ಉಡುಪಿ: ದಿನಾಂಕ 18/07/09 ರಂದು ಮಧ್ಯಾಹ್ನ 1:45 ಗಂಟೆಗೆ ಉಡುಪಿ ನಗರ ಠಾಣಾ ಪಿಎಸ್ಐ ಶ್ರೀ ಮಾರುತಿ.ಜಿ.ನಾಯಕ್ ಹಾಗೂ ಅವರ ಸಿಬ್ಬಂದಿಯವರಿಗೆ ಉಡುಪಿ ಕುಖ್ಯಾತ ಭೂಗತ ಪಾತಕಿ ಹಾಗೂ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಉಡುಪಿ ದೊಡ್ಡಣಗುಡ್ಡೆಯ ನಿವಾಸಿ ಸಿರಾಜ್ ಹಸನ್ ಎಂಬಾತನು ಉಡುಪಿ ಕಲ್ಯಾಣಪುರದ ಸಂತೆಕಟ್ಟೆ ಎಂಬಲ್ಲಿಗೆ ಬರುವ ಖಚಿತ ಮಾಹಿತಿಯ ಆಧಾರದ ಮೇರೆಗೆ ಪಿಎಸ್ಐ ಹಾಗೂ ಸಿಬ್ಬಂದಿಯವರು ಸಂತೆಕಟ್ಟೆಗೆ ಹೋಗಿ ಗುಪ್ತವಾಗಿ ಸಿರಾಜ್ನ ಚಲನವಲನಗಳನ್ಮ್ನು ಗಮನಿಸುತ್ತಿದ್ದಾಗ ಸಿರಾಜ್ ಬರುವುದನ್ನು ಗುರುತಿಸಿ ತಕ್ಷಣ ಆತನನ್ನು ಪಿಎಸ್ಐ ಹಾಗೂ ಸಿಬ್ಬಂದಿಗಳು ಸುತ್ತುವರಿದು ವಶಕ್ಕೆ ತೆಗೆದುಕೊಂಡಿರುತ್ತಾರೆ.
ಸಿರಾಜ್ನನ್ನು ಅಂಗಜಪ್ತಿ ಮಾಡಿದಾಗ ಆತನ ಸೊಂಟದಲ್ಲಿ ಒಂದು ನಾಡ ಪಿಸ್ತೂಲ್ ಹಾಗೂ 4 ಸಜೀವ ಗುಂಡುಗಳನ್ನು ಹೊಂದಿದ್ದನು. ತಕ್ಷಣ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈತನು ಕಳೆದ ಒಂದು ವರ್ಷದಿಂದ ಖತಾರ್ನಲ್ಲಿ ವಾಸವಿದ್ದು ಈಗ 10 ದಿನಗಳ ಹಿಂದೆ ಉಡುಪಿಗೆ ಬಂದಿರುವುದಾಗಿ ತಿಳಿಸಿರುತ್ತಾನೆ. ಸಿರಾಜ್ ಹಸನ್ನು ಸಂತೆಕಟ್ಟೆಯಲ್ಲಿ ತನ್ನ 2 ನೇ ಹೆಂಡತಿಯ ಮನೆಯಲ್ಲಿ ಕಳೆದ 10 ದಿನಗಳಿಂದ ವಾಸವಿರುವುದಾಗಿ ತಿಳಿಸಿರುತ್ತಾನೆ. ಈ ಬಗ್ಗೆ ಸಿರಾಜ್ನ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸಿರಾಜ್ನು 2003 ನೇ ಇಸವಿಯಲ್ಲಿ ಗಣೇಶ ಜತ್ತನ್ನರವರಿಗೆ ನಡೆಸಿದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಅದೇ ವರ್ಷ ಮಲ್ಪೆ ಕೊಳ ರಾಕೇಶ ಎಂಬಾತನನು ಕೊಲೆ ಮಾಡಿದ್ದನು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದಾಗ 2005 ನೇ ಇಸವಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಂದರ್ಭ ಇತರ ಆರೋಪಿಗಳಾಧ ಮಹಮ್ಮದ್ ರಿಯಾಜ್ ಮತ್ತು ಶಬೀಬ್ ಅಹಮ್ಮದ್ ಎಂಬವರೊಂದಿಗೆ ಸೇರಿಕೊಂಡು ಭದ್ರಿಕೆಯಲ್ಲಿದ್ದ ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸಿರಾಜ್ನು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ ಆತನ ಮೇಲೆ ಜಾಮೀನುರಹಿತ ವಾರಂಟು ಜ್ಯಾರಿಯಲ್ಲಿರುತ್ತದೆ. ಈ ಪ್ರಕರಣಗಳಲ್ಲದೇ ಈತನ ವಿರುದ್ದ ಶಿವರ್ಾ, ಸುರತ್ಕಲ್, ಉಡುಪಿ ನಗರ ಠಾಣೆಗಳಲ್ಲಿ ಹಲ್ಲೆ, ಕೊಲೆಯತ್ನ ಹಾಗೂ ಅಕ್ರಮ ಶಸ್ತé್ರಾಸ್ತ್ರ ಹೊಂದಿದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.
ಈತನು ಈ ಹಿಂದೆ ಭೂಗತ ಪಾತಕಿ ಬನ್ನಂಜೆ ರಾಜಾನೊಂದಿಗೆ ಸಂಪರ್ಕ ಹೊಂದಿದ್ದು 2005 ನೇ ಇಸವಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ಇನ್ನೊಬ್ಬ ಕುಖ್ಯಾತ ಪಾತಕಿ ಸಕಲೇಶಪುರದ ಆಚಂಗಿ ಮಹೇಶನೊಂದಿಗೆ ಕಟಪಾಡಿಯ ದಯಾನಂದ ಶೆಟ್ಟಿ ಎಂಬವರ ಕೊಲೆಗೆ ಸಂಚು ರೂಪಿಸಿದ್ದನು. ಆ ಸಂದರ್ಭದಲ್ಲಿ ಸಿರಾಜ್ನ ಸಹಚರರಿಂದ ಮೂಡುಬಿದ್ರಿ ಪೊಲೀಸರು ಶಸ್ತé್ರಾಸ್ತé್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಮೂಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸಿರಾಜ್ನು ಭೂಗತ ಪಾತಕಿ ಬನ್ನಂಜೆ ರಾಜಾನೊಂದಿಗೆ ಸಂಪರ್ಕ ಹೊಂದಿರುವುದಲ್ಲದೇ ಕಳೆದ ಒಂದು ವರ್ಷದಿಂದ ವಿದೇಶದಲ್ಲಿರುವ ಸಮಯದಲ್ಲಿ ಇನ್ನೊಬ್ಬ ಕುಖ್ಯಾತ ಪಾತಕಿ ಹಾಗೂ ಮೂಲಭೂತವಾದಿ ಸಂಘಟನೆಯ ಪ್ರಮುಖ ದ.ಕ.ಜಿಲ್ಲೆಯ ಉಳ್ಳಾಲದ ಮಾಡೂರು ಇಸುಬು @ ಯೂಸೂಫ್ ಎಂಬಾತನೊಂದಿಗೆ ಹಾಗೂ ಹಲವಾರು ಕುಖ್ಯಾತ ಪಾತಕಿಗಳೊಂದಿಗೆ ಸಂಪರ್ಕ ಬೆಳೆಸಿರುವುದು ವಿಚಾರಣೆಯಿಂದ ತಿಳಿದುಬಂದಿರುತ್ತದೆ.ಇವರಿಬ್ಬರೂ ಸೇರಿ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಅನ್ಯಕೋಮಿನ ಪ್ರಮುಖರನ್ನು ಹತ್ಯೆಗೈಯಲು ಸಂಚು ರೂಪಿಸುವ ತಯಾರಿಯಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿರುತ್ತದೆ. ಮಾಡೂರು ಇಸುಬು ಈಗಾಗಲೇ ಹಲವಾರು ಕೊಲೆ ಹಾಗೂ ಕೊಲೆ ಯತ್ನದ ಪ್ರಕರಣಗಳಲ್ಲಿ ವಿದೇಶದಲ್ಲಿದ್ದುಕೊಂಡೇ ಸಂಚು ರೂಪಿಸಿರುವ ಬಗ್ಗೆ ಈತನ ವಿರುದ್ದ ಪ್ರಕರಣ ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ.
ಸಿರಾಜ್ ಹಸನ್ನು ಮಾಡೂರು ಇಸುಬುನೊಂದಿಗೆ ಸೇರಿಕೊಂಡು ಹವಾಲಾ ಹಣದ ಜಾಲ ಹೊಂದಿರುವ ಬಗ್ಗೆ ಸಿಕ್ಕಿರುವ ಮಾಹಿತಿಯ ಆಧಾರದಲ್ಲಿ ತನಿಖೆಯನ್ನು ಮುಂದುವರಿಸಲಾಗಿದೆ. ಈತನ ವಿರುದ್ದ ಕೋಕಾ ಕಾಯಿದೆಯನ್ನು ಜ್ಯಾರಿಗೊಳಿಸುವ ಬಗ್ಗೆ ಕೂಡಾ ಕ್ರಮಕೈಗೊಳ್ಳಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣೆಯ ಪಿಎಸ್ಐ ಶ್ರೀ ಮಾರುತಿ.ಜಿ.ನಾಯಕ್ ಸಿಬ್ಬಂದಿಗಳಾಧ ರೊಸಾರಿಯೋ ಡಿ.ಸೋಜಾ, ಗಿರೀಶ್, ರಾಜೇಶ್, ಮೋಹನ್ ಕೊತ್ವಾಲ್ ಚಾಲಕ ರವೀಂದ್ರ ಶೆಟ್ಟಿ ಹಾಗೂ ಡಿ.ವೈ.ಎಸ್.ಪಿ ಉಡುಪಿರವರ ಪತ್ತೆದಳದ ಸಿಬ್ಬಂದಿಯವರಾದ ಸುಧೀರ್, ರಾಘವೇಂದ್ರ, ರವಿಚಂದ್ರ, ಸಂತೋಷ್ಕುಮಾರ್, ಸಂತೋಷ್ ಕುಂದರ್, ಮಹಾಬಲ,ಸುಧಾಕರರವರು ಪಾಲ್ಗೊಂಡಿರುತ್ತಾರೆ. ಪ್ರಕರಣದ ಪತ್ತೆ ಕಾರ್ಯಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರವೀನ್ ಮಧುಕರ್ ಪವಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕಾಶೀನಾಥ ಎಸ್. ತಳಕೇರಿ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್ಪಿ ಶ್ರೀ ಜಯಂತ್.ವಿ.ಶೆಟ್ಟಿರವರು ಮಾರ್ಗದರ್ಶನ ನೀಡಿರುತ್ತಾರೆ.
ಆರೋಪಿ ಸಿರಾಜ್ ಹಸನ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ದಿನಾಂಕ 23/07/09 ರವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಕಳವು ಪ್ರಕರಣ
ದಿನಾಂಕ:15.07.2009 ರಂದು ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ 18.07.2009 ರ ಸಂಜೆ 19:00 ಗಂಟೆಯ ಒಳಗಿನ ವೇಳೆಯಲ್ಲಿ ಕಾಪು ಠಾಣಾ ಸರಹದ್ದಿನ ಉಡುಪಿ ತಾಲೂಕು ಮಲ್ಲಾರು ಗ್ರಾಮದ ಎ.ಎ. ಮಂಜಿಲ್, ಕೊಂಬಗುಡ್ಡೆಯಲ್ಲಿರುವ ಶ್ರೀ ಅಮೀರ್ ಅದಂ ಸಾಹೇಬ್, 58 ವರ್ಷ ಎಂಬವರ ಮನೆಯ ಮಾಳಿಗೆಗೆ ಹೋಗುವಲ್ಲಿ ಮೇಲ್ಬದಿ ಕಬ್ಬಿಣದ ಸಣ್ಣ ಕಿಟಕಿಯನ್ನು ಕಳಚಿ ಯಾರೋ ಕಳ್ಳರು ಒಳ ಪ್ರವೇಶಿಸಿ ಅಂದಾಜು ರೂ. 1,20,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಕೊಂಡು ಹೋಗಿರುವುದಾಗಿದೆ ಎಂಬುದಾಗಿ ಶ್ರೀ ಅಮೀರ್ ಅದಂ ಸಾಹೇಬ್ ರವರು ನೀಡಿದ ಪಿರ್ಯಾಧಿಯಂತೆ ಕಾಪು ಪೊಲೀಸ್ ಠಾಣಾ ಅ.ಕ್ರ ನಂ 144/09, ಕಲಂ 454, 457, 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ
ಶ್ರೀಮತಿ: ಸುಮಿತ್ರ (41 ವರ್ಷ) ಗಂಡ ಬೆಳ್ಳ ನಾಯ್ಕ ವಾಸ: ಕಕ್ಕಿಂಜೆ ಮನೆ, ಬೆಳ್ತಂಗಡಿ ರವರ ಗಂಡ ಬೆಳ್ಳ ನಾಯ್ಕ (50 ವರ್ಷ) ರವರು ತೋಟತ್ತಡಿ ಸ.ಹಿ.ಪ್ರಾ.ಶಾಲೆಯ ಮುಖ್ಯ ಅದ್ಯಾಪಕರಾಗಿದ್ದು, ದಿನಾಂಕ 17/07/09 ರಂದು ಬೆಳಿಗ್ಗೆ 8:30 ಗಂಟೆಗೆ ತರಭೇತಿಯ ಬಗ್ಗೆ ಕಕ್ಕಿಂಜೆಯ ಅವರ ಮನೆಯಿಂದ ಬೆಳ್ತಂಗಡಿ ಹೋಗುವುದಾಗಿ ಹೇಳಿ ಅವರ ಮೊಟಾರು ಸೈಕಲ್ನಲ್ಲಿ ಹೋದವರು ತರಭೇತಿಗೆ ಹೋಗದೇ ತಂದೆ ಮನೆ ಹಾಲಾಡಿಗೆ ಹೋಗುವಾಗ ದಾರಿ ಮದ್ಯದ ಚಾರಾ ಗ್ರಾಮದ ನವೋದಯ ಶಾಲೆಯ ಬಳಿಯಿರುವ ಹೊಳೆಯ ಬದಿಗೆ ಬಹಿದರ್ೆಸೆಗೆ ಹೋದ ವೇಳೆ ಹೊಳೆಯ ನೆರೆ ನೀರಿಗೆ ಆಕಸ್ಮಿಕವಾಗಿ ಕೊಚ್ಚಿ ಹೋಗಿರುವ ಸಾದ್ಯತೆ ಇರುವುದಾಗಿಯೂ, ಅವರಿಗೆ ಸಂಬಂಧಿಸಿದ ಮೋಟಾರು ಸೈಕಲ್ ಇತರೆ ಸ್ವತ್ತುಗಳು ಹೊಳೆಯ ಬದಿಯಲ್ಲಿದ್ದು, ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಶ್ರೀಮತಿ ಸುಮಿತ್ರ ರವರು ನೀಡಿದ ಪಿರ್ಯಾದಿಯಂತೆ ಹೆಬ್ರಿ ಪೊಲೀಸ್ ಠಾಣಾ ಅ.ಕ್ರ ನಂ 69/09 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಿಷ ಸೇವಿಸಿ ಆತ್ಮಹತ್ಯೆ ಪ್ರಕರಣ
ಕೃಷ್ಣ ಶೆಟ್ಟಿ (54 ವರ್ಷ) ತಂದೆ: ರಾಮಣ್ಣ ಶೆಟ್ಟಿ ವಾಸ: ನಲ್ಕಂಡ, ಅಳದಂಗಡಿ, ಬಡಗ ಕಾರಂದೂರು ಗ್ರಾಮ, ಬೆಳ್ತಂಗಡಿ ತಾಲೂಕು ರವರ ಮಗಳು ಶ್ರೀಮತಿ ಸ್ವಪ್ನಶ್ರೀ (21 ವರ್ಷ) ರವರನ್ನು ದಿನಾಂಕ 14.5.09 ರಂದು ಕಾರ್ಕಳ, ಮುಡಾರು ಕನ್ಯಾನಬೆಟ್ಟು ನಿವಾಸಿ ನಾಗಣ್ಣ ಶೆಟ್ಟಿಯವರ ಮಗ ಸುದರ್ಶನ ಶೆಟ್ಟಿ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು, ಸ್ವಪ್ನಶ್ರೀಯು ತನ್ನ ಗಂಡ ಹಾಗೂ ಅತ್ತೆ, ಮಾವನ ಜೊತೆಯಲ್ಲಿ ಅನ್ಯೋನ್ಯತೆಯಿಂದ ಇದ್ದು, ಆಕೆ ಹಾಗೂ ಆಕೆಯ ಗಂಡ ಸುದರ್ಶನ ಶೆಟ್ಟಿ ಯಾವುದೋ ಕಾರಣದಿಂದ ಮನನೊಂದು ದಿನಾಂಕ 18.7.09 ರ ರಾತ್ರಿ 10:00 ಗಂಟೆಯ ಬಳಿಕ ಆಕೆಯು ತನ್ನ ಗಂಡನ ಜೊತೆ ಮನೆಯಲ್ಲಿ ಮಲಗುವ ಕೋಣೆಗೆ ತೆರಳಿ ಒಳಗಿನಿಂದ ಬಾಗಿಲನ್ನು ಭದ್ರಪಡಿಸಿದ ಬಳಿಕ, ಆಕೆ ಹಾಗೂ ಆಕೆಯ ಗಂಡ ಸುದರ್ಶನ ಶೆಟ್ಟಿಯವರಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವರೇ ಯಾವುದೋ ವಿಷ ಸೇವಿಸಿ ಅಸ್ವಸ್ಥರಾದವರನ್ನು ದಿನಾಂಕ 19.7.09 ರಂದು ಬೆಳಿಗ್ಗೆ 6:30 ಗಂಟೆಗೆ ಮನೆಯವರು ಚಿಕಿತ್ಸೆ ಬಗ್ಗೆ ಕಾರ್ಕಳದ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸ್ವಪ್ನಶ್ರೀ ಹಾಗೂ ಆಕೆಯ ಗಂಡ ಸುದರ್ಶನ ಶೆಟ್ಟಿ ಇಬ್ಬರೂ ಮೃತಪಟ್ಟಿರುತ್ತಾರೆ ಎಂಬುದಾಗಿ ಕೃಷ್ಣ ಶೆಟ್ಟಿಯವರು ನೀಡಿದ ಪಿರ್ಯಾದಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ನಂ 23/09 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟ ಪ್ರಕರಣ
ದಿನಾಂಕ 18.7.09 ರಂದು ಬೆಳಿಗ್ಗೆ ಸುಮಾರು 10:00 ಗಂಟೆುಂದ ದಿನಾಂಕ 19.7.09 ರಂದು ಬೆಳಗ್ಗೆ 10:00 ಗಂಟೆಯ ಮಧ್ಯದ ಅವಧಿಯಲ್ಲಿ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಕೇರ ನಿವಾಸಿ ಸುಮಾರು 72 ವರ್ಷ ಪ್ರಾಯದ ಜೋನ್ ಮಸ್ಕರೇಂಜ್ಞಸ್ ಎಂಬವರು ಹುಕ್ರಟ್ಟೆ ಪೇಟೆಗೆ ಹೋಗಿ ವಾಪಾಸು ಮನೆಗೆ ಬರುವರೇ, ಹುಕ್ರಟ್ಟೆ ಹೊಳೆಯನ್ನು ದಾಟುವಾಗ, ಕಾಲು ಸೇತುವೆಯಿಂದ ಅಕಸ್ಮಿಕವಾಗಿ ಆಯತಪ್ಪಿ, ಹುಕ್ರಟ್ಟೆ ಹೊಳೆಯ ನೀರಿಗೆ ಬಿದ್ದ ಪರಿಣಾಮ, ಹೊಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಲ್ಸನ್ ಮಸ್ಕರೇಜ್ಞಸ್ (20 ವರ್ಷ), ತಂದೆ: ವಿಜಯ ಮಸ್ಕರೇಜ್ಞಸ್, ವಾಸ: ಕೇರ ಮನೆ, ಮಂಜಲ್ತಾರ್ ನಲ್ಲೂರು ಗ್ರಾಮ, ಕಾರ್ಕಳ ರವರು ನೀಡಿದ ಪಿರ್ಯಾದಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ನಂ 24/09 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಮಲ್ಪೆ ಠಾಣಾ ಸರಹದ್ದಿನ ಉಡುಪಿ ತಾಲೂಕು ಕೊಡವೂರು ಗ್ರಾಮದ ವಾಸಿ ಶ್ರೀಮತಿ ಪೂಜ ಗಂಡ: ಕಿಶೋರ, ಎಂಬವರು ದಿನಾಂಕ 18-07-09 ರಂದು ಬೆಳಿಗ್ಗೆ ಮನೆಯಿಂದ ಆದಿಉಡುಪಿ ಕಡೆಗೆ ಹೋಗುವರೇ ಬೆಳಿಗ್ಗೆ ಸುಮಾರು 8-45 ಗಂಟೆ ಸಮಯಕ್ಕೆ ಮದ್ವನಗರ ನಾಗನಕಟ್ಟೆ ಬಳಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮೂಡಬೆಟ್ಟುವಿನಿಂದ ಉಡುಪಿ ಕಡೆಗೆ ಹೋಗುವ ಕೆಎ.19.ಪಿ.7577ನೇ ನಂಬ್ರದ ಲೂಲು ಸಿಟಿಬಸ್ನ ಚಾಲಕನು ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಬಸ್ಸನ್ನು ನಿಲ್ಲಿಸದೇ ಹೋಗಿದ್ದು, ನೆಲಕ್ಕೆ ಬಿದ್ದು ಮೂಗಿಗೆ, ತಲೆಗೆ, ಹಾಗೂ ಬಲಗಾಲಿಗೆ ಗಾಯಗೊಂಡು ಉಡುಪಿ ಸರಕಾರಿ ಅಸ್ಪತ್ರೆಗೆ ಹೋಗಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ, ಅಲ್ಲದೆ ಆರೋಪಿ ಬಸ್ ಚಾಲಕನು ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲವಾಗಿ ಶ್ರೀಮತಿ ಪೂಜರವರು ನೀಡಿದ ದೂರಿನ ಮೇರೆಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 70/09 ಕಲಂ 279, 337 ಐಪಿಸಿ ಮತ್ತು 134(ಎ)(ಬಿ) ಮೋಟಾರು ವಾಹನ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನೇಣು ಬಿಗಿದು ಆತ್ಮಹತ್ಯೆ
ಉಡುಪಿ ತಾಲೂಕು ಕೊಂಡಕೂರು ಗ್ರಾಮದ ನಿಟ್ಟೂರಿನ ವಾಸಿ ಶ್ರೀಮತಿ ವೀಣಾ(30) ಗಂಡ: ವಸಂತ ಕೋಟ್ಯಾನ್ ಎಂಬವರು ವಿಚ್ಚೇದನ ಮಾಡಿಕೊಂಡ, ವಿಪರೀತ ಕುಡಿಯುವ ಚಟ ಹೊಂದಿದ್ದ ಗಂಡ ವಸಂತ ಕೋಟ್ಯಾನ್ ಎಂಬುವರು ಸಂಸಾರದಲ್ಲಿ ಬೇಸರಗೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 17/07/09 ರಂದು 19:15 ಗಂಟೆಗೆ ಉಪ್ಪೂರು ಗ್ರಾಮದ ಕೊಳಲಗಿರಿ ಎಂಬಲ್ಲಿರುವ ತನ್ನ ಮನೆಯ ಸಮೀಪ ವಿರುವ ಅಪ್ಪು ಎಂಬವರ ಹಾಡಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಮೃತರ ಪತ್ನಿ ಶ್ರೀಮತಿ ವೀಣಾರವರು ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 21/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಆಕಸ್ಮಿಕ ಸಾವು ಪ್ರಕರಣ
17.07.09 ರಂದು 23:00 ಗಂಟೆಯಿಂದ ದಿನಾಂಕ. 18.07.09 ರಂದು 04;10 ಗಂಟೆ ನಡುವೆ ಕಾಪು ಸಕರ್ಾರಿ ಆಸ್ಪತ್ರೆ, ಯಲ್ಲಿ ಚಂದ್ರು ತಂದೆ: ವಿಠಲ, ವಾಸ:ಹಳೆ ಮಾರಿಗುಡಿಯ ಹತ್ತಿರ, ಕಾಪು ಪಡು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ. ಇವರ ಹೆಂಡತಿಯಾದ ಕುಸುಮ 24 ವರ್ಷ ಎಂಬವರು ಹೆರಿಗೆ ನೋವು ಬಂದು ದಾಖಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗು ಆರೋಗ್ಯವಾಗಿದ್ದು ದಿನಾಂಕ 18.07.09 ರಂದು ಬೆಳಿಗ್ಗಿನ ಜಾವ 4:15 ಗಂಟೆಗೆ ಹೆಂಡತಿ ಮೃತ ಪಟ್ಟಿರುತ್ತಾರೆಂಬುದಾಗಿ ಪತಿ ಚಂದ್ರು ರವರು ಕಾಪು ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 17/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನೀರಿಗೆ ಬಿದ್ದು ಸಾವು
ದಿನಾಂಕ 17/07/09 ರಂದು ಸಂಜೆ 7:45 ಗಂಟೆ ಸಮಯ ಬಿ.ರಾಜೇಂದ್ರ ರಾವ್, ತಂದೆ: ದಿ.ಪುಟ್ರಾಯ ರಾವ್, ವಾಸ: ಇಂದಿರಾ ನಿವಾಸ, ಬಡಾನಿಡಿಯೂರು ಗ್ರಾಮ ಇವರ ಡೊಡ್ಡಪ್ಪನ ಮಗ ಬಿ.ನಟರಾಜ ರಾವ್(56 ವರ್ಷ) ರವರು ತೊಟ್ಟಂ ಗಜಾನನನ ಯಕ್ಷಗಾನ ಸಂಘದ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಬದಿಯಲ್ಲಿದ್ದ ತೋಡಿಗೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಬಿ.ರಾಜೇಂದ್ರ ರಾವ್ ರವರು ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 18/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 18/07/09 ರಂದು ಸಂಜೆ ಸಮಯ ಸುಮಾರು 16-00 ಗಂಟೆಯ ಹೊತ್ತಿಗೆ ಕುಂದಾಪುರ ತಾಲೂಕು ಶಿರೂರು ಗ್ರಾಮದ ಕರಾವಳಿ ದೊಂಬೆ ಸಮುದ್ರ ಕಿನಾರೆಯಲ್ಲಿ ಸುಮಾರು 25 ರಿಂದ 30 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹವು ಸಮುದ್ರ ನೀರಿನಲ್ಲಿ ತೇಲಿ ಬಂದಿದ್ದು, ಅದರ ಮೈ ಮೇಲಿನ ಚರ್ಮ ಸುಳಿದು ಹೋಗಿ ಅಲ್ಲಲ್ಲಿ ಜಲಚರಗಳು ತಿಂದ ಗಾಯಗಳು ಇದ್ದು, ಮೃತರು ತನಗಿದ್ದ ಯಾವುದೋ ಕಾಯಿಲೆಯಿಂದಲೋ ಅಥವಾ ಬೇರೆ ಯಾವುದೋ ಕಾಯಿಲೆಯಿಂದೆಲೋ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಸಮುದ್ರದ ನೀರಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಈ ಬಗ್ಗೆ ಪ್ರಸನ್ನ (20) ವರ್ಷ, ತಂದೆ: ಶೇಖರ ಶೆಟ್ಟಿ, ಗೋವಿಂದ ಶೆಟ್ರ ಮನೆ ಕರಾವಳಿ ಶಿರೂರು ರವರು ಬೈಂದೂರು ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 11/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
ದಿನಾಂಕ: 28/02/08 ರಂದು ಬೆ: 7:30 ಗಂಟೆಯ ಸಮಯಕ್ಕೆ ಕಾರ್ಕಳ ತಾಲೂಕು ಕಸಬ ಗ್ರಾಮದ ಇಂದಗುರಿ ಕಾಲೇಜು ರಸ್ತೆಯ ವಾಸಿ ಶ್ರೀಮತಿ. ಸೆಲಸ್ಟಿನ್ ಡಿಸೋಜ (65 ವರ್ಷ) ಗಂಡ: ಜೆರೋಮ್ ಪಿಂಟೋ ಎಂಬವರು ಪಳ್ಳಿಯ ತಮ್ಮ ಸಂಬಂಧಿಕರ ಮನೆಗೆ ಹೋಗುವರೇ ನೆರೆಮನೆಯ ಹರೀಶ್ ಎಂಬಾತನೊಂದಿಗೆ ಜೋಗುಳಬೆಟ್ಟುವಿನ ತನ್ನ ಮನೆಯಿಂದ ಒಂದು ಆಟೋರಿಕ್ಷಾದಲ್ಲಿ ಕಾರ್ಕಳ ನಗರ ಬಸ್ ನಿಲ್ದಾಣಕ್ಕೆ ಬಂದು ಇಳಿದಾಗ ತಮ್ಮ ಹ್ಯಾಂಡ್ಬ್ಯಾಗನ್ನು ಮರೆತು ಬಿಟ್ಟಿದ್ದು ನಂತರ ಬಂದು ಆಟೋದಲ್ಲಿ ಕುಳಿತಿದ್ದ ಹರೀಶನಲ್ಲಿ ಬ್ಯಾಗನ್ನು ಕೊಡುವಂತೆ ತಿಳಿಸಿದಾಗ ಆತನು ಹ್ಯಾಂಡ್ ಬ್ಯಾಗನ್ನು ಕೊಟ್ಟಿದ್ದು, ಮನೆಗೆ ಹೋಗಿ ನೋಡಿದಾಗ ಬ್ಯಾಗ್ನಲ್ಲಿ ಪ್ಲಾಸ್ಟಿಕ್ ತೊಟ್ಟೆಯಲ್ಲಿಟ್ಟಿದ್ದ ಎರಡು ಎಳೆಯ ರೋಪ್ಚೈನ್ ಡಿಸೈನಿನ ಕರಿಮಣಿ ಸರ, ಒಂದು ಜೊತೆ ಕಿವಿಯ ಬೆಂಡೋಲೆ, ಒಂದು ಜೊತೆ ಕಿವಿಯ ರಿಂಗು ಒಟ್ಟು ತೂಕ ಸುಮಾರು 40 ರಿಂದ 42 ಗ್ರಾಂ, ಒಟ್ಟು ಮೌಲ್ಯ ಸುಮಾರು 45,000/- ರೂ. ಬೆಲೆಬಾಳುವ ಬಂಗಾರದ ಆಭರಣಗಳು ಕಳವಾಗಿರುವುದು ಕಂಡುಬಂತು, ಇದರಿಂದ ಹರೀಶನ ಮೇಲೆ ಸಂಶಯ ಪಟ್ಟಿದ್ದು ವಿಚಾರಿಸಿದಾಗ ಆತನು ಬಂಗಾರ ಸಿಕ್ಕಿಲ್ಲವೆಂದು ತಿಳಿಸಿರುತ್ತಾನೆ. ತಾನು ಪ್ರಾಯಸ್ಥರಾಗಿರುವುದರಿಂದ ಈ ತನಕ ದೂರು ನೀಡದೇ ಇದ್ದು ಈಗ ಆತನ ಮೇಲೆ ಸಂಶಯ ಬಲವಾಗಿದ್ದುದರಿಂದ ಶ್ರೀಮತಿ. ಸೆಲಸ್ಟಿನ್ ಡಿಸೋಜ (65) ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 93/09 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ
ಸಿರಾಜ್ ಹಸನ್ ಸಾಹೇಬ್ @ ಸಿರಾಜ್ ಪ್ರಾಯ: 35 ವರ್ಷ, ತಂದೆ: ಹಸನ್ ಸಾಹೇಬ್ @ ಮೋನು ವಾಸ: ನಂಬ್ರ 1-4-141, ಮಸೀದಿ ಕಂಪೌಂಡ್ ಬಳಿ, ದೊಡ್ಡಣಗುಡ್ಡೆ, ಕುಂಜಿಬೆಟ್ಟು ಅಂಚೆ, ಉಡುಪಿ ತಾಲೂಕು ಹಾಲಿವಾಸ: ಸ್ಪಂದನ ಅಪಾಟರ್್ಮೆಂಟ್, ರೂಮ್ ನಂಬ್ರ 501, 5 ನೇ ಮಹಡಿ, ಸಂತೆಕಟ್ಟೆ, ಕಲ್ಯಾಣಪುರ ಅಂಚೆ, ಉಡುಪಿ ಈತನು ಮಾನ್ಯ ನ್ಯಾಯಾಲಯದ ಸಿಸಿ ನಂಬ್ರ 921/06 ಪ್ರಕರಣದಲ್ಲಿ ದಸ್ತಗಿರಿ ವಾರೆಂಟ್ ಆಸಾಮಿಯಾಗಿದ್ದು ದಿನಾಂಕ 18/07/09 ರಂದು ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮಾರುತಿ ಜಿ ನಾಯಕ್ರವರಿಗೆ ಆಪಾದಿತ ಸಿರಾಜ್ ಹಸನ್ ಎಂಬವನು ವಿದೇಶದಿಂದ ಬಂದಿದ್ದು ಸಂತೆಕಟ್ಟೆಯಲ್ಲಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ 13:45 ಗಂಟೆಗೆ ಸಂತೆಕಟ್ಟೆ ನವಮಿ ಬೇಕರಿ ಬಳಿ ತಲುಪಿ ಆರೋಪಿ ಸಿರಾಜ್ ಹಸನ್ ಎಂಬವನನ್ನು ದಸ್ತಗಿರಿ ಮಾಡಿ ಪರಿಶೀಲಿಸಲಾಗಿ ಆತನ ಬಳಿ ಒಂದು ರಿವಾಲ್ವರ್, 4 ಸಜೀವ ಗುಂಡುಗಳು ಮತ್ತು 3 ಮೊಬೈಲ್ಗಳು ಸಿಮ್ ಸಮೇತ ಇರುತ್ತವೆ. ಆರೋಪಿತನು ಯಾವುದೇ ಪರವಾನಿಗೆ ಇಲ್ಲದೇ ತನ್ನ ವಶದಲ್ಲಿ ಅಕ್ರಮವಾಗಿ ರಿವಾಲ್ವರನ್ನು ಇರಿಸಿಕೊಂಡಿದ್ದು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆರಂತೆ ಆರೋಪ ಎಸಗಿರುವುದಾಗಿದೆ. ರಿವಾಲ್ವರ್ ಮತ್ತು ಗುಂಡಗಳ ಅಂದಾಜು ಮೌಲ್ಯ ರೂ. 25,000/- ಹಾಗೂ ಮೂರು ಮೊಬೈಲ್ಗಳ ಒಟ್ಟು ಮೌಲ್ಯ ರೂ. 10,000/- ಆಗಿರುತ್ತದೆ ಈ ಬಗ್ಗೆ ಶ್ರೀ ಮಾರುತಿ ಜಿ ನಾಯಕ್ ಪಿಎಸ್ಐ ಉಡುಪಿ ನಗರ ಪೊಲೀಸ್ ಠಾಣೆರವರ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 235/09 ಕಲಂ 3, 35 ಭಾರತೀಯ ಆಯುಧ ಕಾಯಿದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರರಕಣ
ಕಾರ್ಕಳ ತಾಲೂಕು ಕಸಬ ಗ್ರಾಮದ ಬಂಗ್ಲೆಗುಡ್ಡೆ ಮನೆ, ವಾಸಿ ಶ್ರೀಮತಿ. ಬಿ.ಫಾತಿಮ (21ವರ್ಷ) ತಂದೆ: ಅಬ್ದುಲ್ ರಹಿಮಾನ್ ಇವರು ದಿನಾಂಕ: 25/9/05 ರಂದು ಶಿವಮೊಗ್ಗ ಜಿಲ್ಲೆಯ ಸೂಳೆಬಲು, ಈದ್ಗಾ ನಗರ 1 ನೇ ಕ್ರಾಸ್ ಊರುಗಡೂರು ವಾಸಿ ಸೈಫುಲ್ಲಾ (26ವರ್ಷ) ತಂದೆ; ಪ್ಯಾರು ಸಾಬ್ ಇವರೊಂದಿಗೆ ಮದುವೆಯಾಗಿದ್ದು ಮದುವೆಯ ಸಮಯ ಶ್ರೀಮತಿ. ಬಿ.ಫಾತಿಮರವರ ತಾಯಿ ಸುಮಾರು 35 ಪವನ್ ಚಿನ್ನವನ್ನು ಹಾಕಿದ್ದು ನಂತರ ರೂಪಾಯಿ. 1,00,000/- ವನ್ನು ವರದಕ್ಷಿಣೆಯಾಗಿ ನೀಡಬೇಕೆಂದು ಒತ್ತಾಯಪಡಿದ್ದುದರಿಂದ ರೂಪಾಯಿ .50,000/-ವನ್ನು ನೀಡಿ ಮದುವೆಯ ಸಂಪೂರ್ಣ ವೆಚ್ಛವನ್ನು ಬಿ.ಫಾತಿಮರವರ ತಂದೆಯೇ ಭರಿಸಿದ್ದು ನಂತರ ಆರೋಪಿ ಸೈಫುಲ್ಲಾ ನನಗೆ ನಿನ್ನ ಮದುವೆಯ ಸಮಯದಲ್ಲಿ ನಿನ್ನ ತವರು ಮನೆಯವರು ವರದಕ್ಷಿಣೆ ಹಣ ಕೊಟ್ಟಿದ್ದು ತುಂಬಾ ಕಮ್ಮಿಯಾಗಿದೆ, ಅವರು ಕೊಟ್ಟ ಹಣ ನಿನ್ನನ್ನು ಸಾಕಲು ಸಾಕಾಗುವುದಿಲ್ಲ, ಇನ್ನು ಮುಂದೆ ನೀನು ನನ್ನ ಮನೆಯಲ್ಲಿ ಬಾಳಬೇಕಾಗದರೆ, ರೂಪಾಯಿ. 1,00,000/- ವರದಕ್ಷಿಣೆ ತರಬೇಕು ಎಂದು ಪದೇ ಪದೇ ಮಾನಸಿಕ ಹಿಂಸೆ ನೀಡುತ್ತಿದ್ದು, ಇನ್ನೊಬ್ಬಯಾದ ಪ್ಯಾರು ಸಾಬ್ (60) ವಾಸ: ಸೂಳೆಬಲು, ಈದ್ಗಾ ನಗರ 1 ನೇ ಕ್ರಾಸ್ ಊರುಗಡೂರು ಅಂಚೆ ಶಿವಮೊಗ್ಗ ನೇಯವರು ಸಹ ಬೈದು ಮಾನಸಿಕ ಹಿಂಸೆ ನೀಡಿರುತ್ತಾರೆ. ಅಲ್ಲದೇ ಆರೋಪಿ ಸೈಫುಲ್ಲಾನು ಕಾಲಿನಿಂದ ತುಳಿದು ದೇಹದ ಭಾಗಗಳಿಗೆ ಹಲ್ಲಿನಿಂದ ಕಚ್ಚಿ ದೈಹಿಕ ಹಿಂಸೆಯನ್ನೂ ನೀಡಿದ್ದು ನಿನ್ನನ್ನು ಹಾಗೂ ನಿನ್ನ ಮಕ್ಕಳನ್ನು ಸಹಾ ಕೊಂದು ಬಿಡುತ್ತೇನೆ ಎಂದು ಜೀವಬೆದರಿಕೆಯನ್ನು ಕೂಡಾ ಹಾಕಿರುವುದಾಗಿದೆ. ಈ ಬಗ್ಗೆ ಶ್ರೀಮತಿ. ಬಿ.ಫಾತಿಮರವರು ಮಾನ್ಯ ನ್ಯಾಯಾಲಯದ ಖಾಸಗೀ ಪಿರ್ಯಾದಿ ನಂ: 142/09 ರಂತೆ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಠಾಣಾ ಅಪರಾದ ಕ್ರಮಾಂಕ . 92/09 ಕಲಂ. 498(ಎ), 324, 506 ಜೊತಗೆ 34 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರೆ ಪ್ರಕರಣ
ದಿನಾಂಕ 18-07-09 ರಂದು ರಾತ್ರಿ 8-00 ಗಂಟೆಗೆ ಹಿರಿಯಡ್ಕ ಠಾಣಾ ಸರಹದ್ದಿನ ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಹಿರಿಯಡಕ ಕಾಲೇಜ್ ಬಳಿ ಆರೋಪಿತರುಗಳಾದ ರವೀಂದ್ರ ಪ್ರಭು, ಸಂತೋಷ, ಕಿಶೋರ ಇವರುಗಳು ಸಮಾನ ಉದ್ದೇಶದಿಂದ ಪೆರ್ಣಂಕಿಲ ಗ್ರಾಮದ ಚಿತ್ರಬೈಲು ವಾಸಿ ಪ್ರಸನ್ನ ಭಟ್ (42 ವರ್ಷ) ತಂದೆ ದಿ.ಆನಂತರಾಮ ಭಟ್ ರವರಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಬಗ್ಗೆ ಪ್ರಸನ್ನ ಭಟ್ ರವರು ಹಿರಿಯಡ್ಕ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 53/09 ಕಲಂ 341,504 ಜೊತಗೆ 34 ಭಾ.ದ.ಸಂ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನಕಲಿ ಸಹಿ
ದಿನಾಂಕ: 06-06-09 ರಂದು ಉಡುಪಿ ತಾಲೂಕು ಕಚೇರಿಗೆ ಪ್ರಥ್ವಿ ದಸ್ತಾವೇಜು ಬರಹಗಾರರಿಂದ ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಸವರ್ೆ ನಂ: 53/06 ರಲ್ಲಿ 0.50 ಎಕ್ರೆ, ಸವರ್ೆ ನಂ: 53/10 ರಲ್ಲಿ 0.12 ಎಕ್ರೆ ಮೂಲಿ ಹಕ್ಕಿನ ಜಮೀನುಗಳ ದಾಖಲೆಗಳನ್ನು ಕಡತ ನಂಬ್ರ ದಾಖಲಿಸುವಂತೆ ಬಂದ ದಾಖಲೆಗಳನ್ನು ಪರಿಶೀಲಿಸಿದಾಗ ವಾಸ್ತವ್ಯದ ಉದ್ದೇಶಕ್ಕೆ ತಹಶೀಲ್ದಾರರ ಪೋರ್ಜರಿ ಸಹಿ ಮಾಡಿ ನಕಲಿ ಭೂಪರಿವರ್ತನಾ ಹಿಂಬರಹ ಕಂಡು ಬಂದಿದ್ದು, ಈ ಬಗ್ಗೆ ಪ್ರಸನ್ನ.ವಿ ತಹಶೀಲ್ದಾರರು, ಉಡುಪಿ ತಾಲೂಕು ರವರು ಪ್ರಾಥಮಿಕ ವಿಚಾರಣೆ ಮಾಡಿದಾಗ ದಾಖಲೆಗಳನ್ನು ಕಚೇರಿಯ ಮೊಹರುಗಳನ್ನು ಸೃಷ್ಟಿಸಿ ನಕಲಿ ಸಹಿ ಮಾಡಿರುವುದು ಅಂಬಲಪಾಡಿ ಗ್ರಾಮ ಪಂಚಾಯತಿನ ಗ್ರಾಮ ಸಹಾಯಕ ಶ್ರೀನಿದಿ(ಆರೋಪಿ) ಎಂಬುದಾಗಿ ತಿಳಿದು ಬಂದಿರುತ್ತದೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬುದಾಗಿ ಶ್ರೀ ಪ್ರಸನ್ನ.ವಿ ತಹಶೀಲ್ದಾರರು ಉಡುಪಿ ತಾಲೂಕು, ಉಡುಪಿ ಜಿಲ್ಲೆ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 66/09 ಕಲಂ 465, 468,472, 420 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ
ದಿನಾಂಕ 17/07/09 ರಂದು 11:30 ಗಂಟೆಗೆ ಕಕ್ಕುಂಜೆಯ ಶಿವಳ್ಳಿ ಗ್ರಾಮದ ಸೇಡಿಮುಲ್ಲೆಯ ವಾಸಿ ಲೀನಾ ಡಯಾಸ್(43 ವರ್ಷ) ಗಂಡ: ಜೋಸೆಪ್ ಡಯಾಸ್ರವರು ಮಣಿಪಾಲ ಠಾಣೆಗೆ ಹಾಜರಾಗಿ ದೂರು ನೀಡಿದ್ದು ತನ್ನ ದೂರಿನಲ್ಲಿ ಅವರ ಮಗ ಮೈಕಲ್ ಡಾಯಸ್ (13 ವರ್ಷ) ಎಂಬವನು ತನ್ನ ಮನೆಯಿಂದ ದಿನಾಂಕ 07/07/09 ರಂದು 08:00 ಗಂಟೆಗೆ ಹೊರಟು ಹೋದವನು ಈವರೆಗೆ ಮನೆಗೆ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಕಾಣೆಯಾದ ತನ್ನ ಮಗ ಕಪ್ಪು ಮೈಬಣ್ಣ ಹೊಂದಿದ್ದು ಕೋಲುಮುಖದವನಾಗಿರುತ್ತಾನೆ. ಕನ್ನಡ, ತುಳು, ಕೊಂಕಣಿ ಮತ್ತು ಹಿಂದಿ ಭಾಷೆ ಬಲ್ಲವನಾಗಿದ್ದು, ಕೊನೇಯದಾಗಿ ಹಳದಿ ಬಣ್ಣದ ಫುಲ್ ಶಟರ್್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ ಎಂಬುದಾಗಿ ತಿಳಿಸಿರುತ್ತಾರೆ. ಅವರ ದೂರಿನ ಮೇರೆಗೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 127/09 ಕಲಂ ಹುಡುಗ ಕಾಣೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಮೇಲೆ ನಮೂದಿಸಿದ ಚಹರೆಯುಳ್ಳ ಹುಡುಗ ಪತ್ತೆಯಾದಲ್ಲಿ ಪೊಲೀಸ್ ನಿರೀಕ್ಷಕರು, ಮಣಿಪಾಲ ಠಾಣೆರವರನ್ನು ಸಂಪಕರ್ಿಸಲು ಕೋರಲಾಗಿದೆ. ದೂರವಾಣಿ ಸಂಖ್ಯೆ 0820 - 2570328.
ವರದಕ್ಷಿಣೆ ಕಿರುಕುಳ
ಭಟ್ಕಳದ ಶಮೀನಾ (30 ವರ್ಷ) ಎಂಬವರು 1990ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಕುಂದಾಪುರದ ಹೊಸಾಡು ಗ್ರಾಮದ ಗಾಣದಮಕ್ಕಿಯ ಇಬ್ರಾಹಿಂ ಎಂಬವರನ್ನು ಮದುವೆಯಾಗಿದ್ದರು. ದಂಪತಿಗಳಿಗೆ ಎರಡು ಮಕ್ಕಳಾಗಿದ್ದು, ಮದುವೆಯ ಮೂರು ವರ್ಷಗಳ ಬಳಿಕ ಇಬ್ರಾಹಿಂರವರು ತನ್ನ ಪತ್ನಿಗೆ ತವರು ಮನೆುಂದ ಹಣ ತರುವಂತೆ ಕಿರುಕುಳ ಕೊಡುತ್ತಿದ್ದು, ಆಗಾಗ್ಗೆ ಹಲ್ಲೆ ನಡೆಸುತ್ತಿದ್ದು ಇದರಿಂದ ಬೇಸತ್ತ ಶ್ರೀಮತಿ ಶಮೀನಾರವರು ತನ್ನ ಮಕ್ಕಳೊಂದಿಗೆ ತಂದೆಯ ಮನೆಯಾದ ಭಟ್ಕಳದಲ್ಲಿ ಹತ್ತು ವರ್ಷಗಳ ಕಾಲ ಇದ್ದು ನಂತರ ರಾಜಿ ಪಂಚಾಯತಿಗೆ ಮಾಡಿ 10 ತಿಂಗಳಿನಿಂದ ಗಂಡನ ಮನೆಗೆ ಬಂದಿದ್ದು ಒಂದು ವಾರ ಚಿನ್ನಾಗಿದ್ದು ನಂತರ ಮನೆ ಕಟ್ಟುಲು ಹಣ ತರುವಂತೆ ಪುನಃ ಕಿರುಕಿಳ ಕೊಡುತ್ತಿದ್ದ. ದಿನಾಂಕ 16/07/09 ರಂದು ರಾತ್ರಿ ಅವಾಚ್ಯ ಶಬ್ದಗಳಿಂದ ಬೈದು ಮನೆ ಬಿಟ್ಟು ಹೋಗುವಂತೆ ಹೇಳಿದ್ದು ದಿನಾಂಕ 17/07/09 ರಂದು 14:30 ಗಂಟೆಗೆ ಕೈುಂದ ಹೊಡೆದು ಮನೆಬಿಟ್ಟು ಹೋಗಲಿಲ್ಲವೆಂದು ಹೇಳಿ ಬಾುಗೆ ಯಾವುದೋ ದ್ರವನ್ನು ಸುರಿದು ಬಾಟ್ಲಿ ಹಿಡಿದುಕೊಂಡು ಹೋಗಿರುತ್ತಾರೆ. ಇದರಿಂದ ಅಸ್ವಸ್ಥಗೊಂಡ ಶಮೀನಾರವರನ್ನು ಅವರ ಅತ್ತೆ ಜುಲೇಕಾರವರು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಅಸ್ಪತ್ರೆಯಲ್ಲಿ ದಾಖಲುಮಾಡಿರುತ್ತಾರೆ. ಘಟನೆ ಬಗ್ಗೆ ಶಮೀನಾರವರ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 77/09 ಕಲಂ 498(ಎ), 323, 504 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ದಿನಾಂಕ 17/7/09 ರಂದು ಕಾರ್ಕಳದ ಮಿಯಾರು ಗ್ರಾಮದ ಜೋಡುಕಟ್ಟೆಯ ನಿವಾಸಿ ಪದ್ಮನಾಭ ಕೆ.ರವರ ಮಗನಾದ ಅಭಿಲಾಷ್ (15 ವರ್ಷ) ಎಂಬವರು ಮಿಯಾರು ಗ್ರಾಮದ ಜೋಡುಕಟ್ಟೆ ಬಸ್ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದು ಬೆಳಿಗ್ಗೆ 08:15 ಗಂಟೆಗೆ ಬಜಗೋಳಿ ಕಡೆುಂದ ಕಾರ್ಕಳದ ಕಡೆಗೆ ಜಯರಾಜ್ ಬಲ್ಲಾಳ್ ಬಸ್ಸು ನಂಬ್ರ ಕೆಎ 19 ಬಿ 9607ನ್ನು ಅದರ ಚಾಲಕ ಪ್ರವೀಣ ಎಂಬಾತನು ಚಲಾುಸಿಕೊಂಡು ಬಂದು ಜೋಡುಕಟ್ಟೆ ಬಸ್ನಿಲ್ದಾಣದಲ್ಲಿ ನಿಲ್ಲಿಸಿದ್ದು ಅಭಿಲಾಷ್ರವರು ಬಸ್ಸನ್ನು ಹತ್ತುತ್ತಿರುವಾಗ ಬಸ್ ಚಾಲಕನು ನಿವರ್ಾಹಕನ ಯಾವುದೇ ಸೂಚನೆ ಇಲ್ಲದೇ ನಿರ್ಲಕ್ಷ್ಯತನದಿಂದ ಒಮ್ಮೆಲೇ ಮುಂದೆ ಚಲಾುಸಿದ ಪರಿಣಾಮ ಅಭಿಲಾಷ್ರವರು ಬಸ್ಸಿನಿಂದ ಹೊರಗೆ ರಸ್ತೆಗೆ ಎಸೆಯಲ್ಪಟ್ಟು ಎಡಕಾಲಿನ ಮೊಣಗಂಟು, ಮಣಿಗಂಟಿನ ಬಳಿ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಕಾರ್ಕಳ ಸ್ಪಂದನ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಭಿಲಾಷ್ರವರ ದೂರಿನ ಮೇರೆಗೆ ಆರೋಪಿ ಚಾಲಕ ಪ್ರವೀಣನ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 91/09 ಕಲಂ. 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 16/07/09 ರಂದು ಬೆಳಿಗ್ಗೆ 11:30 ಗಂಟೆಯ ಹೊತ್ತಿಗೆ ಕುಂದಾಪುರ ತಾಲೂಕು ಕಿರಿಮಂಜೇಶ್ವರ ಗ್ರಾಮದ ಮೂಕಾಂಬಿಕ ಮರದ ಕಾಖರ್ಾನೆಯ ಬಳಿ ರಾ.ಹೆ 17ರಲ್ಲಿ ಕೆಗರ್ಾಲ್ ಗ್ರಾಮದ ಹೊಸ್ಕೋಟೆ ಬಳ್ಳುಗುಡಿಯ ವಾಸಿ ನಾರಾಯಣ ಪೂಜಾರಿ (60 ವರ್ಷ)ರವರು ಇತರರೊಂದಿಗೆ ಕೆಲಸ ಮಾಡುತ್ತಿರುವಾಗ ಕೆಎ 20 ಬಿ 1153 ನಂಬ್ರದ ಟಿಪ್ಪರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆುಂದ ಚಲಾುಸಿಕೊಂಡು ಬಂದು ಒಮ್ಮಲೇ ಬ್ರೇಕ್ ಹಾಕಿದ ಪರಿಣಾಮ ಟಿಪ್ಪರ್ ಚಾಲಕನ ಹತೋಟಿ ತಪ್ಪಿ ಕಚ್ಚಾ ರಸ್ತೆಯಲ್ಲಿ ನಿಂತಿದ್ದ ನಾರಾಯಣ ಪೂಜಾರಿಯವರಿಗೆ ಢಿಕ್ಕಿ ಹೊಡೆದ ಪರಿಣಾಮ ಮೊಣಗಂಟಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ. ಘಟನೆ ಬಗ್ಗೆ ನಾರಾಯಣ ಪೂಜಾರಿಯವರ ದೂರಿನಂತೆ ಬೈಂದೂರು ಠಾಣೆಯಲ್ಲಿ ದಿನಾಂಕ 17/07/09ರಂದು ಠಾಣಾ ಅಪರಾಧ ಕ್ರಮಾಂಕ 169/09 ಕಲಂ. 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ
ಕುಂದಾಪುರದ ಗೋಳಿಹೊಳೆ ಗ್ರಾಮದ ಬೀಡಿ ಕೇರಿ ಮನೆಯ ಬಾಲಯ್ಯ ಮರಾಠಿಯವರ ಮಗನಾದ ವಾಸು ಮರಾಠಿ (23 ವರ್ಷ)ರವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು ದಿನಾಂಕ 15/07/09 ರಂದು ಸಂಜೆ ಸಮಯ ಸುಮಾರು 5:30ರ ಹೊತ್ತಿಗೆ ಕುಂದಾಪುರ ತಾಲೂಕು ಗೋಳಿಹೋಳೆ ಗ್ರಾಮದ ಮೂರಕೈ ಬಳಿ ಸರಕಾರಿ ಖಾಲಿ ಜಾಗದಲ್ಲಿ ಅವರು ತಮ್ಮ ಸಂಗಡಿಗರೊಂದಿಗೆ ಕ್ರಿಕೆಟ್ ಆಟ ಆಡಲು ಹೋದಾಗ ಆರೋಪಿತರಾದ ಸ್ಥಳೀಯ 1) ಶೇಖರ ಪೂಜಾರಿ, 2) ವೀರೇಂದ್ರ ಪೂಜಾರಿ, 3) ಉದಯ ಪೂಜಾರಿ, 4) ಸುಧಾಕರ ಗೌಡ ಮತ್ತು 5) ಸಾುಕುಮಾರ ಎಂಬವರು ಸ್ಥಳಕ್ಕೆ ಬಂದು, ವಾಸು ಮರಾಠಿ ಮತ್ತು ಆತನ ಸಂಗಡಿಗರು ಕ್ರಿಕೆಟ್ ಆಟ ಆಡಲು ಅಡ್ಡಿಪಡಿಸಿ, ಕುತ್ತಿಗೆಗೆ ಕೈ ಹಾಕಿ ದೂಡಿದ್ದು, ವಾಸುರವರು ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಕೈುಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ವಾಸುರವರು ದಿನಾಂಕ 17/07/2009ರಂದು ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದು ಅವರ ದೂರಿನಂತೆ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 170/09 ಕಲಂ 143, 147, 323, 504, 506(2) ಜೊತೆಗೆ 149 ಐ.ಪಿ.ಸಿ ಮತ್ತು ಕಲಂ 3(1)(10) ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆಕಸ್ಮಿಕ ಕಾಲು ಜಾರಿ ಕೆರೆಗೆ ಬಿದ್ದು ಸಾವು
ದಿನಾಂಕ 16/07/2009ರಂದು ಸಾಯಂಕಾಲ 5:00 ಘಂಟೆಯ ನಂತರ ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ಶೀನ ಮಡಿವಾಳರ ಮಗನಾದ ಆನಂದ ಮಡಿವಾಳ (40 ವರ್ಷ)ರವರು ಆಜ್ರಿ ಗ್ರಾಮದ ಎಡೂರು ಮುಳ್ಳಿಮನೆ ಕೆರೆಯ ಬದಿಯಲ್ಲಿರುವ ಸಾರ್ವಜನಿಕ ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಆಕಸ್ಮಾತ್ ಕಾಲು ಜಾರಿ ಕೆರೆಗೆ ಬಿದ್ದು ಉಸಿರುಗಟ್ಟಿ ಮುಳುಗಿ ಮೃತಪಟ್ಟಿರುತ್ತಾರೆ ಎಂಬುದಾಗಿ ಮೃತರ ಮಾವನಾದ ಸದಾಶಿವ ಮಡಿವಾಳರವರು ದಿನಾಂಕ 17/07/2009ರಂದು ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತರು ಕೂಲಿ ಕೆಲಸಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಗೃಹಿಣಿಗೆ ಮಾನಸಿಕ ಹಿಂಸೆ - ಖಾಸಗಿ ದೂರು ದಾಖಲು
ಉಡುಪಿಯ ತೆಂಕಬೆಟ್ಟಿನ ನನರ್ಾಡು ಮದಗ ಎಸ್.ಎಸ್.ಎಸ್. ಭಜನಾ ಮಂದಿರದ ಬಳಿ ವಾಸವಿರುವ ಶಂಕರ್ ಭಾಗವತ್ರವರ ಮಗಳಾದ ಜ್ಯೋತಿ (24 ವರ್ಷ)ರವರನ್ನು ದಿನಾಂಕ 07/12/2008ರಂದು ಕೊಂಕಣಿ ಸಂಪ್ರದಾಯದಂತೆ ಉಡುಪಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಕಲಾಮಂದಿರ ಮಂಟಪದಲ್ಲಿ ಪರ್ಕಳದ ಸಣ್ಣಕ್ಕಿ ಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ವಾಸವಿರುವ ಗೋವರ್ಧನರವರ ಮಗನಾದ ಸವರ್ೋತ್ತಮರವರೊಂದಿಗೆ ವಿವಾಹಮಾಡಿಕೊಡಲಾಗಿತ್ತು. ವಿವಾಹ ಸಮಯದಲ್ಲಿ ವರದ ಕಡೆಯವರ ಅಪೇಕ್ಷೆಯಂತೆ ಮದುವೆಯ ಖಚರ್ು ರೂಪಾಯಿ ಒಂದು ಲಕ್ಷ ಐವತ್ತು ಸಾವಿರವನ್ನು ವಧುವಿನ ತಂದೆಯು ಭರಿಸಿದ್ದು, ವರನಿಗೆ 15 ಪವನ್ ಚಿನ್ನವನ್ನು ಉಡುಗೊರೆಯಾಗಿ ನೀಡಲಾಗಿತ್ತು. ಮದುವೆಯ ಬಳಿಕ ವರ ಹಾಗೂ ವರನ ಕಡೆಯವರಾದ ಶ್ರೀಮತಿ ಜಯಶ್ರೀ ಶೆಣೈ (55 ವರ್ಷ), ಗೋವರ್ಧನ ಶೆಣೈ (59 ವರ್ಷ) ಹಾಗೂ ಗೋಕುಲ್ದಾಸ್ ಆಚಾರ್ಯರವರು ಶ್ರೀಮತಿ ಜ್ಯೋತಿರವರಿಗೆ ಅವರ ತಂಗಿಯಂದಿರ ಶೀಲದ ಬಗ್ಗೆ ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದು ದಿನಾಂಕ 25/02/09 ರಂದು ಅಪಾದಿತರು ಮಂಗಳೂರಿನ ಕೋಡಿಕಲ್ ಮನೆಯಲ್ಲಿ ಶ್ರೀಮತಿ ಜ್ಯೋತಿರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಮನೆುಂದ ದೂಡಿ ಹೊರ ಹಾಕಿರುವುದಾಗಿಯೂ ಮಾನಸಿಕ ಕಿರುಕುಳ ಕೊಡುತ್ತಿದ್ದುದನ್ನು ತಂದೆ ತಾುಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಶ್ರೀಮತಿ ಜ್ಯೋತಿರವರು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದು ಅವರ ದೂರಿನಂತೆ ದಿನಾಂಕ 16/07/2009ರಂದು ಸಾಯಂಕಾಲ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 125/09 ಕಲಂ 498 (ಎ), 504, 506 ಜೊತೆಗೆ 34 ಐ.ಪಿ.ಸಿ.ಯಂತೆ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮರಣದ ಬಗ್ಗೆ ಅನುಮಾನ
ಮಣಿಪಾಲದ ನೇತಾಜಿ ನಗರದ ನಂದಿನಿ ಮಿಲ್ಕ್ ಪ್ರೋಸೆಸಿಂಗ್ ಕಂಪೆನಿಯ ಹತ್ತಿರದ ವಾಸಿ ಅಪ್ಪು ಅಲಿಯಾಸ್ ರಾವುಲ್ ನಾಯ್ಕ್ರವರ ಪತ್ನಿ ಶ್ರೀಮತಿ ರತ್ನಾ ಅಲಿಯಾಸ್ ರತ್ನಾವತಿ ಎಂಬವರು ತಮ್ಮ ಮಗಳಾದ ಶ್ರೀಮತಿ ಸುಮತಿ ನಾಯ್ಕ್ರವರ ಮನೆಯಾದ ಬೆಂಗಳೂರಿನ 9, ಸುರಭಿ, ಡಿ.ವಿ.ಗುಂಡಪ್ಪ ರಸ್ತೆ, 5ನೇ ಮುಖ್ಯ ರಸ್ತೆ, ಕೋಡಿಗೆಹಳ್ಳಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೃತ ದೇಹವನ್ನು ದಿನಾಂಕ 10/07/2009ರಂದು ಶ್ರೀಮತಿ ಸುಮತಿ ನಾಯ್ಕ್ ಮತ್ತು ಆಕೆಯ ಪತಿ ಡಾ. ಜೆ.ಬಿ. ನಾಯ್ಕ್ರವರು ಮಣಿಪಾಲಕ್ಕೆ ತಂದಿದ್ದು ಮೃತರು ಮರಣ ಹೊಂದಿದ ಬಗ್ಗೆ ಕಾರಣ ನೀಡಲು ನಿರಾಕರಿಸಿರುತ್ತಾರಾಗಿ ಮೃತರ ಇನ್ನೋರ್ವ ಪುತ್ರಿ ಶ್ರೀಮತಿ ರೇವತಿ ನಾಯ್ಕ್ (38 ವರ್ಷ) ಗಂಡ ಸುಧಾಕರ ನಾಯ್ಕ್, ಅಜೆಕಾರು, ಕಾರ್ಕಳರವರು ಮಾನ್ಯ ನ್ಯಾಯಾಲಯದಲ್ಲಿ ಖಾಸಾಗಿ ದೂರು ದಾಖಲಿಸಿರುತ್ತಾರೆ. ಅಲ್ಲದೇ ಅವರು ತನ್ನ ದೂರಿನಲ್ಲಿ ಅವರ ತಾು ಶ್ರೀಮತಿ ರತ್ನಾ ಅಲಿಯಾಸ್ ರತ್ನಾವತಿರವರಿಗೆ 6 ಜನ ಹೆಣ್ಣು ಮಕ್ಕಳಿದ್ದು ಅವರನ್ನು ತಿಂಗಳಿಗೆ ಒಬ್ಬರಂತೆ ಸರದಿಯಲ್ಲಿ ನೋಡಿಕೊಳ್ಳುವುದಾಗಿ ದಿನಾಂಕ 28/09/08 ರಂದು ಮೃತರ ಮಕ್ಕಳೊಳಗೆ ತೀಮರ್ಾನ ಆಗಿದ್ದು ಅದರಂತೆ 5 ತಿಂಗಳು ರೇವತಿ ನಾಯ್ಕ್ರವರ ಮನೆಯಲ್ಲಿ ತಾು ಇದ್ದು ಬಳಿಕ ತಾುಯನ್ನು ವರ ಇನ್ನೋರ್ವ ಮಗಳಾದ ಶ್ರೀಮತಿ ಸುಮತಿ ನಾಯ್ಕ್ರವರು ಬೆಂಗಳೂರಿಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದು, ಮೃತರ ಹೆಸರಿನಲ್ಲಿ 28 ಸೆಂಟ್ಸ್ ಭೂಮಿ ಮತ್ತು ಹಂಚಿನ ಮನೆ ಮಣಿಪಾಲದಲ್ಲಿ ಹಾಗೂ ಓಂತಿಬೆಟ್ಟಿನಲ್ಲಿ ಇದ್ದು ಮೃತರ ಮರಣದ ಬಗ್ಗೆ ಅನುಮಾನ ಇರುವುದಾಗಿದೆ ಎಂದು ನಮೂದಿಸಿರುವ ಮೇರೆಗೆ ದಿನಾಂಕ 16/07/2009ರಂದು ಸಾಯಂಕಾಲ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 126/09 ಕಲಂ 299, 304, 346, 357, 404, 506 ಜೊತೆಗೆ 34 ಐ.ಪಿ.ಸಿಯಂತೆ ಆರೋಪಿತರಾದ ಶ್ರೀಮತಿ ಸುಮತಿ ನಾಯ್ಕ್ ಮತ್ತು ಆಕೆಯ ಪತಿ ಡಾ. ಜೆ.ಬಿ. ನಾಯ್ಕ್ರವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳು
ದಿನಾಂಕ 13/07/09 ರಂದು 07:00 ಗಂಟೆಗೆ ಬ್ರಹ್ಮಾವರ ಠಾಣಾ ಸರಹದ್ದಿನ ಕೆಂಜೂರು ಗ್ರಾಮದ ಬೈದಬೆಟ್ಟು ದೇವರಾಯ ಶ್ಯಾನುಬೋಗ್ ರವರ ಅಂಗಡಿಯ ಬಳಿ ಆರೋಪಿಯು ಸಂತೋಷ್ ಕುಮಾರ್ ನಂ ಕೆಎ 20 ಎಸ್ 7489 ನೇ ಮೋಟಾರು ಸೈಕಲನ್ನು ಮನೆಯಿಂದ ಕೊಕ್ಕಣರ್ೆ ಕಡೆಗೆ ಶಿರೂರು-ಹೆಬ್ರಿ ಸಂತೆಕಟ್ಟೆ ರಸ್ತೆಯಲ್ಲಿ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಾ ರಸ್ತೆಯಲ್ಲಿ ನಾಯಿ ಅಡ್ಡ ಬಂದುದ್ದನ್ನು ಕಂಡು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲಿನ ಹಿಂದೆ ಕುಳಿತ್ತಿದ್ದ ಆರೋಪಿಯ ತಂಗಿ ಅಮೃತಾ ಕುಲಾಲ್ ರಸ್ತೆಗೆ ಬಿದ್ದ ಪರಿಣಾಮ ಅಮೃತಾ ಕುಲಾಲಳ ಹಣೆಗೆ ತೀವ್ರ ತರಹದ ಜಖಂ ಉಂಟಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗೋಪಾಲ ಕುಲಾಲ್ ತಂದೆ: ಶೀನ ಕೂಲಾಲ್ ವಾಸ: ಆರೂರು ಗ್ರಾಮ ರವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 127/09 ಕಲಂ 279, 338 ಐಪಿಸಿ ಜೊತೆಗೆ 134 (ಬಿ) ಮೋಟಾರು ವಾಹನ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 15/07/09 ರಂದು 20.00 ಗಂಟೆಗೆ ಉಡುಪಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆಪಾದಿತ ಬಸ್ ಚಾಲಕನು ಸುಧಾರ್ ಟ್ರಾವೆಲ್ಸ್ ಬಸ್ಸನ್ನು ನಿರ್ಲಕ್ಷತನ ಮತ್ತು ಅಜಾಗರೂಕತೆಯಿಂದ ಒಮ್ಮೇಲೆ ಮುಂದಕ್ಕೆ ಚಲಾಯಿಸಿದ್ದರಿಂದ ಬಸ್ಸಿನ ಹಿಂಬದಿ ಬಾಗಿಲಿನಿಂದ ಇಳಿಯುತ್ತಿದ್ದ ಶ್ರೀ ಮಧುಕರ ಪೂಜಾರಿ ತಂದೆ:ತನಿಯ ಪೂಜಾರಿ ವಾಸ:ಕೊಳಲಗಿರಿ ಚಚರ್್ ಬಳಿ, ಹಾವಂಜೆ ಗ್ರಾಮ, ಉಡುಪಿ ಇವರು ಬಸ್ಸಿನಿಂದ ಕೆಳಗೆ ಬಿದ್ದಿದ್ದು, ಪರಿಣಾಮ ಬಲ ಕಾಲು ತೊಡೆಯ ಬಳಿ ಮೂಳೆ ಮುರಿತವುಂಟಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಹಾಗೂ ಆಪಾದಿತ ಬಸ್ ಚಾಲಕನು ತನ್ನ ಬಸ್ಸನ್ನು ಅಪಘಾತ ಸ್ಥಳದಲ್ಲಿ ನಿಲ್ಲಿಸದೇ ಹೋಗಿರುವುದಾಗಿದೆ. ಈ ಬಗ್ಗೆ ಮಧುಕರ ಪೂಜಾರಿ ರವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 233/09 ಕಲಂ 279, 337 ಐಪಿಸಿ ಜೊತೆಗೆ 134 (ಎ)(ಬಿ) ಮೋಟಾರು ವಾಹನ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 16/07/09 ರಂದು ಸಂಜೆ 6.00 ಗಂಟೆಗೆ ಉಡುಪಿ ಠಾಣಾ ಸರಹದ್ದಿನ ಉಡುಪಿ ಡಯಾನ ರಸ್ತೆಯಿಂದ ಇಂದಿರಾ ನಗರಕ್ಕೆ ಹೋಗುವ ರಸ್ತೆಯಲ್ಲಿ ಡಯಾನ-ಇಂದಿರಾ ನಗರ ತಿರುವು ರಸ್ತೆಯಿಂದ ಸುಮಾರು 100 ಮೀಟರ್ ಹೋಗುವಾಗ ತಿರುವಿನಲ್ಲಿ ಆಪಾದಿತ ಬೈಕ್ ನಂ ಕೆಎ-20-ಕ-2556ನೇದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀಮತಿ ವಿಮಲ ಗಂಡ: ಸಾಮ್ಯುಯಲ್ ಸುದರ್ಶನ ವಾಸ:ಕುಕ್ಕಿಕಟ್ಟೆ, ಇಂದಿರಾ ನಗರ, 76 ಬಡಗಬೆಟ್ಟು, ಉಡುಪಿ ಇವರ ಪತಿ ಸಾಮ್ಯುಯಲ್ ಸುದರ್ಶನವರು ಚಲಾಯಿಸುತ್ತಿದ್ದ ಬೈಕ್ ನಂ.ಕೆಎ-20-ಕೆ-5972ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶ್ರೀಮತಿ ವಿಮಲರ ಎಡಕಾಲಿನ ಮಣಿಗಂಟಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಶ್ರೀಮತಿ ವಿಮಲ ರವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 234/09 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಾಹನ ಕಳವು ಪ್ರಕರಣ
ದಿನಾಂಕ 11/07/09 ರ 17-30 ಗಂಟೆಯಿಂದ 12/07/9 ರ ಬೆಳಿಗ್ಗೆ 06-00 ಗಂಟೆಯ ಮಧ್ಯಾವಧಿಯಲ್ಲಿ ಬೈಂದೂರು ಠಾಣಾ ಸರಹದ್ದಿನ ಕುಂದಾಪುರ ತಾಲೂಕು 11 ನೇ ಉಳ್ಳೂರು ಗ್ರಾಮದ ನೂಜಾಡಿ ಎಂಬಲ್ಲಿನ ವಾಸಿ ವೆಂಕಟೇಶ ಬಿಲವ್ಲ,(28ವರ್ಷ) ತಂದೆ : ಚಿಕ್ಕಯ್ಯ ಬಿಲ್ಲವ, ಇವರ ಮನೆಯ ಅಂಗಳದಲ್ಲಿ ನಿಲ್ಲಿಸಿದ ಕೆಎ 19-ವಿ-4680 ಬಜಾಜ್ ಬೈಕ್{( ಅಂದಾಜು ಮೌಲ್ಯ 25,000/-) ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ವೆಂಕಟೇಶ ಬಿಲ್ಲವ ರವರು ನೀಡಿದ ದೂರಿನ ಮೇರೆಗೆ ಬೈಂದೂರು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 167/09 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಆಕಸ್ಮಿಕ ಕಾಲು ಜಾರಿ ನೀರಿಗೆ ಬಿದ್ದು ಸಾವು
ದಿನಾಂಕ: 12/7/09 ರಂದು ಸಂಜೆ 5:00 ಗಂಟೆಯ ಸಮಯಕ್ಕೆ ಸಾಣೂರು ಗ್ರಾಮದ ಮಠದಕೆರೆ ಎಂಬಲ್ಲಿ ಗಣೇಶ ಎಂಬಾತನು ತನ್ನ ಗೆಳೆಯರೊಂದಿಗೆ ಮಠದಕೆರೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಆಳದ ನೀರಿಗೆ ಬಿದ್ದಿದ್ದು ನಂತರ ಅಗ್ನಿಶಾಮಕ ದಳದವರು ಬಂದು ಆತನನ್ನು ನೀರಿನಿಂದ ಮೇಲಕ್ಕೆ ಎತ್ತಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕೊಂಡುಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಗಣೇಶನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುರೇಶ್ ಶೆಟ್ಟಿಗಾರ (35) ತಂದೆ: ಸುಬ್ರಾಯ ಶೆಟ್ಟಿಗಾರ ವಾಸ: ರಾಧಾ ನಿವಾಸ ಕುಂಟಲ್ಪಾಡಿ ಸಾಣೂರು ಗ್ರಾಮ ಕಾರ್ಕಳ ಇವರು ದೂರು ನೀಡಿದ್ದು ಅವರ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 20/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ
ದಿನಾಂಕ 11/07/09 ರಂದು ಬೈಂದೂರು ಠಾಣಾ ಸರಹದ್ದಿನ ಕುಂದಾಪುರ ತಾಲೂಕು ಯಡ್ತರೆ ಗ್ರಾಮ ಆಲಂದೂರು ಎಂಬಲ್ಲಿ ವಾಸಿ ಅಣ್ಣಪ್ಪ ಗಾಣಿಗ(27ವರ್ಷ) , ತಂದೆ : ರಾಮ ಕೃಷ್ಣ ಗಾಣಿಗ, ಆಲಂದೂರು ಯಡ್ತರೆ ಗ್ರಾಮ ಕುಂದಾಪುರ ಇವರ ತಂದೆ ರಾಮ ಕೃಷ್ಣ (55 ವರ್ಷ) ಎಂಬವರು ಕಲ್ಲು ಕೋರೆಯಲ್ಲಿ ಕೆಲಸ ಮಾಡುವ ಸತ್ಯಪ್ಪ @ ಸತೀಶ ಅಬ್ಯಾಡಿ ಬೆಂಗ್ರೆ ಭಟ್ಕಳ ಎಂಬವರೊಂದಿಗೆ ಕೆಲಸಕ್ಕೆ ಜನರನ್ನು ತರಲು ಶಿಶರ್ಿಗೆ ಹೋಗುವುದಾಗಿ ತನ್ನ ಹೆಂಡತಿಯಾದ ಶ್ರೀಮತಿ ಲಕ್ಷ್ಮೀಯವರಲ್ಲಿ ಹೇಳಿ 15,000 ರೂ ಹಿಡಿದುಕೊಂಡು ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಅಣ್ಣಪ್ಪ ಗಾಣಿಗ ರವರು ದೂರು ನೀಡಿದ್ದು ಅವರ ದೂರಿನಂತೆ ಬೈಂದೂರು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 168/09 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ಪತ್ತೆ ಬಗ್ಗೆ ಶ್ರಮಿಸಲಾಗುತ್ತಿದೆ.