Tuesday, August 18, 2009

ಸೋಣೊಗು ಸುಗಿಪು/Farmers Day


ಸೀತಾಂಗೋಳಿ ಸಮೀಪದ ಗುಂಡ್ಯಡ್ಕ ಜಿ.ಪಾಕರ್್ನಲ್ಲಿ ಕೇರಳ ತುಳು ಅಕಾಡೆಮಿ, ಕಿಸಾನ್ ಸೇನೆ, ತುಳುವೆರೆ ಆಯನೊ ಕೂಟ, ಫೋಕ್ ಲ್ಯಾಂಡ್ ಮತ್ತು ಗ್ರಾಮೀಣ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಜಂಟಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ ಕೃಷಿಕರ ದಿನಾಚರಣೆ ಮತ್ತು ಸೋಣೊಗು ಸುಗಿಪು ಸಮಾರೋಪ ಸಮಾರಂಭದಲ್ಲಿ ಮಲಬಾರ್ ದೇವಸ್ವ ಮಂಡಳಿಯ ಸದಸ್ಯ ಎಂ.ದಾಸಪ್ಪ ಶೆಟ್ಟಿ ಮಾತನಾಡಿದರು.

 
 

ಜನಪದ ಸಂಸ್ಕೃತಿ ಅಳಿದರೆ ವಿಶ್ವಕ್ಕೆ ಮಾರಕ

ಕಾಸರಗೋಡು: ಜನಪದ ಸಂಸ್ಕೃತಿ ಅಳಿದರೆ ವಿಶ್ವಕ್ಕೆ ಮಾರಕ ಎಂದು ಕೇರಳ ಲಲಿತ ಕಲಾ ಅಕಾಡೆಮಿಯ ಮಾಜಿ ಸದಸ್ಯ ಕೆ.ಕೆ.ಮಾರಾರ್ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.
ಸೀತಾಂಗೋಳಿ ಸಮೀಪದ ಗುಂಡ್ಯಡ್ಕ ಜಿ.ಪಾಕರ್್ನಲ್ಲಿ ಕೇರಳ ತುಳು ಅಕಾಡೆಮಿ, ಕಿಸಾನ್ ಸೇನೆ, ತುಳುವೆರೆ ಆಯನೊ ಕೂಟ, ಫೋಕ್ ಲ್ಯಾಂಡ್ ಮತ್ತು ಗ್ರಾಮೀಣ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕೃಷಿಕರ ದಿನಾಚರಣೆ ಮತ್ತು ಸೋಣೊಗು ಸುಗಿಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದ ಬಹುತೇಕ ಕಲೆಗಳು ತುಳುನಾಡಿನ ಕೊಡುಗೆಯಾಗಿದೆ ಎಂದೂ ಅವರು ವಿಶ್ಲೇಷಿಸಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಸದಸ್ಯ ರಾಜೇಶ್ ಆಳ್ವ, ಫೋಕ್ಲ್ಯಾಂಡಿನ ಅಧ್ಯಕ್ಷ ಡಾ.ವಿ.ಜಯರಾಜನ್, ಪುತ್ತಿಗೆ ಪಂಚಾಯ್ತಿ ಅಧ್ಯಕ್ಷ ತೋಮಸ್ ಡಿ'ಸೋಜಾ, ಡಾ.ವಿದ್ಯಾಮೋಹನ್ದಾಸ್ ರೈ, ತುಳುಕೂಟದ ಕಾರ್ಯದಶರ್ಿ ಬಿ.ಪಿ.ಶೇಣಿ, ರಘುರಾಮ ಆಳ್ವ ಪಳ್ಳತ್ತಡ್ಕ ಹಾಜರಿದ್ದರು. ಜಿ.ಶಂಕರನಾರಾಯಣ ಭಟ್ಟರನ್ನು ಸನ್ಮಾನಿಸಲಾಯಿತು.
ಬಳಿಕ ಆಟಿಕಳೆಂಜ, ಸೋಣ ಜೋಗಿ, ಕನ್ಯಾಪು, ಮಾದಿರ ಮೊದಲಾದ ತುಳು ಜನಪದ ಕುಣಿತದ ಪ್ರದರ್ಶನ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ತುಳು ಅಕಾಡೆಮಿಯ ಸದಸ್ಯ ಸುಧಾಕರ ಮಾಸ್ಟರ್, ಕಿಸಾನ್ ಸೇನೆಯ ಅಧ್ಯಕ್ಷ ಗುಂಡ್ಯಡ್ಕ ವೆಂಕಟರಮಣ ಭಟ್, ಮಲಬಾರ್ ದೇವಸ್ವ ಮಂಡಳಿಯ ಸದಸ್ಯ ಎಂ.ದಾಸಪ್ಪ ಶೆಟ್ಟಿ, ಪುತ್ತಿಗೆ ಪಂಚಾಯ್ತಿ ಸದಸ್ಯ ಸುಬ್ಬಣ್ಣ ಆಳ್ವ ಹಾಜರಿದ್ದರು.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment