ಕಾಸರಗೋಡು: ಕಾಸರಗೋಡಿನ `ಯವನಿಕಾ' ರಂಗ ಸಂಸ್ಥೆಯ ಆಶ್ರಯದಲ್ಲಿ `ಬಂದಾ ಬಂದಾ ಸರದಾರ' ಎಂಬ ನಾಟಕ ಇದೇ 6ರಂದು ರಾತ್ರಿ 9.30ಕ್ಕೆ ಮಂಗಳೂರು ಆಕಾಶವಾಣಿಯಲ್ಲಿ ಬಿತ್ತರವಾಗಲಿದೆ.
ರಷ್ಯನ್ ಮೂಲ ನಾಟಕವನ್ನು ನಿದರ್ೇಶಕ ಶ್ರೀನಿವಾಸಪ್ರಭು ರೂಪಾಂತರಿಸಿದ ಕೃತಿಯನ್ನು ಯವನಿಕ ತಂಡಕ್ಕಾಗಿ ರಂಗಕಮರ್ಿ ಕಾಸರಗೋಡು ಚಿನ್ನಾ ನಿದರ್ೇಶಿಸಿದ್ದಾರೆ.
ಸುಬ್ಬಣ್ಣ ಶೆಟ್ಟಿ, ಪಬ್ಬಾ ಕೊರಕ್ಕೋಡು, ಸತೀಶ್ಚಂದ್ರ ಭಂಡಾರಿ, ಚಂದ್ರಕಾಂತ ಪಟ್ಟತ್ತಾನ, ಉದಯ್ಕುಮಾರ್ ಕುಮಾರ್ ಮನ್ನಿಪ್ಪಾಡಿ, ನಾಗರಾಜ, ರಘು ಮೀಪುಗುರಿ, ವಿಠಲ ಶೆಟ್ಟಿ, ಜಿ.ಕೆ.ಶೆಟ್ಟಿ, ಸತ್ಯನಾರಾಯಣ ನಟಿಸಿದ್ದಾರೆ. ಬಾಬೂಜಿ ಭಟ್ ರಾಗ ಸಂಯೋಜಿಸಿದ ಹಾಡುಗಳಿಗೆ ಕೂಡ್ಲು ವಿಠಲ ಶೆಟ್ಟಿ ಕಂಠದಾನ ನೀಡಿದ್ದಾರೆ. ಉಮೇಶ್ ಪೈ ತಬ್ಲಾದಲ್ಲಿ ಸಹಕರಿಸಿದ್ದಾರೆ.
ಗಾಯಾಳು ಸಾವು
ಕಾಸರಗೋಡು: ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ನಿರ್ಮಲಗಿರಿ ಶಾಲಾ ಶಿಕ್ಷಕಿ ಲವ್ಲಿ ಅಬ್ರಹಾಂ(37) ಸಾವನ್ನಪ್ಪಿದರು.
ಮಗನನ್ನು ಶಾಲೆಗೆ ಬಿಟ್ಟು ಕ್ಲಸ್ಟರ್ ತರಗತಿಗೆ ಹಾಜರಾಗಲು ಬರುತ್ತಿದ್ದಾಗ ಶುಕ್ರವಾರ ಬೈಕ್ ಡಿಕ್ಕಿ ಹೊಡೆದಿತ್ತು. ಪರಿತಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ನಿಧನ
ಕಾವೇರಿ
ಮಂಜೇಶ್ವರ: 5 ತಲೆಮಾರಿನ ಕುಟುಂಬದ ಜೀವಂತ ಕೊಂಡಿ ಎನಿಸಿದ್ದ ಇಲ್ಲಿನ ವಕರ್ಾಡಿ ಸಮೀಪದ ಕಾಪಿರಿ ನಿವಾಸಿ ಕಾವೇರಿ ಎಂಬವರು ನಿಧನರಾದರು.
ಅವರಿಗೆ 103 ವಯಸ್ಸಾಗಿತ್ತು. ಐವರು ಮಕ್ಕಳಿದ್ದಾರೆ.
ಈಶ್ವರ ಮುಳಿಯಾರು
ಕಾಸರಗೋಡು: ನಿವೃತ್ತ ಹೆಡ್ ಕಾನ್ಸ್ಟೇಬಲ್ ಈಶ್ವರ ಮುಳಿಯಾರು(67) ಸೋಮವಾರ ಮುಂಜಾನೆ ನಿಧನರಾದರು.
ಬಂಟ್ವಾಳ, ಉಡುಪಿ, ಕುಂದಾಪುರ, ಮಂಗಳೂರು, ಕುಶಾಲನಗರ, ಮೈಸೂರಿನಲ್ಲಿ ಸೇವೆ ಸಲ್ಲಿಸಿದ್ದರು. ಭವಾನಿ ಮತ್ತು ಶಿವಮ್ಮ ಎಂಬ ಇಬ್ಬರು ಪತ್ನಿಯರು ಹಾಗೂ 7 ಮಕ್ಕಳಿದ್ದಾರೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment