Wednesday, July 8, 2009

ಪನ್ನಿಪ್ಪಾರೆ ಲೈಂಗಿಕ ಜಾಲ ಪ್ರಕರಣ: ಮತ್ತಿಬ್ಬರ ಸೆರೆ/Pannippare Sex Racket

ಕಾಸರಗೋಡು: ಪನ್ನಿಪ್ಪಾರೆ ಲೈಂಗಿಕ ಜಾಲ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬುಧವಾರ ಪೊಲೀಸರು ಬಂಧಿಸಿದರು.
ಅಣಂಗೂರು ಟಿ.ವಿ.ಸ್ಟೇಷನ್ ರಸ್ತೆ ನಿವಾಸಿ ಹಾಜಿರ ಮಂಜಿಲ್ನ ಪಿ.ಎಂ.ಹಾರಿಸ್(34), ಬದಿಯಡ್ಕ ಬೀಜಂತಡ್ಕ ನಿವಾಸಿ ತಾಜು ಯಾನೆ ತಾಜುದ್ದೀನ್(24) ಎಂಬವರನ್ನು ನಗರ ಠಾಣೆಯ ಸಿ.ಐ.ಪ್ರೇಮರಾಜನ್ ಬಂಧಿಸಿದ್ದಾರೆ. ಇದರಿಂದ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೇರಿದೆ.
ಬಂಧಿತರಲ್ಲಿ ಹಾರಿಸ್ ಎಂಬ ಆರೋಪಿ ಸಾಹಿರಾ ಎಂಬ ಯುವತಿಯ ಸಹಾಯದೊಂದಿಗೆ ಕಣ್ಣೂರಿನ ಸಿಟಿ ವಸತಿ ಲಾಡ್ಜ್ಗೆ ಬಾಲಕಿಯನ್ನು ಕೊಂಡೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ.
ಕಾಸರಗೋಡಿನಲ್ಲಿ ಟೆಂಪೋ ಚಾಲಕನಾದ ತಾಜು ಬಾಲಕಿಯನ್ನು ಮಂಗಳೂರು ಮತ್ತು ಕಾಸರಗೋಡಿನಲ್ಲಿ ಗಣ್ಯರಿಗೆ ಪೂರೈಕೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 

ನೇಣು ಬಿಗಿದು ಆತ್ಮಹತ್ಯೆ
ಕಾಸರಗೋಡು: ಇಲ್ಲಿನ ಕಾಳ್ಯಂಗಾಡು ನಿವಾಸಿ ಮಜಿರ್ಪಳ್ಳ ಕಟ್ಟೆಯ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ.
ನಗರದ ಕಾಳ್ಯಂಗಾಡು ನಿವಾಸಿ ಪಂಜಿ ಎಂಬವರ ಪುತ್ರ ಕೆ.ಉದಯ(32) ಎಂದು ಗುರುತಿಸಲಾಗಿದೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.
ಮಟ್ಕಾ: ನಾಲ್ವರ ಸೆರೆ
ಕಾಸರಗೋಡು: ಇಲ್ಲಿಗೆ ಸಮೀಪದ ಅಶ್ವಿನಿ ನಗರದಲ್ಲಿ ಮಟ್ಕಾ ನಿರತರಾದ ನಾಲ್ವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಕಂಚಿಕಟ್ಟೆಯ ನಿವಾಸಿ ಜಯಾನಂದ, ಚಟ್ಟಂಚಾಲ್ ನಿವಾಸಿ ಅಬ್ದುಲ್ಲ ಬಿ.ಕೆ, ಚೆಂಗಳ ನಾಲ್ಕನೇ ಮೈಲಿನ ಪ್ರಶಾಂತ್, ಮೀಪುಗುರಿಯ  ಪಕ್ಕೀರ ಗೌಡ ಬಂಧನಕ್ಕೊಳಗಾದವರು.
ಆರೋಪಿಗಳಿಂದ 1,505 ರೂ. ವಶಪಡಿಸಲಾಗಿದೆ.
 
ಪಂಚಾಯ್ತಿ ಸದಸ್ಯೆಗೆ ಹಲ್ಲೆ
 
ಕಾಸರಗೋಡು: ಕುಂಬಳೆ ಗ್ರಾಮ ಪಂಚಾಯ್ತಿ ಸದಸ್ಯೆ ಗೀತಾಶೆಟ್ಟಿ ಅವರ ಮೇಲೆ ತಂಡ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕುಂಬಳೆ ಸಮೀಪದ ಊಜಾರು ಕೃಷ್ಣ ಶೆಟ್ಟಿ, ಮನೋರಂಜನ ಶೆಟ್ಟಿ, ಪ್ರಶಾಂತ ಶೆಟ್ಟಿ ಅವರನ್ನೊಳಗೊಂಡ ತಂಡ ಹಲ್ಲೆ ನಡೆಸಿದೆ ಎಂದು ಗಾಯಾಳು ದೂರಿದ್ದಾರೆ. ಪಂಚಾಯ್ತಿಯ ಬಂಬ್ರಾಣ ಗದ್ದೆ ಬಯಲು ಸಮಿತಿಗೆ ವಿತರಿಸಿದ ಟ್ರಾಕ್ಟರನ್ನು ಕೃಷಿಕರಿಗೆ ನೀಡದೆ ಆರೋಪಿ ಕೃಷ್ಣ ಶೆಟ್ಟಿ ಸ್ವಂತಕ್ಕೆ ಬಳಸಿದ ಕಾರಣ ಅದನ್ನು ಪಂಚಾಯ್ತಿ ವಶಪಡಿಸಿ ಕೃಷಿಕರಿಗೆ ನೀಡಿದ ದ್ವೇಷದಿಂದ ಈ ಕೃತ್ಯವೆಸಗಿದ್ದಾರೆ ಎಂದು ಅವರು ದೂರಿದ್ದಾರೆ.
ಘಟನೆಯನ್ನು ಪಂಚಾಯ್ತಿ ಉಪಾಧ್ಯಕ್ಷ ಕೇಶವ ಪ್ರಸಾದ್ ನಾಣಿತ್ತಿಲು ಖಂಡಿಸಿದ್ದಾರೆ.
 

No comments:

Post a Comment