ಕಾಸರಗೋಡು ಸಕರ್ಾರಿ ಕಾಲೇಜಿನ ರಾ.ಸೇ.ಯೋ. ಘಟಕದ ನೇತೃತ್ವದಲ್ಲಿ ಸಂಗ್ರಹಿಸಿದ ಸಹಾಯನಿಧಿಯನ್ನು ಸತ್ಯರಾಜ್ ಚಿಕಿತ್ಸಾ ಸಹಾಯ ಸಮಿತಿಗೆ
ಕಾಲೇಜಿನ ಪ್ರಾಂಶುಪಾಲ ಪ್ರೊ.ಮಾಧವನ್ ನಂಬ್ಯಾರ್ ಬುಧವಾರ ವಿತರಿಸಿದರು.
ಕಾಸರಗೋಡು: ರಕ್ತದ ಅಬರ್ುದ ರೋಗದಿಂದ ಬಳಲುತ್ತಿರುವ ಇಲ್ಲಿನ ಇರಿಯಣ್ಣಿ ಜಿ.ವಿ.ಎಚ್.ಎಸ್.ಶಾಲೆಯ ಪ್ರತಿಭಾನ್ವಿತ ವಿದ್ಯಾಥರ್ಿ ಸತ್ಯರಾಜ್ಗೆ ಕಾಸರಗೋಡು ಸಕರ್ಾರಿ ಕಾಲೇಜಿನ ರಾ.ಸೇ.ಯೋ. ಘಟಕದ ನೇತೃತ್ವದಲ್ಲಿ ಸಂಗ್ರಹಿಸಿದ ಸಹಾಯನಿಧಿಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಮಾಧವನ್ ನಂಬ್ಯಾರ್ ಬುಧವಾರ ವಿತರಿಸಿದರು.
ಸಹಾಯನಿಧಿಯನ್ನು ಸತ್ಯರಾಜ್ ಚಿಕಿತ್ಸಾ ಸಹಾಯ ಸಮಿತಿಯ ಸಂಚಾಲಕ ಸಜೇಶ್ ಕುಮಾರ್ ಸ್ವೀಕರಿಸಿದರು. ಸತ್ಯರಾಜ್ ತಿರುವನಂತಪುರದ ಆರ್.ಸಿ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಕುಟುಂಬ ಆಥರ್ಿಕವಾಗಿ ಅತಂತ್ರ ಸ್ಥಿತಿಯಲ್ಲಿದೆ. ಕೂಲಿ ಕಾಮರ್ಿಕರಾಗಿರುವ ತಂದೆ, ಅಪಘಾತದಿಂದ ಜರ್ಜರಿತ ಸ್ಥಿತಿಯಲ್ಲಿರುವ ತಾಯಿಗೆ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ.
ಸಹಾಯ ನಿಧಿ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಎ.ಶ್ರೀನಾಥ್ ಕಾಸರಗೋಡು, ರಾ.ಸೇ.ಯೋಜನಾಧಿಕಾರಿಗಳಾದ ಮಹಮ್ಮದಾಲಿ ಪೆರ್ಲ ಮತ್ತು ರತ್ನಾಕರ ಮಲ್ಲಮೂಲೆ, ಕಾರ್ಯದಶರ್ಿ ಮಹೇಶ್ ವೈ, ಖಾಲಿದ್, ನಯನ ಹಾಜರಿದ್ದರು.
ಮಹಮ್ಮದಾಲಿ ಸ್ವಾಗತಿಸಿ, ಪ್ರಜಿತ ವಂದಿಸಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿಕರಿಗೆ ತರಬೇತಿ
ಇದೇ 12ರಂದು ತೆಂಗಿನ ಸುಳಿ ಕೊಳೆಯುವ ರೋಗದ ಹತೋಟಿ ಕ್ರಮ, 17ರಂದು ಬಾಳೆಯ ಕೀಟ ಹಾವಳಿಯ ನಿಯಂತ್ರಣ, ಎಲೆಕೋಸು ಮತ್ತು ಹೂ ಕೋಸು ಉತ್ಪಾದನಾ ತಂತ್ರಜ್ಞಾನ, 19ರಂದು ಮೇವಿನ ಹುಲ್ಲು ಬೆಳೆಸುವ ರೀತಿ, 20 ಮತ್ತು 25ರಂದು ವಿವಿಧ ಋತುಗಳ ತರಕಾರಿ ಕೃಷಿ ರೀತಿ, 21ರಂದು ಕಾಳುಮೆಣಸಿನ ಬೇರು ಸೊರಗು ರೋಗ ನಿರ್ವಹಣೆ, 27ರಂದು ವಿವಿಧ ಋತುಗಳ ತರಕಾರಿ ಕೃಷಿ ರೀತಿ, 24ರಂದು ಗ್ರಾಮೀಣ ಮಹಿಳೆಯರಿಗೆ ವಾಷರ್ಿಕ ನುಗ್ಗೆ ಬೆಳೆಸುವ ರೀತಿಯ ಬಗ್ಗೆ ತರಬೇತಿ, ಗ್ರಾಮೀಣ ಯುವಕರಿಗೆ 18 ಮತ್ತು 19ರಂದು ಅಣಬೆ ಕೃಷಿ ಮತ್ತು ಅದರ ಬೀಜೋತ್ಪತ್ತಿ ಬಗ್ಗೆ ತರಬೇತಿ, 29ರಂದು ಅಡಿಕೆ ಹಾಳೆಯಿಂದ ತಟ್ಟೆ ತಯಾರಿ, 31ರಂದು ಜೇನು ವ್ಯವಸಾಯದ ಬಗ್ಗೆ ತರಬೇತಿ, 21ರಂದು ಜಿಲ್ಲೆಯ ವಿವಿಧ ಪಂಚಾಯ್ತಿ ಅಧ್ಯಕ್ಷರಿಗೆ ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಕಾರ್ಯಕ್ರಮಗಳ ಕುರಿತು ಮಾಹಿತಿ ಹಾಗೂ ಮುಖಾಮುಖಿ ನಡೆಯಲಿದೆ.
10ರಂದು ಕೃಷಿ ಇಲಾಖೆಯ ಸಿಬ್ಬಂದಿಗಳಿಗೆ ತೆಂಗಿನ ತೋಟದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯ ಬಗ್ಗೆ ತರಬೇತಿ ನಡೆಯಲಿದೆ.
ತರಬೇತಿ ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಕೇಂದ್ರ ಮುಖ್ಯಸ್ಥ(9444232993)ರನ್ನು ಸಂಪಕರ್ಿಸಲು ಕೋರಲಾಗಿದೆ.
ರಾಘವೇಂದ್ರ ಸ್ವಾಮಿಗಳ 338ನೇ ಆರಾಧನೋತ್ಸವ
7ರಂದು ಬೆಳಗ್ಗೆ ಬೆಳಗ್ಗೆ 6ಕ್ಕೆ ದೀಪ ಪ್ರತಿಷ್ಠೆ, 8ಕ್ಕೆ ಭಜನೆ, 10ಕ್ಕೆ ಗುಡ್ಡಪ್ಪ ಶೆಟ್ಟಿ ನಾರಾಯಣ ಮಂಗಲ ಅವರಿಂದ ಪುರಾಣವಾಚನ, ಸಂಜೆ 3ಕ್ಕೆ ಭಜನೆ, 5ಕ್ಕೆ ಹರಿಕಥೆ, 8ರಂದು ಬೆಳಗ್ಗೆ ಭಜನೆ, 10ಕ್ಕೆ ದೇವಕೀ ತನಯ ಅವರ ಪುರಾಣ ವಾಚನ, 11.30ಕ್ಕೆ ಪೂಜೆ, ಮಧ್ಯಾಹ್ನ 2ಕ್ಕೆ ವಾಮನ ಉದ್ಯಾವರ ತಂಡದಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4.30ಕ್ಕೆ ಕು.ಶಾಂಭವಿ ಕುಂಬಳೆ ಅವರಿಂದ ಹರಿಕಥೆ, 5.30ಕ್ಕೆ ಧಾಮರ್ಿಕ ಸಭೆ, ರಾತ್ರಿ 7ಕ್ಕೆ ಪೂಜೆ, 9ರಂದು ಬೆಳಗ್ಗೆ ಭಜನೆ, 11.30ಕ್ಕೆ ಪೂಜೆ, ಸಂಜೆ 3ಕ್ಕೆ ಹರಿಕಥೆ, 5ಕ್ಕೆ ಕು.ನಯನ ಗೌರಿ ಸೇರಾಜೆ ಅವರಿಂದ ಹರಿಕಥೆ, ರಾತ್ರಿ 7.30ಕ್ಕೆ ಮಹಾಪೂಜೆ ನಡೆಯಲಿದೆ.
ಇಂಗ್ಲಿಷ್ ಅಧ್ಯಾಪಕ ಹುದ್ದೆ : ಅಜರ್ಿ ಆಹ್ವಾನ
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment