--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
ಅಪಘಾತ ಪ್ರಕರಣ
ದಿನಾಂಕ 08.8.09 ರಂದು ಮಧ್ಯಾಹ್ನ 1:00 ಗಂಟೆಯ ಸಮಯಕ್ಕೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಪಾಜಿಗುಡ್ಡೆ ಎಂಬಲ್ಲಿ ಬಜಗೋಳಿ - ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದುದಾರರಾದ ಆನಂದ ಹೆಚ್.ಎಸ್. ತಂದೆ ಶಿವ ಲಿಂಗಪ್ಪ ವಾಸ ಶಿವಲಿಂಗಪೇಟೆ, ಹಾರ್ನಳ್ಳಿ ಗ್ರಾಮ, ಅರಸೀಕೆರೆ ತಾಲೂಕು ಹಾಸನ ಜಿಲ್ಲೆಯವರು ಧರ್ಮಸ್ಥಳ ಕಡೆುಂದ ಹೊರನಾಡು ಕಡೆಗೆ ತನ್ನ ಕ್ರೂಸರ್ ವಾಹನ ನಂಬ್ರ ಕೆಎ.06.ಸಿ.1174 ನೇದನ್ನು ಚಲಾಯಿಸಿಕೊಂಡು ಬರುವಾಗ, ಬಜಗೋಳಿ ಕಡೆುಂದ ಇಂಚರ್ ಗೂಡ್ಸ್ ಟೆಂಪೋ ನಂಬ್ರ ಕೆಎ.46/1863 ನೇದರ ಚಾಲಕ ಟೆಂಪೋವನ್ನು ಬಜಗೋಳಿ ಕಡೆಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ತನ್ನ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಕ್ರೂಸರ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆನಂದ ಹೆಚ್.ಎಸ್ ರವರ ತಲೆ ಮತ್ತು ಕೈಗೆ ಹಾಗೂ ಕ್ರೂಸರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯೋಗೀಶ್ ಎಂಬವರ ತಲೆಗೆ ರಕ್ತ ಗಾಯವಾಗಿರುತ್ತದೆ ಎಂಬುದಾಗಿ ಆನಂದ ಹೆಚ್.ಎಸ್. ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 91/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಪ್ರಕರಣ
ದಿನಾಂಕ 07.08.09 ರಂದು ಮಧ್ಯಾಹ್ನ 14.30 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು ಚೇಕರ್ಾಡಿ ಗ್ರಾಮದ ಕನ್ನಾರು ಗುಡ್ಡೆ ಮನೆ ವಾಸಿ ಉಮೇಶ ನಾಯ್ಕ (25 ವರ್ಷ) ತಂದೆ : ಗೋಪಾಲ ಕೃಷ್ಣ ನಾಯ್ಕ ಎಂಬವರ ಅಣ್ಣ ಸುಮಾರು 30 ವರ್ಷ ಪ್ರಾಯದ ರಮೇಶ ನಾಯ್ಕರವರು ಅಮಲು ಸೇವನೆ ಮಾಡಿ ಮನೆಯಲ್ಲಿ ಮಲಗಿದ್ದು, ಅವರ ಹೆಂಡತಿ ರಂಜಿತಾರವರು ತನ್ನ ಮಕ್ಕಳನ್ನು ಶಾಲೆಯಿಂದ ವಾಪಾಸು ಕರೆದುಕೊಂಡು ಬರಲು 16:00 ಗಂಟೆಗೆ ಹೊರಟು ವಾಪಾಸು 16.45 ಗಂಟೆಗೆ ಮನೆಗೆ ಬಂದಾಗ ಅವರ ಅಣ್ಣ ರಮೇಶ ನಾಯ್ಕನು ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥ ಗೊಂಡವರನ್ನು ನೋಡಿ ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಉಡುಪಿ ಸರಕಾರಿ ಆಸ್ಪತ್ರೆಯ ವೈಧ್ಯರು ಸಂಜೆ 18:30 ಗಂಟೆಗೆ ಪರೀಕ್ಷಿಸಿದಾಗ ತರುವಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿದ್ದು, ರಮೇಶನು ಯಾವುದೋ ವ್ಯಯಕ್ತಿಕ ಸಮಸ್ಯೆಯಿಂದ ಅಮಲು ಸೇವನೆ ಮಾಡಿ ಜೀವನದಲ್ಲಿ ಜಿಗುಪ್ಸೆ ಗೊಂಡು ವಿಷ ಪದಾರ್ಥವನ್ನು ಸೇವಿಸಿ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮೃತರ ತಮ್ಮನಾದ ಉಮೇಶ ನಾಯ್ಕ ರವರು ಬ್ರಹ್ಮಾವರ ಠಾಣೆಗೆ ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 25/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರ ಪ್ರಕರಣ
ದಿನಾಂಕ 08-08-09ರಂದು ಶ್ರೀ ಬಾಬು ದೇವಾಡಿಗ ತಂದೆ: ಮರ್ಲ ದೇವಾಡಿಗ ವಾಸ: ಕಾವೇರಿ ನಿಲಯ, ಕೊಡಪಾಡಿ, ಗುಜ್ಜಾಡಿ ಗ್ರಾಮದವರು ಹಾಗೂ ಮಾದ, ಲೊಕೇಶ, ಗಿರಿಜ, ರಾಮ, ಕಿರಣ, ಜಗದೀಶರವರುಗಳು ಮಾನ್ಯ ನ್ಯಾಯಾಲಯದ ಆದೇಶದಂತೆ ಗದ್ದೆಗೆ ಹೋಗುವ ನೀರಿನ ತೋಡನ್ನು ಸ್ವಚ್ಚತೆಗೊಳಿಸಿ ಮನಗೆ ಹೋಗುತ್ತಿರುವಾಗ ಆಪಾದಿತ ವಸಂತ ಕುಮಾರ್ @ ಮಣಿಕಂಠ ತಾು ಪದ್ದು ಪೂಜಾರ್ತಿ ವಾಸ: ಕೊಡಪಾಡಿ, ಗುಜ್ಜಾಡಿ ಗ್ರಾಮದವರು ಮಧ್ಯಾಹ್ನ 2:00 ಗಂಟೆಗೆ ಬಾಬು ದೇವಾಡಿಗ ಮತ್ತು ಇತರರನ್ನು ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾಗಿದೆ ಎಂಬುದಾಗಿ ಬಾಬು ದೇವಾಡಿಗ ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 79/09 ಕಲಂ 341, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ದಿ: 04/08/09 ರಂದು ರಾತ್ರಿ 8:30 ಗಂಟೆಗೆ ನವೀನ್ ಶೆಟ್ಟಿ ತಂದೆ:ರವಿ ಶೆಟ್ಟಿ ವಾಸ:ಕಡೆಕಾರ್ ಗ್ರಾಮ, ಕಿನ್ನಿಮೂಲ್ಕಿ ಉಡುಪಿ ಎಂಬವರು ತಮ್ಮ ಮಾವ ಕುಶಲ ಶೆಟ್ಟಿರವರೊಂದಿಗೆ ಕಿನ್ನಿಮುಲ್ಕಿಯಲ್ಲಿರುವ ದಿನಸಿ ಅಂಗಡಿಯ ಎದುರು ರಸ್ತೆಯ ಬಳಿ ನಿಂತುಕೊಂಡಿರುವ ಸಮಯ ಆಪಾದಿತ ಕೆ.ಎ-19-ಎ.ಸಿ-31ನೇ ಶ್ರೀದೇವಿ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆುಂದ ಮಂಗಳೂರು ಕಡೆುಂದ ಚಲಾುಸಿಕೊಂಡು ತೀರಾ ಬಲಬದಿಗೆ ಬಂದು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಕುಶಲ ಶೆಟ್ಟಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಕುಶಲ ಶೆಟ್ಟಿರವರು ರಸ್ತೆಗೆ ಬಿದ್ದರು ಬಿದ್ದ ಪರಿಣಾಮ ಕುಶಲ ಶೆಟ್ಟಿರವರ ತಲೆಯ ಹಿಂಬದಿಗೆ ಜಜ್ಜಿದ ತೀವ್ರತರದ ಗಾಯವಾಗಿದ್ದು ಎರಡೂ ಕೈಗಳ ಮೊಣಕೈ ಹಾಗೂ ಹಸ್ತದ ಹಿಂಬದಿ ತರಚಿದ ರಕ್ತ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಕೂಡಲೇ ಹೈಟೆಕ್ ಆಸ್ಪತ್ರೆಗೆ ಕರೆ ತಂದಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾಗಿರುತ್ತದೆ. ಈ ಅಪಘಾತದ ಬಗ್ಗೆ ನವೀನ್ ಶೆಟ್ಟಿ ರವರು ದೂರು ನೀಡಿದ್ದು ಅವರ ದೂರಿನಂತೆ ಉಡುಪಿನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 260/09 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾಸರಗೋಡಿನ ಎಡನೀರು ಮಠದ ಸಭಾಂಗಣದಲ್ಲಿ ಸಮಾವೇಶದ ಕುರಿತು ಶನಿವಾರ ಕರೆದ ಪೂರ್ವಭಾವಿ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿ ಡಾ.ಕೆ.ಮುರಳೀಧರ ಮಾತನಾಡಿದರು.
ದಿನಾಂಕ. 6.08.2009 ರಂದು 19:35 ಗಂಟೆಗೆ ಕಾಪು ಪಡುಗ್ರಾಮದ ಪೊಲೀಪು ಜಂಕ್ಷನ್ ಎಂಬಲ್ಲಿ ಕಾಪು ಠಾಣಾ ಸರಹದ್ದಿನ ಪೊಲೀಸ್ ನಿರೀಕ್ಷಕರಾದ ಚೆಲುವರಾಜ್.ಬಿ ಇವರು ಸಿಬ್ಬಂದಿಗಳೊಂದಿಗೆ ಅನುಮಾನಸ್ಪದವಾಗಿ ಬರುತ್ತಿದ್ದ ಕಾರು ನಂಬ್ರ ಕೆಎ-19-ಪಿ-0420 ನ್ನು ನಿಲ್ಲಿಸಿ ಕಾರು ಚಲಾಯಿಸುತ್ತಿದ್ದ ಆರೋಪಿ ಉದಯ ಪೂಜಾರಿ (30 ವರ್ಷ), ಕೋಣಿ, ಕುಂದಾಪುರ ಎಂಬಾತನ್ನು ವಿಚಾರಿಸಿದಾಗ ತಾನು 20 ದಿನ ಹಿಂದೆ ಸುರೇಶ್ ಎಂಬವನೊಂದಿಗೆ ಕುಂದಾಪುರದ ಒಡೆರಹೋಬಳಿಯ ಲೇಡಿಸ್ ಹಾಸ್ಟೆಲಿನ ಒಳಹೊಕ್ಕು 2 ಚಿನ್ನದ ಸರ ಹಾಗೂ 4 ಮೊಬೈಲ್ನ್ನು ಕಳವು ಮಾಡಿದ್ದನ್ನು ಒಪ್ಪಿ ಕೊಂಡಿದ್ದು, ಕಳವು ಮಾಡಲಾದ ಎರಡು ತುಂಡಾದ ಚಿನ್ನದ ಸರ, 2 ಮೊಬೈಲ್ನ್ನು ತನ್ನ ವಶದಲ್ಲಿ ಇದ್ದುದನ್ನು ಹಾಜರುಪಡಿಸಿದನ್ನು ಮತ್ತು ಕೃತ್ಯ ನಡೆಸಲು ಉಪಯೋಗಿಸಿದ ಕಾರನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸದ್ರಿ ಸೊತ್ತುಗಳು ಕುಂದಾಪುರ ಠಾಣಾ ಅ.ಕ್ರ. 213/09 ಕಲಂ. 457, 380 ಐ.ಪಿ.ಸಿ ಪ್ರಕರಣಕ್ಕೆ ಸಂಬಂಧಿಸಿದಾಗಿವೆ. ಈ ಬಗ್ಗೆ ಪೊಲೀಸ್ ನಿರೀಕ್ಷಕರಾದ ಚೆಲುವರಾಜ್.ಬಿ ರವರು ಕಾಪು ಠಾಣೆಗೆ ನೀಡಿದ ದೂ? ನಂತೆ ಅಪರಾಧ ಕ್ರಮಾಂಕ 155/09 ಕಲಂ: 41(1)(ಡಿ),102(1) ಸಿ.ಆರ್.ಪಿ.ಸಿ ಮತ್ತು 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 06/08/09 ರಂದು ಹಸನ್ ಸಾಹೇಬ್ (35), ತಂದೆ: ಮೌಲ ಸಾಬ್, ವಾಸ: ವಾಲೇಕಾರೆ, ಮುಷ್ಟಿಗೇರಿ ಗ್ರಾಮ, ಬಾದಾಮಿ ತಾ. ಬಾಗಲಕೊಟೆ ಜಿಲ್ಲೆ, ಹಾಲಿ ವಾಸ: ವಿಜಯ ನಗರ, ಎಂಡ್ ಪಾಂಯಿಟ್ ಬಳಿ, ಸರಳಬೆಟ್ಟು, ಮಣಿಪಾಲ. ಉಡುಪಿ. ಎಂಬವರು ತನ್ನ ಮೋಟಾರ್ ಬೈಕ್ ನಂ. ಕೆ.ಎ-20-ಆರ್-5376ನೇ ದರಲ್ಲಿ ತಮ್ಮ ಮಗಳನ್ನು ನೋಡಿಕೊಂಡು ಬರುವರೇ ಬನ್ನಂಜೆ ಬಾಲಕಿಯರ ಹಾಸ್ಟೇಲ್ ಕಡೆಗೆ ಹೊರಟು ಸಮಯ ಸುಮಾರು 14:45 ಗಂಟೆಗೆ ಎಂ.ಜಿ.ಎಂ. ಕಾಲೇಜ್ ಬಸ್ ನಿಲ್ದಾಣದ ಬಳಿ ತಲುಪುವಾಗ್ಗೆ ಆಪಾದಿತೆ ಕೆ.ಎ-20-ಎಂ-7641ನೇ ಮಾರುತಿ 800 ಕಾರಿನ ಚಾಲಕಿಯು ತನ್ನ ಬಾಬ್ತು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಉಡುಪಿ ಕಡೆಯಿಂದ ಮಣಿಪಾಲದ ಕಡೆಗೆ ಚಲಾಯಿಸಿಕೊಂಡು ಬಂದು ತನ್ನ ಎದುರು ಹೋಗುತ್ತಿದ್ದ ಅಟೋ ರಿಕ್ಷಾವನ್ನು ಓವರ್ ಟೇಕ್ ಮಾಡುವ ಭರದಲ್ಲಿ ತೀರಾ ಬಲಬದಿಗೆ ಬಂದು ಮೋಟಾರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆ ಬದಿಯ ತೋಡಿಗೆ ಬಿದ್ದಿದ್ದು. ಬಿದ್ದ ಪರಿಣಾಮ ಎಡಕಾಲಿನ ಹಿಮ್ಮಡಿಗೆ, ಬಲಕಾಲಿಗೆ ಮೂಳೆ ಮುರಿತದ ರಕ್ತಗಾಯ, ಬೆನ್ನಿಗೆ ಜಜ್ಜಿದ ಒಳಗಾಯ ಹಾಗೂ ಕೈಗೆ ತರಚಿದ ಗಾಯವಾಗಿರುತ್ತದೆ. ಈ ಅಪಘಾತದ ಬಗ್ಗೆ ಹಸನ್ ಸಾಹೇಬ್ (35), ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 259/09 ಕಲಂ. 279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬ್ಯಾಂಕ್ ನೌಕರರು ಎರಡು ದಿನಗಳಿಂದ ನಡೆಸುತ್ತಿರುವ ಮುಷ್ಕರದಿಂದ ಗ್ರಾಹಕರು ಪರದಾಡುವಂತಾಯಿತು.
ನಗರದಲ್ಲಿ ಮುಷ್ಕರ ಯಶಸ್ವಿಯಾಗಿದೆ. ಐ.ಸಿ.ಐ.ಸಿ.ಐ., ಎಚ್.ಡಿ.ಎಫ್.ಸಿ., ಆಕ್ಸಿಸ್ ಬ್ಯಾಂಕುಗಳು ಮತ್ತು ಇತರ ಬ್ಯಾಂಕುಗಳು ಮುಚ್ಚಿತ್ತು. ಎ.ಟಿ.ಎಂ. ಕೌಂಟರ್ಗಳಲ್ಲಿಯೂ ಹಣದ ದೌರ್ಲಭ್ಯ ಕಂಡುಬಂತು. ಇದರಿಂದ ಗ್ರಾಹಕರು ಪರದಾಡಿದರು.
ಮಂಜೇಶ್ವರ: ಬಾಯಾರು ಸಮೀಪದ ಮುಳಿಗದ್ದೆಯಲ್ಲಿ ಗುರುವಾರ ರಾತ್ರಿ ಎರಡು ತಂಡಗಳ ಮಧ್ಯೆ ನಡೆದ ಘರ್ಷಣೆಯಲ್ಲಿ 7 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ.
ಮುಸ್ಲಿಂ ಲೀಗ್ ಪೈವಳಿಕೆ ಪಂಚಾಯ್ತಿ ಸಮಿತಿ ಕಾರ್ಯದಶರ್ಿ ಇಬ್ರಾಹಿಂ ಪೆವರ್ೋಡಿ, ಬಾಯಾರು ಬೆರಿಪದವು ನಿವಾಸಿ ಪ್ರಸಾದ್, ಕಲ್ಲಗದ್ದೆ ನಿವಾಸಿ ಗೋಪಾಲ, ಬದಿಯಾರು ನಿವಾಸಿ ಗುಣಪಾಲ, ಮುಳಿಗದ್ದೆ ಪಟ್ಲ ನಿವಾಸಿ ಪ್ರವೀಣ್ ರೈ, ಕಲ್ಲಗದ್ದೆಯ ಅಶೋಕ್, ಸುಣ್ಣಾಡದ ಉದಯ ಎಂಬವರು ಗಾಯಗೊಂಡವರು. ಇಬ್ರಾಹಿಂ ಪೆವರ್ೋಡಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದರೆ ಉಳಿದವರೆಲ್ಲರೂ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬಸ್ಸಿನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ತಂಡಗಳ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆಯ ಪರಿಣಾಮ ಸ್ಥಳೀಯ ಅಂಗಡಿಗಳಿಗೆ ಹಾನಿ ಉಂಟಾಗಿದೆ. ವಿಷಯ ತಿಳಿದು ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಶುಕ್ರವಾರ ಅಂಗಡಿ ಮುಂಗಟ್ಟುಗಳು ಮುಚ್ಚಿಕೊಂಡಿದೆ.
ಸುಧಾಕರ ಶೆಟ್ಟಿ
ಮಂಜೇಶ್ವರ: ಬಸ್ ಚಾಲಕ ಗುಡ್ಡೆಗಿರಿ ನಿವಾಸಿ ಸುಧಾಕರ ಶೆಟ್ಟಿ(39) ನಿಧನರಾದರು.
ವರ್ಷದ ಹಿಂದೆ ಜ್ವರದಿಂದ ಬಳಲುತ್ತಿದ್ದ ಇವರಿಗೆ ವೈದ್ಯರು ನೀಡಿದ ಚುಚ್ಚು ಮದ್ದು ಬದಲಾದ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡುಬಂದು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.
ಪತ್ನಿ ತಾರಾ ಮತ್ತು ಇಬ್ಬರು ಮಕ್ಕಳಿದ್ದಾರೆ.
ಕಾಸರಗೋಡು: ಕುಂಬಳೆ ಉಪ ಜಿಲ್ಲಾ ವಿದ್ಯಾಧಿಕಾರಿ ಸಹಿತ ತೆರವಾಗಿರುವ ಎಲ್ಲಾ ಮುಖ್ಯೋಪಾಧ್ಯಾಯರ ಮತ್ತು ಅಧ್ಯಾಪಕರ ಹುದ್ದೆಗಳನ್ನು ಶೀಘ್ರದಲ್ಲಿಯೇ ಭತರ್ಿಗೊಳಿಸುವಂತೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಸಭೆ ಆಗ್ರಹಿಸಿದೆ.
ವಿತರಣೆ ಮಾಡಲು ಉಳಿದಿರುವ ಪಠ್ಯಪುಸ್ತಕ ಮತ್ತು ಅಧ್ಯಾಪಕರ ಕೈಪಿಡಿಗಳನ್ನು ಲಭ್ಯಗೊಳಿಸಬೇಕು ಎಂದು ಒತ್ತಾಯಿಸಿದೆ. ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಕಾಸರಗೋಡು, ಬೇಕಲ, ಮಂಜೇಶ್ವರ ಉಪ ಜಿಲ್ಲಾ ಸಮ್ಮೇಳನಗಳನ್ನು ಯಶಸ್ವಿಗೊಳಿಸುವಂತೆ ಸಂಘ ಅಧ್ಯಾಪಕರಲ್ಲಿ ಮನವಿ ಮಾಡಿದೆ.
ಕಾಸರಗೋಡು ಸಕರ್ಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಭೆಯನ್ನು ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನ್ದಾಸ್ ಉದ್ಘಾಟಿಸಿದರು.
ಕೇಂದ್ರ ಸಮಿತಿ ಅಧ್ಯಕ್ಷ ಟಿ.ಡಿ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಕೆ.ಸತ್ಯನಾರಾಯಣ, ಉಪಾಧ್ಯಕ್ಷೆ ಎಂ.ಶಶಿಕಲಾ, ಶಶಿಕಲಾ, ಸಂಘಟನಾ ಕಾರ್ಯದಶರ್ಿ ಎಂ.ವಿ.ಮಹಾಲಿಂಗೇಶ್ವರ ಭಟ್, ಕೋಶಾಧಿಕಾರಿ ಡಿ.ಮಹಾಲಿಂಗೇಶ್ವರ ರಾಜ್, ಕುಂಬಳೆ ಉಪಜಿಲ್ಲಾ ಕಾರ್ಯದಶರ್ಿ ಕೆ.ಸುಬ್ರಹ್ಮಣ್ಯ ಭಟ್, ಕಾಸರಗೋಡು ಉಪಜಿಲ್ಲಾ ಕಾರ್ಯದಶರ್ಿ ರಾಜೇಶ್ವರ ಸಿ.ಎಚ್. ಹಾಜರಿದ್ದರು.
ಪ್ರಧಾನ ಕಾರ್ಯದಶರ್ಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಶ್ರೀಕುಮಾರಿ ಆನೆಕಲ್ಲು ವಂದಿಸಿದರು.
ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲೂಕು ಘಟಕದ ಆಶ್ರಯದಲ್ಲಿ ನಂದಾದೀಪ ಸಮಾರಂಭ ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜರುಗಿತು.
ಕವಿ ಶ್ರೀಕೃಷ್ಣಯ್ಯ ಅನಂತಪುರ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮೇನೇಜರ್ ಪ್ರೇಮಾ ಕೆ.ಭಟ್ ಹಾಜರಿದ್ದರು.
ರವಿ ಅಲೆವೂರಾಯ ವಕರ್ಾಡಿ ಅವರಿಂದ `ನವರಸಾಭಿನಯ' ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ನೀಡಿದರು. ಪುರುಷೋತ್ತಮ ಭಟ್ ನೆಡುವಾಜೆ(ಭಾಗವತರು), ಶಂಕರ ಭಟ್ ಕಲ್ಮಡ್ಕ(ಮೃದಂಗ, ಮಧುಸೂದನ ಅಲೆವೂರಾಯ(ಚೆಂಡೆ), ಸುದರ್ಶನ(ಚಕ್ರತಾಳ) ಸಹಕರಿಸಿದರು.
ಸಿ.ರಾಘವ ಬಲ್ಲಾಳ್ ಪ್ರಾಸ್ತಾವಿಕ ಮಾತಾಡಿದರು. ಮುಖ್ಯೋಪಾಧ್ಯಾಯ ಎಂ.ಬಾಲಕೃಷ್ಣ ಭಟ್ ಸ್ವಾಗತಿಸಿ, ಕ.ಸಾ.ಪ. ತಾಲೂಕು ಘಟಕದ ಕಾರ್ಯದಶರ್ಿ ರಾಮಚಂದ್ರ ಧರ್ಮತ್ತಡ್ಕ ವಂದಿಸಿದರು. ಪಿ.ಶಿವಶಂಕರ ನಿರೂಪಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
ಕಾಸರಗೋಡು ತಾಲೂಕಿನ ಭಾರತೀಯ ಜನತಾ ಯುವ ಮೋಚರ್ಾ ಬಾಯಾರು ದಳಿಕುಕ್ಕು ಘಟಕದ ಒಂದು ದಿನದ ತರಬೇತಿ ಶಿಬಿರ ಮಂಜೇಶ್ವರ ಮಂಡಲ ಬಿ.ಜೆ.ಪಿ. ಪ್ರಧಾನ ಕಾರ್ಯದಶರ್ಿ ಮುರಳೀಧರ ಯಾದವ್ ಮಾತನಾಡಿದರು. ಮಣಿಕಂಠ ರೈ, ಬಾಲಕೃಷ್ಣ, ಪ್ರವೀಣ ಚಂದ್ರ, ಗಣಪತಿ ಭಟ್ ಹಾಜಜರಿದ್ದರು.
ಕಾಸರಗೋಡು ಸಕರ್ಾರಿ ಕಾಲೇಜಿನ ರಾ.ಸೇ.ಯೋ. ಘಟಕದ ನೇತೃತ್ವದಲ್ಲಿ ಸಂಗ್ರಹಿಸಿದ ಸಹಾಯನಿಧಿಯನ್ನು ಸತ್ಯರಾಜ್ ಚಿಕಿತ್ಸಾ ಸಹಾಯ ಸಮಿತಿಗೆ
ಕಾಲೇಜಿನ ಪ್ರಾಂಶುಪಾಲ ಪ್ರೊ.ಮಾಧವನ್ ನಂಬ್ಯಾರ್ ಬುಧವಾರ ವಿತರಿಸಿದರು.
ಕಾಸರಗೋಡು: ರಕ್ತದ ಅಬರ್ುದ ರೋಗದಿಂದ ಬಳಲುತ್ತಿರುವ ಇಲ್ಲಿನ ಇರಿಯಣ್ಣಿ ಜಿ.ವಿ.ಎಚ್.ಎಸ್.ಶಾಲೆಯ ಪ್ರತಿಭಾನ್ವಿತ ವಿದ್ಯಾಥರ್ಿ ಸತ್ಯರಾಜ್ಗೆ ಕಾಸರಗೋಡು ಸಕರ್ಾರಿ ಕಾಲೇಜಿನ ರಾ.ಸೇ.ಯೋ. ಘಟಕದ ನೇತೃತ್ವದಲ್ಲಿ ಸಂಗ್ರಹಿಸಿದ ಸಹಾಯನಿಧಿಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಮಾಧವನ್ ನಂಬ್ಯಾರ್ ಬುಧವಾರ ವಿತರಿಸಿದರು.
ಸಹಾಯನಿಧಿಯನ್ನು ಸತ್ಯರಾಜ್ ಚಿಕಿತ್ಸಾ ಸಹಾಯ ಸಮಿತಿಯ ಸಂಚಾಲಕ ಸಜೇಶ್ ಕುಮಾರ್ ಸ್ವೀಕರಿಸಿದರು. ಸತ್ಯರಾಜ್ ತಿರುವನಂತಪುರದ ಆರ್.ಸಿ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಕುಟುಂಬ ಆಥರ್ಿಕವಾಗಿ ಅತಂತ್ರ ಸ್ಥಿತಿಯಲ್ಲಿದೆ. ಕೂಲಿ ಕಾಮರ್ಿಕರಾಗಿರುವ ತಂದೆ, ಅಪಘಾತದಿಂದ ಜರ್ಜರಿತ ಸ್ಥಿತಿಯಲ್ಲಿರುವ ತಾಯಿಗೆ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ.
ಸಹಾಯ ನಿಧಿ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಎ.ಶ್ರೀನಾಥ್ ಕಾಸರಗೋಡು, ರಾ.ಸೇ.ಯೋಜನಾಧಿಕಾರಿಗಳಾದ ಮಹಮ್ಮದಾಲಿ ಪೆರ್ಲ ಮತ್ತು ರತ್ನಾಕರ ಮಲ್ಲಮೂಲೆ, ಕಾರ್ಯದಶರ್ಿ ಮಹೇಶ್ ವೈ, ಖಾಲಿದ್, ನಯನ ಹಾಜರಿದ್ದರು.
ಮಹಮ್ಮದಾಲಿ ಸ್ವಾಗತಿಸಿ, ಪ್ರಜಿತ ವಂದಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
ಮಂಜೇಶ್ವರ: ಇಲ್ಲಿನ ಎಸ್.ಎ.ಟಿ. ಪ್ರೌಢಶಾಲೆಯ ಪರಿಸರ ಸಂಘ ಮತ್ತು ಮಂಜೇಶ್ವರದ ಗೌಡ ಸಾರಸ್ವತ ಬ್ರಾಹ್ಮಣ ಸಂಘದ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ವನಮಹೋತ್ಸವ ಜರುಗಿತು.
ಪಂಚಾಯ್ತಿ ಉಪಾಧ್ಯಕ್ಷ ಎಂ.ಜೆ.ಕಿಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮೇನೇಜರ್ ಯೋಗೀಶ್ ಡಿ.ಪ್ರಭು ವಿದ್ಯಾಥರ್ಿಗಳಿಗೆ ಸಸಿಗಳನ್ನು ವಿತರಿಸಿ ವನಮಹೋತ್ಸವವನ್ನು ಉದ್ಘಾಟಿಸಿದರು. ಸಸ್ಯ ಶಾಸ್ತ್ರಜ್ಞ ದಿನೇಶ್ ನಾಯಕ್ ಮಂಜೇಶ್ವರ ಸಸ್ಯ ಸಂಕುಲದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಪಂಚಾಯ್ತಿ ಸದಸ್ಯೆ ಸುಮತಿ ಬಾ ಟೀಚರ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಯತೀಶ್ ಕುಮಾರ್, ಮುಖ್ಯೋಪಾಧ್ಯಾಯ ಉದಯ ಶಂಕರ ಭಟ್, ಕರೆಸ್ಪಾಂಡೆಂಟ್ ನಿತಿನ್ ಚಂದ್ರ ಪೈ ಹಾಜರಿದ್ದರು.
ಸಂಘದ ಸಂಚಾಲಕ ಕಿರಣ್ ಕುಮಾರ್ ಪ್ರಾಸ್ತಾವಿಕ ಮಾತು ಆಡಿದರು. ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾ ಸ್ವಾಗತಿಸಿ, ಶಿಕ್ಷಕ ಸಂಘದ ಕಾರ್ಯದಶರ್ಿ ಮುರಳೀಕೃಷ್ಣ ವಂದಿಸಿದರು.
--
http://www.kasaragodvartha.com/
the first local online news paper in Malayalam.
brings latest news in Malayalam & English links our home land to the world.
:::: the signature of Kasaragod ::::
ಮಂಜೇಶ್ವರ ಎಸ್.ಎ.ಟಿ. ಪ್ರೌಢಶಾಲೆಯ ಪರಿಸರ ಸಂಘ ಮತ್ತು ವಿಜ್ಞಾನ ಸಂಘದ ಆಶ್ರಯದಲ್ಲಿ ಕಸಿಕಟ್ಟುವಿಕೆಯ ಪ್ರಾತ್ಯಕ್ಷಿಕೆ ಬುಧವಾರ ಶಾಲಾ ವಠಾರದಲ್ಲಿ ಜರುಗಿತು.ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ಶಿಕ್ಷಕ ಉಮೇಶ್ ಕೆ. ಪೆರ್ಲ ಕಸಿಕಟ್ಟುವಿಕೆಯ ವಿಧಾನಗಳಾದ ಬಡ್ಡಿಂಗ್, ಲೇಯರಿಂಗ್, ಗ್ರಾಫ್ಟಿಂಗ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಮಂಜೇಶ್ವರ: ಇಲ್ಲಿನ ಎಸ್.ಎ.ಟಿ. ಪ್ರೌಢಶಾಲೆಯ ಪರಿಸರ ಸಂಘ ಮತ್ತು ವಿಜ್ಞಾನ ಸಂಘದ ಆಶ್ರಯದಲ್ಲಿ ಕಸಿಕಟ್ಟುವಿಕೆಯ ಪ್ರಾತ್ಯಕ್ಷಿಕೆ ಬುಧವಾರ ಶಾಲಾ ವಠಾರದಲ್ಲಿ ಜರುಗಿತು.ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ಶಿಕ್ಷಕ ಉಮೇಶ್ ಕೆ. ಪೆರ್ಲ ಕಸಿಕಟ್ಟುವಿಕೆಯ ವಿಧಾನಗಳಾದ ಬಡ್ಡಿಂಗ್, ಲೇಯರಿಂಗ್, ಗ್ರಾಫ್ಟಿಂಗ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಉದಯಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಯತೀಶ್ ಕುಮಾರ್ ಹಾಜರಿದ್ದರು. ಮುರಳೀಕೃಷ್ಣ ಭಟ್ ಸ್ವಾಗತಿಸಿ, ಪರಿಸರ ಸಂಘದ ಸಂಚಾಲಕ ಕಿರಣ್ ಕುಮಾರ್ ವಂದಿಸಿದರು. ವಿಜ್ಞಾನ ಸಂಘದ ಸಂಚಾಲಕಿ ಸುರೇಖಾ ಮಲ್ಯ ನಿರೂಪಿಸಿದರು.
--
http://www.kasaragodvartha.com/
the first local online news paper in Malayalam.
brings latest news in Malayalam & English links our home land to the world.
:::: the signature of Kasaragod ::::
ಕಾಸರಗೋಡು: ಇಲ್ಲಿಗೆ ಸಮೀಪದ ಚಟ್ಟಂಚಾಲ್ ತೆಕ್ಕಿಲ್ ತಿರುವಿನಲ್ಲಿ ಟಿಪ್ಪರ್ ಲಾರಿ ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕುಂಡಂಕುಳಿ ನಿವಾಸಿ ಪ್ರದೀಪನ್(35) ಸಾವನ್ನಪ್ಪಿದ ವ್ಯಕ್ತಿಎಂದು ಗುರುತಿಸಲಾಗಿದೆ. ಈತನ ಜತೆಯಲ್ಲಿ ಸಂಚರಿಸುತ್ತಿದ್ದ ಅಶೋಕ್ ಎಂಬಾತ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ಸವಗಳು ಬದುಕಿಗೆ ದಾರಿದೀಪ
ಕಾಸರಗೋಡು: ಉತ್ಸವಗಳು ರಂಜನೆಯ ಮಾಧ್ಯಮವಾಗಿರದೆ ಬದುಕಿಗೆ ದಾರಿದೀಪವಾಗಿದೆ ಎಂದು ಕುಂಬಳೆ ಸಹಕಾರಿ ಬ್ಯಾಂಕಿನನಿದರ್ೇಶಕ ಮುರಳೀಧರ ಯಾದವ್ ಹೇಳಿದರು.
ಕುಂಬಳೆ ಸಮೀಪದ ಮುಜುಂಗಾವು ಶ್ರೀಪಾರ್ಥಸಾರಥಿ ಕೃಷ್ಣ ದೇವಸ್ಥಾನದಲ್ಲಿ ಕಾವೇರಿ ಮಹಿಳಾ ಸ್ವಸಹಾಯ ಸಂಘದ ಆಶ್ರಯದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯ ಧಾಮರ್ಿಕ ಸಭೆಯಲ್ಲಿ ಅವರು ಮಾತನಾಡಿದರು.
ಉಮಾವತಿ ಅಧ್ಯಕ್ಷತೆ ವಹಿಸಿದ್ದರು. ಉಮೇಶ್ ಕುಲಾಲ್, ನಂದಕಿಶೋರ್ ಕುಳ, ರಮೇರ್ಶ ಬಳ್ಳಕ್ಕುರಾಯ ಹಾಜರಿದ್ದರು.
ಕಾರ್ಯದಶರ್ಿ ಪ್ರೇಮ ಸ್ವಾಗತಿಸಿ, ಗಿರಿಜಾ ವಂದಿಸಿದರು.
ಕಾಸರಗೋಡು: ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಮಧೂರು ಗ್ರಾಮ ಪಂಚಾಯ್ತಿಯ ಕಾಳ್ಯಂಗಾಡು ಅಂಗನವಾಡಿಗೆ ಲಭಿಸಿದ ಕಂಪ್ಯೂಟರನ್ನು ಪಂಚಾಯ್ತಿ ಅಧ್ಯಕ್ಷ ವಿಠಲ ಶೆಟ್ಟಿ ಉದ್ಘಾಟಿಸಿದರು.
ಉಪಾಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್ ಪಾರೆಕಟ್ಟೆ, ಸದಸ್ಯರಾದ ಅಶೋಕ್ ನಾಯ್ಕ್, ರಾಧಾಕೃಷ್ಣ ಬಲ್ಯಾಯ ಹಾಜರಿದ್ದರು.
ಐ.ಸಿ.ಡಿ.ಎಸ್. ಅಧಿಕಾರಿ ಮಣಿಯಮ್ಮ ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ ರಮಾಭಾಯಿ ವಂದಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English links our home land to the world.
:::: the signature of Kasaragod ::::
ಕಾಸರಗೋಡು: ಜಿಲ್ಲಾ ಪಂಚಾಯ್ತಿಯ ಯೋಜನೆಯಡಿ 37 ಶಾಲೆಗಳಿಗೆ ಪೀಠೋಪಕರಣಗಳನ್ನು ವಿತರಿಸಲಾಗುವುದು ಎಂದು ಶಿಕ್ಷಣ-ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ನಾರಾಯಣನ್ ಮಂಗಳವಾರ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ತಿಳಿಸಿದರು.
1,500 ಬೆಂಚು ಮತ್ತು ದೆಸ್ಕುಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಅನಸ್ಥೇಶಿಯ ನೀಡಿ ಆಸ್ಕರ್ ಎಂಬ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣದ ಬಗ್ಗೆ ಕ್ರಿಮಿನಲ್ ದಾವೆ ಹೂಡಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಸಭೆಯಲ್ಲಿ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ವೈದ್ಯಾಧಿಕಾರಿ, ಫಾರೆನ್ಸಿಕ್ ಸರ್ಜನ್, ಸರ್ಕಾರಿ ಪ್ಲೀಡರ್, ತಜ್ಞ ವೈದ್ಯರನ್ನೊಳಗೊಂಡ ಸಮಿತಿಯ ಸಭೆ ಇದೇ 7ರಂದು ಸೇರಿ ತನಿಖಾ ವರದಿ ತಯಾರಿಸಲಾಗುವುದು ಎಂದವರು ವಿವರಿಸಿದರು.
ಆರೋಗ್ಯ ಸುರಕ್ಷಾ ಯೋಜನೆಯಡಿ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಎಚ್.ಐ.ವಿ. ಬಾಧಿತರಿಗೆ ಪೋಷಕ ಆಹಾರ ನೀಡಲು ಸಭೆ ತೀರ್ಮಾನಿಸಲಾಗಿದೆ. 10 ಲಕ್ಷ ರೂ.ಗಳನ್ನು ಇದಕ್ಕೆ ಮೀಸಲಿಡಲಾಗಿದೆ. ಈಸ್ಟ್ ಏಳೇರಿ, ವಲಿಯಪರಂಬ, ಪಿಲಿಕ್ಕೋಡ್, ಮಂಜೇಶ್ವರ, ಮಂಗಲ್ಪಾಡಿ ಗ್ರಾಮ ಪಂಚಾಯ್ತಿಗಳ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಪ್ರಾಜೆಕ್ಟ್ಗಳಿಗೆ ಸಭೆ ಅಂಗೀಕಾರ ನೀಡಿತು. ಜಿಲ್ಲೆಯಲ್ಲಿ 5.11 ಕೋಟಿ ರೂ.ವೆಚ್ಚದಲ್ಲಿ 65 ಕಾಮಗಾರಿಗಳನ್ನು ನಿರ್ವಹಣಾ ನಿಧಿ ಮತ್ತು ಯೋನಾ ನಿಧಿಯಲ್ಲಿ ಸೇರಿಸಲು ಸಭೆ ತೀಮರ್ಾನಿಸಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಪಿ.ಪಿ. ಮುಸ್ತಫಾ ಅವರಿಗೆ ಡಾಕ್ಟರೇಟ್ ಲಭಿಸಿದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಜಿ.ಪಂ. ಉಪಾಧ್ಯಕ್ಷೆ ಗೀತಾಕೃಷ್ಣನ್,ಸದಸ್ಯರಾದ ಎಂ.ಸಿ.ಖಮರುದ್ದೀನ್, ರೂಪವಾಣಿ ಆರ್.ಭಟ್, ಕೆ.ರಾಘವನ್, ಎಂ.ವಿ.ಪುಷ್ಪಾಕುಮಾರಿ, ಪ್ರಭಾಕರ ಚೌಟ, ಎಂ.ಅನಂತನ್, ಫರೀದಾ ಸಕೀರ್, ಸಬೂರಾ, ಹಣಕಾಸು ಅಧಿಕಾರಿ ಟಿ.ಕೆ.ಸೋಮನ್, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಪಿ.ಚಂದ್ರಶೇಖರನ್, ವಾಸುದೇವನ್ ನಂಬೂದಿರಿ ಹಾಜರಿದ್ದರು.
ಕಾಸರಗೋಡು: ಕಾಸರಗೋಡಿನ `ಯವನಿಕಾ' ರಂಗ ಸಂಸ್ಥೆಯ ಆಶ್ರಯದಲ್ಲಿ `ಬಂದಾ ಬಂದಾ ಸರದಾರ' ಎಂಬ ನಾಟಕ ಇದೇ 6ರಂದು ರಾತ್ರಿ 9.30ಕ್ಕೆ ಮಂಗಳೂರು ಆಕಾಶವಾಣಿಯಲ್ಲಿ ಬಿತ್ತರವಾಗಲಿದೆ.
ರಷ್ಯನ್ ಮೂಲ ನಾಟಕವನ್ನು ನಿದರ್ೇಶಕ ಶ್ರೀನಿವಾಸಪ್ರಭು ರೂಪಾಂತರಿಸಿದ ಕೃತಿಯನ್ನು ಯವನಿಕ ತಂಡಕ್ಕಾಗಿ ರಂಗಕಮರ್ಿ ಕಾಸರಗೋಡು ಚಿನ್ನಾ ನಿದರ್ೇಶಿಸಿದ್ದಾರೆ.
ಸುಬ್ಬಣ್ಣ ಶೆಟ್ಟಿ, ಪಬ್ಬಾ ಕೊರಕ್ಕೋಡು, ಸತೀಶ್ಚಂದ್ರ ಭಂಡಾರಿ, ಚಂದ್ರಕಾಂತ ಪಟ್ಟತ್ತಾನ, ಉದಯ್ಕುಮಾರ್ ಕುಮಾರ್ ಮನ್ನಿಪ್ಪಾಡಿ, ನಾಗರಾಜ, ರಘು ಮೀಪುಗುರಿ, ವಿಠಲ ಶೆಟ್ಟಿ, ಜಿ.ಕೆ.ಶೆಟ್ಟಿ, ಸತ್ಯನಾರಾಯಣ ನಟಿಸಿದ್ದಾರೆ. ಬಾಬೂಜಿ ಭಟ್ ರಾಗ ಸಂಯೋಜಿಸಿದ ಹಾಡುಗಳಿಗೆ ಕೂಡ್ಲು ವಿಠಲ ಶೆಟ್ಟಿ ಕಂಠದಾನ ನೀಡಿದ್ದಾರೆ. ಉಮೇಶ್ ಪೈ ತಬ್ಲಾದಲ್ಲಿ ಸಹಕರಿಸಿದ್ದಾರೆ.
ನಿಧನ
ಕಾವೇರಿ
ಮಂಜೇಶ್ವರ: 5 ತಲೆಮಾರಿನ ಕುಟುಂಬದ ಜೀವಂತ ಕೊಂಡಿ ಎನಿಸಿದ್ದ ಇಲ್ಲಿನ ವಕರ್ಾಡಿ ಸಮೀಪದ ಕಾಪಿರಿ ನಿವಾಸಿ ಕಾವೇರಿ ಎಂಬವರು ನಿಧನರಾದರು.
ಅವರಿಗೆ 103 ವಯಸ್ಸಾಗಿತ್ತು. ಐವರು ಮಕ್ಕಳಿದ್ದಾರೆ.
ಈಶ್ವರ ಮುಳಿಯಾರು
ಕಾಸರಗೋಡು: ನಿವೃತ್ತ ಹೆಡ್ ಕಾನ್ಸ್ಟೇಬಲ್ ಈಶ್ವರ ಮುಳಿಯಾರು(67) ಸೋಮವಾರ ಮುಂಜಾನೆ ನಿಧನರಾದರು.
ಬಂಟ್ವಾಳ, ಉಡುಪಿ, ಕುಂದಾಪುರ, ಮಂಗಳೂರು, ಕುಶಾಲನಗರ, ಮೈಸೂರಿನಲ್ಲಿ ಸೇವೆ ಸಲ್ಲಿಸಿದ್ದರು. ಭವಾನಿ ಮತ್ತು ಶಿವಮ್ಮ ಎಂಬ ಇಬ್ಬರು ಪತ್ನಿಯರು ಹಾಗೂ 7 ಮಕ್ಕಳಿದ್ದಾರೆ.
ಕಾಸರಗೋಡಿನ ಲಲಿತಕಲಾ ಸದನದಲ್ಲಿ ಶನಿವಾರ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಸಹಯೋಗದಲ್ಲಿ ಆಯೋಜಿಸಿದ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶಾಂತಮಲ್ಲ ಮಲ್ಲಿಕಾಜರ್ುನ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾಸರಗೋಡು: ತುಳು, ಕೊಡವ ರಾಜ್ಯಗಳ ಬೇಡಿಕೆ ಅಧಿಕಾರ ದಾಹದಿಂದ ಕೂಡಿದ ರಾಜಕೀಯ ಎಂದು ಕೃಷ್ಣ ಶೆಟ್ಟಿ ಮಂಗಳೂರು ಭಾನುವಾರ ಇಲ್ಲಿ ವಿವರಿಸಿದರು.
ಕಾಸರಗೋಡಿನ ಲಲಿತಕಲಾ ಸದನದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಸಹಯೋಗದಲ್ಲಿ ಆಯೋಜಿಸಿದ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಭಾನುವಾರ ಆಯೋಜಿಸಿದ ಹೊನಾಡು-ಗಡಿನಾಡು ಕನ್ನಡಿಗ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಸರಗೋಡು ಗಡಿನಾಡ ಕನ್ನಡಿಗರಿಗೆ ಕೇರಳವೇ ಸುರಕ್ಷಿತ ಎಂದವರು ಹೇಳಿದರು.
ಭಾಷೆಗಿಂದ ಬದುಕು ಮುಖ್ಯವಾಗಿದೆ. ಈ ಗೊಂದಲ, ಅನಿಶ್ಚಿತತೆ, ಅಭದ್ರತೆಯಿಂದ ಕನ್ನಡ ಮೂಲೆಗುಂಪಾಗುತ್ತಿದೆ. ಇಚ್ಚಾಶಕ್ತಿ, ಕ್ರಾಂತಿಕಾರಿ ಬದಲಾವಣೆಯಿಂದ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಸದಾನಂದ ಎಂ.ಕತಾರ್ ವಿಶ್ಲೇಷಿಸಿದರು.
ಶಿವಪ್ಪ ನಾಯಕನ ಕೆಚ್ಚು:
ಕಾಸರಗೋಡಿನ ಕನ್ನಡದ ದುಸ್ಥಿತಿಗೆ ಬದಲಾದ ಭಾಷಿಕ ಸಂದರ್ಭ ಹಾಗೂ ಸ್ಥಾನಮಾನ ಕಾರಣ. ಮಲೆಯಾಳದ ಮಣ್ಣಿಗೆ ಕಾಸರಗೋಡು ಸೇರಿದ ಬಳಿಕ ಕನ್ನಡದ ಪ್ರಾಬಲ್ಯ ಕುಸಿಯುತ್ತಾ ಬಂತು. ಶಿಕ್ಷಣ ಮತ್ತು ಉದ್ಯೋಗ ನಿಮಿತ್ತ ಇಲ್ಲಿನ ಕನ್ನಡಿಗರು ವಲಸೆ ಹೋಗುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಶಿವಪ್ಪ ನಾಯಕನ ಕೆಚ್ಚು ಇದ್ದರೆ ಮಾತ್ರ ಇಲ್ಲಿ ಕನ್ನಡ ಉಳಿಸಲು ಸಾಧ್ಯ ಎಂದು ಡಾ.ಕಮಲಾಕ್ಷ ಹೇಳಿದರು.
ಆಯಿಷಾ ಎಂ.ಪೆರ್ಲ ಮಾತನಾಡಿ, ಕನ್ನಡ ಸಮಸ್ಯೆಯ ಸುಳಿಯಲ್ಲಿದೆ. ಇದರಿಂದ ಕಾಸರಗೋಡಿನ ಕನ್ನಡಿಗರ ಸ್ಥಿತಿ ಶೋಚನೀಯವಾಗಿದೆ ಎಂದರು. ದಾಕ್ಷಿಣ್ಯವೇ ಕನ್ನಡಿಗರ ದೌರ್ಬಲ್ಯವಾಗಿದೆ ಎಂದು ಸಾಣೂರು ಸತೀಶ್ ಸಾಲಿಯಾನ್ ಅಭಿಪ್ರಾಯಪಟ್ಟರು. ಕನ್ನಡಕ್ಕೆ ವ್ಯಕ್ತಿಗತ ಕೊಡುಗೆ ದೊಡ್ಡದು. ಇಲ್ಲಿ ತುಳುವರು ಅವಗಣನೆಗೆ ಒಳಗಾಗಿದ್ದಾರೆ ಎಂದು ರಾಜೇಶ್ ಆಳ್ವ ಬದಿಯಡ್ಕ ಹೇಳಿದರು.
ರಾಜಕಾರಣಿಗಳು ಭಾಷೆ-ನೆಲ-ನೀರಿನ ವಿಷಯದಲ್ಲಿ ಜಗಳವಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಮನುಷ್ಯ ಸಂಬಂಧವನ್ನು ಒಡೆಯುತ್ತಿದೆ ಎಂದು ಶಿವಾನಂದ ಸೋಮಪ್ಪ ಬೆಂಗಳೂರು ತಿಳಿಸಿದರು.
ಎ.ಶ್ರೀನಾಥ್ ಕಾಸರಗೋಡು ಸ್ವಾಗತಿಸಿ, ಬಿ.ಬಾಲಕೃಷ್ಣ ಅಗ್ಗಿತ್ತಾಯ ವಂದಿಸಿದರು. ಶ್ರೀನಿವಾಸ ಆಳ್ವ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಹನಿ-ಹಾಸ್ಯ ಗೋಷ್ಠಿಯಲ್ಲಿ ರಾಜಗೋಪಾಲ್ ಕೋಲಾರ, ಸುಪ್ರಭಾ ಬೆಂಗಳೂರು ಮತ್ತು ಭಾಸ್ಕರ ಹೆಬ್ಬಾರ್ ಭಾಗವಹಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::