Monday, July 6, 2009
ಪನ್ನಿಪ್ಪಾರೆ ಲೈಂಗಿಕ ಜಾಲ : ಗಣ್ಯರು ಶಾಮೀಲು/Pannippare
ಕಾಸರಗೋಡು: ಇಲ್ಲಿನ ಪನ್ನಿಪ್ಪಾರೆಯ ಹದಿಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಗೆ ಸಮೀಪದ ನಾಯಮ್ಮಾರ್ಮೂಲೆ ಮತ್ತು ಚೆರ್ಕಳದ ಕೆಲವು ಗಣ್ಯರು ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದಲ್ಲಿ ಕೆಲವು ರಾಜಕಾರಣಿಗಳ ಸಹಿತ ಗಣ್ಯರಿಗೂ ಸಂಬಂಧವಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು 13 ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇವರಲ್ಲಿ ನಾಲ್ವರು ಆರೋಪಿಗಳ ಬಂಧನ ಸೋಮವಾರ ಸಂಜೆ ದೃಢೀಕರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಇತ್ತೀಚೆಗೆ ಬಂಧನಕ್ಕೊಳಗಾದ ಚೆಟ್ಟುಂಕುಳಿಯ ಅಬ್ದುಲ್ ನಾಸರ್, ಸಿ.ದಾವೂದ್ ಎಂಬ ಆರೋಪಿಗಳು ಬಾಲಕಿಗೆ ಪ್ರೀತಿ ನಟಿಸಿ, ಬಳಿಕ ಲೈಂಗಿಕ ಕಿರುಕುಳ ನೀಡಿ ಲೈಂಗಿಕ ದಂಧೆಗೆ ಬಳಸಿಕೊಂಡಿದ್ದಾರೆ. ಇತ್ತೀಚೆಗೆ ರಿಯಾನ ಎಂಬ ಬಾಲಕಿ ನಾಪತ್ತೆ ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಜಿಲ್ಲೆಯ ಲೈಂಗಿಕ ದಂಧೆಯ ಜಾಲದ ಜಾಡು ಲಭಿಸಿದೆ. ಗಣ್ಯರ ಮಾಹಿತಿ ಬಹಿರಂಗಪಡಿಸದಂತೆ ಪೊಲೀಸರಿಗೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿದುಬಂದಿದೆ.
Subscribe to:
Post Comments (Atom)
No comments:
Post a Comment