Friday, July 10, 2009

ಪನ್ನಿಪ್ಪಾರೆ ಲೈಂಗಿಕ ಜಾಲ ಪ್ರಕರಣ: ಪ್ರಧಾನ ಆರೋಪಿ ಇಲ್ಯಾಸ್ ಸೆರೆ/Pannipara Sex Racket

ಕಾಸರಗೋಡು : ಇಲ್ಲಿಗೆ ಸಮೀಪದ ಪನ್ನಿಪ್ಪಾರೆ ಲೈಂಗಿಕ ಜಾಲ ಪ್ರಕರಣದ ಪ್ರಧಾನ ಆರೋಪಿ ನಾಯಮ್ಮಾರ್ಮೂಲೆ ಪಾಣಲ ನಿವಾಸಿ ಕೆ.ಎ.ಇಲ್ಯಾಸ್(26) ಎಂಬಾತನನ್ನು ಶುಕ್ರವಾರ ಮಧ್ಯಾಹ್ನ ನಗರ ಪೊಲೀಸರು ಬಂಧಿಸಿದ್ದಾರೆ.
ಪನ್ನಿಪ್ಪಾರೆಯ ನಿವಾಸಿ ಪ್ಲಸ್ ವನ್ ವಿದ್ಯಾರ್ಥಿನಿಗೆ ನೀಡಿದ ಬಳಿಕ ಈಕೆಯನ್ನು ಲೈಂಗಿಕ ದಂಧೆಗೆ ಬಳಸಿಕೊಂಡಿದ್ದಾನೆ ಎಂದು ಆರೋಪಿಯನ್ನು ಬಂಧಿಸಿದ ಸಿ.ಐ.ಟಿ.ಪಿ.ಪ್ರೇಮಚಂದ್ರನ್ ತಿಳಿಸಿದ್ದಾರೆ.
ಮಂಗಳೂರು, ಕಣ್ಣೂರು, ಕಲ್ಲಿಕೋಟೆ, ಎರ್ನಾಕುಲಂ ಎಂಬಲ್ಲಿರುವ ವಸತಿ ಗೃಹಗಳಿಗೆ ಹಲವಾರು ಬಾರಿ ಕೊಂಡೊಯ್ದು ಈತ ಕಿರುಕುಳ ನೀಡಿದ್ದ. ಬಳಿಕ ಮದ್ಯವರ್ತಿಗಳ ಮುಖಾಂತರ ಬಾಲಕಿಯನ್ನು ಹಲವು ಗಣ್ಯರಿಗೆ ಒಪ್ಪಿಸಿದ್ದಾನೆ.
ಆರೋಪಿ ಇಲ್ಯಾಸ್ ಬಾಲಕಿಗೆ ಪ್ರೇಮ ನಟಿಸಿ ತನ್ನ ದಂಧೆಗೆ ಬಳಸಿಕೊಂಡಿದ್ದು, ಮಧ್ಯವತರ್ಿಗಳಾದ ಮಹಿಳೆಯರ ಮೂಲಕ ರಾಜ್ಯ ಮತ್ತು ರಾಜ್ಯದ ಹೊರಗೆ ತನ್ನ ಜಾಲವನ್ನು ವಿಸ್ತರಿಸಿದ್ದಾನೆ. 4 ತಿಂಗಳ ಮೊದಲು ಪನ್ನಿಪ್ಪಾರೆಯ ಬಾಲಕಿಯೊಂದಿಗೆ ಕಾಸರಗೋಡು ರೈಲ್ವೇ ಸ್ಟೇಷನ್ನಲ್ಲಿ ಪೊಲೀಸರ ಬಲೆಗೆ ಬಿದ್ದರೂ ಓರ್ವ ರಾಜಕೀಯ ಪುಢಾರಿಯ ಪ್ರಭಾವದಿಂದ ಪಾರಾಗಿದ್ದ. ನಾಯಮ್ಮಾರ್ಮೂಲೆಯ ಮರಳು ಮಾಫಿಯಾ ತಂಡದಲ್ಲಿ ಸಕ್ರಿಯನಾಗಿದ್ದ.
ಆರೋಪಿಯನ್ನು 2 ವಾರಗಳ ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈತನ ಬಂಧನದಿಂದ ಈ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು ಪೊಲೀಸರು ಬಂಧಿಸಿದಂದಾಗಿದೆ.


ರಿಯಾನ ಚೆನ್ನೈಯಲ್ಲಿ ಪತ್ತೆ: ಸುಳಿವು ಲಭ್ಯ
ಕಾಸರಗೋಡು: ಕಾಸರಗೋಡಿನಿಂದ ಇತ್ತೀಚೆಗೆ ನಾಪತ್ತೆಯಾದ 9ನೇ ತರಗತಿ ವಿದ್ಯಾಥರ್ಿನಿ ರಿಯಾನ ಕುಟುಂಬವೊಂದರ ಜತೆಯಲ್ಲಿ ಚೆನ್ನೈಯಲ್ಲಿ ಪತ್ತೆಯಾದ ಸುಳಿವು ಲಭಿಸಿದೆ.
ಶೋನರ್ೂರು ರೈಲ್ವೇ ಸ್ಟೇಷನ್ನಲ್ಲಿ ಗುರುವಾರ ರಿಯಾನಳನ್ನು ಕಂಡಿರುವುದಾಗಿ ಪೊಲೀಸರಿಗೆ ನಂಬಲರ್ಹ ವ್ಯಕ್ತಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಶುಕ್ರವಾರ ಕುಟುಂಬದ ಸದಸ್ಯರನ್ನು ವಿಚಾರಿಸಿದಾಗ ಆಕೆಯನ್ನು ಕಲ್ಲ್ಲಿಕೋಟೆಯಿಂದ ಬಂದ ಸಂಬಂಧಿಕರು ಕೊಂಡೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆಗೆ ಕಲ್ಲಿಕೋಟೆ ಮತ್ತು ಚೆನ್ನೈಗೆ ಪೊಲೀಸ್ ತಂಡ ತೆರಳಿದೆ ಎಂದು ಡಿವೈಎಸ್ಪಿ ಕೆ.ಅಬ್ದುಲ್ ಗಫೂರ್ ತಿಳಿಸಿದ್ದಾರೆ.


ಸಾರಾಯಿ ವಶ
ಕಾಸರಗೋಡು: ದಾರಿಯಲ್ಲಿ ನಡೆಯುತ್ತಾ ಸಾರಾಯಿ ಮಾರಾಟ ಮಾಡುತ್ತಿದ್ದ ಯುವಕನನ್ನು ಗುರುವಾರ ಸಂಜೆ ನಗರ ಪೊಲೀಸರು ಇಲ್ಲಿನ ಅಶ್ವಿನಿನಗರದಲ್ಲಿ ಬಂಧಿಸಿದ್ದಾರೆ.
ಆರೋಪಿ ಶಿವಶಕ್ತಿ ನಗರದ ನಿವಾಸಿ ಕೆ.ಸುನಿಲ್ ಕುಮಾರ್ನಿಂದ 3 ಲೀ. ಸಾರಾಯಿಯನ್ನು ವಶಪಡಿಸಲಾಗಿದೆ.


ನಿಧನ


ನೂರುದ್ದೀನ್
ಕಾಸರಗೋಡು: ತಳಂಗೆರೆ ಪಳ್ಳಿಕಲ್ ಇಸ್ಲಾಂ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ, ಚೆಮ್ನಾಡು ನಿವಾಸಿ ನೂರುದ್ದಿನ್(49) ಶುಕ್ರವಾರ ನಿಧನರಾದರು.
ಪತ್ನಿ ಸಫಿಯಾ ಮತ್ತು ಇಬ್ಬರು ಮಕ್ಕಳಿದ್ದಾರೆ.


ಪಿ.ಮುಹಮ್ಮದ್ ಕುಞ್ಞಿ
ಕಾಸರಗೋಡು: ಪೆರಿಯದಲ್ಲಿ ವ್ಯಾಪಾರಿಯಾಗಿದ್ದ ಪಿ.ಮುಹಮ್ಮದ್ ಕುಞ್ಞಿ(73) ಇಂದು ನಿಧನರಾದರು.
ಪೆರಿಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಪೆರಿಯ ಪ್ರೌಢಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪತ್ನಿ ಬೀಫಾತಿಮಾ ಮತ್ತು ನಾಲ್ವರು ಮಕ್ಕಳಿದ್ದಾರೆ.

ಮೊಯ್ದೀನ್
ಕಾಸರಗೋಡು: ಇಲ್ಲಿನ ಪೊವ್ವಲ್ ನೆಲ್ಲಿಕಟ್ಟೆಯ ಕಾನಕ್ಕೋಡು ನಿವಾಸಿ ಮೊಯ್ದೀನ್(73) ನಿಧನರಾದರು. ಪತ್ನಿ ಬೀಫಾತಿಮಾ ಮತ್ತು 8 ಮಕ್ಕಳಿದ್ದಾರೆ.

No comments:

Post a Comment