Saturday, August 8, 2009

ಹುಡುಗಿ ಕಾಣೆ ಪ್ರಕರಣ/Missing Lady

ದಿನಾಂಕ:7/08/09 ರಂದು 18:30 ಗಂಟೆಗೆ ಉಡುಪಿ ತಾಲೂಕು ನಂಚಾರು ಗ್ರಾಮದ ಹೊಸ ಮನೆ ವಾಸಿ ಮಹಾಬಲ ಕುಂದರ್(52) ತಂದೆ: ಮೋನ ಹಾಂಡ ಠಾಣೆಗೆ ಬಂದು ನೀಡಿದ ಹಾಜರಾಗಿ ತನ್ನ ಮಗಳಾದ 20 ವರ್ಷ ಪ್ರಾಯದ ಯಶೋಧ ಎಂಬವರು ನಂಚಾರು ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು ದಿನಾಂಕ 06/08/09 ರಂದು ಬೆಳಿಗ್ಗೆ 11:00 ಗಂಟೆಗೆ ಆಕೆಯು ತನಗೆ ಹುಶಾರಿಲ್ಲ ಎಂದು ಮನೆಯಲ್ಲಿ ತಿಳಿಸಿ ಅಂಗನವಾಡಿಗೆ ಹೋಗದೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದು ಬರುವುದಾಗಿ ತಿಳಿಸಿ ಮನೆುಂದ ಹೋದವಳು, ಅದೇ ದಿನ ಸಂಜೆ ಸಂಬಂಧಿಕರಾದ ಜಯರಾಮ ಎಂಬವರ ಮೊಬೈಲ್ ಫೋನಿಗೆ ಕರೆಮಾಡಿ ನನ್ನನ್ನು ಹುಡಕಬೇಡಿ, ನಾನು ಆಕಸ್ಮಿಕ ಸಿಕ್ಕಿದರೆ ವಿಷ ಕುಡಿದು ಸಾಯುತ್ತೇನೆ ಎಂದು ಸಂದೇಶ ವನ್ನು ನೀಡಿದ್ದು ಯಶೋಧಳನ್ನು ನೆರೆಕರೆಯಲ್ಲಿ ಮತ್ತು ಸಂಬಂಧಿಕರ ಮನೆಯಲ್ಲಿ ಹುಡುಕಾಡಿದಲ್ಲಿ ಯಾವುದೇ ಮಾಹಿತಿ ದೊರೆತಿರುವುದಿಲ್ಲವಾಗಿ ಮಹಾಬಲ ಕುಂದರ್(52)ರವರು ದೂರು ನೀಡಿದ್ದು ಅವರ ದೂರಿನಂತೆ ಕೋಟಾ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 187/09 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.ಕಾಣೆಯಾದ ಹುಡುಗಿಂಯು ಸುಮಾರು 4 ಅಡಿ 5 ಇಂಚು ಎತ್ತರ ಇದ್ದು ಎಣ್ಣೆಕಪ್ಪು ಮೈಬಣ್ಣ, ಸಪೂರ ಶರೀರ ಹೊಂದಿದ್ದು ಕೆಂಪು ಚುಕ್ಕೆ ಹಾಗೂ ಡಿಸೈನ್ ಹೊಂದಿದ ಚೂಡಿದಾರ ಹಳದಿ ಬಣ್ಣದ ವೇಲ್ ಧರಿಸಿರುತ್ತಾಳೆ,ಕನ್ನಡ ಭಾಷೆ ಬಲ್ಲವಳಾಗಿರುತ್ತಾಳೆ. ಕಾಣೆಯಾದ ಹುಡುಗಿ ಪತ್ತೆಯಾದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ ವೃತ್ತ (0820 - 2561966), ಅಥವಾ ಪೊಲೀಸ್ ಉಪ ನಿರೀಕ್ಷಕರು ಕೋಟಾ ಠಾಣೆ (0820- 2364155) ಅಥವಾ ಪೊಲೀಸ್ ಕಂಟ್ರೋಲ್ ರೂಂ, ಉಡುಪಿ (0820 - 2526444)ರವರಿಗೆ ತಿಳಿಸಲು ಕೋರಲಾಗಿದೆ.
 
ಹುಡುಗ ಕಾಣೆ
 
ದಿನಾಂಕ. 06/08/2009 ರಂದು ಬೆಳಿಗೆ ಮಣಿಪುರ ಗ್ರಾಮದ ನಿವಾಸಿ ಕರೀಂ ಹಾಜಿ ಎಂಬುವರ ಮಗನಾದ ಆಶ್ರಫ್ (22) ಎಂಬವರು ಎಂದಿನಂತೆ ಕಂಪ್ಯೂಟರ್ ಕಲಿಯಲೆಂದು ಮನೆುಂದ ಹೊರಟವನು ಈವರಗೆ ಮನೆಗೆ ಬಂದಿರುವುದಿಲ್ಲ ಹಾಗೂ ಎಲ್ಲಾ ಕಡೆಗಳಲ್ಲಿ ಸಂಬಂದಿಕರ ಮನೆಗಳಲ್ಲಿ ಹುಡುಕಿದರೂ ಸಿಗದೇ ಕಾಣೆಯಾಗಿರುತ್ತಾರೆ ಈ ಬಗ್ಗೆ ಕರೀಂ ಹಾಜಿ ತಂದೆ: ಹಾಜಿ ಬ್ಯಾರಿ ವಾಸ: ಮಣಿಪುರ ಗ್ರಾಮ, ಉಡುಪಿ ತಾಲೂಕು ರವರು ದೂರು ನೀಡಿದ್ದು ಅವರ ದೂರಿನಂತೆ ಕಾಪು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 156/09 ಕಲಂ ಹುಡುಗ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲರುತ್ತದೆ.ಕಾಣೆಯಾದ ಹುಡುಗನು ಸುಮಾರು 5 ಅಡಿ 7 ಇಂಚು ಎತ್ತರ ಇದ್ದು ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು ,ಕನ್ನಡ,ಹಿಂದಿ,ಉದರ್ು ಮತ್ತು ತುಳು ಭಾಷೆ ಬಲ್ಲವಳಾಗಿರುತ್ತಾಳೆ. ಕಾಣೆಯಾದ ಹುಡುಗ ಪತ್ತೆಯಾದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು ಕಾಪು ವೃತ್ತ (0820 - 25551033), ಅಥವಾ ಪೊಲೀಸ್ ಉಪ ನಿರೀಕ್ಷಕರು ಕಾಪು ಠಾಣೆ (0820- 2552133) ಅಥವಾ ಪೊಲೀಸ್ ಕಂಟ್ರೋಲ್ ರೂಂ, ಉಡುಪಿ (0820 - 2526444)ರವರಿಗೆ ತಿಳಿಸಲು ಕೋರಲಾಗಿದೆ. 
 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಕಳವು ಪ್ರಕರಣ/Stolen


ದಿನಾಂಕ 06/08/09 ರಂದು ರಾತ್ರಿ 8.05 ಗಂಟೆಯಿಂದ ದಿ.07/08/09ರಂದು ಬೆಳಿಗ್ಗೆ 09.10 ಗಂಟೆಯ ನಡುವಿನ ಅವಧಿಯಲ್ಲಿ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಇರುವ ರಾಜ್ ಟವರ್ನಲ್ಲಿನ ಡಿಜಿಟಲ್ ವಲ್ಡರ್್ ಶೋ ರೂಂನ ಒಳ ಪ್ರವೇಶಿಸಿ ಯಾರೋ ಕಳ್ಳರು ಒಳಗಿದ್ದ ಸುಮಾರು 1,04,050/- ಮೌಲ್ಯದ 6 ನೋನಿ ಹ್ಯಾಂಡಿಕ್ಯಾಂ, ರೂ 1,78,430/- ಮೌಲ್ಯದ ಸೋನಿ ಕ್ಯಾಮರ-20, ರೂ 63,200/-ರೂಪಾಯಿ ಮೌಲ್ಯದ ಸೋನಿ ಎಂಪಿ3-20ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 3,45,680 ಆಗಿರುತ್ತದೆ. ಈ ಬಗ್ಗೆ ಜೀವನ್ ಕುಮಾರ್(28) ತಂದೆ:ರಾಘವ್ ಪೂಜಾರಿ ವಾಸ: ವಜ್ರಾಕ್ಷಿ ನಿಲಯ, ಹಾಳೆ ಕಟ್ಟೆ, ಕಲ್ಯ ಪೋಸ್ಟ್, ಕಾರ್ಕಳ ತಾಲೂಕು ರವರು ದೂರು ನೀಡಿದ್ದು ಅವರ ದೂರಿನಂತೆ ಉಡುಪಿನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 261/09 ಕಲಂ 457,454,380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 05/08/09 ರಂದು ಜಯಕರ ಸಾಲ್ಯಾನ್ ತಂದೆ:ಲಚ್ಚ ಸುವರ್ಣ ವಾಸ:ಮದ್ವ ನಗರ, ಕೊಡವೂರು, ಉಡುಪಿ ಎಂಬವರು ಉಡುಪಿ ಗೋವಿಂದ ಕಲ್ಯಾಣ ಮಂಟಪದ ಸಮೀಪವಿರುವ ರಘುರಾಮ ಶೆಟ್ಟಿಯವರ ಮನೆಗೆ ಪ್ಲಂಬಿಂಗ್ ಕೆಲಸ ನಿಮಿತ್ತ 11.00 ಗಂಟೆಗೆ ಮನೆಯ ಗೇಟ್ನ ಹೊರಗಡೆ ಸ್ಪ್ಲೆಂಡರ್ ಪ್ಲಸ್ ನಂ ಮೋಟಾರು ಬೈಕ್ ನಂ ಕೆಎ-20-ಯು-5288ನೇದನ್ನು ನಿಲ್ಲಿಸಿ ಮನೆಯ ಒಳಗೆ ಹೋಗಿದ್ದು 11.45 ಗಂಟೆ ವೇಳೆಗೆ ಹೊರಗಡೆ ಬಂದು ನೋಡುವಾಗ ಮೋಟಾರು ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಬೈಕಿನ ಅಂದಾಜು ಮೌಲ್ಯ ರೂ 35,000/- ಆಗಿರುತ್ತದೆ. ಈ ಬಗ್ಗೆ ಜಯಕರ ಸಾಲ್ಯಾನ್ ರವರು ದೂರು ನೀಡಿದ್ದು ಅವರ ದೂರಿನಂತೆ ಉಡುಪಿನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 262/09 ಕಲಂ 379, ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
ದಿನಾಂಕ 07/08/09 ರಂದು ಸಂಜೆ ಸುಮಾರು 7 ಗಂಟೆ ಸಮಯಕ್ಕೆ ಉಡುಪಿ ಜಿ.ಬಿ ಪಂತ್ ರಸ್ತೆಯಲ್ಲಿರುವ ಡಿ ಪೈನ್ ಪುಟ್ಕೇರ್ ಎಂಬ ಅಂಗಡಿಯಲ್ಲಿ ಅಬ್ದುಲ್ ಕಯ್ಯಮ್ ತಂದೆ:ಅಬ್ದುಲ್ ರೆಹೆಮಾನ್ ವಾಸ:ಹೂಡೆ, ಚಕ್ಕಿತೋಟ, ಉಡುಪಿ ಎಂಬವರು ವ್ಯಾಪಾರ ಮಾಡುತ್ತಿರುವ ಸಮಯ ಅದ್ನಾನ್ ಪ್ಯಾನ್ಸಿ ಅಂಗಡಿಯ ಎದುರು ಆಪಾದಿತರು ಸ್ಕೋಪರ್ಿಯೊ ಕಾರನ್ನು ನಿಲ್ಲಿಸಿ ಹೋಗಿದ್ದು, ಆ ವೇಳೆ ಕೆನೆಟಿಕ್ ಹೊಂಡದಲ್ಲಿ ಬಂದ ಅದ್ನಾನ್ ಪ್ಯಾನ್ಸಿ ಅಂಗಡಿಯ ಶಾಹಿದ್ ಎಂಬವರ ಬಾಬ್ತು ವಾಹನವನ್ನು ನಿಲ್ಲಿಸುವರೇ ಜಾಗ ಇಲ್ಲದ ಕಾರಣ ವಾಹನವನ್ನು ಮುಂದೆ ಇಡುವರೇ ಕಾರಿನವರಲ್ಲಿ ತಿಳಿಸಿ ಎಂಬುದಾಗಿ ಆಪಾದಿತ ಸತೀಶ್ ಕಲ್ಮಾಡಿ ಬಳಿ ಹೇಳಿದಾಗ ಅವರು ಅಬ್ದುಲ್ ಕಯ್ಯಮ್ರನ್ನು ಅವಾಚ್ಯ ಶಬ್ದದಿಂದ ಬೈದ್ದಲ್ಲದೇ ಜೀವಬೆದರಿಕೆ ಒಡ್ಡಿದ್ದು ನಂತರ ಇನ್ನೊಬ್ಬ ಆಪಾದಿತರಾದ ಕೃಷ್ಣ ಕಟಪಾಡಿ ಯವರು ಅಂಗಡಿಯ ಒಳಗೆ ಬಂದು ಕೆನ್ನೆಗೆ ಹೊಡೆದು ಅಂಗಡಿಯಲ್ಲಿದ್ದ ಚಪ್ಪಲಿಗಳನ್ನು ಚಲ್ಲಾಪಿಲ್ಲಿ ಮಾಡಿರುವುದಾಗಿರುತ್ತದೆ. ಹೊಡೆದ ಪರಿಣಾಮ ಹಣೆಯ ಎಡ ಭಾಗ ಮತ್ತು ಕೆನ್ನೆಗೆ ಎಡಕ್ಕೆ ಒಳನೋವು ಉಂಟಾಗಿರುವುದಾಗಿದೆ. ಈ ಬಗ್ಗೆ ಅಬ್ದುಲ್ ಕಯ್ಯಮ್ ರವರು ದೂರು ನೀಡಿದ್ದು ಅವರ ದೂರಿನಂತೆ ಉಡುಪಿನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 263/09 ಕಲಂ 504,506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ


ಅಪಘಾತ ಪ್ರಕರಣ
ದಿನಾಂಕ 08.8.09 ರಂದು ಮಧ್ಯಾಹ್ನ 1:00 ಗಂಟೆಯ ಸಮಯಕ್ಕೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಪಾಜಿಗುಡ್ಡೆ ಎಂಬಲ್ಲಿ ಬಜಗೋಳಿ - ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದುದಾರರಾದ ಆನಂದ ಹೆಚ್.ಎಸ್. ತಂದೆ ಶಿವ ಲಿಂಗಪ್ಪ ವಾಸ ಶಿವಲಿಂಗಪೇಟೆ, ಹಾರ್ನಳ್ಳಿ ಗ್ರಾಮ, ಅರಸೀಕೆರೆ ತಾಲೂಕು ಹಾಸನ ಜಿಲ್ಲೆಯವರು ಧರ್ಮಸ್ಥಳ ಕಡೆುಂದ ಹೊರನಾಡು ಕಡೆಗೆ ತನ್ನ ಕ್ರೂಸರ್ ವಾಹನ ನಂಬ್ರ ಕೆಎ.06.ಸಿ.1174 ನೇದನ್ನು ಚಲಾಯಿಸಿಕೊಂಡು ಬರುವಾಗ, ಬಜಗೋಳಿ ಕಡೆುಂದ ಇಂಚರ್ ಗೂಡ್ಸ್ ಟೆಂಪೋ ನಂಬ್ರ ಕೆಎ.46/1863 ನೇದರ ಚಾಲಕ ಟೆಂಪೋವನ್ನು ಬಜಗೋಳಿ ಕಡೆಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ತನ್ನ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಕ್ರೂಸರ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆನಂದ ಹೆಚ್.ಎಸ್ ರವರ ತಲೆ ಮತ್ತು ಕೈಗೆ ಹಾಗೂ ಕ್ರೂಸರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯೋಗೀಶ್ ಎಂಬವರ ತಲೆಗೆ ರಕ್ತ ಗಾಯವಾಗಿರುತ್ತದೆ ಎಂಬುದಾಗಿ ಆನಂದ ಹೆಚ್.ಎಸ್. ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 91/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಪ್ರಕರಣ
ದಿನಾಂಕ 07.08.09 ರಂದು ಮಧ್ಯಾಹ್ನ 14.30 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು ಚೇಕರ್ಾಡಿ ಗ್ರಾಮದ ಕನ್ನಾರು ಗುಡ್ಡೆ ಮನೆ ವಾಸಿ ಉಮೇಶ ನಾಯ್ಕ (25 ವರ್ಷ) ತಂದೆ : ಗೋಪಾಲ ಕೃಷ್ಣ ನಾಯ್ಕ ಎಂಬವರ ಅಣ್ಣ ಸುಮಾರು 30 ವರ್ಷ ಪ್ರಾಯದ ರಮೇಶ ನಾಯ್ಕರವರು ಅಮಲು ಸೇವನೆ ಮಾಡಿ ಮನೆಯಲ್ಲಿ ಮಲಗಿದ್ದು, ಅವರ ಹೆಂಡತಿ ರಂಜಿತಾರವರು ತನ್ನ ಮಕ್ಕಳನ್ನು ಶಾಲೆಯಿಂದ ವಾಪಾಸು ಕರೆದುಕೊಂಡು ಬರಲು 16:00 ಗಂಟೆಗೆ ಹೊರಟು ವಾಪಾಸು 16.45 ಗಂಟೆಗೆ ಮನೆಗೆ ಬಂದಾಗ ಅವರ ಅಣ್ಣ ರಮೇಶ ನಾಯ್ಕನು ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥ ಗೊಂಡವರನ್ನು ನೋಡಿ ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಉಡುಪಿ ಸರಕಾರಿ ಆಸ್ಪತ್ರೆಯ ವೈಧ್ಯರು ಸಂಜೆ 18:30 ಗಂಟೆಗೆ ಪರೀಕ್ಷಿಸಿದಾಗ ತರುವಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿದ್ದು, ರಮೇಶನು ಯಾವುದೋ ವ್ಯಯಕ್ತಿಕ ಸಮಸ್ಯೆಯಿಂದ ಅಮಲು ಸೇವನೆ ಮಾಡಿ ಜೀವನದಲ್ಲಿ ಜಿಗುಪ್ಸೆ ಗೊಂಡು ವಿಷ ಪದಾರ್ಥವನ್ನು ಸೇವಿಸಿ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮೃತರ ತಮ್ಮನಾದ ಉಮೇಶ ನಾಯ್ಕ ರವರು ಬ್ರಹ್ಮಾವರ ಠಾಣೆಗೆ ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 25/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರ ಪ್ರಕರಣ
ದಿನಾಂಕ 08-08-09ರಂದು ಶ್ರೀ ಬಾಬು ದೇವಾಡಿಗ ತಂದೆ: ಮರ್ಲ ದೇವಾಡಿಗ ವಾಸ: ಕಾವೇರಿ ನಿಲಯ, ಕೊಡಪಾಡಿ, ಗುಜ್ಜಾಡಿ ಗ್ರಾಮದವರು ಹಾಗೂ ಮಾದ, ಲೊಕೇಶ, ಗಿರಿಜ, ರಾಮ, ಕಿರಣ, ಜಗದೀಶರವರುಗಳು ಮಾನ್ಯ ನ್ಯಾಯಾಲಯದ ಆದೇಶದಂತೆ ಗದ್ದೆಗೆ ಹೋಗುವ ನೀರಿನ ತೋಡನ್ನು ಸ್ವಚ್ಚತೆಗೊಳಿಸಿ ಮನಗೆ ಹೋಗುತ್ತಿರುವಾಗ ಆಪಾದಿತ ವಸಂತ ಕುಮಾರ್ @ ಮಣಿಕಂಠ ತಾು ಪದ್ದು ಪೂಜಾರ್ತಿ ವಾಸ: ಕೊಡಪಾಡಿ, ಗುಜ್ಜಾಡಿ ಗ್ರಾಮದವರು ಮಧ್ಯಾಹ್ನ 2:00 ಗಂಟೆಗೆ ಬಾಬು ದೇವಾಡಿಗ ಮತ್ತು ಇತರರನ್ನು ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾಗಿದೆ ಎಂಬುದಾಗಿ ಬಾಬು ದೇವಾಡಿಗ ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 79/09 ಕಲಂ 341, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ದಿ: 04/08/09 ರಂದು ರಾತ್ರಿ 8:30 ಗಂಟೆಗೆ ನವೀನ್ ಶೆಟ್ಟಿ ತಂದೆ:ರವಿ ಶೆಟ್ಟಿ ವಾಸ:ಕಡೆಕಾರ್ ಗ್ರಾಮ, ಕಿನ್ನಿಮೂಲ್ಕಿ ಉಡುಪಿ ಎಂಬವರು ತಮ್ಮ ಮಾವ ಕುಶಲ ಶೆಟ್ಟಿರವರೊಂದಿಗೆ ಕಿನ್ನಿಮುಲ್ಕಿಯಲ್ಲಿರುವ ದಿನಸಿ ಅಂಗಡಿಯ ಎದುರು ರಸ್ತೆಯ ಬಳಿ ನಿಂತುಕೊಂಡಿರುವ ಸಮಯ ಆಪಾದಿತ ಕೆ.ಎ-19-ಎ.ಸಿ-31ನೇ ಶ್ರೀದೇವಿ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆುಂದ ಮಂಗಳೂರು ಕಡೆುಂದ ಚಲಾುಸಿಕೊಂಡು ತೀರಾ ಬಲಬದಿಗೆ ಬಂದು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಕುಶಲ ಶೆಟ್ಟಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಕುಶಲ ಶೆಟ್ಟಿರವರು ರಸ್ತೆಗೆ ಬಿದ್ದರು ಬಿದ್ದ ಪರಿಣಾಮ ಕುಶಲ ಶೆಟ್ಟಿರವರ ತಲೆಯ ಹಿಂಬದಿಗೆ ಜಜ್ಜಿದ ತೀವ್ರತರದ ಗಾಯವಾಗಿದ್ದು ಎರಡೂ ಕೈಗಳ ಮೊಣಕೈ ಹಾಗೂ ಹಸ್ತದ ಹಿಂಬದಿ ತರಚಿದ ರಕ್ತ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಕೂಡಲೇ ಹೈಟೆಕ್ ಆಸ್ಪತ್ರೆಗೆ ಕರೆ ತಂದಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾಗಿರುತ್ತದೆ. ಈ ಅಪಘಾತದ ಬಗ್ಗೆ ನವೀನ್ ಶೆಟ್ಟಿ ರವರು ದೂರು ನೀಡಿದ್ದು ಅವರ ದೂರಿನಂತೆ ಉಡುಪಿನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 260/09 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ವೇಶ್ಯಾವಾಟಿಕೆ ಪ್ರಕರಣ: ಕುಂಬಳೆ ಸಿ.ಐ.ಗೆ


ಕಾಸರಗೋಡು: ಕಲ್ಲಿಕೋಟೆಯ ಯುವತಿಯನ್ನು ವೇಶ್ಯಾವಾಟಿಕೆಗೆ ಬಳಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರ ಪೊಲೀಸರಿಗೆ ರಿಯಾನ ನಾಪತ್ತೆ ಪ್ರಕರಣದ ತನಿಖೆಯ ಹೊಣೆ ಇರುವ ಕಾರಣ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಕುಂಬಳೆ ಸಿ.ಐ. ಕೆ.ದಾಮೋದರನ್ ಅವರಿಗೆ ವಹಿಕೊಡಲಾಗಿದೆ.
 
 
ಕಾರು ಮತ್ತು ಬೈಕ್ ಡಿಕ್ಕಿ: ಸಾವು
 
ಕಾಸರಗೋಡು: ಕಾರು ಮತ್ತು ಬೈಕ್ ಡಿಕ್ಕಿ ಹೊಡೆದು ಮುಳಿಯಾರು ಸಮೀಪದ ಇರಿಯಣ್ಣಿ ಕಾಟಿಪಳ್ಳ ನಿವಾಸಿ ಬಿ.ಕೆ.ನಾರಾಯಣನ್ ಅವರ ಪುತ್ರ ಲೆನಿನ್(25) ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಪಯ್ಯನ್ನೂರಿನ ಕಣ್ಣಂಗಾಡ್ ಕ್ಷೇತ್ರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಇವರ ಜತೆಯಲ್ಲಿ ಸಂಚರಿಸುತ್ತಿದ್ದ ತಾಯನ್ನೂರು ಎಣ್ಣಪ್ಪಾರ ನಿವಾಸಿ ನಾರಾಯಣನ್ ಗಂಭೀರವಾಗಿ ಗಾಯಗೊಂಡುಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ.

 
ಕೊಲೆ ಯತ್ನ : ಆರೋಪಿ ಸೆರೆ
 
ಕಾಸರಗೋಡು: ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಯನ್ನು ಕುಂಬಳೆ ಸಿ.ಐ. ಕೆ.ದಾಮೋದರನ್ ಬಂಧಿಸಿದ್ದಾರೆ.
ಬಂದ್ಯೋಡು ಮುಟ್ಟ ನಿವಾಸಿ ಸಫಾ ಅಶ್ರಫ್ ಎಂಬಾತನೇ ಆರೋಪಿ. ಪೈವಳಿಕೆಯ ಖಾಲಿದ್ ಮತ್ತು ಅವರ ಸಹೋದರ ಖಾದರ್ ಎಂಬವರನ್ನು ತಿಂಗಳ ಹಿಂದೆ ಈತ ಇರಿದು ಗಾಯಗೊಳಿಸಿದ್ದಾನೆ ಎಂದು ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
 
 
120 ಗ್ರಾಂ. ಗಾಂಜಾ ಸಹಿತ ಸೆರೆ
 
ಕಾಸರಗೋಡು: 120 ಗ್ರಾಂ ಗಾಂಜಾ ಸಹಿತ ಓರ್ವ ಆರೋಪಿಯನ್ನು ನಗರದ ಹಳೆ ಬಸ್ಸು ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ.
ಆಲಂಪಾಡಿ ಕೆ.ಕೆ.ಹೌಸ್ನ ಕೆ.ಪಿ.ಅಬ್ದುಲ್ ಶಫೀಕ್(52) ಬಂಧನೊಳಕ್ಕಾದ ಆರೋಪಿ. ಶುಕ್ರವಾರ ಸಂಜೆ ಗಾಂಜಾದೊಂದಿಗೆ ಸಂಚರಿಸುತ್ತಿದ್ದ ಈತನನ್ನು ಟ್ರಾಫಿಕ್ ಎಸ್.ಐ. ಎ.ರಾಜೇಶ್ ಬಂಧಿಸಿದರು.
 
 
ರೈಲು ಡಿಕ್ಕಿ: ಅಪರಿಚಿತ ಶವ ಪತ್ತೆ
 
ಕಾಸರಗೋಡು: ಕಾಞಂಗಾಡು ರೈಲ್ವೇ ನಿಲ್ದಾಣದ ಬಳಿ ರೈಲು ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ.
ಮಂಗಳೂರಿಗೆ ಬರುತ್ತಿದ್ದ ಕೊಯಂಬತ್ತೂರು ಫಾಸ್ಟ್ ಪ್ಯಾಸೆಂಜರ್ ರೈಲು ಸಂಚರಿಸಿದ ಬಳಿಕ ಶವ ಪತ್ತೆಯಾಗಿದೆ. ರುಂಡ ಮುಂಡ ಬೇರ್ಪಟ್ಟಿದೆ. ಕಾಞಂಗಾಡು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಶವವನ್ನು ಇರಿಸಲಾಗಿದೆ.
  
ಗೂಂಡಾ ಪಟ್ಟಿಯ ಆರೋಪಿ ಸೆರೆ
 
ಮಂಜೇಶ್ವರ: ಗೂಂಡಾ ಪಟ್ಟಿಯಲ್ಲಿ ಸೇರ್ಪಡೆಗೊಂಡ ಉಪ್ಪಳದ ಹಿದಾಯತ್ ನಗರದ ಷೇಕ್ ಸಮದನಿ ಪುತ್ರ ಅಸರ್(23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯತ್ನ ಪ್ರಕರಣ ಸಹಿತ ಹತ್ತಕ್ಕೂ ಅಧಿಕ ಪ್ರಕರಣದಲ್ಲಿ ಈತ ಶಾಮೀಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
 
15 ಪವನ್ ಚಿನ್ನಾಭರಣ ಕಳವು
 
ಮಂಜೇಶ್ವರ: ಉಪ್ಪಳ ಸಮೀಪದ ಐಲದಲ್ಲಿ ಮನೆಗೆ ನುಗ್ಗಿ ಹಾಡಹಗಲೇ 15 ಪವನ್ ಚಿನ್ನಾಭರಣ ಮತ್ತು 1 ಸಾವಿರ ರೂ.ಗಳನ್ನು ಕಳವು ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಘಟನೆಗೆ ಸಂಬಂಧಿಸಿ ಯೋಗೀಶ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳವು ನಡೆದಿದೆ.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ನ.8ರಿಂದ `ಭಾಷಾ ಭಾವೈಕ್ಯತಾ ಸಮಾವೇಶ'/Bhaavakyatha Samaavesha

ಕಾಸರಗೋಡಿನ ಎಡನೀರು ಮಠದ ಸಭಾಂಗಣದಲ್ಲಿ ಸಮಾವೇಶದ ಕುರಿತು ಶನಿವಾರ ಕರೆದ ಪೂರ್ವಭಾವಿ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿ ಡಾ.ಕೆ.ಮುರಳೀಧರ ಮಾತನಾಡಿದರು.

 

ಕಾಸರಗೋಡು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ `ಕನ್ನಡ ನುಡಿ ಉತ್ಸವ'ದ ಅಂಗವಾಗಿ  ನ.8ರಿಂದ 14ರ ವರೆಗೆ ಕಾಸರಗೋಡಿನಲ್ಲಿ `ಭಾಷಾ ಭಾವೈಕ್ಯತಾ ಸಮಾವೇಶ' ಜರುಗಲಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಡಾ.ಕೆ.ಮುರಳೀಧರ ಶನಿವಾರ ಇಲ್ಲಿ ಪ್ರಕಟಿಸಿದರು.
ಎಡನೀರು ಮಠದ ಸಭಾಂಗಣದಲ್ಲಿ ಸಮಾವೇಶದ ಕುರಿತು ಕರೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಅವರು, ಜಿಲ್ಲೆಯ ಕಾಸರಗೋಡು, ಮಂಜೇಶ್ವರ, ಬದಿಯಡ್ಕ, ಮುಳ್ಳೇರಿಯ, ಪೆರ್ಲ, ಧರ್ಮತ್ತಡ್ಕ, ಕುಂಬಳೆ ಮತ್ತು ಬೇಕಲದಲ್ಲಿ ಸಮಾವೇಶದ ಅಂಗವಾಗಿ ವೈವಿಧ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. 
8ರಂದು ಕನ್ನಡ ತೇರಿನ ಮೆರವಣಿಗೆಯೊಂದಿಗೆ ಸಮಾವೇಶ ಉದ್ಘಾಟಿಸಲಾಗುವುದು. ಬಳಿಕ ಬಹುಭಾಷಾ ಜನಪದ ಮೇಳ, 9ರಂದು ಬೆಳಗ್ಗೆ ಕುಂಬಳೆಯಲ್ಲಿ ಬಹುಭಾಷಾ ಚಲನಚಿತ್ರೋತ್ಸವದ ಉದ್ಘಾಟನೆ, ಸಂಜೆ ಎಡನೀರು ಮಠದಲ್ಲಿ ರಂಗೋತ್ಸವದ ಉದ್ಘಾಟನೆ, 10ರಿಂದ 13ರ ವರೆಗೆ ರಂದು ಚಲನಚಿತ್ರ ಪ್ರದರ್ಶನ, 10ರಂದು ಎಡನೀರಿನಲ್ಲಿ ನಾಟಕ ಪ್ರದರ್ಶನ, 11ರಂದು ಎಡನೀರಿನಲ್ಲಿ ಯಕ್ಷಗಾನ ಪ್ರದರ್ಶನ, 12ರಂದು ಮುಳ್ಳೇರಿಯಾದಲ್ಲಿ ಬಹುಭಾಷಾ ಗೀತೆ-ನೃತ್ಯೋತ್ಸವ, 13ರಂದು ಸಂಜೆ ಮಂಜೇಶ್ವರದಲ್ಲಿ ಬಹುಭಾಷಾ ಕವಿಗೋಷ್ಠಿ, 14ರಂದು ಬದಿಯಡ್ಕದಲ್ಲಿ ವಿದ್ಯಾಥರ್ಿಗಳಿಂದ ಚಿತ್ರೋತ್ಸವದ ಚಿತ್ರಗಳ ವಿಮಶರ್ೆ-ಸಂವಾದ, ಸಮಾರೋಪ, ಕನ್ನಡ ಗೀತೋತ್ಸವ ನಡೆಯಲಿದೆ ಎಂದವರು ಸಭೆಯಲ್ಲಿ ವಿವರಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ನಾ.ಡಿ.ಸೋಜಾ, ಬಿ.ಸುರೇಶ, ಸಮಾವೇಶದ ಸಂಚಾಲಕ ವಿಷ್ಣು ನಾಯ್ಕ, ಸಿನಿಮಾ ನಿದರ್ೇಶಕ ಬಿ.ಎಂ.ಸುಬ್ರಹ್ಮಣ್ಯ ಹಾಜರಿದ್ದರು. ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದ ಸ್ಥಳೀಯ ಸಂಘಟಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನರ್ಾಟಕ ಸಮಿತಿಯ ಪ್ರಧಾನ ಕಾರ್ಯದಶರ್ಿ ಡಾ.ಕೆ.ಕಮಲಾಕ್ಷ ವಂದಿಸಿದರು.
 

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Friday, August 7, 2009

ಕಳವು ಆರೋಪಿಯ ಬಂಧನ/Stolen-Arrest


ದಿನಾಂಕ. 6.08.2009 ರಂದು 19:35 ಗಂಟೆಗೆ ಕಾಪು ಪಡುಗ್ರಾಮದ ಪೊಲೀಪು ಜಂಕ್ಷನ್ ಎಂಬಲ್ಲಿ ಕಾಪು ಠಾಣಾ ಸರಹದ್ದಿನ ಪೊಲೀಸ್ ನಿರೀಕ್ಷಕರಾದ ಚೆಲುವರಾಜ್.ಬಿ ಇವರು ಸಿಬ್ಬಂದಿಗಳೊಂದಿಗೆ ಅನುಮಾನಸ್ಪದವಾಗಿ ಬರುತ್ತಿದ್ದ ಕಾರು ನಂಬ್ರ ಕೆಎ-19-ಪಿ-0420 ನ್ನು ನಿಲ್ಲಿಸಿ ಕಾರು ಚಲಾಯಿಸುತ್ತಿದ್ದ ಆರೋಪಿ ಉದಯ ಪೂಜಾರಿ (30 ವರ್ಷ), ಕೋಣಿ, ಕುಂದಾಪುರ ಎಂಬಾತನ್ನು ವಿಚಾರಿಸಿದಾಗ ತಾನು 20 ದಿನ ಹಿಂದೆ ಸುರೇಶ್ ಎಂಬವನೊಂದಿಗೆ ಕುಂದಾಪುರದ ಒಡೆರಹೋಬಳಿಯ ಲೇಡಿಸ್ ಹಾಸ್ಟೆಲಿನ ಒಳಹೊಕ್ಕು 2 ಚಿನ್ನದ ಸರ ಹಾಗೂ 4 ಮೊಬೈಲ್ನ್ನು ಕಳವು ಮಾಡಿದ್ದನ್ನು ಒಪ್ಪಿ ಕೊಂಡಿದ್ದು, ಕಳವು ಮಾಡಲಾದ ಎರಡು ತುಂಡಾದ ಚಿನ್ನದ ಸರ, 2 ಮೊಬೈಲ್ನ್ನು ತನ್ನ ವಶದಲ್ಲಿ ಇದ್ದುದನ್ನು ಹಾಜರುಪಡಿಸಿದನ್ನು ಮತ್ತು ಕೃತ್ಯ ನಡೆಸಲು ಉಪಯೋಗಿಸಿದ ಕಾರನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸದ್ರಿ ಸೊತ್ತುಗಳು ಕುಂದಾಪುರ ಠಾಣಾ ಅ.ಕ್ರ. 213/09 ಕಲಂ. 457, 380 ಐ.ಪಿ.ಸಿ ಪ್ರಕರಣಕ್ಕೆ ಸಂಬಂಧಿಸಿದಾಗಿವೆ. ಈ ಬಗ್ಗೆ ಪೊಲೀಸ್ ನಿರೀಕ್ಷಕರಾದ ಚೆಲುವರಾಜ್.ಬಿ ರವರು ಕಾಪು ಠಾಣೆಗೆ ನೀಡಿದ ದೂ? ನಂತೆ ಅಪರಾಧ ಕ್ರಮಾಂಕ 155/09 ಕಲಂ: 41(1)(ಡಿ),102(1) ಸಿ.ಆರ್.ಪಿ.ಸಿ ಮತ್ತು 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 
ಆಕಸ್ಮಿಕ ಮರಣ
 
ದಿನಾಂಕ 06/08/09 ರಂದು ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ಬೆಳ್ಮಣ್ನಲ್ಲಿರುವ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಶಾಲಾ ಮಟ್ಟದ ಕರಾಟೆ ಸ್ಪಧರ್ೆಯಲ್ಲಿ ಭಾಗವಹಿಸಿದ ಸುಹಾನ್ ಹೆಗ್ಡೆ, ಪ್ರಾಯ ಸುಮಾರು 15 ವರ್ಷ, ತಂದೆ ನಿತ್ಯಾನಂದ ಹೆಗ್ಡೆ ಎಂಬಾತನಿಗೆ ಸ್ಪಧರ್ೆ ಸಮಯ ಹೊಟ್ಟೆಗೆ ಪೆಟ್ಟು ಬಿದ್ದ ಪರಿಣಾಮ ಹೊಟ್ಟೆಯೊಳಗಡೆ ಬೆಳೆದಿದ್ದ ದುಮರ್ಾಂಸದ ಗಡ್ಡೆ ಒಡೆದು ಅಸ್ವಸ್ಥಗೊಂಡು, ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿದ್ದವನು, ಚಿಕಿತ್ಸೆ ಫಲಕಾರಿಯಾಗದೆ. ಈ ಬಗ್ಗೆ ಸದಾನಂದ ಹೆಗ್ಡೆ (60 ವರ್ಷ) ತಂದೆ: ರಾಜೀವ ಹೆಗ್ಡೆ, ವಾಸ: ಮಾಳ ಗ್ರಾಮ, ಕಾರ್ಕಳ ತಾಲೂಕುರವರು ದೂರು ನೀಡಿದ್ದು ಅವರ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 27/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣ
 
ದಿನಾಂಕ 07/08/09 ರಂದು ಬೆಳಿಗ್ಗೆ 9:15 ಗಂಟೆಗೆ ಸೂರ್ಯ ಕುಂದರ್ (29) ತಂದೆ: ಅಣ್ಣಪ್ಪ ಮರಕಾಲ ವಾಸ: ಐರೋಡಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಎಂಬವರು ರುಚಿ ಪ್ರಾಡಕ್ಟ್ ಗೆ ಸಂಬಂಧಿಸಿದ ಮ್ಯಾಕ್ಸಿ ಟ್ರಕ್ ನಂಬ್ರ ಕೆಎ 20 ಬಿ 4945ರಲ್ಲಿ ಐರೋಡಿಯಿಂದ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಹೊರಟು ಸಾಸ್ತಾನದ ಸಂತ ಅಂತೋನಿ ಶಾಲೆಯ ಬಳಿ ತಲುಪುವ ಸಮಯ ಕೆಎ 20 ಬಿ 2347 ನಂಬ್ರದ ಬಸ್ಸನ್ನು ಅದರ ಚಾಲಕ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲಬದಿಗೆ ಚಲಾುಸಿ ಮ್ಯಾಕ್ಸಿ ಟ್ರಕ್ಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಈ ಅಪಘಾತದ ಬಗ್ಗೆ ಸೂರ್ಯ ಕುಂದರ್ರವರು ದೂರು ನೀಡಿದ್ದು ಅವರ ದೂರಿನಂತೆ ಕೋಟಾ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 186/09 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣಗಳು
 
ದಿನಾಂಕ 06/08/09 ರಂದು ಬೆಳಿಗ್ಗೆ 08:10 ಗಂಟೆಗೆ ಹಂದಾಡಿ ಗ್ರಾಮದ ಬೇಳೂರು ಜೆಡ್ಡು ಜನತಾ ಕಾಲೋನಿಯ ಸರಕಾರಿ ಬಾವಿಯ ಸಮೀಪ ಆರೋಪಿ ಚಾಲಕ ಮಹೇಂದ್ರ ಮಾಕ್ಸಿ ಕ್ಯಾಬ್ ನಂಬ್ರ ಸಿ.ಆರ್.ಎಕ್ಸ್ 7689 ನೇದನ್ನು ಬ್ರಹ್ಮಾವರ ಕಡೆಯಿಂದ ಮುಳ್ಳುಜೆಡ್ಡು ಕಡೆಗೆ ಅತೀ ವೇಗ ಹಾಗೂ ಅಜಾಗ್ರತೆಯಿಂದ ಚಲಾಯಿಸಿಕೊಂಡು ರಸ್ತೆಯ ಅತೀ ಬಲಕ್ಕೆ ಬಂದು ಮುಳ್ಳುಜೆಡ್ಡು ಕಡೆಯಿಂದ ಬ್ರಹ್ಮಾವರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಮಹೇಶ್ ಪೂಜಾರಿ ತಾಯಿ ರಾಧು ಪೂಜಾರ್ತಿ ವಾಸ: ನಡುಬೆಟ್ಟು ಹಂದಾಡಿ ಗ್ರಾಮ ಎಂಬವರ ಸೈಕಲಿಗೆ ಡಿಕ್ಕಿ ಹೊಡೆದು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತಲೆಯ ಬಲಬದಿಗೆ ರಕ್ತಗಾಯವಾಗಿರುತ್ತದೆ.ಈ ಬಗ್ಗೆ ಮಹೇಶ್ ಪೂಜಾರಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 138/09 ಕಲಂ. 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ 06/08/09 ರಂದು ಹಸನ್ ಸಾಹೇಬ್ (35), ತಂದೆ: ಮೌಲ ಸಾಬ್, ವಾಸ: ವಾಲೇಕಾರೆ, ಮುಷ್ಟಿಗೇರಿ ಗ್ರಾಮ, ಬಾದಾಮಿ ತಾ. ಬಾಗಲಕೊಟೆ ಜಿಲ್ಲೆ, ಹಾಲಿ ವಾಸ: ವಿಜಯ ನಗರ, ಎಂಡ್ ಪಾಂಯಿಟ್ ಬಳಿ, ಸರಳಬೆಟ್ಟು, ಮಣಿಪಾಲ. ಉಡುಪಿ. ಎಂಬವರು ತನ್ನ ಮೋಟಾರ್ ಬೈಕ್ ನಂ. ಕೆ.ಎ-20-ಆರ್-5376ನೇ ದರಲ್ಲಿ ತಮ್ಮ ಮಗಳನ್ನು ನೋಡಿಕೊಂಡು ಬರುವರೇ ಬನ್ನಂಜೆ ಬಾಲಕಿಯರ ಹಾಸ್ಟೇಲ್ ಕಡೆಗೆ ಹೊರಟು ಸಮಯ ಸುಮಾರು 14:45 ಗಂಟೆಗೆ ಎಂ.ಜಿ.ಎಂ. ಕಾಲೇಜ್ ಬಸ್ ನಿಲ್ದಾಣದ ಬಳಿ ತಲುಪುವಾಗ್ಗೆ ಆಪಾದಿತೆ ಕೆ.ಎ-20-ಎಂ-7641ನೇ ಮಾರುತಿ 800 ಕಾರಿನ ಚಾಲಕಿಯು ತನ್ನ ಬಾಬ್ತು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಉಡುಪಿ ಕಡೆಯಿಂದ ಮಣಿಪಾಲದ ಕಡೆಗೆ ಚಲಾಯಿಸಿಕೊಂಡು ಬಂದು ತನ್ನ ಎದುರು ಹೋಗುತ್ತಿದ್ದ ಅಟೋ ರಿಕ್ಷಾವನ್ನು ಓವರ್ ಟೇಕ್ ಮಾಡುವ ಭರದಲ್ಲಿ ತೀರಾ ಬಲಬದಿಗೆ ಬಂದು ಮೋಟಾರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆ ಬದಿಯ ತೋಡಿಗೆ ಬಿದ್ದಿದ್ದು. ಬಿದ್ದ ಪರಿಣಾಮ ಎಡಕಾಲಿನ ಹಿಮ್ಮಡಿಗೆ, ಬಲಕಾಲಿಗೆ ಮೂಳೆ ಮುರಿತದ ರಕ್ತಗಾಯ, ಬೆನ್ನಿಗೆ ಜಜ್ಜಿದ ಒಳಗಾಯ ಹಾಗೂ ಕೈಗೆ ತರಚಿದ ಗಾಯವಾಗಿರುತ್ತದೆ. ಈ ಅಪಘಾತದ ಬಗ್ಗೆ ಹಸನ್ ಸಾಹೇಬ್ (35), ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 259/09 ಕಲಂ. 279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ 05/08/2009 ರಂದು ಮಂಜುನಾಥ ಪ್ರಾಯ:21 ,ತಂದೆ:ನಾರಾಯಾಣಾ ಆಚಾರ್ಯ ,ವಾಸ:ಅಕ್ಕಸಾಲಮಕ್ಕಿ ದಬ್ಬನಗುಡ್ಡೆ ಗ್ರಾಮ ,ಮಹಿಷಿ ಅಂಚೆ ,ತೀರ್ಥಳ್ಳಿ ಎಂಬವರು ಕೆಲಸ ಮಾಡುತ್ತಿರುವ ಕುಂದಾಪುರ ಕಸಬಾ ಗ್ರಾಮದಲ್ಲಿರುವ ಶಬರಿ ಗ್ಯಾರೇಜಿನಲ್ಲಿ ಆರೋಪಿತನಾದ ನರೇಂದ್ರ ಕುಮಾರ್ನು ಕೆ.ಎ.20.ಬಿ.97 ನೇ ಬಸ್ಸನ್ನು ರಿಪೇರಿಗಾಗಿ ನಿಲ್ಲಸಿದ್ದು ಗ್ಯಾರೇಜಿನ ಮೆಕ್ಯಾನಿಕ್ ಗಣೇಶ ಆಚಾರ್ಯ ಎಂಬವರು ಬಸ್ಸಿನ ಅಡಿಯಲ್ಲಿ ಕೆಲಸ ಮಾಡುತ್ತಿದ್ದು ಸಮಯ ಮದ್ಯಾಹ್ನ 1.00 ಗಂಟೆಗೆ ಆರೋಪಿತನು ಯಾವುದೇ ಸೂಚನೆಯನ್ನ ನೀಡದೇ ನಿರ್ಲಕ್ಷತನದಿಂದ ಬಸ್ಸನ್ನು ಒಮ್ಮೆಲೆ ಹಿಂದಕ್ಕೆ ತೆಗೆದ ಪರಿಣಾಮ ಬಸ್ಸಿನ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಗಣೇಶ ಆಚಾರ್ಯರವರ ಎಡ ಕಾಲಿನ ಮೇಲೆ ಬಸ್ಸಿನ ಚಕ್ರ ಹಾದು ಹೋದ ಪರಿಣಾಮ ಅವರ ಎಡ ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಮಣಿಪಾಲ ಕೆ.ಎಮ್.ಸಿ. ಅಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಮಂಜುನಾಥ ರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 230/09 ಕಲಂ. 279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಆತ್ಮಹತ್ಯೆ ಪ್ರಕರಣ
 
ದಿನಾಂಕ 06/08/2009 ರಂದು 14.45 ಗಂಟೆಗೆ ಉಮೇಶ್ ಪುತ್ರನ್ ವೈದ್ಯೇಕೀಯ ನಿಧರ್ೇಶಕರು ಚಿನ್ಮಾಯಿ ಅಸ್ಪತ್ರೆ ಕುಂದಾಪುರ ಎಂಬವರು ಚಿನ್ಮಾಯಿ ಅಸ್ಪತ್ರೆ ರೋಗಿಗಳ ಕೋಣೆಗೆ ಒಬ್ಬನು ತಾನು ಟಿ.ವಿ.ರಿಪೇರಿಯವನು ಎಂದು ಹೇಳಿಕೊಂಡು ಬಂದವನನ್ನು ಅಸ್ಪತ್ರೆಯಲ್ಲಿ ಈ ಹಿಂದೆ ನಡೆದ ಕಳವು ಪ್ರಕರಣದ ಬಗ್ಗೆ ಗುಮಾನಿಯಿಂದ ಅವನನ್ನು ಕೆಳಗೆ ಕರೆದುಕೊಂಡು ಬಂದು ರೂಮ್ ನಂಬ್ರ 13 ರಲ್ಲಿ ಕುಳ್ಳಿರಿಸಿ ವಿಚಾರಿಸಿದಾಗ ಆತನು ತಾನು ದುಗರ್ಾಂಬರವರ ಕಡೆಯವನು ಎಂದು ತಿಳಿಸಿದ್ದು ಅವನನ್ನು ಅಲ್ಲೇ ಕುಳ್ಳಿರಿಸಿ ವಾಚ್ಮ್ಯಾನ್ ಮತ್ತು ಪ್ರಸಾದ ಇವರು ಬಂದು ದೂರಾವಾಣಿ ಮುಖೇನಾ ದುಗರ್ಾಂಬದ ಸುಪ್ರೀತಾ ಚಾತ್ರರವರಲ್ಲಿ ವಿಚಾರಿಸಿದಾಗ ತಮ್ಮ ಕಡೆಯವನು ಅಲ್ಲ ಎಂದು ತಿಳಿಸಿದ್ದು ನಂತರ ವಾಪಾಸು ರೂಮ್ ನಂಬ್ರ 13 ರ ಹತ್ತಿರ ಹೋದಾಗ ಆತನು ಒಳಗಿನಿಂದ ಬಾಗಿಲಿಗೆ ಚಿಲಕ ಹಾಕಿದ್ದು ಮೇಲಿನ ಕಿಟಕಿಯಿಂದ ಇಣುಕಿ ನೋಡಲಾಗಿ ಆತನು ನೇಣು ಹಾಕಿ ಮೃತ ಪಟ್ಟಿರುವುದಾಗಿದೆ.ಮೃತನು ಅಪರಿಚಿತನಾಗಿದ್ದು ಈ ಬಗ್ಗೆ ಉಮೇಶ್ ಪುತ್ರನ್ ರವರು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 33/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಸ್ವಾಭಾವಿಕ ಮರಣ
 
ಸುಮಾರು ಒಂದು ತಿಂಗಳ ಹಿಂದೆ ಕುಂದಾಪುರದ ರೈಲ್ವೆ ಸ್ಟೇಷನ್ ಹೊರಗಡೆ ಇರುವ ರಿಕ್ಷಾ ಸ್ಟಾಂಡಿನ ಪಕ್ಕ ಅಸೌಖ್ಯದಿಂದ ಬಳಲುತ್ತಿದ್ದ ಸುಮಾರು 38 ವರ್ಷ ಪ್ರಾಯದ ಒಬ್ಬ ಹೆಂಗಸನ್ನು ರವೀಂದ್ರೆ ಶೆಟ್ಟಿಗಾರ ತಂದೆ: ಗಣಪತಿ ಶೆಟ್ಟಿಗಾರ ವಾಸ: ಕಂದಾವರ, ಕಂದಾವರ ಗ್ರಾಮ ಕುಂದಾಪುರ ಎಂಬವರು ಚಿಕಿತ್ಸೆಯ ಬಗ್ಗೆ ಕುಂದಾಪುರ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವಳ ಹೆಸರು ರೇಣುಕಾ ಭಂಡಾರಿ (38) ರಾಯಬಾಗ ಬೆಳಗಾಂ ಜಿಲ್ಲೆ ಎಂಬುದಾಗಿ ವಿಚಾರಿಸಿದಾಗ ತಿಳಿದಿರುತ್ತದೆ. ರೇಣುಕಾ ಭಂಡಾರಿ ಇವರು ಕುಂದಾಪುರ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 06/08/09 ರಂದು ಸಂಜೆ 5:40 ಗಂಟೆಗೆ ಮೃತಪಟ್ಟಿದ್ದಾಗಿದೆ ಈ ಬಗ್ಗೆ ರವೀಂದ್ರೆ ಶೆಟ್ಟಿಗಾರ ರವರು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 34/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಹಲ್ಲೆ ಪ್ರಕರಣಗಳು
 
05ರಂದು 11:15 ಗಂಟೆಗೆ ಬಾಕರ್ೂರು ರುಕ್ಷ್ಮೀಣಿ ಶೆಡ್ತಿ ಕಾಲೇಜಿನ ದ್ವಿತೀಯ ಬಿ.ಬಿ.ಎಂ ಕ್ಲಾಸಿನಲ್ಲಿ ಚೇತನ ಎಂ ತಂದೆ: ಮೋಹನ ವಾಸ: ಮಂದಾತರ್ಿ ಹೆಗ್ಗುಂಜೆ ಗ್ರಾಮ ಇವರು ಹಾಗೂ ಇತರ ವಿದ್ಯಾಥರ್ಿಗಳು ತರಗತಿಯಲ್ಲಿರುವಾಗ ಆರೋಪಿ 1) ರಾಜೇಶ್ ಶೆಟ್ಟಿ 2) ಭೋಜಶೆಟ್ಟಿ 3) ಅವಿನಾಶ್ 4) ಪ್ರಸಾದ್ 5) ಪ್ರವೀಣ ಎಂಬವರುಗಳು ಅಕ್ರಮಕೂಟ ಸೇರಿಕೊಂಡು ಬಂದು ಈ ಹಿಂದೆ ಆರೋಪಿಗಳು ವಿನಾ ಕಾರಣ ಜೋರು ಮಾಡಿದ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದರೆಂಬ ಕಾರಣದಿಂದ ಚೇತನ ಮತ್ತು ಅವರ ಸ್ನೇಹಿತರಾದ ವಿಶ್ವನಾಥ, ಉದಯ್ ಕುಂದರ್, ಸಂದೀಪ, ಚೇತನ್ ಎಂಬವರಿಗೆ ಕೈಯಿಂದ ಹೊಡೆದು ಪೊಲೀಸರಿಗೆ ದೂರು ನೀಡಿದರೆ ಕ್ಯಾಂಪಸ್ನಿಂದ ಹೊರಗೆ ಬಂದ ಮೇಲೆ ಹೊಡೆಯುವುದಾಗಿ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಚೇತನ ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 139/09 ಕಲಂ. 143, 147, 323, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 05/08/09 ರಂದು ಸಂಜೆ 7:00 ಗಂಟೆಗೆ ಕುಂದಾಪುರ ಕಸಬಾ ಗ್ರಾಮದ ಮೈಲಾರೇಶ್ವರ ಯುವಕ ಮಂಡಲದಲ್ಲಿ ಕೇರಂ ಆಡುತ್ತಿದ್ದ ಗಣೇಶ್ ಹೆಗ್ಡೆ ತಂದೆ: ಅಣ್ಣಯ್ಯ ಹೆಗ್ಡೆ ವಾಸ: ಮಾಲತಿ ನಿಲಯ ಇಶ್ ಮಾಕರ್ೆಟ್ ರಸ್ತೆ, ಕುಂದಾಪುರ ರವರಿಗೆ ಆರೋಪಿಯು ಓಂಕು @ ವೆಂಕಟೇಶ್ ಎಂಬಾತನು ಕೇರಂ ಬೋಡರ್್ಗೆ ಪೌಡರ್ ಹಾಕುವ ವಿಷಯದಲ್ಲಿ ಜಗಳ ಮಾಡಿ ಕ್ಲಬಿನ ಪ್ಲಾಸ್ಟಿಕ್ ಕುಚರ್ಿಯಿಂದ ಹೊಡೆದು, ಎಡ ಕೈಗೆ ರಕ್ತಗಾಯ ಉಂಟುಮಾಡಿದ್ದಾಗಿದೆ. ಈ ಹಲ್ಲೆ ಬಗ್ಗೆ ಗಣೇಶ್ ಹೆಗ್ಡೆ ರವರು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 231/09 ಕಲಂ: 324 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಜೀವ ಬೆದರಿಕೆ ಪ್ರಕರಣ
 
ದಿನಾಂಕ:27.07.09 ರಂದು 14:00 ಘಂಟೆಗೆ ಸಾಂತೂರು ಗ್ರಾಮದಲ್ಲಿರುವ ಮಾರ್ಗರೆಟ್ ಮಾಬೆನ್ ಪ್ರಾಯ:39 ವರ್ಷ ಗಂಡ: ಡೇವಿಡ್ ಮಾಬೆನ್ ವಾಸ:ವಿಶನ್ ಕಂಪೌಂಡ್ ಸಾಂತೂರು ಗ್ರಾಮ ಉಡುಪಿ ಎಂಬವರ ಅತ್ತೆಯವರ ಖಾಸಗಿ ಜಾಗ ಸವರ್ೇ ನಂಬ್ರ:22-1ಪಿ3,2-28,22-5,2-6,22-7 ನೇದಕ್ಕೆ ಅಕ್ರಮ ಕೂಟ ಸೇರಿಕೊಂಡು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪಿಗಳಾದ 1 .ಡೇವಿಡ್ ಡಿ.ಸೋಜ, 2.ಶರತ್ ಶೆಟ್ಟಿ 3 ಉದಯ ಕುಮಾರ್ ಹಾಗೂ ಇತರ 20 ಜನರು ಗಳು ಜಾಗದಲ್ಲಿದ್ದ ಬೆಲೆಬಾಳುವ ಮರಗಳನ್ನು ಕಡಿದು ಜಾಗವನ್ನು ನೆಲಸಮಗೊಳಿಸಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವುದಾಗಿ ಜೀವಬೆದರಿಕೆ ಹಾಕಿರುವುದಾಗಿದೆ ಈ ಬಗ್ಗೆ ಮಾಬೆನ್ ರವರು ನೀಡಿದ ದೂರಿನಂತೆ ಪಡುಬಿದ್ರೆ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 133/09 ಕಲಂ: 143,147,148,447,504,506,427, ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಬ್ಯಾಂಕ್ ಮುಷ್ಕರ ಯಶಸ್ವಿ/Bank Strike

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬ್ಯಾಂಕ್ ನೌಕರರು ಎರಡು ದಿನಗಳಿಂದ ನಡೆಸುತ್ತಿರುವ ಮುಷ್ಕರದಿಂದ ಗ್ರಾಹಕರು ಪರದಾಡುವಂತಾಯಿತು.
ನಗರದಲ್ಲಿ ಮುಷ್ಕರ ಯಶಸ್ವಿಯಾಗಿದೆ. ಐ.ಸಿ.ಐ.ಸಿ.ಐ., ಎಚ್.ಡಿ.ಎಫ್.ಸಿ., ಆಕ್ಸಿಸ್ ಬ್ಯಾಂಕುಗಳು ಮತ್ತು ಇತರ ಬ್ಯಾಂಕುಗಳು ಮುಚ್ಚಿತ್ತು. ಎ.ಟಿ.ಎಂ. ಕೌಂಟರ್ಗಳಲ್ಲಿಯೂ ಹಣದ ದೌರ್ಲಭ್ಯ ಕಂಡುಬಂತು. ಇದರಿಂದ ಗ್ರಾಹಕರು ಪರದಾಡಿದರು.
  

ಗಾಯಾಳು ಸಾವು
 
ಕಾಸರಗೋಡು: ಇತ್ತೀಚೆಗೆ ವಿದ್ಯಾನಗರದಲ್ಲಿ ಬೈಕ್ ಮತ್ತು ಸ್ಕೂಟರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಗಾಯಾಳು ಮೃತ ಪಟ್ಟ ಘಟನೆ ನಡೆದಿದೆ.
ನಗರದ ಉದ್ಯಮಿಯಾಗಿದ್ದ ವಿದ್ಯಾನಗರ ನಿವಾಸಿ ಎಂ.ಎ.ಅಬ್ದುಲ್ ಖಾದರ್(65) ಸಾವನ್ನಪ್ಪಿದವರು. ಕಳೆದ ಮಂಗಳವಾರ ಇವರು ಸಂಚರಿಸುತ್ತಿದ್ದ ಸ್ಕೂಟರ್ಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿದ್ದರು.

 
ರಿಯಾನ ಪತ್ತೆಗೆ ಹೊರಟ ಪೊಲೀಸ್ ಬಲೆಗೆ ಮತ್ತೊಂದು ವೇಶ್ಯಾವಾಟಿಕೆ ಜಾಲ
 
ಕಾಸರಗೋಡು: ಕಲ್ಲಿಕೋಟೆಯ ಹದಿನಾರರ ಹರೆಯದ ಯುವತಿಯನ್ನು ಕಳೆದ 3 ತಿಂಗಳಿನಿಂದ ಮಂಗಳೂರು, ಕಾಸರಗೋಡಿನ ವಸತಿಗೃಹಗಳಲ್ಲಿ ಲೈಂಗಿಕವಾಗಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯುವತಿಯನ್ನು ಕಾಸರಗೋಡು ಸಿ.ಐ. ಟಿ.ಪಿ. ಪ್ರೇಮರಾಜನ್ ನೇತೃತ್ವದಲ್ಲಿ ಪೊಲೀಸರು ಮಂಗಳೂರಿನ ಕದ್ರಿಯಲ್ಲಿರುವ ವಸತಿಗೃಹದಿಂದ ಸಿನಿಮೀಯ ಶೈಲಿಯಲ್ಲಿ ಪಾರುಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈಕೆಯನ್ನು ಇಲ್ಲಿನ ಚೌಕಿಯಲ್ಲಿರುವ ಬದರ್ ಜುಮಾ ಮಸೀದಿ ಸಮೀಪದ ವಸತಿ ಗೃಹದಲ್ಲಿ ವಶದಲ್ಲಿರಿಸಿದ ತಂಡ ವೇಶ್ಯಾವಾಟಿಕೆ ಆರಂಭಿಸಿದೆ. ಹಸನ್ ರಹ್ಮಾನ್, ಜಮೀಲಾ, ಉಸ್ಮಾನ್, ನಿಯಾಸ್ ಎಂಬವರನ್ನೊಳಗೊಂಡ ತಂಡ ಈ ಜಾಲದಲ್ಲಿ ಸಕ್ರಿಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ರಿಯಾನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ತಂಡಕ್ಕೆ ಈ ವೇಶ್ಯಾವಾಟಿಕೆ ಜಾಲದ ಜಾಡು ಲಭಿಸಿತ್ತು. 2009 ಏಪ್ರಿಲ್ನಿಂದ ಯುವತಿ ಈ ಜಾಲದಲ್ಲಿ ಸಿಲುಕಿದ್ದಾಳೆ. ಈ ಯುವತಿ ರಿಯಾನ ಆಗಿರಬಹುದು ಎಂಬ ಗುಮಾನಿಯಿಂದ ತನಿಖೆ ನಡೆಸಿದಾಗ ಮತ್ತೊಂದು ವೇಶ್ಯಾವಾಟಿಕೆ ಜಾಲದ ಗುಟ್ಟು ರಟ್ಟಾಗಿದೆ. ಗಣ್ಯರನ್ನು ಕೇಂದ್ರೀಕರಿಸಿ ಈ ಜಾಲದ ಯುವತಿಯನ್ನು ಬಳಸಿಕೊಳ್ಳಲಾಗಿದೆ. 20,000 ರೂ. ವ್ಯವಹಾರ ಕುದುರಿಸಿ ತಂಡ ಯುವತಿಯನ್ನು ಅನೇಕರಿಗೆ ಪೂರೈಸುತ್ತಾ ಬಂದಿದೆ.
ರಿಯಾನ ಪ್ರಕರಣದ ತನಿಖೆಗೆ ಇಳಿದ ಪೊಲೀಸರು ಈಗಾಗಲೇ ಪನ್ನಿಪ್ಪಾರೆ ವೇಶ್ಯಾವಾಟಿಕೆ ಜಾಲವನ್ನು ಬಯಲಿಗೆ ಎಳೆದ ಬೆನ್ನಲ್ಲೇ ಈ ಪ್ರಕರಣ ಬಹಿರಂಗಗೊಂಡಿದೆ.
 
 
ಮುಳಿಗದ್ದೆಯಲ್ಲಿ ಘರ್ಷಣೆ


ಮಂಜೇಶ್ವರ: ಬಾಯಾರು ಸಮೀಪದ ಮುಳಿಗದ್ದೆಯಲ್ಲಿ ಗುರುವಾರ ರಾತ್ರಿ ಎರಡು ತಂಡಗಳ ಮಧ್ಯೆ ನಡೆದ ಘರ್ಷಣೆಯಲ್ಲಿ 7 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ.
ಮುಸ್ಲಿಂ ಲೀಗ್ ಪೈವಳಿಕೆ ಪಂಚಾಯ್ತಿ ಸಮಿತಿ ಕಾರ್ಯದಶರ್ಿ  ಇಬ್ರಾಹಿಂ ಪೆವರ್ೋಡಿ, ಬಾಯಾರು ಬೆರಿಪದವು ನಿವಾಸಿ ಪ್ರಸಾದ್, ಕಲ್ಲಗದ್ದೆ ನಿವಾಸಿ ಗೋಪಾಲ, ಬದಿಯಾರು ನಿವಾಸಿ ಗುಣಪಾಲ, ಮುಳಿಗದ್ದೆ ಪಟ್ಲ ನಿವಾಸಿ ಪ್ರವೀಣ್ ರೈ, ಕಲ್ಲಗದ್ದೆಯ ಅಶೋಕ್, ಸುಣ್ಣಾಡದ ಉದಯ ಎಂಬವರು ಗಾಯಗೊಂಡವರು.  ಇಬ್ರಾಹಿಂ ಪೆವರ್ೋಡಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದರೆ ಉಳಿದವರೆಲ್ಲರೂ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬಸ್ಸಿನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ತಂಡಗಳ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆಯ ಪರಿಣಾಮ ಸ್ಥಳೀಯ ಅಂಗಡಿಗಳಿಗೆ ಹಾನಿ ಉಂಟಾಗಿದೆ. ವಿಷಯ ತಿಳಿದು ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಶುಕ್ರವಾರ ಅಂಗಡಿ ಮುಂಗಟ್ಟುಗಳು ಮುಚ್ಚಿಕೊಂಡಿದೆ.

 
 
ಪಾವೂರು ಶಾಲೆ ಸ್ಥಳಾಂತರ: ಪ್ರತಿಭಟನೆಗಿಳಿದ ವಿದ್ಯಾಥರ್ಿಗಳು
 
ಮಂಜೇಶ್ವರ: ಇಲ್ಲಿಗೆ ಸಮೀಪದ ಪಾವೂರು ವಿದ್ಯೋದಯ ಕಿರಿಯ ಪ್ರಾಥಮಿಕ ಶಾಲೆಯ ಸ್ಥಳಾಂತರ ವಿವಾದದಿಂದ ವಿದ್ಯಾಥರ್ಿಗಳು ಪಾಡು ತೂಗುಯ್ಯಾಲೆಯಲ್ಲಿದೆ.
ಕಳೆದ 5 ದಿನಗಳಿಂದ ವಿದ್ಯಾಥರ್ಿಗಳು ಸ್ಥಳಾಂತರ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಲೆಯನ್ನು 2 ಕಿ.ಮೀ. ದೂರದ ಗೇರುಕಟ್ಟೆಯ ಡಾನ್ಬೋಸ್ಕೋ ಶಾಲೆಗೆ ಸ್ಥಳಾಂತರಿಸಲು ಶಾಲಾ ಆಡಳಿತ ವರ್ಗ ನಿರ್ಧರಿಸಿದೆ.  ರಕ್ಷಕ-ಶಿಕ್ಷಕ ಸಂಘದ ಸಭೆಯ ನಿಧರ್ಾರವನ್ನು ಗಾಳಿಗೆ ತೂರಿ ಆಡಳಿತ ಏಕಪಕ್ಷೀಯ ನಿಧರ್ಾರ ತಳೆದ ಹಿನ್ನೆಲೆಯಲ್ಲಿ ಸಮಸ್ಯೆ ಉಲ್ಬಣಗೊಂಡಿದೆ. ಇದೇ ಸೋಮವಾರದಿಂದ ಇಲ್ಲಿ ತರಗತಿ ನಡೆಯದೆ ವಿದ್ಯಾಥರ್ಿಗಳ ಶೈಕ್ಷಣಿಕ ಬದುಕು ತೂಗುಯ್ಯಾಲೆಯಲ್ಲಿದೆ.
 
 
ನಿಧನ

ನಾರಾಯಣ ಬೆಳ್ಚಪ್ಪಾಡ
ಮಂಜೇಶ್ವರ: ಸಿ.ಪಿ.ಎಂ. ಹಿರಿಯ ಕಾರ್ಯಕರ್ತ ಕಳಾಯಿ ನಾರಾಯಣ ಬೆಳ್ಚಪ್ಪಾಡ(65) ನಿಧನರಾದರು.
ಪತ್ನಿ ಲೀಲಾ ಮತ್ತು 6 ಮಂದಿ ಮಕ್ಕಳಿದ್ದಾರೆ.

ಸುಧಾಕರ ಶೆಟ್ಟಿ
ಮಂಜೇಶ್ವರ: ಬಸ್ ಚಾಲಕ ಗುಡ್ಡೆಗಿರಿ ನಿವಾಸಿ ಸುಧಾಕರ ಶೆಟ್ಟಿ(39) ನಿಧನರಾದರು.
ವರ್ಷದ ಹಿಂದೆ ಜ್ವರದಿಂದ ಬಳಲುತ್ತಿದ್ದ ಇವರಿಗೆ ವೈದ್ಯರು ನೀಡಿದ ಚುಚ್ಚು ಮದ್ದು ಬದಲಾದ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡುಬಂದು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.
ಪತ್ನಿ ತಾರಾ ಮತ್ತು ಇಬ್ಬರು ಮಕ್ಕಳಿದ್ದಾರೆ.
 
  
 

 

 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಅಧ್ಯಾಪಕರ ಹುದ್ದೆಗಳ ಭತರ್ಿಗೆ ಆಗ್ರಹ/Teachers Post


ಕಾಸರಗೋಡು: ಕುಂಬಳೆ ಉಪ ಜಿಲ್ಲಾ ವಿದ್ಯಾಧಿಕಾರಿ ಸಹಿತ ತೆರವಾಗಿರುವ ಎಲ್ಲಾ ಮುಖ್ಯೋಪಾಧ್ಯಾಯರ ಮತ್ತು ಅಧ್ಯಾಪಕರ ಹುದ್ದೆಗಳನ್ನು ಶೀಘ್ರದಲ್ಲಿಯೇ ಭತರ್ಿಗೊಳಿಸುವಂತೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಸಭೆ ಆಗ್ರಹಿಸಿದೆ.
ವಿತರಣೆ ಮಾಡಲು ಉಳಿದಿರುವ ಪಠ್ಯಪುಸ್ತಕ ಮತ್ತು ಅಧ್ಯಾಪಕರ ಕೈಪಿಡಿಗಳನ್ನು ಲಭ್ಯಗೊಳಿಸಬೇಕು ಎಂದು ಒತ್ತಾಯಿಸಿದೆ. ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಕಾಸರಗೋಡು, ಬೇಕಲ, ಮಂಜೇಶ್ವರ ಉಪ ಜಿಲ್ಲಾ ಸಮ್ಮೇಳನಗಳನ್ನು ಯಶಸ್ವಿಗೊಳಿಸುವಂತೆ ಸಂಘ ಅಧ್ಯಾಪಕರಲ್ಲಿ ಮನವಿ ಮಾಡಿದೆ.
ಕಾಸರಗೋಡು ಸಕರ್ಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಭೆಯನ್ನು ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನ್ದಾಸ್ ಉದ್ಘಾಟಿಸಿದರು.
ಕೇಂದ್ರ ಸಮಿತಿ ಅಧ್ಯಕ್ಷ ಟಿ.ಡಿ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಕೆ.ಸತ್ಯನಾರಾಯಣ, ಉಪಾಧ್ಯಕ್ಷೆ ಎಂ.ಶಶಿಕಲಾ, ಶಶಿಕಲಾ, ಸಂಘಟನಾ ಕಾರ್ಯದಶರ್ಿ ಎಂ.ವಿ.ಮಹಾಲಿಂಗೇಶ್ವರ ಭಟ್, ಕೋಶಾಧಿಕಾರಿ ಡಿ.ಮಹಾಲಿಂಗೇಶ್ವರ ರಾಜ್, ಕುಂಬಳೆ ಉಪಜಿಲ್ಲಾ ಕಾರ್ಯದಶರ್ಿ ಕೆ.ಸುಬ್ರಹ್ಮಣ್ಯ ಭಟ್, ಕಾಸರಗೋಡು ಉಪಜಿಲ್ಲಾ ಕಾರ್ಯದಶರ್ಿ ರಾಜೇಶ್ವರ ಸಿ.ಎಚ್. ಹಾಜರಿದ್ದರು.
ಪ್ರಧಾನ ಕಾರ್ಯದಶರ್ಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಶ್ರೀಕುಮಾರಿ ಆನೆಕಲ್ಲು ವಂದಿಸಿದರು.


ಅಧ್ಯಾಪಕರ ಸಂಘ ನಿಯೋಗದಿಂದ ಎಸ್.ಸಿ.ಇ.ಆರ್.ಟಿ. ನಿದರ್ೇಶಕರ ಭೇಟಿ
 
ಕಾಸರಗೋಡು: ಪಠ್ಯಪುಸ್ತಕ ಮತ್ತು ಅಧ್ಯಾಪಕರ ಕೈಪಿಡಿಗಳ ಮುದ್ರಣ ಮತ್ತು ವಿತರಣೆಯಲ್ಲಿರುವ ಲೋಪ ದೋಷಗಳನ್ನು ನಿವಾರಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಎಸ್.ಸಿ.ಇ.ಆರ್.ಟಿ. ನಿದರ್ೇಶಕರನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಆಗ್ರಹಿಸಿದೆ.
ಪಠ್ಯಪುಸ್ತಕ ರಚನಾ ಸಮಿತಿಗೆ ಅನುಭವಿ ಅಧ್ಯಾಪಕರನ್ನು ಆಯ್ಕೆ ಮಾಡಬೇಕು, ಈ ಪಟ್ಟಿಯನ್ನು ವಿದ್ಯಾಧಿಕಾರಿಗಳ ಸಹಕಾರದಲ್ಲಿ ಸಾಕಷ್ಟು ಮುಂಚಿತವಾಗಿ ಸಿದ್ಧಪಡಿಸಬೇಕು ಎಂದು ತಿರುವನಂತಪುರಕ್ಕೆ ತೆರಳಿದ ಸಂಘದ ನಿಯೋಗ ಒತ್ತಾಯಿಸಿದೆ.
ಪ್ರಧಾನ ಕಾರ್ಯದಶರ್ಿ ವಿಶಾಲಾಕ್ಷ ಪುತ್ರಕಳ, ಎಂ.ನಾರಾಯಣ ಭಟ್ ಬದಿಯಡ್ಕ, ಎಂ.ಚಿದಾನಂದ ಭಟ್ ಶೇಣಿ, ಕೆ.ರಾಜಗೋಪಾಲ ಪಳ್ಳಿಕ್ಕೆರೆ, ಪ್ರೀತಂ ಎ.ಕೆ. ಬೋವಿಕ್ಕಾನ ನಿಯೋಗದಲ್ಲಿದ್ದರು.
 
ಸ್ವಾತಂತ್ರ್ಯ ದಿನಾಚರಣೆ: ಗೃಹಸಚಿವರಿಂದ ಧ್ವಜಾರೋಹಣ
 
ಕಾಸರಗೋಡು: ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಇಲ್ಲಿನ ವಿದ್ಯಾನಗರದ ನಗರಸಭಾ ಮೈದಾನದಲ್ಲಿ ಜರುಗಲಿದ್ದು, ರಾಜ್ಯ ಗೃಹಸಚಿವ ಕೊಡಿಯೇರಿ ಬಾಲಕೃಷ್ಣನ್ ಧ್ವಜಾರೋಹಣಗೈದು ಧ್ವಜವಂದನೆ ಸ್ವೀಕರಿಸುವರು.
ಸಶಸ್ತ್ರಪಡೆ, ಸೇನೆ, ಸ್ಥಳೀಯ ಪೊಲೀಸ್, ಅಬಕಾರಿ, ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ಕ್ರಾಸ್ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಲಿದೆ.
 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Thursday, August 6, 2009

ಅಪಘಾತ ಪ್ರಕರಣ/Accident In Udupi

ದಿನಾಂಕ 05/08/09 ರಂದು ರಾತ್ರಿ ಸುಮಾರು 9.30 ಗಂಟೆಗೆ ಉಡುಪಿ ಶಾರದ ಕಲ್ಯಾಣ ಮಂಟಪದ ಹತ್ತಿರ ಕಿಯಾರಾಮ್ ಎಂಬವರು ಸೈಕಲ್ನಲ್ಲಿ ಹೋಗುತ್ತಿರುವಾಗ ಆಪಾದಿತ ಮೋಟಾರ್ ಸೈಕಲ್ ನಂ ಕೆಎ-20-ಆರ್-5867ನೇದರ ಸವಾರನು ತನ್ನ ವಾಹನವನ್ನು ಅತೀವೇಗ ಅಜಾಗರೂಕತೆುಂದ ಚಲಾುಸಿಕೊಂಡು ಬಂದು ಕಿಯಾರಾಮ್ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಎಡಕಣ್ಣಿಗೆ ಪೆಟ್ಟಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೆ ಇದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ವಾಹನ ಅಪಘಾತದಿಂದ ಆಪಾದಿತ ವಿಲ್ಸನ್ ಹಾಗೂ ಸಹ ಸವಾರ ರೋಹಿತ್ ಎಂಬವರಿಗೂ ಗಾಯವಾಗಿರುವುದಾಗಿದೆ ಈ ಅಪಘಾತದ ಬಗ್ಗೆ ಮೇಘರಾಮ್, ತಂದೆ: ದಿ: ಬೆಹರಾ ರಾಂ, ವಾಸ: ಫ್ಲಾಟ್ ನಂ. 401, ಕಂಪಟರ್್ ಟವರ್ಸ್, ಕಲ್ಪನಾ ಟಾಕೀಸ್ನ ಬಳಿ, ಉಡುಪಿ. ರವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 258/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
ಜುಗಾರಿ ಪ್ರಕರಣ
 
ದಿನಾಂಕ 5/08/09 ರಂದು ಕೋಟಾ ಠಾಣಾ ಪೊಲೀಸ್ ಉಪನೀರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್ ಇವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ರೌಂಡ್ಸ್ನಲ್ಲಿರುವ ಸಮಯ ಸುಮಾರು 18:00 ಗಂಟೆಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶ್ರೀ ಜಯಂತ್ ಶೆಟ್ಟಿ ಉಡುಪಿ ಉಪ ವಿಭಾಗ ರವರು ಸೆಲ್ ಪೋನಿಗೆ ಕರೆ ಮಾಡಿ ಸಾಲಿಗ್ರಾಮ ಮೀನು ಮಾಕರ್ೇಟ್ ಬಳಿ ಮಟ್ಕಾ ಜುಗಾರಿ ನಡೆಸುತ್ತಿರುವುದಾಗಿ ಮಾಹಿತಿ ನೀಡಿ ದಾಳಿ ನಡೆಸುವರೇ ಮಾರ್ಗದರ್ಶನ ನೀಡಿದ ಮೇರೆಗೆ ಸಿಬ್ಬಂದಿಯವರೊಂದಿಗೆ ಸ್ಥಳ ತಲುಪಿ ನೋಡಲಾಗಿ ಸಾಲಿಗ್ರಾಮದ ಮೀನು ಮಾರುಕಟ್ಟೆ ಎದುರು ಇಬ್ಬರು ವ್ಯಕ್ತಿಗಳು 1 ರೂಪಾುಗೆ 70/- ರೂ ಕೊಡುವುದಾಗಿ ಹೇಳುತ್ತಾ, ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಚೀಟಿ ಬರೆದು ಕೊಡುತ್ತಿರುವುದನ್ನು ನಾವು ಖಚಿತ ಪಡಿಸಿಕೊಂಡು 18:10 ಗಂಟೆಗೆ ದಾಳಿ ನಡೆಸಿ ಆರೋಪಿಗಳಾದ 1.ರತ್ನಕಾರ (38), ತಂದೆ: ಕುಷ್ಟ ಪೂಜಾರಿ, ವಾಸ: ಪಡುಕೆರೆ, ಪಾರಂಪಳ್ಳಿ ಗ್ರಾಮ 2) ಬಸವ(48), ತಂದೆ: ದಿ. ಕಾಳ, ವಾಸ: ಕಾರ್ತಟ್ಟು ಗ್ರಾಮ, ಉಡುಪಿ 3) .ತಿಮ್ಮ ಪೂಜಾರಿ, ಕಾರ್ಕಡ ಇವರುಗಳನ್ನು ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸಿದ ನಗದು ರೂಪಾು 640/- ಹಾಗೂ ಇತರ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 183/08 ಕಲಂ 78(3) ಕನರ್ಾಟಕ ಪೊಲೀಸ್ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
ಜಾನುವಾರು ಕಳವು ಪ್ರಕರಣ
 
ದಿನಾಂಕ 5/08/09 ರಂದು 21:00 ಗಂಟೆಗೆ ಕೋಟಾ ಠಾಣಾ ಪೊಲೀಸ್ ಉಪನೀರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್ ಇವರು ಠಾಣೆಯಲ್ಲಿರುವಾಗ್ಗೆ ಮಧುವನ ರೈಲ್ವೇ ಬ್ರಿಡ್ಜ್ ಬಳಿ ಬಿಳಿ ಬಣದ್ಣ ಟಾಟಾ ಎಲ್.ಜಿ..ವಿ ಟೆಂಪೋದಲ್ಲಿ ಕೋಣಗಳನ್ನು ತುಂಬಿಸುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತಲುಪಿ ನೋಡಲಾಗಿ ಇಬ್ಬರು ವ್ಯಕ್ತಿಗಳು ಬಿಳಿ ಬಣ್ಣದ ಎಲ್.ವಿ.ಜಿ ಟೆಂಪೋ ನಂಬ್ರ ಕೆ.ಎ 20 ಎ 6944 ನೇಯದಕ್ಕೆ ಕೋಣಗಳನ್ನು ತುಂಬಿಸುತ್ತಿದ್ದು ವ್ಯಕ್ತಿಗಳು ಸಮವಸ್ತ್ರದಲ್ಲಿದ್ದ ಪೊಲೀಸ್ ಉಪನೀರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್ ಮತ್ತು ಸಿಬ್ಬಂದಿಯವರನ್ನು ನೋಡಿ ಓಡಿ ಹೋಗಿದ್ದು ಹಾಗೆ ಓಡುವಾಗ ಒಬ್ಬ ವ್ಯಕ್ತಿಯು ಅಬ್ದುಲ್ ಖಾದರ್ ಎಂದು ಕರೆದಿದ್ದು ಟೆಂಪೋವನ್ನು ಸಿಬ್ಬಂದಿಯವರೊಂದಿಗೆ ಪರಿಶೀಲಿಸಲಾಗಿ ವಾಹನದ ಹಿಂದೆ ಟರ್ಪಲಿನಿಂದ ಮುಚ್ಚಿದ್ದು ಪರಿಶೀಲಿಸಲಾಗಿ ಮೂರು ಕೋಣಗಳನ್ನು ಉಸಿರುಗಟ್ಟಿಸುವ ರೀತಿಯಲ್ಲಿ ಕೂಡಿಹಾಕಿಕೊಂಡು ಅದರ ಕಾಲುಗಳನ್ನು ಹುರಿಹಗ್ಗದಿಂದ ಕಟ್ಟಿ ಅಮಾನುಷ ರೀತಿಯಲ್ಲಿ ಇಕ್ಕಟ್ಟಾದ ಸ್ಥಳದಲ್ಲಿ ನಿಲ್ಲಿಸಿದ್ದು ಕೋಣಗಳನ್ನು ಯಾವುದೇ ಪರವಾನಿಗೆ ಪಡೆಯದೇ ಅಮಾನುಷ ರೀತಿಯಲ್ಲಿ ಕೊಂಡು ಹೋಗುತ್ತಿರುವುದಾಗಿದೆ. ಈ ಬಗ್ಗೆ ಶ್ರೀ ಮಹೇಶ್ ಪ್ರಸಾದ್ ರವರ ದೂರಿನ ಮೇರೆಗೆ ಠಾಣಾ ಅಪರಾಧ ಕ್ರಮಾಂಕ 184/09 ಕಲಂ ಮೈಸೂರು ಪ್ರಿವೆನ್ಶನ್ ಆಪ್ ಕೌಸ್ಲಾಟರ್ ಆಂಡ್ ಕೇಟಲ್ ಪ್ರಿಸ ರ್ ಆಕ್ಟ್ 1964 8,9,11, ದಿ.ಪ್ರಿವೆಶನ್ ಆಫ್ ಕ್ರುವೇಲಿಟಿ ಟು ಎನಿಮಲ್ ಆಕ್ಟ್ 1960 11 ಐ.ಪಿ.ಸಿ. 1860 34 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
ಹಲ್ಲೆ ಪ್ರಕರಣ
 
ದಿನಾಂಕ:05/08/09 ರಂದು 14:00 ಗಂಟೆಗೆ ಕಾರ್ಕಳ ತಾಲೂಕು ಬೈಲೂರು ಗ್ರಾಮದ ದುಗರ್ಾ ನಸರ್ಿಂಗ್ ಹೋಮ್ ಮನೆ ಚಂದನ್ ವೈನ್ ಶಾಫ್ನ ವಾಸಿ ಕೆ. ಭುಜಂಗ ತಂದೆ: ಕೂಕ್ರ ಎಂಬವರು ಚಂದನ್ ವೈನ್ ಶಾಫ್ನ ಬಳಿ ತನ್ನ ಅಣ್ಣನಾದ ಶಂಕರ ಎಂಬವರೊಂದಿಗೆ ಮಾತನಾಡುತ್ತಿರುವಾಗ ಆಪಾದಿತ ರಮೇಶನು ಇವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ದೂಡಿ ಹಾಕಿದ ಪರಿಣಾಮ ಎಡ ಕೈ ಗುದ್ದಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಕೆ. ಭುಜಂಗ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 107/09 ಕಲಂ. 324,504,506 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಜೀವ ಬೆದರಿಕೆ ಪ್ರಕರಣ
 
ದಿನಾಂಕ 06.08.09 ರಂದು 10:30 ಗಂಟೆಗೆ ಉಡುಪಿ ತಾಲೂಕು 34 ನೇ ಕುದಿ ಗ್ರಾಮ, ಪಡು ಕೋಟಂಬೈಲು, ಬೈದಬೆಟ್ಟು ಅಂಚೆ ವಾಸಿ ಕೆ.ಉಮ(43), ಗಂಡ: ಕೃಷ್ಣ ವಾಕುಡ, ಎಂಬವರು ಠಾಣೆಗೆ ಬಂದು ನೀಡಿದ ಲಿಖಿತ ದೂರುನೀಡಿದ್ದು ತಾನು ಮನೆಯಲ್ಲಿ ಇರದ ಸಮಯ ಪರಿಚಯದ ಆರೋಪಿ ರವೀಂದ್ರ ಐತಾಳ್(ವಿಳಾಸ ಪತ್ತೆಯಾಗಿರುವುದಿಲ್ಲ) ಎಂಬವರು ಚಿತ್ರಪಾಡಿ ಗ್ರಾಮ ಉರಾಳಕೇರಿಯಲ್ಲಿರುವ ತವರು ಮನೆಗೆ ದಿನಾಂಕ 04/08/09 ರಂದು ಸಂಜೆ 6:00 ಗಂಟೆಗೆ ಅಕ್ರಮವಾಗಿ ಪ್ರವೇಶಿಸಿ ತಾು ಮತ್ತು ಅಕ್ಕನಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಅವರ ಮೈಮೇಲೆ ಕೈಹಾಕಿ ಅವಮಾನ ಮಾಡಿರುತ್ತಾರೆ. ಅಲ್ಲದೇ ಅಕ್ಕನ ಮಗ ಅಶ್ವತ್ಥನು ರವಿಂದ್ರ ಐತಾಳರಲ್ಲಿ ನೀವು ಯಾಕೆ ಹೀಗೆ ಮಾಡುತ್ತೀರಿ ಎಂದು ಕೇಳಿದಾಗ ಆರೋಪಿತನು ತಾನು ಬೆಂಗಳೂರು ಮತ್ತು ಗೋಕರ್ಣದಲ್ಲಿ ಕೊಲೆ ಮಾಡಿ ತಪ್ಪಸಿಕೊಂಡು ಬಂದಿದ್ದೆ, ನನ್ನನ್ನು ಕೇಳಲಿಕ್ಕೆ ನೀನು ಯಾರು ಎಂದು ಹೇಳಿ ಮನೆಯವರೆಲ್ಲರಿಗೆ ಕೊಲೆ ಮಾಡುತ್ತೇನೆ ಎಂಬುವುದಾಗಿ ಜೀವ ಬೆದರಿಕೆ ಹಾಕಿದ ವಿಚಾರವನ್ನು ಕೊಕ್ಕಣರ್ೇಯಲ್ಲಿರುವಾಗ ದಿನಾಂಕ 05/8/09 ರಂದು ಬೆಳಿಗ್ಗೆ 11:00 ಗಂಟೆಗೆ ಉಮಾರವರ ಅಕ್ಕ ರಮಾದೇವಿಯವರು ವಿಷಯ ತಿಳಿಸಿದ್ದು, ಈ ಬಗ್ಗೆ ಮನೆಯವರಲ್ಲಿ ಚಚರ್ಿಸಿ ದಿನಾಂಕ 06/08/09 ರಂದು ಠಾಣೆಗೆ ಬಂದು ಕೆ.ಉಮಾ ರವರು ಕೋಟಾ ಠಾಣೆಯಲ್ಲಿ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ 185/09 ಕಲಂ. 448,354,504,506 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಆತ್ಮಹತ್ಯೆ ಪ್ರಕರಣ
 
ದಿನಾಂಕ 05-08-09ರಂದು ಸಂಜೆ 07-00 ಗಂಟೆುಂದ ದಿನಾಂಕ 06-08-09 ರ ಬೆಳಿಗ್ಗೆ 6-30 ಗಂಟೆಯ ನಡುವೆ ಉಡುಪಿ ತಾಲೂಕು ಬ್ಶೆರಂಪಳ್ಳಿ ಗ್ರಾಮದ ಅರ್ಮಲ್ ಗುಡ್ಡೆ ಎಂಬಲ್ಲಿ ಶ್ರೀಧರ ಕುಲಾಲ್ (30) ತಂದೆ ಗೋಪಾಲ ಕುಲಾಲ್ ವಾಸ ಅರಮಲ್ ಗುಡ್ಡೆ ಬ್ಶೆರಂಪಳ್ಳಿ ಗ್ರಾಮ ಉಡುಪಿ ತಾಲುಕು ಇವರ ಬಾವ ಸುದಾಕರ ಕುಲಾಲ್ ಪ್ರಾಯ 31 ವರ್ಷ ತಂದೆ ಶೇಷ ಕುಲಾಲ್ ವಾಸ ಕೆಳ ಮನೆ ಕುಂಜಲ್ ಅಂಚೆ ಉಡುಪಿ ಎಂಬವರು ಜೀವನದಲ್ಲಿ ಜೀಗುಪ್ಸೆ ಗೊಂಡು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶ್ರೀಧರ ಕುಲಾಲ್ ರವರು ಹಿರಿಯಡ್ಕ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 13/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಕೊಲೆ ಪ್ರಕರಣ
 
ದಿನಾಂಕ 30/07/09 ರಂದು ಬೆಳ್ತಂಗಡಿ ತಾಲೂಕಿನ ಕುದ್ಯಾಡಿ ಗ್ರಾಮದ ಪಿಲ್ಯದ ದಿನೇಶ ಪೂಜಾರಿ ಅಲಿಯಾಸ್ ಉದಯ (25 ವರ್ಷ) ಎಂಬಾತನಿಗೆ ಹಾಸನದ ಆಲೂರಿನ ರಶ್ಮಿ ಎಂಬವಳು ಫೋನ್ ಮಾಡಿ ಆಕೆಯ ಊರಾದ ಆಲೂರಿಗೆ ಬರಲು ಹೇಳಿದ್ದು, ಆ ಬಗ್ಗೆ ದಿನೇಶನು ಹಾಸನದ ಬಸ್ಸಿನಲ್ಲಿ ಹೋಗಿ ಆಲೂರಿನಲ್ಲಿ ಬಸ್ಸು ನಿಲ್ದಾಣದಲ್ಲಿ ಇಳಿದನು. ಆಗ ರಶ್ಮಿ ಮತ್ತು ಅವರೊಟ್ಟಿಗೆ ಮೂರ್ನಾಲ್ಕು ಮಂದಿ ಹುಡುಗರು ಇದ್ದು ಸುಮಾರು 9:30 ಗಂಟೆ ರಾತ್ರಿಯಲ್ಲಿ ದಾರಿಯಲ್ಲಿ ಹೋಗುವಾಗ ದಿನೇಶನಲ್ಲಿ 2,000/- ರೂಪಾಯಿ ಹಣವನ್ನು ಕೇಳಿರುತ್ತಾರೆ, ಅದಕ್ಕೆ ದಿನೇಶನು ನನ್ನಲ್ಲಿ ಹಣ ಇಲ್ಲ ಎಂದು ಹೇಳಿದಾಗ ಅವರು ಹಾಗಾದರೆ ನಿನ್ನಲ್ಲಿ ಹಣವಿಲ್ಲದಿದ್ದರೆ ನೀನು ಬಂದಿರುವುದು ಯಾಕೆ?, ಫೋನ್ ಮಾಡುತ್ತಿದ್ದುದು ಯಾಕೆ? ಎಂದು ಹೇಳಿ ಎಲ್ಲರೂ ಸೇರಿ ಯಾರೂ ಇಲ್ಲದ ಪ್ರದೇಶದಲ್ಲಿ ರಾಡಿನಿಂದ ಹಾಗೂ ಕೈಯಿಂದ ಹೊಡೆದು ಅಲ್ಲಿಯೇ ಬಿಟ್ಟು ಹೋದರು ಎಂದು ಆನಂತರ ಆ ದಿನ ಅಲ್ಲಿಯೇ ಬಿದ್ದುಕೊಂಡಿದ್ದು ಮರುದಿವಸ ನೋಡುವಾಗ ತನ್ನಲ್ಲಿ ಹಣ ಮತ್ತು ಮೊಬೈಲ್ ಕಾಣಿಸಲಿಲ್ಲ. ಶುಕ್ರವಾರದಂದು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ಗೆ ಬಂದು ಬೇರೆ ಬೇರೆ ಅಂಗಡಿಯವರಿಂದ ಹಣ ಸಂಗ್ರಹಿಸಿ ಅಲ್ಲಿಂದ ಬೆಳಿಗ್ಗೆ 11:00 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಿಂದ ಹೊರಟು ಧರ್ಮಸ್ಥಳಕ್ಕೆ ಬಂದು ಧರ್ಮಸ್ಥಳ ಛತ್ರದಲ್ಲಿ ಸ್ನಾನ ಮತ್ತು ಊಟ ಮಾಡಿ ಶನಿವಾರದಿಂದ ಸೋಮವಾರ ಮಧ್ಯಾಹ್ನದವರೆಗೆ ಅಂದರೆ ದಿನಾಂಕ: 03/08/09 ರವರೆಗೆ ಧರ್ಮಸ್ಥಳದಲ್ಲಿಯೇ ಉಳಿದು ನಂತರ ಮಧ್ಯಾಹ್ನ ಸುಮಾರು 3:00 ಗಂಟೆಗೆ ಬೆಳ್ತಂಗಡಿ ತಾಲೂಕು ಪಿಲ್ಯ ಪೋಸ್ಟ್ ಕುದ್ಯಾಡಿ ಗ್ರಾಮದ ತನ್ನ ಮನೆಯಾದ ಕಟ್ಯಾಲ್ಗೆ ಬಂದು ಹತ್ತಿರದ ತೋಡಿನ ಬದಿಯಲ್ಲಿ ಬಿದ್ದು ಬೊಬ್ಬೆ ಹಾಕುತ್ತಿದ್ದುದನ್ನು ಕೇಳಿ ನೆರೆಕರೆಯವರಾದ ಉಮೇಶ್ (35 ವರ್ಷ)ರವರು ಹೋಗಿ ನೋಡಿ ಏನಾಯಿತು ಎಂದು ಕೇಳಿದಾಗ ಹುಷಾರಿಲ್ಲ ಎಂದು ಹೇಳಿದ್ದು, ನಂತರ ಅವನನ್ನು ಮನೆಯವರು, ಸಂಬಂಧಿಕರು, ನೆರೆಕರೆಯವರು ಸೇರಿ ಆಟೋರಿಕ್ಷಾದಲ್ಲಿ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಅಲ್ಲಿನ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾಗ ನಡೆದ ಘಟನೆಯನ್ನು ತನಗೆ ಈ ರೀತಿಯಾಗಿ ವಿವರಿಸಿರುತ್ತಾರೆ ಎಂಬುದಾಗಿ ಪ್ರಕರಣದ ಪಿರ್ಯಾದಿ ಕಾರ್ಕಳ ತಾಲೂಕಿನ ಕೆವರ್ಾಶೆಯ ಕುದ್ರೊಟ್ಟುವಿನ ವಾಸಿ ಉದಯ ಕುಮಾರ್ (27 ವರ್ಷ) ತಂದೆ: ದಿವಂಗತ ಶೀನ ಪೂಜಾರಿರವರು ಘಟನೆಯ ಬಗ್ಗೆ ವಿವರಿಸಿರುತ್ತಾರೆ. ನಂತರ ದಿನೇಶ್ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕಳುಹಿಸುವಂತೆ ಸೂಚಿಸಿದ್ದು ಅಲ್ಲಿಂದ ಸುಮಾರು 5:00 ಗಂಟೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯ ವೈದ್ಯರು ಪರಿಶೀಲಿಸಿದಾಗ ಈತನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ದಿನಾಂಕ 06/8/09ರಂದು ಉದಯ ಪೂಜಾರಿಯವರು ನೀಡಿದ ಪಿರ್ಯಾದಿಯಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/09 ಕಲಂ 143, 147, 148, 302, 395 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
 
ಹಲ್ಲೆ ಪ್ರಕರಣ
 
ಉಡುಪಿ ತಾಲೂಕು ಅಲೆವೂರು ಗ್ರಾಮದ ಪ್ರಗತಿನಗರದಲ್ಲಿ ಕಾರಂತ ಕಲಾಗ್ರಾಮ ಎಂಬಲ್ಲಿ ಸಾಂಸ್ಕೃತಿಕ ಭವನ ಕಟ್ಟಡ ನಿಮರ್ಾಣವಾಗುತ್ತಿದ್ದು, ಆ ಕಟ್ಟಡದಲ್ಲಿ ಅಲೆವೂರು ರಾಂಪುರದ ಶೇಖರ (49 ವರ್ಷ)ರವರು ರಾತ್ರಿ ಸಮಯದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದು, ದಿನಾಂಕ 05/08/09 ರಂದು ಬೆಳಿಗ್ಗೆ 05:00 ಗಂಟೆಗೆ ಒಂದು ಗೂಡ್ಸ್ ವಾಹನದಲ್ಲಿ 3 ವ್ಯಕ್ತಿಗಳು ಬಂದು ಶೇಖರರವರಲ್ಲಿ ನಮಗೆ ಮರದ ದಾರಂದ ಕೊಡಿ ಎಂದು ಕೇಳಿದ್ದು ಅದಕ್ಕೆ ಅವರು ಅದು ಇಲಾಖೆಗೆ ಸಂಬಂಧಪಟ್ಟ ಕಟ್ಟಡಕ್ಕೆ ಉಪಯೋಗಿಸಲು ಇರುವ ಮರದ ದಾರಂಧ ಅದನ್ನು ಕೊಡಲಾಗುವುದಿಲ್ಲ ಎಂದು ಹೇಳಿದ್ದು, ಅಷ್ಟರಲ್ಲಿ ಇಬ್ಬರು ವ್ಯಕ್ತಿಗಳು ಅವರ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಅವರನ್ನು ಶೇಖರರವರು ದೂಡಿದ್ದು, ಆಗ ಇನ್ನೊಬ್ಬ ವ್ಯಕ್ತಿ ಹತ್ತಿರದಲ್ಲಿದ್ದ ಗಾಜಿನ ಚೂರನ್ನು ತೆಗೆದುಕೊಂಡು ಅವರ ಬಲ ಭುಜದ ಬಳಿ ಚುಚ್ಚಿ ರಕ್ತ ಗಾಯ ಮಾಡಿದ್ದು, ಅಷ್ಟರಲ್ಲಿ ಅವರು ಬೊಬ್ಬೆ ಹಾಕಿದಾಗ ಅಪರಿಚಿತರು ಬಂದ ವಾಹನದಲ್ಲಿ ಹೊರಟು ಹೋಗಿರುತ್ತಾರೆ. ವಾಹನದ ನಂಬರ್ ಪ್ಲೇಟಿಗೆ ಕಾಗದವನ್ನು ಅಂಟಿಸಿದ್ದು ನಂಬರ್ ಕಾಣಲಿಲ್ಲವಾಗಿ ಶೇಖರರವರು ತನ್ನ ದೂರಿನಲ್ಲಿ ಮಣಿಪಾಲ ಪೊಲೀಸರಿಗೆ ತಿಳಿಸಿರುತ್ತಾರೆ. ಅದರಂತೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 139/09 ಕಲಂ 341, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಅಪಘಾತ ಪ್ರಕರಣ
 
ದಿನಾಂಕ 05/08/09 ರಂದು 19:10 ಗಂಟೆಗೆ ಮೂಡಬೆಟ್ಟು ಗ್ರಾಮದ ರಾ.ಹೆ. 17 ರಲ್ಲಿ ಟ್ಯಾಂಕರ್ ನಂಬ್ರ ಕೆ.ಎ. 19/6707ನ್ನು ಅದರ ಚಾಲಕನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎದುರಿನಿಂದ ಬರುತ್ತಿದ್ದ ಕೆ.ಎ. 19 ಸಿ 3979ನೇ ನಂಬ್ರದ ಬಸ್ಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರು, ಚಾಲಕ ಹಾಗೂ ಟ್ಯಾಂಕರ್ನ ಚಾಲಕ ಹಾಗೂ ಕ್ಲೀನರ್ ರವರಿಗೆ ಸಾಧಾರಣ ಹಾಗೂ ತೀವ್ರ ಸ್ವರೂಪದ ಗಾಯಗಳಾಗಿರುತ್ತದೆ. ಮತ್ತು ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಈ ಅಪಘಾತದ ಬಗ್ಗೆ ಬಂಟ್ವಾಳ ತಾಲೂಕಿನ ಬತ್ತನಾಡಿ ಹೌಸ್, ಮಣಿನಾಲ್ಕೂರು ವಾಸಿ ತಾರಾನಾಥ (30 ವರ್ಷ)ರವರು ದೂರು ನೀಡಿದ್ದು ಅವರ ದೂರಿನಂತೆ ಕಾಪು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 154/09 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 05/08/2009 ರಂದು ಸಂಜೆ 4.30 ಗಂಟೆಗೆ ಜಿ.ಕಾಳಿಂಗ ಶೆಟ್ಟಿ (42 ವರ್ಷ), ತಂದೆ: ಭುಜಂಗ ಶೆಟ್ಟಿ, ವಾಸ:ಹಳ್ನಾಡು ಹೊಸಮನೆ, ಹಳ್ನಾಡು ಗ್ರಾಮ, ಕುಂದಾಪುರರವರು ಕಂಡ್ಳೂರು ಬಸ್ ನಿಲ್ದಾಣದಲ್ಲಿರುವ ಸಮಯ ಅವರ ಪರಿಚಯದ ಆನಂದ ಶೆಟ್ಟಿ ಎಂಬವರು ಕಂಡ್ಲೂರು ಬಸ್ ನಿಲ್ದಾಣದಿಂದ ಅಂಪಾರು ಕಡೆಗೆ ನಡೆದು ಕೊಂಡು ಹೋಗುತ್ತಿದ್ದು ಅಷ್ಟರಲ್ಲಿ ಕೆಎ 20 ಇ 8600 ನಂಬ್ರದ ಸ್ಕೂಟರನ್ನು ಅದರ ಸವಾರ ಕಂಡ್ಳೂರು ಕಡೆಯಿಂದ ಅಂಪಾರು ಕಡೆಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸುತ್ತಾ ನಡೆದುಕೊಂಡು ಹೋಗುತ್ತಿದ್ದ ಆನಂದ ಶೆಟ್ಟಿಯವರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ, ಮುಖಕ್ಕೆ ಮತ್ತು ಕಾಲಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತದೆ. ಈ ಬಗ್ಗೆ ಜಿ.ಕಾಳಿಂಗ ಶೆಟ್ಟಿರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 229/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಕೆರೆಗೆ ಬಿದ್ದು ವಿದ್ಯಾಥರ್ಿ ಸಾವು

 
ಕಾಸರಗೋಡು: ಪ್ಲಸ್ ವಿದ್ಯಾಥರ್ಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಉದುಮ ಸಮೀಪದ ಕೊಳತ್ತುಂಗಾಲ್ ಎಂಬಲ್ಲಿ ಗುರುವಾರ ಪತ್ತೆಯಾಗಿದೆ.
ಕೊಳತ್ತುಂಗಾಲ್ ನಿವಾಸಿ ಅಬ್ದುಲ್ ರಹಿಮಾನ್ ಪುತ್ರ ಮುಹಮ್ಮದ್ ಷರೀಫ್(16) ಎಂದು ಗುರುತಿಸಲಾಗಿದೆ. ಈತ ಉದುಮ ಸಕರ್ಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾಥರ್ಿಯಾಗಿದ್ದನು.
ಬುಧವಾರ ಸಂಜೆಯ ಬಳಿಕ ಷರೀಫ್ ನಾಪತ್ತೆಯಾಗಿದ್ದನು. ಆದರೆ ಗುರುವಾರ ನಡೆಸಿದ ಹುಡುಕಾಟದಲ್ಲಿ ಉದುಮದ ಜುಮಾ ಮಸೀದಿಯ ಕೆರೆಯಲ್ಲಿ ಶವ ಪತ್ತೆಯಾಗಿದೆ. ಸಾವಿನ ಬಗ್ಗೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
 
 
ಕುಸಿದು ಬಿದ್ದು ಸಾವು
 
ಕಾಸರಗೋಡು: ಅಂಚೆ ಕಚೇರಿ ನೌಕರ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಗರದಲ್ಲಿ ನಡೆದಿದೆ.
ಮುಳಿಯಾರು ಕೋಟೂರು ನಿವಾಸಿ ಗಂಗಾಧರ(59) ಸಾವನ್ನಪ್ಪಿದವರು. ಕುಸಿದು ಬಿದ್ದ ಅವರನ್ನು ನಗರದ ಜನರಲ್ ಆಸ್ಪತ್ರೆಯಲ್ಲಿ ಸೇರಿಸಲಾಯಿತಾದರೂ ಫಲಕಾರಿಯಾಗಿಲ್ಲ.
ಪತ್ನಿ ಕಾತ್ಯರ್ಾಯಿನಿ ಮತ್ತು ಮೂವರು ಮಕ್ಕಳಿದ್ದಾರೆ.

 


ಹಳದಿ ಜ್ವರ ಬಾಧಿಸಿ ಯುವತಿ ಸಾವು
 
ಕಾಸರಗೋಡು: ಹಳದಿ ಜ್ವರ ಬಾಧಿಸಿ ಯುವತಿ ಸಾವನ್ನಪ್ಪಿದ ಘಟನೆ ಚಟ್ಟಂಚಾಲ್ ಸಮೀಪದ ಬಂಡಿಚ್ಚಾಲ್ನಲ್ಲಿ ಬುಧವಾರ ಸಂಜೆ ನಡೆದಿದೆ.
ಬಂಡಿಚ್ಚಾಲ್ನ ನಿವಾಸಿ ಮುಹಮ್ಮದ್ ಕುಞ್ಞಿ ಪತ್ನಿ ಷಾಹಿನಾ(25) ಎಂದು ಗುರುತಿಸಲಾಗಿದೆ.

 
 
ಡೆಸ್ಕ್ ಬಿದ್ದು ತುಂಡಾದ ವಿದ್ಯಾಥರ್ಿಯ ಬೆರಳು
 
ಕಾಸರಗೋಡು: ತರಗತಿಯೊಳಗೆ ಆಟವಾಡುತ್ತಿದ್ದ ವೇಳೆ ಡೆಸ್ಕ್ ಮಗುಚಿ ಬಿದ್ದು 3ನೇ ತರಗತಿ ವಿದ್ಯಾಥರ್ಿಯ ಬೆರಳು ತುಂಡಾದ ಘಟನೆ ಗುರುವಾರ ಮಧ್ಯಾಹ್ನ ಇಲ್ಲಿನ ಆಲಂಪಾಡಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ.
ಸ್ಥಳೀಯ ಅಬ್ದುಲ್ಲ ಎಂಬವರ ಪುತ್ರ ಬಿ.ಎ.ಮುಹಮ್ಮದ್ ಸಿರಾಜುದ್ದೀನ್ ಎಂಬಾತನೇ ಗಾಯಾಳು. ಈತನನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

 
 
ಕಾರಿನಲ್ಲಿ ಮಗುವನ್ನು ಕುಳ್ಳಿರಿಸಿ ಹೋದ `ಪಿತಾ'ಮಹ
 
ಕಾಸರಗೋಡು: ಅಪ್ಪನೋರ್ವ ನಗರದಲ್ಲಿ ತನ್ನ 2 ವರ್ಷದ ಮಗನನ್ನು ಕಾರಿನೊಳಗೆ ಕುಳ್ಳಿರಿಸಿ ಹೋಗಿ ಎಡವಟ್ಟಾದ ಘಟನೆ ಗುರುವಾರ ಸಂಜೆ ನಡೆದಿದೆ.
ನಗರದ ಹಣಕಾಸು ಸಂಸ್ಥೆಯ ಕಚೇರಿಯಲ್ಲಿ ಹಣ ಪಾವತಿಸಲು ಹೋದ ಅಬ್ದುಲ್ ಸತ್ತಾರ್ ಎಂಬ `ಪಿತಾಮಹ' ಹೋಗಿ ಹೊತ್ತು ಮೀರಿದರೂ ಬರದಿದ್ದಾಗ ಮಗು ಕಾರಿನ ಬಾಗಿಲು ತೆಗೆದು ಹೊರಗೆ ಬಂದು ಕಟ್ಟಡದ ಕೋಣೆ ಕೋಣೆಗಳಿಗೆ ನುಗ್ಗಿ ಅಳುತ್ತಲೇ ಅಲೆದಾಡುತ್ತಿತ್ತು. ಇದನ್ನು ಕಂಡ ವ್ಯಾಪಾರಿಗಳು ಪೊಲೀಸರಿಗೆ ವಿಷಯ ತಿಳಿಸಿದರು. ಇಷ್ಟಾದರೂ ಅಪ್ಪನಿಗೆ ಮಗುವಿನ ಒಂಟಿತನ ಕಾಡಲಿಲ್ಲ.
ಆತ ಇನ್ನೊಂದು ಕಚೇರಿಗೆ ಹೋಗಿ ಕಾರಿನ ಬಳಿಗೆ ಬರುತ್ತಿರುವಷ್ಟರಲ್ಲಿ  ನಗರ ತುಂಬಾ ಜನ ಸೇರಿತ್ತು. ವಿಷಯ ತಿಳಿದ ಪೊಲೀಸರು ಪಿತಾಮಹನಿಗೆ ಸಾರ್ವಜನಿಕರ ಮುಂದೆ ಮಂಗಳಾರತಿ ಮಾಡಿದ ಬಳಿಕ ಮಗುವನ್ನು ಆತನ ವಶಕ್ಕೆ ಒಪ್ಪಿಸಿದರು.

 


ಸವಾರನ ಸಾವು: ಬಸ್ಸಿಗೆ ಹಾನಿ-ಸಂಚಾರ ಸ್ಥಗಿತ
 
ಮಂಜೇಶ್ವರ: ಬಸ್ಸನ್ನು ಹಾನಿಗೊಳಿಸಿದ್ದನ್ನು ಖಂಡಿಸಿ ಗುರುವಾರ ಖಾಸಗಿ ಎಕ್ಸ್ಪ್ರೆಸ್ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದ ಘಟನೆ ನಡೆದಿದೆ.
ಇಲ್ಲಿಗೆ ಸಮೀಪದ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಖಾಸಗಿ ಎಕ್ಸ್ಪ್ರೆಸ್ ಬಸ್ಸು ಬೈಕ್ಗೆ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಸಿಟ್ಟಿಗೆದ್ದ ಸ್ಥಳೀಯರು ಬಸ್ಸನ್ನು ಹಾನಿಗೊಳಿಸಿದ್ದರು.
ಘಟನೆಯಲ್ಲಿ ಕುಂಜತ್ತೂರು ತೂಮಿನಾಡು ನಿವಾಸಿ ಫರಿಯಾಸ್(21) ಸಾವನ್ನಪ್ಪಿದ್ದು, ಆತನ ಗೆಳೆಯ ಜಾಸಿಂ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ನಂದಾದೀಪ/Nanda deepa

ಮಂಜೇಶ್ವರ ಸಮೀಪದ ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲೂಕು ಘಟಕದ ಆಶ್ರಯದಲ್ಲಿನಡೆದ ನಂದಾದೀಪ ಸಮಾರಂಭವನ್ನು ಕವಿ ಶ್ರೀಕೃಷ್ಣಯ್ಯ ಅನಂತಪುರ ಉದ್ಘಾಟಿಸಿ ಮಾತನಾಡಿದರು.


ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲೂಕು ಘಟಕದ ಆಶ್ರಯದಲ್ಲಿ ನಂದಾದೀಪ ಸಮಾರಂಭ ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜರುಗಿತು.
ಕವಿ ಶ್ರೀಕೃಷ್ಣಯ್ಯ ಅನಂತಪುರ ಉದ್ಘಾಟಿಸಿದರು.  ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮೇನೇಜರ್ ಪ್ರೇಮಾ ಕೆ.ಭಟ್ ಹಾಜರಿದ್ದರು.
ರವಿ ಅಲೆವೂರಾಯ ವಕರ್ಾಡಿ ಅವರಿಂದ `ನವರಸಾಭಿನಯ' ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ನೀಡಿದರು. ಪುರುಷೋತ್ತಮ ಭಟ್ ನೆಡುವಾಜೆ(ಭಾಗವತರು), ಶಂಕರ ಭಟ್ ಕಲ್ಮಡ್ಕ(ಮೃದಂಗ, ಮಧುಸೂದನ ಅಲೆವೂರಾಯ(ಚೆಂಡೆ), ಸುದರ್ಶನ(ಚಕ್ರತಾಳ) ಸಹಕರಿಸಿದರು.
ಸಿ.ರಾಘವ ಬಲ್ಲಾಳ್ ಪ್ರಾಸ್ತಾವಿಕ ಮಾತಾಡಿದರು. ಮುಖ್ಯೋಪಾಧ್ಯಾಯ ಎಂ.ಬಾಲಕೃಷ್ಣ ಭಟ್ ಸ್ವಾಗತಿಸಿ, ಕ.ಸಾ.ಪ. ತಾಲೂಕು ಘಟಕದ ಕಾರ್ಯದಶರ್ಿ ರಾಮಚಂದ್ರ ಧರ್ಮತ್ತಡ್ಕ ವಂದಿಸಿದರು. ಪಿ.ಶಿವಶಂಕರ ನಿರೂಪಿಸಿದರು.



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

BJYP

ಕಾಸರಗೋಡು ತಾಲೂಕಿನ ಭಾರತೀಯ ಜನತಾ ಯುವ ಮೋಚರ್ಾ ಬಾಯಾರು ದಳಿಕುಕ್ಕು ಘಟಕದ ಒಂದು ದಿನದ ತರಬೇತಿ ಶಿಬಿರ ಮಂಜೇಶ್ವರ ಮಂಡಲ ಬಿ.ಜೆ.ಪಿ. ಪ್ರಧಾನ ಕಾರ್ಯದಶರ್ಿ ಮುರಳೀಧರ ಯಾದವ್ ಮಾತನಾಡಿದರು. ಮಣಿಕಂಠ ರೈ, ಬಾಲಕೃಷ್ಣ, ಪ್ರವೀಣ ಚಂದ್ರ, ಗಣಪತಿ ಭಟ್ ಹಾಜಜರಿದ್ದರು.
 

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ರಾ.ಸೇ.ಯೋ. ಸಹಾಯ ಹಸ್ತ

ಕಾಸರಗೋಡು ಸಕರ್ಾರಿ ಕಾಲೇಜಿನ ರಾ.ಸೇ.ಯೋ. ಘಟಕದ ನೇತೃತ್ವದಲ್ಲಿ ಸಂಗ್ರಹಿಸಿದ ಸಹಾಯನಿಧಿಯನ್ನು ಸತ್ಯರಾಜ್ ಚಿಕಿತ್ಸಾ ಸಹಾಯ ಸಮಿತಿಗೆ
ಕಾಲೇಜಿನ ಪ್ರಾಂಶುಪಾಲ ಪ್ರೊ.ಮಾಧವನ್ ನಂಬ್ಯಾರ್ ಬುಧವಾರ ವಿತರಿಸಿದರು.



ಕಾಸರಗೋಡು: ರಕ್ತದ ಅಬರ್ುದ ರೋಗದಿಂದ ಬಳಲುತ್ತಿರುವ ಇಲ್ಲಿನ ಇರಿಯಣ್ಣಿ ಜಿ.ವಿ.ಎಚ್.ಎಸ್.ಶಾಲೆಯ ಪ್ರತಿಭಾನ್ವಿತ ವಿದ್ಯಾಥರ್ಿ ಸತ್ಯರಾಜ್ಗೆ ಕಾಸರಗೋಡು ಸಕರ್ಾರಿ ಕಾಲೇಜಿನ ರಾ.ಸೇ.ಯೋ. ಘಟಕದ ನೇತೃತ್ವದಲ್ಲಿ ಸಂಗ್ರಹಿಸಿದ ಸಹಾಯನಿಧಿಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಮಾಧವನ್ ನಂಬ್ಯಾರ್ ಬುಧವಾರ ವಿತರಿಸಿದರು.
ಸಹಾಯನಿಧಿಯನ್ನು ಸತ್ಯರಾಜ್ ಚಿಕಿತ್ಸಾ ಸಹಾಯ ಸಮಿತಿಯ ಸಂಚಾಲಕ ಸಜೇಶ್ ಕುಮಾರ್ ಸ್ವೀಕರಿಸಿದರು. ಸತ್ಯರಾಜ್ ತಿರುವನಂತಪುರದ ಆರ್.ಸಿ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಕುಟುಂಬ ಆಥರ್ಿಕವಾಗಿ ಅತಂತ್ರ ಸ್ಥಿತಿಯಲ್ಲಿದೆ. ಕೂಲಿ ಕಾಮರ್ಿಕರಾಗಿರುವ ತಂದೆ, ಅಪಘಾತದಿಂದ ಜರ್ಜರಿತ ಸ್ಥಿತಿಯಲ್ಲಿರುವ ತಾಯಿಗೆ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ.
ಸಹಾಯ ನಿಧಿ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಎ.ಶ್ರೀನಾಥ್ ಕಾಸರಗೋಡು, ರಾ.ಸೇ.ಯೋಜನಾಧಿಕಾರಿಗಳಾದ ಮಹಮ್ಮದಾಲಿ ಪೆರ್ಲ ಮತ್ತು ರತ್ನಾಕರ ಮಲ್ಲಮೂಲೆ, ಕಾರ್ಯದಶರ್ಿ ಮಹೇಶ್ ವೈ, ಖಾಲಿದ್, ನಯನ ಹಾಜರಿದ್ದರು.
ಮಹಮ್ಮದಾಲಿ ಸ್ವಾಗತಿಸಿ, ಪ್ರಜಿತ ವಂದಿಸಿದರು.


ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿಕರಿಗೆ ತರಬೇತಿ
 
ಕಾಸರಗೋಡು: ಇಲ್ಲಿಗೆ ಸಮೀಪದ ಚೌಕಿಯಲ್ಲಿರುವ ಸಿ.ಪಿ.ಸಿ.ಆರ್.ಐ.ಯ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಕೃಷಿಕರಿಗೆ ವಿವಿಧ ತರಬೇತಿ ಕಾರ್ಯಕ್ರಗಳನ್ನು ಆಯೋಜಿಸಲಾಗಿದೆ.
ಇದೇ 12ರಂದು ತೆಂಗಿನ ಸುಳಿ ಕೊಳೆಯುವ ರೋಗದ ಹತೋಟಿ ಕ್ರಮ,  17ರಂದು ಬಾಳೆಯ ಕೀಟ ಹಾವಳಿಯ ನಿಯಂತ್ರಣ, ಎಲೆಕೋಸು ಮತ್ತು ಹೂ ಕೋಸು ಉತ್ಪಾದನಾ ತಂತ್ರಜ್ಞಾನ, 19ರಂದು ಮೇವಿನ ಹುಲ್ಲು ಬೆಳೆಸುವ ರೀತಿ, 20 ಮತ್ತು 25ರಂದು ವಿವಿಧ ಋತುಗಳ ತರಕಾರಿ ಕೃಷಿ ರೀತಿ, 21ರಂದು ಕಾಳುಮೆಣಸಿನ ಬೇರು ಸೊರಗು ರೋಗ ನಿರ್ವಹಣೆ,  27ರಂದು ವಿವಿಧ ಋತುಗಳ ತರಕಾರಿ ಕೃಷಿ ರೀತಿ, 24ರಂದು ಗ್ರಾಮೀಣ ಮಹಿಳೆಯರಿಗೆ ವಾಷರ್ಿಕ ನುಗ್ಗೆ ಬೆಳೆಸುವ ರೀತಿಯ ಬಗ್ಗೆ ತರಬೇತಿ,  ಗ್ರಾಮೀಣ ಯುವಕರಿಗೆ 18 ಮತ್ತು 19ರಂದು ಅಣಬೆ ಕೃಷಿ ಮತ್ತು ಅದರ ಬೀಜೋತ್ಪತ್ತಿ ಬಗ್ಗೆ ತರಬೇತಿ, 29ರಂದು ಅಡಿಕೆ ಹಾಳೆಯಿಂದ  ತಟ್ಟೆ ತಯಾರಿ, 31ರಂದು ಜೇನು ವ್ಯವಸಾಯದ ಬಗ್ಗೆ ತರಬೇತಿ, 21ರಂದು ಜಿಲ್ಲೆಯ ವಿವಿಧ ಪಂಚಾಯ್ತಿ ಅಧ್ಯಕ್ಷರಿಗೆ ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಕಾರ್ಯಕ್ರಮಗಳ ಕುರಿತು ಮಾಹಿತಿ ಹಾಗೂ ಮುಖಾಮುಖಿ ನಡೆಯಲಿದೆ. 
10ರಂದು ಕೃಷಿ ಇಲಾಖೆಯ ಸಿಬ್ಬಂದಿಗಳಿಗೆ ತೆಂಗಿನ ತೋಟದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯ ಬಗ್ಗೆ ತರಬೇತಿ ನಡೆಯಲಿದೆ.
ತರಬೇತಿ ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಕೇಂದ್ರ ಮುಖ್ಯಸ್ಥ(9444232993)ರನ್ನು ಸಂಪಕರ್ಿಸಲು ಕೋರಲಾಗಿದೆ.

ರಾಘವೇಂದ್ರ ಸ್ವಾಮಿಗಳ 338ನೇ ಆರಾಧನೋತ್ಸವ
 
ಕಾಸರಗೋಡು: ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 338ನೇ ಆರಾಧನೋತ್ಸವ ಇದೇ 7ರಿಂದ 9ರ ವರೆಗೆ ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
7ರಂದು ಬೆಳಗ್ಗೆ ಬೆಳಗ್ಗೆ 6ಕ್ಕೆ ದೀಪ ಪ್ರತಿಷ್ಠೆ, 8ಕ್ಕೆ ಭಜನೆ, 10ಕ್ಕೆ ಗುಡ್ಡಪ್ಪ ಶೆಟ್ಟಿ ನಾರಾಯಣ ಮಂಗಲ ಅವರಿಂದ ಪುರಾಣವಾಚನ, ಸಂಜೆ 3ಕ್ಕೆ ಭಜನೆ, 5ಕ್ಕೆ ಹರಿಕಥೆ, 8ರಂದು ಬೆಳಗ್ಗೆ ಭಜನೆ, 10ಕ್ಕೆ ದೇವಕೀ ತನಯ ಅವರ ಪುರಾಣ ವಾಚನ, 11.30ಕ್ಕೆ ಪೂಜೆ, ಮಧ್ಯಾಹ್ನ 2ಕ್ಕೆ ವಾಮನ ಉದ್ಯಾವರ ತಂಡದಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4.30ಕ್ಕೆ ಕು.ಶಾಂಭವಿ ಕುಂಬಳೆ ಅವರಿಂದ ಹರಿಕಥೆ, 5.30ಕ್ಕೆ ಧಾಮರ್ಿಕ ಸಭೆ, ರಾತ್ರಿ 7ಕ್ಕೆ ಪೂಜೆ, 9ರಂದು ಬೆಳಗ್ಗೆ ಭಜನೆ, 11.30ಕ್ಕೆ ಪೂಜೆ, ಸಂಜೆ 3ಕ್ಕೆ ಹರಿಕಥೆ, 5ಕ್ಕೆ ಕು.ನಯನ ಗೌರಿ ಸೇರಾಜೆ ಅವರಿಂದ ಹರಿಕಥೆ, ರಾತ್ರಿ 7.30ಕ್ಕೆ ಮಹಾಪೂಜೆ ನಡೆಯಲಿದೆ.

ಇಂಗ್ಲಿಷ್ ಅಧ್ಯಾಪಕ ಹುದ್ದೆ : ಅಜರ್ಿ ಆಹ್ವಾನ
ಕಾಸರಗೋಡು: ಕಾಸರಗೋಡು ಸಕರ್ಾರಿ ಹೈಯರ್ ಸೆಕೆಂಡರಿ ಶಾಲೆ ಇಂಗ್ಲಿಷ್ ಅಧ್ಯಾಪಕರ ಹುದ್ದೆ ಖಾಲಿ ಇದ್ದು, ದಿನಗೂಲಿ ವೇತನದಡಿಯಲ್ಲಿ ನೇಮಕಗೊಳಿಸಲು ಅರ್ಹ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ. ಇದೇ 10ರಂದು ಬೆಳಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.




--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಅನುಮಾನಾಸ್ಪದ ವ್ಯಕ್ತಿಗಳ ಬಂಧನ/arrest


ಪಡುಬಿದ್ರಿ: ಪಡುಬಿದ್ರಿ ಠಾಣೆಯ ಸಿಬ್ಬಂದಿಯವರಾದ ಕೆ.ಗಣೇಶ್ ಮತ್ತು ಭಾಲಕೃಷ್ಣರವರು ದಿನಾಂಕ 04-05/08/2009ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ ಸುಮಾರು 03:00 ಘಂಟೆಗೆ ನಂದಿಕೂರು ಬಸ್ಸು ನಿಲ್ದಾಣದ ಬಳಿ ಕಟ್ಟಡದ ಮರೆಯಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡಿದ್ದು, ಅವರುಗಳು ತಮ್ಮ ಇರುವಿಕೆಯನ್ನು ಮರೆಮಾಚಲು ಪ್ರಯತ್ನಪಡುತ್ತಿದ್ದವರನ್ನು ಬೈಕ್ನ ಬೆಳಕು ಹಾುಸಿ ನೋಡಲಾಗಿ ಅವರು ಪೊಲೀಸರನ್ನು ನೋಡಿ ಅಲ್ಲಿಂದ ಓಡಲು ಯತ್ನಿಸಿದ್ದು, ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಲ್ಲಿ ತಮ್ಮನ್ನು 1) ಗಂಗಾಧರ (33 ವರ್ಷ) ತಂದೆ ಭಾಸ್ಕರ ದೇವಾಡಿಗ ವಾಸ: ಭಾಸ್ಕರ ನಿವಾಸ, ಬಪ್ಪನಾಡು ದೇವಸ್ಥಾನ ಬಳಿ, ಮೂಲ್ಕಿ ಮತ್ತು 2) ಪ್ರಸನ್ನ ಪೂಜಾರಿ (28 ವರ್ಷ) ತಂದೆ ಪಾಂಚ ಪೂಜಾರಿ ವಾಸ: ಸಾಂತೂರು ಕಾಪಿಕಾಡು ಮನೆ, ಸಾಂತೂರು ಗ್ರಾಮ ಪಿಲಾರ್ ಅಂಚೆ ಎಂದು ಪರಿಚುಸಿಕೊಂಡಿದ್ದು, ತಮ್ಮ ಇರುವಿಕೆಯ ಬಗ್ಗೆ ಸಮಂಜಸವಾದ ಉತ್ತರವನ್ನು ನೀಡದೇ ಇದ್ದುದರಿಂದಲೂ ಹಾಗೂ ಅವರು ರಾತ್ರಿ ವೇಳೆಯಲ್ಲಿ ಯಾವುದೋ ಬೇವಾರಂಟ್ ತಕ್ಷೀರು ನಡೆಸುವ ಉದ್ದೇಶದಿಂದ ಹಾಜರಿರುವ ಬಗ್ಗೆ ಬಲವಾದ ಸಂಶಯಗೊಂಡು ಅವರುಗಳನ್ನು ಸ್ಥಳದಲ್ಲೇ ವಶಕ್ಕೆ ತೆಗೆದುಕೊಂಡು ಅವರಿಂದ ಒಳ್ಳೆಯ ನಡತೆಯ ಬಗ್ಗೆ ಸೂಕ್ತ ಕಾಲದವರೆಗೆ ಮುಚ್ಚಳಿಕೆ ಪಡಕೊಳ್ಳಲು ಉಡುಪಿ ತಾಲೂಕು ದಂಢಾಧಿಕಾರಿಯವರಿಗೆ ಠಾಣಾ ಅಪರಾಧ ಕ್ರಮಾಂಕ 132/09 ಕಲಂ 109 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ವರದಿ ಸಲ್ಲಿಸಲಾಗಿದೆ.
 
 
ಹಳೇ ಆರೋಪಿಯ ಬಂಧನ
 
ಮಣಿಪಾಲ : ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 101/04 ಕಲಂ 406, 420 ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ಆರೋಪಿಯಾದ ಮಂಗಳೂರಿನ ಎಡಪದವಿನ ಶಿಬ್ರಿಕೆರೆ ವಾಸಿ ರಾಧಾಕೃಷ್ಣ ನಾಯಕ್ ಅಲಿಯಾಸ್ ಕಿರಣ್ (38 ವರ್ಷ) ತಂದೆ ವಾಸುದೇವ ನಾಯಕ್ರವರು ಸುಮಾರು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಅವರನ್ನು ದಿನಾಂಕ 04/08/2009ರಂದು ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕರ ಮಾರ್ಗದರ್ಶನದಂತೆ ಠಾಣಾ ಸಿಬ್ಬಂದಿಯವರಾದ ಶ್ರೀಧರ ಮತ್ತು ಉಮೇಶ್ರವರು ಮಂಗಳೂರಿನ ಬಜ್ಪೆಯಲ್ಲಿ ವಶಕ್ಕೆ ತೆಗೆದುಕೊಂಡು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿಗೆ ನ್ಯಾಯಾಲಯ 14/08/2009ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
 
 
ಹಲ್ಲೆ ಪ್ರಕರಣ
 
ದಿನಾಂಕ 04/08/09 ರಂದು ರಾತ್ರಿ ಸುಮಾರು 8:00 ಗಂಟೆಯ ಸಮಯಕ್ಕೆ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಗಾಯತ್ರಿ ಗೇರುಬೀಜ ಫ್ಯಾಕ್ಟರಿಯ ಬಳಿ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಶಾರದಾ ನಿವಾಸದ ವಾಸಿ ಅಶೋಕ ಶೆಟ್ಟಿ (46 ವರ್ಷ)ಯವರು ಮನೆಯ ದೈನಂದಿನ ಖಚರ್ಿಗೆ ಸಾಮಾನು ತರುವರೇ ಅಂಗಡಿಗೆ ಹೋಗುವಾಗ, ಆರೋಪಿ ಜಗ್ಗು ಅಲಿಯಾಸ್ ಜಗದೀಶ ಎಂಬಾತನು ರಿಕ್ಷಾದಲ್ಲಿ ಬಂದು ವಿನಾ ಕಾರಣ ಟಯರ್ ಲಿವರ್ನಿಂದ ಅವರಿಗೆ ಹಲ್ಲೆ ಮಾಡಿದ ಪರಿಣಾಮ ಅವರ ಎಡಕಣ್ಣಿನ ಬಳಿ ರಕ್ತಗಾಯವಾಗಿರುತ್ತದೆ ಎಂಬುದಾಗಿ ಅಶೋಕರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 90/09 ಕಲಂ. 324 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಇತರೇ ಪ್ರಕರಣ
ಕುಂದಾಪುರ ತಾಲೂಕಿನ ಕೊಗರ್ಿ ಗ್ರಾಮದ ಕೆಳ ಅರೆಕಲ್ಲು ಮನೆಯ ಪುಟ್ಟಮ್ಮ ಶೆಡ್ತಿ (65 ವರ್ಷ)ರವರ ಮಗಳಾದ ಶ್ರೀಮತಿ ಶೋಭ (30 ವರ್ಷ)ರವರಿಗೆ ಅವರ ಗಂಡನ ಮನೆಯಾದ ಬೇಳಂಜೆ ಗ್ರಾಮದ ತಾರಿಗದ್ದೆ ಎಂಬಲ್ಲಿ ದಿನಾಂಕ 13/04/2003 ರಿಂದ 30/07/2009 ರ ಮಧ್ಯಾವಧಿಯಲ್ಲಿ ಆರೋಪಿತರಾದ ಆಕೆಯ ಗಂಡ ಜಯರಾಮ ಶೆಟ್ಟಿ ಮತ್ತು ಅತ್ತೆ ವನಜಾ ಶೆಡ್ತಿ ಎಂಬವರು ವಿನ: ಕಾರಣ ಇಲ್ಲ ಸಲ್ಲದ ಆರೋಪ ಹೊರಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು ಅವರ ಕಾಯಿಲೆಗೂ ಸರಿಯಾದ ಮದ್ದನ್ನು ಕೂಡ ಮಾಡದೇ ಅವರ ಆತ್ಮಹತ್ಯೆಗೆ ಪ್ರೇರಣೆ ಮಾಡಿದ ಕಾರಣ ಆಕೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರಾಗಿ ಮೃತ ಶೋಭಾರವರ ತಾು ಶ್ರೀಮತಿ ಪುಟ್ಟಮ್ಮ ಶೆಡ್ತಿಯವರು ಹೆಬ್ರಿ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅಪರಾಧ ಕ್ರಮಾಂಕ 74/09 ಕಲಂ 498(ಎ), 306 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಪದ್ಮಪ್ರಿಯಾ ಪ್ರಕರಣ
 
ಉಡುಪಿಯ ಶಿವಳ್ಳಿ ಗ್ರಾಮದ ಕರಂಬಳ್ಳಿಯ ಗುರುಪ್ರಸಾದ್ ನಿಲಯದ ವಾಸಿ ಶ್ರೀ ರಘುಪತಿ ಭಟ್ ತಂದೆ: ದಿವಂಗತ ಶ್ರೀನಿವಾಸ ಬಾರಿತ್ತಾಯರವರು ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದು ತನ್ನ ದೂರಿನಲ್ಲಿ ಪಿರ್ಯಾದುದಾರರಾದ ಅವರು, ತಾನು ಮತ್ತು ಆರೋಪಿ ಶಿವಳ್ಳಿ ಗ್ರಾಮದ ದೊಡ್ಡಣ್ಣಗುಡ್ಡೆಯ ವಾಸಿ ಅತುಲ್ ರಾಮ್ ಅಲಿಯಾಸ್ ಅತುಲ್ ರಾವ್ (37 ವರ್ಷ)ರವರು ಬಾಲ್ಯ ಸ್ನೇಹಿತರಾಗಿದ್ದು, ತಾನು ತನ್ನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದಾಗ ತನ್ನ ಹೆಂಡತಿ ಪದ್ಮಪ್ರಿಯರವರು ಹಣಕಾಸು ಸಂಸ್ಥೆಯ ವ್ಯವಹಾರ ನೋಡಿಕೊಂಡಿದ್ದು ಆ ಸಮಯ ಪದ್ಮಪ್ರಿಯಳು ಆರೋಪಿಯ ಸಹಾಯವನ್ನು ಅವಲಂಬಿಸಿದಾಗ ಆರೋಪಿಯು ತನ್ನ ಹೆಂಡತಿ ಪದ್ಮಪ್ರಿಯಾಳೊಂದಿಗೆ ಅನೈತಿಕ ಸಂಬಂಧ ಹೊಂದಿ, ಅಡಿಕೆ ಮಾರುವ ನೆಪದಲ್ಲಿ ಕಾರ್ಕಳಕ್ಕೆ ಹೋಗಿ ಐದಾರು ಬಾರಿ ಪ್ರಶಾಂತ ಲಾಡ್ಜ್ನಲ್ಲಿ ಉಳಕೊಂಡು ಪದ್ಮಪ್ರಿಯಾಳೊಂದಿಗೆ ದೈಹಿಕ ಸಂಪರ್ಕಹೊಂದಿದ್ದನೆಂದು ಆರೋಪಿಯು ಪದ್ಮಪ್ರಿಯಾನ್ನು ಪಿಯರ್ಾದುದಾರರ ಹೆಂಡತಿ ಎಂದು ತಿಳಿದು ಆಕೆಯೊಡನೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದುದಾಗಿ ಸಾಕ್ಷಿದಾರರ ಹೇಳಿಕೆುಂದ ತಿಳಿದುಬಂದಿದ್ದು, ಈ ನಡುವೆ ಆರೋಪಿಯು ಎಲ್ಲಾ ಪೂರ್ವಸಿದ್ದತೆಗಳನ್ನು ಮಾಡಿ ದಿನಾಂಕ 11/06/08 ರಂದು ಪಿಯರ್ಾದುದಾರರ ಹೆಂಡತಿ ಪದ್ಮಪ್ರಿಯಾಳನ್ನು ಪುಸಲಾುಸಿ ದೆಹಲಿಗೆ ಕರೆದುಕೊಂಡು ಹೋಗಿ, ದೆಹಲಿಯ ಶಮಾ ಅಪಾಟರ್್ಮೆಂಟ್ನಲ್ಲಿ ಒಂದು ದಿನ ಆಕೆಯೊಂದಿಗೆ ತಂಗಿ ನಂತರ ಊರಿಗೆ ಬಂದು ಪಿಯರ್ಾದಿದಾರರ ಹೆಂಡತಿ ಪದ್ಮಪ್ರಿಯಾ ಕಾಣೆಯಾದ ಬಗ್ಗೆ ತಿಳಿದು ಕೂಡಾ ಆರೋಪಿಯು ಪಿಯರ್ಾದಿಯೊಂದಿಗೆ ಸೇರಿ ಆಕೆಯನ್ನು ಹುಡುಕುವ ವಿಷಯದಲ್ಲಿ ಭಾಗಿಯಾಗುವಂತೆ ನಟಿಸಿದ್ದು ದಿನಾಂಕ 15/06/08 ರಂದು ಪಿಯರ್ಾದುದಾರರ ಹೆಂಡತಿ ಪದ್ಮಪ್ರಿಯಾ ದೆಹಲಿಯ ಶಮಾ ಅಪಾಟರ್್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪದ್ಮಪ್ರಿಯಾಳು ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿ ರೂಪಿಸಿದ ಸಂಚು, ಪ್ರೇರಣೆ ಮತ್ತು ಪ್ರಚೋದನೆಗಳೇ ಕಾರಣವಾಗಿರುತ್ತವೆ ಎಂಬುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 137/09 ಕಲಂ 497, 498, 306 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗೌರಿ ಲಂಕೇಶ:
 
ಗೌರಿ ಲಂಕೇಶ ಎಂಬ ಪತ್ರಿಕೆಯ ಸಂಪಾದಕಿ, ಮುದ್ರಕಿ, ಪ್ರಸಾರಕಿ, ಮಾಲಕಿ, ವ್ಯವಸ್ಥಾಪಕರಾದಂತಹ ಗೌರಿ ಲಂಕೇಶ್, ಬಸವನಗುಡಿ, ಬೆಂಗಳೂರುರವರು ಮತ್ತು ಲೇಖಕರಾದ ಬಿಳಿದಳೆ ಈಶರವರು ದಿನಾಂಕ 27/05/09ರ ತಮ್ಮ ಸಂಚಿಕೆಯಲ್ಲಿ ಮಲ್ಲಿಕಾ ಶೆರಾವತ್ ಎಂಬ ಚಿತ್ರ ನಟಿ ಗೋಕರ್ಣಕ್ಕೆ ಭೇಟಿ ನೀಡಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀ ರಾಮಚಂದ್ರಪುರ ಮಠ ಮತ್ತು ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕುರಿತು ಅತ್ಯಂತ ಅವಹೇಳನಕಾರಿಯಾಗಿ ಆಧಾರರಹಿತವಾಗಿ ಮತ್ತು ತುಚ್ಚವಾಗಿ, ಹಾಗೂ ಮಠವನ್ನು ನಂಬುವ, ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಗೌರವಿಸುವ, ಆರಾಧಿಸುವ, ಪ್ರಜಾವಂತ ಶ್ರದ್ದಾ ಭಕ್ತಿಯುಕ್ತರಾದಂತಹ ನಾಗರಿಕರನ್ನು ಘಾಸಿಗೊಳಿಸುವ ರೀತಿಯಲ್ಲಿ ಪತ್ರಿಕೆಯ ಮುಖಪುಟದಲ್ಲಿಯೇ ದಪ್ಪ ಅಕ್ಷರಗಳಲ್ಲಿ ಸ್ವಾಮೀಜಿಯವರ ಫೋಟೋ ಸಹಿತವಾಗಿ ಪೋರಿ ಹಿಂದೆ ಹೋರಿ, ರಾಘವೇಶ್ವರ ಸ್ವಾಮಿಗೆ ಮಲ್ಲಿಕಾ ಮೋಹ ಎಂಬ ತಲೆಬರಹದ ಲೇಖನವನ್ನು ಪ್ರಕಟಿಸಿ ಮುದ್ರಿಸಿ ಪ್ರಚಾರಪಡಿಸಿರುತ್ತಾರಾಗಿ ಉಡುಪಿಯ ಶಿವಳ್ಳಿ ಗ್ರಾಮದ ಮೂಡು ಪೆರಂಪಳ್ಳಿಯ ವಾಸಿ ಜಿ. ವಾಸುದೇವ ಭಟ್ರವರು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದು ಅವರ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/09 ಕಲಂ 153(ಎ), 295(ಎ), 505 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣಗಳು
 
ದಿನಾಂಕ 03/08/09 ರಂದು ಕಾರ್ಕಳ ತಾಲೂಕು, ಕೆರೆಬೆಟ್ಟು ಗ್ರಾಮ,ಶಿವಪುರ ವಾಸಿ ಮನೀಷ್ ಬಿ ಶೆಟ್ಟಿ ತಂದೆ: ಬಾಲಕೃಷ್ಣ ಶೆಟ್ಟಿ ಎಂಬವರು ತನ್ನ ಮೋಟಾರು ಸೈಕಲ್ ನಂ ಕೆಎ 20 ವಿ 5840 ರಲ್ಲಿ ಸವಾರಿ ಮಾಡಿಕೊಂಡು ಬ್ರಹ್ಮಾವರದಿಂದ ಕಜರ್ೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಂಜೆ ಸುಮಾರು 4:30 ಗಂಟೆಗೆ ಹಲುವಳ್ಳಿ ಶಾಲೆಯ ಬಳಿ ತಲುಪುವಾಗ ಕಜರ್ೆ ಕಡೆಯಿಂದ ಬ್ರಹ್ಮಾವರ ಕಡೆಗೆ ಬಸ್ಸು ನಂಬ್ರ ಕೆಎ 20 ಬಿ 807 ನೇದನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಬಲಕಾಳಿನ ಮೂಲೆ ಮುರಿತವಾಗಿರುತ್ತದೆ. ಈ ಅಪಘಾತದ ಬಗ್ಗೆ ಮನೀಷ್ ಬಿ ಶೆಟ್ಟಿ ರವರು ಬ್ರಹ್ಮಾವರ ನಗರ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 137/09 ಕಲಂ 279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ದಿನಾಂಕ 3/8/09 ರಂದು ರಾತ್ರಿ ಉಡುಪಿ ತಾಲೂಕು ಸರಕಾರಿ ಹೈಸ್ಕೂಲ್ ಒಳಕಾಡು ಬಳಿಯ ವಾಸಿ ಅರುಣ್ ಶೆಟ್ಟಿ (31) ತಂದೆ; ಬಿ.ಎಸ್. ಶೆಟ್ಟಿ ಎಂಬವರು ತನ್ನ ಸ್ನೇಹಿತನಾದ ಜಯಕರ ಕೋಟ್ಯಾನ್ ರವರ ಜೊತೆ ಮೋಟಾರ್ ಸೈಕಲ್ ನಂಬ್ರ ಕೆಎ 25 ಈ- 5999 ರಲ್ಲಿ ಸಹಸವಾರರಾಗಿ ಪಡುಬಿದ್ರಿಗೆ ಬಂದಿದ್ದು ವಾಹನಕ್ಕೆ ಪೆಟ್ರೋಲ್ ಹಾಕುವರೇ ಭವ್ಯ ಪೆಟ್ರೋಲ್ ಪಂಪ್ ಬಳಿ ತಲುಪಿದಾಗ ಪಂಪ್ ಬಂದ್ ಅಗಿದ್ದುದರಿಂದ ಪೆಟ್ರೋಲ್ ಹಾಕುವರೇ ಮುಲ್ಕಿಗೆ ರಾಹೆ 17 ರಲ್ಲಿ ಸ್ವಲ್ಪ ಮುಂದೆ ಹೋದಾಗ ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ನಂಬ್ರ ತಿಳಿಯದ ಕಾರಿನ ಚಾಲಕನು ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಪೂರ್ವಕ್ಕೆ ಬಂದು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿರುತ್ತಾರೆ. ಅಪಫಾತದಿಂದ ಸವರಾರಿಬ್ಬರು ರಸ್ತೆಗೆ ಬಿದ್ದು ಸವಾರ ಜಯಕರ ಕೋಟ್ಯಾನ್ ರವರ ತಲೆಗೆ ಹಾಗೂ ಸಹಸವಾರ ಅರುಣ್ ಶೆಟ್ಟಿ ಯವರ ಎಡಕಣ್ಣಿನ ಹುಬ್ಬಿನ ಮೇಲ್ಭಾಗ ರಕ್ತಗಾಯವಾಗಿರುತ್ತದೆ. ಗಾಯಾಳುಗಳಿಬ್ಬರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ದಾಖಲಿಸಲಾಗಿದೆ. ಈ ಅಪಘಾತದ ಬಗ್ಗೆ ಅರುಣ್ ಶೆಟ್ಟಿ ರವರು ಪಡುಬಿದ್ರೆ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/09 ಕಲಂ: 279,337 ಭಾ.ದಂ.ಸಂ ಮತ್ತು ಕಲಂ: 134(ಎ)(ಬಿ) ಜೊತೆಗೆ 187 ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಮನುಷ್ಯಕಾಣೆ ಪ್ರಕರಣ
 
ದಿನಾಂಕ 09/07/2009 ರಂದು ಬೆಳಿಗ್ಗೆ 6.00 ಗಂಟೆಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮ ಕಮಲ ನಿಲಯ ಗುಡ್ಡೆಮನೆ ವಾಸಿ ಶ್ರೀಮತಿ ಸುಜಾತ ತಂದೆ:ನಾಗ ಇವರ ಗಂಡ ಮಂಜುನಾಥ (28 ವರ್ಷ) ಎಂಬವರು ತನ್ನ ಮನೆಯಿಂದ ನೇರಳಕಟ್ಟೆ ಕಲ್ಲು ಕೋರೆಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಹೋದವರು ವಾಪಾಸು ಮನೆಗೆ ಬಾರದೇ ಇದ್ದು ಅವರ ಸ್ವಂತ ಊರಾದ ಗುಲ್ಬರ್ಗ ಜಿಲ್ಲೆಯ ನಿರೋನಿ ಎಂಬಲ್ಲಿಗೂ ಕೂಡ ಹೋಗದೇ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಕಾಣೆಯಾಗಿರುತ್ತಾರೆ.ಎಂಬುದಾಗಿ ದೂರು ನೀಡಿದ್ದು ಅವರ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 228/09 ಕಲಂ ಮನುಷ್ಯಕಾಣೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಕಾಣೆಯಾದ ಗಂಡಸು ಸುಮಾರು 5.4 ಅಡಿ ಎತ್ತರವಿದ್ದು, ಎಣ್ಣೆಕಪ್ಪು ಮೈಬಣ್ಣ ,ಕೋಲು ಮುಖ ,ಬಲ ಕೈಯಲ್ಲಿ ಹಚ್ಚೆಯ ಗುರುತು ಇರುತ್ತದೆ. ಸಪೂರ ಮೀಸೆ ,ಕಪ್ಪು ಕೂದಲು ಹಿಂದಕ್ಕೆ ಬಾಚುತ್ತಾರೆ. ಕೊನೇಯದಾಗಿ ನಸು ನೀಲಿ ಬಣ್ಣದ ಉದ್ದ ತೋಲಿನ ಅಂಗಿ, ಸಿಮೇಂಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ ಕನ್ನಡ ಭಾಷೆ ಬಲ್ಲವರಾಗಿರುತ್ತಾರೆ. ಕಾಣೆಯಾದ ಗಂಡಸು ಪತ್ತೆಯಾದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು ಕುಂದಾಪುರ ವೃತ್ತ (08254-230338, 232516), ಅಥವಾ ಪೊಲೀಸ್ ಕಂಟ್ರೋಲ್ ರೂಂ, ಉಡುಪಿ (0820 - 2526444)ರವರಿಗೆ ತಿಳಿಸಲು ಕೋರಲಾಗಿದೆ.
 
ಇತರೆ ಪ್ರಕರಣಗಳು
 
ಉಡುಪಿ ನಗರ ಠಾಣೆಯ ಶ್ರೀ ಕೊರಗಪ್ಪ ಜಿ. ಸಹಾಯಕ ಪೊಲೀಸ್ ಉಪನಿರೀಕ್ಷಕರು, ಉಡುಪಿ ನಗರ ಪೊಲೀಸ್ ಠಾಣೆ ಇವರು ದಿನಾಂಕ 03/08/09 ರಂದು ರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ರಾತ್ರಿ 11:00 ಗಂಟೆಗೆ ಪೊಲೀಸ್ ಗರುಡಾ ಗರುಡಾ ವಾಹನದಲ್ಲಿ ಎ.ಪಿ.ಸಿ 1523ನೇ ಸಂತೋಷ್ ಹಾಗೂ ಹೆಚ್ಸಿ 1736ನೇ ಕೇಶವ ಗೌಡರವರೊಂದಿಗೆ ಠಾಣೆಯಿಂದ ಹೊರಟು ಕೆ.ಎಂ ಮಾರ್ಗ, ಸವರ್ೀಸ್ ಬಸ್ ನಿಲ್ದಾಣ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಶೀರಿಬೀಡು, ಮೊದಲಾದ ಕಡೆಗಳಲ್ಲಿ ಸಂಚರಿಸಿ ಈ ದಿನ 04/08/09 ರಂದು ಬೆಳಗಿನ ಜಾವ ಸುಮಾರು 02.30 ಗಂಟೆಗೆ ಉಡುಪಿ ನಾರಾಯಣಗುರು ಸಭಾ ಭವನ ಬಳಿ ತಲುಪಿದಾಗ ಅಲ್ಲಿ ಒಬ್ಬ ವ್ಯಕ್ತಿ ಕತ್ತಲೆಯಲ್ಲಿ ನಿಂತುಕೊಂಡಿದ್ದು ಜೀಪಿನ ಬೆಳಕಿನ ಸಹಾಯದಿಂದ ನೋಡಿದಲ್ಲಿ ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸಿದ್ದು ಜೀಪನ್ನು ನಿಲ್ಲಿಸಿದಾಗ ಆತನು ಓಡಲು ಪ್ರಯತ್ನಿಸಿದ್ದು ಹಿಡಿದು ವಿಚಾರಿಸಲಾಗಿ ಆತನು ಹೊರ ಜಿಲ್ಲೆಯವನಾಗಿದ್ದು ಆತನು ಸ್ಥಳದಲ್ಲಿ ತನ್ನ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರವನ್ನು ನೀಡದೇ ಇದ್ದು ಯಾವುದೋ ಬೇವಾರಂಟ್ ತಕ್ಷೀರು ಮಾಡುವ ಇರಾದೆಯಿಂದ ಹೊಂಚುಹಾಕುತ್ತಿರುವುದಾಗಿ ಸಂಶಯಗೊಂಡು ಆತನನ್ನು ವಿಚಾರಿಸಲಾಗಿ ಮುಸ್ತಾಪ ಪ್ರಾಯ:40 ವರ್ಷ ತಂದೆ:ಕರಿಂ ಸಾಬ್,ವಾಸ:ಜನ್ನದಗಲ್ಲಿ 1ನೇ ಕ್ರಾಸ್, ಜನ್ನದ ನಗರ, ಮದರಸದ ಮುಂಭಾಗ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ ನಂತರ ವಶಕ್ಕೆ ತೆಗೆದುಕೊಂಡದ್ದಾಗಿದೆ. ಈ ಬಗ್ಗೆ ಶ್ರೀ ಕೊರಗಪ್ಪ ಜಿ. ಸಹಾಯಕ ಪೊಲೀಸ್ ಉಪನಿರೀಕ್ಷಕರು ರವರು ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 256/09 ಕಲಂ: 109 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಪಾಸು ಬರುವಾಗ ಬೆಳಗಿನ ಜಾವ ಸುಮಾರು 03.00 ಗಂಟೆಗೆ ಬ್ರಹ್ಮಗಿರಿ ಜಂಕ್ಷನ್ ಬಳಿ ಬರುತ್ತಿರುವಾಗ್ಗೆ ಅಲ್ಲಿ ಒಬ್ಬ ವ್ಯಕ್ತಿ ಕತ್ತಲೆಯಲ್ಲಿ ನಿಂತುಕೊಂಡಿದ್ದು ಜೀಪಿನ ಬೆಳಕಿನ ಸಹಾಯದಿಂದ ನೋಡಿದಲ್ಲಿ ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸಿದ್ದು ಜೀಪನ್ನು ನಿಲ್ಲಿಸಿದಾಗ ಆತನು ಓಡಲು ಪ್ರಯತ್ನಿಸಿದ್ದು ಹಿಡಿದು ವಿಚಾರಿಸಲಾಗಿ ಈತನು ಹೊರ ಜಿಲ್ಲೆಯವನಾಗಿದ್ದು ಈ ರಾತ್ರಿ ಸಮಯದಲ್ಲಿ ತನ್ನ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರವನ್ನು ನೀಡದೇ ಇದ್ದು ಯಾವುದೋ ಬೇವಾರಂಟ್ ತಕ್ಷೀರು ಮಾಡುವ ಇರಾದೆಯಿಂದ ಹೊಂಚುಹಾಕುತ್ತಿರುವುದಾಗಿ ಸಂಶಯಗೊಂಡು ಆತನನ್ನು ವಿಚಾರಿಸಲಾಗಿ ಸಂಜಯ್ ಪ್ರಾಯ:24 ವರ್ಷ ತಂದೆ:ನರಸಿಂಹಪ್ಪ ವಾಸ:ಕೊಲ್ಲಾಪುರಂ ದೇವಸ್ಥಾನದ ಹತ್ತಿರ, ಕೊಲ್ ಬಜಾರ್, ಹೊಸಪೇಟೆ ತಾಲೂಕು, ಬಳ್ಳಾರಿ ಜಿಲ್ಲೆ ಎಂಬುದಾಗಿದ್ದು ನಂತರ ವಶಕ್ಕೆ ತೆಗೆದುಕೊಂಡಿರುವುದಾಗಿದೆ. ಈ ಬಗ್ಗೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 257/09 ಕಲಂ ಕಲಂ: 109 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Fire Arm Seized Conspiracy Foiled : 2 Arrested

ಮಂಗಳೂರು: ಇದೇ 5ರಂದು 0230 ಗಂಟೆಗೆ ಮಂಗಳೂರು ಗ್ರಾಮಾಂತರ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಅಡ್ಯಾರ್ ಗ್ರಾಮದ ಅಡ್ಯಾರ್ಕಟ್ಟೆ ಎಂಬಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಹಾಗೂ ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರವರ ವಿಶೇಷ ಪತ್ತೆ ದಳದ ಉಪನಿರೀಕ್ಷಕರಾದ ಪ್ರಕಾಶ್.ಕೆ ಮತ್ತು ಸಿಬ್ಬಂದಿಯವರು ಖಚಿತ ವರ್ತಮಾನದ ಮೇರೆಗೆ ವಾಹನ ತಪಾಸಣೆ ನಡೆಸುವಾಗ್ಯೆ ಏಂ-19-ಘ-244 ಬಜಾಜ್ ಪಲ್ಸರ್ ವಾಹನದಲ್ಲಿ ಬಂದ ಇಬ್ಬರು ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ದುಷ್ಕ್ರತ್ಯದ ಉದ್ದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 1 ಪಿಸ್ತೂಲ್ ಹಾಗೂ 5 ಸಜೀವ ಗುಂಡುಗಳನ್ನು ಪತ್ತೆ ಹಚ್ಚಿ ಆರೋಪಿಗಳಾದ ಸುಧಾಕರ ಆಚಾರಿ (32) ವಾಸ; ಕೊಳಬೈಲು ಮನೆ, ಅಡ್ಯಾರ್ ಗ್ರಾಮ, ಮಂಗಳೂರು, ಹರೀಶ್ ರಾವ್ (28) ವಾಸ; ರಾಮನಗರ ಮನೆ, ಬಜಾಲ್ ಪೋಸ್ಟ್ ಮತ್ತು ಗ್ರಾಮ, ಮಂಗಳೂರು ಇವರನ್ನು ದಸ್ತಗಿರಿ ಮಾಡಿದ್ದು ಇದರಲ್ಲಿ ಹರೀಶ್ರಾವ್ ಎಂಬಾತನು ದರೋಡೆ ಪ್ರಕರಣದ ಆರೋಪಿಯಾಗಿರುತ್ತಾನೆ. ಇವರಿಬ್ಬರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿರುತ್ತದೆ. ಅಂತೆಯೇ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಈ ಪತ್ತೆ ಕಾರ್ಯದಲ್ಲಿ ಪ್ರೋಬೆಷನರಿ ಪಿ.ಎಸ್.ಐ. ಸುನೀಲ್ ಮತ್ತು ದ.ಕ ಜಿಲ್ಲಾ ವಿಶೇಷ ಪತ್ತೆ ದಳದ ಸಿಬ್ಬಂದಿಯವರಾದ ಅನಂದ, ರಾಮ ಪೂಜಾರಿ, ಚಂದ್ರಶೇಖರ, ಶೀನಪ್ಪ, ಗಿರೀಶ್ ಸುವರ್ಣ, ಸುನೀಲ್ಕುಮಾರ್, ಶಾಜು ಕೆ ನಾಯರ್, ರಾಜೇಂದ್ರ ಪ್ರಸಾದ್, ಡೇವಿಡ್ ಡಿ ಸೋಜಾ, ಮಹಮ್ಮದ್ ಇಕ್ಬಾಲ್, ಶಿವ ನಾಯ್ಕ್, ಜಾಜರ್್ ಕೆ.ಡಿ ಇವರುಗಳು ಸಹಕರಿಸಿರುತ್ತಾರೆ. 
 

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Wednesday, August 5, 2009

ಬಸ್ಸು ಬೈಕ್ ಡಿಕ್ಕಿ: ಸವಾರ ಸಾವು/Kunjathur Bike Accident

ಮಂಜೇಶ್ವರ: ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಎಕ್ಸ್ಪ್ರೆಸ್ ಬಸ್ಸು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಇಲ್ಲಿಗೆ ಸಮೀಪದ ಕುಂಜತ್ತೂರಿನಲ್ಲಿ ನಡೆದಿದೆ.
ಕುಂಜತ್ತೂರು ತೂಮಿನಾಡು ನಿವಾಸಿ ಅಬ್ದುಲ್ಲ ಎಂಬವರ ಪುತ್ರ ಫರಿಯಾಸ್(21) ಸಾವನ್ನಪ್ಪಿದ ಯುವಕ ಎಂದು ಗುರುತಿಸಲಾಗಿದೆ.
ಫರಿಯಾಸ್ನ ಜತೆಯಲ್ಲಿ ಸಂಚರಿಸುತ್ತಿದ್ದ ಜಾಸಿಂ ಎಂಬಾತ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ವನಮಹೋತ್ಸವ



ಮಂಜೇಶ್ವರ: ಇಲ್ಲಿನ ಎಸ್.ಎ.ಟಿ. ಪ್ರೌಢಶಾಲೆಯ ಪರಿಸರ ಸಂಘ ಮತ್ತು ಮಂಜೇಶ್ವರದ ಗೌಡ ಸಾರಸ್ವತ ಬ್ರಾಹ್ಮಣ ಸಂಘದ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ವನಮಹೋತ್ಸವ ಜರುಗಿತು.
ಪಂಚಾಯ್ತಿ ಉಪಾಧ್ಯಕ್ಷ ಎಂ.ಜೆ.ಕಿಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮೇನೇಜರ್ ಯೋಗೀಶ್ ಡಿ.ಪ್ರಭು ವಿದ್ಯಾಥರ್ಿಗಳಿಗೆ ಸಸಿಗಳನ್ನು ವಿತರಿಸಿ ವನಮಹೋತ್ಸವವನ್ನು ಉದ್ಘಾಟಿಸಿದರು. ಸಸ್ಯ ಶಾಸ್ತ್ರಜ್ಞ ದಿನೇಶ್ ನಾಯಕ್ ಮಂಜೇಶ್ವರ ಸಸ್ಯ ಸಂಕುಲದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಪಂಚಾಯ್ತಿ ಸದಸ್ಯೆ ಸುಮತಿ ಬಾ ಟೀಚರ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಯತೀಶ್ ಕುಮಾರ್, ಮುಖ್ಯೋಪಾಧ್ಯಾಯ ಉದಯ ಶಂಕರ ಭಟ್, ಕರೆಸ್ಪಾಂಡೆಂಟ್ ನಿತಿನ್ ಚಂದ್ರ ಪೈ ಹಾಜರಿದ್ದರು.
ಸಂಘದ ಸಂಚಾಲಕ ಕಿರಣ್ ಕುಮಾರ್ ಪ್ರಾಸ್ತಾವಿಕ ಮಾತು ಆಡಿದರು. ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾ ಸ್ವಾಗತಿಸಿ, ಶಿಕ್ಷಕ ಸಂಘದ ಕಾರ್ಯದಶರ್ಿ ಮುರಳೀಕೃಷ್ಣ ವಂದಿಸಿದರು.


ತಾಲೂಕು ಅಭಿವೃದ್ಧಿ ಸಮಿತಿ ಸಭೆ ಆಗ್ರಹ
ಕೃಷಿಕರ ಸಾಲ ಮನ್ನಾ

ಕಾಸರಗೋಡು: ಜಿಲ್ಲೆಗೆ ಪ್ರತ್ಯೇಕ ಪ್ಯಾಕೇಜ್ ತಯಾರಿಸಿ ಸಂಕಷ್ಟ ಎದುರಿಸುತ್ತಿರುವ ಅಡಿಕೆ ಮತ್ತು ತೆಂಗು ಕೃಷಿಕರ ಸಾಲವನ್ನು ಮನ್ನಾ ಮಾಡುವಂತೆ ತಾಲೂಕು ಅಭಿವೃದ್ಧಿ ಸಮಿತಿ ಸಭೆ ಸಕರ್ಾರವನ್ನು ಆಗ್ರಹಿಸಿದೆ.
ಕನರ್ಾಟಕದಿಂದ ಮರಳು ತರಲು ಸಕರ್ಾರ ಅನುಮತಿ ನೀಡಬೇಕು ಎಂದೂ ಸಭೆ ಆಗ್ರಹಿಸಿದೆ. ಸಮಗ್ರ ವಿದ್ಯುದ್ದೀಕರಣ ಯೋಜನೆ ಜಾರಿಗೊಳಿಸಲು ವಿದ್ಯುತ್ ಸಂಪರ್ಕ ಸಿಗದ ಪ್ರದೇಶಗಳನ್ನು ಗುರುತಿಸಿ ಯೋಜನೆ ಕಾರ್ಯಗತಗೊಳಿಸಲು ಅಧಿಕಾರಿಗಳಿಗೆ ಸಭೆ ಸೂಚನೆ ನೀಡಿತು. ಜಿಲ್ಲೆಯಲ್ಲಿ ರೇಷನ್ ಕಾಡರ್ುಗಳನ್ನು ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಸಿವಿಲ್ ಸಪ್ಲೈಸ್ ಅಧಿಕಾರಿಗಳು ಸಭೆಯಲ್ಲಿ ಸ್ಪಷ್ಟೀಕರಣ ನೀಡಿದರು.
46,000 ಕಾಡರ್ುಗಳು ಈಗಾಗಲೇ ವಿತರಿಸಲಾಗಿದೆ. 1,07,000 ಕಾಡರ್ುಗಳ ಅಗತ್ಯವಿದೆ.
ಶಾಸಕ ಸಿ.ಟಿ.ಅಹಮ್ಮದಾಲಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತು ಅಧ್ಯಕ್ಷ ಅಪ್ಪ, ಜಿಲ್ಲಾ ಪಂಚಾಯತು ಸದಸ್ಯರಾದ ಫರೀದಾ ಸಕೀರ್, ಮಹಮ್ಮದ್ ಮುಬಾರಕ್, ಪ್ರಭಾಕರ ಚೌಟ ಹಾಜರಿದ್ದರು.


ಉಚಿತ ಹೃದ್ರೋಗ ಮತ್ತು ಮಧುಮೇಹ ತಪಾಸಣಾ ಶಿಬಿರ


ಕಾಸರಗೋಡು: ಉಪ್ಪಳ ಸಮೀಪದ ಕೈಕಂಬದ ಸೊಸೈಟಿ ಹಾಸ್ಪಿಟಲ್ನಲ್ಲಿ ಮಂಗಳೂರಿನ ಓಮೆಗಾ ಆಸ್ಪತ್ರೆಯ ಸಹಕಾರದಲ್ಲಿ ಇದೇ 16ರಂದು ಉಚಿತ ಹೃದ್ರೋಗ ಮತ್ತು ಮಧುಮೇಹ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 8.30ರಿಂದ ಮಧ್ಯಾಹ್ನ 2ರ ವರೆಗೆ ಶಿಬಿರ ನಡೆಯಲಿದೆ. ಡಾ.ಕೆ.ಮುಕುಂದ್, ಡಾ.ಎ.ಜಿ.ಜಯಕೃಷ್ಣನ್, ಡಾ.ಎ.ಕೆ.ಖಾಸಿಂ, ಡಾ.ಎಚ್.ಪ್ರಭಾಕರ್, ಡಾ.ಕೀತರ್ಿ ನಾಯಕ್, ಎಸ್.ಎಲ್.ಭಾರದ್ವಾಜ್ ಭಾಗವಹಿಸುವರು.





--

http://www.kasaragodvartha.com/

the first local online news paper in Malayalam.

brings latest news in Malayalam & English links our home land to the world.

:::: the signature of Kasaragod ::::

ಕಸಿಕಟ್ಟುವಿಕೆ ಪ್ರಾತ್ಯಕ್ಷಿಕೆ

ಮಂಜೇಶ್ವರ ಎಸ್.ಎ.ಟಿ. ಪ್ರೌಢಶಾಲೆಯ ಪರಿಸರ ಸಂಘ ಮತ್ತು ವಿಜ್ಞಾನ ಸಂಘದ ಆಶ್ರಯದಲ್ಲಿ ಕಸಿಕಟ್ಟುವಿಕೆಯ ಪ್ರಾತ್ಯಕ್ಷಿಕೆ ಬುಧವಾರ ಶಾಲಾ ವಠಾರದಲ್ಲಿ ಜರುಗಿತು.ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ಶಿಕ್ಷಕ ಉಮೇಶ್ ಕೆ. ಪೆರ್ಲ ಕಸಿಕಟ್ಟುವಿಕೆಯ ವಿಧಾನಗಳಾದ ಬಡ್ಡಿಂಗ್, ಲೇಯರಿಂಗ್, ಗ್ರಾಫ್ಟಿಂಗ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಮಂಜೇಶ್ವರ: ಇಲ್ಲಿನ ಎಸ್.ಎ.ಟಿ. ಪ್ರೌಢಶಾಲೆಯ ಪರಿಸರ ಸಂಘ ಮತ್ತು ವಿಜ್ಞಾನ ಸಂಘದ ಆಶ್ರಯದಲ್ಲಿ ಕಸಿಕಟ್ಟುವಿಕೆಯ ಪ್ರಾತ್ಯಕ್ಷಿಕೆ ಬುಧವಾರ ಶಾಲಾ ವಠಾರದಲ್ಲಿ ಜರುಗಿತು.ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ಶಿಕ್ಷಕ ಉಮೇಶ್ ಕೆ. ಪೆರ್ಲ ಕಸಿಕಟ್ಟುವಿಕೆಯ ವಿಧಾನಗಳಾದ ಬಡ್ಡಿಂಗ್, ಲೇಯರಿಂಗ್, ಗ್ರಾಫ್ಟಿಂಗ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಉದಯಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಯತೀಶ್ ಕುಮಾರ್ ಹಾಜರಿದ್ದರು. ಮುರಳೀಕೃಷ್ಣ ಭಟ್ ಸ್ವಾಗತಿಸಿ, ಪರಿಸರ ಸಂಘದ ಸಂಚಾಲಕ ಕಿರಣ್ ಕುಮಾರ್ ವಂದಿಸಿದರು. ವಿಜ್ಞಾನ ಸಂಘದ ಸಂಚಾಲಕಿ ಸುರೇಖಾ ಮಲ್ಯ ನಿರೂಪಿಸಿದರು.
--

http://www.kasaragodvartha.com/

the first local online news paper in Malayalam.

brings latest news in Malayalam & English links our home land to the world.

:::: the signature of Kasaragod ::::

Tuesday, August 4, 2009

ಲಾರಿ ಮತ್ತು ಬೈಕ್ ಡಿಕ್ಕಿ : ಬೈಕ್ ಸವಾರ ಮೃತ್ಯು/Tipper-Bike Accident


ಕಾಸರಗೋಡು: ಇಲ್ಲಿಗೆ ಸಮೀಪದ ಚಟ್ಟಂಚಾಲ್ ತೆಕ್ಕಿಲ್ ತಿರುವಿನಲ್ಲಿ ಟಿಪ್ಪರ್ ಲಾರಿ ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕುಂಡಂಕುಳಿ ನಿವಾಸಿ ಪ್ರದೀಪನ್(35) ಸಾವನ್ನಪ್ಪಿದ ವ್ಯಕ್ತಿಎಂದು ಗುರುತಿಸಲಾಗಿದೆ. ಈತನ ಜತೆಯಲ್ಲಿ ಸಂಚರಿಸುತ್ತಿದ್ದ ಅಶೋಕ್ ಎಂಬಾತ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

 
ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ

 
ಕಾಸರಗೋಡು: ಕಾಂಗ್ರೆಸ್ ಕಾರ್ಯಕರ್ತ ಪೆರ್ಲ ಸಮೀಪದ ಕಾಟುಕುಕ್ಕೆ ನಿವಾಸಿ ಶ್ರೀಧರ ಪೂಜಾರಿ ಎಂಬವರ ಮೇಲೆ ಸಿ.ಪಿ.ಎಂ. ಕಾರ್ಯಕರ್ತರ ತಂಡ ಹಲ್ಲೆ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಕಾಲು ಮತ್ತು ಕೈಗಳಿಗೆ ಗಾಯಗೊಂಡ ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ರಾಜಕೀಯ ದ್ವೇಷವೇ ಹಲ್ಲೆಗೆ ಕಾರಣ ಎಂದು ಗಾಯಾಳು ದೂರಿದ್ದಾರೆ.
 
ಸಿ.ಪಿ.ಎಂ. ಕಾರ್ಯಕರ್ತರ ಮೇಲೆ ಹಲ್ಲೆ
ಕಾಸರಗೋಡು: ಸಿ.ಪಿ.ಎಂ. ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಬೈಕ್ಗೆ ಹಾನಿ ಮಾಡಿದ ಅದೇ ಪಕ್ಷದ 6 ಮಂದಿ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅತಿಯಂಬೂರಿನ ಎಂ.ಜಯೇಶ್, ಷಾನು ಎಂಬವರ ಮೇಲೆ ಹಲ್ಲೆ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬಾವ, ಪ್ರಶಾಂತ್, ಮನೋಜ್, ರೂಪೇಶ್, ವಿವೇಕ್ ಸಹಿತ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ಸ್ಥಳೀಯ ದೇವಸ್ಥಾನದ ಕೆರೆಯಲ್ಲಿ ಸ್ನಾನ ಮಾಡುವ ವಿಷಯದಲ್ಲಿ ಉಂಟಾದ ವಿವಾದವೇ ಭಾನುವಾರ ಪರಸ್ಪರ ಹಲ್ಲೆಗೆ ಹೇತುವಾಗಿತ್ತು.
 
 
ಎಂಡೋಸಲ್ಫಾನ್ ದುಷ್ಪರಿಣಾಮ:ಸುಪ್ರೀಂ ಕೋಟರ್ಿನ ಮೊರೆ
ಕಾಸರಗೋಡು: ಎಂಡೋಸಲ್ಫಾನ್ ದುಷ್ಪರಿಣಾಮದ ಮೂಲಕ ಸಾವಿಗೀಡಾದ ರೋಗಿಗಳ ಕುಟುಂಬಕ್ಕೆ ನಷ್ಟಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋಟರ್ಿನ ಮೊರೆ ಹೋಗುವುದಾಗಿ ಇಲ್ಲಿನ ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿ ನಿರ್ಧರಿಸಿದೆ.
ಎಂಡೋಸಲ್ಫಾನ್ ಭಾರತದಲ್ಲಿ ಯಾವುದೇ ದುಷ್ಪರಿಣಾಮ ಬೀರಿಲ್ಲ ಎಂಬ ಕೇಂದ್ರ ಸಕರ್ಾರದ ಅಭಿಪ್ರಾಯವನ್ನು ಸಮಿತಿ ಖಂಡಿಸಿದೆ. ಎಂಡೋಸಲ್ಫಾನ್ ನಿಷೇಧವನ್ನು ಭಾರತದಾದ್ಯಂತ ಜಾರಿಗೆ ತರಲು ಸಕರ್ಾರ ಕ್ರಮಕೈಗೊಳ್ಳಬೇಕು ಎಂದು ಸಮಿತಿ ಸಭೆ ಆಗ್ರಹಿಸಿದೆ. ಬೇಯರ್ ಎಂಬ ಕಂಪೆನಿ ಎಂಡೋಸಲ್ಫಾನ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲಿ ಕೇಂದ್ರ ಸಕರ್ಾರ ಈ ರೀತಿಯ ಜನವಿರೋಧಿ ಹೇಳಿಕೆ ನೀಡಿದೆ. ಇದು ಎಂಡೋಸಲ್ಫಾನ್ ದುಷ್ಪರಿಣಾಮಕ್ಕೊಳಗಾಗಿ ತತ್ತರಿಸಿದ ಕಾಸರಗೋಡಿನ ಜನತೆಯ ಮೇಲಿನ ಸವಾಲು ಆಗಿದೆ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.
ಸಭೆಯಲ್ಲಿ ನಾರಾಯಣನ್ ಪೆರಿಯ, ಎಂ.ಎ.ರಹಿಮಾನ್, ಟಿ.ಸಿ.ಮಾಧವ ಪಣಿಕ್ಕರ್, ಪಿ.ವಿ.ಸುಧೀರ್ ಕುಮಾರ್, ಕೆ.ಬಿ.ಮುಹಮ್ಮದ್ ಕುಞ್ಞಿ, ಅಶ್ರಫ್, ಕುಞ್ಞಿಕೃಷ್ಣನ್ ಅಂಬಲತ್ತೆರೆ, ಅಬ್ಬಾಸ್ ಮುದಲಪ್ಪಾರೆ ಹಾಜರಿದ್ದರು.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ವರಮಹಾಲಕ್ಷ್ಮೀ ಪೂಜೆ

ಕುಂಬಳೆ ಸಮೀಪದ ಮುಜುಂಗಾವು ಶ್ರೀಪಾರ್ಥಸಾರಥಿ ಕೃಷ್ಣ ದೇವಸ್ಥಾನದಲ್ಲಿ ಕಾವೇರಿ ಮಹಿಳಾ ಸ್ವಸಹಾಯ ಸಂಘದ ಆಶ್ರಯದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯ ಧಾಮರ್ಿಕ ಸಭೆಯಲ್ಲಿ ಕುಂಬಳೆ ಸಹಕಾರಿ ಬ್ಯಾಂಕಿನ ನಿದರ್ೇಶಕ ಮುರಳೀಧರ ಯಾದವ್ ಮಾತನಾಡಿದರು.
 

ಉತ್ಸವಗಳು ಬದುಕಿಗೆ ದಾರಿದೀಪ
ಕಾಸರಗೋಡು: ಉತ್ಸವಗಳು ರಂಜನೆಯ ಮಾಧ್ಯಮವಾಗಿರದೆ ಬದುಕಿಗೆ ದಾರಿದೀಪವಾಗಿದೆ ಎಂದು ಕುಂಬಳೆ ಸಹಕಾರಿ ಬ್ಯಾಂಕಿನನಿದರ್ೇಶಕ ಮುರಳೀಧರ ಯಾದವ್ ಹೇಳಿದರು.
ಕುಂಬಳೆ ಸಮೀಪದ ಮುಜುಂಗಾವು ಶ್ರೀಪಾರ್ಥಸಾರಥಿ ಕೃಷ್ಣ ದೇವಸ್ಥಾನದಲ್ಲಿ ಕಾವೇರಿ ಮಹಿಳಾ ಸ್ವಸಹಾಯ ಸಂಘದ ಆಶ್ರಯದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯ ಧಾಮರ್ಿಕ ಸಭೆಯಲ್ಲಿ ಅವರು ಮಾತನಾಡಿದರು.
ಉಮಾವತಿ ಅಧ್ಯಕ್ಷತೆ ವಹಿಸಿದ್ದರು. ಉಮೇಶ್ ಕುಲಾಲ್, ನಂದಕಿಶೋರ್ ಕುಳ, ರಮೇರ್ಶ ಬಳ್ಳಕ್ಕುರಾಯ ಹಾಜರಿದ್ದರು.
ಕಾರ್ಯದಶರ್ಿ ಪ್ರೇಮ ಸ್ವಾಗತಿಸಿ, ಗಿರಿಜಾ ವಂದಿಸಿದರು.




--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಅಂಗನವಾಡಿಗೆ ಲಭಿಸಿದ ಕಂಪ್ಯೂಟರ್/Computer


ಮಧೂರು ಗ್ರಾಮ ಪಂಚಾಯ್ತಿಯ ಕಾಳ್ಯಂಗಾಡು ಅಂಗನವಾಡಿಗೆ ಲಭಿಸಿದ ಕಂಪ್ಯೂಟರನ್ನು ಪಂಚಾಯ್ತಿ ಅಧ್ಯಕ್ಷ ವಿಠಲ ಶೆಟ್ಟಿ ಉದ್ಘಾಟಿಸಿದರು.

ಕಾಸರಗೋಡು: ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಮಧೂರು ಗ್ರಾಮ ಪಂಚಾಯ್ತಿಯ ಕಾಳ್ಯಂಗಾಡು ಅಂಗನವಾಡಿಗೆ ಲಭಿಸಿದ ಕಂಪ್ಯೂಟರನ್ನು ಪಂಚಾಯ್ತಿ ಅಧ್ಯಕ್ಷ ವಿಠಲ ಶೆಟ್ಟಿ ಉದ್ಘಾಟಿಸಿದರು.
ಉಪಾಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್ ಪಾರೆಕಟ್ಟೆ, ಸದಸ್ಯರಾದ ಅಶೋಕ್ ನಾಯ್ಕ್, ರಾಧಾಕೃಷ್ಣ ಬಲ್ಯಾಯ ಹಾಜರಿದ್ದರು.
ಐ.ಸಿ.ಡಿ.ಎಸ್. ಅಧಿಕಾರಿ ಮಣಿಯಮ್ಮ ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ ರಮಾಭಾಯಿ ವಂದಿಸಿದರು.



--

www.kasaragodvartha.com

the first local online news paper in Malayalam.

brings latest news in Malayalam & English links our home land to the world.

:::: the signature of Kasaragod ::::

37 ಶಾಲೆಗಳಿಗೆ ಜಿ.ಪಂ. ಪೀಠೋಪಕರಣ ವಿತರಣೆ/Furnitur For 37 School

ಕಾಸರಗೋಡು: ಜಿಲ್ಲಾ ಪಂಚಾಯ್ತಿಯ ಯೋಜನೆಯಡಿ 37 ಶಾಲೆಗಳಿಗೆ ಪೀಠೋಪಕರಣಗಳನ್ನು ವಿತರಿಸಲಾಗುವುದು ಎಂದು ಶಿಕ್ಷಣ-ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ನಾರಾಯಣನ್ ಮಂಗಳವಾರ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ತಿಳಿಸಿದರು.
1,500 ಬೆಂಚು ಮತ್ತು ದೆಸ್ಕುಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಅನಸ್ಥೇಶಿಯ ನೀಡಿ ಆಸ್ಕರ್ ಎಂಬ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣದ ಬಗ್ಗೆ ಕ್ರಿಮಿನಲ್ ದಾವೆ ಹೂಡಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಸಭೆಯಲ್ಲಿ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ವೈದ್ಯಾಧಿಕಾರಿ, ಫಾರೆನ್ಸಿಕ್ ಸರ್ಜನ್, ಸರ್ಕಾರಿ ಪ್ಲೀಡರ್, ತಜ್ಞ ವೈದ್ಯರನ್ನೊಳಗೊಂಡ ಸಮಿತಿಯ ಸಭೆ ಇದೇ 7ರಂದು ಸೇರಿ ತನಿಖಾ ವರದಿ ತಯಾರಿಸಲಾಗುವುದು ಎಂದವರು ವಿವರಿಸಿದರು.
ಆರೋಗ್ಯ ಸುರಕ್ಷಾ ಯೋಜನೆಯಡಿ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಎಚ್.ಐ.ವಿ. ಬಾಧಿತರಿಗೆ ಪೋಷಕ ಆಹಾರ ನೀಡಲು ಸಭೆ ತೀರ್ಮಾನಿಸಲಾಗಿದೆ. 10 ಲಕ್ಷ ರೂ.ಗಳನ್ನು ಇದಕ್ಕೆ ಮೀಸಲಿಡಲಾಗಿದೆ. ಈಸ್ಟ್ ಏಳೇರಿ, ವಲಿಯಪರಂಬ, ಪಿಲಿಕ್ಕೋಡ್, ಮಂಜೇಶ್ವರ, ಮಂಗಲ್ಪಾಡಿ ಗ್ರಾಮ ಪಂಚಾಯ್ತಿಗಳ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಪ್ರಾಜೆಕ್ಟ್ಗಳಿಗೆ ಸಭೆ ಅಂಗೀಕಾರ ನೀಡಿತು. ಜಿಲ್ಲೆಯಲ್ಲಿ 5.11 ಕೋಟಿ ರೂ.ವೆಚ್ಚದಲ್ಲಿ 65 ಕಾಮಗಾರಿಗಳನ್ನು ನಿರ್ವಹಣಾ ನಿಧಿ ಮತ್ತು ಯೋನಾ ನಿಧಿಯಲ್ಲಿ ಸೇರಿಸಲು ಸಭೆ ತೀಮರ್ಾನಿಸಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಪಿ.ಪಿ. ಮುಸ್ತಫಾ ಅವರಿಗೆ ಡಾಕ್ಟರೇಟ್ ಲಭಿಸಿದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಜಿ.ಪಂ. ಉಪಾಧ್ಯಕ್ಷೆ ಗೀತಾಕೃಷ್ಣನ್,ಸದಸ್ಯರಾದ ಎಂ.ಸಿ.ಖಮರುದ್ದೀನ್, ರೂಪವಾಣಿ ಆರ್.ಭಟ್, ಕೆ.ರಾಘವನ್, ಎಂ.ವಿ.ಪುಷ್ಪಾಕುಮಾರಿ, ಪ್ರಭಾಕರ ಚೌಟ, ಎಂ.ಅನಂತನ್, ಫರೀದಾ ಸಕೀರ್, ಸಬೂರಾ, ಹಣಕಾಸು ಅಧಿಕಾರಿ ಟಿ.ಕೆ.ಸೋಮನ್, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಪಿ.ಚಂದ್ರಶೇಖರನ್, ವಾಸುದೇವನ್ ನಂಬೂದಿರಿ ಹಾಜರಿದ್ದರು.



--

www.kasaragodvartha.com

the first local online news paper in Malayalam.

brings latest news in Malayalam & English links our home land to the world.

:::: the signature of Kasaragod ::::

Monday, August 3, 2009

`ಬಂದಾ ಬಂದಾ ಸರದಾರ' /Yavanika Drama In Radio

ಕಾಸರಗೋಡು: ಕಾಸರಗೋಡಿನ `ಯವನಿಕಾ' ರಂಗ ಸಂಸ್ಥೆಯ ಆಶ್ರಯದಲ್ಲಿ `ಬಂದಾ ಬಂದಾ ಸರದಾರ' ಎಂಬ ನಾಟಕ ಇದೇ 6ರಂದು ರಾತ್ರಿ 9.30ಕ್ಕೆ ಮಂಗಳೂರು ಆಕಾಶವಾಣಿಯಲ್ಲಿ ಬಿತ್ತರವಾಗಲಿದೆ.
ರಷ್ಯನ್ ಮೂಲ ನಾಟಕವನ್ನು ನಿದರ್ೇಶಕ ಶ್ರೀನಿವಾಸಪ್ರಭು ರೂಪಾಂತರಿಸಿದ ಕೃತಿಯನ್ನು ಯವನಿಕ ತಂಡಕ್ಕಾಗಿ ರಂಗಕಮರ್ಿ ಕಾಸರಗೋಡು ಚಿನ್ನಾ ನಿದರ್ೇಶಿಸಿದ್ದಾರೆ.
ಸುಬ್ಬಣ್ಣ ಶೆಟ್ಟಿ, ಪಬ್ಬಾ ಕೊರಕ್ಕೋಡು, ಸತೀಶ್ಚಂದ್ರ ಭಂಡಾರಿ, ಚಂದ್ರಕಾಂತ ಪಟ್ಟತ್ತಾನ, ಉದಯ್ಕುಮಾರ್ ಕುಮಾರ್ ಮನ್ನಿಪ್ಪಾಡಿ, ನಾಗರಾಜ, ರಘು ಮೀಪುಗುರಿ, ವಿಠಲ ಶೆಟ್ಟಿ, ಜಿ.ಕೆ.ಶೆಟ್ಟಿ, ಸತ್ಯನಾರಾಯಣ ನಟಿಸಿದ್ದಾರೆ. ಬಾಬೂಜಿ ಭಟ್ ರಾಗ ಸಂಯೋಜಿಸಿದ ಹಾಡುಗಳಿಗೆ ಕೂಡ್ಲು ವಿಠಲ ಶೆಟ್ಟಿ ಕಂಠದಾನ ನೀಡಿದ್ದಾರೆ. ಉಮೇಶ್ ಪೈ ತಬ್ಲಾದಲ್ಲಿ ಸಹಕರಿಸಿದ್ದಾರೆ.


ಗಾಯಾಳು ಸಾವು

ಕಾಸರಗೋಡು: ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ  ನಿರ್ಮಲಗಿರಿ ಶಾಲಾ ಶಿಕ್ಷಕಿ ಲವ್ಲಿ ಅಬ್ರಹಾಂ(37) ಸಾವನ್ನಪ್ಪಿದರು.
ಮಗನನ್ನು ಶಾಲೆಗೆ ಬಿಟ್ಟು ಕ್ಲಸ್ಟರ್ ತರಗತಿಗೆ ಹಾಜರಾಗಲು ಬರುತ್ತಿದ್ದಾಗ ಶುಕ್ರವಾರ ಬೈಕ್ ಡಿಕ್ಕಿ ಹೊಡೆದಿತ್ತು. ಪರಿತಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.

ನಿಧನ
ಕಾವೇರಿ
ಮಂಜೇಶ್ವರ: 5 ತಲೆಮಾರಿನ ಕುಟುಂಬದ ಜೀವಂತ ಕೊಂಡಿ ಎನಿಸಿದ್ದ ಇಲ್ಲಿನ ವಕರ್ಾಡಿ ಸಮೀಪದ ಕಾಪಿರಿ ನಿವಾಸಿ ಕಾವೇರಿ ಎಂಬವರು ನಿಧನರಾದರು.
ಅವರಿಗೆ 103 ವಯಸ್ಸಾಗಿತ್ತು. ಐವರು ಮಕ್ಕಳಿದ್ದಾರೆ.

ಈಶ್ವರ ಮುಳಿಯಾರು
ಕಾಸರಗೋಡು: ನಿವೃತ್ತ ಹೆಡ್ ಕಾನ್ಸ್ಟೇಬಲ್ ಈಶ್ವರ ಮುಳಿಯಾರು(67) ಸೋಮವಾರ ಮುಂಜಾನೆ ನಿಧನರಾದರು.
ಬಂಟ್ವಾಳ, ಉಡುಪಿ, ಕುಂದಾಪುರ, ಮಂಗಳೂರು, ಕುಶಾಲನಗರ, ಮೈಸೂರಿನಲ್ಲಿ ಸೇವೆ ಸಲ್ಲಿಸಿದ್ದರು. ಭವಾನಿ ಮತ್ತು ಶಿವಮ್ಮ ಎಂಬ ಇಬ್ಬರು ಪತ್ನಿಯರು ಹಾಗೂ 7 ಮಕ್ಕಳಿದ್ದಾರೆ.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

`ಸಂಸ್ಕೃತಿ ರಕ್ಷಣೆಯ ಜವಾಬ್ದಾರಿ ನಮ್ಮದು'/Kanada Convention-Closing Ceremony



ಕಾಸರಗೋಡಿನ ಲಲಿತಕಲಾ ಸದನದಲ್ಲಿ ಶನಿವಾರ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಸಹಯೋಗದಲ್ಲಿ ಆಯೋಜಿಸಿದ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶಾಂತಮಲ್ಲ ಮಲ್ಲಿಕಾಜರ್ುನ ಸ್ವಾಮೀಜಿ ಆಶೀರ್ವಚನ ನೀಡಿದರು.

`ಸಂಸ್ಕೃತಿ ರಕ್ಷಣೆಯ ಜವಾಬ್ದಾರಿ ನಮ್ಮದು'

ಕಾಸರಗೋಡು: ಸಂಸ್ಕೃತಿ ಜೀವಂತವಾಗಿರಬೇಕಿದ್ದು ಅದನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮದು ಎಂದು ಶಾಂತಮಲ್ಲ ಮಲ್ಲಿಕಾಜರ್ುನ ಸ್ವಾಮೀಜಿ ಹೇಳಿದರು.
ಕಾಸರಗೋಡಿನ ಲಲಿತಕಲಾ ಸದನದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಸಹಯೋಗದಲ್ಲಿ ಆಯೋಜಿಸಿದ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ವಿದ್ವಾಂಸ ಜಿ.ಡಿ.ಜೋಶಿ, ಚಿತ್ರ ಕಲಾವಿದ ಪಿ.ಎಸ್.ಪುಣಿಂಚತ್ತಾಯ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಹೃದಯವಾಹಿನಿ ಪತ್ರಿಕೆಯ ಸಂಪಾದಕ ಮಂಜುನಾಥ್ ಹಾಜರಿದ್ದರು.
ಹೃದಯವಂತರು ಪ್ರಶಸ್ತಿ:
ಜಯಪ್ರಕಾಶ್ ರಾವ್ ಪುತ್ತೂರು, ಕೆ.ಎಂ ಕೋಟ್ಯಾನ್ ಮುಂಬೈ, ಡಾ.ಕೆ.ಬಿ.ನಾಗೂರು ಬಿಜಾಪುರ, ಎ.ನರಸಿಂಹ ಭಟ್, ಡಾ.ವೆಂಕಟರಮಣ ಹೆಗ್ಡೆ ಶಿಶರ್ಿ, ಮಧುಕರ ರೈ ಕೊರೆಕ್ಕಾನ, ಶಂಶುದ್ದೀನ್ ಸಾಲ್ಮರ ಪುತ್ತೂರು., ಆರ್.ಧನರಾಜ್ ಮಂಗಳೂರು, ಜಿ.ಎ.ಸಿದ್ಧಪ್ಪ ಬೆಂಗಳೂರು, ಭಾಸ್ಕರ ರೈ ಕುಕ್ಕುವಳ್ಳಿ, ಪೆಡರ್ೂರು ಪ್ರಭಾಕರನ್ ಕಲ್ಯಾಣಿ ಮಂಡ್ಯ, ರಂಗಪುತ್ಥಳಿ ರಘುನಂದನ್ ಮತ್ತು ವಾಪಿ ಕನರ್ಾಟಕ ಸಂಘದವರಿಗೆ ಹೃದಯವಂತರು ಪ್ರಶಸ್ತಿ ಪ್ರದಾನ ಮಾಡಲಾಯಿತು.  
ವಿ.ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ಪೈ ಬದಿಯಡ್ಕ ಸ್ವಾಗತಿಸಿದರು. ಎ.ಶ್ರೀನಾಥ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

`ರಾಜ್ಯಗಳ ಬೇಡಿಕೆ ಅಧಿಕಾರ ದಾಹದಿಂದ ಕೂಡಿದ ರಾಜಕೀಯ'/Kannada Sammelana

ಕಾಸರಗೋಡು: ತುಳು, ಕೊಡವ ರಾಜ್ಯಗಳ ಬೇಡಿಕೆ ಅಧಿಕಾರ ದಾಹದಿಂದ ಕೂಡಿದ ರಾಜಕೀಯ ಎಂದು ಕೃಷ್ಣ ಶೆಟ್ಟಿ ಮಂಗಳೂರು ಭಾನುವಾರ ಇಲ್ಲಿ ವಿವರಿಸಿದರು.
ಕಾಸರಗೋಡಿನ ಲಲಿತಕಲಾ ಸದನದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಸಹಯೋಗದಲ್ಲಿ ಆಯೋಜಿಸಿದ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಭಾನುವಾರ ಆಯೋಜಿಸಿದ ಹೊನಾಡು-ಗಡಿನಾಡು ಕನ್ನಡಿಗ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಸರಗೋಡು ಗಡಿನಾಡ ಕನ್ನಡಿಗರಿಗೆ ಕೇರಳವೇ ಸುರಕ್ಷಿತ ಎಂದವರು ಹೇಳಿದರು.
ಭಾಷೆಗಿಂದ ಬದುಕು ಮುಖ್ಯವಾಗಿದೆ. ಈ ಗೊಂದಲ, ಅನಿಶ್ಚಿತತೆ, ಅಭದ್ರತೆಯಿಂದ ಕನ್ನಡ ಮೂಲೆಗುಂಪಾಗುತ್ತಿದೆ. ಇಚ್ಚಾಶಕ್ತಿ, ಕ್ರಾಂತಿಕಾರಿ ಬದಲಾವಣೆಯಿಂದ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಸದಾನಂದ ಎಂ.ಕತಾರ್ ವಿಶ್ಲೇಷಿಸಿದರು.
ಶಿವಪ್ಪ ನಾಯಕನ ಕೆಚ್ಚು:
ಕಾಸರಗೋಡಿನ ಕನ್ನಡದ ದುಸ್ಥಿತಿಗೆ ಬದಲಾದ ಭಾಷಿಕ ಸಂದರ್ಭ ಹಾಗೂ ಸ್ಥಾನಮಾನ ಕಾರಣ. ಮಲೆಯಾಳದ ಮಣ್ಣಿಗೆ ಕಾಸರಗೋಡು ಸೇರಿದ ಬಳಿಕ ಕನ್ನಡದ ಪ್ರಾಬಲ್ಯ ಕುಸಿಯುತ್ತಾ ಬಂತು. ಶಿಕ್ಷಣ ಮತ್ತು ಉದ್ಯೋಗ ನಿಮಿತ್ತ ಇಲ್ಲಿನ ಕನ್ನಡಿಗರು ವಲಸೆ ಹೋಗುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಶಿವಪ್ಪ ನಾಯಕನ ಕೆಚ್ಚು ಇದ್ದರೆ ಮಾತ್ರ ಇಲ್ಲಿ ಕನ್ನಡ ಉಳಿಸಲು ಸಾಧ್ಯ ಎಂದು ಡಾ.ಕಮಲಾಕ್ಷ ಹೇಳಿದರು.
ಆಯಿಷಾ ಎಂ.ಪೆರ್ಲ ಮಾತನಾಡಿ, ಕನ್ನಡ ಸಮಸ್ಯೆಯ ಸುಳಿಯಲ್ಲಿದೆ. ಇದರಿಂದ ಕಾಸರಗೋಡಿನ ಕನ್ನಡಿಗರ ಸ್ಥಿತಿ ಶೋಚನೀಯವಾಗಿದೆ ಎಂದರು. ದಾಕ್ಷಿಣ್ಯವೇ ಕನ್ನಡಿಗರ ದೌರ್ಬಲ್ಯವಾಗಿದೆ ಎಂದು ಸಾಣೂರು ಸತೀಶ್ ಸಾಲಿಯಾನ್ ಅಭಿಪ್ರಾಯಪಟ್ಟರು. ಕನ್ನಡಕ್ಕೆ ವ್ಯಕ್ತಿಗತ ಕೊಡುಗೆ ದೊಡ್ಡದು. ಇಲ್ಲಿ ತುಳುವರು ಅವಗಣನೆಗೆ ಒಳಗಾಗಿದ್ದಾರೆ ಎಂದು ರಾಜೇಶ್ ಆಳ್ವ ಬದಿಯಡ್ಕ ಹೇಳಿದರು.
ರಾಜಕಾರಣಿಗಳು ಭಾಷೆ-ನೆಲ-ನೀರಿನ ವಿಷಯದಲ್ಲಿ ಜಗಳವಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಮನುಷ್ಯ ಸಂಬಂಧವನ್ನು ಒಡೆಯುತ್ತಿದೆ ಎಂದು ಶಿವಾನಂದ ಸೋಮಪ್ಪ ಬೆಂಗಳೂರು ತಿಳಿಸಿದರು.
ಎ.ಶ್ರೀನಾಥ್ ಕಾಸರಗೋಡು ಸ್ವಾಗತಿಸಿ, ಬಿ.ಬಾಲಕೃಷ್ಣ ಅಗ್ಗಿತ್ತಾಯ ವಂದಿಸಿದರು. ಶ್ರೀನಿವಾಸ ಆಳ್ವ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಹನಿ-ಹಾಸ್ಯ ಗೋಷ್ಠಿಯಲ್ಲಿ ರಾಜಗೋಪಾಲ್ ಕೋಲಾರ, ಸುಪ್ರಭಾ ಬೆಂಗಳೂರು ಮತ್ತು ಭಾಸ್ಕರ ಹೆಬ್ಬಾರ್ ಭಾಗವಹಿಸಿದರು.

 --

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಚಾವಡಿ ಕಚೇರಿ/Front Office

ಕಾಸರಗೋಡು: ಸಕರ್ಾರಿ ಕಚೇರಿಗಳ ಭ್ರಷ್ಟಾಚಾರವನ್ನು ನಿಮರ್ೂಲನೆ ಮಾಡುವಲ್ಲಿ ಪಂಚಾಯ್ತಿ ಕಚೇರಿಯಲ್ಲಿ ಆರಂಭಿಸಲಾದ ಚಾವಡಿ ಕಚೇರಿ(ಫ್ರಂಟ್ ಆಫೀಸ್) ಉಪಯುಕ್ತವಾಗಿ ಪರಿಣಮಿಸಿದೆ ಎಂದು ರಾಜ್ಯ ಸ್ಥಳೀಯಾಡಳಿತ ಸಚಿವ ಪಾಲೊಳಿ ಮುಹಮ್ಮದ್ ಕುಟ್ಟಿ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
ಜಿಲ್ಲೆಯ ಎಲ್ಲಾ ಗ್ರಾಮಪಂಚಾಯ್ತಿಗಳಲ್ಲಿ ಚಾವಡಿ ಕಚೇರಿಯ ವ್ಯವಸ್ಥೆಯನ್ನು ಜಾರಿಗೊಳಿಸಿ ಜಿಲ್ಲಾ ಮಟ್ಟದಲ್ಲಿ ಉದುಮ ಪಂಚಾಯ್ತಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಕೆ.ವಿ.ಕುಞ್ಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪಿ.ಕರುಣಾಕರನ್, ಪಂಚಾಯ್ತಿ ಸಹಾಯಕ ನಿದರ್ೇಶಕ ಪಿ.ಸಿ.ಸುರೇಂದ್ರನ್, ಶಾಸಕ ಕೆ.ಕುಞ್ಞಿರಾಮನ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್, `ಕಿಲ' ನಿದರ್ೇಶಕ ಪ್ರೊ.ಎನ್ ರಮಾಕಾಂತನ್, ಪಂಚಾಯ್ತಿ ನಿದರ್ೇಶಕ ವಿ.ಎನ್.ಗೋಪಾಲ ಮೆನನ್, ಜಿಲ್ಲಾಧಿಕಾರಿ ಆನಂದ ಸಿಂಗ್, ಬ್ಲಾಕ್ ಪಂಚಾಯ್ತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಹಾಜರಿದ್ದರು.
 
ಬಂಟರ ಸಂಘದ ಮಹಾಸಭೆ

ಕಾಸರಗೋಡು: ಕುಂಬಳೆ ಪಂಚಾಯ್ತಿ ಬಂಟರ ಸಂಘದ ಮಹಾಸಭೆ ಇತ್ತೀಚೆಗೆ ಸಂಘದ ಜಿಲ್ಲಾ ಸಮಿತಿ ಕಚೇರಿಯಲ್ಲಿ ಜರುಗಿತು.
ಘಟಕದ ಅಧ್ಯಕ್ಷ ಶಂಕರ ಆಳ್ವ ಊಜಾರು ಅಧ್ಯಕ್ಷತೆ ವಹಿಸಿದ್ದರು. ಪಳ್ಳತ್ತಡ್ಕ ರಘುರಾಮ ರೈ, ಸಂಜೀವ ರೈ, ವಳಮಲೆ ಪದ್ಮನಾಭ ರೈ, ರಾಮ್ಪ್ರಸಾದ್ ಶೆಟ್ಟಿ ನಾರಾಯಣಮಂಗಲ, ಸಂಘದ ಕಾರ್ಯದಶರ್ಿ ಕುತ್ತಿಕ್ಕಾರು ರಾಮಕೃಷ್ಣ ಆಳ್ವ ಹಾಜರಿದ್ದರು.
ನೂತನ ಪದಾಧಿಕಾರಿಗಳಾಗಿ ಶಂಕರ ಆಳ್ವ ಊಜಾರು(ಅಧ್ಯಕ್ಷ), ರವೀಂದ್ರ ಶೆಟ್ಟಿ ಬಂಬ್ರಾಣ, ಭಾಗೀರಥಿ ಬಂಬ್ರಾಣ(ಉಪಾಧ್ಯಕ್ಷರು), ಕುತ್ತಿಕ್ಕಾರು ರಾಮಕೃಷ್ಣ ಆಳ್ವ(ಕಾರ್ಯದಶರ್ಿ) ಆಯ್ಕೆಯಾದರು.
 
ಬಂಬ್ರಾಣ ಗ್ರಾಮೋತ್ಸವ ಸಮಿತಿ ರೂಪೀಕರಣ

ಕಾಸರಗೋಡು:  2009-2010ನೇ ಸಾಲಿನ ಬಂಬ್ರಾಣ ಗ್ರಾಮೋತ್ಸವ ಸಮಿತಿಯ ಸಭೆ ಇತ್ತೀಚೆಗೆ ಬಂಬ್ರಾಣ ತಿಲಕನಗರದಲ್ಲಿ ಜರುಗಿತು.
ಗ್ರಾಮೋತ್ಸವ ಸಮಿತಿಯ ಅಧ್ಯಕ್ಷರಾಗಿ ಊಜಾರು ಹರೀಶ್ ಆಳ್ವ ಅವರು ಆಯ್ಕೆಯಾದರು. ವಸಂತ, ಬಾಲಕೃಷ್ಣ(ಉಪಾಧ್ಯಕ್ಷರು), ಮನೋರಂಜನ್ ಶೆಟ್ಟಿ ಶೆಟ್ಟಿ(ಪ್ರಧಾನ ಕಾರ್ಯದಶರ್ಿ), ಸತೀಶ್, ನಿತಿನ್(ಜತೆ ಕಾರ್ಯದಶರ್ಿ), ರುಕುಮಾಕರ(ಕೋಶಾಧಿಕಾರಿ) ಎಂಬವರನ್ನು ಆರಿಸಲಾಯಿತು.
ಸೆ.6ರಂದು ಕುಂಬಳೆ ಸಮೀಪದ ಬಂಬ್ರಾಣ ಬಯಲು ಗದ್ದೆಯಲ್ಲಿ ಗ್ರಾಮೋತ್ಸವ ನಡೆಯಲಿದೆ.
 
ಸೀತಾಂಗೋಳಿಯಲ್ಲಿ ಓಣಂ ಸಂತೆ

ಕಾಸರಗೋಡು: ಸೀತಾಂಗೋಳಿಯಲ್ಲಿ ಓಣಂ ಸಂತೆ ಆಯೋಜಿಸಲು ಪುತ್ತಿಗೆ ಗ್ರಾಮ ಪಂಚಾಯ್ತಿಯ ಸಿ.ಡಿ.ಎಸ್.ನ ವಿಶೇಷ ಸಭೆ ತೀಮರ್ಾನಿಸಿದೆ.
ಸಿ.ಡಿ.ಎಸ್.ಅಧ್ಯಕ್ಷೆ ದೇವಕಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯ್ತಿ ಅಧ್ಯಕ್ಷ ತೋಮಸ್ ಡಿ'ಸೋಜಾ, ಉಪಾಧ್ಯಕ್ಷ ಜಯಂತ ಪಾಟಾಳಿ, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪುಷ್ಪಾ ನಾರಾಯಣ ಹಾಜರಿದ್ದರು.
ಆ.28ರಿಂದ 30ರ ವರೆಗೆ ಓಣಂ ಸಂತೆ ವ್ಯವಸ್ಥೆ ಕಲ್ಪಿಸಲಾಗುವುದು.
ಶಶಿಕಲಾ ಸ್ವಾಗತಿಸಿ, ಸರಸ್ವತಿ ವಂದಿಸಿದರು.
 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::