ಕಾಸರಗೋಡು: ಇಲ್ಲಿನ ಚೆಮ್ನಾಡು ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯ ಇಬ್ಬರು ವಿದ್ಯಾಥರ್ಿಗಳು ಕೆರೆಗೆ ಬಿದ್ದು ಸಾವನ್ನಪ್ಪಿಧ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ನಗರದ ತೆರುವತ್ ಸಿರಾಮಿಕ್ಸ್ ರಸ್ತೆ ಬಳಿಯ ನಿರ್ಮಲಾಕ್ಷ ಎಂಬವರ ಪುತ್ರ ಜನೀಶ್ಚಂದ್ರನ್(15) ಮತ್ತು ಮಧೂರು ಬಟ್ಟಂಪಾರೆಯ ಅಪ್ಪಕುಞ್ಞಿಯ ಪುತ್ರ ರತೀಶ್(15) ಮೃತಪಟ್ಟವರು.
ಶಾಲೆಯಲ್ಲಿ ಓಣಂ ಕಾರ್ಯಕ್ರಮ ನಡೆಯುತ್ತಿರುವ ವಿರಾಮದ ವೇಳೆ ಇವರಿಬ್ಬರೂ ಸೈಕಲ್ನಲ್ಲಿ ಸವಾರಿ ಹೊರಟಿದ್ದರು. ಚೆಮ್ನಾಡಿನ ರಸ್ತೆ ಬಳಿಯಿದ್ದ ಖಾಸಗಿ ಕೆರೆಗೆ ಸೈಕಲ್ ಸವಾರಿ ಮಾಡುತ್ತಾ ಆಟವಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ವಿದ್ಯಾಥರ್ಿಗಳ ಗೆಳೆಯರು ತಿಳಿಸಿದ್ದಾರೆ. ಸೈಕಲ್ನಲ್ಲಿ ವಿವಿಧ ಬಗೆಯ ಆಟವಾಡುತ್ತಾ ಕೆರೆಗೆ ಬೀಳುತ್ತಿದ್ದರು. ಈಜು ಗೊತ್ತಿದ್ದ ಅವರು ಸತ್ತು ನೀರಿನ ಮೇಲೆ ತೇಲಿದಾಗಲೇ ಗೆಳೆಯರಿಗೆ ಸಾವನ್ನಪ್ಪಿರುವುದು ತಿಳಿದುಬಂದು ಬೊಬ್ಬಿಟ್ಟರು. ಇದನ್ನು ಕೇಳಿ ಬಂದ ಜನರು ಶವಗಳನ್ನು ಮೇಲೆತ್ತಿದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಯಿತು. ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸ್ಥಳೀಯ ರಮ್ಯಾ ಎಂಬವರ ಒಂದೂವರೆ ವರ್ಷದ ಅಭಿನವ್ ಎಂಬ ಮಗು ನಿದ್ದೆಯಿಂದ ಏಳದಿರುವುದನ್ನು ಕಂಡು ಮುಟ್ಟದಾಗ ದೇಹ ತಣ್ಣಗಾಗಿ ನಿಶ್ಚಲವಾಗಿತ್ತು.
ತಕ್ಷಣ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಫಲಕಾರಿಯಾಗಲಿಲ್ಲ. ಅಷ್ಟರಲ್ಲಿ ಮಗು ಸತ್ತು ಒಂದು ತಾಸು ಕಳೆದಿತ್ತು. ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಒಯ್ಯಲಾಯಿತು.
ಹ್ಯಾರಿಸ್(23) ಎಂಬಾತ ಜುಲೈ 25ರಿಂದ ಕಾಣೆಯಾಗಿದ್ದಾನೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment