Tuesday, August 18, 2009

ಕಳಪೆ ಕಾಮಗಾರಿ: ಕ್ರಮಕ್ಕೆ ಸಿ.ಪಿ.ಐ. ಆಗ್ರಹ


ಮಂಜೇಶ್ವರ: ಮಂಜೇಶ್ವರದಿಂದ ಉಪ್ಪಳ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿ.ಪಿ.ಐ. ಬಂಗ್ರ ಮಂಜೇಶ್ವರ  ಶಾಖೆಯ ಸಮ್ಮೇಳನ ಆಗ್ರಹಿಸಿದೆ.
ಹೊಸಂಗಡಿ ಪೇಟೆಯ ಸಮಗ್ರ ಅಭಿವೃದ್ಧಿಗೆ ಮಲಬಾರ್ ಪ್ಯಾಕೇಜ್ನಲ್ಲಿ ಸೇರ್ಪಡೆಗೊಳಿಸಬೇಕು, ಉಪ್ಪಳ ಹೊಳೆಗೆ ಮಾಲಿನ್ಯ ಸುರಿಯುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅಂಗವಿಕಲರಿಗೆ ಉದ್ಯೋಗ ಕಲ್ಪಿಸುವ ಪ್ರತ್ಯೇಕ ಯೋಜನೆಗೆ ಚಾಲನೆ ನೀಡಬೇಕು, ಬಾಕಿ ಉಳಿದಿರುವ ಪಿಂಚಣಿಯನ್ನು ಶೀಘ್ರದಲ್ಲಿಯೇ ಒದಗಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿದೆ.
ಮಂಡಲ ನಿವರ್ಾಹಕ ಸಮಿತಿ ಸದಸ್ಯ ಸುಧಾನಂದ ಸಮ್ಮೇಳನವನ್ನು ಉದ್ಘಾಟಿಸಿದರು. ಎ.ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸದಸ್ಯ ಬಿ.ಎಂ.ಕೇಶವ ಧ್ವಜಾರೋಹಣ ಮಾಡಿದರು. ಯತೀಶ್ ಮತ್ತು ಶ್ರೀಲತಾ ಠರಾವು ಮಂಡಿಸಿದರು. 
ಜಿಲ್ಲಾ ನಿವರ್ಾಹಕ ಸಮಿತಿ ಸದಸ್ಯ ಬಿ.ವಿ.ರಾಜನ್, ಕಾರ್ಯದಶರ್ಿ ಬಿ.ಎಂ.ಯತೀಶ್, ಕಬೀರ್, ನಾರಾಯಣಿ, ಭಾರತಿ, ನವೀನ, ರತೀಶ್, ಕೇಶವ, ಗಂಗಾಧರ ಹಾಜರಿದ್ದರು.
ನೂತನ ಕಾರ್ಯದಶರ್ಿಯಾಗಿ ಬಿ.ಎಂ.ಯತೀಶ್, ಜತೆ ಕಾರ್ಯದಶರ್ಿಯಾಗಿ ರತೀಶ್ ಆಯ್ಕೆಯಾದರು.
 
 
 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment