Sunday, July 19, 2009

`ಜಾತಿ-ಧರ್ಮದ ಬಗ್ಗೆ ಬಡಿದಾಡಿದರೆ ದೇಶದ ಅಭಿವೃದ್ಧಿ ಅಸಾಧ್ಯ'/Shobha karandlaje-Edneer matt

ಎಡನೀರು(ಕಾಸರಗೋಡು): ಜಾತಿ-ಧರ್ಮದ ಬಗ್ಗೆ ಬಡಿದಾಡಿದರೆ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಕನರ್ಾಟಕ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಶನಿವಾರ ಇಲ್ಲಿ ಹೇಳಿದರು.
ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ 49ನೇ ಚಾತುಮರ್ಾಸ್ಯದ ಅಂಗವಾಗಿ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳ ಮತ್ತು ಕನರ್ಾಟಕವನ್ನು ಬೆಸೆಯುವ ಕಾರ್ಯವನ್ನು ಎಡನೀರು ಮಠ ಮಾಡುತ್ತಿದೆ ಎಂದು ಶ್ಲಾಘಿಸಿದರು. ಕಲೆ ಮತ್ತು ಸಂಸ್ಕೃತಿಯ ವಿಚಾರಧಾರೆಯನ್ನು ಸ್ವಾಮೀಜಿಗಳು ಸಮಾಜಕ್ಕೆ ನೀಡಬೇಕು ಎಂದರು.
ಮಾನಸ ಸರೋವರಕ್ಕೆ ಪ್ರವಾಸ ಹೋಗುವವರಿಗೆ ಕನರ್ಾಟಕ ಸಕರ್ಾರ ಧನ ಸಹಾಯ ನೀಡುತ್ತಿದ್ದು, ಅಗತ್ಯವಿದ್ದವರು ಮನವಿ ಸಲ್ಲಿಸಿದರೆ ಧನ ಸಹಾಯ ಒದಗಿಸುವುದಾಗಿ ಅವರು ಭರವಸೆ ನೀಡಿದರು.
ಶಾಸಕ ಸಿ.ಟಿ.ಅಹಮ್ಮದಾಲಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಗಳು ಆಶೀರ್ವಚನ ನೀಡಿದರು. ಚಾತುಮರ್ಾಸ್ಯ ಸಮಿತಿಯ ಅಧ್ಯಕ್ಷ ಎಂ. ನಾರಾಯಣ ಭಟ್, ಬಿ.ಜೆಪಿ. ದ.ಕ. ಜಿಲ್ಲಾ ಅಧ್ಯಕ್ಷ ಮೋನಪ್ಪ ಭಂಡಾರಿ, ಕಿಳಿಂಗಾರು ಗೋಪಾಲಕೃಷ್ಣ ಭಟ್ ಹಾಜರಿದ್ದರು.
ಐ.ವಿ.ಭಟ್ ಸ್ವಾಗತಿಸಿ, ರಾಜೇಂದ್ರ ಕಲ್ಲೂರಾಯ ವಂದಿಸಿದರು. ಡಾ.ರಮಾನಂದ ಬನಾರಿ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment