Tuesday, August 18, 2009

ಲಾರಿ-ಬಸ್ಸು ಡಿಕ್ಕಿ: 6 ಮಂದಿಗೆ ಗಾಯ

ಕಾಸರಗೋಡಿನ ಕುಂಬಳೆ ಬಳಿ ಸೋಮವಾರ ಸಂಜೆ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ನಜ್ಜುಗುಜ್ಜಾದ ಬಸ್ಸನ್ನು ನೋಡುತ್ತಿರುವ ಜನರು.

 
ಕುಂಬಳೆಯಲ್ಲಿ ಲಾರಿ-ಬಸ್ಸು ಡಿಕ್ಕಿ: 6 ಮಂದಿಗೆ ಗಾಯ
 
ಕಾಸರಗೋಡು: ಇಲ್ಲಿನ ಕುಂಬಳೆ ಹೊಳೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಕೇರಳ ರಾಜ್ಯದ  ಮಲಬಾರ್ ಬಸ್ಸು  ಮತ್ತು ಲಾರಿ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಗಾಯಾಳುಗಳ ಪೈಕಿ ಬಸ್ಸಿನ ಚಾಲಕ ಕಣ್ಣೂರು ಪುದಿಯ ತೆರುವಿನ ವಿನೋದ್(40) ಮತ್ತು ಲಾರಿ ಚಾಲಕ ಮಹಾರಾಷ್ಟ್ರದ ಅಮುಲ್ ನಗರದ ಸಂತೋಷ್(30) ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿದ್ದ ಸುಳ್ಯ ಬಲ್ಲಾರ ನಿವಾಸಿಗಳಾದ ಇಬ್ರಾಹಿಂ, ಸಿದ್ದಿಕ್, ಕಾಸರಗೋಡಿನ ಮುನಾವರ್, ಹಾಗೂ ಮಂಗಳೂರಿನ ವೈದ್ಯರೊಬ್ಬರು ಗಾಯಗೊಂಡವರು.
ಸಂಜೆ 3.30ರ ವೇಳೆಗೆ ಕುಂಬಳೆಯ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯದ ಬಳಿ ಈ ಘಟನೆ ನಡೆದಿದೆ. ಮಂಗಳೂರಿನಿಂದ ತಲಶ್ಶೇರಿಗೆ ಸಂಚರಿಸುತ್ತಿದ್ದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಮಲಬಾರ್ ಬಸ್ಸು ಮತ್ತು ತೃಶೂರಿನಿಂದ ಮುಂಬೈಗೆ ಮರ ಹೇರಿಕೊಂಡು ಸಂಚರಿಸುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಚಾಲಕ ಕುಳಿತುಕೊಳ್ಳವ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮುಂಭಾಗದ ವಾಹನವೊಂದನ್ನು ಹಿಂಬಲಿಸಲು ಯತ್ನಿಸಿದ ಲಾರಿ ಹೊಂಡವೊಂದಕ್ಕೆ ಬಿದ್ದು ನಿಯಂತ್ರಣ ತಪ್ಪಿ ಬಸ್ಸಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ತೀವ್ರತೆಗೆ ಬಸ್ಸಿನ ಹಿಂಭಾಗದ ಚಕ್ರ ಕಳಚಿ ರಸ್ತೆ ಬದಿಗೆ ಬಿದ್ದಿದೆ. ಜೆ.ಸಿ.ಬಿ. ಬಳಸಿ ಲಾರಿಯನ್ನು ರಸ್ತೆ ಬದಿಗೆ ಹಾಕಿದ ಬಳಿಕ ಏಕಮುಖಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇದರಿಂದ ಕಿ.ಮೀ. ದೂರದವರೆಗೆ ವಾಹನಗಳು ಸಾಲು ನಿಲ್ಲಬೇಕಾಯಿತು.
 
--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment