Saturday, July 11, 2009

ಕೋಟ್ಟಚ್ಚೇರಿ ಗೋಡೆ ಕೆಡವಿದ ಪ್ರಕರಣ/Kottacheri BJP Arrest

ಕಾಸರಗೋಡು: ಕೋಟ್ಟಚ್ಚೇರಿ ನಗರಸಭಾ ಮೀನು ಮಾಕರ್ೆಟ್ ಬಳಿ ಖಾಸಗಿ ವ್ಯಕ್ತಿಯೊಬ್ಬರ ಆವರಣ ಗೋಡೆಯನ್ನು ಕೆಡವಿದ ಹಿನ್ನೆಲೆಯಲ್ಲಿ ಕೋಮು ಭಾವನೆ ಕೆರಳಿಸುವ ಘೋಷಣೆಗಳನ್ನು ಕೂಗಿದ ಆರೋಪದಲ್ಲಿ ಯುವಮೋಛರ್ಾ ಜಿಲ್ಲಾ ಉಪಾಧ್ಯಕ್ಷ ಎ.ಕೆ.ಸುರೇಶ್, ಕಾಞಂಗಾಡು ನಗರಸಭಾ ಕೌನ್ಸಿಲರ್ ಅಜಯ್ಕುಮಾರ್ ನೆಲ್ಲಿಕ್ಕಾಡ್, ಬಿ.ಜೆ.ಪಿ. ಕಾರ್ಯಕರ್ತ ಉಣ್ಣಿ ವಟ್ಟಕಂಡ್, ಕೃಷ್ಣ ಪ್ರಸಾದ್, ಭರತನ್ ಸಹಿತ 25 ಮಂದಿಯನ್ನು ಹೊಸದುರ್ಗ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಜಾಮೀನು ರಹಿತ ಬಂಧನವನ್ನು ಖಂಡಿಸಿ ಬಿ.ಜೆ.ಪಿ. ನೇತೃತ್ವದಲ್ಲಿ ಇದೇ 15ರಂದು ಹೊಸದುರ್ಗ ಸಿ.ಐ. ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಬಿ.ಜೆ.ಪಿ. ತಿಳಿಸಿದೆ.
2009 ಜೂ.7ರಂದು ಮೇಲ್ಪರಂಬಿನ ಕಲ್ಲಡ ಅಬ್ದುಲ್ ಖಾದರ್ ಅವರ ಪುತ್ರ ಕೆ.ಮಾಹಿನ್ ಎಂಬವರ ಮಾಲಕತ್ವದಲ್ಲಿರುವ ಮೀನು ಮಾರುಕಟ್ಟೆಯ ಸ್ಥಳದಲ್ಲಿ ಮಾರಕಾಯುಧಗಳೊಂದಿಗೆ ಬಂದ ಬಿ.ಜೆ.ಪಿ. ಕಾರ್ಯಕರ್ತರು 15,000 ರೂ.ಗಳ ನಾಶನಷ್ಟ ಉಂಟು ಮಾಡಿದ್ದರು ಎಂದು ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಮೀನು ಮಾರುಕಟ್ಟೆ ಸ್ಥಳವನ್ನು ಅತಿಕ್ರಮಿಸಿ ಆವರಣ ಗೋಡೆ ಕಟ್ಟಲಾಗಿದೆ ಎಂದು ವಿರೋಧಿಸಿ ಬಿ.ಜೆ.ಪಿ. ಕಾರ್ಯಕರ್ತರು ಗೋಡೆಯನ್ನು ಕೆಡವಿದ್ದರು. ಆದರೆ ತಮ್ಮ ಸ್ಥಳವನ್ನು ನಗರಸಭೆ ಅತಿಕ್ರಮಿಸಿದೆ ಎಂದು ಕೆ.ಮಾಹಿನ್ ಅವರು ಇತ್ತೀಚೆಗೆ ಕಾಞಂಗಾಡಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದರು.


ರಿಯಾನ ನಾಪತ್ತೆ ಪ್ರಕರಣ : ಚೆನ್ನೈಗೆ ತಲುಪಿದ ಪೊಲೀಸರು

ಕಾಸರಗೋಡು: ರಿಯಾನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಲಭ್ಯ ಸುಳಿವು ಆಧರಿಸಿ ಇಲ್ಲಿನ ಪೊಲೀಸರು ಶನಿವಾರ ಬೆಳಗ್ಗೆ ಚೆನ್ನೈಗೆ ತಲುಪಿದ್ದಾರೆ.
ಇತ್ತೀಚೆಗೆ ಶೋನರ್ೂರಿನಲ್ಲಿ ರಿಯಾನಳ ರೂಪ ಸಾದೃಶ್ಯವಿರುವ ಬಾಲಕಿಯೊಬ್ಬಳನ್ನು ಚೆನ್ನೈಯಲ್ಲಿ ಕುಟುಂಬವೊಂದರ ಆಸರೆಯಲ್ಲಿ ಕಂಡಿರುವುದಾಗಿ ಪೊಲೀಸರಿಗೆ ಲಭಿಸಿದ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ತನಿಖೆಗೆ ಚುರುಕು ಮುಟ್ಟಿದೆ. ಆದರೆ ರಿಯಾನಳನ್ನು  ಕಲ್ಲ್ಲಿಕೋಟೆಯತ್ತ ಒಯ್ಯಲಾಗಿದೆ ಎಂಬ ಮಾಹಿತಿಯೂ ಇದ್ದು, ಕಲ್ಲಿಕೋಟೆಗೂ ಪೊಲೀಸರ ತಂಡವನ್ನು ಕಳುಹಿಸಲಾಗಿದೆ.
 

ಪಾಣತ್ತೂರು ಕ್ಷೇತ್ರ ಕಳವು: ಆರೋಪಿಗಳು ಪೊಲೀಸ್ ಬಲೆಗೆ

ಕಾಸರಗೋಡು: ಇಲ್ಲಿನ ಪಾಣತ್ತೂರು ಕಾಞಿರತಿಂಗಾಲ್ ಅಯ್ಯಪ್ಪ ಕ್ಷೇತ್ರದಲ್ಲಿ ಮಂಗಳವಾರ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಎನರ್ಾಕುಳಂನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳಿಂದ ದೇವರ ಬಿಂಬ, ಬೆಳ್ಳಿಯ ಕಿರೀಟ ಮತ್ತು ಆಭರಣಗಳನ್ನು ವಶಪಡಿಸಲಾಗಿದೆ.
ಎರಡು ದಿನದೊಳಗೆ ಆರೋಪಿಗಳ ಬಂಧನವನ್ನು ದೃಢೀಕರಿಸಲಾಗುವುದು ಎಂದು ತನಿಖೆ ನಡೆಸುವ ಪೊಲೀಸರು ತಿಳಿಸಿದ್ದಾರೆ.


ಆ.19ರಂದು ಖಾಸಗಿ ಬಸ್ಸು ಮುಷ್ಕರ

ಕಾಸರಗೋಡು: ಖಾಸಗಿ ಬಸ್ಸುಗಳ ದರ ಏರಿಕೆ ಮಾಡಬೇಕು ಎಂದು ಆಗ್ರಹಿಸಿ ಆ.19ರಂದು ರಾಜ್ಯ ವ್ಯಾಪಕವಾಗಿ ಖಾಸಗಿ ಬಸ್ಸುಗಳು ಮುಷ್ಕರಕ್ಕೆ ಇಳಿಯಲಿದೆ ಎಂದು ಕೇರಳ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಪ್ರಕಟಿಸಿದೆ.
ಮುಷ್ಕರಕ್ಕೆ ಮುನ್ನುಡಿಯಾಗಿ ಆ.4ರಂದು ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು 11ರಂದು ವಿಧಾನಸಭೆಯ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಸಂಘಟನೆ ತಿಳಿಸಿದೆ.

No comments:

Post a Comment