ಕಾಸರಗೋಡಿನ ಹೊಸ ಬಸ್ಸುನಿಲ್ದಾಣದ ವಠಾರದಲ್ಲಿ ದೇಶೀಯ ಅಧ್ಯಾಪಕ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲಾ ಧರಣಿಯನ್ನು ಪರಿಷತ್ತಿನ ರಾಜ್ಯ ಕೋಶಾಧಿಕಾರಿ ಅಶೋಕ್ ಬಾಡೂರು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡು: ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಬೇಕು ಎಂದು ದೇಶೀಯ ಅಧ್ಯಾಪಕ ಪರಿಷತ್ತಿನ ರಾಜ್ಯ ಕೋಶಾಧಿಕಾರಿ ಅಶೋಕ್ ಬಾಡೂರು ಆಗ್ರಹಿಸಿದ್ದಾರೆ.
ದೇಶೀಯ ಅಧ್ಯಾಪಕ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಗರದ ಹೊಸ ಬಸ್ಸುನಿಲ್ದಾಣದ ವಠಾರದಲ್ಲಿ ಜರುಗಿದ ಜಿಲ್ಲಾ ಧರಣಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದ ಅಧ್ಯಾಪಕರು ಮತ್ತು ಸಕರ್ಾರಿ ನೌಕರರಿಗೆ 2007 ಜುಲೈಯಿಂದ ಲಭಿಸಬೇಕಿದ್ದ ವೇತನ ಪರಿಷ್ಕರಣೆಯ ಬಗ್ಗೆ ಸಕರ್ಾರ ನಿರ್ಲಕ್ಷ್ಯ ವಹಿಸಿದೆ. ಈ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಮೌನ ವಹಿಸಿದೆ ಎಂದೂ ಅವರು ಆರೋಪಿಸಿದರು.
ಎನ್.ಟಿ.ಯು. ಜಿಲ್ಲಾಧ್ಯಕ್ಷ ಬಿ.ಭಾಸ್ಕರ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಎನ್.ಜಿ.ಒ. ಸಂಘದ ಕೇರಳ ರಾಜ್ಯ ಉಪಾಧ್ಯಕ್ಷ ಭಾಸ್ಕರ, ಈಶ್ವರ ನಾಕ್, ಸೀತಾರಾಮ ರಾವ್, ನರಸಿಂಹ ಮಯ್ಯ, ವೇಣುಗೋಪಾಲ ಕೆ, ಚಂದ್ರಹಾಸ ಸಿ, ಪ್ರಭಾಶಂಕರ ಎ, ಅರವಿಂದ ವೈ, ಪ್ರೇಮಲತಾ ಕೆ, ರೇವತಿ ಟೀಚರ್, ಶ್ಯಾಮಲ ಕೆ, ಅಶೋಕ ಅರಳಿತ್ತಾಯ, ಶಿವಶಂಕರ ಭಟ್, ಶ್ರೀಧರ ರಾವ್, ಅರವಿಂದ ಭಂಡಾರಿ, ನಾರಾಯಣ ಎ, ಗೋಪಾಲಕೃಷ್ಣ ಪಿ, ಅರವಿಂದ ಎಂ.ಕೆ, ವೆಂಕಪ್ಪ ಶೆಟ್ಟಿ ಇದ್ದರು.
ಕೈಲಾಸಮೂತರ್ಿ ಸ್ವಾಗತಿಸಿ, ವೇಣುಗೋಪಾಲ ವಂದಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment