾಯರ್ ಹಾಜರಿದ್ದರು.

 

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ನೀಚರ್ಾಲಿನಲ್ಲಿ ಸ್ವಾತಂತ್ರ್ಯೋತ್ಸವ

ಕಾಸರಗೋಡು: ಮಹಾಪುರುಷರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ತ್ಯಾಗಿಗಳ ಬಲಿದಾನವನ್ನು ನೆನಪಿಸಿಕೊಳ್ಳಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಕಾನ ಈಶ್ವರ ಭಟ್ ಹೇಳಿದರು.
ಶನಿವಾರ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಡವರ ಸೇವೆ, ಪರೋಪಕಾರ, ಅಹಿಂಸೆ, ಸತ್ಯ, ಶಾಂತಿ ನಮ್ಮ ಮಂತ್ರವಾಗಬೇಕು. ಆ ಮೂಲಕ ನಮ್ಮ ದೇಶದ ಉದ್ಧಾರ ಆಗಬೇಕು ಎಂದೂ ಅವರು ವಿವರಿಸಿದರು.
ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕೆ.ನಾರಾಯಣ ಭಟ್, ಎಂ.ಸೂರ್ಯನಾರಾಯಣ, ಪ್ರವೀಣ್ ಕುಮಾರ್, ಅವಿತೇಶ್ ಬಿ, ಕೀತರ್ಿ ಬಿ. ಮತ್ತು ಶ್ರೀಶ ಕೆ. ಹಾಜರಿದ್ದರು.
ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಸ್ವಾಗತಿಸಿ, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮುಖ್ಯೋಪಾಧ್ಯಾಯ ರವಿಕೃಷ್ಣ.ಯು ವಂದಿಸಿದರು. ಕಾರ್ಯಕ್ರಮ ಸಂಚಾಲಕ, ಶಾಲಾ ಅಧ್ಯಾಪಕ ಚಂದ್ರಶೇಖರ ರೈ ನಿರೂಪಿಸಿದರು.
`ಸ್ವಾತಂತ್ರ್ಯದ ಸ್ಮೃತಿ' ಹಸ್ತಪ್ರತಿ ಬಿಡುಗಡೆಗೊಳಿಸಲಾಯಿತು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ವಿದ್ಯಾಥರ್ಿಗಳಿಂದ ಸ್ವಾತಂತ್ರ್ಯ ಉಪ್ಪಿನ ಸತ್ಯಾಗ್ರಹದ ಕುರಿತಾದ ಪ್ರಾತ್ಯಕ್ಷಿಕೆ, ಸ್ವಾತಂತ್ರ್ಯ ರೂಪಕ, ದೇಶಭಕ್ತಿಗೀತೆ, ನೃತ್ಯ ಕಾರ್ಯಕ್ರಮಗಳು ಜರುಗಿತು.

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

`ಸ್ವಾತಂತ್ರ್ಯದ ಸ್ಮೃತಿ'

ಕಾಸರಗೋಡು ತಾಲೂಕಿನ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ `ಸ್ವಾತಂತ್ರ್ಯದ ಸ್ಮೃತಿ' ಹಸ್ತಪ್ರತಿ ಬಿಡುಗಡೆಗೊಳಿಸಲಾಯಿತು.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಸ್ವಾತಂತ್ರ್ಯೋತ್ಸವ

ಕಾಸರಗೋಡು ತಾಲೂಕಿನ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿದ್ಯಾಥರ್ಿಗಳಿಂದ ನೃತ್ಯ ಕಾರ್ಯಕ್ರಮಗಳು ಜರುಗಿತು.

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಸ್ವಾತಂತ್ರ್ಯೋತ್ಸವ

ಕಾಸರಗೋಡು ತಾಲೂಕಿನ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿದ್ಯಾಥರ್ಿಗಳಿಂದ ಉಪ್ಪಿನ ಸತ್ಯಾಗ್ರಹದ ಕುರಿತು ನಡೆದ ಪ್ರಾತ್ಯಕ್ಷಿಕೆ- ರೂಪಕ ಗಮನಸೆಳೆಯಿತು.

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::