Saturday, July 11, 2009

45 ವರ್ಷಗಳ ಬಳಿಕವೂ ಶಾಸ್ತ್ರಿ ಸಾವು ನಿಗೂಢ/Lal Bahddur Shastri 45 ago death

ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಸಾವನ್ನಪ್ಪಿದ್ದು, 45 ವರ್ಷಗಳು ಸಮೀಪಿಸುತ್ತಿದ್ದರೂ ಅವರ ಸಾವಿನ ಸುತ್ತದ ಗುಮಾನಿಯ ಹುತ್ತ ಹಾಗೆಯೇ ಬೆಳೆದಿದೆ. ಈ ಕುರಿತು ಸಲ್ಲಿಸಲಾಗಿರುವ ಆರ್‌ಟಿಐ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರವು ತನ್ನ ಬಳಿ ಒಂದು ದಾಖಲೆ ಇದೆಯಾದರೂ ಅದನ್ನು ನೀಡಲು ನಿರಾಕರಿಸಿದೆ.
ಈ ದಾಖಲೆಯನ್ನು ಬಹಿರಂಗ ಪಡಿಸಿದಲ್ಲಿ ಇದು ವಿದೇಶಾಂಗ ಸಂಬಂಧಗಳಿಗೆ ಹಾನಿಯುಂಟುಮಾಡುತ್ತದೆ, ರಾಷ್ಟ್ರದಲ್ಲಿ ಆಶಾಂತಿಗೆ ಕಾರಣವಾಗಬಹುದು ಮತ್ತು ಇದು ಸಾಂವಿಧಾನಿಕ ಅನುಬಂಧಗಳ ಉಲ್ಲಂಘನೆಯಾಗುತ್ತದೆ ಎಂಬ ಕಾರಣಗಳನ್ನು ನೀಡಿದೆ. ಶಾಸ್ತ್ರಿ ಅವರು ಕಾರ್ಡಿಯಾಕ್ ಅರೆಸ್ಟ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಆಗ ಘೋಷಿಸಲಾಗಿತ್ತು. ಆದರೆ ಅವರ ಪತ್ನಿ ಲಲಿತಾ ಶಾಸ್ತ್ರಿ ಅವರು ತನ್ನ ಪತಿಗೆ ವಿಷವಿಕ್ಕಲಾಗಿದೆ ಎಂದು ಆರೋಪಿಸಿದ್ದರು. ಶಾಸ್ತ್ರಿ ಅವರು 1966ರ ಜನವರಿ 11ರಂದು ಸಾವನ್ನಪ್ಪಿದ್ದರು.
ಆಗಿನ ಯುಎಸ್ಎಸ್ಆರ್ ಮರಣೋತ್ತರ ಶಸ್ತ್ರಕ್ರಿಯೆ ನಡೆಸಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಶಾಸ್ತ್ರಿ ಅವರು ಖಾಸಗಿ ವೈದ್ಯ ಆರ್.ಎನ್. ಚಗ್ ಹಾಗೂ ಕೆಲವು ರಶ್ಯಾ ವೈದ್ಯರು ನಡೆಸಿದ ವೈದ್ಯಕೀಯ ತಪಾಸಣೆ ನಡೆಸಿರುವ ಒಂದು ವರದಿ ಇದೆ ಎಂದು ಸರ್ಕಾರ ಹೇಳಿದೆ.
'ಸಿಐಎ'ಸ್ ಐ ಆನ್ ಸೌಥ್ ಏಶ್ಯಾ'ದ ಲೇಖಕರಾಗಿರುವ ಅಂಜು ಧಾರ್ ಅವರು ಮಾಹಿತಿ ಹಕ್ಕು ಕಾಯ್ದೆಯನ್ವಯ ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದ್ದರು. "ಶಾಸ್ತ್ರಿ ಸಾವಿಗೆ ಸಂಬಂಧಿಸಿದಂತೆ ಒಂದು ದಾಖಲೆ ಇದೆ. ಯಾವುದೇ ದಾಖಲೆಗಳು ನಾಶವಾಗಿರುವ ಅಥವಾ ಕಳೆದುಹೋಗಿರುವ ದಾಖಲೆಗಳಿಲ್ಲ" ಎಂದು ಸರ್ಕಾರ ಹೇಳಿದೆ.
ಅಮೆರಿಕದ ಮಟ್ಟದಲ್ಲಿ ಮಾಹಿತಿ ಬಹಿರಂಗ ನೀತಿಗಾಗಿ ಲಾಬಿನಡೆಸಲು ಧಾರ್ ಅವರು ಎಂಡ್‌ದಿಸೀಕ್ರೆಸಿ.ಕಾಮ್ ಎಂಬ ವೆಬ್‌ಸೈಟ್ ಆರಂಭಿಸಿದ್ದಾರೆ. ಇವರು ಭಾರತಕ್ಕೆ ಸೋವಿಯತ್ ಯಾವುದಾದರೂ ಮಾಹಿತಿ ನೀಡಿದೆಯೇ ಎಂದು ಕೇಳಿದ್ದಾರೆ. ಭಾರತವು ಪೋಸ್ಟ್‌ಮಾರ್ಟಂ ನಡೆಸಿದೆಯೇ ಮತ್ತು ವಂಚನೆ ಆಪಾದನೆಗಳ ಕುರಿತು ಸರ್ಕಾರ ಯಾವುದಾದರೂ ತನಿಖೆ ನಡೆಸಿದೆಯೇ ಎಂಬ ಕುರಿತು ಅವರು ಸರ್ಕಾರವನ್ನು ಕೇಳಿದ್ದು, ಗೃಹಸಚಿವಾಲಯ ಇನ್ನಷ್ಟೆ ಉತ್ತರಿಸಬೇಕಿದೆ.
ರಶ್ಯಾದಲ್ಲಿ ಭಾರತ-ಪಾಕಿಸ್ತಾನ ಶೃಂಗಸಭೆಗೆ ತೆರಳಿದ್ದ ಶಾಸ್ತ್ರಿ ಅವರು ಪಾಕಿಸ್ತಾನದೊಂದಿಗೆ ತಾಶ್ಕೆಂಟ್ ಒಪ್ಪಂದಕ್ಕೆ ಸಹಿಹಾಕಿದ ಬಳಿಕ ಅಸ್ವಸ್ಥರಾಗಿದ್ದರು. ತೀವ್ರವಾದ ಕೆಮ್ಮುಕಾಣಿಸಿಕೊಂಡಿದ್ದು ಅವರು ಪಕ್ಕದಲ್ಲಿದ್ದ ಪ್ಲಾಸ್ಕ್‌ನತ್ತೆ ಬೆಟ್ಟು ಮಾಡಿದ್ದರು. ಸಿಬ್ಬಂದಿಯೊಬ್ಬ ನೀಡಿದ್ದ ನೀರನ್ನು ಅವರು ಕುಡಿದಿದ್ದು, ಕೆಲವು ಕ್ಷಣಗಳ ಬಳಿಕ ಪ್ರಜ್ಞಾಹೀನರಾಗಿದ್ದರು. ಅವರನ್ನು ಪ್ರಜ್ಞೆಗೆ ಮರಳಿಸಲು ಮಾಡಿದ ಪ್ರಯತ್ನಗಳು ವಿಫಲವಾಗಿದ್ದವು. ಶಾಸ್ತ್ರಿಯವರಿಗೆ ಆತಿಥ್ಯನೀಡಿದ್ದ ರಶ್ಯ ಅಡುಗೆಯಾತನನ್ನು ವಿಷವಿಕ್ಕಿರುವ ಸಂಶಯದಲ್ಲಿ ಬಂಧಿಸಲಾಗಿತ್ತು. ಬಳಿಕ ಆತನ್ನು ನಿರಪರಾಧಿ ಎಂದು ಬಿಟ್ಟುಬಿಡಲಾಗಿತ್ತು.


ಸಂಶಯ ನಿವಾರಿಸಿ
ಆಟಿಐಯಡಿ ಮಾಹಿತಿ ನೀಡಲು ಸರ್ಕಾರವು ನಿರಾಕರಿಸಿರುವ ಹಿನ್ನೆಲೆಯಲ್ಲಿ, ಶಾಸ್ತ್ರಿಯವರ ಕುಟುಂಬವು ಅವರ ಸಾವಿನ ಕುರಿತ ಎಲ್ಲ ಸಂಶಯಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರ ಪುತ್ರ ಸುನಿಲ್ ಅವರು "ಅವರ ಸಾವು ನಮಗೆ ಮತ್ತು ಇಡಿಯ ರಾಷ್ಟ್ರಕ್ಕೆ ಬಹುದೊಡ್ಡ ಆಘಾತವಾಗಿತ್ತು. ನನಗಾಗ ಬರಿಯ 16 ವರ್ಷಗಳ ಪ್ರಾಯ. ಅವರ ದೇಹದ ಎದೆ, ಕಿಬ್ಬೊಟ್ಟೆ ಮತ್ತು ಬೆನ್ನಿಲ್ಲಿ ನೀಲಿಛಾಯೆ ಮಡುಗಟ್ಟಿತ್ತು ಎಂಬುದು ನನಗೆ ನೆನಪಿದೆ" ಎಂದು ಹೇಳಿದ್ದಾರೆ. ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

 

ಗುಜರಾತ್ ರಾಜ್ಯದಲ್ಲಿ ಮದ್ಯನಿಷೇಧ: ಮಲ್ಯ ತರಾಟೆ/Gujarath Liquor Ban

ನವದೆಹಲಿ: ಯುನೈಟೆಡ್ ಬ್ರಿವರೀಸ್ ಗುಂಪಿನ ಅಧ್ಯಕ್ಷ ವಿಜಯ್ ಮಲ್ಯ ಅವರು ಗುಜರಾತ್ ರಾಜ್ಯದಲ್ಲಿ ಮದ್ಯನಿಷೇಧ ಮಾಡಿರುವ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುತ್ತಾರೆ. ರಾಜ್ಯದಲ್ಲಿ ಮದ್ಯನಿಷೇಧವನ್ನು ಹಿಂತೆಗೆಕೊಳ್ಳಬೇಕು ಎಂದು ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಹೇಳಿರುವ ಮಲ್ಯ, ಮದ್ಯ ನಿಷೇಧವಿಲ್ಲದಿರುವ ರಾಜ್ಯಗಳಲ್ಲೂ ಕಳ್ಳಭಟ್ಟಿ ದುರಂತಗಳು ನಡೆಯುತ್ತವೆ ಎಂದು ಹೇಳಿದ್ದಾರೆ.
ಮದ್ಯ ಕಳ್ಳಸಾಗಣೆಯು ಅಹಮದಾಬಾದಿನಲ್ಲಿ ನಡೆದಿರುವ ಕಳ್ಳಭಟ್ಟಿ ದುರಂತಕ್ಕೆ ಕಾರಣ ಎಂದು ಮಲ್ಯ ಹೇಳಿದ್ದಾರೆ. ರಾಜ್ಯದಲ್ಲಿ ನಡೆದ ಕಳ್ಳಭಟ್ಟಿ ದುರಂತದಲ್ಲಿ ಇದುವರೆಗೆ 136 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 300 ಮಂದಿಯನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಗುಜರಾತಿನಲ್ಲಿ ಎಲ್ಲಾ ಬ್ರಾಂಡಿನ ಮದ್ಯ ಲಭ್ಯ ಎಂದು ಮೋದಿ ಆಪಾದಿಸಿದ್ದಾರೆ. ಆದರೆ ಇವುಗಳ ದರವು ನೆರೆಯರಾಜ್ಯಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಹೇರಲಾಗಿರುವ ಮದ್ಯನಿಷೇಧವನ್ನು ಹಿಂತೆಗೆಯಲು ಅವರು ಕರೆ ನೀಡಿದ್ದಾರೆ.
ಆದರೆ ಮಲ್ಯರ ಈ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಗುಜರಾತ್ ಸರ್ಕಾರ, ಮಲ್ಯ ಒಬ್ಬ ಸ್ವಾರ್ಥಿ ಎಂದಿದ್ದು, ಇಂತಹ ಸಂದರ್ಭದಲ್ಲಿ ಅವರು ತನ್ನ ವ್ಯಾಪಾರದ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಹೇಳಿದೆ.
"ಮಲ್ಯ ಅವರು ತಮ್ಮ ಮದ್ಯವ್ಯವಹಾರವನ್ನು ಗಮನಿಸಿಕೊಳ್ಳಲಿ. ಅವರು ನಮ್ಮ ವಿಚಾರದಲ್ಲಿ ಮೂಗುತೂರಬಾರದು. ಅವರು ಅವರ ಸಲಹೆಗಳನ್ನು ಅವರಿಗೆ ಇರಿಸಿಕೊಳ್ಳಲಿ. ನಮಗೆ ಅದರ ಅವಶ್ಯಕತೆ ಇಲ್ಲ" ಎಂಬುದಾಗಿ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಸರ್ಕಾರಿ ವಕ್ತಾರ ಜೈನಾರಾಯಣ್ ವ್ಯಾಸ್ ಹೇಳಿದ್ದಾರೆ.
 

ತುಂಬಿ ತುಳುಕುತ್ತಿರುವ ತುಂಗಾ ನದಿಗೆ ಈಶ್ವರಪ್ಪ ಬಾಗಿನ/Thumba River BAGINA

ಶಿವಮೊಗ್ಗ, ಜು. 11 : ರಾಜ್ಯದ ಕೈಗಾರಿಕೆಗಳಿಗೆ ನಿರಂತರ 24 ಗಂಟೆ ವಿದ್ಯುತ್ ಒದಗಿಸುವ ಕುರಿತು ಚರ್ಚೆ ಹಾಗೂ ಶೇ.20ರಷ್ಟು ವಿದ್ಯುತ್ ದರ ಏರಿಕೆಯಾಗುವ ಸಂಭವವಿದೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಶನಿವಾರ ಗಾಜನೂರು ಜಲಾಶಯ ಭರ್ತಿ ಮಾಡಿರುವ ತುಂಗಾ ನದಿಗೆ ಬಾಗಿನ ಅರ್ಪಿಸಿದ ನಂತರ ಹೇಳಿದರು.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಜೊತೆಗೆ ಚರ್ಚೆ ನಡೆಸಿದ್ದು, ರಾಜ್ಯದ ಕೈಗಾರಿಕೆಗಳಿಗೆ ಹಗಲು-ರಾತ್ರಿ ವಿದ್ಯುತ್ ಒದಗಿಸಲು ಚರ್ಚೆ ನಡೆಯುತ್ತಿದೆ. ಕೈಗಾರಿಕೆಗಳಲ್ಲಿ ರಾತ್ರಿ ಪಾಳಿ ಕೆಲಸ ನಡೆದರೆ ಅನುಕೂಲವಾಗುತ್ತದೆ. ಈ ವಾರದಲ್ಲಿ ವಿದ್ಯುತ್ ಇಲಾಖೆ, ಕೈಗಾರಿಕಾ ಇಲಾಖೆ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ, ನಂತರ ತೀರ್ಮಾನಿಸುವುದಾಗಿ ತಿಳಿಸಿದರು.

ಕಳೆದ ಆರು ವರ್ಷಗಳಿಂದ ವಿದ್ಯುತ್ ದರದಲ್ಲಿ ಹೆಚ್ಚಳವಾಗಿಲ್ಲ. ಹೀಗಾಗಿ ವಿದ್ಯುತ್ ದರ ಏರಿಕೆಯಾಗುವ ಸಂಭವವಿದ್ದು, ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದು ಶೇ.20ರಷ್ಟು ಬೆಲೆ ಏರಿಸುವಂತೆ ಕೆ.ಇ.ಆರ್.ಸಿ.ಗೆ ಮನವಿ ಸಲ್ಲಿಸಲಾಗುವುದು. ರಾಜ್ಯದಲ್ಲಿ 8 ದಿನಗಳ ಹಿಂದೆ ಬರಗಾಲದ ಛಾಯೆ ಇತ್ತು. ರಾಜ್ಯದ ಜನರ ಆಶೀರ್ವಾದ ಹಾಗೂ ದೇವರ ಕೃಪೆಯಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಇದರಿಂದಾಗಿ ರೈತರಿಗೂ ಅನುಕೂಲವಾಗಿದೆ. ವಿಶೇಷವಾಗಿ ಲಿಂಗನಮಕ್ಕಿ ಜಲಾಶಯ 1771 ಅಡಿ ತುಂಬಿದ್ದು, ಕಳೆದ ಹತ್ತು ದಿನಗಳಲ್ಲಿ ಶೇ.28ರಷ್ಟು ತುಂಬಿದೆ ಮತ್ತು ಕಳೆದ ವರ್ಷಕ್ಕಿಂತ 10 ಅಡಿ ಜಾಸ್ತಿ ನೀರು ಅಣೆಕಟ್ಟಿನಲ್ಲಿ ತುಂಬಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ರೈತರ ಐ.ಪಿ.ಪಂಪ್‌ಸೆಟ್‌ಗಳಿಗೆ ಒದಗಿಸುತ್ತಿದ್ದ ವಿದ್ಯುತ್ ಮೊದಲಿನಷ್ಟು ಅವಶ್ಯಕತೆ ಇಲ್ಲ. ಹೀಗಾಗಿ ಸಾಕಷ್ಟು ವಿದ್ಯುತ್ ಕೊಡುವಲ್ಲಿ ಯಶಸ್ವಿಯಾಗಿದ್ದೇವೆ. ಹವಾಮಾನ ಇಲಾಖೆ ವರದಿ ಮಾಡಿದಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಚೆನ್ನಾಗಿ ಬಂದರೆ ವಿದ್ಯುತ್ ಸಮಸ್ಯೆ ಇಲ್ಲದಂತಾಗಬಹುದೆಂದು ಅಭಿಪ್ರಾಯಪಟ್ಟರು.

ನಿನ್ನೆ ಉತ್ತರಕನ್ನಡದ ತದಡಿ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆ ವಿಶೇಷ ಸಭೆ ನಡೆಸಲಾಗಿದೆ. ಮಾಧ್ಯಮಗಳಲ್ಲಿ ವರದಿಯದಂತೆ ಸ್ಥಾವರ ಸ್ಥಾಪಿಸಲು ಯಾವುದೇ ವಿರೋಧ ಇಲ್ಲ. ಇದೊಂದು ಸುಳ್ಳು ಸುದ್ದಿ ಎಂದರು. ತದಡಿ ಯೋಜನೆಯಿಂದ 4000 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ಕೇಂದ್ರ ಸರ್ಕಾರ ಯೋಜನೆಗಾಗಿ 20ಸಾವಿರ ಕೋಟಿ ನೀಡುವುದಾಗಿ ಭರವಸೆ ಕೊಟ್ಟಿದೆ. ಹಾಗೆಯೇ ಗುಂಡ್ಯಾ ಪ್ರಾಜೆಕ್ಟ್ ಸ್ಥಾಪನೆಯನ್ನು ಕೇಂದ್ರ ಸರ್ಕಾರದಿಂದ ಅನುಮತಿ ದೊರಕಿದೆ. ಶಿವನಸಮುದ್ರ ವಿದ್ಯುತ್ ಸ್ಥಾವರದ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಉನ್ನತ ಮಟ್ಟದ ಚರ್ಚೆ ನಡೆಯುತ್ತಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ರೈತರಿಗೆ 10 ಎಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ನಿರಂತರ ಜ್ಯೋತಿ ಯೋಜನೆ ಜಾರಿಗೆ ತರಲು ಯೋಚಿಸುತ್ತಿರುವುದಾಗಿ ರಾಜ್ಯಕ್ಕೆ ವಿದ್ಯುತ್ ಒದಗಿಸುತ್ತಿರುವ ಪ್ರಮುಖ ಜಿಲ್ಲೆಗಳಾದ ಉತ್ತರ ಕನ್ನಡ, ರಾಯಚೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಿಗೆ ಆದ್ಯತೆ ಮೇಲೆ 24 ಗಂಟೆ ನಿರಂತರ ವಿದ್ಯುತ್ ಸಂಪರ್ಕ ಒದಗಿಸಲು ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿರುವುದಾಗಿ ಹೇಳಿದರು.

ಮೂರು ತಿಂಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸೋಲಾರ್ ವಿದ್ಯುತ್ ಬಳಸುವಂತೆ ಜಾರಿಗೆ ತರಲಾಗುವುದು. ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸೋಲಾರ್ ವಿದ್ಯುತ್ ಬಳಸುವಂತೆ ಕಾನೂನು ಜಾರಿ ಮಾಡುವುದಾಗಿ ತಿಳಿಸಿದರು.

ಸಂಸದ ಬಿ.ವೈ.ರಾಘವೇಂದ್ರ, ನಗರಸಭಾ ಅಧ್ಯಕ್ಷ ಎನ್.ಜೆ.ರಾಜಶೇಖರ್, ಸೂಡಾ ಅಧ್ಯಕ್ಷ ಜ್ಞಾನೇಶ್ವರ್, ಜಯಲಕ್ಷ್ಮೀಈಶ್ವರಪ್ಪ, ಗಿರೀಶ್ ಪಟೇಲ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಪದ್ಮನಾಭ್ ಭಟ್, ದತ್ತಾತ್ರಿ ಸೇರಿದಂತೆ ಹಲವರು ಬಾಗಿನ ಸಲ್ಲಿಸುವಾಗ ಉಪಸ್ಥಿತರಿದ್ದರು.

 

ಹಾವು ಕಚ್ಚಿ ಬಾಲಕಿ ಸಾವು/School Girl Death-Snake bite

ಕಾಸರಗೋಡು: ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿಗೆ ಹಾವು ಕಡಿದು ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ.
ಇಲ್ಲಿನ ಬೋವಿಕ್ಕಾನ ನಿವಾಸಿ ಮೊಯ್ದೀನ್ ಅವರ ಪುತ್ರಿ ನಫೀಸತ್ ಸಾಬಿರಾ(8) ಸಾವನ್ನಪ್ಪಿದ ಬಾಲಕಿ. ಈಕೆ ಇಲ್ಲಿನ ಪೈಕ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾಥರ್ಿನಿ. ಸಂಜೆ 5 ಗಂಟೆ ವೇಳೆಗೆ ಹಾವು ಕಚ್ಚಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.

ಕಣ್ಣೂರು ವಿಶ್ವವಿದ್ಯಾನಿಲಯ ಬಿ.ಕಾಂ ಮತ್ತು ಬಿ.ಬಿ.ಎ. ಪರೀಕ್ಷಾ ಫಲಿತಾಂಶ/BCom-BBM Result

ಕಾಸರಗೋಡು: ಕಣ್ಣೂರು ವಿಶ್ವವಿದ್ಯಾನಿಲಯದ ಬಿ.ಕಾಂ ಮತ್ತು ಬಿ.ಬಿ.ಎ. ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗಿದೆ.
ರೆಗ್ಯುಲರ್ ವಿಭಾಗದಲ್ಲಿ ಬಿ.ಕಾಂ. ಶೇ.70.05 ಮತ್ತು ಬಿ.ಬಿ.ಎ.ಯಲ್ಲಿ ಶೇ.80ರಷ್ಟು ವಿದ್ಯಾಥರ್ಿಗಳು ತೇರ್ಗಡೆಗೊಂಡಿದ್ದಾರೆ.

ಕೋಟ್ಟಚ್ಚೇರಿ ಗೋಡೆ ಕೆಡವಿದ ಪ್ರಕರಣ/Kottacheri BJP Arrest

ಕಾಸರಗೋಡು: ಕೋಟ್ಟಚ್ಚೇರಿ ನಗರಸಭಾ ಮೀನು ಮಾಕರ್ೆಟ್ ಬಳಿ ಖಾಸಗಿ ವ್ಯಕ್ತಿಯೊಬ್ಬರ ಆವರಣ ಗೋಡೆಯನ್ನು ಕೆಡವಿದ ಹಿನ್ನೆಲೆಯಲ್ಲಿ ಕೋಮು ಭಾವನೆ ಕೆರಳಿಸುವ ಘೋಷಣೆಗಳನ್ನು ಕೂಗಿದ ಆರೋಪದಲ್ಲಿ ಯುವಮೋಛರ್ಾ ಜಿಲ್ಲಾ ಉಪಾಧ್ಯಕ್ಷ ಎ.ಕೆ.ಸುರೇಶ್, ಕಾಞಂಗಾಡು ನಗರಸಭಾ ಕೌನ್ಸಿಲರ್ ಅಜಯ್ಕುಮಾರ್ ನೆಲ್ಲಿಕ್ಕಾಡ್, ಬಿ.ಜೆ.ಪಿ. ಕಾರ್ಯಕರ್ತ ಉಣ್ಣಿ ವಟ್ಟಕಂಡ್, ಕೃಷ್ಣ ಪ್ರಸಾದ್, ಭರತನ್ ಸಹಿತ 25 ಮಂದಿಯನ್ನು ಹೊಸದುರ್ಗ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಜಾಮೀನು ರಹಿತ ಬಂಧನವನ್ನು ಖಂಡಿಸಿ ಬಿ.ಜೆ.ಪಿ. ನೇತೃತ್ವದಲ್ಲಿ ಇದೇ 15ರಂದು ಹೊಸದುರ್ಗ ಸಿ.ಐ. ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಬಿ.ಜೆ.ಪಿ. ತಿಳಿಸಿದೆ.
2009 ಜೂ.7ರಂದು ಮೇಲ್ಪರಂಬಿನ ಕಲ್ಲಡ ಅಬ್ದುಲ್ ಖಾದರ್ ಅವರ ಪುತ್ರ ಕೆ.ಮಾಹಿನ್ ಎಂಬವರ ಮಾಲಕತ್ವದಲ್ಲಿರುವ ಮೀನು ಮಾರುಕಟ್ಟೆಯ ಸ್ಥಳದಲ್ಲಿ ಮಾರಕಾಯುಧಗಳೊಂದಿಗೆ ಬಂದ ಬಿ.ಜೆ.ಪಿ. ಕಾರ್ಯಕರ್ತರು 15,000 ರೂ.ಗಳ ನಾಶನಷ್ಟ ಉಂಟು ಮಾಡಿದ್ದರು ಎಂದು ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಮೀನು ಮಾರುಕಟ್ಟೆ ಸ್ಥಳವನ್ನು ಅತಿಕ್ರಮಿಸಿ ಆವರಣ ಗೋಡೆ ಕಟ್ಟಲಾಗಿದೆ ಎಂದು ವಿರೋಧಿಸಿ ಬಿ.ಜೆ.ಪಿ. ಕಾರ್ಯಕರ್ತರು ಗೋಡೆಯನ್ನು ಕೆಡವಿದ್ದರು. ಆದರೆ ತಮ್ಮ ಸ್ಥಳವನ್ನು ನಗರಸಭೆ ಅತಿಕ್ರಮಿಸಿದೆ ಎಂದು ಕೆ.ಮಾಹಿನ್ ಅವರು ಇತ್ತೀಚೆಗೆ ಕಾಞಂಗಾಡಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದರು.


ರಿಯಾನ ನಾಪತ್ತೆ ಪ್ರಕರಣ : ಚೆನ್ನೈಗೆ ತಲುಪಿದ ಪೊಲೀಸರು

ಕಾಸರಗೋಡು: ರಿಯಾನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಲಭ್ಯ ಸುಳಿವು ಆಧರಿಸಿ ಇಲ್ಲಿನ ಪೊಲೀಸರು ಶನಿವಾರ ಬೆಳಗ್ಗೆ ಚೆನ್ನೈಗೆ ತಲುಪಿದ್ದಾರೆ.
ಇತ್ತೀಚೆಗೆ ಶೋನರ್ೂರಿನಲ್ಲಿ ರಿಯಾನಳ ರೂಪ ಸಾದೃಶ್ಯವಿರುವ ಬಾಲಕಿಯೊಬ್ಬಳನ್ನು ಚೆನ್ನೈಯಲ್ಲಿ ಕುಟುಂಬವೊಂದರ ಆಸರೆಯಲ್ಲಿ ಕಂಡಿರುವುದಾಗಿ ಪೊಲೀಸರಿಗೆ ಲಭಿಸಿದ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ತನಿಖೆಗೆ ಚುರುಕು ಮುಟ್ಟಿದೆ. ಆದರೆ ರಿಯಾನಳನ್ನು  ಕಲ್ಲ್ಲಿಕೋಟೆಯತ್ತ ಒಯ್ಯಲಾಗಿದೆ ಎಂಬ ಮಾಹಿತಿಯೂ ಇದ್ದು, ಕಲ್ಲಿಕೋಟೆಗೂ ಪೊಲೀಸರ ತಂಡವನ್ನು ಕಳುಹಿಸಲಾಗಿದೆ.
 

ಪಾಣತ್ತೂರು ಕ್ಷೇತ್ರ ಕಳವು: ಆರೋಪಿಗಳು ಪೊಲೀಸ್ ಬಲೆಗೆ

ಕಾಸರಗೋಡು: ಇಲ್ಲಿನ ಪಾಣತ್ತೂರು ಕಾಞಿರತಿಂಗಾಲ್ ಅಯ್ಯಪ್ಪ ಕ್ಷೇತ್ರದಲ್ಲಿ ಮಂಗಳವಾರ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಎನರ್ಾಕುಳಂನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳಿಂದ ದೇವರ ಬಿಂಬ, ಬೆಳ್ಳಿಯ ಕಿರೀಟ ಮತ್ತು ಆಭರಣಗಳನ್ನು ವಶಪಡಿಸಲಾಗಿದೆ.
ಎರಡು ದಿನದೊಳಗೆ ಆರೋಪಿಗಳ ಬಂಧನವನ್ನು ದೃಢೀಕರಿಸಲಾಗುವುದು ಎಂದು ತನಿಖೆ ನಡೆಸುವ ಪೊಲೀಸರು ತಿಳಿಸಿದ್ದಾರೆ.


ಆ.19ರಂದು ಖಾಸಗಿ ಬಸ್ಸು ಮುಷ್ಕರ

ಕಾಸರಗೋಡು: ಖಾಸಗಿ ಬಸ್ಸುಗಳ ದರ ಏರಿಕೆ ಮಾಡಬೇಕು ಎಂದು ಆಗ್ರಹಿಸಿ ಆ.19ರಂದು ರಾಜ್ಯ ವ್ಯಾಪಕವಾಗಿ ಖಾಸಗಿ ಬಸ್ಸುಗಳು ಮುಷ್ಕರಕ್ಕೆ ಇಳಿಯಲಿದೆ ಎಂದು ಕೇರಳ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಪ್ರಕಟಿಸಿದೆ.
ಮುಷ್ಕರಕ್ಕೆ ಮುನ್ನುಡಿಯಾಗಿ ಆ.4ರಂದು ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು 11ರಂದು ವಿಧಾನಸಭೆಯ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಸಂಘಟನೆ ತಿಳಿಸಿದೆ.

ದಸರಾ ಉತ್ಸವಕ್ಕೆ ಶಾಲೆಗಳಿಗೆ ರಜೆ ಘೋಷಣೆ?/Dasara Festival-School Holiday ?

ಬೆಂಗಳೂರು: ಮೈಸೂರಿನಲ್ಲಿ ಸೆಪ್ಟೆಂಬರ್ 19ರಿಂದ 10 ದಿನಗಳ ಕಾಲ ನಡೆಯುವ ದಸರ ಉತ್ಸವಕ್ಕಾಗಿ 6 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯಸರ್ಕಾರ ನಿರ್ಧರಿಸಿದೆ. ದಸರಾ ಉತ್ಸವದ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಯಡಿಯ‌ೂರಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಬಾರಿಯ ದಸರ ಸಮಾರಂಭಗಳಿಗೆ ಸಿದ್ಧತೆಯನ್ನು ಎರಡು ತಿಂಗಳು ಪೂರ್ವಭಾವಿಯಾಗಿ ಕೈಗೊಳ್ಳಲಾಗಿದೆ.
ಸೆ.19ರಂದು ಆರಂಭವಾಗುವ ಉತ್ಸವ ಅದ್ಧೂರಿಯ ಜಂಬೂ ಸವಾರಿ ಮೆರವಣಿಗೆಯೊಂದಿಗೆ ಸೆ.28ರಂದು ಅಂತ್ಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.ದಸರ ಉತ್ಸವದಲ್ಲಿ ಶಾಲೆಗಳಿಗೆ ರಜೆ ಘೋಷಿಸುವ ಮ‌ೂಲಕ ವಿದ್ಯಾರ್ಥಿಗಳು ಮತ್ತು ಕುಟುಂಬಗಳಿಗೆ ದಸರ ಉತ್ಸವ ವೀಕ್ಷಿಸಲು ಅವಕಾಶ ಕಲ್ಪಿಸುವುದಕ್ಕಾಗಿ ಸಭೆಯಲ್ಲಿ ಪ್ರಸ್ತಾಪಿಸಲಾಯಿತೆಂದು ಅವರು ಹೇಳಿದರು.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಜತೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದರು.ದಸರ ಉತ್ಸವದಲ್ಲಿ ಪ್ರವಾಸಿಗಳು ಎದುರಿಸುವ ಸಂಕಷ್ಟಗಳ ಬಗ್ಗೆ ಉಲ್ಲೇಖಿಸಿ, ಸಂಚಾರ ಮತ್ತು ವಾಹನ ಪಾರ್ಕಿಂಗ್ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

ವೈದ್ಯಕೀಯ ತಪಾಸಣೆ ತರಬೇತಿ ಶಿಬಿರ/Medical Camp in Bela

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ : ಕನಿಷ್ಠ ಕೂಲಿ 160 ರೂ.
ಕಾಸರಗೋಡು: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕನಿಷ್ಠ ಕೂಲಿಯನ್ನು 160ರೂ.ಗೆ ಏರಿಸಲಾಗಿದೆ ಎಂದು ಕಾಮರ್ಿಕ ಸಚಿವ ಪಿ.ಕೆ.ಗುರುದಾಸನ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಉಮ್ಮನ್ಚಾಂಡಿ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದರು.
ಕೇಂದ್ರ ಸಕರ್ಾರ 100 ರೂ. ನಿಗದಿಗೊಳಿಸಿತ್ತು. ಪ್ರಸಕ್ತ ಮುಂಗಡಪತ್ರದಲ್ಲಿ 39,100 ಕೋಟಿ ರೂ. ಉದ್ಯೋಗ ಖಾತರಿ ಯೋಜನೆಗೆ ಮೀಸಲಿಡಲಾಗಿದೆ.


ವೈದ್ಯಕೀಯ ತಪಾಸಣೆ ತರಬೇತಿ ಶಿಬಿರ
ಬೇಳ(ಕಾಸರಗೋಡು): ಮಂಗಳೂರಿನ ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಹಾಗೂ ಸಿ.ಒ.ಡಿ.ಪಿ. ಪ್ರವತರ್ಿತ  ಸ್ವಸಹಾಯ ಸಂಘಗಳ ಸದಸ್ಯರಿಗೆ ಮಹಿಳಾ ಆರೋಗ್ಯ ಮಾಹಿತಿ, ವೈದ್ಯಕೀಯ ತಪಾಸಣೆ ಕುರಿತು ತರಬೇತಿ ಶಿಬಿರ ಇತ್ತೀಚೆಗೆ ಇಲ್ಲಿನ ಶೋಕ ಮಾತಾ ದೇವಾಲಯದ ಸಭಾಂಗಣದಲ್ಲಿ ಜರುಗಿತು.
ಶೋಕ ಮಾತಾ ದೇವಾಲಯದ ಸಹಾಯಕ ಧರ್ಮಗುರು ಮೈಕೆಲ್ ಮಸ್ಕರೇನಸ್ ಉದ್ಘಾಟಿಸಿದರು. ಸಿ.ಒ.ಡಿ.ಪಿ. ಸಂಯೋಜಕ ರಾಯನ್ ಮಿರಾಂದ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ದೇರಳಕಟ್ಟೆಯ ಫಾ.ಮುಲ್ಲರ್ಸ್  ಹೋಮಿಯೋಪತಿಕ್ ಆಸ್ಪತ್ರೆಯ ಡಾ.ಲಿಡಿಯಾ ಲೋಬೋ ಹಾಜರಿದ್ದರು.
ಲೀನಾ ಕ್ರಾಸ್ತಾ ಸ್ವಾಗತಿಸಿ, ಫಿಯಾದ್ ಕ್ರಾಸ್ತಾ ವಂದಿಸಿದರು. ಐರಿಸ್ ಡಿ'ಸೋಜಾ ಕಾರ್ಯಕ್ರಮ ನಿರೂಪಿಸಿದರು. 
ಬಳಿಕ ವೈದ್ಯಕೀಯ ತಪಾಸಣೆ ನಡೆಯಿತು.


'ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರಿ'
ಮಂಜೇಶ್ವರ: ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯ್ತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ಖಾದರ್ ಹೇಳಿದರು.
ಬಂದ್ಯೋಡು ಸಮೀಪದ ಇಚ್ಲಂಗೋಡು ಪಚ್ಚಂಬಳದಲ್ಲಿ ಇತ್ತೀಚೆಗೆ ಹಾಲುತ್ಪಾದಕ ಸಹಕಾರಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಲ್ಪಾಡಿ ಪಂಚಾಯ್ತಿ ಅಧ್ಯಕ್ಷ ಎಂ.ಆನಂದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸುಧೀಶ್ಚಂದ್ರ ಶೆಟ್ಟಿ, ಐತ್ತ ಹೇರೂರು, ಹರಿನಾಥ ಭಂಡಾರಿ, ಮಾಜಿ ಸದಸ್ಯೆ ಜಯಲಕ್ಷ್ಮೀ ಮಯ್ಯ, ಮಿಲ್ಮಾ ಅಧಿಕಾರಿ ಕಾತ್ಯರ್ಾಯಿನಿ, ಮಂಗಲ್ಪಾಡಿ ಪಶು ವೈದ್ಯಾಧಿಕಾರಿ ಡಾ.ವಿಜಯ ಕುಮಾರ್ ಸನಗಲ್, ಸಂಘದ ಅಧ್ಯಕ್ಷ ಎ.ಆರ್. ರಾಜೇಶ್ ಶೆಟ್ಟಿ ಹಾಜರಿದ್ದರು.
ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಿ.ಟಿ.ಕೃಷ್ಣ ಹೆಬ್ಬಾರ್ ಸ್ವಾಗತಿಸಿ, ಎಂ.ಆರ್.ಕೊರಗಪ್ಪ ಶೆಟ್ಟಿ ವಂದಿಸಿದರು. ರಾಧಾಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅಡಿಕೆ ಕೃಷಿಕರ ಸಮಸ್ಯೆ ಮನವಿ/Farmers Memo


ಕಾಸರಗೋಡು ಜಿಲ್ಲೆಯ ಅಡಿಕೆ ಕೃಷಿಕರ ಸಮಸ್ಯೆ ಮತ್ತು ಮರಾಟಿ ಸಮುದಾಯದ ಮೀಸಲಾತಿ ಸೌಲಭ್ಯವನ್ನು ಮರಳಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆ್ಯಂಟನಿಗೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಕಾರ್ಯದಶರ್ಿ ಶಾಹಿದಾ ಕಮಾಲ್ ನೇತೃತ್ವದ ನಿಯೋಗ ಶುಕ್ರವಾರ ನವದೆಹಲಿಯಲ್ಲಿ ಮನವಿ ಸಲ್ಲಿಸಿತು.




ಕಸಬ್‌ಗೆ ಪಾಕಿಸ್ತಾನ ನೌಕಾದಳದ ಮೆರೈನ್ ತರಬೇತಿ/Kasab Marine Training

ಮುಂಬೈದಾಳಿ ನಡೆಸಿರುವ ಪಾತಕಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ಪಾಕಿಸ್ತಾನ ನೌಕಾದಳದ ಪ್ರಮುಖ ಘಟಕವಾದ ಪಾಕಿಸ್ತಾನ ಮೆರೈನ್ ತರಬೇತಿ ನೀಡಿತ್ತು ಎಂಬುದಾಗಿ ವರದಿಯೊಂದು ತಿಳಿಸಿದೆ.
ಕಸಬ್ ಮತ್ತು ಆತನೊಂದಿಗೆ ದಾಳಿನಡೆಸಲು ಆಗಮಿಸಿದ್ದ ಇತರ ಒಂಬತ್ತು ಮಂದಿಗೆ ಯುದ್ಧತಂತ್ರಗಳನ್ನು ಪಾಕಿಸ್ತಾನ್ ಮೆರೈನ್ ಹೇಳಿಕೊಟ್ಟಿತ್ತು ಎಂಬುದಾಗಿ ದಿ ವೀಕ್ ಪತ್ರಿಕೆಯ ಇತ್ತೀಚಿನ ಆವೃತ್ತಿಯು ತನಿಖಾ ಸಂಸ್ಥೆಯು ಹೇಳಿರುವುದಾಗಿ ವರದಿ ಮಾಡಿದೆ. ಉಗ್ರಗಾಮಿ ಸಂಘಟನೆ ಲಷ್ಕರೆ-ಇ-ತೋಯ್ಬಾ ತನ್ನ ವಿವಿಧ ಶಿಬಿರಗಳಲ್ಲಿ ತರಬೇತಿ ನೀಡಿದ ಬಳಿಕ ಪಾಕಿಸ್ತಾನದ ನೌಕಾದಳ ತರಬೇತಿ ನೀಡಿತ್ತು.
ವಿಚಕ್ಷಣೆ, ಭೌಗೋಳಿಕ ನಕ್ಷೆಗಳ ಅಧ್ಯಯನ, ನುಸುಳಿಕೊಳ್ಳುವುದು, ನಗರಗಳಲ್ಲಿ ಯುದ್ಧ ಹಾಗೂ ಅಪಹರಣದ ಕುರಿತು ಉಗ್ರರಿಗೆ ತರಬೇತು ನೀಡಲಾಗಿತ್ತು ಎಂದು ಅದು ತಿಳಿಸಿದೆ.
ದಾಳಿಗೆ ಮುಂಚಿತವಾಗಿಯೇ ಉಗ್ರರು ತಮ್ಮ ಗುರಿಗಳ ಸಮಗ್ರ ಪರಿಚಯ ಮಾಡಿಕೊಂಡಿದ್ದರು ಎಂಬುದಾಗಿ ತನಿಖಾಗಾರರು ಯೋಚಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ. ಉಗ್ರರ ತಂಡದ ನಾಯಕನಾಗಿದ್ದ ಇಸ್ಮಾಯಿಲ್ ಸ್ಥಳೀಯ ಶಕ್ತಿಗಳೊಂದಿಗೆ ಸೇರಿ ತನ್ನ ಗುರಿಯ ಪರಿವೀಕ್ಷಣೆ ಮಾಡಿರಬಹುದು ಎಂಬುದಾಗಿ ರೀಸರ್ಚ್ ಮತ್ತು ಅನಾಲಿಸಿಸ್‌ ದಳದ ಹಿರಿಯ ಅಧಿಕಾರಿಯೊಬ್ಬರು ಊಹಿಸಿರಬಹುದಾಗಿ ಹೇಳಲಾಗಿದೆ.
ತರಬೇತಿಗೆ ಮುಂಚಿತವಾಗಿ ಕ್ಷಿಪ್ರವಾಗಿ ಸಮುದ್ರದಲ್ಲಿ ಸುತ್ತಾಡಿಸಲಾಗಿತ್ತು ಎಂದು ಕಸಬ್ ತನಿಖಾದಾರರಿಗೆ ತಿಳಿಸಿದ್ದಾನೆ.

ಎಚ್‌ಐವಿ ಬಾಧಿತ ಮಕ್ಕಳು ಶಾಲೆ ತೊರೆದರು/HIV-Students no place in school

ತಮ್ಮದಲ್ಲದ ತಪ್ಪಿಗೆ ಲಾಥೂರಿನ ಈ ಮಕ್ಕಳು ಭಾರೀ ಬೆಲೆ ತೆರಬೇಕಾಗಿದೆ. ಇವರು ಎಚ್ಐವಿ ಪೀಡಿತರು. ಎಚ್‌ಐವಿ ಬಾಧಿತ ಮಕ್ಕಳು ಇರುವ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ ಎಂಬುದಾಗಿ ಇತರೇ ವಿದ್ಯಾರ್ಥಿಗಳ ಹೆತ್ತವರು ಪಟ್ಟು ಹಿಡಿದ ಕಾರಣ ಈ ಮಕ್ಕಳನ್ನು ಶಾಲೆ ತೊರೆಯುವಂತೆ ಮಾಡಲಾಗಿರುವ ಆಘಾತಕಾರಿ ವಿಚಾರ ವರದಿಯಾಗಿದೆ.
ಲಾಥೂರಿನ ಹೊಸೆಗಾಂವ್‌ನ ಜಿಲ್ಲಾ ಪರಿಷತ್ ಶಾಲೆಯಲ್ಲಿ ದಾಖಲಾಗಿರುವ ಎಚ್ಐವಿ ಪೀಡಿತ ಮಕ್ಕಳು ತಾವಾಗಿಯೇ ಶಾಲೆ ತೊರೆಯುವಂತೆ ಹೇಳಲಾಗಿದೆ ಎನ್ನಲಾಗಿದೆ.
ಸುಮಾರು 320 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ 150ಕ್ಕೂಅಧಿಕ ಮಕ್ಕಳು ಕಳೆದ ಕೆಲವು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸುತ್ತಾ, ಈ ಮಕ್ಕಳು ಶಾಲೆತೊರೆಯುವಂತೆ ಹೇಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಅವರ ಹೆತ್ತವರ ಬೆಂಬಲವಿದೆ. ಇದಲ್ಲದೆ ಕೆಲವು ಹೆತ್ತವರು ತಮ್ಮ ಮಕ್ಕಳ ವರ್ಗಾವಣೆ ಪತ್ರಕ್ಕೂ ಅರ್ಜಿಸಲ್ಲಿಸಿದ್ದಾರೆ.
ಎಚ್ಐವಿ ಪೀಡತ ಮಕ್ಕಳ ಸನಿಹದಲ್ಲಿ ಕುಳಿತರು ಇದು ತಮಗೂ ಅಂಟಬಹುದು ಎಂಬ ಮೌಢ್ಯವೇ ವಿದ್ಯಾರ್ಥಿಗಳ ಈ ವರ್ತನೆಗೆ ಕಾರಣ ಎಂದು ಶಾಲಾ ಮುಖ್ಯೋಪಾಧ್ಯಾಯರು ಹೇಳುತ್ತಾರೆ. ಕಳೆದ ಮೂರು ದಿನಗಳಿಂದ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಗೈರುಹಾಜರಾಗಿದ್ದಾರೆ.
ತಮ್ಮಮಕ್ಕಳು ಸೋಂಕು ಪೀಡಿತ ಮಕ್ಕಳೊಂದಿಗೆ ಜಗಳವೇನಾದರೂ ಆಡುತ್ತಾ ಅವರು ಕಚ್ಚಿಬಿಟ್ಟಲ್ಲಿ ಸೋಂಕು ತಗಲುವ ಸಂಭವ ಇರುವುದು ಹೆತ್ತವರ ಕಳವಳಕ್ಕೆ ಕಾರಣ ಎಂದು ಲಾಥುರ್ ಶೈಕ್ಷಣಿಕ ಅಧಿಕಾರಿ ವಿಲಾಸ್ ಜೋಷಿ ಹೇಳಿದ್ದಾರೆ.
ಅದಾಗ್ಯೂ, ಶಾಲಾಡಳಿತದ ಈ ನಿರ್ದಯದ ಕ್ರಮವನ್ನು ಎನ್‌ಜಿಓಗಳು ತೀವ್ರವಾಗಿ ಖಂಡಿಸಿವೆ. ಎಚ್ಐವಿ ಸೋಂಕು ಪೀಡಿತರೆಂಬ ಕಾರಣಕ್ಕೆ ಅವರನ್ನು ಶಾಲೆತೊರೆಯುವಂತೆ ಹೇಳುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂಬುದಾಗಿ ಸಹ್ಯೋಗ್ ಟ್ರಸ್ಟಿನ ಕಾರ್ಯದರ್ಶಿ ಹೇಳುತ್ತಾರೆ. ಅಲ್ಲದೆ ಈ ಕುರಿತು ಮಕ್ಕಳು ಮತ್ತು ಹೆತ್ತವರಲ್ಲಿ ಅರಿವು ಮೂಡಿಸುವಲ್ಲಿ ಶಾಲಾಡಳಿತ ವಿಫಲವಾಗಿದೆ ಎಂದು ಅವರು ದೂರಿದ್ದಾರೆ

ಮ್ಯಾನ್ಮಾರ್‌ನಲ್ಲಿ ಸೂಕಿ ವಿಚಾರಣೆ ಆರಂಭ/ Suuki Vicharana

ಯಾಂಗಾನ್: ಮ್ಯಾನ್ಮಾರ್ ಪ್ರತಿಪಕ್ಷದ ನಾಯಕಿ ಆಂಗ್ ಸಾನ್ ಸೂಕಿಯ ವಿಚಾರಣೆ ಬಿಗಿ ಬಂದೋಬಸ್ತ್‌ನಲ್ಲಿ ಶುಕ್ರವಾರ ಆರಂಭವಾಗಿದ್ದು, ಪ್ರತಿವಾದಿ ಪರ ಸಾಕ್ಷಿಯೊಬ್ಬರು ಸಾಕ್ಷ್ಯ ಹೇಳಲು ನಿಗದಿಯಾಗಿದೆ. ಸೂಕಿಯ ನ್ಯಾಷನಲ್ ಲೀಗ್‌ನ ಸದಸ್ಯರಾದ ವಕೀಲೆ ಖಿನ್ ಮೊಯಿ ಮೊಯಿ ಸೂಕಿ ಪರವಾಗಿ ಸಾಕ್ಷ್ಯ ನುಡಿಯಲು ಇನ್‌ಸೇನ್ ಕೋರ್ಟ್‌ಗೆ ಬೆಳಿಗ್ಗೆ ಪ್ರವೇಶಿಸಿದರು.

ಬಂಧೀಖಾನೆ ಸುತ್ತ ಪೊಲೀಸರ ಭದ್ರತೆ ಬಿಗಿಯಾಗಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸೂಕಿಯ ವಕೀಲರ ತಂಡವು ಸೂಕಿಯನ್ನು ಭೇಟಿ ಮಾಡಿ ವಿಚಾರಣೆಯ ಬಗ್ಗೆ ಅವರಿಗೆ ವಿವರ ನೀಡಿದರು. ವಿಚಾರಣೆಯಲ್ಲಿ ಯಾವುದೇ ಸ್ಥಿತಿ ಎದುರಿಸಲು ಸೂಕಿ ಸಿದ್ಧರಿದ್ದಾರೆಂದು ವಕೀಲರಲ್ಲೊಬ್ಬರಾದ ನ್ಯಾನ್ ವಿನ್ ತಿಳಿಸಿದರು.

ಮ್ಯಾನ್ಮಾರ್ ಮಿಲಿಟರಿ ಜುಂಟಾ ವಿಶ್ವಸಂಸ್ಥೆ ಪ್ರಧಾನಿಕಾರ್ಯದರ್ಶಿ ಬಾನ್ ಕಿ ಮ‌ೂನ್ ಸೂಕಿಯವರನ್ನು ಭೇಟಿ ಮಾಡಲು ನಿರಾಕರಿಸಿತೆಂದು ಎ‌ನ್ಎಲ್‌ಡಿ ಅಧಿಕೃತ ವಕ್ತಾರರಾಗಿರುವ ನ್ಯಾನ್ ವಿನ್ ಮಾಹಿತಿ ನೀಡಿದರು. ಸೂಕಿ ಪ್ರಸಕ್ತ ವಿಚಾರಣೆ ಎದುರಿಸುತ್ತಿರುವುದರಿಂದ ಬಾನ್ ಭೇಟಿಯಿಂದ ನ್ಯಾಯಾಂಗಕ್ಕೆ ಪೂರ್ವಗ್ರಹ ಬಾವನೆ ಉಂಟಾಗಬಹುದು ಎನ್ನುವ ಆಧಾರದ ಮೇಲೆ ಭೇಟಿ ನಿರಾಕರಿಸಲಾಯಿತು.
 
 

ತಾಪಮಾನ ತಗ್ಗಿಸಲು ಜಗತ್ತು ದಾಪುಗಾಲು: ಒಬಾಮಾ/Obama Climate Change

ಲಾ ಅಕ್ವಿಲಾ(ಇಟಲಿ: ಜಾಗತಿಕ ತಾಪಮಾನ ಮಿತಿಯಲ್ಲಿಡುವ ಮ‌ೂಲಕ ಹವಾಮಾನ ಬದಲಾವಣೆ ಸ್ಥಗಿತಗೊಳಿಸುವತ್ತ ಜಗತ್ತು ದಾಪುಗಾಲಿಡುತ್ತಿದೆಯೆಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಗುರುವಾರ ತಿಳಿಸಿದ್ದಾರೆ. ಆದರೆ ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮ‌ೂನ್ ಈ ದಿಸೆಯಲ್ಲಿ ಪ್ರಯತ್ನ ಸಾಕಷ್ಟು ಮಾಡಿಲ್ಲವೆಂದು ಹೇಳಿದ್ದಾರೆ. ಇದು ರಾಜಕೀಯವಾಗಿ ಮತ್ತು ನೈತಿಕವಾಗಿ ಕಡ್ಡಾಯವಾಗಿದ್ದು, ಮಾನವಪೀಳಿಗೆಯ ಮತ್ತು ಭೂಲೋಕದ ಭವಿಷ್ಯಕ್ಕಾಗಿ ಐತಿಹಾಸಿಕ ಜವಾಬ್ದಾರಿ ಎಂದು ಬಾನ್ ಹೇಳಿದ್ದಾರೆ.

ಇಟಲಿಯಲ್ಲಿ ಭೇಟಿಯಾಗಿರುವ ಪ್ರಮುಖ ಆರ್ಥಿಕ ಶಕ್ತಿಗಳು ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು ಒಪ್ಪಿಕೊಂಡಿದ್ದು, ಒಬಾಮಾ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಮುಂಚೆ 12 ತಿಂಗಳ ಹಿಂದೆ ಊಹಿಸಲಾಗದ ಬೆಳವಣಿಗೆ ಈಗ ಉಂಟಾಗಿದೆ.

2050ರೊಳಗೆ ಹಸಿರುಮನೆ ಅನಿಲವನ್ನು ಶೇ.50ರಷ್ಟು ತಗ್ಗಿಸುವ ಯೋಜನೆಯಲ್ಲಿ ಚೀನಾ ಮತ್ತು ಭಾರತ ಸೇರುವಂತೆ ಮನವೊಲಿಸುವಲ್ಲಿ ಜಿ-8 ರಾಷ್ಟ್ರಗಳು ವಿಫಲವಾಗಿದೆ. ಇದರಿಂದಾಗಿ ಈ ವರ್ಷಾಂತ್ಯದಲ್ಲಿ ಹೊಸ ವಿಶ್ವಸಂಸ್ಥೆ ಒಪ್ಪಂದದ ಪ್ರಯತ್ನಗಳಿಗೆ ಪೆಟ್ಟು ಬಿದ್ದಿದೆ. 2050ರೊಳಗೆ ಹಸಿರುಮನೆ ಅನಿಲ ಹೊಮ್ಮುವಿಕೆಯನ್ನು ಶೇ.80ರಷ್ಟು ಕಡಿತಗೊಳಿಸುವ ಜಿ-8 ರಾಷ್ಟ್ರಗಳ ಗುರಿಗೆ ಅದನ್ನು ಪ್ರಕಟಿಸಿದ ಕೇವಲ ಒಂದು ಗಂಟೆಯಲ್ಲೇ ಕೆನಡಾ ಮತ್ತು ರಷ್ಯಾ ಕೂಡ ಬೆನ್ನುತಿರುಗಿಸಿದಂತೆ ಕಾಣುತ್ತಿದೆ.

ಜಿ-8 ರಾಷ್ಟ್ರಗಳ ನಾಯಕರ ತಮ್ಮ ಪ್ರಥಮ ಸಭೆಯಲ್ಲಿ ರಾಷ್ಟ್ರವು ಹಸಿರುಮನೆ ಅನಿಲ ಹೊರಹೊಮ್ಮುವಿಕೆ ಬಗ್ಗೆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ದಿನಗಳು ಮುಗಿದಿವೆಯೆಂದು ಒಬಾಮಾ ಎಚ್ಚರಿಸಿದ್ದರು. ಹಿಮದ ಪದರಗಳು ಕರಗುತ್ತಿವೆ, ಸಮುದ್ರಮಟ್ಟ ಏರುತ್ತಿದೆ, ಸಾಗರಗಳು ಹೆಚ್ಚು ಆಮ್ಲೀಕರಣವಾಗುತ್ತಿದೆ. ಹವಾಮಾನದಲ್ಲಿ, ಆಹಾರ ಮತ್ತು ನೀರಿನ ಮ‌ೂಲಗಳಲ್ಲಿ ಇದರ ಪರಿಣಾಮಗಳು ಗೋಚರಿಸಿವೆಯೆಂದು ಅವರು ಹೇಳಿದ್ದರು.
 

ರಾಪಾಮೈಸಿನ್‌ನಿಂದ ಮಾನವನ ಆಯಸ್ಸು ವೃದ್ಧಿ?/Rapamycin Medicine

ದಕ್ಷಿಣ ಪೆಸಿಫಿಕ್ ದ್ವೀಪವೊಂದರ ಮಣ್ಣಿನಲ್ಲಿ ಔಷಧವೊಂದನ್ನು ಪತ್ತೆಹಚ್ಚಲಾಗಿದ್ದು, ವಯಸ್ಸಾಗುವ ಪ್ರಕ್ರಿಯೆಯನ್ನು ತಡೆಯಲು ನೆರವು ನೀಡಬಹುದೆಂದು ಸಂಶೋಧನೆ ತಿಳಿಸಿದೆ. ಅಮೆರಿಕದ ವಿಜ್ಞಾನಿಗಳು ರಾಪಾಮೈಸಿನ್ ಎಂಬ ಹೆಸರಿನ ಈ ಔಷಧಿಯನ್ನು ಇಲಿಗಳ ಮೇಲೆ ಮೊಟ್ಟಮೊದಲಿಗೆ ಪ್ರಯೋಗಿಸಿದ್ದಾರೆ. ವಯಸ್ಸಾದ ಇಲಿಗಳಿಗೆ ರಾಪಾಮೈಸಿನ್ ಚಿಕಿತ್ಸೆ ನೀಡಿದಾಗ ಶೇ.38ರಷ್ಟು ಇಲಿಗಳ ಆಯಸ್ಸು ವೃದ್ಧಿಸಿತು.
ಜರ್ನಲ್ ನೇಚರ್ ಪ್ರಕಟಿಸಿದ ಈ ಸಂಶೋಧನೆಯು ಹಿರಿಯ ವ್ಯಕ್ತಿಗಳಲ್ಲಿ ವೃದ್ಧಾಪ್ಯದ ಪ್ರಕ್ರಿಯೆಗಳನ್ನು ನಿಧಾನಗೊಳಿಸುವ ಸಾಧ್ಯತೆ ಬಗ್ಗೆ ಆಶಾಭಾವನೆ ಚಿಮ್ಮಿಸಿದೆ. ಆದರೆ ಜೀವಿತಾವಧಿಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಈ ಔಷಧಿ ಬಳಕೆ ವಿರುದ್ಧ ಬ್ರಿಟನ್ ತಜ್ಞರೊಬ್ಬರು ಎಚ್ಚರಿಸಿದ್ದು, ಇದರಿಂದ ರೋಗನಿರೋಧಕ ಶಕ್ತಿ ಕುಂದಿಸಬಹುದೆಂದು ಹೇಳಿದ್ದಾರೆ.ವಯಸ್ಸಾಗುವ ಪ್ರಕ್ರಿಯೆಯನ್ನು ಕುಂಠಿತಗೊಳಿಸಿ ಜೀವಿತಾವಧಿಯನ್ನು ಔಷಧಿ ಚಿಕಿತ್ಸೆ ಮ‌ೂಲಕ ವಿಸ್ತರಿಬಹುದೆಂಬುದಕ್ಕೆ ಇದು ಪ್ರಥಮ ಮನದಟ್ಟಾದ ಪುರಾವೆಯೆಂದು ನಂಬಲಾಗಿದೆ. ರಾಪಾಮೈಸಿನ್ ಔಷಧಿಯನ್ನು 1970ರಲ್ಲಿ ಈಸ್ಟರ್ ದ್ವೀಪದಲ್ಲಿ ಪತ್ತೆಹಚ್ಚಲಾಯಿತು.
ಅಂಗಾಂಗ ಕಸಿ ರೋಗಿಗಳಿಗೆ ಅಂಗಾಂಗ ನಿರಾಕಕರಣೆ ತಪ್ಪಿಸಲು ಇದನ್ನು ಈಗಾಗಲೇ ಬಳಸಲಾಗಿದೆ. ಕ್ಯಾನ್ಸರ್‌ಗೆ ಸಂಭವನೀಯ ಚಿಕಿತ್ಸೆಯೆಂದು ಕೂಡ ಇದನ್ನು ಪರಿಗಣಿಸಲಾಗಿದೆ. ಟೆಕ್ಸಾಸ್, ಮಿಚಿಗಾನ್ ಮತ್ತು ಮೈನೆಯ ಸಂಶೋಧಕರು ಮಾನವರಿಗೆ 60 ವರ್ಷ ವಯಸ್ಸಿಗೆ ಸಮಾನವಾದ ವಯಸ್ಸಿನ ಇಲಿಗಳಿಗೆ ಔಷಧಿಯನ್ನು ಪ್ರಯೋಗಿಸಿದರು. ರಾಪಾಮೈಸಿನ್ ಪ್ರಾಣಿಗಳ ನಿರೀಕ್ಷಿತ ಜೀವಿತಾವಧಿಯನ್ನು ಶೇ.28ರಿಂದ ಶೇ.38ಕ್ಕೆ ಹೆಚ್ಚಿಸಿತು. ತಾವು ವಯಸ್ಸಾಗುವ ಪ್ರಕ್ರಿಯೆ ಕುರಿತು 35 ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದು, ನನ್ನ ಜೀವಿತಾವಧಿಯಲ್ಲಿ ವಯಸ್ಸಾಗುವ ಪ್ರಕ್ರಿಯೆ ನಿಗ್ರಹ ಮಾತ್ರೆಯನ್ನು ಪತ್ತೆಮಾಡುತ್ತೇವೆಂದು ಕನಸಲ್ಲೂ ಎಣಿಸಿರಲಿಲ್ಲ.
ಆದರೆ ರಾಪಾಮೈಸಿನ್ ಈ ಬಗ್ಗೆ ಸಾಕಷ್ಟು ಭರವಸೆ ಮ‌ೂಡಿಸಿದೆಯೆಂದು ಸಂಶೋಧಕ ಡಾ. ಆರ್ಲಾನ್ ರಿಚರ್ಡ್‌ಸನ್ ಅವರು ಹೇಳಿದ್ದಾರೆ.ಆದರೆ ರಾಪಾಮೈಸಿನ್ ಔಷಧಿಯನ್ನು ಜೀವಿತಾವಧಿ ಹೆಚ್ಚಿಸಲು ಬಳಸುವ ಬಗ್ಗೆ ಟೆಕ್ಸಾಸ್ ಆರೋಗ್ಯ ವಿಜ್ಞಾನ ಕೇಂದ್ರದ ವಿವಿಯ ಪ್ರಾಧ್ಯಾಪಕ ರಾಂಡಿ ಸ್ಟ್ರಾಂಗ್ ಎಚ್ಚರಿಸಿದ್ದು, ರಾಪಾಮೈಸಿನ್ ರೋಗನಿರೋಧಕ ಶಕ್ತಿ ಕುಂದಿಸಬಹುದೆಂದು ಹೇಳಿದ್ದಾರೆ

ಸುನೀಲ್ ಗವಾಸ್ಕರ್ ಗೆ 60 ರ ಸಂಭ್ರಮ/Gavaskar 60

ಮುಂಬೈ, ಜು. 10 : ಕ್ರಿಕೆಟ್ ಆಟಗಾರರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಮೈಲಿಗಲ್ಲು ಸಾಧಕ ಸುನೀಲ್ ಗವಾಸ್ಕರ್ ಅವರು ಇಂದು 60 ನೇ ವಸಂತಕ್ಕೆ ಕಾಲಿಟ್ಟರು. ಆಟಗಾರನಾಗಿ, ನಾಯಕನಾಗಿ, ತಾಂತ್ರಿಕ ಸಮಿತಿ ಮುಖ್ಯಸ್ಥರಾಗಿ ಸದಾ ಕ್ರಿಕೆಟ್ ಜೊತೆಗೆ ನಂಟು ಹೊಂದಿರುವ ಲಿಟಲ್ ಮಾಸ್ಟರ್ ಜೀವನದ ಹಾದಿಯಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಹಾಲಿ, ಮಾಜಿ ಕ್ರಿಕೆಟಿಗರು ಅವರ ಸಾಧನೆಯನ್ನು ಕೊಂಡಾಡಿ ಶುಭಾಶಯ ಕೋರಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಗಳಿಸಿದ ಮೊಟ್ಟ ಮೊದಲ ಬ್ಯಾಟ್ಸ್ ಮನ್ ಎನ್ನುವ ಹೆಗ್ಗಳಿಕೆ ಹೊಂದಿರುವ ಸನ್ನಿ ಆಟದ ಶೈಲಿ ಹಾಗೂ ಸರ್ ಡಾನ್ ಬ್ರಾಡ್ ಮನ್ ಅವರ 29 ಶತಕಗಳ ದಾಖಲೆಗಳನ್ನು ಅಳಿಸಿ ಹಾಕಿದ ಹಿರಿಮೆಯನ್ನು ಅವರು ಸ್ಮರಿಸಿದರು. ಗವಾಸ್ಕರ್ ಕ್ರಿಕೆಟ್ ಗೆ ನೀಡಿದ ಕೊಡುಗೆ ಅಪಾರ. ವಿಶ್ವದ ಪ್ರಭಾವಿ ವೇಗದ ಬೌಲರ್ ಗಳ ಎದುರು ಬಂಡೆಯಂತೆ ನಿಂತ ಛಲವುಳ್ಳ ಬ್ಯಾಟ್ಸ್ ಮನ್ ಎಂದು ಜಿ ಆರ್ ವಿಶ್ವನಾಥ್ ತಿಳಿಸಿದ್ದಾರೆ.

ಗಣಿ ಗಡಿ ಜಂಟಿ ಸಮೀಕ್ಷೆಗೆ ಮಹೂರ್ತ ಫಿಕ್ಸ್/Ballari Reddy

ಬೆಂಗಳೂರು, ಜು. 10 : ಗಣಿಗಾರಿಕೆ ಸಂಬಂಧಿಸಿದಂತೆ ರೆಡ್ಡಿಗಳು ಹಾಗೂ ದಿವಾಕರ್ ಬಾಬು ನಡುವಿನ ತಿಕ್ಕಾಟದ ಬೆನ್ನಲ್ಲೇ ಅಕ್ರಮ ಗಣಿಗಾರಿಕೆಯಿಂದ ವಿವಾದಕ್ಕೆ ಒಳಗಾಗಿರುವ ಬಳ್ಳಾರಿ ಮೀಸಲು ಅರಣ್ಯದ ಕರ್ನಾಟಕ, ಆಂಧ್ರಪ್ರದೇಶ ಅಂತಾರಾಜ್ಯ ಗಡಿಯಲ್ಲಿ ಇದೇ 15 ಮತ್ತು 16 ರಂದು ಜಂಟಿ ಸಮೀಕ್ಷೆ ನಡೆಸುವುದಾಗಿ ರಾಜ್ಯ ಅರಣ್ಯ ಇಲಾಖೆ ತಿಳಿಸಿದೆ.

ಸಚಿವ ಜಿ ಜನಾರ್ದನರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಬಿ ಶ್ರೀರಾಮುಲು ಒಡೆತನದ ಒಬಳಾಪುರಂ ಮೈನಿಂಗ್ ಕಂಪನಿಯು ಆಂಧ್ರಪ್ರದೇಶದಲ್ಲಿ ಗುತ್ತಿಗೆ ಪಡೆದು ರಾಜ್ಯದ ಅಕ್ರಮ ಗಣಿಗಾರಿಕೆ ನಡೆಸಿರುವ ಕುರಿತ ಆರೋಪದ ಸತ್ಯಾಸತ್ಯತೆ ಅರಿಯಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಭಾರತೀಯ ಸರ್ವೇ ಇಲಾಖೆ ಮತ್ತು ಭಾರತೀಯ ಗಣಿ ನಿರ್ದೇಶನಾಯಲಗಳು ಜಂಟಿಯಾಗಿ ಈ ಪ್ರಕ್ರಿಯೆ ನಡೆಸುತ್ತವೆ.

ಬಳ್ಳಾರಿ ಜಿಲ್ಲೆಯ ಸಂಡೂರಿನ ತುಮಟಿ ಗ್ರಾಮದಲ್ಲಿ ಗಣಿ ಗುತ್ತಿಗೆ ಹೊಂದಿರುವ ಟಿ ನಾರಾಯಣರೆಡ್ಡಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಎಂಟು ವಾರಗಳ ಒಳಗಾಗಿ ಅಂತಾರಾಜ್ಯ ಗಡಿಯಲ್ಲಿರುವ ವಿವಾದಿತ ಗಣಿ ಪ್ರದೇಶದ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜೂನ್ 8 ರಂದು ಆದೇಶ ಹೊರಡಿಸಿತ್ತು.

ಮೈಸೂರು ಗಲಭೆ : ಪಿಎಫ್ ಡಿ ಸಂಘಟನೆ ನಿಷೇಧ/Mysore-PFD Ban

ಮೈಸೂರು, ಜು. 10 : ಕೋಮುಸೌಹಾರ್ದ ಹಾಳು ಮಾಡುತ್ತಿರುವ ಕೆಎಫ್ ಡಿ ಹಾಗೂ ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೊತೆಗೆ ಚರ್ಚಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ತಿಳಿಸಿದ್ದಾರೆ.

ಕಿಡಿಗೇಡಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಯುವಮೂರ್ಚಾ ಅಧ್ಯಕ್ಷ ವಿ ಗಿರಿಧರ್ ಅವರ ಆರೋಗ್ಯ ವಿಚಾರಿಸಿದ ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಈ ಸಂಘಟನೆಗಳು ನಿಷೇಧಿಸುವ ಸಂಬಂಧ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಆಚಾರ್ಯ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿ ಒಂದು ವರ್ಷವಾಗಿದೆ. ಹಲವು ಸಚಿವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರ ಸಾಧನೆ ತೃಪ್ತಿಕರವಾಗಿಲ್ಲ. ಅಗಸ್ಟ್ 1 ಮತ್ತು 2 ರಂದು ನಡೆಯುವ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ಅಂಥ ಸಚಿವರಿಗೆ ಸೂಚನೆ ನೀಡಲಾಗುತ್ತದೆ. ನಿಗಮ ಮಂಡಳಿ ಕುರಿತೂ ನಿರ್ಧರಿಸಲಾಗುತ್ತದೆ ಎಂದು ಸದಾನಂದಗೌಡ ಹೇಳಿದರು. ಇತ್ತೀಚೆಗೆ ನಡೆದ ಮೈಸೂರು ಗಲಭೆಯಲ್ಲಿ ಬಿಜೆಪಿ ಕಾರ್ಯಕರ್ತ ಗಿರಿಧರ್ ಗಾಯಗೊಂಡಿದ್ದರು.

ಅಧಿವೇಶನ : ಹಾಲು ಒಕ್ಕೂಟ ಸೂಪರ್ ಸೀಡ್ ಏಕೆ?/Yedyurappa session

ಬೆಂಗಳೂರು, ಜು. 10 : ಮೈಸೂರಿನ ಕೋಮುಗಲಭೆ ಮೇಲ್ಮನೆಯಲ್ಲಿ ಇಂದು ಮತ್ತೆ ಪ್ರತಿಧ್ವನಿಸಿ ಕೋಲಾಹಲ ವಾತಾವರಣ ಸೃಷ್ಟಿಸಿ ಪ್ರತಿಪಕ್ಷದ ಸದಸ್ಯರು ನಿಲುವಳಿ ಸೂಚನೆಗೆ ಪಟ್ಟುಹಿಡಿದ ಪ್ರಸಂಗ ಜರುಗಿತು. ಸದನದ ಕಲಾಪ ಆರಂಭದಲ್ಲಿ ಪ್ರತಿಪಕ್ಷದ ನಾಯಕ ವಿ ಎಸ್ ಉಗ್ರಪ್ಪ ನಿಲುವಳಿ ಸೂಚನೆ ಮಂಡಿಸಿ ಸಮಸ್ಯೆ ಗಂಭೀರ ಸ್ವರೂಪವಾಗಿರುವುದರಿಂದ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟುಹಿಡಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಎ ಎಂ ಹಿಂಡಸಗೇರಿ ನಾಲ್ಕು ತಿಂಗಳಿಂದ ಮೈಸೂರಿನಲ್ಲಿ ಗಲಭೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. 5 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರು ತಲ್ಲಣಗೊಂಡಿದೆ. ಅಲ್ಲಿ ಶಾಂತಿ ನೆಲಸಬೇಕು. ಜಾತಿಗಳ ಸಂಘರ್ಷ ತಪ್ಪಿಸಬೇಕು. ಆರೋಪ ಪ್ರತ್ಯಾರೋಪ ನಿಲ್ಲಿಸಿ ಪಕ್ಷಾತೀತವಾಗಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಜೆಡಿಎಸ್ ಮುಖಂಡ ಎಂ ಸಿ ನಾಣಯ್ಯ ಹೇಳಿದರು.

ಪ್ರತಿಪಕ್ಷಗಳು ಹಿಡಿದ ಬಿಗಿಪಟ್ಟಿಗೆ ಕೋಪಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯೆ ಪ್ರವೇಶಿಸಿ, ಮೈಸೂರು ಗಲಭೆ ವ್ಯವಸ್ಥಿತ ಸಂಚು. ಬೇರೆ ಬೇರೆ ರಾಜ್ಯಗಳಿಂದ ಮೈಸೂರಿಗೆ ಬಂದು ಗಲಭೆ ಸೃಷ್ಟಿಸುತ್ತಿರುವ ಬಗ್ಗೆ ಸರಕಾರಕ್ಕೆ ಮಾಹಿತಿ ಲಭ್ಯವಾಗಿದೆ. ಅಲ್ಲಿನ ಹಿರಿಯ ಅಧಿಕಾರಿಗಳ ಗಾಯಗೊಂಡಿದ್ದಾರೆ ಎಂದರು. ಶಾಂತಿ ನೆಲೆಸುವ ಸಲುವಾಗಿ ಸರಕಾರ ಎಲ್ಲ ಪ್ರಯತ್ನ ನಡೆಸುತ್ತಿದೆ. ಅದಕ್ಕೆ ಪ್ರತಿಪಕ್ಷಗಳ ಸಹಕಾರವೂ ಬೇಕು ಎಂದು ಮನವಿ ಮಾಡಿಕೊಂಡರು.

ಜೆಡಿಎಸ್ ಸಭಾತ್ಯಾಗ

ಗುಲ್ಬರ್ಗಾ ಹಾಲು ಒಕ್ಕೂಟದ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿರುವುದನ್ನು ಖಂಡಿಸಿ ಜೆಡಿಎಸ್ ವಿಧಾನಸಭೆಯಲ್ಲಿಂದು ಸಭಾತ್ಯಾಗ ಮಾಡಿತು. ರಾಜಕೀಯ ದುರುದ್ದೇಶದಿಂದ ಹೊರಡಿಸಿರುವ ಗುಲ್ಬರ್ಗಾ ಹಾಲು ಒಕ್ಕೂಟದ 9 ಮಂದಿ ಆಡಳಿತ ಸದಸ್ಯರನ್ನು ಅನರ್ಹಗೊಳಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಸಭಾಧ್ಯಕ್ಷರ ಮುಂದಿನ ಬಾವಿಗೆ ತೆರಳಿ ಜೆಡಿಎಸ್ ಸದಸ್ಯರು ಕೆಲ ಕಾಲ ಧರಣಿ ನಡೆಸಿದರು. ಸರಕಾರ ಮತ್ತು ಜೆಡಿಎಸ್ ನಡುವೆ ವಾದ ವಿವಾದ ನಡೆದಾಗ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮೂರು ಬಾರಿ ಮಧ್ಯೆ ಪ್ರವೇಶಿಸಿ ಸಲಹೆ ನೀಡಿದರೂ ಪ್ರಯೋಜನವಾಗಲಿಲ್ಲ.

ನಿಗದಿತ ಸಮಯಕ್ಕೆ ಬನ್ನಿ

ನಿಗದಿತ ಸಮಯಕ್ಕೆ ಸದನಕ್ಕೆ ಹಾಜರಾಗುವಂತೆ ಸದಸ್ಯರಿಗೆ ವಿಧಾನಸಭೆ ಸ್ಪೀಕರ್ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿಂದು ಸೂಚನೆ ನೀಡಿದರು. ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಬಹುತೇಕ ಸದಸ್ಯರ ಹಾಜರಾತಿ ಕೊರತೆ ಗಮನಿಸಿ ಈ ಸೂಚನೆ ನೀಡಿದರು. ಬೆಳಗ್ಗೆ 10.30ಕ್ಕೆ ಸದನ ಸಮಾವೇಶಗೊಳ್ಳಬೇಕಿತ್ತಾದರೂ ಸದಸ್ಯರು ತಡವಾಗಿ ಆಗಮಿಸಿದ್ದರಿಂದ ಸದನವನ್ನು ವಿಳಂಬವಾಗಿ ಆರಂಭಿಸಬೇಕಿದೆ ಎಂದು ಶೆಟ್ಟರ್ ವಿವರಿಸಿದರು.

ನೇಮಕಾತಿ ನಿಯಮಾವಳಿಗೆ ತಿದ್ದುಪಡಿ : ಕಾಗೇರಿ

ನೇಮಕಾತಿ ನಿಯಮಾವಳಿಗೆ ಸರಕಾರ ಶೀಘ್ರದಲ್ಲೇ ಎಲ್ಲ ಶಿಕ್ಷಕರ ಅನ್ವಯವಾಗುವಂತೆ ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ ವಿಧಾನ ಪರಿಷತ್ ನಲ್ಲಿಂದು ತಿಳಿಸಿದರು. ಈಗಾಗಲೇ ನೇಮಕಾತಿ ನಿಯಮಾವಳಿಗೆ ಸಂಬಂಧಿಸಿದಂತೆ ಪರಿಶೀಲನಾ ಸಮಿತಿಯು ಪರಿಶೀಲನೆ ಆರಂಭಿಸಿದ್ದು, ಕಾನೂನು ಇಲಾಖೆ, ಆಡಳಿತ ಹಾಗೂ ಸಿಬ್ಬಂದಿ ಸುಧಾರಣೆ ಇಲಾಖೆಯ ಅಭಿಪ್ರಾಯವನ್ನು ಪಡೆಯಲಾಗಿದೆ. ಇದರ ಪ್ರಸ್ತಾವನೆಯನ್ನು ಮುಖ್ಯಕಾರ್ಯದರ್ಶಿಗಳ, ಅಪರ ಕಾರ್ಯದರ್ಶಿಯವರ ಪರಿಶೀಲನೆಗೆ ಮಂಡಿಸಿದ್ದು, ಒಪ್ಪಿಗೆ ಪಡೆದ ನಂತರ ಸರಕಾರ ತಕ್ಷಣವೇ ತಿದ್ದುಪಡಿ ಮಾಡಲು ಸಿದ್ಧವಿದೆ ಎಂದು ತಿಳಿಸಿದರು.

ಚೀನದಲ್ಲಿ ಭೂಕಂಪಕ್ಕೆ ಒಬ್ಬ ಬಲಿ, 324 ಜನರಿಗೆ ಗಾಯ/China-Earthquake

ಬೀಜಿಂಗ್: ವಾಯವ್ಯ ಚೀನಾವನ್ನು ಸಾಧಾರಣ ತೀವ್ರತೆಯ ಭೂಕಂಪ ಗುರುವಾರ ಅಪ್ಪಳಿಸಿದ್ದು, ಒಬ್ಬ ವ್ಯಕ್ತಿ ಸತ್ತಿದ್ದು ಕನಿಷ್ಠ 324 ಜನರು ಗಾಯಗೊಂಡಿದ್ದಾರೆ ಮತ್ತು 18,000 ಮನೆಗಳು ಕುಸಿದುಹೋಗಿವೆ ಎಂದು ರಾಜ್ಯ ಮಾಧ್ಯಮ ತಿಳಿಸಿದೆ. ಯುನಾನ್ ಪ್ರಾಂತ್ಯದ ಯಾವನ್ ಕೌಂಟಿಯಲ್ಲಿ ಕೇಂದ್ರೀಕೃತವಾಗಿದ್ದ 6.0 ತೀವ್ರತೆಯ ಭೂಕಂಪದಿಂದ 40,000 ಮನೆಗಳಿಗೆ ಹಾನಿಯಾಗಿದೆಯೆಂದು ಕ್ಸಿನುವಾ ಸುದ್ದಿಸಂಸ್ಥೆ ತಿಳಿಸಿದೆ. ಭೂಕಂಪದ ಬೆನ್ನಹಿಂದೆ ಎಂಟು ಲಘು ಕಂಪನಗಳು ಉಂಟಾಗಿದ್ದು ಪ್ರಾಂತೀಯ ನಾಗರಿಕ ವ್ಯವಹಾರ ಇಲಾಖೆ 4500 ಟೆಂಟ್‌ಗಳು ಮತ್ತಿತರ ಪರಿಹಾರ ಸಾಮಗ್ರಿಗಳನ್ನು ಯಾನ್‌ಗೆ ಕಳಿಸಿದೆಯೆಂದು ಕ್ಸಿನುವಾ ತಿಳಿಸಿದೆ.ಯುನಾನ್ ಭೂಕಂಪಪೀಡಿತ ಪ್ರದೇಶವಾಗಿದ್ದು, ಥೈಲೆಂಡ್ ಮತ್ತು ಮ್ಯಾನ್ಮಾರ್ ಗಡಿಯಲ್ಲಿ ಚೀನಾದ ದಕ್ಷಿಣಕ್ಕಿದೆ.ಕಳೆದ ವರ್ಷ 90,000 ಜನರನ್ನು ಬಲಿತೆಗೆದುಕೊಂಡ ಸಿಚುವಾನ್ ಪ್ರಾಂತ್ಯದ ಗಡಿಯಲ್ಲಿ ಕೂಡ ಯುನಾನ್ ಪ್ರಾಂತ್ಯವಿದೆ. 1988ರಲ್ಲಿ ಯುನಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಲ್ಲಿ 903 ಜನರು ಬಲಿಯಾಗಿದ್ದರು. 1970ರಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪಕ್ಕೆ 15,000 ಜನರು ಬಲಿಯಾಗಿದ್ದರು.

Friday, July 10, 2009

ಚಾತುರ್ಮಾಸ್ಯ ದೀಕ್ಷಾ ಸಮಾರಂಭ/Edaneer Chathurmasya

ಕಾಸರಗೋಡು: ಇಲ್ಲಿಗೆ ಸಮೀಪದ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ 49ನೇ ಚಾತುರ್ಮಾಸ್ಯ ದೀಕ್ಷಾ ಸಮಾರಂಭ ಮಂಗಳವಾರ ಎಡನೀರು ಮಠದಲ್ಲಿ ಜರುಗಿತು.
ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಸಮಾರಂಭವನ್ನು ಉದ್ಘಾಟಿಸಿದರು. ಮಂಗಳೂರು ನಗರಪಾಲಿಕೆಯ ಮೇಯರ್ ಅಧ್ಯಕ್ಷತೆ ವಹಿಸಿದ್ದರು.
ಮಠದ ಬಗ್ಗೆ ನಿರ್ಮಿಸುವ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕೆ ಮಂಗಳೂರಿನ ಕೆ.ಎಸ್.ಹೆಗ್ಡೆ ವಿದ್ಯಾಸಂಸ್ಥೆಯ ಅಧ್ಯಕ್ಷ ವಿನಯ ಹೆಗ್ಡೆ ಚಾಲನೆ ನೀಡಿದರು.
ಸಚಿವ ಬಿ.ರಮಾನಾಥ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಯ್ಯೂರು ನಾರಾಯಣ ಭಟ್ ಸ್ವಾಗತಿಸಿ, ಕೆ.ರಾಮಕೃಷ್ಣ ರಾವ್ ವಂದಿಸಿದರು. ಡಾ.ರಮಾನಂದ ಬನಾರಿ ಕಾರ್ಯಕ್ರಮ ನಿರೂಪಿಸಿದರು.

ಪನ್ನಿಪ್ಪಾರೆ ಲೈಂಗಿಕ ಜಾಲ ಪ್ರಕರಣ: ಪ್ರಧಾನ ಆರೋಪಿ ಇಲ್ಯಾಸ್ ಸೆರೆ/Pannipara Sex Racket

ಕಾಸರಗೋಡು : ಇಲ್ಲಿಗೆ ಸಮೀಪದ ಪನ್ನಿಪ್ಪಾರೆ ಲೈಂಗಿಕ ಜಾಲ ಪ್ರಕರಣದ ಪ್ರಧಾನ ಆರೋಪಿ ನಾಯಮ್ಮಾರ್ಮೂಲೆ ಪಾಣಲ ನಿವಾಸಿ ಕೆ.ಎ.ಇಲ್ಯಾಸ್(26) ಎಂಬಾತನನ್ನು ಶುಕ್ರವಾರ ಮಧ್ಯಾಹ್ನ ನಗರ ಪೊಲೀಸರು ಬಂಧಿಸಿದ್ದಾರೆ.
ಪನ್ನಿಪ್ಪಾರೆಯ ನಿವಾಸಿ ಪ್ಲಸ್ ವನ್ ವಿದ್ಯಾರ್ಥಿನಿಗೆ ನೀಡಿದ ಬಳಿಕ ಈಕೆಯನ್ನು ಲೈಂಗಿಕ ದಂಧೆಗೆ ಬಳಸಿಕೊಂಡಿದ್ದಾನೆ ಎಂದು ಆರೋಪಿಯನ್ನು ಬಂಧಿಸಿದ ಸಿ.ಐ.ಟಿ.ಪಿ.ಪ್ರೇಮಚಂದ್ರನ್ ತಿಳಿಸಿದ್ದಾರೆ.
ಮಂಗಳೂರು, ಕಣ್ಣೂರು, ಕಲ್ಲಿಕೋಟೆ, ಎರ್ನಾಕುಲಂ ಎಂಬಲ್ಲಿರುವ ವಸತಿ ಗೃಹಗಳಿಗೆ ಹಲವಾರು ಬಾರಿ ಕೊಂಡೊಯ್ದು ಈತ ಕಿರುಕುಳ ನೀಡಿದ್ದ. ಬಳಿಕ ಮದ್ಯವರ್ತಿಗಳ ಮುಖಾಂತರ ಬಾಲಕಿಯನ್ನು ಹಲವು ಗಣ್ಯರಿಗೆ ಒಪ್ಪಿಸಿದ್ದಾನೆ.
ಆರೋಪಿ ಇಲ್ಯಾಸ್ ಬಾಲಕಿಗೆ ಪ್ರೇಮ ನಟಿಸಿ ತನ್ನ ದಂಧೆಗೆ ಬಳಸಿಕೊಂಡಿದ್ದು, ಮಧ್ಯವತರ್ಿಗಳಾದ ಮಹಿಳೆಯರ ಮೂಲಕ ರಾಜ್ಯ ಮತ್ತು ರಾಜ್ಯದ ಹೊರಗೆ ತನ್ನ ಜಾಲವನ್ನು ವಿಸ್ತರಿಸಿದ್ದಾನೆ. 4 ತಿಂಗಳ ಮೊದಲು ಪನ್ನಿಪ್ಪಾರೆಯ ಬಾಲಕಿಯೊಂದಿಗೆ ಕಾಸರಗೋಡು ರೈಲ್ವೇ ಸ್ಟೇಷನ್ನಲ್ಲಿ ಪೊಲೀಸರ ಬಲೆಗೆ ಬಿದ್ದರೂ ಓರ್ವ ರಾಜಕೀಯ ಪುಢಾರಿಯ ಪ್ರಭಾವದಿಂದ ಪಾರಾಗಿದ್ದ. ನಾಯಮ್ಮಾರ್ಮೂಲೆಯ ಮರಳು ಮಾಫಿಯಾ ತಂಡದಲ್ಲಿ ಸಕ್ರಿಯನಾಗಿದ್ದ.
ಆರೋಪಿಯನ್ನು 2 ವಾರಗಳ ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈತನ ಬಂಧನದಿಂದ ಈ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು ಪೊಲೀಸರು ಬಂಧಿಸಿದಂದಾಗಿದೆ.


ರಿಯಾನ ಚೆನ್ನೈಯಲ್ಲಿ ಪತ್ತೆ: ಸುಳಿವು ಲಭ್ಯ
ಕಾಸರಗೋಡು: ಕಾಸರಗೋಡಿನಿಂದ ಇತ್ತೀಚೆಗೆ ನಾಪತ್ತೆಯಾದ 9ನೇ ತರಗತಿ ವಿದ್ಯಾಥರ್ಿನಿ ರಿಯಾನ ಕುಟುಂಬವೊಂದರ ಜತೆಯಲ್ಲಿ ಚೆನ್ನೈಯಲ್ಲಿ ಪತ್ತೆಯಾದ ಸುಳಿವು ಲಭಿಸಿದೆ.
ಶೋನರ್ೂರು ರೈಲ್ವೇ ಸ್ಟೇಷನ್ನಲ್ಲಿ ಗುರುವಾರ ರಿಯಾನಳನ್ನು ಕಂಡಿರುವುದಾಗಿ ಪೊಲೀಸರಿಗೆ ನಂಬಲರ್ಹ ವ್ಯಕ್ತಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಶುಕ್ರವಾರ ಕುಟುಂಬದ ಸದಸ್ಯರನ್ನು ವಿಚಾರಿಸಿದಾಗ ಆಕೆಯನ್ನು ಕಲ್ಲ್ಲಿಕೋಟೆಯಿಂದ ಬಂದ ಸಂಬಂಧಿಕರು ಕೊಂಡೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆಗೆ ಕಲ್ಲಿಕೋಟೆ ಮತ್ತು ಚೆನ್ನೈಗೆ ಪೊಲೀಸ್ ತಂಡ ತೆರಳಿದೆ ಎಂದು ಡಿವೈಎಸ್ಪಿ ಕೆ.ಅಬ್ದುಲ್ ಗಫೂರ್ ತಿಳಿಸಿದ್ದಾರೆ.


ಸಾರಾಯಿ ವಶ
ಕಾಸರಗೋಡು: ದಾರಿಯಲ್ಲಿ ನಡೆಯುತ್ತಾ ಸಾರಾಯಿ ಮಾರಾಟ ಮಾಡುತ್ತಿದ್ದ ಯುವಕನನ್ನು ಗುರುವಾರ ಸಂಜೆ ನಗರ ಪೊಲೀಸರು ಇಲ್ಲಿನ ಅಶ್ವಿನಿನಗರದಲ್ಲಿ ಬಂಧಿಸಿದ್ದಾರೆ.
ಆರೋಪಿ ಶಿವಶಕ್ತಿ ನಗರದ ನಿವಾಸಿ ಕೆ.ಸುನಿಲ್ ಕುಮಾರ್ನಿಂದ 3 ಲೀ. ಸಾರಾಯಿಯನ್ನು ವಶಪಡಿಸಲಾಗಿದೆ.


ನಿಧನ


ನೂರುದ್ದೀನ್
ಕಾಸರಗೋಡು: ತಳಂಗೆರೆ ಪಳ್ಳಿಕಲ್ ಇಸ್ಲಾಂ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ, ಚೆಮ್ನಾಡು ನಿವಾಸಿ ನೂರುದ್ದಿನ್(49) ಶುಕ್ರವಾರ ನಿಧನರಾದರು.
ಪತ್ನಿ ಸಫಿಯಾ ಮತ್ತು ಇಬ್ಬರು ಮಕ್ಕಳಿದ್ದಾರೆ.


ಪಿ.ಮುಹಮ್ಮದ್ ಕುಞ್ಞಿ
ಕಾಸರಗೋಡು: ಪೆರಿಯದಲ್ಲಿ ವ್ಯಾಪಾರಿಯಾಗಿದ್ದ ಪಿ.ಮುಹಮ್ಮದ್ ಕುಞ್ಞಿ(73) ಇಂದು ನಿಧನರಾದರು.
ಪೆರಿಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಪೆರಿಯ ಪ್ರೌಢಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪತ್ನಿ ಬೀಫಾತಿಮಾ ಮತ್ತು ನಾಲ್ವರು ಮಕ್ಕಳಿದ್ದಾರೆ.

ಮೊಯ್ದೀನ್
ಕಾಸರಗೋಡು: ಇಲ್ಲಿನ ಪೊವ್ವಲ್ ನೆಲ್ಲಿಕಟ್ಟೆಯ ಕಾನಕ್ಕೋಡು ನಿವಾಸಿ ಮೊಯ್ದೀನ್(73) ನಿಧನರಾದರು. ಪತ್ನಿ ಬೀಫಾತಿಮಾ ಮತ್ತು 8 ಮಕ್ಕಳಿದ್ದಾರೆ.

ಭಾರತೀಯ ದಲಿತ್ ಕಾಂಗ್ರೆಸ್ಸಿನ ಪ್ರತಿಭಟನೆ/Dalith Congress Protest

ಕಾಸರಗೋಡು: ಪರಿಶಿಷ್ಟ ಜಾತಿ-ವರ್ಗದ ವಿರುದ್ಧ ಕೇರಳ ಸರ್ಕಾರದ ಅವಗಣನೆಯನ್ನು ಖಂಡಿಸಿ ಭಾರತೀಯ ದಲಿತ್ ಕಾಂಗ್ರೆಸ್ಸಿನ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಇದೇ 13ರಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಮ್ಮ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು, ಇತರ ಸಮುದಾಯದ ದೈವ ಪಾತ್ರಿಗಳಿಗೆ ನೀಡುವ ಪಿಂಚಣಿಯನ್ನು ತಮ್ಮ ಸಮುದಾಯಕ್ಕೂ ಒದಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯನ್ನು ಭಾರತೀಯ ದಲಿತ್ ಕಾಂಗ್ರೆಸ್ಸಿನ ರಾಜ್ಯ ಅಧ್ಯಕ್ಷ ಕೆ.ವಿದ್ಯಾಧರನ್ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಪಿ.ರಾಮಚಂದ್ರನ್ ಅಧ್ಯಕ್ಷತೆ ವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪಿ.ರಾಮಚಂದ್ರನ್, ರಾಜ್ಯ ಕಾರ್ಯದಶರ್ಿ ಟಿ.ಪದ್ಮನಾಭನ್ ಮಾಸ್ಟರ್, ಉಪಾಧ್ಯಕ್ಷ ಇ.ಕುಞ್ಞಿಕೃಷ್ಣನ್, ಐತ್ತಪ್ಪ ಅಮ್ಮಂಗೋಡು, ಪಿ.ಅಶೋಕನ್, ಕುಸುಮ ಚೇನೆಕ್ಕೋಡು, ಕೆ.ಶಂಕರನ್ ಹಾಜರಿದ್ದರು.

ದಲಿತ ಫೆಡರೇಶನ್ ಜಿಲ್ಲಾ ಸಮ್ಮೇಳನ
ಕಾಸರಗೋಡು: ಪರಿಶಿಷ್ಟ ಜಾತಿ-ವರ್ಗ ಅಭಿವೃದ್ಧಿ ಖಾತೆಯ ಹೊಣೆಯನ್ನು ಸಚಿವ ಎ.ಕೆ.ಬಾಲನ್ ಅವರಿಂದ ಮುಖ್ಯಮಂತ್ರಿ ವಾಪಾಸ್ ಪಡೆಯಬೇಕು ಎಂದು ಕೇರಳ ದಲಿತ ಫೆಡರೇಶನ್(ಕೆ.ಡಿ.ಎಫ್) ರಾಜ್ಯಾಧ್ಯಕ್ಷ ಪಿ. ರಾಮಚಂದ್ರನ್ ಆಗ್ರಹಿಸಿದ್ದಾರೆ.
ಇಲ್ಲಿಗೆ ಸಮೀಪದ ವಿದ್ಯಾನಗರದಲ್ಲಿ ಕೇರಳ ದಲಿತ ಫೆಡರೇಶನ್ನ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷ ಇ.ಕುಞ್ಞಂಬು ಅಧ್ಯಕ್ಷತೆ ವಹಿಸಿದ್ದರು.
ಆನಂದ ಮವ್ವಾರ್, ಪಿ.ಕೆ.ರಾಧಾ, ಎಸ್.ಪಿ.ಮಂಜು, ಪಿ.ರಾಘವನ್, ಕೆ.ಕುಞ್ಞಿಕೃಷ್ಣನ್, ಎಸ್.ಅನಿತಾ, ಪ್ರದೀಪನ್, ದಾಮೋದರ್, ಕೆ.ಚಂದ್ರನ್ ಹಾಜರಿದ್ದರು.


ನಾಳೆ ಪಿಂಚಣಿದಾರರ ಸಮಾವೇಶ
ಕಾಸರಗೋಡು: ಕೇರಳ ರಾಜ್ಯ ಪಿಂಚಣಿದಾರರ ಸಂಘಟನೆಯ ಮಧೂರು ಪಂಚಾಯ್ತಿ ಘಟಕದ ವಿಶೇಷ ಸಮಾವೇಶ ಇದೇ 12ರಂದು ಬೆಳಗ್ಗೆ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಜರುಗಲಿದೆ.


ಮುಜುಂಗಾವು ಕ್ಷೇತ್ರದಲ್ಲಿ 16ರಂದು ವೈದಿಕ ಕಾರ್ಯಕ್ರಮಗಳು
ಕಾಸರಗೋಡು: ಕುಂಬಳೆ ಸಮೀಪದ ಮುಜುಂಗಾವು ಪಾರ್ಥಸಾರಥಿ ಶ್ರೀಕೃಷ್ಣ ದೇವಾಲಯದಲ್ಲಿ ಸಂಕ್ರಮಣದ ಪ್ರಯುಕ್ತ ಇದೇ 16ರಂದು ವೈದಿಕ ಕಾರ್ಯಕ್ರಮಗಳು ಜರುಗಲಿದೆ.
ಅಂದು ಬೆಳಗ್ಗೆ 7ಕ್ಕೆ ಗಣಪತಿ ಹೋಮ, 7.30ಕ್ಕೆ ಉಷಾಪೂಜೆ, 8.30ಕ್ಕೆ ವಿವಿಧ ಅಭಿಷೇಕ, 10.30ಕ್ಕೆ ಸೇವಾ ಸಮಿತಿಯ ಸಭೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಅನ್ನದಾನ, ಸಂಜೆ 6.30ಕ್ಕೆ ದೀಪಾರಾಧನೆ, 7ಕ್ಕೆ ಮಹಾಪೂಜೆ, 7.15ಕ್ಕೆ ತಾಳಮದ್ದಳೆ ನಡೆಯಲಿದೆ.

ಮಣ್ಣಾಗಿ ಹೋದ ಬ್ರಿಟಿಷರ ಭೂಗತ ಸಂಕ/Mogral Bridge


ಕಾಸರಗೋಡು: ಇಲ್ಲಿಗೆ ಸಮೀಪದ ಮೊಗ್ರಾಲ್ ಬಳಿ ಬ್ರಿಟಿಷರ ಕಾಲದ ಭೂಗತ ರೈಲ್ವೇ ಸಂಕವನ್ನು ಕೆಡವಿ ನವೀಕರಿಸುವ ಕಾರ್ಯಕ್ಕೆ ಶುಕ್ರವಾರ ಚಾಲನೆ ಲಭಿಸಿದೆ.
ಗುರುವಾರ ಸಂಜೆ ಸ್ಥಳಕ್ಕೆ ತಲುಪಿದ ಕ್ರೇನ್, ಜೆಸಿಬಿ ಯಂತ್ರಗಳು ಸಂಕವನ್ನು ಅಗೆದು ಹಾಕಿದೆ. ಮಂಗಳೂರಿನಿಂದ ತಲುಪಿದ ಸಿದ್ಧ ಕಾಂಕ್ರೀಟ್ ಚೌಕಟ್ಟುಗಳನ್ನು ಇಂದು ಬೆಳಗ್ಗೆ ಕ್ರೇನ್ ಮೂಲಕ ಇಳಿಸಲಾಯಿತು. ವಾರಗಟ್ಟಲೆ ಅಗತ್ಯವಿರುವ ಸಂಕ ನಿಮರ್ಾಣವನ್ನು ಆಧುನಿಕ ಯುಗದಲ್ಲಿ ಕ್ಷಿಪ್ರಗತಿಯಲ್ಲಿ ಪೂರೈಸುವ ಬಗೆಯನ್ನು ನೋಡಲು ನೂರಾರು ನಾಗರಿಕರು ಸ್ಥಳದಲ್ಲಿ ಜಮಾಯಿಸಿದ್ದರು.
ಐತಿಹಾಸಿಕ ಮಹತ್ವವಿರುವ ಬ್ರಿಟಿಷರ ಸಂಕಗಳ ಗುಣಮಟ್ಟದ ಬಗ್ಗೆ ಜನರಿಗೆ ಇಂದಿಗೂ ವಿಶ್ವಾಸ ಕುಂದಿಲ್ಲ. ಇದನ್ನು ಕೆಡವಿದ ಬಗ್ಗೆ ಕೆಲವರಿಗೆ ಅಸಮಾಧಾನವೂ ಇತ್ತು.
ರೈಲ್ವೇ ಹಳಿ ದಾಟಿ ಹೋಗುವ ಬದಲಾಗಿ ಅನೇಕ ಮಂದಿ ಈ ಸಂಕದೊಳಗೆ ಹಾದು ಹೋಗುತ್ತಿದ್ದರು. ಕಾರು ಮತ್ತು ಆಟೋರಿಕ್ಷಾಗಳು ಮಾತ್ರ ಸಂಚರಿಸಲು ಸಾಧ್ಯವಿತ್ತು. ಉಳಿದ ವಾಹನಗಳಿಗೂ ಸಂಚರಿಸಲು ಯೋಗ್ಯವಾಗುವಂತೆ ಸಂಕವನ್ನು ವಿಸ್ತರಿಸುವಂತೆ ಜನರಿಂದ ಬೇಡಿಕೆ ಕೇಳಿಬಂದಿತ್ತು.
2 ಮೀ. ಅಗಲದ ಈ ಸಂಕವನ್ನು ಕಗ್ಗಲ್ಲಿನಿಂದ ನಿಮರ್ಿಸಲಾಗಿತ್ತು. ಹೊಸ ಕಾಂಕ್ರೀಟ್ ಸಂಕ ಸಾಕ್ಷಾತ್ಕಾರಗೊಳ್ಳುವ ಮೂಲಕ ಕೇವಲ ಕಗ್ಗಲ್ಲಿನಿಂದ ನಿಮರ್ಿಸಿದ ಐತಿಹಾಸಿಕ ಸಾಕ್ಷಿಯೊಂದು ಮರೆಯಾದಂತಾಗಿದೆ.

ಕಾಸರಗೋಡು ರೈಲ್ವೇ ನಿಲ್ದಾಣ 'ಮಾದರಿ'/Model Railway Station

ಕಾಸರಗೋಡು : ವಿಶಾಲ ಕನರ್ಾಟಕವನ್ನು ಕಡೆಗಣಿಸಿರುವ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನಜರ್ಿ ಕೇರಳದ ಪಾಲಿಗೆ ಹಲವಾರು ರೈಲ್ವೇ ಸೌಲಭ್ಯವನ್ನು ಪ್ರಕಟಿಸಿ ತನ್ನ ವಿಶೇಷ ಮಮತೆ ಪ್ರದಶರ್ಿಸಿದ್ದಾರೆ. ಇದರಿಂದ ಕೇರಳೀಯರ ಸಂಭ್ರಮ ಮುಗಿಲು ಮುಟ್ಟಿದೆ.
ರಾಜ್ಯದಲ್ಲಿ ಕಾಸರಗೋಡು ಸಹಿತ ಕಣ್ಣೂರು, ಮಲಪ್ಪುರಂ ಜಿಲ್ಲೆಯ ತಿರೂರು, ಪಟ್ಟಿಕ್ಕಾಡ್ ಸ್ಟೇಷನ್ಗಳನ್ನು ಮಾದರಿ ರೈಲ್ವೇ ಸ್ಟೇಷನ್ಗಳನ್ನಾಗಿ ಪರಿವತರ್ಿಸಲು ಸಂಸತ್ತಿನಲ್ಲಿ ಹಸಿರು ನಿಶಾನೆ ತೋರಿದ್ದಾರೆ. ಸಂಸತ್ತಿನ ಹೊರಗೆ ಕೇರಳ ಸಂಸದರು ನಡೆಸಿದ ಚಚರ್ೆಯ ಫಲವಾಗಿ ಕೊಟ್ಟಾಯಂ, ತಿರುವಲ್ಲ, ಚೆಂಗನ್ನೂರು, ವಡಗರ, ತಲಶ್ಶೇರಿ ಸ್ಟೇಷನ್ಗಳೂ 'ಮಾದರಿ'ಯಾಗುವ ಭಾಗ್ಯ ಲಭಿಸಿದೆ.
ತಿರುವನಂತಪುರ ಸೆಂಟ್ರಲ್, ಎನರ್ಾಕುಳಂ ಜಂಕ್ಷನ್ ಮತ್ತು ಕಲ್ಲಿಕೋಟೆ ರೈಲ್ವೇ ನಿಲ್ದಾಣಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಗುವುದು. ಎನರ್ಾಕುಳಂ ನಾತರ್್, ಪಾಲಕ್ಕಾಡು ಮತ್ತು ಆಲಪ್ಪುರ ಸ್ಟೇಷನ್ಗಳಲ್ಲಿ ವಾಣಿಜ್ಯ ಸಮುಚ್ಛಯ ನಿಮರ್ಿಸಲಾಗುವುದು. ಕೊಚ್ಚಿ-ಜೈಪುರ ರೈಲನ್ನು ಅಜ್ಮೀರ್ ವರೆಗೆ ವಿಸ್ತರಿಸಲಾಗುವುದು. 
ಇದಲ್ಲದೆ 8 ಹೊಸ ರೈಲುಗಳು ರಾಜ್ಯಕ್ಕೆ ಲಭಿಸಿದೆ. ಕೊಚ್ಚಿ-ಮಥುರಾ, ಎರುಮೇಲಿ-ಪುನಲೂರು-ತಿರುವನಂತಪುರ ಹಳಿ, ತಿರುವನಂತಪುರದಲ್ಲಿ ವೈದ್ಯಕೀಯ ಕಾಲೇಜು ನಿಮರ್ಾಣ ಪ್ರಸಕ್ತ ಬಜೆಟ್ನಲ್ಲಿ ಕೇರಳಕ್ಕೆ ಲಭಿಸಿದ ಇತರ ಮಹತ್ವದ ಕಾಣಿಕೆಗಳು.
ಕಾಸರಗೋಡಿನಲ್ಲಿ ರಾಜಧಾನಿ ಎಕ್ಸ್ಪ್ರೆಸ್ಗೆ ನಿಲುಗಡೆ, ಬೇಕಲದಲ್ಲಿ ರೈಲ್ವೇ ಕೈಗಾರಿಕಾ ಘಟಕ, ತಿರುವನಂತಪುರ-ಕಣ್ಣೂರು ರೈಲನ್ನು ಮಂಗಳೂರು ವರೆಗೆ ವಿಸ್ತರಣೆ ಕಾಸರಗೋಡಿನ ಸಂಸದ ಪಿ.ಕರುಣಾಕರನ್ ಸಂಸತ್ತಿನಲ್ಲಿ ಎತ್ತಿದ ಧ್ವನಿಗೆ ರೈಲ್ವೇ ಸಚಿವೆ ಕಾಸರಗೋಡನ್ನು ಮಾದರಿ ನಿಲ್ದಾಣವನ್ನಾಗಿ ಮೇಲ್ದಜರ್ೆಗೇರಿಸಲಾಗುವುದು ಎಂಬ ಭರವಸೆ ಲಭಿಸಿದೆ. ಮಂಗಳೂರು-ಬೆಂಗಳೂರು ರೈಲು ಕಣ್ಣೂರು ವರೆಗೆ ವಿಸ್ತರಣೆಗೊಳಿಸಿದ ಭರವಸೆ ರಾಜ್ಯಕ್ಕೆ ಮುಂಗಡ ಲಭಿಸಿದ ಕೊಡುಗೆಯಾಗಿದೆ. ಈ ಎಲ್ಲಾ ಕೊಡುಗೆಗಳ ಹಿಂದೆ ರಾಜ್ಯದ ಸಂಸದರ ವಿಶೇಷ ಶ್ರಮವಿದೆ.
ಕಾಸರಗೋಡು ಮಾದರಿ:
ಮಾದರಿ ರೈಲ್ವೇ ಸ್ಟೇಷನ್ ಪರಿಣಾಮ ನಿಲ್ದಾಣದ ಪ್ಲಾಟ್ಫಾರಂ ಅಭಿವೃದ್ಧಿ, ಟಿಕೆಟ್ ಕೌಂಟರ್ಗಳ ಹೆಚ್ಚಳ, ವಾಹನ ಪಾಕಿಂಗ್ ಸೌಲಭ್ಯ, ಪ್ರಥಮ ದಜರ್ೆ ಪ್ರಯಾಣಿಕರ ಕೊಠಡಿ ಸೌಲಭ್ಯ ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ಲಭಿಸಲಿದೆ.
ಬಜೆಟ್ ಮಂಡನೆಗೆ ಮೂರು ದಿನಗಳ ಹಿಂದೆಯೇ ಕಾಞಂಗಾಡು-ಪಾಣತ್ತೂರು ರೈಲ್ವೇ ಹಳಿ ಸಮೀಕ್ಷೆಯ ವರದಿಯನ್ನು ಸಂಸದರು ರೈಲ್ವೇ ಸಚಿವೆಗೆ ಸಲ್ಲಿಸಿದ್ದು, ಈ ಯೋಜನೆಯ ಬಗ್ಗೆ ಸಚಿವೆ ಆಸಕ್ತಿ ಪ್ರಕಟಿಸಿದ್ದಾರೆ.


 

ಮೋಹನ್ "ಲಾಲ್ ಸೆಲ್ಯೂಟ್ "/Mohan"Lal Selute"

ಮಂಗಳೂರು ರೈಲು ಕೇರಳಕ್ಕೆ: ಜು.25ರಂದು ರೈಲು ತಡೆ/M'lore Train-Strike On July 25

ಮಂಗಳೂರು: ಈಗಾಗಲೇ ರಾಜ್ಯದ ಪ್ರಯಾಣಿಕರೇ ಸೀಟಿಲ್ಲದೆ ತೊಂದರೆ ಅನುಭವಿಸುತ್ತಿರುವ ಬೆಂಗಳೂರು-ಮಂಗಳೂರು ರೈಲನ್ನು ಕೇರಳದ ಕಣ್ಣೂರುವರೆಗೆ ವಿಸ್ತರಿಸಿ, ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಅವರು ರಾಜ್ಯದ ಪ್ರಯಾಣಿಕರಿಗೆ ಅನ್ಯಾಯ ಮಾಡಿರುವುದನ್ನು ವಿರೋಧಿಸಿ ಜುಲೈ 25ರಂದು 'ರೈಲು ತಡೆ' ಪ್ರತಿಭಟನೆ ನಡೆಸಲು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ (ಕೆಸಿಸಿಐ) ನಿರ್ಧರಿಸಿದೆ.ಬುಧವಾರ ಈ ಕುರಿತು ಕೆಸಿಸಿಐ ಅಧ್ಯಕ್ಷ ಶ್ರೀನಿವಾಸ್ ಕಾಮತ್ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ, ರೈಲ್ವೇ ಸಚಿವೆ ತಕ್ಷಣವೇ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು.ಮಂಗಳೂರು-ಬೆಂಗಳೂರು ರೈಲನ್ನು ಕಣ್ಣೂರಿಗೆ ವಿಸ್ತರಿಸುವ ಪರಿಣಾಮವಾಗಿ ಕರಾವಳಿ ಕನ್ನಡಿಗರ ಸೀಟು ಕಾದಿರಿಸುವ ಕೋಟಾವನ್ನು ಶೇ.20ಕ್ಕಿಂತಲೂ ಕೆಳಗಿಳಿಸಿದಂತಾಗುತ್ತದೆ. ಇದರಿಂದ ಕನ್ನಡಿಗರಿಗೆ, ಕರ್ನಾಟಕಕ್ಕೆ ಅನ್ಯಾಯವಾಗಿದೆ ಮತ್ತು ಮಲಯಾಳಿಗರಿಗೆ ಸಹಾಯವಾಗಿದೆ.ರೈಲ್ವೇ ಯಾತ್ರಿ ಸಂಘ, ಮಂಗಳೂರು ರೈಲು ಸಂರಕ್ಷಣಾ ಸಮಿತಿ ಮತ್ತಿತರ ಹಲವಾರು ಸಂಘ ಸಂಸ್ಥೆಗಳು ಸಭೆಯಲ್ಲಿ ಭಾಗವಹಿಸಿದ್ದವು. ರೈಲು ತಡೆ ಕಾರ್ಯಕ್ರಮಕ್ಕೆ ಮುನ್ನ ಜುಲೈ 18ರಂದು ಮತ್ತೊಮ್ಮೆ ಈ ಕುರಿತು ಸಭೆ ನಡೆಸಲು ಕೂಡ ಸಭೆಯಲ್ಲಿ ತೀರ್ಮಾನಿಸಲಾಯಿತು.

Thursday, July 9, 2009

ಚೋಟಾ ರಾಜನ್ ಸಹಚರ ಸಹಿತ ಕಳವು ತಂಡದ ಸೆರೆ/Kanhangad Theives

ಕಾಸರಗೋಡು: ಮುಂಬೈ ಭೂಗತ ಲೋಕದ ಪಾತಕಿ ಚೋಟಾ ರಾಜನ್ ಸಹಚರರು ಎನ್ನಲಾದ ನಾಲ್ವರನ್ನೊಳಗೊಂಡ ಕಳವು ತಂಡವನ್ನು ಕಾಞಂಗಾಡು ಡಿವೈಎಸ್ಪಿ ಪಿ.ಹಬೀಬ್ ರಹಮಾನ್ ನೇತೃತ್ವದ ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ.
ಕುಂಬಳೆ ಉಳುವಾರು ನಿವಾಸಿ ಎಂ.ಅಬ್ದುಲ್ ಲತೀಫ್ ಯಾನೆ ಲತೀಫ್, ಕುಟ್ಯಾಡಿಯ ಕೆ.ನೌಶಾದ್, ಕೊಟ್ಟಾಯಂ ಕಿಡಂಗೂರಿನ ಸಿರಿಲ್ ಮಾಥ್ಯೂ, ಕಣ್ಣೂರು ಕಟ್ಟೋಳಿ ನಿವಾಸಿ ತಾರಂಬತ್ ರಮೇಶನ್ ಬಂಧಿತರು.
ಆರೋಪಿಗಳಿಂದ ಒಂದು ರಿವಾಲ್ವರ್, ಎರಡು ಚೂರಿ ಮತ್ತು ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಲಾಗಿದೆ.
ಗುರುವಾರ ಬೆಳಗ್ಗೆ ಕಾಞಂಗಾಡು ರೈಲ್ವೇ ಸ್ಟೇಷನ್ ಬಳಿ ಪ್ರಯಾಣಿಕರ ವಸ್ತುಗಳನ್ನು ಕಳವು ಮಾಡಲು ಬಂದಿದ್ದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದರು. ಇವರಲ್ಲಿ ಸಿರಿಲ್ ಮಾಥ್ಯೂ ಚೋಟಾ ರಾಜನ್ನ ಸಹಚರ. ಅಂಧೇರಿ, ರತ್ನಗಿರಿ ಎಂಬಲ್ಲಿ ಕೋಟ್ಯಂತರ ರೂ.ಗಳನ್ನು ಬ್ಯಾಂಕಿನಿಂದ ಕಳವು ಮಾಡಿದ ಪ್ರಕರಣಗಳಲ್ಲಿ ಈತ ಶಾಮೀಲಾಗಿದ್ದಾನೆ. ಉಪ್ಪಳದ ರಫೀಖ್ ಎಂಬಾತ ಪರಾರಿಯಾಗಿದ್ದಾನೆ. ಆರೋಪಿಗಳನ್ನು ಸಂಜೆ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.


ಕಾಸರಗೋಡಿನಲ್ಲಿ ಮಳೆ: 253 ಮನೆಗಳಿಗೆ ಹಾನಿ

ಕಾಸರಗೋಡು: ಜಿಲ್ಲೆಯಲ್ಲಿ ಮೇ 24ರಿಂದ ಇದು ವರೆಗೆ ಸುರಿದ ಮಳೆ ಮತ್ತು ಪ್ರಕೃತಿ ವಿಕೋಪಕ್ಕೆ 323 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
30 ಮನೆಗಳು ಸಂಪೂರ್ಣ ಹಾನಿಗೊಂಡಿದೆ. ಬುಧವಾರ 15 ಮನೆಗಳು ಭಾಗಶಃ ಹಾನಿಗೊಂಡಿದೆ. ಪೂರ್ಣವಾಗಿ ಕುಸಿದ ಮನೆಗಳಿಗೆ 8,88,350 ರೂ. ಮತ್ತು ಭಾಗಶಃ ಹಾನಿಯಾದ ಮನೆಗಳಿಗೆ 19,83,050 ರೂ.ಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ಬುಧವಾರ 61.4 ಮಿ.ಮೀ. ಮಳೆ ಸುರಿದಿದ್ದು, 80.5 ಹೆಕ್ಟೇರ್ ಕೃಷಿ ನಾಶಗೊಂಡಿದೆ. ಇದು ವರೆಗೆ ಮಳೆಯಿಂದ 190 ಹೆಕ್ಟೇರ್ ಪ್ರದೇಶದ ಕೃಷಿ ನಾಶಗೊಂಡಿದೆ. ಇದರಿಂದ 81 ಲಕ್ಷ ರೂ.ಗಳ ನಷ್ಟ ಆಗಿದೆ. ಮೇ 24ರಿಂದ ಇದು ವರೆಗೆ ಜಿಲ್ಲೆಯಲ್ಲಿ 1,013 ಮಿ.ಮೀ. ಮಳೆಯಾಗಿದೆ.
ಆದೂರು, ಕೊಡ್ಲಮೊಗರು, ಪಿಲಿಕ್ಕೋಡು, ಚೆರ್ವತ್ತೂರು, ಚಿತ್ತಾರಿಕಲ್, ಪನೆಯಾಲ್, ಪಡನ್ನ, ಕರಿಂದಳ ಗ್ರಾಮಗಳಲ್ಲಿ ಮಳೆಯಿಂದ ಭಾರೀ ನಷ್ಟ ಸಂಭವಿಸಿದೆ. ಮೊಗ್ರಾಲ್ ಪುತ್ತೂರು ಪಂಚಾಯ್ತಿಯ ನಾಂಗಿ, ಗಾಂಧೀನಗರ, ಕೊಪ್ಪಳ ಎಂಬಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಇಲ್ಲಿ 200 ಮೀಟರ್ ಪ್ರದೇಶದಲ್ಲಿ ಕಡಲ್ಕೊರೆತ ಸಂಭವಿಸಿದೆ.
ಮುನ್ನೆಚ್ಚರಿಕೆ: ಮುಂದಿನ 48 ತಾಸುಗಳೊಳಗೆ ಕರಾವಳಿ ತೀರದಲ್ಲಿ 45ರಿಂದ 55 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಎಚ್ಚರಿಕೆ ವಹಿಸಬೇಕು ಎಂದು ಫಿಶರೀಸ್ ಕಂಟ್ರೋಲ್ ರೂಂ ಅಧಿಕಾರಿ ತಿಳಿಸಿದ್ದಾರೆ.

4ನೇ ತರಗತಿಯ ಬಾಲಕ ಬಾವಿಗೆ ಬಿದ್ದು ಸಾವು

ಕಾಸರಗೋಡು: ಇಲ್ಲಿನ ಪರಪ್ಪೆ ಶಾಲೆಯ 4ನೇ ತರಗತಿಯ ವಿದ್ಯಾಥರ್ಿ ಮನೆ ಸಮೀಪದ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಪರಪ್ಪೆ ಎಂಬಲ್ಲಿ ಗುರುವಾರ ನಡೆದಿದೆ.
ಏರಂಕನ್ನ್ ನಿವಾಸಿ ತೋಮಸ್ ಅವರ ಪುತ್ರ ಅಪ್ಪ ಯಾನೆ ಜೋಸೆಫ್(9) ಸಾವನ್ನಪ್ಪಿದ ಬಾಲಕ. ಈತ ತನ್ನ ತಮ್ಮನಿಗೆ ಜ್ವರ ಬಾಧಿಸಿದ ಕಾರಣ ಶಾಲೆಗೆ ರಜಾ ಹಾಕಿ ಶುಶ್ರೂಷೆಗೆ ನಿಂತಿದ್ದ. ತಂದೆ ತೋಮಸ್ ಪೈಂಟಿಂಗ್ ಕೆಲಸ ಮತ್ತು ತಾಯಿ ಶಿಜಿ ಉದ್ಯೋಗ ಖಾತರಿ ಯೋಜನೆಯ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಶವವನ್ನು ಕಾಞಂಗಾಡು ಆಸ್ಪತ್ರೆಯಲ್ಲಿ ಮಹಜರು ನಡೆಸಲಾಗಿದೆ.


ಬೈಕಿನಲ್ಲಿ ಸಂಚರಿಸುತ್ತಿದ್ದ ಯುವಕರನ್ನು ತಡೆದು ಇರಿತ

ಕಾಸರಗೋಡು: ಬೈಕಿನಲ್ಲಿ ಸಂಚರಿಸುತ್ತಿದ್ದ ಯುವಕರನ್ನು ತಡೆದು ಇರಿದು ಗಾಯಗೊಳಿಸಿದ ಘಟನೆ ಗುರುವಾರ ಚಂದ್ರಗಿರಿ ಬಳಿ ನಡೆದಿದೆ.
ಚೆಮ್ನಾಡಿನ ನಿವಾಸಿ ಹಾಗೂ ನಗರದ ಪ್ರೆಸ್ಕ್ಲಬ್ ಜಂಕ್ಷನ್ನ ಆಟೋ ಚಾಲಕ ಪಿ.ಎ.ಮುಹಮ್ಮದ್ ಫೈಸಲ್ ಮತ್ತು ಆತನ ಗೆಳೆಯ ಫಸಲ್ ಎಂಬವರನ್ನು ಚಂದ್ರಗಿರಿ ಬಳಿ ಹೊಂಚು ಹಾಕಿ ಗಾಯಗೊಳಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ಸಹೀರ್ ಎಂಬಾತನೇ ಈ ಕೃತ್ಯವೆಸಗಿದ್ದಾನೆ ಎಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳು ದೂರಿದ್ದಾರೆ. ರಾಜಕೀಯ ದ್ವೇಷವೇ ಘಟನೆಗೆ ಕಾರಣ ಎನ್ನಲಾಗಿದೆ.


ರಿಯಾನ ನಾಪತ್ತೆ: ಮಾಹಿತಿಗೆ ಪೊಲೀಸರ ಮನವಿ

ಕಾಸರಗೋಡು: ಕಾಸರಗೋಡಿನಿಂದ ನಾಪತ್ತೆಯಾದ ವಿದ್ಯಾಥರ್ಿನಿ ರಿಯಾನ ಕುರಿತು ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಚೆಂಗಳ ತೈವಳಪ್ಪಿನ ಸಿ.ಎಚ್.ಫೌಸಿಯಾರ ಪುತ್ರಿ ಪಿ.ಕೆ.ರಿಯಾನ(16) ನಾಪತ್ತೆಯಾಗಿದ್ದಾಳೆ. ಮೇ 18ರಂದು ಬೆಳಗ್ಗೆ 9.30ಕ್ಕೆ ನಾಯಮ್ಮಾರ್ಮೂಲೆ ಶಾಲಾ ವಿದ್ಯಾಥರ್ಿನಿಯಾಗಿದ್ದ ಈಕೆ ವಿಶೇಷ ತರಗತಿ ಇದೆ ಎಂದು ಮನೆಯಲ್ಲಿ ಹೇಳಿ ಹೊರಟವಳು ಮತ್ತೆ ವಾಪಾಸಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


ಕಾರು ಚಾಲಕನ ಮೇಲೆ ಹಲ್ಲೆ ನಡೆಸಿ 16 ಪವನ್ ಚಿನ್ನಾಭರಣ ಅಪಹರಣ

ಕಾಸರಗೋಡು: ಚೆಮ್ನಾಡು ಗ್ರಾಮ ಪಂಚಾಯ್ತಿ ಅಧ್ಯಕ್ಷರ ಕಾರು ಚಾಲಕನ ಮೇಲೆ ತಂಡ ಹಲ್ಲೆ ನಡೆಸಿ ನಗ-ನಗದು ಅಪಹರಿಸಿದ ಘಟನೆ ಬುಧವಾರ ಸಂಜೆ ಪೆರ್ಲಡ್ಕದಲ್ಲಿ ನಡೆದಿದೆ.
ಕಾರು ಚಾಲಕ ಕೊಳತ್ತೂರು ಮಾರಿಕುಳ ನಿವಾಸಿ ಕೆ.ವಿ.ಪ್ರದೀಪ್ ಸಹಿತ ಕಾರಿನಲ್ಲಿದ್ದ ಮನೋಜ್ ಎಂಬವರ ಮೇಲೆ ನಡೆಸಲಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪ್ರದೀಪ್ ಅವರ ಸಹೋದರರಾದ ಪ್ರಮೋದ್ ಕುಮಾರ್, ಪ್ರಸಾದ್ ಕುಮಾರ್ ಎಂಬವರ ಮೇಲೂ ತಂಡ ಹಲ್ಲೆ ನಡೆಸಿದೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳಲ್ಲಿದ್ದ 16 ಪವನ್ ಚಿನ್ನಾಭರಣ ಸಹಿತ 5,300 ರೂ. ಮತ್ತು ಮೊಬೈಲ್ ಫೋನ್ ತಂಡ ಎಗರಿಸಿದೆ ಎಂದು ಗಾಯಾಳುಗಳು ತಿಳಿಸಿದ್ದಾರೆ.


ಬಸ್ಸಿನಿಂದ ಬಿದ್ದು ಅಂಗವಿಕಲನ ಕಾಲು ಗಂಭೀರ

ಕಾಸರಗೋಡು: ಹತ್ತುವ ವೇಳೆ ಬಸ್ಸು ಬಿಟ್ಟ ಪರಿಣಾಮ ಅಂಗವಿಕಲ ಪ್ರಯಾಣಿಕರ ಕಾಲು ಮುರಿದ ಘಟನೆ ಬುಧವಾರ ಸಂಜೆ ನುಳ್ಳಿಪ್ಪಾಡಿಯಲ್ಲಿ ನಡೆದಿದೆ.
ಇದೇ ಬಸ್ಸಿನ ಕ್ಲೀನರ್ ಆಗಿರುವ ಅಣಂಗೂರು ತುತರ್ಿ ನಿವಾಸಿ ಅಬ್ದುಲ್ ರಸಾಕ್ಗೆ ಈ ದುರವಸ್ಥೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿ ಬಸ್ಸಿನ ಚಾಲಕ ಎಂ.ಎ.ಅಬ್ದುಲ್ಲ ಎಂಬಾತನ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಗೃಹಿಣಿ ನಾಪತ್ತೆ

ಮಂಜೇಶ್ವರ: ಇಲ್ಲಿಗೆ ಸಮೀಪದ ಕುಂಜತ್ತೂರು ನಿವಾಸಿ ಎಂ.ಕೃಷ್ಣನ್ ಅವರ ಪತ್ನಿ ಸಾವಿತ್ರಿ(40) ಎಂಬವರು ನಾಪತ್ತೆಯಾಗಿದ್ದಾರೆ ಎಂದು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೂಲತಃ ಆಂಧ್ರ ನಿವಾಸಿಯಾಗಿರುವ ಇವರು ಕೆಲವು ವರ್ಷಗಳಿಂದ ಇಲ್ಲಿ ವಾಸವಾಗಿದ್ದರು. ಒಂದು ತಿಂಗಳಿಂದ ನಾಪತ್ತೆಯಾಗಿದ್ದ ಇವರನ್ನು ಹುಡುಕಿದರೂ ಸಿಗದ ಕಾರಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ರಾಷ್ಟ್ರೀಯ ಉದ್ಯೋಗ ರತ್ನ ಪ್ರಶಸ್ತಿ/National Award 2 Rajash Alva

ಕಾಸರಗೋಡು: ನವದೆಹಲಿಯ ಇಂಡಿಯನ್ ಆರ್ಗನೈಸೇಶನ್ ಫಾರ್ ರಿಸಚರ್್ ಆ್ಯಂಡ್ ಡೆವಲಪ್ಮೆಂಟ್ 2009ನೇ ಸಾಲಿನ ರಾಷ್ಟ್ರೀಯ ಉದ್ಯೋಗ ರತ್ನ ಪ್ರಶಸ್ತಿ ಸಹಿತ ಚಿನ್ನದ ಪದಕವನ್ನು ಕಾಸರಗೋಡಿನ ಗ್ರಾಮೀಣ ಸೂಪರ್ ಮಾಕರ್ೆಟ್ ಲಿಮಿಟೆಡ್ನ ಮೇನೇಜಿಂಗ್ ಡೈರೆಕ್ಟರ್ ರಾಜೇಶ್ ಆಳ್ವ ಬದಿಯಡ್ಕ ಅವರಿಗೆ ನೀಡಲು ತೀಮರ್ಾನಿಸಿದೆ.
ಇದೇ 26ರಂದು ನವದೆಹಲಿಯ ಪಿ.ಎಸ್.ಕೆ. ಸಭಾಂಗಣದಲ್ಲಿ ಜರುಗುವ ಆಥರ್ಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪೂರಕವಾದ ವ್ಯಕ್ತಿಗತ  ಸಾಧನೆ ಎಂಬ ವಿಷಯದ ಕುರಿತು ನಡೆಯುವ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವ್ಯಾಪಾರ ರಂಗದಲ್ಲಿ ರಾಜೇಶ್ ಆಳ್ವ ಅವರ ಗಣನೀಯ ಸಾಧನೆ ಗುರುತಿಸಿ 2008ರಲ್ಲಿ ನವದೆಹಲಿಯ ಇಂಟರ್ನ್ಯಾಶನಲ್ ಕ್ವಾಲಿಟಿ ಎಕ್ಸಲೆಂಟ್ ಪುರಸ್ಕಾರ ಲಭಿಸಿತ್ತು. ಉದ್ಯಮ ರಂಗದಲ್ಲಿ  ಅತ್ಯಲ್ಪ ಕಾಲಾವಧಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಇವರು ತುಳುವೆರೆ ಆಯನೊ ಕಾರ್ಯಕ್ರಮದ ಮೂಲಕ ತುಳು ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದು, ಪ್ರಸಕ್ತ ಕೇರಳ ತುಳು ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


ಇಂದು ಅಭಿವೃದ್ಧಿ ವಿಚಾರಸಂಕಿರಣ
ಕಾಸರಗೋಡು: 11ನೇ ಯೋಜನೆಯ ಅಂಗವಾಗಿ ಜಿಲ್ಲಾ ಪಂಚಾಯ್ತಿಯ ಜನಪರ ಯೋಜನೆಯ ಮೂರನೇ ವಾಷರ್ಿಕ ಯೋಜನೆ ರೂಪೀಕರಣ ಕುರಿತು ಅಭಿವೃದ್ಧಿ ವಿಚಾರಸಂಕಿರಣ ಇದೇ 10ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಲಿದೆ.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಉದ್ಘಾಟಿಸುವರು.

ವನಸಂರಕ್ಷಣೆ ವಿಚಾರಸಂಕಿರಣ
ಕಾಸರಗೋಡು: ವನಮಹೋತ್ಸವದ ಸಪ್ತಾಹದಂಗವಾಗಿ ಕಾಸರಗೋಡು ಸಕರ್ಾರಿ ಕಾಲೇಜಿನ ಎನ್.ಎಸ್.ಎಸ್. ಘಟಕಗಳ ಆಶ್ರಯದಲ್ಲಿ 'ವನಸಂರಕ್ಷಣೆ' ಕುರಿತು ಇತ್ತೀಚೆಗೆ ವಿಚಾರಸಂಕಿರಣ ಜರುಗಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಮಾಧವನ್ ನಂಬ್ಯಾರ್ ಉದ್ಘಾಟಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.
ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಅಜಿತ್ ಕುಮಾರ್, ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಮುಹಮ್ಮದಾಲಿ ಪೆರ್ಲ, ರತ್ನಾಕರ ಮಲ್ಲಮೂಲೆ ಹಾಜರಿದ್ದರು.
ಎನ್.ಎಸ್.ಎಸ್. ಕಾರ್ಯದಶರ್ಿ ನಯನ ಸ್ವಾಗತಿಸಿ, ಜಿನೇಶ್ ವಂದಿಸಿದರು.

 

ಉಚಿತ ಸಮವಸ್ತ್ರಗಳ ವಿತರಣೆ
ಕಾಸರಗೋಡು : ಎಡನೀರು ಸಕರ್ಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾಥರ್ಿಗಳಿಗೆ ಬಹರೈನ್ ಪ್ರವಾಸಿ ಅಸೋಸಿಯೇಶನ್ ಆಫ್ ಕಾಸರಗೋಡು  ಮತ್ತು  ಶಾಲಾ ಶಿಕ್ಷಕ ವೃಂದದ ಆಶ್ರಯದಲ್ಲಿ ನೀಡಲಾದ ಉಚಿತ ಸಮವಸ್ತ್ರಗಳನ್ನು ಎಡನೀರು ಮಠದ ಮೇನೇಜರ್ ಕೆ.ರಾಮಕೃಷ್ಣ ರಾವ್ ವಿತರಿಸಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್, ಬಹರೈನ್ ಕಾಸರಗೋಡು ಅಸೋಸಿಯೇಶನ್ ಕಾರ್ಯದಶರ್ಿ ರಾಘವನ್, ಕೆ.ವಿ.ಬಾಲಕೃಷ್ಣನ್, ಸರ್ವಮಂಗಳಾ ರಾವ್ ಹಾಜರಿದ್ದರು.
ಪಿ.ಸುಧೀರ್ ಸ್ವಾಗತಿಸಿ, ಕೆ.ಕೆ.ರಾಜನ್ ವಂದಿಸಿದರು. ಸೂರ್ಯಭಟ್ ಕಾರ್ಯಕ್ರಮ ನಿರೂಪಿಸಿದರು.

ಉಚಿತ ವೈದ್ಯಕೀಯ ಶಿಬಿರ
ಕಾಸರಗೋಡು: ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಮೂರನೇ ವಾಷರ್ಿಕೋತ್ಸವದ ಅಂಗವಾಗಿ ರೂಪಿಸಿದ ಮುಹಿಮ್ಮಾತ್ ಸಾಂತ್ವನ ನಿಧಿಯ ಎರಡನೇ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಏನೆಪೋಯ ವೈದ್ಯಕೀಯ ಕಾಲೇಜಿನ ಸಹಕಾರದಲ್ಲಿ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಲಾಗಿದೆ.
ಇದೇ 19ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 3ರ ವರೆಗೆ ಸೀತಾಂಗೋಳಿ ಸಮೀಪದ ಮುಹಿಮ್ಮಾತ್ ಪ್ರೌಢಶಾಲೆಯ ವಠಾರದಲ್ಲಿ ಶಿಬಿರ ಜರುಗಲಿದೆ.
ಶಿಬಿರಕ್ಕೆ ಸಂಬಂಧಿಸಿ ಕುಂಬಳೆ, ಉಪ್ಪಳ, ಹೊಸಂಗಡಿ, ಕಾಸರಗೋಡು, ಬದಿಯಡ್ಕ, ಸೀತಾಂಗೋಳಿ, ಪೆರ್ಲ, ಮುಂಡಿತ್ತಡ್ಕ ಎಂಬಲ್ಲಿ ಕೌಂಟರ್ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗೆ 9447395038, 9496404020 ಎಂಬ ದೂರವಾಣಿಯನ್ನು ಸಂಪಕರ್ಿಸಬಹುದು.

12ರಂದು ಪತ್ವಾಡಿ ಸೇತುವೆ ಉದ್ಘಾಟನೆ
ಮಂಜೇಶ್ವರ: ಉಪ್ಪಳ ಸಮೀಪದ ಪತ್ವಾಡಿ ಸೇತುವೆಯ ಉದ್ಘಾಟನೆ ಇದೇ 12ರಂದು ರಾಜ್ಯ ಲೋಕೋಪಯೋಗಿ ಸಚಿವ ಮೋನ್ಸ್ ಜೋಸೆಫ್ ಉದ್ಘಾಟಿಸುವರು.
ಉಪ್ಪಳದಲ್ಲಿ ನಡೆಯುವ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಞ್ಞಂಬು ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಕರುಣಾಕರನ್ ಮತ್ತು ಇತರ ಗಣ್ಯರು ಭಾಗವಹಿಸುವರು.

ನಾಳೆ ನಾಟಕ ಸಾಹಿತ್ಯ ಸಮಿತಿ ಉದ್ಘಾಟನೆ
ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಕನ್ನಡ ಕೈರಳಿ ಮಾಸಿಕದ ಸಹಯೋಗದಲ್ಲಿ ಇದೇ 11ರಂದು ಧರ್ಮತ್ತಡ್ಕ ಶ್ರೀ ದುಗರ್ಾಪರಮೇಶ್ವರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ಜರುಗಲಿದೆ.
ಅಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಕನರ್ಾಟಕ ವಿಧಾನ ಪರಿಷತ್ತು ಸಭಾಪತಿ ವೀರಣ್ಣ ಮತ್ತಿ ಉದ್ಘಾಟಿಸುವರು.ಘಟಕದಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು. ನಾಟಕ ಸಾಹಿತ್ಯ ಸಮಿತಿಯನ್ನು ಹರಿಕೃಷ್ಣ ಪುನರೂರು ಉದ್ಘಾಟಿಸುವರು. ಶಾಸಕ ಸಿ.ಎಚ್.ಕುಞ್ಞಂಬು ಕನ್ನಡ ಪತ್ರಿಕೆಗಳನ್ನು  ಹಸ್ತಾಂತರಿಸುವರು.
ಮಂಗಳೂರಿನ ಸೃಷ್ಠಿ ಕಲಾವಿದರಿಂದ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ.
 

Wednesday, July 8, 2009

ಪನ್ನಿಪ್ಪಾರೆ ಲೈಂಗಿಕ ಜಾಲ ಪ್ರಕರಣ: ಮತ್ತಿಬ್ಬರ ಸೆರೆ/Pannippare Sex Racket

ಕಾಸರಗೋಡು: ಪನ್ನಿಪ್ಪಾರೆ ಲೈಂಗಿಕ ಜಾಲ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬುಧವಾರ ಪೊಲೀಸರು ಬಂಧಿಸಿದರು.
ಅಣಂಗೂರು ಟಿ.ವಿ.ಸ್ಟೇಷನ್ ರಸ್ತೆ ನಿವಾಸಿ ಹಾಜಿರ ಮಂಜಿಲ್ನ ಪಿ.ಎಂ.ಹಾರಿಸ್(34), ಬದಿಯಡ್ಕ ಬೀಜಂತಡ್ಕ ನಿವಾಸಿ ತಾಜು ಯಾನೆ ತಾಜುದ್ದೀನ್(24) ಎಂಬವರನ್ನು ನಗರ ಠಾಣೆಯ ಸಿ.ಐ.ಪ್ರೇಮರಾಜನ್ ಬಂಧಿಸಿದ್ದಾರೆ. ಇದರಿಂದ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೇರಿದೆ.
ಬಂಧಿತರಲ್ಲಿ ಹಾರಿಸ್ ಎಂಬ ಆರೋಪಿ ಸಾಹಿರಾ ಎಂಬ ಯುವತಿಯ ಸಹಾಯದೊಂದಿಗೆ ಕಣ್ಣೂರಿನ ಸಿಟಿ ವಸತಿ ಲಾಡ್ಜ್ಗೆ ಬಾಲಕಿಯನ್ನು ಕೊಂಡೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ.
ಕಾಸರಗೋಡಿನಲ್ಲಿ ಟೆಂಪೋ ಚಾಲಕನಾದ ತಾಜು ಬಾಲಕಿಯನ್ನು ಮಂಗಳೂರು ಮತ್ತು ಕಾಸರಗೋಡಿನಲ್ಲಿ ಗಣ್ಯರಿಗೆ ಪೂರೈಕೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 

ನೇಣು ಬಿಗಿದು ಆತ್ಮಹತ್ಯೆ
ಕಾಸರಗೋಡು: ಇಲ್ಲಿನ ಕಾಳ್ಯಂಗಾಡು ನಿವಾಸಿ ಮಜಿರ್ಪಳ್ಳ ಕಟ್ಟೆಯ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ.
ನಗರದ ಕಾಳ್ಯಂಗಾಡು ನಿವಾಸಿ ಪಂಜಿ ಎಂಬವರ ಪುತ್ರ ಕೆ.ಉದಯ(32) ಎಂದು ಗುರುತಿಸಲಾಗಿದೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.
ಮಟ್ಕಾ: ನಾಲ್ವರ ಸೆರೆ
ಕಾಸರಗೋಡು: ಇಲ್ಲಿಗೆ ಸಮೀಪದ ಅಶ್ವಿನಿ ನಗರದಲ್ಲಿ ಮಟ್ಕಾ ನಿರತರಾದ ನಾಲ್ವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಕಂಚಿಕಟ್ಟೆಯ ನಿವಾಸಿ ಜಯಾನಂದ, ಚಟ್ಟಂಚಾಲ್ ನಿವಾಸಿ ಅಬ್ದುಲ್ಲ ಬಿ.ಕೆ, ಚೆಂಗಳ ನಾಲ್ಕನೇ ಮೈಲಿನ ಪ್ರಶಾಂತ್, ಮೀಪುಗುರಿಯ  ಪಕ್ಕೀರ ಗೌಡ ಬಂಧನಕ್ಕೊಳಗಾದವರು.
ಆರೋಪಿಗಳಿಂದ 1,505 ರೂ. ವಶಪಡಿಸಲಾಗಿದೆ.
 
ಪಂಚಾಯ್ತಿ ಸದಸ್ಯೆಗೆ ಹಲ್ಲೆ
 
ಕಾಸರಗೋಡು: ಕುಂಬಳೆ ಗ್ರಾಮ ಪಂಚಾಯ್ತಿ ಸದಸ್ಯೆ ಗೀತಾಶೆಟ್ಟಿ ಅವರ ಮೇಲೆ ತಂಡ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕುಂಬಳೆ ಸಮೀಪದ ಊಜಾರು ಕೃಷ್ಣ ಶೆಟ್ಟಿ, ಮನೋರಂಜನ ಶೆಟ್ಟಿ, ಪ್ರಶಾಂತ ಶೆಟ್ಟಿ ಅವರನ್ನೊಳಗೊಂಡ ತಂಡ ಹಲ್ಲೆ ನಡೆಸಿದೆ ಎಂದು ಗಾಯಾಳು ದೂರಿದ್ದಾರೆ. ಪಂಚಾಯ್ತಿಯ ಬಂಬ್ರಾಣ ಗದ್ದೆ ಬಯಲು ಸಮಿತಿಗೆ ವಿತರಿಸಿದ ಟ್ರಾಕ್ಟರನ್ನು ಕೃಷಿಕರಿಗೆ ನೀಡದೆ ಆರೋಪಿ ಕೃಷ್ಣ ಶೆಟ್ಟಿ ಸ್ವಂತಕ್ಕೆ ಬಳಸಿದ ಕಾರಣ ಅದನ್ನು ಪಂಚಾಯ್ತಿ ವಶಪಡಿಸಿ ಕೃಷಿಕರಿಗೆ ನೀಡಿದ ದ್ವೇಷದಿಂದ ಈ ಕೃತ್ಯವೆಸಗಿದ್ದಾರೆ ಎಂದು ಅವರು ದೂರಿದ್ದಾರೆ.
ಘಟನೆಯನ್ನು ಪಂಚಾಯ್ತಿ ಉಪಾಧ್ಯಕ್ಷ ಕೇಶವ ಪ್ರಸಾದ್ ನಾಣಿತ್ತಿಲು ಖಂಡಿಸಿದ್ದಾರೆ.
 

ತುಳು ಅಧ್ಯಯನ ಕೇಂದ್ರ ಆರಂಭ/Tulu Study Centre

ಕಾಸರಗೋಡು: ಇದೇ ತಿಂಗಳಲ್ಲಿ ಕಾಸರಗೋಡು ಸಕರ್ಾರಿ ಕಾಲೇಜಿನಲ್ಲಿ ತುಳು ಅಧ್ಯಯನ ಕೇಂದ್ರ ಆರಂಭಿಸಲು ಕೇರಳ ತುಳು ಅಕಾಡೆಮಿಯ ಸದಸ್ಯರ ಸಭೆ ತೀಮರ್ಾನಿಸಿದೆ.
ಅಕಾಡೆಮಿಯ ತ್ರೈಮಾಸಿಕ 'ತೆಂಬೆರೆ'ಯನ್ನು ಇದೇ ತಿಂಗಳಲ್ಲಿ ಬಿಡುಗಡೆಗೊಳಿಸುವುದು, ಆಗಸ್ಟ್ ತಿಂಗಳಲ್ಲಿ ಕಾಸರಗೋಡಿನ ಚಿನ್ಮಯ ವಿದ್ಯಾಲಯದಲ್ಲಿ 'ತುಳು ಲಿಪಿ ಪರಿಚಯ' ವಿಚಾರಗೋಷ್ಠಿ, ಕಕರ್ಾಟಕ ಮಾಸದಲ್ಲಿ 'ಆಟಿದ ಆಯನೊ ಕಜ್ಜೊ', ಸಿಂಹ ಮಾಸ 1ನ್ನು ಬದಿಯಡ್ಕದಲ್ಲಿ ಆಚರಿಸಲು ಸಭೆಯಲ್ಲಿ ತೀಮರ್ಾನಿಸಲಾಯಿತು. 
ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ತುಳು ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎಚ್.ಕುಞ್ಞಂಬು, ಜಿಲ್ಲಾಧಿಕಾರಿ ಆನಂದ ಸಿಂಗ್, ಹಣಕಾಸು ಅಧಿಕಾರಿ ರಾಜ್ ಮೋಹನ್, ಅಕಾಡೆಮಿ ಸದಸ್ಯರಾದ ಎಸ್.ಸುಧಾಕರ ಮಾಸ್ಟರ್, ಉಮೇಶ್ ಸಾಲಿಯಾನ್, ರಾಜೇಶ್ ಆಳ್ವ, ಗೀತಾ ಸಾಮನಿ, ಸಫಿಯಾ ಹುಸೈನ್, ಅದಿತಿ ಟೀಚರ್, ಸ್ವರ್ಣಲತಾ ಎಸ್., ಶಾಲಿನಿ ಕೆ, ಸಾವಿತ್ರಿ ಎಂ. ಹಾಜರಿದ್ದರು.
ಕಾರ್ಯದಶರ್ಿ ಎಂ.ಜಿ.ನಾರಾಯಣ ರಾವ್ ವರದಿ ಮಂಡಿಸಿದರು.


ಪುತ್ತಿಗೆ ಪಂಚಾಯ್ತಿ : ಅಭಿವೃದ್ಧಿ ವಿಚಾರಸಂಕಿರಣ

ಕಾಸರಗೋಡು: ಪುತ್ತಿಗೆ ಪಂಚಾಯ್ತಿಯ 2009-10ನೇ ಸಾಲಿನ ಅಭಿವೃದ್ಧಿ ವಿಚಾರಸಂಕಿರಣ ಇತ್ತೀಚೆಗೆ ಸೀತಾಂಗೋಳಿ ಎ.ಬಿ.ಎ. ಸಭಾಂಗಣದಲ್ಲಿ ಜರುಗಿತು.
ಪಂಚಾಯ್ತಿ ಅಧ್ಯಕ್ಷ ತೋಮಸ್ ಡಿ'ಸೋಜಾ ಉದ್ಘಾಟಿಸಿದರು. ಉಪಾಧ್ಯಕ್ಷ ಜಯಂತ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯ್ತಿ ಅಭಿವೃದ್ಧಿ ಕುರಿತ ವರದಿಯನ್ನು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಕುಞ್ಞಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪುಷ್ಪಾ ನಾರಾಯಣನ್ ಅವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು. ಗ್ರಾಮ ವಿಸ್ತರಣಾಧಿಕಾರಿ ಬಾಲಕೃಷ್ಣನ್ ಯೋಜನೆಗಳನ್ನು ವಿವರಿಸಿದರು.
ಪಂಚಾಯ್ತಿ ಸದಸ್ಯರಾದ ಸುಬ್ಬಣ್ಣ ಆಳ್ವ, ವಿಮಲ್ರಾಜ್, ಸಿಂಧೂ ಹಾಜರಿದ್ದರು.
ಪಂಚಾಯ್ತಿ ಕಾರ್ಯದಶರ್ಿ ಸ್ವಾಗತಿಸಿ, ಹೆಲ್ಪ್ ಡೆಸ್ಕ್ ಕಾರ್ಯಕರ್ತ ಕೆ.ಎಂ.ಪಾಟಾಳಿ ವಂದಿಸಿದರು.


13ರಿಂದ 18ರ ವರೆಗೆ ಚಟ್ಟಂಚಾಲ್-ಕಳನಾಡು ರಸ್ತೆ ಸಂಚಾರ ಸ್ಥಗಿತ

ಕಾಸರಗೋಡು: ಪೊಲೀಸ್ ಕಾನ್ಸ್ಟೇಬಲ್(ಇಂಡಿಯಾ ರಿಸಚರ್್ ಬೆಟಾಲಿಯನ್-ರೆಗ್ಯುಲರ್ ವಿಂಗ್) ಹುದ್ದೆಗಳಿಗೆ ಅಜರ್ಿ ಸಲ್ಲಿಸಿದ ಜಿಲ್ಲೆಯ ಅಭ್ಯಥರ್ಿಗಳಿಗೆ ಇದೇ 13ರಿಂದ 18ರ ವರೆಗೆ ಚಟ್ಟಂಚಾಲ್-ಕಳನಾಡು ರಸ್ತೆಯಲ್ಲಿ ಕ್ಷಮತಾ ಪರೀಕ್ಷೆ ನಡೆಯಲಿದೆ.
ಸುರಕ್ಷಾ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಯುವ ದಿನಗಳಲ್ಲಿ ಚಟ್ಟಂಚಾಲ್-ಕಳನಾಡು ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು. ಸಾರ್ವಜನಿಕರು ಈ ವಿಷಯವನ್ನು ಗಮನಿಸುವಂತೆ ಪ್ರಕಟನೆ ತಿಳಿಸಿದೆ.


ಸುಧೀಶ್ಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 10 ಸಾವಿರ ರೂ. ಬಿಡುಗಡೆ

ಕಾಸರಗೋಡು: ಪೊಲೀಸ್ ನೇಮಕಾತಿ ದೈಹಿಕ ಕ್ಷಮತಾ ಪರೀಕ್ಷೆ ವೇಳೆ ಆಯತಪ್ಪಿ ಅಪಘಾತಕ್ಕೀಡಾಗಿ ಚಿಕಿತ್ಸೆಯಲ್ಲಿರುವ ಕುಂಬಳೆ ಸಮೀಪದ ಅನಂತಪುರ ನಿವಾಸಿ ಸುಧೀಶ್ಗೆ ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ 10 ಸಾವಿರ ರೂ. ಬಿಡುಗಡೆಗೊಳಿಸಲಾಗಿದೆ.
ಮಂಜೇಶ್ವರ ಶಾಸಕ ಸಿ.ಎಚ್. ಕುಞ್ಞಂಬು ನಿಧಿಯನ್ನು ಸುಧೀಶ್ರ ತಂದೆ ಎ.ಚಂದ್ರಶೇಖರ ಅವರಿಗೆ ವಿತರಿಸಿದರು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆನಂದ ಸಿಂಗ್, ತಹಸೀಲ್ದಾರ್ ಎಂ.ಚನಿಯಪ್ಪ, ಉಪ ತಹಸೀಲ್ದಾರ್ ಇ.ವಿ.ಗೋಪಾಲನ್, ಎಡನಾಡು ಗ್ರಾಮಾಧಿಕಾರಿ ಜಯಶ್ರೀ ಹಾಜರಿದ್ದರು.   


ಅಧ್ಯಾಪಕರ ಸಬಲೀಕರಣ ಕಾರ್ಯಕ್ರಮ

ಕಾಸರಗೋಡು: ಅಧ್ಯಾಪಕ ತಾನು ಗಳಿಸಿದ ಅನುಭವಗಳನ್ನು ವಿದ್ಯಾಥರ್ಿಗಳಿಗೆ ಧಾರೆ ಎರೆದು ಅವರ ಕಲಿಕಾ ಮಟ್ಟವನ್ನು ವಿಸ್ತರಿಸಬೇಕು ಎಂದು ಕುಂಬಳೆ ಸಕರ್ಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕರುಣಾಕರ ಅನಂತಪುರ ಕರೆ ನೀಡಿದರು.
ಇತ್ತೀಚೆಗೆ ಕುಂಬಳೆ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಅಧ್ಯಾಪಕರಿಗೆ ಆಯೋಜಿಸಿದ ಜಿಲ್ಲಾ ಮಟ್ಟದ ಅಧ್ಯಾಪಕರ ಸಬಲೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಟಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಪುಷ್ಪಲತಾ ಪಿ, ಚಂದ್ರಕುಮಾರ್ ಕೊಡ್ಲಮೊಗರು ಹಾಜರಿದ್ದರು.
ಸಂಪನ್ಮೂಲ ಅಧ್ಯಾಪಕರಾದ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಚಿದಾನಂದ ಭಟ್ ಶೇಣಿ ವಂದಿಸಿದರು. 


ಸಾರ್ವಜನಿಕ ಗಣೇಶೋತ್ಸವ: ಆಯ್ಕೆ

ಮಂಜೇಶ್ವರ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವದ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಹೊಸಂಗಡಿಯಲ್ಲಿ ಜರುಗಿತು.
ರೋಹಿದಾಸ್ ಬಂಗೇರ ಮುಂಬೈ(ಗೌರವಾಧ್ಯಕ್ಷ), ರಾಘವ ಚೇರಾಲ್(ಅಧ್ಯಕ್ಷ), ದಿನಕರ ಬಿ.ಎಂ.ಹೊಸಂಗಡಿ(ಪ್ರಧಾನ ಕಾರ್ಯದಶರ್ಿ), ಕೆ.ನಾರಾಯಣ(ಕೋಶಾಧಿಕಾರಿ) ಆಯ್ಕೆಯಾದರು.
ಬಿ.ಎಂ.ಹೈಮೇಶ್ ವರದಿ ಮಂಡಿಸಿದರು. ಪದ್ಮನಾಭ ಕಡಪ್ಪುರ ಅಧ್ಯಕ್ಷತೆ ವಹಿಸಿದ್ದರು.
ದೇವರಾಜ್ ಸ್ವಾಗತಿಸಿ, ದಿನಕರ್ ಬಿ.ಎಂ. ವಂದಿಸಿದರು.

ಸುಟ್ಟ ಗಾಯ: ಸಾವುWoman Dies in Fire Accident

ಕಾಸರಗೋಡು: ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದ ಉಡುಪಿ ತಾಲೂಕಿನ ಕಾಜರ್ಗುತ್ತು ನಿವಾಸಿ ಶಶಿಕಲಾ(57) ಎಂಬವರು ಸೋಮವಾರ ಸಾವನ್ನಪ್ಪಿದರು.
ಮನೆಯಲ್ಲಿ ಬೆಂಕಿ ಅನಾಹುತ ನಡೆದಿತ್ತು. ಅವರು ಹಿರಿಯಡ್ಕ ಆಸ್ಪತ್ರೆಯಲ್ಲಿ ದಾದಿಯಾಗಿದ್ದು, ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದಿದ್ದರು.

 

ಶ್ರಮ ಯಾರದ್ದೋ, ಫಲ ಯಾರಿಗೋ?B'lore-M'lore Train

ಮಂಗಳೂರು: 11 ವರ್ಷಗಳ ಸುದೀರ್ಘ ಅವಧಿಯ ನ೦ತರ ಡಿಸೆ೦ಬರ್ 2007ರಲ್ಲಿ ಮತ್ತೆ ಪ್ರಾರ೦ಭವಾದ ರೈಲು ಈಗ ಮತ್ತೆ ಕರಾವಳಿಯವರ ಕೈ ತಪ್ಪುತ್ತಿದೆ. ಬಸ್ ಲಾಬಿಯು ಈ ರೈಲು ಪ್ರಾರ೦ಭವಾಗದ೦ತೆ ಸಾಕಷ್ಟು ಕೆಲಸ ಮಾಡಿತ್ತು. ಈ ಮಾರ್ಗವನ್ನು ಪುನಾರ೦ಭಿಸಲು ನಡೆದ ಹಲವು ಹೋರಾಟಗಳ ಫಲವಾಗಿ ಮತ್ತೆ ಆರ೦ಭಗೊ೦ಡ ರೈಲು ಈಗ ಕೇರಳೀಯರ ಪಾಲಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ಮತ್ತೆ ಬಸ್ ಮಾಲಕರ ಕೈ ಮೇಲಾಗಲು ಕೇ೦ದ್ರ ಸರಕಾರ ಪರೋಕ್ಷವಾಗಿ ಕಾರಣವಾಗಿದೆ. ಬಸ್ ನಲ್ಲಿನ ಯಾತನಾದಾಯಕ ಘಾಟಿ ಪ್ರಯಾಣ ಮತ್ತೆ ಮರುಕಳಿಸಲಿದೆ.

ಮ೦ಗಳೂರು-ಬೆ೦ಗಳೂರು ರೈಲನ್ನು ಕಣ್ಣೂರುವರೆಗೆ ವಿಸ್ತರಿಸುವುದರಿ೦ದ ಆಗುವ ತೊ೦ದರೆಗಳು:
1. ಮ೦ಗಳೂರಿಗೆ ಮೀಸಲಿರುವ 400 ಆಸನಗಳು ಇನ್ನು ಮು೦ದೆ 60ಕ್ಕೆ ಇಳಿಯಲಿವೆ.
2. ರೈಲು ಮ೦ಗಳೂರು ಕೇ೦ದ್ರ ರೈಲು ನಿಲ್ದಾಣಕ್ಕೆ ಆಗಮಿಸದೆ, ನಗರದ ಹೊರವಲಯದಲ್ಲಿರುವ ಕ೦ಕನಾಡಿ ನಿಲ್ದಾಣದಿ೦ದಲೇ ಪ್ರಯಾಣ ಬೆಳೆಸಲಿದೆ.

ಹಾಗೆಯೇ, ಈ ರೈಲನ್ನು ಕಾರವಾರದ ತನಕ ವಿಸ್ತರಿಸುವ ಬೇಡಿಕೆ ರಾಜ್ಯದ್ದಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೇರಳಕ್ಕೆ ರೈಲನ್ನು ವಿಸ್ತರಿಸಲಾಗಿದೆ. ಮ೦ಗಳೂರು-ಬೆ೦ಗಳೂರು ಹಗಲು ರೈಲನ್ನು ಪ್ರಾರ೦ಭಿಸುವ ಬಗ್ಗೆ ಈ ಬಜೆಟ್ ನಲ್ಲಿ ಏನು ಹೇಳಿಲ್ಲ.

ಒಟ್ಟಿನಲ್ಲಿ, ಬಗ್ಗಿದವನಿಗೆ ಒ೦ದು ಗುದ್ದು ಜಾಸ್ತಿ ಎನ್ನುವ ಹಾಗೇ. ರಾಜ್ಯಕ್ಕೆ ಮತ್ತೊಮ್ಮೆ ಕೇ೦ದ್ರದ ಗುದ್ದು ಬಿದ್ದಿದೆ.

ಹಜ್ ಯಾತ್ರಿಗಳ ಮನವಿ : ಮಂಗಳೂರು ಮತ್ತು ಬೆಂಗಳೂರು ನಡುವೆ ಹಗಲು ರೈಲು ಪ್ರಾರಂಭಿಸಬೇಕೆಂಬ ಕರ್ನಾಟಕದ ಬೇಡಿಕೆ ಹಳೆಯದು. ಆದರೆ, ಕೇಂದ್ರದಿಂದ ಈ ಬೇಡಿಕೆಗೆ ಇಲ್ಲಿಯವರೆಗೆ ಪುರಸ್ಕಾರ ಸಿಕ್ಕಿಲ್ಲ. ಕರ್ನಾಟಕದ ಹಜ್ ಯಾತ್ರಿಗಳ ನಿಯೋಗ ಈ ರೈಲಿಗಾಗಿ ಮತ್ತೆ ಬೇಡಿಕೆ ಕೇಂದ್ರದ ಮುಂದೆ ಇಟ್ಟಿದ್ದಾರೆ.

ಮಾಜಿ ಕೇಂದ್ರ ಸಚಿವ ಸಿಕೆ ಜಾಫರ್ ಷರೀಫ್, ಕಾಂಗ್ರೆಸ್ ನ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ಮತ್ತು ಮೋಹಿಯುದ್ದಿನ್ ಬಾವಾ ನೇತೃತ್ವದ ಹಜ್ ಯಾತ್ರಾರ್ಥಿಗಳ ನಿಯೋಗ ಮಂಗಳವಾರ ಕೇಂದ್ರ ರೈಲು ಖಾತೆ ರಾಜ್ಯ ಸಚಿವ ಕೆಎಚ್ ಮುನಿಯಪ್ಪ ಅವರನ್ನು ಭೇಟಿ ಮಾಡಿ ಮಂಗಳೂರು ಮತ್ತು ಬೆಂಗಳೂರು ನಡುವೆ ಹಗಲು ರೈಲು ಪ್ರಾರಂಭಿಸಲು ಮನವಿ ಸಲ್ಲಿಸಿತು.

ಮೊಬೈಲ್ ಫೋನ್ ಸುರಕ್ಷತೆ/Mobile Safty

ದೈನಂದಿನ ಜೀವನದ ಅತ್ಯಂತ ಅವಶ್ಯಕ ವಸ್ತುವಾಗಿ ಎಷ್ಟೋ ಜನರಿಗೆ ಜೀವನಾನೆ ಮೊಬೈಲ್ ಆಗಿರುವುದಂತೂ ಸುಳ್ಳಲ್ಲ. ಮೊಬೈಲ್ ಫೋನ್ ಕಳೆದುಕೊಂಡಾಗ ಹೇಗಿರುತ್ತೆ ಅದು ಊಹೆಗೂ ನಿಲುಕದ್ದು. ಅದರಂತೆ ಈಗ ಮೊಬೈಲ್ ಕೇವಲ ಸಂಭಾಷಣೆಗೆ ಮಾತ್ರವಲ್ಲದೆ ಹತ್ತು ಹಲವು ಸೌಲಭ್ಯಗಳನ್ನು ಅಂಗೈಗೆ ನಿಲುಕುವಂತೆ ಮಾಡಿರುವ ಮಾಂತ್ರಿಕ ಪರಿಕರ. ಒಮ್ಮೆ ಕಳೆದುಕೊಂಡರೆ ಮೊಬೈಲ್ ನಲ್ಲಿದ್ದ ಸ್ವವಿವರಗಳು, ಅಸಂಖ್ಯ ಸಂಪರ್ಕಮಾಹಿತಿ, ಚಿತ್ರಗಳು, ವಿಡಿಯೋ..ಇತ್ಯಾದಿಗಳು ಅಮೂಲ್ಯ ಡಾಟಾ ನಾಶವಾದಂತೆ, ಹೆಚ್ಚೆಂದರೆ ಅದೇ ಸಿಮ್ (ಫೋನ್ ನಂಬರ್) ಪಡೆಯಬಹುದು.

ಪೊಲೀಸರು ಇದುವರೆವಿಗೂ ಮೊಬೈಲ್ ಕಳ್ಳರನ್ನು ಹಿಡಿದು ಕಳೆದುಕೊಂಡವರಿಗೆ ಹಿಂದಿರುಗಿಸಿದ್ದು ವಿರಳ. ಪರಿಸ್ಥಿತಿ ಹೀಗಿರುವಾಗ, ಮೊಬೈಲ್ ಫೋನ್ ಸುರಕ್ಷತೆಗಾಗಿ ಆನ್ ವರ್ಡ್ ಮೊಬಿಲಿಟಿ ಎಂಬ ಸಂಸ್ಥೆ ಹಲವು ಉಪಯುಕ್ತ ಸೌಲಭ್ಯಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಪ್ರಯೋಗಿಕ ಹಂತದಲ್ಲಿರುವ ಮೊಬಿಕಾಪ್, ಮೊಬಿಕಾಪಿ, ಟ್ರಾಕ್ 007, ಮೊಬಿಮೇಟ್ ತಂತ್ರಾಂಶಗಳು ಸಾರ್ವಜನಿಕರ ಉಪಯೋಗಕ್ಕೆ ಸದ್ಯದಲ್ಲೇ ಲಭ್ಯವಾಗಲಿದೆ. ಇದಕ್ಕೂ ಮುನ್ನ ಮೊಬೈಲ್ ಕಳ್ಳರ ಜಾಡು ಹಿಡಿಯಬಲ್ಲ ಈ ಗೂಢಾಚಾರಿ ತಂತ್ರಾಂಶದ ಮೇಲೆ ಒಂದು ನೋಟ


ಪ್ರಮುಖ ಉತ್ಪನ್ನಗಳು:
1. ಮೊಬಿಕಾಪ್ :
ಇದು ನಿಮ್ಮ ಮೊಬೈಲ್ ಕಳ್ಳತನವಾದಲ್ಲಿ ಇಲ್ಲವೆ ನೀವು ಅದನ್ನು ಕಳೆದುಕೊಂಡಲ್ಲಿ ಅದು ಎಲ್ಲಿದೆಯೆಂದು ಪತ್ತೆ ಹಚ್ಚಬಲ್ಲ ಒಂದು ಸರಳ ಸಾಫ್ಟವೇರ್. ಇದೊಂದು ಗುಪ್ತ ಪ್ರಯೋಗವಾಗಿದ್ದು, ನೀವು ಪಾಸ್ ವರ್ಡ್ ಬಳಸುವ ಮೂಲಕ ಮಾತ್ರ ಇದರ ಲಾಭ ಪಡೆಯಬಹುದು. ನಿಮ್ಮ ಫೋನ್ ಟ್ರ್ಯಾಕ್ ಮಾಡುವ ಜೊತೆಗೆ ನಿಮ್ಮ ಮಾಹಿತಿಯನ್ನು ಗುಪ್ತವಾಗಿ ಇಲ್ಲವೆ ಮುಕ್ತವಾಗಿಡಲು ಮೊಬಿಕಾಪ್ ಅವಕಾಶ ಕಲ್ಪಿಸುತ್ತದೆ.

ಲಕ್ಷಣಗಳು:
* ಖಾಸಗಿ ಮಾಹಿತಿ ನಿರ್ವಹಣೆ : ನಿಮ್ಮ ಮಾಹಿತಿಯನ್ನು ಗುಪ್ತವಾಗಿ ಇಲ್ಲವೆ ಮುಕ್ತವಾಗಿಡಲು ಮೊಬಿಕಾಪ್ ಅವಕಾಶ ಕಲ್ಪಿಸುತ್ತದೆ.
* ಸಿಮ್ ಬದಲಾವಣೆಯ ಮಾಹಿತಿ : ಮೊಬಿಕಾಪ್ ನಿಮ್ಮ ಮೊಬೈಲ್ ಗೆ ಸಿಮ್ ಕಾರ್ಡ್ ಬದಲಿಸಿದಲ್ಲಿ ತಕ್ಷಣವೇ ನಿಮ್ಮ ಇನ್ನೊಂದು ನಂಬರಿಗೆ ಮಾಹಿತಿ ರವಾನಿಸುವ ಮೂಲಕ ಫೋನ್ ಎಲ್ಲಿದೆಯೆಂದು ಪತ್ತೆಹಚ್ಚುವಲ್ಲಿ ಸಹಾಯ ಮಾಡುತ್ತದೆ.
* ಫೋನ್ ಪತ್ತೆಹಚ್ಚುವದು ಮತ್ತು ನಿಗಾ ವಹಿಸುವುದು : ನಿಮ್ಮ ಮೊಬೈಲ್ ಗೆ ಸಿಮ್ ಕಾರ್ಡ್ ಬದಲಿಸಿದಲ್ಲಿ ತಕ್ಷಣವೇ ಬದಲಾದ ಸಿಮ್ ನಂಬರ್, ಆ ದೇಶದ ಕೋಡ್, ಸ್ಥಳದ ಕೋಡ್, ನೆಟ್ ವರ್ಕ್ ಐಡಿ, ಸೆಲ್ ಐಡಿ ಮತ್ತು ಸೆಲ್ ಬ್ರೊಡ್ಕಾಸ್ಟ್ ಮೆಸ್ಸೆಜ್ ಕುರಿತ ಮಾಹಿತಿಯನ್ನು ನಿಮಗೆ ತಲುಪಿಸುತ್ತದೆ.
* ಮಾಹಿತಿ ರಕ್ಷಣೆ : ಮೊಬಿಕಾಪ್ ನಿಮ್ಮ ಎಸ್ ಎಮ್ ಎಸ್ ಡಾಟಾ, ಫೋನ್ ಬುಕ್, ಇಮೇಜ್ ಗಳು, ವಿಡಿಯೊ ಮುಂತಾದವನ್ನು ಕಾಪಾಡುತ್ತದೆ. ಸಿಮ್ ಕಾರ್ಡ್ ಬದಲಿಸಿದಲ್ಲಿ ನಿಮ್ಮ ಮಾಹಿತಿ ಯಾಂತ್ರಿಕವಾಗಿ ಗುಪ್ತ ಸ್ಥಿತಿಗೆ ಹೊರಟುಹೋಗುತ್ತದೆ. ಅದನ್ನು ನೀವೇ ಆಯ್ಕೆಮಾಡಿದ ಪಾಸ್ ವರ್ಡ್ ಎಂಟರ್ ಮಾಡುವ ಮೂಲಕ ಮರಳಿ ಪಡೆಯಬಹುದು.
* ಮೆಮೊರಿ ಕಾರ್ಡ್ ರಕ್ಷಣೆ : ಸಿಮ್ ಕಾರ್ಡ್ ಬದಲಿಸಿದಲ್ಲಿ ಮೊಬಿಕಾಪ್ ಯಾಂತ್ರಿಕವಾಗಿ ನಿಮ್ಮ ಮೆಮೊರಿ ಕಾರ್ಡನಲ್ಲಿರುವ ಮಾಹಿತಿ ಪ್ರದರ್ಶಿತವಾಗದಂತೆ ತಡೆಯುತ್ತದೆ.
* ಕಳೆದುಹೋದ ನಿಮ್ಮ ಫೊನ್ ಗೆ ಲಗ್ಗೆ ಹಾಕಿ : ಒಂದು ಸರಳ ಎಸ್ ಎಮ್ ಎಸ್ ಮೂಲಕ ನಿಮ್ಮ ಮೊಬೈಲ್ ನ್ನು ಯಾರೂ ದುರುಪಯೋಗ ಮಾಡಿಕೊಳ್ಳದಂತೆ ಸುಪ್ತ ಸ್ಥಿತಿಯಲ್ಲಿಡಬಹುದು. ಇದರಿಂದ ನಿಮ್ಮ ಫೊನ್ ಲಾಕ್ ಆಗುವುದಲ್ಲದೆ ಯರಾದರೂ ಬಳಸಲು ಯತ್ನಿಸಿದಲ್ಲಿ ಸೈರನ್ ಮೊಳಗುವುದು.
* ರಿಮೊಟ್ ಸ್ಪೈಯಿಂಗ್ : ಮೊಬಿಕಾಪ್ ಕದ್ದವನಿಗೆ ತಿಳಿಯದಂತೆ ನಿಮ್ಮ ಫೋನ್ ನಿಂದ ಮಾಡಿದ ಕರೆಯ ಮಾಹಿತಿ, ಕಳಿಸಿದ ಎಸ್ ಎಮ್ ಎಸ್ ಪ್ರತಿಯನ್ನು ನಿಮಗೆ ಕಳುಹಿಸುತ್ತದೆ.
* ಸೈರನ್ ಅಲಾರಮ್ : ಸಿಮ್ ಕಾರ್ಡ್ ಬದಲಿಸಿದಲ್ಲಿ ತಕ್ಷಣವೇ ಸೈರನ್ ಅಲಾರಮ್ ಮೊಳಗುವುದು ಅಲ್ಲದೆ ಮೊಬೈಲ್ ರಿಸ್ಟಾರ್ಟ್ ಮಾಡಿದರೆ ಅದು ಮುಂದುವರೆಯುವುದು.
* ಫೊನ್ ಬುಕ್ ರೆಟ್ರೈವಲ್ : ಮೊಬಿಕಾಪ್ ನಿಮ್ಮ ಕಳೆದುಹೋದ ಫೊನ್ ಬುಕ್ ನ್ನು ಎಸ್ ಎಮ್ ಎಸ್ ಮೂಲಕ ಇಲ್ಲವೆ ಜಿ ಪಿ ಆರ್ ಎಸ್ ಮೂಲಕ ಆನ್ ಲೈನ್ ಸರ್ವರ್ ನಿಂದ ಪಡೆಯುವ ಸೌಲಭ್ಯ ಒದಗಿಸುತ್ತದೆ.
* ಕಸ್ಟಮೈಸ್ಡ್ ಮೆಸ್ಸೆಜ್ ಗಳು ಮತ್ತು ರಿಂಗ್ ಟೋನ್ ಗಳು : ಮೊಬಿಕಾಪ್ ಸಿಮ್ ಕಾರ್ಡ್ ಬದಲಾವಣೆ ಪತ್ತೆ ಹಚ್ಚುವುದಲ್ಲದೇ ಕೀಪ್ಯಾಡ್ ಲಾಕ್ ಮಾಡಿ ಪೂರ್ವ ನಿಯೋಜಿತ ಮೆಸ್ಸೆಜನ್ನು ಸ್ಕ್ರೀನ್ ಮೇಲೆ ಡಿಸ್ಪ್ಲೇ ಮಾಡುವ ಮೂಲಕ ಫೋನ್ ಮೇಲೆ ಸ್ವಯಂ ದಾಳಿ ಮಾಡುತ್ತದೆ. ಅಲ್ಲದೆ ಮೊಬಿಕಾಪ್ ರಿಂಗ್ ಟೋನ್ ಅಕ್ಟಿವೇಟ್ ಆಗುವ ಮೂಲಕ ಕಳ್ಳನಿಗೆ ಪ್ರತಿ ಬಾರಿ ಕರೆ ಬಂದಾಗಲೂ ಅದು ಮೊಳಗುತ್ತದೆ.

2. ಮೊಬಿಕಾಪಿ :
ನಿಮ್ಮ ಕಾಂಟ್ಯಾಕ್ಟ್ ಗಳನ್ನು ಎಸ್ ಎಮ್ ಎಸ್ ಮೂಲಕ ಇಲ್ಲವೆ ಜಿ ಪಿ ಆರ್ ಎಸ್ ಮೂಲಕ ಆನ್ ಲೈನ್ ಸರ್ವರ್ ನಿಂದ ಪಡೆಯುವ ಸೌಲಭ್ಯ ಒದಗಿಸುವುದು ಮೊಬಿಕಾಪಿಯ ವಿಶೇಷತೆಯಾಗಿದೆ. ನಿಮ್ಮ ಫೊನ್ ಬುಕ್ ಕಳೆದುಹೋದರೂ ಸರಳವಾಗಿ ಕಾಂಟ್ಯಾಕ್ಟ್ ಗಳನ್ನು ಮತ್ತೆ ಪಡೆಯಬಹುದು. ಕಾಲ ಕಾಲಕ್ಕೆ ಬ್ಯಾಕ್ ಅಪ್ ಪಡೆಯಲು ಗಣಕ ಯಂತ್ರದಲ್ಲಿ ಅವಕಾಶ ಒದಗಿಸುತ್ತದೆ. ಸರ್ವರ್ ಗೆ ಬ್ಯಾಕ್ ಅಪ್ ಪಡೆಯಲು ಜಿ ಪಿ ಆರ್ ಎಸ್ ಅವಶ್ಯಕತೆಯೂ ಇಲ್ಲಾ. ಇದೊಂದು ಸಾಮಾನ್ಯ ಪ್ರಯೋಗವಾಗಿದ್ದು ಯವುದೇ ಜಿ ಎಸ್ ಎಮ್/ ಸಿ ಡಿ ಎಮ್ ಎ ಫೋನ್ ನಲ್ಲೂ ಅಳವಡಿಸಬಹುದು.

*ಎಸ್ ಎಮ್ ಎಸ್ ಮೂಲಕ ಬ್ಯಾಕ್ ಅಪ್ ಪಡೆಯುವುದು: ನೀವು ಬ್ಯಾಕ್ ಅಪ್ ಲಿಂಕ್ ಕ್ಲಿಕ್ಮಾಡಿದಾಗ ಅದರೊಂದಿಗೆ ಮೊಬಿಕಾಪಿ ನಿಮ್ಮ ಫೊನ್ ಬುಕ್ ನ್ನು ಸ್ಕ್ಯಾನ್ ಮಾಡುತ್ತದೆ. 3-4 ಎಸ್ ಎಮ್ ಎಸ್ ಗಳನ್ನು ಜೊತೆಗೂಡಿಸಿ ಆನ್ ಲೈನ್ ಸರ್ವರ್ ಗೆ ಕಳುಹಿಸುವುದು ವಿಶೇಷ. ಪ್ರಾಥಮಿಕವಾಗಿ ಸಂಪೂರ್ಣ ಬ್ಯಾಕ್ ಅಪ್ ಪಡೆದ ನಂತರ ಫೋನ್ ಬುಕ್ ನ ಪ್ರತಿ ಹೊಸ ಎಂಟ್ರಿಯನ್ನು 24 ಗಂಟೆಗಳೊಳಗೆ ಪರೀಕ್ಷಿಸಲಾಗುವುದು ಮತ್ತು ಬದಲಾವಣೆಯನ್ನು ಬಳಕೆದಾರರಿಂದ ಖಚಿತಪಡಿಸಿದ ನಂತರ ಸರ್ವರ್ ಗೆ ಬ್ಯಾಕ್ ಅಪ್ ಪಡೆಯಲಾಗುವುದು.
* ಜಿ ಪಿ ಆರ್ ಎಸ್ ಬಳಕೆಯಿಂದ ಬ್ಯಾಕ್ ಅಪ್ ಪಡೆಯುವುದು : ಮೊಬಿಕಾಪ್ ಮಾಹಿತಿಯ ಬ್ಯಾಕ್ ಅಪ್ ಪಡೆಯಲು ಜಿ ಪಿ ಆರ್ ಎಸ್ ಕೂಡಾ ಬಳಸುತ್ತದೆ.
* ಒನ್ ಟಚ್ ರಿಸ್ಟೋರ್ : ನಿಮ್ಮ ಫೊನ್ ಬುಕ್ ಅಳಿಸಿಹೋದಲ್ಲಿ ............ ಗೆ ಲಾಗ್ ಆನ್ ಮಾಡಿ, ನಿಮ್ಮ ಯುಸರ್ ನೇಮ್ ಮತ್ತು ಪಾಸ್ ವರ್ಡ್ ಎಂಟ್ರಿ ಮಾಡಿ ರಿಸ್ಟೋರ್ ಬಾಯ್ ಎಸ್ ಎಮ್ ಎಸ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಫೋನ್ ಬುಕ್ ಮರಳಿ ಪಡೆಯಿರಿ ಮತ್ತು ಮುಂದುವರೆಯಿರಿ

3. ಟಾಕ್ 007 :
ಟಾಕ್ 007 ನಿಮ್ಮ ಧ್ವನಿಮುದ್ರಣದ ಅವಶ್ಯಕತೆಗಳನ್ನು ನೀಗಿಸಬಲ್ಲದು. ಸರಳವಾದ ಹಾಟ್ ಕೀ ಪ್ರೆಸ್ ಮಾಡುವ ಮೂಲಕ ನಿಮಗೆ ಬೇಕೆಂದಾಗೆಲ್ಲಾ ವಾಯ್ಸ್ ಮೆಮೊಗಳನ್ನು ಮತ್ತು ಕರೆಗಳನ್ನುರೆಕಾರ್ಡ್ ಮಾಡಲು ಅವಕಾಶ ಕಲ್ಪಿಸುತ್ತದೆ. ಯಾಂತ್ರಿಕವಾಗಿಯೂ ಇದು ಕರೆಗಳನ್ನು ರೆಕಾರ್ಡ್ ಮಾಡಬಲ್ಲದು. ನೀವು ರೆಕಾರ್ಡ್ ಮಾಡಿದ ಕರೆಗಳನ್ನು ಬ್ರೌಸ್ ಮಾಡಬಹುದು, ಅಳಿಸಬಹುದು ಮತ್ತು ಟ್ರಾನ್ಸ್ ಫರ್ ಕೂಡಾ ಮಾಡಬಹುದು.

* ಬೀಪ್ ಸದ್ದಿಲ್ಲದೆ ಧ್ವನಿಮುದ್ರಣ : ಧ್ವನಿಮುದ್ರಣಕ್ಕೆ ಯಾವದೇ ತೊ೦ದರೆ ಇಲ್ಲದ೦ತೆ ಬೀಪ್ ಶದ್ಬವಿಲ್ಲದೆ ನಿಮಗೆ ಬರುವ ಹಾಗು ನೀವು ಮಾಡುವ ಕರೆಗಳ ಧ್ವನಿಮುದ್ರಣ ಮಾಡಬಹುದು.
* ಅನಿಯಮಿತ ಕರೆಗಳ ಧ್ವನಿಮುದ್ರಣ : ಫೋನ್ ನ ಇಲ್ಲವೆ ಮೆಮೊರಿ ಕಾರ್ಡನ ಮೆಮೊರಿ ಲಿಮಿಟ್ ಕಡಿಮೆ ಇದ್ದಾಗ ಮಾತ್ರ ಧ್ವನಿಮುದ್ರಣ ಮಾಡಲಾಗುವದಿಲ್ಲ.
*ಡಿಕ್ಟಾಫೊನ್ ಎಬಿಲಿಟಿ : ಕೇವಲ ಒ೦ದು ಬಟನ್ ಒತ್ತುವ ಮೂಲಕ ಮೀಟಿ೦ಗ್ ಮತ್ತು ಯಾವುದೇ ಸ೦ಭಾಷಣೆಯನ್ನು ಧ್ವನಿಮುದ್ರಣ ಮಾಡಬಹುದು.

4. ಮೊಬಿಮೇಟ್ :
ಮೊಬಿಮೇಟ್ ಹಲವು ಸೌಲಭ್ಯಗಳ ಆಗರ. ಇದು ಮೆಸೆಜಿಂಗ್ ಅಸಿಸ್ಟಂಟಾಗಿ ಯಾಂತ್ರಿಕಕವಾಗಿ ಕರೆಗಳಿಗೆ ಉತ್ತರ ಕೊಡುವ ಕಾರ್ಯ, ಧ್ವನಿ ಮೂಲಕ ಉತ್ತರ ಕೊಡುವ ಕಾರ್ಯ, ಯಾಂತ್ರಿಕವಾಗಿ ಎಸ್ ಎಂ ಎಸ್ ಕಳಿಸುವ ಕಾರ್ಯ, ಯಾವುದೇ ಫೊನ್ ನಂಬರ್ ನ್ನು ಬ್ಲ್ಯಾಕ್ ಲಿಸ್ಟ್ ನಲ್ಲಿ ಹಾಕುವ ಕಾರ್ಯ ಮತ್ತು ಧ್ವನಿಮುದ್ರಣ ಕಾರ್ಯ ನಿರ್ವಹಿಸುತ್ತದೆ.

* ಆನ್ಸರಿಂಗ್ ಮಶಿನ್ :
ನಿಮ್ಮ ಯಾಂತ್ರಿಕ ಉತ್ತರಗಳನ್ನು ಫೋನ್ ಗೆ ಸೇರಿಸಬಹುದು ಮತ್ತು ನಿಮ್ಮ ಸ್ವಯಂ ಮೆಮೊರಿಯಲ್ಲಿ ಸೇವಾ ಸಹಾಯಕರ ಧ್ವನಿಯ ರಹಿತವಾಗಿ ವಾಯ್ಸ್ ಮೆಸೇಜ್ ಗಳನ್ನು ಸೇರಿಸಿಕೊಳ್ಳಬಹುದು.
* ಎಸ್ ಎಮ್ ಎಸ್ ರೆಸ್ಪಾನ್ಸ್: ಯಾರ ಕರೆಗಳಿಗೆ ಉತ್ತರಿಸಲಾಗಿಲ್ಲವೊ ಅವರಿಗೆ ನಿಮ್ಮ ಸ್ವಂತ ಹಾಗೂ ಪೂರ್ವನಿರ್ಧರಿತ ಎಸ್ ಎಮ್ ಎಸ್ ಕಳುಹಿಸಬಹುದು
* ಬ್ಲ್ಯಾಕ್ ಲಿಸ್ಟ್ : ಮೊದಲೇ ಉಲ್ಲೇಖಿಸಲಾದ ನಂಬರ್ ಗಳಿಗೆ ಕರೆ ಮಾಡುವುದನ್ನು ತಪ್ಪಿಸಬಹುದು.

ನಿಮ್ಮ ನೆಚ್ಚಿನ ಮೊಬೈಲ್ ಫೊನ್ ನನ್ನು ಸಂಪೂರ್ಣ ಕಾಪಾಡುವ ಈ ಎಲ್ಲಾ ಸೌಲಭ್ಯಗಳು ಶೀಘ್ರದಲ್ಲೇ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲಿವೆ. ಈ ಸೌಲಭ್ಯಗಳನ್ನು ಪಡೆಯುವ ಮೂಲಕ ನೀವು ಹೆಮ್ಮೆಯಿಂದ ಬೀಗುವಿರಲ್ಲದೆ ನಿಮ್ಮ ಫೊನ್ ನನ್ನು ಕಳೆದುಕೊಳ್ಳುವ ಭಯವಿಲ್ಲದೆ ನಿಶ್ಚಿಂತರಾಗಿ ಸಂಪೂರ್ಣ ಬಳಸಬಹುದು. ಈ ಹಿಂದೆ ಮೊಬೈಲ್ ಫೊನ್ ಮತ್ತು ಮಾಹಿತಿಯನ್ನು ಕಳೆದುಕೊಂಡವರು ಆನ್ ವರ್ಡ್ ಮೊಬಿಲಿಟಿ ಸಂಪರ್ಕಿಸಿ ಅವರ ಸೇವೆಯ
ಲಾಭ ಪಡೆಯಬಹುದು ಎಂದು ಸಂಸ್ಥೆಯ ಮಾರಾಟ ವಿಭಾಗದಮುಖ್ಯಸ್ಥ ಬಾಬು ಹೇಳುತ್ತಾರೆ

ಅಭಿವೃದ್ಧಿ ಹೊಂದುತ್ತಿರುವ ಹೊಸ ಪೀಳಿಗೆಯ ಕಂಪೆನಿಯಾದ ಆನ್‌ವರ್ಡ್ ಮೊಬಿಲಿಟಿ, ಮೊಬೈಲ್ ಆರೋಗ್ಯ ಸೇವೆಯ ಕುರಿತು ಹೊಸ ತರಹದ ಪರಿಹಾರವನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ. ದೂರದ ಗ್ರಾಮಸ್ಥರಿಗೆ ವೈದ್ಯಕೀಯ ಸೇವೆ ಒದಗಿಸುವುದು, ಅವಶ್ಯಕತೆಯಿರುವ ವಿದ್ಯಾರ್ಥಿಗಳಿಗೆ ವಿದ್ಯಾದಾನ, ತಾಯ್ನೆಲದ ರಕ್ಷಣೆಗೆ ಮೊಬೈಲ್ ಹೊಮ್ ಲ್ಯಾಂಡ್ ಸೆಕ್ಯುರಿಟಿ ಒದಗಿಸುವುದು ಇವರ ಉದ್ದೇಶ. ಮೊಬೈಲ್ ಸಾಫ್ಟವೇರ್ ಕ್ಷೇತ್ರಕ್ಕೆ ಒಂದು ಭರವಸೆಯ ಭವಿಷ್ಯವನ್ನು ನೀಡುವ ಆಶಾಭಾವನೆ ಈ ಕಂಪೆನಿ ಹೊಂದಿದೆ ಮತ್ತು ವಿಶ್ವದ ಅತಿದೊಡ್ಡ ಬಿನ್ ಸಲೇಮ್ ಇರ್ವಹಿತ ಅರಬ್ ಕಂಪನಿ ಬಿ ಎಸ್ ಟೆಕ್ನಾಲಜಿಯೊಂದಿಗೆ ಜಂಟಿ ಉದ್ಯೋಗದ ಸಹಭಾಗಿತ್ವ ಇದ್ದಾಗ್ಯೂ ಇತ್ತೀಚೆಗಷ್ಟೇ ತನ್ನ ಪ್ರಥಮ ಕೊಡುಗೆಯಾದ ಮೊಬಿಕಾಪ್ ಅನ್ನು ಯುರೋಪ್, ಮಧ್ಯ ಪ್ರಾಚ್ಯ, ಅಫ್ರಿಕಾ ಮತ್ತು ರಷಿಯಾದಲ್ಲಿ ಬಿಡುಗಡೆಗೊಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- ದೂರವಾಣಿ : +919986 777612

Tuesday, July 7, 2009

ಪಾಕ್‌ನಲ್ಲಿ ಡ್ರೋನ್ ದಾಳಿಗೆ 13 ಉಗ್ರರ ಬಲಿ/

ಇಸ್ಲಾಮಾಬಾದ್: ದಕ್ಷಿಣ ವಜಿರಿಸ್ತಾನದ ತಾಲಿಬಾನ್ ಮುಖಂಡ ಬೈತುಲ್ಲಾ ಮೆಹಸೂದ್ ಭದ್ರಕೋಟೆಯ ತಾಲಿಬಾನ್ ಅಡಗುತಾಣದ ಮೇಲೆ ಅಮೆರಿಕ ಡ್ರೋನ್ ವಿಮಾನಗಳು ಕ್ಷಿಪಣಿ ದಾಳಿ ನಡೆಸಿದ್ದರಿಂದ 13 ಉಗ್ರಗಾಮಿಗಳು ಮಂಗಳವಾರ ಹತರಾಗಿದ್ದಾರೆ.ಡ್ರೋನ್ ದಾಳಿ ನಡೆದ ದಕ್ಷಿಣ ವಜಿರಿಸ್ತಾನದ ಲಾಢಾ ಮೆಹಸೂದ್ ಭದ್ರನೆಲೆಯೆಂದು ಹೇಳಲಾಗಿದೆ.ಡ್ರೋನ್ ಎರಡು ಕ್ಷಿಪಣಿಗಳನ್ನು ಉಡಾಯಿಸಿದ್ದರಿಂದ ಉಗ್ರರ ಅಡಗುತಾಣ ನಾಶವಾಯಿತೆಂದು ಟಿವಿ ಸುದ್ದಿ ಚಾನೆಲ್‌ಗಳು ವರದಿ ಮಾಡಿವೆ. ತಾಲಿಬಾನಿಗಳು ದಾಳಿಗೊಳಗಾದ ಪ್ರದೇಶ ಸುತ್ತುವರಿದು ಜನರು ಅಡಗುತಾಣಕ್ಕೆ ಸಮೀಪಿಸಿದಂತೆ ತಡೆದರು. ಪಾಕಿಸ್ತಾನದ ಸೇನೆಯು ಸ್ವಾತ್ ಕಣಿವೆಯಲ್ಲಿ ಕಾರ್ಯಾಚರಣೆ ಮುಗಿಸಿ ಮೆಹ್ಸೂದ್ ಮತ್ತು ಅವನ ಜಾಲದ ವಿರುದ್ಧ ದಕ್ಷಿಣ ವಜಿರಿಸ್ತಾನದಲ್ಲಿ ಕಾರ್ಯಾಚರಣೆ ಮುಂದುವರಿಸಿದೆ.

ಸಂಪೂರ್ಣ ನಿರಾಶದಾಯಕ ಬಜೆಟ್: ಯಡಿಯೂರಪ್ಪ/ബജറ്റ്‌: യെടിയുരപ്പ

ಬೆಂಗಳೂರು : ಪ್ರಣಬ್ ಮುಖರ್ಜಿ ಸಲ್ಲಿಸಿರುವ ಕೇಂದ್ರದ ಬಜೆಟ್ ಸಂಪೂರ್ಣ ನಿರಾಶದಾಯಕವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಆರ್ಥಿಕ ಹಿಂಜರಿತದಿಂದ ಕಂಗಾಲಾಗಿರುವ ರಾಷ್ಟ್ರದ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಪೂರಕವಾಗಬಲ್ಲ ಪ್ರಬಲವಾದ ಸುಧಾರಣ ಕ್ರಮಗಳನ್ನು ನೀಡುವಲ್ಲಿ ಬಜೆಟ್ ವಿಫಲವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನಕ್ಕೆ ಹೆಸರಾದ ಬೆಂಗಳೂರು ನಗರಕ್ಕೆ ಮೂಲಭೂತ ಸೌಲಭ್ಯ ನೀಡುವಂತೆ ಕೋರಿದ್ದೇವು. ಆದರೆ ಕೇಂದ್ರ ಇದನ್ನು ಮನ್ನಣೆ ನೀಡಿಲ್ಲ. ಮುಂಬೈ ಮತ್ತು ಪಶ್ಚಿಮ ಬಂಗಾಳಕ್ಕೆ ಪ್ರವಾಹ ನಿರ್ವಹಣೆಗಾಗಿ ವಿಶೇಷ ಅನುದಾನ ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕದ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಅವರು ದೂರಿದ್ದಾರೆ.
ಅಲ್ಲದೆ, ಸುಮಾರು 1.20 ಕೋಟಿ ಜನರಿಗೆ ಉದ್ಯೋಗ ಒದಗಿಸುವ ಮಾತುಗಳನ್ನಾಡಿರುವ ಹಣಕಾಸು ಸಚಿವರು ಉದ್ಯೋಗ ಸೃಜನೆಯ ಮಾರ್ಗಗಳನ್ನು ಪ್ರಕಟಿಸಿಲ್ಲ. ಗ್ರಾಮೀಣ ವಸತಿಗೆ ಕೇವಲ ಎರಡು ಸಾವಿರ ಕೋಟಿ ರೂಪಾಯಿ ಮತ್ತು ತ್ವರಿತ ನೀರಾವರಿ ನೆರವು ಯೋಜನೆಗಳಿಗೆ ಕಡಿಮೆ ಹಣ ಹಂಚಿಕೆ ಮಾಡಿರುವುದು ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಜೆಟ್ ಬಡವರ ಮುಂಗಡ ಪತ್ರ: ದೇಶಪಾಂಡೆ/Budget

ಬೆಂಗಳೂರು : ಯುಪಿಎ ಸರ್ಕಾರ ಇಂದು ಮಂಡಿಸಿದ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕೇಂದ್ರದ ಬಜೆಟ್ ಪತ್ರ ಬಡವರ ಮುಂಗಡ ಪತ್ರವಾಗಿದೆ ಎಂದು ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವರ್ಗಗಳಿಗೂ ಅನುಕೂಲವಾಗುವಂತಹ ಪ್ರಗತಿಪರ ಬಜೆಟ್‌ನ್ನು ಕೇಂದ್ರ ಸರ್ಕಾರ ಮಂಡಿಸಿರುವುದು ಅಭಿನಂದನಾರ್ಹ ಎಂದು ತಿಳಿಸಿದ್ದಾರೆ.ಬಂಡವಾಳ ಹೂಡಿಕೆದಾರರಿಗೆ ಸೇರಿದಂತೆ ಯಾರಿಗೂ ಹೊರೆಯಾಗದಂತೆ ಶೇ.9ರ ಜಿಡಿಪಿ ಗುರಿಯನ್ನು ತಲುಪಲು ಮಂಡಿಸಿರುವ ಬಜೆಟ್ ಅನ್ನು ಪ್ರತಿಪಕ್ಷಗಳು ಸ್ವಾಗತಿಸಬೇಕೆಂದು ಅವರು ಹೇಳಿದ್ದಾರೆ.ದೇಶದ ಬಡವರಿಗೆ ಆಹಾರ ಭದ್ರತೆ ಒದಗಿಸಲು ಕೇವಲ 3 ರೂ.ಗೆ ಒಂದು ಕೆಜಿ ಅಕ್ಕಿ ಅಥವಾ ಗೋಧಿಯಂತೆ ಬಿಪಿಎಲ್ ಕುಟುಂಬಗಳಿಗೆ 25 ಕೆಜಿ ಅಕ್ಕಿ ಅಥವಾ ಗೋಧಿ ನೀಡಲು ನಿರ್ಧರಿಸಿ ಯುಪಿಎ ಸರ್ಕಾರ ಈ ಹಿಂದೆ ನೀಡಿದ ಭರವಸೆಯನ್ನು ಈಡೇರಿಸಿದೆ ಎಂದು ಅವರು ತಿಳಿಸಿದ್ದಾರೆ.

ಕರಾವಳಿಯಲ್ಲಿ ಭಾರೀ ಮಳೆ, ಶಾಲೆಗಳಿಗೆ ರಜೆ/Mangalore Rain

ಕಾಸರಗೋಡು : ಕರ್ನಾಟಕ ಕರಾವಳಿ ಪ್ರದೇಶಗಳಲ್ಲಿ ಎಡಬಿಡದೇ ಸುರಿದ ಮಳೆಯಿಂದಾಗಿ ಸೋಮವಾರ ವಸತಿ ಪ್ರದೇಶಗಳು ಮತ್ತು ಬತ್ತದ ಗದ್ದೆಗಳು ಜಲಾವೃತವಾಗಿವೆ. ಮತ್ತಷ್ಟು ಮಳೆ ಸುರಿಯುವ ನಿರೀಕ್ಷೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಬೆಳ್ತಂಗಡಿ ತಾಲೂಕಿನಲ್ಲಿ ಶಾಲೆಗಳಿಗೆ ಬುಧವಾರ ಕೂಡ ರಜೆ ಘೋಷಿಸಲಾಗಿದೆಯೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಾಮೇಗೌಡ ತಿಳಿಸಿದ್ದಾರೆ.ಕಳೆದ ಮುಂಗಾರಿನಲ್ಲಿ ಉಳೈಬೆಟ್ಟುನಲ್ಲಿ ಬಸ್ ಅಪಘಾತದಿಂದ 11 ಮಕ್ಕಳು ಜೀವತೆತ್ತ ದುರಂತದ ಹಿನ್ನೆಲೆಯಲ್ಲಿ ಈ ವರ್ಷ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆಯೆಂದು ಹೇಳಿದ್ದಾರೆ. ಬಂಟವಾಳದಲ್ಲಿ ಕಳೆದ 24 ಗಂಟೆಗಳಲ್ಲಿ 114 ಮಿಲಿಮೀಟರ್ ಮಳೆಯಾಗಿದ್ದರೆ, ಬೆಳ್ತಂಗಡಿಯಲ್ಲಿ 102.3 ಮಿಮೀ, ಮಂಗಳೂರು ತಾಲೂಕಿನಲ್ಲಿ 98.2 ಮಿಮೀ, ಉಪ್ಪಿನಂಗಡಿಯಲ್ಲಿ 93 ಮಿಲಿಮೀಟರ್ ಮತ್ತು ಬಜ್ಪೆ ವಿಮಾನನಿಲ್ದಾಣದಲ್ಲಿ 88.2 ಮತ್ತು ಸುಳ್ಯದಲ್ಲಿ 59.2 ಮಿಮೀ ಮಳೆಯಾಗಿದೆ. ನೇತ್ರಾವತಿ ನದಿಯ ಮಟ್ಟ ಬಂಟವಾಳದಲ್ಲಿ 4.8 ಮೀಟರ್‌ನಿಂದ 5.5 ಮೀಟರ್‌ಗಳಿಗೆ ಸೋಮವಾರ ಏರಿಕೆಯಾಗಿದೆ. ಅಪಾಯದ ಮಟ್ಟ 8.5 ಮೀಟರ್ ಎನ್ನಲಾಗಿದೆ.

ಉಪ್ಪುಂದ ಬಳಿ ಅಪಘಾತ: 2 ಮಹಿಳೆಯರ ಸಹಿತ 4 ಬಲಿ/Uppunda 4 death

ಕಾಸರಗೋಡು : ಉಡುಪಿ ಜಿಲ್ಲೆಯ ಉಪ್ಪುಂದ-ಅರೆಹೊಳೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಅದಿರುಲಾರಿ ಮತ್ತು ಆಟೋರಿಕ್ಷಾ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಮಂಗಳವಾರ ಸಂಭವಿಸಿದೆ.ಅದಿರು ಲಾರಿಯು ಈ ನಾಲ್ವರು ಪ್ರಯಾಣಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಎರಡೂ ವಾಹನಗಳು ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ತೊರೆಗೆ ಬಿದ್ದವು. ಮೃತಪಟ್ಟವರನ್ನು ಲಕ್ಷ್ಮಿ ಗಾಣಿಗ, ವಂದನಾ, ಕೇಶವ ಮತ್ತು ರಿಕ್ಷಾ ಚಾಲಕ ಶಂಕರ ದೇವಾಡಿಗ ಎಂದು ಗುರುತಿಸಲಾಗಿದೆ. ಎಲ್ಲ ನಾಲ್ಕು ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.ಗಾಯಾಳುಗಳನ್ನು ಕುಂದಾಪುರದ ಚಿನ್ಮಯ ಆಸ್ಪತ್ರೆಗೆ ಸೇರಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಅಪಘಾತ ಸಂಭವಿಸಿದೆಯೆಂದು ವರದಿಯಾಗಿದ್ದು, ಗಾಯಗೊಂಡರಲ್ಲಿ ವಾಣಿ ಎಂಬಾಕೆಯ ಸ್ಥಿತಿ ಗಂಭೀರವಾಗಿದೆ.ರಾಷ್ಟ್ರ್ರೀಯ ಹೆದ್ದಾರಿಯಲ್ಲಿ ವೇಗವಾಗಿ ವಾಹನಗಳ ಚಾಲನೆಯಿಂದ ಇತ್ತೀಚೆಗೆ ಅನೇಕ ಅಪಘಾತಗಳು ಸಂಭವಿಸಿದ್ದು ಅನೇಕ ಮಂದಿ ಜೀವತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಅಪಘಾತ ನಡೆದಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Monday, July 6, 2009

ರಿಯಾನ ನಾಪತ್ತೆ ಪ್ರಕರಣ/Riyana

ಕಾಸರಗೋಡು: ರಿಯಾನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ತಾಯಿ ಫೌಸಿಯಾ ಮತ್ತು ಪ್ರಕರಣದ ಬಗ್ಗೆ ಧ್ವನಿ ಎತ್ತಿದ ಜನಪರ ವೇದಿಕೆ ಹೈಕೋರ್ಟುಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದೆ.ನಾಯಮ್ಮಾರ್ ಮೂಲೆಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ರಿಯಾನ ಮೇ 18ರಂದು ನಾಪತ್ತೆಯಾಗಿದ್ದಳು. ವಿಶೇಷ ತರಗತಿ ಇದೆ ಎಂದು ಮನೆಯಿಂದ ಶಾಲೆಗೆ ಹೋದ ಆಕೆ ಮತ್ತೆ ಮನೆಗೆ ವಾಪಾಸಾಗಿಲ್ಲ. ಕಳೆದ 49 ದಿನಗಳಿಂದ ರಿಯಾನ ಕಾಣೆಯಾಗಿದ್ದರೂ ಪೊಲೀಸ್ ತನಿಖೆ ಚುರುಕುಕೊಂಡಿಲ್ಲ. ಆದ್ದರಿಂದ ನ್ಯಾಯಾಲಯ ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ರಿಯಾನಳ ಪ್ರಾಣಾಪಾಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಕಾಸರಗೋಡಿನಲ್ಲಿ ಈ ರೀತಿ ಹಲವಾರು ಬಾಲಕಿಯರು ನಾಪತ್ತೆಯಾಗುತ್ತಿದ್ದು, ಸಫಿಯಾ ಕೊಲೆ ಪ್ರಕರಣವನ್ನು ಇಲ್ಲಿ ಸ್ಮರಿಸಬಹುದು.

ಪನ್ನಿಪ್ಪಾರೆ ಲೈಂಗಿಕ ಜಾಲ : ಗಣ್ಯರು ಶಾಮೀಲು/Pannippare

ಕಾಸರಗೋಡು: ಇಲ್ಲಿನ ಪನ್ನಿಪ್ಪಾರೆಯ ಹದಿಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಗೆ ಸಮೀಪದ ನಾಯಮ್ಮಾರ್ಮೂಲೆ ಮತ್ತು ಚೆರ್ಕಳದ ಕೆಲವು ಗಣ್ಯರು ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದಲ್ಲಿ ಕೆಲವು ರಾಜಕಾರಣಿಗಳ ಸಹಿತ ಗಣ್ಯರಿಗೂ ಸಂಬಂಧವಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು 13 ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇವರಲ್ಲಿ ನಾಲ್ವರು ಆರೋಪಿಗಳ ಬಂಧನ ಸೋಮವಾರ ಸಂಜೆ ದೃಢೀಕರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಇತ್ತೀಚೆಗೆ ಬಂಧನಕ್ಕೊಳಗಾದ ಚೆಟ್ಟುಂಕುಳಿಯ ಅಬ್ದುಲ್ ನಾಸರ್, ಸಿ.ದಾವೂದ್ ಎಂಬ ಆರೋಪಿಗಳು ಬಾಲಕಿಗೆ ಪ್ರೀತಿ ನಟಿಸಿ, ಬಳಿಕ ಲೈಂಗಿಕ ಕಿರುಕುಳ ನೀಡಿ ಲೈಂಗಿಕ ದಂಧೆಗೆ ಬಳಸಿಕೊಂಡಿದ್ದಾರೆ. ಇತ್ತೀಚೆಗೆ ರಿಯಾನ ಎಂಬ ಬಾಲಕಿ ನಾಪತ್ತೆ ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಜಿಲ್ಲೆಯ ಲೈಂಗಿಕ ದಂಧೆಯ ಜಾಲದ ಜಾಡು ಲಭಿಸಿದೆ. ಗಣ್ಯರ ಮಾಹಿತಿ ಬಹಿರಂಗಪಡಿಸದಂತೆ ಪೊಲೀಸರಿಗೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿದುಬಂದಿದೆ.

Sunday, July 5, 2009

ಲಿಬಾರ್ಹಾನ್ ವರದಿ ಅಪೂರ್ಣ: ಪೇಜಾವರ ಶ್ರೀ ಅಸಮಾಧಾನ/Liberhan Report;Pejavara Says...

ಬೆಂಗಳೂರು: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಲಿಬರ್ಹಾನ್ ಆಯೋಗ ಕೇಂದ್ರಕ್ಕೆ ಸಲ್ಲಿಸಿರುವ ವರದಿ ಬಗ್ಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಲಿಬರ್ಹಾನ್ ಆಯೋಗವು ಸಂಪೂರ್ಣ ಮಾಹಿತಿ ಪಡೆಯದೇ ವರದಿ ಸಿದ್ಧಪಡಿಸಿದೆ. ಜೊತೆಗೆ ವರದಿ ಪೂರ್ಣವಾದ ಸತ್ಯವನ್ನು ಹೇಳುತ್ತಿಲ್ಲ ಎಂದು ಅವರು ನಗರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಮಸೀದಿ ಒಡೆಯುತ್ತಿದ್ದ ಘಟನೆಯನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇದಕ್ಕೂ ಹಿಂದಿನ ದಿನ ನಡೆದ ಗುಪ್ತ ಸಭೆಯಲ್ಲೂ ಪಾಲ್ಗೊಂಡಿದ್ದೆವು. ಆದರೆ ಸಭೆಯಲ್ಲಿ ಮಸೀದಿ ಒಡೆಯುವ ಬಗ್ಗೆ ಯಾವುದೇ ಪ್ರಸ್ತಾಪ ಬಂದಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಅಲ್ಲದೆ, ಆ ಬಳಿಕ ದೇಶದೆಲ್ಲೆಡೆಯಿಂದ ಬಂದಿದ್ದ ಕರಸೇವಕರು ಹೋಮ, ಭಜನೆಯಷ್ಟೇ ಮಾಡಿದ್ದರು. ನಾನು ಅದನ್ನು ಗಮನಿಸಿದ್ದೆ. ಆದರೆ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಯಿತು. ಕಣ್ಣ ಮುಂದೆ ನಡೆಯುತ್ತಿದ್ದ ಘಟನೆಯನ್ನು ತಡೆಯಲು ಪ್ರಯತ್ನ ಪಟ್ಟವರಲ್ಲಿ ನಾನು ಒಬ್ಬನಾಗಿದ್ದೆ. ಆದರೆ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ವಿಫಲವಾಗಿದ್ದೆವು ಎಂದು ಅವರು ವಿವರಿಸಿದರು.ಇಷ್ಟೆಲ್ಲಾ ನಡೆದರೂ ಲಿಬರ್ಹಾನ್ ಒಮ್ಮೆಯೂ ತಮ್ಮನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿಲ್ಲ. ಘಟನೆಯನ್ನು ಕಣ್ಣಾರೆ ಕಂಡವರ ಅಭಿಪ್ರಾಯವನ್ನೇ ಪಡೆಯದೆ ವರದಿ ಪೂರ್ಣಗೊಳಿಸುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರು-ಮಂಗಳೂರು ನಡುವೆ ಹಗಲು ರೈಲು/Day Train M'lore

ಬೆಂಗಳೂರು: ಬೆಂಗಳೂರು ಮತ್ತು ಮಂಗಳೂರು ನಡುವೆ ಸಕಲೇಶಪುರ ಮಾರ್ಗವಾಗಿ ಜುಲೈ ಕೊನೆಯಲ್ಲಿ ಹಗಲಿನ ರೈಲಿಗೆ ಚಾಲನೆ ನೀಡಲಾಗುತ್ತಿದೆ. ಇದಕ್ಕೆ ವೇಳಾಪಟ್ಟಿ ಮತ್ತು ಪ್ರಯಾಣದರವನ್ನು ನಿಗದಿ ಮಾಡುವ ಪ್ರಕ್ರಿಯೆ ಮತ್ತು ಅಗತ್ಯ ಅನುಮತಿ ಪಡೆಯುವ ಪ್ರಕ್ರಿಯೆ ಆರಂಭಿಸಲಾಗಿದೆಯೆಂದು ರೈಲ್ವೆ ಖಾತೆ ರಾಜ್ಯಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. ಬೆಂಗಳೂರಿಂದ ಬೆಳಿಗ್ಗೆ ನಿರ್ಗಮಿಸುವ ರೈಲು ಸಂಜೆಯ ವೇಳೆಗೆ ಮಂಗಳೂರು ತಲುಪುತ್ತದೆಂದು ಹೇಳಲಾಗಿದೆ. ಬೆಂಗಳೂರು ಮತ್ತು ಮೈಸೂರು ನಡುವೆ ದ್ವಿಗುಣ ರೈಲ್ವೆ ಮಾರ್ಗ ನಿರ್ಮಾಣಕ್ಕೆ ತಾಂತ್ರಿಕ ತೊಂದರೆಗಳ ಹಿನ್ನೆಲೆಯಲ್ಲಿ ಇನ್ನೂ ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ.ಬೆಂಗಳೂರು-ರಾಮನಗರಂ ನಡುವೆ ಯೋಜನೆ ದಾಖಲೆಯ ಕಾಲದಲ್ಲಿ 80 ಕೋಟಿ ವೆಚ್ಚದಲ್ಲಿ ಮುಗಿದಿದ್ದರೂ, ಭೂಸ್ವಾಧೀನ ಮತ್ತು ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ಸೇತುವೆ ನಿರ್ಮಾಣ ಮುಂತಾದ ಸಮಸ್ಯೆಗಳಿಂದ 280 ಕೋಟಿ ರೂ. ಕಾಮಗಾರಿ ವಿಳಂಬವಾಗಿದೆಯೆಂದು ಮುನಿಯಪ್ಪ ತಿಳಿಸಿದರು.

ಜೆಡಿಎಸ್‌ನಿಂದ ವೀರೇಂದ್ರ ಕುಮಾರ್ ಉಚ್ಚಾಟನೆ/VeerendraKumar Dismissed Frm JDS

ನವದೆಹಲಿ: ಕೇರಳ ಜೆಡಿಎಸ್ ಘಟಕದ ಅಧ್ಯಕ್ಷ ವೀರೇಂದ್ರ ಕುಮಾರ್ ಅವರನ್ನು ಭಾನುವಾರ ಉಚ್ಚಾಟಿಸುವ ಮ‌ೂಲಕ ಜೆಡಿಎಸ್ ಘಟಕದಲ್ಲಿ ಸ್ಫೋಟಿಸಿದ ಬಂಡಾಯ ತಾರ್ಕಿಕ ಅಂತ್ಯ ಮುಟ್ಟಿದೆ. ದೆಹಲಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ವೀರೇಂದ್ರ ಕುಮಾರ್ ಅವರನ್ನು ಉಚ್ಚಾಟಿಸುವ ನಿರ್ಧಾರವನ್ನು ಪ್ರಕಟಿಸಿದರು.ಪಕ್ಷದ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿ ಬಂಡಾಯ ಸಾರಿದ್ದಕ್ಕಾಗಿ ಅವರನ್ನು ಉಚ್ಚಾಟಿಸಲಾಗಿದೆಯೆಂದು ದೇವೇಗೌಡರು ತಿಳಿಸಿದರು. ಜೆಡಿಎಸ್ ಕೇರಳ ಘಟಕವನ್ನು ಉಚ್ಚಾಟಿಸಿರುವ ದೇವೇಗೌಡರು ಅದರ ಬದಲಿಗೆ ನೂತನ ಘಟಕವನ್ನು ಅಸ್ತಿತ್ವಕ್ಕೆ ತಂದಿದ್ದಾರೆ.ಕೇರಳ ಘಟಕದ ನೂತನ ಅಧ್ಯಕ್ಷರನ್ನಾಗಿ ಎನ್.ಎಂ.ಜೋಸೆಫ್ ಅವರನ್ನು ನೇಮಿಸಲಾಗಿದ್ದು, ಉಪಾಧ್ಯಕ್ಷರನ್ನಾಗಿ ರಾಮಚಂದ್ರ ಕುರುಪ್ ಮತ್ತು ಜಾನ್ ಕುಟ್ಟಿ ಅವರನ್ನು ನೇಮಿಸಲಾಗಿದೆ. ಜೆಡಿಎಸ್ ಕೇರಳದ ಎಡಪಕ್ಷದ ಜತೆ ಮೈತ್ರಿಗೆ ವೀರೇಂದ್ರ ಕುಮಾರ್ ವಿರೋಧ ವ್ಯಕ್ತಪಡಿಸಿದ್ದರಿಂದ ಭಿನ್ನಾಭಿಪ್ರಾಯ ಸ್ಫೋಟಿಸಿ ಕೆಲವು ದಿನಗಳಿಂದ ನಡೆದ ಮುಸುಕಿನ ಗುದ್ದಾಟ ವೀರೇಂದ್ರ ಕುಮಾರ್ ಉಚ್ಚಾಟನೆಯಲ್ಲಿ ಮುಕ್ತಾಯ ಕಂಡಿದೆ.

ಮುಂಬೈ ಭಾರೀ ಮಳೆಗೆ 2 ಬಲಿ ; ಜನಜೀವನ ಅಸ್ತವ್ಯಸ್ತ /Rain in Mumbai, 2 death

ಮುಂಬೈ: ಶನಿವಾರ ಸುರಿದ ಭಾರೀ ಮಳೆಯಿಂದಾಗಿ ವಿಮಾನ, ರೈಲುಗಳ ಪ್ರಯಾಣದಲ್ಲೂ ವ್ಯತ್ಯವುಂಟಾಗಿದ್ದು, ರಸ್ತೆಗಳು, ಸುರಂಗ ಮಾರ್ಗಗಳು ಜಲಾವೃತ್ತವಾದ ಕಾರಣ ಮುಂಬೈ ಜನಜೀವನ ಅಸ್ತವ್ಯಸ್ತಗೊಂಡಿದೆ. ಜತೆಗೆ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ವರದಿಗಳೂ ಬಂದಿವೆ.2005ರ ಭಯಾನಕ ಚಿತ್ರಣವನ್ನು ಮರುಕಳಿಸುವ ಸೂಚನೆ ಮುಂಬೈಯಲ್ಲಿ ಕಂಡು ಬರುತ್ತಿದ್ದು ಎಲ್ಲೆಡೆ ಮಳೆ ನೀರು ನಿಂತು ಕೃತಕ ನೆರೆಯೇ ಸೃಷ್ಟಿಯಾಗಿದೆ. ಹಲವು ಕಡೆ ರೈಲುಗಳನ್ನು ನೆರೆಯ ಕಾರಣ ತಡೆ ಹಿಡಿಯಲಾಯಿತು. ವಾತಾವರಣ ಪೂರಕವಾಗಿಲ್ಲದ ಕಾರಣ ಕೆಲ ವಿಮಾನಗಳ ಹಾರಾಟದಲ್ಲೂ ವ್ಯತ್ಯಯವಾಗಿದೆ. ರಸ್ತೆಯಲ್ಲಿ ವಾಹನಗಳು ಮುಳುಗಡೆಯಾದ ದೃಶ್ಯಗಳು ಸಾಮಾನ್ಯವೆಂಬಂತೆ ಶನಿವಾರ ಕಂಡು ಬಂದಿದೆ.ಗೋವಂಡಿಯಲ್ಲಿ ವಿದ್ಯುತ್ ಆಘಾತದಿಂದ 40ರ ಹರೆಯದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರೆ, 10ರ ಬಾಲಕನೋರ್ವ ತೀವ್ರ ಗಾಯಗೊಂಡ ಘಟನೆಯೂ ವರದಿಯಾಗಿದೆ. ಮತ್ತೊಬ್ಬರ ಮೈ ಮೇಲೆ ಕಾಂದಿವಿಲಿಯಲ್ಲಿ ಮರ ಬಿದ್ದು ಮೃತರಾಗಿದ್ದಾರೆ.ಭಾನುವಾರವೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆಗಳಿದ್ದು, ಸುರಕ್ಷಿತ ಜಾಗಗಳನ್ನು ಸೇರಿಕೊಳ್ಳುವಂತೆ ಸೂಚನೆ ನೀಡಲಾಗುತ್ತಿದೆ. ಮಳೆ ಅಪಾಯಮಟ್ಟವನ್ನು ತಲುಪುವಂತಿದ್ದರೆ ಜನರ ರಕ್ಷಣೆಗಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಅಶೋಕ್ ಚೌಹಾನ್ ತಿಳಿಸಿದ್ದಾರೆ.ಕೊಲಾಬದಲ್ಲಿ 102 ಎಂಎಂ, ಸಾಂತಾಕ್ರೂಸ್‌ನಲ್ಲಿ 202 ಎಂಎಂ ಮಳೆ ಬಂದ ವರದಿಯಾಗಿದೆ. ಒಟ್ಟಾರೆ ಮುಂಬೈ ನಗರದ ಮಳೆ 126.47 ಮಿ.ಮಿ. ಎಂದು ಮೂಲಗಳು ತಿಳಿಸಿವೆ.ಮಳೆಯಿಂದಾಗಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದ ಸಮುದ್ರ ಸೇತುವೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ನಗರದಲ್ಲಿ ನೆರೆ ಪರಿಸ್ಥಿತಿಯು ನಿಯಂತ್ರಣದಲ್ಲಿದ್ದು, ಪೊಲೀಸ್ ಮತ್ತು ನಾಗರಿಕ ಸಂಸ್ಥೆಗಳು ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿವೆ ಎಂದೂ ಚೌಹಾನ್ ತಿಳಿಸಿದ್ದಾರೆ.2005ರ ಜುಲೈ 27-28ರ ದಿಢೀರ್ ಮಳೆಯಿಂದಾಗಿ ನೆರೆ ಪರಿಸ್ಥಿತಿ ತಲೆದೋರಿ 100ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ಸ್ಥಳೀಯ ಸರಕಾರವು ಹೆಚ್ಚಿನ ಮುಂಜಾಗ್ರತೆ ವಹಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕುಖ್ಯಾತ ರೌಡಿ ರೋಹಿದಾಸ್ ಶೆಟ್ಟಿ ಕೊಲೆ/Rohi Murder





ಕಾಸರಗೋಡು: ಮಂಗಳೂರಿನ ಕುಖ್ಯಾತ ರೌಡಿ ಗೋಪಾಲ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಾಮಂಜೂರು ರೋಹಿ ಯಾನೆ ವಾಮಂಜೂರು ರೋಹಿದಾಸ್ ಶೆಟ್ಟಿ ಭಾನುವಾರ ಬೆಳಗ್ಗೆ ಕೊಲೆಗೀಡಾದ ಘಟನೆ ವಾಮಂಜೂರು ಸಮೀಪದ ಜ್ಯೋತಿನಗರದಲ್ಲಿ ನಡೆದಿದೆ
ವಾಮಂಜೂರಿನ ದುಗರ್ಾ ಪರಮೇಶ್ವರಿ ಕ್ಷೇತ್ರ ಸಮೀಪ ಸಂಬಂಧಿಕರ ಮನೆಗೆ ಹೊರಡುತ್ತಿರುವ ವೇಳೆ ಐವರನ್ನೊಳಗೊಂಡ ತಂಡ ಕೊಲೆ ಮಾಡಿದೆ.
ರೌಡಿಗಳ ನಡುವಿನ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ.

ಕನ್ನಡಿಗರಿಗೆ ಅನ್ಯಾಯ ಮಾಡೊಲ್ಲ: ಮುನಿಯಪ್ಪ/K.H.Muniyappa

ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ತುಂಬುವಾಗ ಕನ್ನಡಿಗರಿಗೆ ಅನ್ಯಾಯವಾಗದಂತೆ ಪಾರದರ್ಶಕವಾಗಿ ನೇಮಕಾತಿ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೆ ಇಲಾಖೆ ಇಡೀ ರಾಷ್ಟ್ರಕ್ಕೆ ಅನ್ವಯವಾಗುವುದರಿಂದ ಕನ್ನಡಿಗರಿಗೆ ಎಲ್ಲ ಹುದ್ದೆಗಳು ಸಿಗಬೇಕು ಎಂಬುದು ಕಷ್ಟದಾಯಕವಾದ ಸಂಗತಿ. ಇಲ್ಲಿಯವರೆಗೆ ಕನ್ನಡಿಗರಿಗೆ ಆಗಿರುವ ಅನ್ಯಾಯ ಮುಂದೆ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರೈಲ್ವೆಯನ್ನು ಯಾವೊಂದು ರಾಜ್ಯಕ್ಕೂ ಸೀಮಿತಗೊಳಿಸಲು ಸಾಧ್ಯವಿಲ್ಲ. ರೈಲ್ವೆ ಇಲಾಖೆಯಲ್ಲಿ ಪಾರದರ್ಶಕವಾಗಿ ನೇಮಕಾತಿ ನಡೆಸಿದರೆ ಶೇ.60 ರಷ್ಟು ಕನ್ನಡಿಗರು ಮೇರಿಟ್ ಆಧಾರದ ಮೇಲೆ ಆಯ್ಕೆಯಾಗುವ ಭರವಸೆ ನನಗೆ ಇದೆ ಎಂದು ಅವರು ಹೇಳಿದರು.

ನ್ಯಾಯಾಂಗ ತನಿಖೆ ಅಗತ್ಯವಿಲ್ಲ: ಆಚಾರ್ಯ

ಮೈಸೂರು: ನಗರದಲ್ಲಿ ನಡೆದ ಕೋಮುಗಲಭೆ ಹಿನ್ನೆಲೆಯಲ್ಲಿ ನಡೆದಿರುವ ಹತ್ಯೆ ಕುರಿತು ನ್ಯಾಯಾಂಗ ತನಿಖೆ ಅಗತ್ಯವಿಲ್ಲವೆಂದು ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಸ್ಪಷ್ಟಪಡಿಸಿದ್ದಾರೆ.ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 40ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಘಟನೆಯಲ್ಲಿ ಕೆಡಿಎಫ್ ಪಾತ್ರದ ಬಗ್ಗೆ ತಿಳಿದಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯ ತಮ್ಮ ಗಮನಕ್ಕೆ ಬಂದಿದೆ. ಪ್ರಸ್ತುತ ಗಲಭೆ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ತಿಳಿಸಿದರು.ಈ ಪ್ರಕರಣದ ಬಗ್ಗೆ ಜನತೆ ಬೆದರುವ ಅಗತ್ಯವಿಲ್ಲ ಎಂದು ತಿಳಿಸಿದ ಅವರು, ಸ್ಥಳೀಯ ಪೊಲೀಸರೊಂದಿಗೆ ಹೊರಗಿನಿಂದಲೂ ಪೊಲೀಸರನ್ನು ಕರೆಸಿ ಭದ್ರತೆ ಒದಗಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಆತ್ಮಾಹುತಿ ದಾಳಿಗೆ ಮಕ್ಕಳನ್ನು ಖರೀದಿಸಿದ ಮೆಹ್ಸೂದ್/mehsood Purchase Children 4 Athmahuthi

ಇಸ್ಲಾಮಾಬಾದ್: ಆತ್ಮಾಹುತಿ ದಾಳಿಯನ್ನು ಉತ್ಪಾದನೆ ಇಳುವರಿಯಾಗಿ ಪರಿವರ್ತಿಸಿರುವ ತೆಹ್ರೀಕ್ ಎ ತಾಲಿಬಾನ್ ಮುಖ್ಯಸ್ಥ ಬೈತುಲ್ಲಾ ಮೆಹಸೂದ್ ಮಕ್ಕಳನ್ನು ಖರೀದಿಸಿ ಆತ್ಮಾಹುತಿ ಬಾಂಬರ್‌ಗಳನ್ನಾಗಿ ತಯಾರು ಮಾಡಲು ಒಂದು ಮಿಲಿಯನ್ ರೂಪಾಯಿಯನ್ನು ಖರ್ಚು ಮಾಡುತ್ತಿದ್ದನೆಂದು ಪಾಕಿಸ್ತಾನ ಮತ್ತು ಅಮೆರಿಕ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಅಮೆರಿಕ ಮಾಧ್ಯಮ ತಿಳಿಸಿದೆ.ಮಕ್ಕಳನ್ನು ತಯಾರು ಮಾಡಿದ ಬಳಿಕ ಆತ್ಮಾಹುತಿ ದಾಳಿಗೆ ತರಬೇತಾದ ಮಕ್ಕಳಿಗೆ ತಲಾ 5 ಲಕ್ಷದಿಂದ 10 ಲಕ್ಷ ರೂ. ಬೆಲೆ ಇಡುತ್ತಿದ್ದನೆಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಟೊಯೊಟಾ ಕಾರುಗಳನ್ನು ತಯಾರಿಸಿ ಮಾರುವಂತೆ ಮೆಹಸೂದ್ ಆತ್ಮಾಹುತಿ ದಾಳಿಯನ್ನು ಉತ್ಪಾದನೆಯ ಇಳುವರಿಯಾಗಿ ಪರಿವರ್ತಿಸಿದ್ದನೆಂದು ಅಮೆರಿಕದ ರಕ್ಷಣಾ ಅಧಿಕಾರಿಯೊಬ್ಬರು ಕೂಡ ಹೇಳಿದ್ದಾರೆ. ಆತ್ಮಾಹುತಿ ಬಾಂಬರ್‌ಗಳು ಪೂರ್ಣ ತರಬೇತಾದ ಬಳಿಕ ಅವರನ್ನು ಮಾರಾಟಕ್ಕೆ, ವಿನಿಮಯಕ್ಕೆ ಅಥವಾ ಬೇರೆ ಸಂಘಟನೆಗಳಿಂದ ಆಯ್ದುಕೊಳ್ಳಲು ಸಿದ್ಧರಾಗುತ್ತಿದ್ದರೆಂದು ಅವರು ಹೇಳಿದ್ದಾರೆ. ಪ್ರತಿ ಬಾಲಕರ ದರವು ಬಾಂಬರ್ ಅಗತ್ಯ ಮತ್ತು ಅವನು ಗುರಿಯ ಮೇಲೆ ಎಷ್ಟು ಸಮೀಪದಿಂದ ದಾಳಿಮಾಡುತ್ತಾನೆಂಬುದನ್ನು ಅವಲಂಬಿಸಿದೆ. ಹೋರಾಟವು ಒಂದು ವಿಷಯವಲ್ಲ. ಆದರೆ ಮುಗ್ಧ ಬಾಲಕರನ್ನು ಆತ್ಮಾಹುತಿ ಬಾಂಬರ್ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ದೇವರ ವಿರುದ್ಧ ಅಪರಾಧವೆಂದು ಮಾಜಿ ಆಫ್ಘನ್ ಉಗ್ರಗಾಮಿಯೊಬ್ಬ ಪ್ರತಿಕ್ರಿಯಿಸಿದ್ದಾನೆ.

ಜಾಕ್ಸನ್/Jakson

ಜಾಕ್ಸನ್ ಆಸ್ತಿಗೆ ವಾರಿಸುದಾರರು ಯಾರು?

ಲಾಸ್‌ಏಂಜಲೀಸ್: PTIಖ್ಯಾತ ಪಾಪ್ ತಾರೆ ಮೈಕೆಲ್ ಜಾಕ್ಸನ್‌ರ ಮೊದಲ ಶವ ಪರೀಕ್ಷೆಯಿಂದ ತೃಪ್ತರಾಗದ ಜಾಕ್ಸನ್ ಕುಟುಂಬದವರ ಒತ್ತಾಯದ ಮೇರೆಗೆ ಭಾನುವಾರ ಎರಡನೇ ಬಾರಿಗೆ ಶವ ಪರೀಕ್ಷೆ ನಡೆಸಲಾಯಿತು.ಎರಡನೇ ಶವ ಪರೀಕ್ಷೆಯನ್ನು ಖಾಸಗಿಯಾಗಿ ನಡೆಸಲಾಗಿದ್ದು, ವರದಿಯನ್ನು ಜಾಕ್ಸನ್‌ರ ಕುಟುಂಬಕ್ಕೆ ನೀಡಲಾಗಿದೆ. ಆದರೂ ಜಾಕ್ಸನ್ ಅವರು ಅತಿಯಾದ ಔಷಧ ಸೇವನೆಯಿಂದಲೇ ಸಾವನ್ನಪ್ಪಿರುವುದಾಗಿ ತಿಳಿಸಲಾಗಿದೆ.ಜಾಕ್ಸನ್‌ರ ಸಾವಿನ ಕೊನೆಯ ಹಂತದಲ್ಲಿ ಅವರ ಬಳಿ ಇದ್ದ ಜಾಕ್ಸನ್‌ರ ವೈದ್ಯರ ಬಗ್ಗೆ ಕುಟುಂಬಕ್ಕೆ ತೀವ್ರ ಅನುಮಾನಗಳು ಮೂಡಿವೆ. ಅಲ್ಲದೇ ಜಾಕ್ಸನ್‌ರನ್ನು ಉದ್ದೇಶಪೂರ್ವಕವಾಗಿ ಕೊಲ್ಲಲಾಯಿತೇ? ವೈದ್ಯರೇ ಇಂಜೆಕ್ಷನ್ ಚುಚ್ಚಿದರೇ? ಎಂಬಿತ್ಯಾದಿ ಪ್ರಶ್ನೆಗಳು ಜಾಕ್ಸನ್ ಸಾವಿನ ಸುತ್ತ ಏಳತೊಡಗಿದೆ.ಆಸ್ತಿಗೆ ವಾರಿಸುದಾರರು ಯಾರು?: ಜಾಕ್ಸನ್ ಸಾವಿನ ನಂತರ ಅವರ ಆಸ್ತಿಗೆ ವಾರಿಸುದಾರರು ಯಾರು ಎಂಬುದರ ಗೊಂದಲ ಈಗ ಶುರುವಾಗಿದೆ. ಜಾಕ್ಸನ್‌ರ ಇಬ್ಬರ ಮಕ್ಕಳ ಭವಿಷ್ಯದ ಬಗ್ಗೆ ನ್ಯಾಯಾಲಯ ತೀರ್ಮಾನಿಸಬೇಕಾಗಿದೆ.ಜಾಕ್ಸನ್‌ರು ತಮ್ಮ ವಾರಿಸುದಾರರ ಬಗ್ಗೆ ಏನಾದರೂ ಬರೆದಿದ್ದಾರೆಯೇ ಅಥವಾ ವಾರಿಸುದಾರರನ್ನಾಗಿ ಯಾರನ್ನಾದರೂ ಗುರುತಿಸಿದ್ದಾರೆಯೇ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.ಜಾಕ್ಸನ್‌ರು ತಮ್ಮ ವಹಿವಾಟನ್ನು ಯಾರು ಮುಂದೆ ಸಂಭಾಳಿಸುವವರು ಎಂಬುದು ಕುಟುಂಬದ ಸದಸ್ಯರಿಗೆ ತಿಳಿದಿಲ್ಲ ಎಂದು ಜಾಕ್ಸನ್ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ. ಜಾಕ್ಸ ನ್ ಮೂವರು ಮಕ್ಕಳನ್ನು ಅಗಲಿದ್ದಾರೆ. ಮೈಕೆಲ್ ಜೋಸೆಫ್ ಜಾಕ್ಸನ್ ಜೂನಿಯರ್(12ವ), ಪರೀಸ್ ಮೈಕೇಲ್ ಕತ್ರೀನೆ ಜಾಕ್ಸನ್(11ವ) ಹಾಗೂ ಪ್ರಿನ್ಸ್ ಮೈಕೇಲ್(7).

ಜಾಕ್ಸನ್ ಮರಣಪತ್ರ ಕುಟುಂಬದ ಟ್ರಸ್ಟ್‌ಗೆ :
ಖ್ಯಾತ ಪಾಪ್ ತಾರೆ ಮೈಕೆಲ್ ಜಾಕ್ಸನ್ ತಮ್ಮ ಮರಣಪತ್ರದಲ್ಲಿ ತಮ್ಮ ಇಡೀ ಎಸ್ಟೇಟನ್ನು ಕುಟುಂಬದ ಟ್ರಸ್ಟ್‌ಗೆ ನೀಡಿರುವುದಾಗಿ ಬರೆದಿದ್ದಾರೆ. ತಮ್ಮ ಮಾಜಿ ಪತ್ನಿ ಡೆಬ್ಬಿ ರೋವ್ ಅವರ ಹೆಸರನ್ನು ಮರಣಪತ್ರದಲ್ಲಿ ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಾರೆ. ಜಾಕ್ಸನ್ ಅವರ ಮ‌ೂರು ಮಕ್ಕಳ ಆರೈಕೆ ಮಾಡಲು ಜಾಕ್ಸನ್ ತಾಯಿ ಅಸಮರ್ಥರಾದರೆ ಸುದೀರ್ಘಕಾಲದ ಸ್ನೇಹಿತೆ ಮತ್ತು ಹಾಡುಗಾರ್ತಿ ಡಯಾನ ರೋಸ್ ಅವರನ್ನು ತಮ್ಮ ಮ‌ೂರು ಮಕ್ಕಳ ಪೋಷಕರೆಂದು ಜಾಕ್ಸನ್ ಹೆಸರಿಸಿದ್ದಾರೆ.ಜಾಕ್ಸನ್ ಅವರ ಮರಣಪತ್ರ 2002ರ ಜು.7ರ ದಿನಾಂಕದ್ದಾಗಿದ್ದು, ಅವರ ಎಸ್ಟೇಟ್ 500 ಮಿಲಿಯನ್ ಡಾಲರ್ ಮೌಲ್ಯವುಳ್ಳದ್ದಾಗಿದೆ. ಡೆಬ್ಬಿ ರೋವ್ ಜಾಕ್ಸನ್ ಅವರನ್ನು 1996ರಲ್ಲಿ ವಿವಾಹವಾಗಿ 1999ರಲ್ಲಿ ವಿಚ್ಛೇದನ ನೀಡಿದ್ದರು. ಮಕ್ಕಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಹಕ್ಕನ್ನು ಕೈಬಿಟ್ಟ ಅವರು ಅದಕ್ಕಾಗಿ 2003ರಲ್ಲಿ ಪುನಃ ಪ್ರಯತ್ನಿಸಿದರು. 2006ರಲ್ಲಿ ಜಾಕ್ಸನ್ ಮತ್ತು ರೋವ್ ಒಪ್ಪಂದ ಮಾಡಿಕೊಂಡಿದ್ದು, ಒಪ್ಪಂದದ ಷರತ್ತುಗಳು ಬಯಲಾಗಿಲ್ಲ.ಜಾಕ್ಸನ್ ಕಿರಿಯ ಪುತ್ರ 7 ವರ್ಷ ವಯಸ್ಸಿನ ಪ್ರಿನ್ಸ್ ಮೈಕೇಲ್ ಬಾಡಿಗೆ ತಾಯಿಗೆ ಜನಿಸಿದ್ದು, ಬಾಡಿಗೆ ತಾಯಿಯ ಗುರುತು ಬಹಿರಂಗಪಡಿಸಿಲ್ಲ. ಮೈಕೆಲ್ ತಾಯಿ ಕ್ಯಾಥರೀನ್ ಜಾಕ್ಸನ್ ಅವರಿಗೆ ಜಾಕ್ಸನ್ ಮ‌ೂರು ಮಕ್ಕಳನ್ನು ನೋಡಿಕೊಳ್ಳುವ ತಾತ್ಕಾಲಿಕ ಪೋಷಕ ಜವಾಬ್ದಾರಿ ವಹಿಸಲಾಗಿದ್ದು, ಮಕ್ಕಳ ಕಾನೂನುಬದ್ಧ ಪೋಷಕರು ಯಾರೆಂದು ಕೋರ್ಟ್ ನಿರ್ಧರಿಸಲಿದೆ.

ಜಾಕ್ಸನ್‌ ಹೊಟ್ಟೆಗೆ ಪಂಪ್ ಮಾಡಿದ್ದೆ:
ಖ್ಯಾತ ಪಾಪ್ ತಾರೆ ಮೈಕೆಲ್ ಜಾಕ್ಸನ್ ಅವರ ಮ‌ೂವರು ಮಕ್ಕಳಿಗೆ ದಾದಿಯಾಗಿದ್ದ ಮಹಿಳೆಯು ಜಾಕ್ಸನ್ ದೇಹದಲ್ಲಿರುವ ನೋವುನಿವಾರಕಗಳ ಕಾಕ್‌ಟೇಲ್ ತೆಗೆಯಲು ಅನೇಕ ಬಾರಿ ಅವರ ಹೊಟ್ಟೆಗೆ ಪಂಪ್ ಮಾಡಬೇಕಾಯಿತೆಂದು ಹೇಳಿದ್ದಾರೆ.ಕಳೆದ ಡಿಸೆಂಬರ್‌ನಲ್ಲಿ ಜಾಕ್ಸನ್ ಅವರಿಂದ ಹಠಾತ್ತಾಗಿ ವಜಾಗೊಂಡಿದ್ದ ದಾದಿ ಗ್ರೇಸ್ ವರಾಂಬ ಮೈಕೇಲ್ ಸಾವಿನಿಂದ ಅವರ ಮಕ್ಕಳ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದು, ಯುರೋಪ್‌ನಿಂದ ಮಕ್ಕಳ ಜತೆ ಸೇರಲು ಲಾಸ್ ಏಂಜಲ್ಸ್‌ಗೆ ಪ್ರಯಾಣಿಸಿದ್ದಾರೆ.ಮೈಕೆಲ್ ವೈದ್ಯ ಕಾನ್ರಾಡ್ ಮರ್ರೆ ಮೈಕೆಲ್ ಸಾವಿಗೆ ಸ್ವಲ್ಪ ಮುಂಚೆ ಡೆಮೆರಾಲ್ ಚುಚ್ಚುಮದ್ದು ನೀಡಿದ್ದರೆಂಬ ವರದಿ ನಡುವೆ ಮೈಕೆಲ್ ಜಾಕ್ಸನ್ ಅಂತಿಮ ಕ್ಷಣಗಳಲ್ಲಿ ಉತ್ತರ ಸಿಗದ ಪ್ರಶ್ನೆಗಳಿಂದ ಜಾಕ್ಸನ್ ಕುಟುಂಬ ಆಕ್ರೋಶಗೊಂಡಿದೆ. ಪಾಪ್ ತಾರೆ ಮಾದಕದ್ರವ್ಯದ ನೋವುನಿವಾರಕಗಳಿಗೆ ದಾಸರಾಗಿದ್ದು, ತಾವು ಅವರ ಹೊಟ್ಟೆಯನ್ನು ಅನೇಕ ಬಾರಿ ಪಂಪ್ ಮಾಡಿದ್ದಾಗಿ ವರಾಂಬ ಹೇಳಿದ್ದಾರೆ. ತಾವು ಒಂದೊಮ್ಮೆ ಜಾಕ್ಸನ್ ತಾಯಿ ಕೆಥರಿನ್ ಮತ್ತು ಸೋದರಿ ಜಾನೆಟ್‌ ಅವರಿಗೆ ಮಧ್ಯಪ್ರವೇಶಿಸಿ ಜಾಕ್ಸನ್ ಅವರ ಚಟಕ್ಕೆ ಚಿಕಿತ್ಸೆ ಪಡೆಯಲು ಮನವೊಲಿಸುವಂತೆ ಕೋರಿದ್ದರು. ಆದರೆ ತನಗೆ ವಂಚಿಸುತ್ತಿರುವ ಬಗ್ಗೆ ಜಾಕ್ಸನ್ ಆರೋಪಿಸಿ ಅವರನ್ನು ವಜಾ ಮಾಡಿದ್ದರು. ರುವಾಂಡ ಸಂಜಾತೆ ರುರಾಂಬ ಜಾಕ್ಸನ್ ಅವರಲ್ಲಿ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಕೆಲಸ ಮಾಡಿದ್ದರು. ಮೊದಲಿಗೆ ಕಚೇರಿ ಸಹಾಯಕರಾಗಿ ಬಳಿಕ ಅವರ ಮಕ್ಕಳಿಗೆ ದಾದಿಯಾಗಿ ಕೆಲಸ ನಿರ್ವಹಿಸಿದ್ದರು.

ನಿದ್ರೆಬರಿಸುವ ಔಷಧಕ್ಕಾಗಿ ಒತ್ತಾಯಿಸಿದ್ದ ಜಾಕ್ಸನ್ :
ಪಾಪ್ ತಾರೆ ಮೈಕೆಲ್ ಜಾಕ್ಸನ್ ಸಾವಿಗೆ ಕೆಲವು ತಿಂಗಳ ಮುಂಚೆ ತೀವ್ರ ನಿದ್ರಾಹೀನತೆಯಿಂದ ಬಳಲುತ್ತಿದ್ದರೆಂದು ಪೌಷ್ಠಿಕ ತಜ್ಞೆಯೊಬ್ಬರು ತಿಳಿಸಿದ್ದಾರೆ. ಉಪಶಮನ ಔಷಧಗಳು ಹಾನಿಕಾರಕವೆಂದು ಎಚ್ಚರಿಕೆ ನೀಡಿದ್ದರೂ ನಿದ್ರೆ ಬರುವುದಕ್ಕಾಗಿ ಪ್ರಭಾವಶಾಲಿ ಉಪಶಮನ ಔಷಧ ನೀಡುವಂತೆ ಜಾಕ್ಸನ್ ಒತ್ತಾಯಿಸುತ್ತಿದ್ದರೆಂದು ಪೌಷ್ಠಿಕ ತಜ್ಞೆ ಹೇಳಿದ್ದಾರೆ.ನೊಂದಾಯಿತ ಶುಶ್ರೂಷಕಿಯಾದ ಚೆರಿಲಿನ್ ಲೀ, ಜಾಕ್ಸನ್ ಅವರಿಗೆ ಪೌಷ್ಠಿಕತೆಯ ಸಲಹೆ ನೀಡುತ್ತಿದ್ದು, ಡಿಪ್ರಿವಾನ್ ಔಷಧ ಬೇಕೆಂಬ ಜಾಕ್ಸನ್ ಒತ್ತಾಯವನ್ನು ಮತ್ತೆ ಮತ್ತೆ ನಿರಾಕರಿಸಿದ್ದಾಗಿ ಮಂಗಳವಾರ ಹೇಳಿದ್ದಾರೆ.ಆದರೆ ಜಾಕ್ಸನ್ ಸಾವಿಗೆ ನಾಲ್ಕು ದಿನಗಳ ಮುಂಚೆ ಸ್ವೀಕರಿಸಿದ ಆತಂಕದ ದೂರವಾಣಿ ಕರೆಯಿಂದ ಜಾಕ್ಸನ್ ಹೇಗಾದರೂ ಮಾಡಿ ಡಿಪ್ರಿವಾನ್ ಔಷಧವನ್ನು ಅಥವಾ ಬೇರಾವುದೇ ಔಷಧವನ್ನು ನಿದ್ರೆಬರುವುದಕ್ಕಾಗಿ ಸೇವಿಸಿರಬಹುದೆಂದು ಶಂಕಿಸಿದ್ದಾಗಿ ಲೀ ಹೇಳಿದ್ದಾರೆ.ಜೂ.21ರಂದು ಜಾಕ್ಸನ್ ಸಿಬ್ಬಂದಿಯೊಬ್ಬ ಆತಂಕದಿಂದ ಕರೆ ಮಾಡಿದ. ಮೈಕೆಲ್ ಈ ಕೂಡಲೇ ನಿಮ್ಮನ್ನು ಕಾಣಲು ಬಯಸುತ್ತಿದ್ದಾರೆಂದು ಹೇಳಿದ. ಏನಾಗಿದೆಯೆಂದು ತಾವು ಕೇಳಿದ್ದಾಗಿಯ‌ೂ ಬಳಿಕ 'ತನ್ನ ದೇಹದ ಒಂದು ಭಾಗ ಬಿಸಿಯಾಗಿದ್ದು ಇನ್ನೊಂದು ಭಾಗ ತಣ್ಣಗಿರುವುದಾಗಿ' ಮೈಕೆಲ್ ಹಿನ್ನೆಲೆಯಲ್ಲಿ ಹೇಳಿದ್ದು ತಮಗೆ ಕೇಳಿಸಿತೆಂದು ಲೀ ತಿಳಿಸಿದ್ದಾರೆ. ಅಲ್ಲಿ ಏನಾಯಿತೆಂದು ತಮಗೆ ತಿಳಿಯದೇ ಕೂಡಲೇ ಮೈಕೆಲ್ ಆಸ್ಪತ್ರೆಗೆ ಸೇರುವುದು ಅಗತ್ಯವೆಂದು ತಾವು ತಿಳಿಸಿದ್ದಾಗಿ ಹೇಳಿದರು.ಆ ಹಂತದಲ್ಲಿ ಕೇಂದ್ರ ನರವ್ಯೂಹಕ್ಕೆ ಆಘಾತಕಾರಿ ಔಷಧವನ್ನು ಯಾರೊ ಮೈಕೆಲ್‌ಗೆ ನೀಡಿದ್ದಾರೆಂದು ತಾವು ಶಂಕಿಸಿದ್ದಾಗಿ ಅವರು ಹೇಳಿದರು.

ಸತ್ತ ಮೇಲೂ ಜಾಕ್ಸನ್‌‌ ಆಲ್ಬಂಗೆ ಅಪಾರ ಬೇಡಿಕೆ :
ಪಾಪ್ ತಾರೆ ಮೈಕೆಲ್ ಜಾಕ್ಸನ್ ಸಾವಿನ ಸುದ್ದಿ ಹರಡುತ್ತಿದ್ದಂತೆ ರೇಡಿಯೊ ಕಾರ್ಯಕ್ರಮ ನಿರೂಪಕರು ದೇಶಾದ್ಯಂತ ಅವರ ಹಾಡುಗಳನ್ನು ಹಾಕಿದರು.ಅಭಿಮಾನಿಗಳು ಜಾಕ್ಸನ್ ಸಂಗೀತದ ಆಲ್ಬಂ ಖರೀದಿಗೆ ಮುಗಿಬಿದ್ದಿದ್ದರಿಂದ ಬಿಲ್‌ಬೋರ್ಡ್ ಮಾರಾಟದ ಚಾರ್ಟ್‌ನಲ್ಲಿ ದಾಖಲೆ ಮುರಿದಿದೆ. ಅಮೆರಿಕದಲ್ಲಿ ಮ‌ೂರು ಅತ್ಯುತ್ತಮ ಮಾರಾಟದ ಆಲ್ಬಂಗಳಾದ 'ನಂಬರ್ ಒನ್ಸ್' 108,000 ಪ್ರತಿಗಳು ಮಾರಾಟವಾಗಿದ್ದರೆ, ದಿ ಎಸೆನ್ಷಿಯಲ್ ಮೈಕೆಲ್ ಜಾಕ್ಸನ್‌ನ 102,000 ಪ್ರತಿಗಳು ಮತ್ತು ಥ್ರಿಲ್ಲರ್ 101,000 ಪ್ರತಿಗಳು ಮಾರಾಟವಾಗಿವೆ.ಒಟ್ಟು ವಾರದಲ್ಲಿ ಜಾಕ್ಸನ್ ಆಲ್ಬಮ್‌ಗಳ 422,000 ಪ್ರತಿಗಳು ಮಾರಾಟವಾಗಿದ್ದು, ಹಿಂದಿನ ವಾರದ ಅಂಕಿಅಂಶಕ್ಕಿಂತ 40ಪಟ್ಟು ಹೆಚ್ಚಾಗಿದೆ. ಅಭಿಮಾನಿಗಳು ಜಾಕ್ಸನ್ ಆಲ್ಬಂಗಳಲ್ಲಿ ಕಂಡಿದ್ದೆಲ್ಲವನ್ನು ಖರೀದಿಸುತ್ತಿದ್ದು, ಅನೇಕ ಚಿಲ್ಲರೆ ಅಂಗಡಿಗಳಲ್ಲಿ ದಾಸ್ತಾನು ಖಾಲಿಯಾಗಿತ್ತು. ಶೇ.57ರಷ್ಟು ಆಲ್ಬಂ ಮಾರಾಟವು ಡಿಜಿಟಲ್ ಡೌನ್‌ಲೋಡ್‌ಗಳಾಗಿದ್ದು, ಸಿಂಗಲ್ ಟ್ರಾಕ್ಸ್‌ನ 2.3 ಮಿಲಿಯ ಡೌನ್‌ಲೋಡ್‌ಗಳು ಮಾರಾಟವಾಗಿವೆ.ಸೌಂಡ್‌ಸ್ಕಾನ್ ಕಳೆದ ಐದು ವರ್ಷಗಳ ಡೌನ್‌ಲೋಡ್‌ಗಳ ಜಾಡು ಹಿಡಿದಾಗ, ಒಂದು ವಾರದಲ್ಲಿ ಯಾವುದೇ ಕಲಾವಿದ ಒಂದು ದಶಲಕ್ಷ ಟ್ರಾಕ್ಸ್ ಮಾರಾಟವಾಗಿಲ್ಲ. ಕಳೆದ ವರ್ಷ ಜಾಕ್ಸನ್ ಒಟ್ಟು 2.8 ದಶಲಕ್ಷ ಟ್ರಾಕ್ಸ್ ಮಾರಾಟ ಮಾಡಿದ್ದಾರೆ.

ಜಾಕ್ಸನ್ ನಿವಾಸದಲ್ಲಿ ನೋವು ನಿವಾರಕ ಡಿಪ್ರಿವಾನ್ ಪತ್ತೆ/Jakson Pain killer Tab

ಲಾಸ್ ಏಂಜಲ್ಸ್: ಖ್ಯಾತ ಪಾಪ್ ತಾರೆ ಮೈಕೇಲ್ ಜಾಕ್ಸನ್ ಅವರ ನಿವಾಸದಲ್ಲಿ ಶಕ್ತಿಶಾಲಿ ನೋವು ಉಪಶಮನ ಔಷಧವು ಪತ್ತೆಯಾಗಿದೆಯೆಂದು ಕಾನೂನು ಜಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಪ್ರಿವಾನ್ ಎಂಬ ಅರಿವಳಿಕೆಯನ್ನು ಶಸ್ತ್ರಚಿಕಿತ್ಸೆ ಕೋಣೆಗಳಲ್ಲಿ ರೋಗಿಯ ಪ್ರಜ್ಞೆ ತಪ್ಪಿಸಲು ಬಳಸಲಾಗುತ್ತದೆ. ಪ್ರೋಪೊಫಾಲ್ ಎಂದು ಹೇಳಲಾದ ಇದು ಖಾಸಗಿ ಮನೆಯಲ್ಲಿ ಇರುವುದು ಅಪರೂಪವೆಂದು ಮತ್ತು ಅತ್ಯಂತ ಪರಿಣಾಮಕಾರಿಯೆಂದು ಹೇಳಲಾಗಿದೆ. ಜಾಕ್ಸನ್ ಕಳೆದ ಗುರುವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಸಾವಿಗೆ ಕಾರಣ ನಿರ್ಧರಿಸುವ ವಿಷಪತ್ತೆ ಪರೀಕ್ಷೆಯ ವರದಿಯನ್ನು ಇನ್ನೂ ಕಾಯಲಾಗುತ್ತಿದೆ. ಏತನ್ಮಧ್ಯೆ, ಅಮೆರಿಕ ಔಷಧ ಜಾರಿ ಆಡಳಿತ ಮತ್ತು ಕ್ಯಾಲಿಫೋರ್ನಿಯ ಅಟಾರ್ನಿ ಜನರಲ್ ಕಚೇರಿ ಜಾಕ್ಸನ್ ಸಾವಿನ ತನಿಖೆಯಲ್ಲಿ ಸೇರ್ಪಡೆಯಾಗಿವೆ.ಜಾಕ್ಸನ್‌ಗೆ ವೈದ್ಯಕೀಯ ಚಿಕಿತ್ಸೆ ನೀಡಿದ ವಿವಿಧ ವೈದ್ಯರು ಅವರ ಔಷಧ ಪೂರೈಕೆಯ ಮ‌ೂಲಗಳನ್ನು ಕುರಿತು ಅಧಿಕಾರಿಗಳು ಡಾಟಾ ಬೇಸ್ ತಯಾರಿಸಲಿದ್ದಾರೆ.ಜಾಕ್ಸನ್‌ಗೆ ನಿಗದಿಮಾಡಿದ ಔಷಧಿಗಳ ಪಾತ್ರ ಅಸ್ಪಷ್ಟವಾಗಿದ್ದು, ಅವರ ಅನೇಕ ಸಂಗಡಿಗರು ಸೇರಿದಂತೆ ಮಕ್ಕಳ ನ್ಯಾನಿ, ಮಾಜಿ ಶುಶ್ರೂಷಕಿ ಮತ್ತು ಮ್ಯಾನೇಜರ್ ಔಷಧಿ ಮೇಲೆ ಜಾಕ್ಸನ್ ಅವಲಂಬಿತರಾಗಿದ್ದಾರೆಂದು ಹೇಳಿದ್ದಾರೆ.

7 ಕ್ಷಿಪಣಿಗಳನ್ನು ಪ್ರಯೋಗಿಸಿದ ಉತ್ತರ ಕೊರಿಯ/Korea Missile Test

ಸೋಲ್: ಉತ್ತರ ಕೊರಿಯ ಪೂರ್ವ ತೀರದಲ್ಲಿ ಶನಿವಾರ 7 ಖಂಡಾಂತರ ಕ್ಷಿಪಣಿಗಳನ್ನು ಪ್ರಯೋಗಿಸಿದೆಯೆಂದು ದಕ್ಷಿಣ ಕೊರಿಯ ತಿಳಿಸಿದ್ದು, ವಿಶ್ವಸಂಸ್ಥೆ ನಿರ್ಣಯಗಳ ಉಲ್ಲಂಘನೆ ಮತ್ತು ಅಮೆರಿಕದ ಸ್ವಾತಂತ್ರ್ಯ ದಿನಕ್ಕೆ ಪ್ರತಿಭಟನೆ ಎನ್ನುವ ಸಂದೇಶವನ್ನು ಉ.ಕೊರಿಯ ರವಾನಿಸಿದ್ದಾಗಿ ತಿಳಿಸಿದೆ.ಉತ್ತರ ಕೊರಿಯ ನಾಲ್ಕು ಸಮೀಪ ವ್ಯಾಪ್ತಿಯ ಕ್ಷಿಪಣಿಗಳನ್ನು ಪ್ರಯೋಗಿಸಿದ 2 ದಿನಗಳಲ್ಲೇ ಈ ಉಡಾವಣೆಗಳು ನಡೆದಿದ್ದು, ವಲಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಂಭವವಿದೆ. ಮ‌ೂರು ಕ್ಷಿಪಣಿಗಳನ್ನು ನಸುಕಿನಲ್ಲಿ ಹಾರಿಸಲಾಗಿದ್ದು, ನಾಲ್ಕನೆಯದನ್ನು 12 ಗಂಟೆಗೆ ಮತ್ತು ಮಧ್ಯಾಹ್ನ ಇನ್ನೂ 3 ಕ್ಷಿಪಣಿಗಳನ್ನು ಹಾರಿಸಲಾಗಿದೆ.ಕ್ಷಿಪಣಿಗಳು ಖಂಡಾಂತರವಾಗಿದ್ದು, 250 ಮೈಲುಗಳಿಗಿಂತ ಹೆಚ್ಚು ದೂರ ಹಾರಿದೆಯೆಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಉತ್ತರಕೊರಿಯದ ಯಾವುದೇ ಬೆದರಿಕೆ ಎದುರಿಸಲು ನಮ್ಮ ಮಿಲಿಟರಿಯು ಸಂಪೂರ್ಣ ಸಿದ್ಧವಾಗಿದೆಯೆಂದು ಜಂಟಿ ಸಿಬ್ಬಂದಿ ಮುಖ್ಯಸ್ಥರು ಹೇಳಿದ್ದಾರೆ.

ಭಾರತದ ಅಣೆಕಟ್ಟು ಯೋಜನೆ: ಬಾಂಗ್ಲಾದಲ್ಲಿ ಕೋಲಾಹಲ/Barak Dam in Bangla

ಭಾರತದ ಅಣೆಕಟ್ಟು ಯೋಜನೆ: ಬಾಂಗ್ಲಾದಲ್ಲಿ ಕೋಲಾಹಲ

ಢಾಕಾ: ನೆರೆಯ ಎರಡು ರಾಷ್ಟ್ರಗಳು ಹಂಚಿಕೊಳ್ಳುವ ಬಾರಕ್ ನದಿಯಲ್ಲಿ ಅಣೆಕಟ್ಟನ್ನು ನಿರ್ಮಿಸಲು ಯೋಜಿಸಿರುವ ಭಾರತದ ಜತೆ ತುರ್ತು ದ್ವಿಪಕ್ಷೀಯ ಮಾತುಕತೆ ನಡೆಸುವಂತೆ ಸಂಪುಟದ ಸಚಿವರು ಮತ್ತು ಆಡಳಿತರೂಢ ಅವಾಮಿ ಲೀಗ್ ಸದಸ್ಯರು ಬಾಂಗ್ಲಾದೇಶ ಸರ್ಕಾರಕ್ಕೆ ಒತ್ತಡ ಹೇರಿದ್ದಾರೆ. ಯೋಜನೆ ಸ್ಥಳಕ್ಕೆ ಸಂಸದೀಯರ ನಿಯೋಗ ಕಳಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದಂತೆ ಒತ್ತಡಗಳು ಹೆಚ್ಚುತ್ತಿವೆ. ತಿಪಾಯ್‌ಮುಖ್‌ನಲ್ಲಿ ಉದ್ದೇಶಿತ ಅಣೆಕಟ್ಟು ನಿರ್ಮಾಣದಿಂದ ಕೆಳಮಟ್ಟದಲ್ಲಿರುವ ಬಾಂಗ್ಲಾದೇಶದಲ್ಲಿ ನೈಸರ್ಗಿಕ ಪ್ರವಾಹ ಉಂಟಾಗಬಹುದೆಂದು ಅವಾಮಿ ಲೀಗ್ ಸದಸ್ಯರು ಮತ್ತು ಸಂಪುಟ ಸದಸ್ಯರು ಶಂಕಿಸಿದ್ದಾರೆ.ಪ್ರತಿಭಟನೆ ನಡೆಸುತ್ತಿರುವ ಪರಿಸರವಾದಿಗಳು, ಎನ್‌ಜಿಒ ಮತ್ತಿತರರ ಜತೆ ಪ್ರತಿಪಕ್ಷಗಳು ಸೇರಿದ್ದು, ಕೆಲವರು ಬೀದಿಗಿಳಿದಿದ್ದಾರೆ. ದ್ವಿಪಕ್ಷೀಯ ಮಾತುಕತೆಯಲ್ಲಿ ಮತ್ತು ನದಿನೀರಿನ ಸಮಾನ ಹಂಚಿಕೆಯಲ್ಲಿ ರಾಷ್ಟ್ರದ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದಾಗಿ ಸರ್ಕಾರ ತಿಳಿಸಿದೆ. ಉದ್ದೇಶಿತ ಅಣೆಕಟ್ಟು ನಮ್ಮ ರಾಷ್ಟ್ರಕ್ಕೆ ಒಳ್ಳೆಯದಲ್ಲ ಮತ್ತು ಪರಿಸರ ಮತ್ತು ನಿಸರ್ಗಕ್ಕೆ ವಿರುದ್ಧವಾಗಿದೆಯೆಂದು ವಿತ್ತ ಸಚಿವ ಅಬುಲ್ ಮಾಲ್ ಅಬ್ದುಲ್ ಮುಹಿತ್ ತಿಳಿಸಿದ್ದಾರೆ.