Saturday, August 15, 2009

ಅಪಘಾತ ಪ್ರಕರಣ/Accident Near Manipal


ದಿನಾಂಕ: 15.08.09 ರಂದು 13:15 ಗಂಟೆಗೆ ಶಿವಳ್ಳಿ ಗ್ರಾಮದ ಇಂದ್ರಾಳಿ ನಿಷಾಂತ್ ಎಂಟರ್ ಪ್ರೈಸಸ್ ಬಳಿ ಆರೋಪಿ ಕೆಎ 20 ಎ 7329 ನೇ ಗಜಾನನ ಬಸ್ ಚಾಲಕ ಬಸ್ಸನ್ನು ಅದರ ಎದುರುಗಡೆ ಹೋಗುತ್ತಿದ್ದ ವಾಹನಗಳನ್ನು ಹಿಂದಕ್ಕೆ ಹಾಕಲು ಮುನ್ನುಗ್ಗಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬಲಬದಿ ಬಂದು ಕಿರಣ್ ಮೆಂಡನ್ ತಂದೆ: ಆನಂದ ಮೆಂಡನ್ ವಾಸ: ಸ್ಮಜಾತ ನಿವಾಸ ಪೊಲಿಪು ಉಳಿಯಾರಗೋಳಿ ಪೋಸ್ಟ್ ಕಾಪು ಉಡುಪಿ ಜಿಲ್ಲೆ ಎಂಬವರ ಅಣ್ಣನ ಮೋಟಾರು ಸೈಕಲ್ ಕೆಎ 20 ಯು 3698 ಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಿರಣ್ ಮೆಂಡನ್ರಿಗೆ ಬೆನ್ನಿಗೆ ಗುದ್ದಿದ ನೋವು ಆಗಿದ್ದು, ಹಾಗೂ ಹಿಂದೆ ಸಹಸವಾರರಾಗಿ ಕುಳಿತ್ತಿದ್ದ ಸೌಮ್ಯ ಎಂಬವರಿಗೆ ತಲೆಗೆ, ಬಲ ಕಾಲಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಅಪಘಾತದ ಬಗ್ಗೆ ಕಿರಣ್ ಮೆಂಡನ್ರವರು ನೀಡಿದ ದೂರಿನ ಮೇರೆಗೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 177/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ದಸ್ತಗಿರಿಯಾಗದೇ ಇರುವುದರಿಂದ ಆರೋಪಿಯ ಹೆಚ್ಚಿನ ವಿವರ ತಿಳಿದುಬಂದಿರುವುದಿಲ್ಲ.
 
 
ವರದಕ್ಷಿಣೆ ಕಿರುಕುಳ ಪ್ರಕರಣ
ಮಣಿಪಾಲ ಠಾಣಾ ಸರಹದ್ದಿನ ಉಡುಪಿ ತಾಲೂಕು ಪರ್ಕಳದ ಅಚ್ಚುತ ನಗರ ಹೌಸ್ ನಂಬ್ರ: 23 ರ ವಾಸಿ ಶ್ರೀಮತಿ ಭಾವನಾ ಆರ್ ಪ್ರಭು ಗಂಡ: ರಮೇಶ್ ಪ್ರಭು ರವರು ನ್ಯಾಯಾಲಯದ ಮುಖಾಂತರ ಖಾಸಗಿ ದೂರು ನೀಡಿದ್ದು ದಿನಾಂಕ 12/04/07 ರಂದು ಶ್ರೀಮತಿ ಭಾವನಾ ಆರ್ ಪ್ರಭುರವರು ಹಿಂದೂ ಧಾಮರ್ಿಕ ಪದ್ದತಿಯಂತೆ ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ರಮೇಶ್ ಪ್ರಭು(ಆರೋಪಿ) ತಂದೆ: ಸದಾನಂದ ಎನ್ ಪ್ರಭು ರವರನ್ನು ಮದುವೆಯಾಗಿದ್ದು ಪಿಯರ್ಾದಿದಾರರು ವಿವಾಹದ ಬಳಿಕ ಗಂಡನ ಮನೆಯಲ್ಲಿ ಇದ್ದು ಆರೋಪಿ ರಮೇಶ್ ಪ್ರಭು ಹಾಗೂ ಅವನ ತಂದೆ ಸದಾನಂದ ಪ್ರಭು ತಾಯಿ ಶ್ರೀಮತಿ ಗೀತಾ ಪ್ರಭು ಗಂಡ: ಸದಾನಂದ ಪ್ರಭು ವಾಸ: ಡೋ.ನಂ.1-11-256, ಪರಿಶ್ರಮ ನಿಜಲಿಂಗಪ್ಪ ಕಾಲನಿ, ರಾಯಚೂರು. ವನಿತಾ ಪ್ರಭು ತಂದೆ: ಸದಾನಂದ ಎನ್ ಪ್ರಭು ವಾಸ: ಪ್ರಭು ಮತ್ತು ಪ್ರಭು ಆಡೀಟರ್ 2, ಪ್ಲೋರ್, ವೆಂಕಟೇಶ್ವರ ಕಾಂಪ್ಲಕ್ಸ್, 24/1 ರೇಸ್ ಕ್ರೋಸ್ ರೋಡ್, ಬೆಂಗಳೂರು. ಡಾ. ವಿದ್ಯಾಭಟ್ ತಂದೆ: ಸದಾನಂದ ಎನ್ ಪ್ರಭು, ವಾಸ: ಕಾಂಞಂಗಾಡ್, ಕೇರಳ, ರಾಮಚಂದ್ರ ಫ್ರಭು ಸುಧಾಕರ ಫ್ರಭು ವಾಸ: ಹೋಟೆಲ್ ನೃಪತುಂಗ, ಅಂಬೇಡ್ಕರ್ ಸರ್ಕಲ್, ಸ್ಟೇಶನ್ ರೋಡ್, ರಾಯಚೂರು ಎಂಬವರುಗಳು (ಸಹೋದರಿಯರು ಚಿಕ್ಕಪ್ಪಂದಿರು) ಪ್ರತಿಯೊಂದು ವಿಷಯಕ್ಕೂ ನಿಂದಿಸುವುದು , ಕಿರುಕುಳ ನೀಡಲು ಪ್ರಾರಂಭಿಸಿ ಆರೋಪಿಗೆ ನೀಡಿದ ವರದಕ್ಷಿಣೆ ಕಡಿಮೆಯಾಯಿತು ಎಂದು, ಚಿನ್ನಾಭರಣ ತರಲಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಮಾನಸಿಕ ಹಿಂಸೆ ನೀಡುತ್ತಾ ಪಿರ್ಯಾದಿ ಗಭರ್ಿಣಿಯಾದ ಬಳಿಕ ಕೂಡ ಹೊಟ್ಟೆಯಲ್ಲಿದ್ದ ಭ್ರೂಣ ಯಾರಿಗೆ ಸೇರಿದೆಂದು ನೋಡಬೇಕೆಂದು ಶೀಲ ಶಂಕಿಸಿ ಪಿಯರ್ಾದಿಯನ್ನು ಉಪಾಯದಿಂದ ತವರು ಮನೆಗೆ ಕಳುಹಿಸಿದ್ದು ಅಲ್ಲದೆ ದಿನಾಂಕ 25/07/2009 ರಂದು ಆರೋಪಿ ರಮೇಶ್ ಪ್ರಭು ಫಿಯರ್ಾದಿಗೆ ಫೋನು ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಫಿಯರ್ಾದಿದಾರರು ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದೂರಿನ ಸಾರಾಂಶವಾಗಿರುತ್ತದೆ ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 146/09 ಕಲಂ 498 ಎ, 506, ಐಪಿಸಿ 3 ಮತ್ತು 4 ವರದಕ್ಷಿಣೆ ನಿಷೇಧ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಬಾವಿಗೆ ಹಾರಿ ಆತ್ಮಹತ್ಯೆ ಪ್ರಕರಣ
ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ಕುಂಚೊಟ್ಟು ದಖರ್ಾಸು ನಿವಾಸಿ ದಿನೇಶ ಮಡಿವಾಳ (29), ತಂದೆ: ದಿ.ಲೋಕೇಶ ಕುಂದರ್ ಎಂಬವರ ತಾಯಿ ಸುಮಾರು 65 ವರ್ಷದ ಶ್ರೀಮತಿ ವನಜಾ ಇವರು ತನ್ನ ಗಂಡ ಲೋಕೇಶ್ ಕುಂದರ್ರವರು ಮೃತಪಟ್ಟ ಬಳಿಕ ಮಾನಸಿಕ ಯಾತನೆ ಅನುಭವಿಸುತ್ತಿದ್ದವರು, ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 14/15.8.09 ರಂದು ರಾತ್ರಿ 9 ರಿಂದ ಮರುದಿನ ಬೆಳಗ್ಗೆ 6 ಗಂಟೆಯ ಮಧ್ಯದ ಅವಧಿಯಲ್ಲಿ ತನ್ನ ವಾಸ್ತವ್ಯದ ಮನೆಯ ಅಂಗಳದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಈ ಬಗ್ಗೆ ಮೃತರ ಮಗನಾದ ದಿನೇಶನು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರಂತೆ ಠಾಣೆಯಲ್ಲಿನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 29/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಹಲ್ಲೆ ಪ್ರಕರಣ
ಕುಂದಾಪುರ ತಾಲೂಕು ಆಲೂರು ಗ್ರಾಮದ ಕೊಪ್ಪಟ್ಟಿ, ವಾಸಿ ರತ್ನಾ, ಗಂಡ: ಅಣ್ಣಪ್ಪ ಆಚಾರಿ, ರವರು, ದಿನಾಂಕ 09/08/09 ರಂದು ಪಿರ್ಯಾದಿ ನೀಡಿದ್ದು ಆಪಾದಿತ ಮಂಜುನಾಥ ಆಚಾರಿ 21 ವರ್ಷ ಕೊಪ್ಪಟ್ಟಿ, ಆಲೂರು ಗ್ರಾಮ, ಕುಂದಾಪುರ ತಾಲೂಕು ರವರು ದಿನಾಂಕ 09/08/09ರಂದು ಬೆಳಿಗ್ಗೆ 09;00ಗಂಟೆಗೆ ಪಿರ್ಯಾದಿದಾರರ ಜಾಗದಲ್ಲಿ ಸೊಪ್ಪನ್ನು ಕಡಿಯುತ್ತಿದ್ದಾಗ ಅವರ ಮಗಳು ಸವಿತಳು ಸೊಪ್ಪನ್ನು ಕಡಿಯದಂತೆ ಆಕ್ಷೇಪಿಸಿದಾಗ ಆಪಾದಿತನು ಅವಳಿಗೆ ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ, ಅವಳ 2 ಕೈಗಳನ್ನು ಒತ್ತಿ ಹಿಡಿದು ಕೈಯಿಂದ ಅವಳ ತಲೆಗೆ, ಕಾಲಿಗೆ, ಬೆನ್ನಿಗೆ ಹೊಡೆದು ತುಳಿದಿರುತ್ತಾನೆ. ಬಿಡಿಸಲು ಹೋದ ಶ್ರೀಮತಿ ರತ್ನಾ,ರವರಿಗೆ ಕೈಯಿಂದ ಹೊಡೆದು ದೂಡಿ ಹಾಕಿದ್ದು, ಅವರ ಮಗಳಿಗೆ ಹೊಡೆದ ಪರಿಣಾಮ ಅವಳು ನೆಲಕ್ಕೆ ಬಿದ್ದಾಗ ಆಕೆಯ ತಲೆಗೆ ಕಲ್ಲು ತಾಗಿ ರಕ್ತಗಾಯವಾಗಿದ್ದು, ಅವಳನ್ನು ಕೂಡಲೇ ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೊಗಿಯಾಗಿ ದಾಖಲಾಗಿರುವುದಾಗಿದೆ ಪಿರ್ಯಾದಿದಾರರಿಗೆ ಮತ್ತು ಆಪಾದಿತರಿಗೆ ಜಾಗದ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದು ಇದೇ ವಿಚಾರದಲ್ಲಿ ಆಪಾದಿತನು ಶ್ರೀಮತಿ ರತ್ನ ಮತ್ತು ಮಗಳು ಸವಿತಾಳಿಗೆ ಹಲ್ಲೆ ಮಾಡಿದ್ದಾಗಿರುತ್ತದೆ ಈ ಬಗ್ಗೆ ಶ್ರೀಮತಿ ರತ್ನರವರು ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರಂತೆ ಠಾಣೆಯಲ್ಲಿಅಪರಾಧ ಕ್ರಮಾಂಕ 82/09 ಕಲಂ 504, 323 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಕೊಲೆ ಬೆದರಿಕೆ
ಮಣಿಪಾಲ : ಮಣಿಪಾಲ ಠಾಣಾ ಸರಹದ್ದಿನ ಸರಳೆಬೆಟ್ಟು ವಾಸಿ ಪ್ರಕಾಶ್ ಶೆಟ್ಟಿ (54 ವರ್ಷ) ತಂದೆ ದಿವಂಗತ ನಾರಾಯಣ ಶೆಟ್ಟಿರವರಿಗೆ ಆರೋಪಿ ವೈ.ಎನ್. ರಾಮಚಂದ್ರ ರಾವ್ ಹಾಗೂ ಅವರ ಸಹೋದರ ಇನ್ನೋರ್ವ ಆರೋಪಿ ಬಾಲಕೃಷ್ಣ ರಾವ್ರವರಿಂದ ಕೊಲೆ ಬೆದರಿಕೆ ಬರುತ್ತಿದ್ದು, ದಿನಾಂಕ 12/08/2009 ರಂದು ರಾತ್ರಿ 07:19ಕ್ಕೆ ಪ್ರಕಾಶ್ ಶೆಟ್ಟಿಯವರ ಮೊಬೈಲ್ ದೂರವಾಣಿಗೆ ಆರೋಪಿ ವೈ.ಎನ್. ರಾಮಚಂದ್ರ ರಾವ್ ಅವರು ಮೊಬೈಲ್ ದೂರವಾಣಿ ಸಂಖ್ಯೆ 9844992516 ರಿಂದ ಹಾಗೂ ಪ್ರಕಾಶ್ ಶೆಟ್ಟಿಯವರ ಸುಪದರ್ಿಯಲ್ಲಿರುವ ಅವರ ಮಗ ಶಶಾಂಕನ ಮೊಬೈಲ್ ದೂರವಾಣಿಗೆ ದಿನಾಂಕ 13/08/2009 ರಂದು ಬೆಳಗ್ಗೆ ಸುಮಾರು 09:27 ಗಂಟೆಗೆ ಇನ್ನೋರ್ವ ಆರೋಪಿ ಬಾಲಕೃಷ್ಣ ರಾವ್ ಸ್ಥಿರ ದೂರವಾಣಿ ಸಂಖ್ಯೆ 918040940949ರಿಂದ ಪ್ರಕಾಶ್ ಶೆಟ್ಟಿಯವರಿಗೆ ಕರೆ ಮಾಡಿ ನಿನ್ನನ್ನು ಕೊಲೆ ಮಾಡಲು ಸುಫಾರಿ ನೀಡಿರುತ್ತೇನೆ. ಇನ್ನು ಒಂದೆರಡು ದಿನಗಳಲ್ಲಿ ನಿನ್ನನ್ನು ಕೊಲೆ ಮಾಡಿ ಬಿಸಾಕುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ಪ್ರಕಾಶ್ ಶೆಟ್ಟಿಯವರಿಗೆ ಮತ್ತು ಆರೋಪಿಗಳಿಗೆ ಮಹಾರಾಷ್ಟ್ರ ಅಪೆಕ್ಸ್ ಕೋಅಪರೇಶನ್ ಮತ್ತು ರಾಜಮಹಲ್ ಟ್ರೇಡ್ ಮತ್ತು ಇನ್ ವೆಸ್ಟ್ಮೆಂಟ್ (ಪ್ರೈ) ಲಿಮಿಟೆಡ್ ಹಾಗೂ ಇನ್ನಿತರ ಕೆಲವು ಸಂಸ್ಥೆಗಳಲ್ಲಿನ ತಗಾದೆಗಳ ಕುರಿತು ವೈಮನಸ್ಸು ಇದ್ದು, ಆ ವಿಚಾರಗಳಲ್ಲಿ ಪ್ರಕಾಶ್ ಶೆಟ್ಟಿಯವರು ಆರೋಪಿಗಳಿಗೆ ಕಾನೂನು ಬಾಹಿರವಾಗಿ ಸಹಾಯ ಮಾಡುವರೇ ಕೋರಿದ್ದು ಅದನ್ನು ಅವರು ನಿರಾಕರಿಸಿರುವುದರಿಂದ ಅವರ ಮೇಲೆ ವೈಯಕ್ತಿಕ ದ್ವೇಷ ಸಾಧಿಸಿ ಅವರನ್ನು ಕೊಲೆ ಮಾಡುವರೇ ಸಂಚು ನಡೆಸುತ್ತಿದ್ದಾರೆ ಎಂಬುದಾಗಿ ಆರೋಪಿಸಿ ಪ್ರಕಾಶ್ ಶೆಟ್ಟಿಯವರು ಮಣಿಪಾಲ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದು, ಅದರಂತೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 145/09 ಕಲಂ 506, ಜೊತೆಗೆ 34 ಐ ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳ ದಸ್ತಗಿರಿಯಾಗದೇ ಇರುವುದರಿಂದ ಅವರ ಹೆಚ್ಚಿನ ವಿವರ ತಿಳಿದುಬಂದಿರುವುದಿಲ್ಲ.
 
 
ಲಾರಿ - ಬೈಕ್ ಢಿಕ್ಕಿ : ಬೈಕ್ ಸವಾರನ ಸಾವು
ದಿನಾಂಕ 14/08/2009 ರಂದು 17:15 ಗಂಟೆಗೆ ಕಾಪು ಠಾಣಾ ಸರಹದ್ದಿನ ಮೂಳೂರು ಗ್ರಾಮದ ಮೂಳೂರು ಸವರ್ೆಶ್ವರ ಬೊಬ್ಬರ್ಯ ದೇವಸ್ಥಾನದ ಬಳಿ ರಾ. ಹೆ. 17 ರಲ್ಲಿ ಕೆಎ 17 / 6282 ನಂಬ್ರದ ಲಾರಿಯನ್ನು ಅದರ ಚಾಲಕನಾದ ವಾಗಪ್ಪ (52 ವರ್ಷ), ಬ್ಯಾಡಗಿ, ಹಾವೇರಿ ಜಿಲ್ಲೆರವರು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಮತ್ತು ಅಜಾಗೂರಕತೆಯಿಂದ ಚಲಾಯಿಸಿ ಎದುರಿನಿಂದ ಬರುತ್ತಿದ್ದ ಕೆಎ 04 ಇ.ಡಬ್ಲ್ಯೂ 3043 ನೇ ಮೋಟಾರು ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರರಾದ ಅಭಿಷೇಕ್ ಕಾಶಿ (20 ವರ್ಷ) ತಂದೆ ಅಶೋಕ್ ಕಾಶಿ, ಹೊಸನಗರ, ಶಿವಮೊಗ್ಗ ಜಿಲ್ಲೆ ಎಂಬವರಿಗೆ ತೀವೃ ತರಹದ ಗಾಯವಾಗಿ ಉಡುಪಿ ಹೈ-ಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಮೃತಪಟ್ಟಿರುತ್ತಾರೆ. ಈ ಘಟನೆ ಬಗ್ಗೆ ಮೂಳೂರು ಗ್ರಾಮದ ವಾಸಿ ಕೋಯಾಲಿ ಅಹಮದ್ (42 ವರ್ಷ) ತಂದೆ ಅಹಮದ್ ಬ್ಯಾರಿರವರು ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರಂತೆ ಠಾಣೆಯಲ್ಲಿಅಪರಾಧ ಕ್ರಮಾಂಕ 163/09 ಕಲಂ 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಇತರೇ ಪ್ರಕರಣ
ಕುಂದಾಪುರ: ದಿನಾಂಕ 14/08/09 ರಂದು ಕೊರಿಯರ್ ಮೂಲಕ ಶ್ರೀಮತಿ ಶ್ರೀಲತಾ ಬಿ. ಶೆಟ್ಟಿ (25 ವರ್ಷ) ಗಂಡ ಭರತ್ ರಾಜ್ ಸಿ.ಎಸ್., ವಾಸ ಸ್ಪೂತರ್ಿಧಾಮ, ಬೇಳೂರು ಗ್ರಾಮ, ಕೆದೂರು ಅಂಚೆ, ಕುಂದಾಪುರ ತಾಲೂಕುರವರು ಕುಂದಾಪುರ ಮಹಿಳಾ ಠಾಣೆಗೆ ದೂರು ನೀಡಿದ್ದು, ದೂರಿನಲ್ಲಿ ನಮೂದಿಸಿದಂತೆ ಪಿರ್ಯಾದಿದಾರರಾದ ಅವರು ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಹಾಡುಹಳ್ಳಿಯ ವಾಸಿ ಪ್ರಸ್ತುತ ಕೆ.ಎಸ್.ಆರ್.ಟಿ.ಸಿ. ಕುಂದಾಪುರ ಡಿಪೋದ ಉದ್ಯೋಗಿ ಭರತ್ ರಾಜ್ (32 ವರ್ಷ)ರವರನ್ನು ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿ ಕುಂದಾಪುರ ತಾಲೂಕಿನ ಶಿರೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ. ಅವರ ಗಂಡ ಭರತ್ ರಾಜ್ರವರು ಮನೆಗೆ ಬಾರದ ಕಾರಣ ಅವರು ಆತನಿಗೆ ದೂರವಾಣಿ ಕರೆ ಮಾಡಿ ಮನೆಗೆ ಬರುವಂತೆ ವಿನಂತಿಸಿದಾಗ ನೀನು ಯಾರೆಂದು ಗೊತ್ತಿಲ್ಲ, ನನಗೂ ನಿನಗೂ ಸಂಬಂಧವಿಲ್ಲ, ನಾನು ನಿನ್ನನ್ನು ಮದುವೆಯಾಗಿರುವುದಿಲ್ಲ, ನೀನು ಏನು ಬೇಕಾದರೂ ಮಾಡಿಕೋ, ನನ್ನನ್ನು ಏನೂ ಮಾಡಲು ಆಗಲ್ಲ ಎಂದು ತಿಳಿಸಿದಕ್ಕೆ ಪಿರ್ಯಾದಿದಾರರು ಗಾಬರಿಗೊಂಡು ಭರತ್ ರಾಜ್ನ ಮನೆಯಾದ ಭಟ್ಕಳದ ಹಾಡುಹಳ್ಳಿಗೆ ಹೋಗಿ ಪ್ರಕರಣದ ಇತರ ಆರೋಪಿತರಾದ ಪಾಯಮ್ಮ ಮತ್ತು ಚಂದ್ರರಾಜ್ ಜೈನ್ರವರಲ್ಲಿ ಭರತ್ ರಾಜ್ನ ಬಗ್ಗೆ ವಿಚಾರಿಸಿದಾಗ ಮನನೋಯುವಂತೆ ಮಾತಾಡಿದ್ದು ಪಿರ್ಯಾದಿದಾರರು ನನ್ನ ಹೊಟ್ಟೆಯಲ್ಲಿ ಭರತ್ ರಾಜ್ರವರ ಮಗು ಬೆಳೆಯುತ್ತಿದೆ ಎಂದು ಹೇಳಿದಾಗ ಪಾಯಮ್ಮ ಮತ್ತು ಚಂದ್ರರಾಜ್ ಜೈನ್ರವರು 5 ಲಕ್ಷ ರೂಪಾಯಿ ವರದಕ್ಷಿಣೆ ಹಣ ತಂದರೆ ಭರತ್ ರಾಜ್ ನಿನ್ನನ್ನು ಮದುವೆಯಾಗಿದ್ದಾನೆ ಎಂದು ಒಪ್ಪುತ್ತೇವೆ ಎಂದು ತಿಳಿಸಿದ್ದಲ್ಲದೆ ಇನ್ನೋರ್ವ ಆಪಾದಿತ ಮಹಾವೀರರವರು ಪಿರ್ಯಾದಿದಾರರನ್ನು ಮನೆಯಿಂದ ಹೊರಗೆ ಎಳೆದು ದೂಡಿದ್ದು ನಂತರ ಪಿರ್ಯಾದಿದಾರರು ಶಿರೂರಿನ ಮನೆಗೆ ಬಂದಿದ್ದು ಆಪಾದಿತರಾದ ಚಂದ್ರರಾಜ್ ಜೈನ್, ಮಹಾವೀರ ಮತ್ತು ಬಾಹುಬಲಿರವರು ಶಿರೂರಿಗೆ ಬಂದು ಪಿರ್ಯಾದಿದಾರರಿಗೆ ನಮ್ಮ ಧರ್ಮಕ್ಕೆ ಸೇರಬೇಕು ಧರ್ಮಕ್ಕೆ ಸೇರಲು ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸಬೇಕು ಎಂದು ತಿಳಿಸಿದ್ದು ಅದಕ್ಕೆ ಪಿರ್ಯಾದಿದಾರರು ಒಪ್ಪದ ಕಾರಣ ಆಪಾದಿತರಾದ ಚಂದ್ರರಾಜ್ ಜೈನ್, ಮಹಾವೀರ ಮತ್ತು ಬಾಹುಬಲಿರವರು ಪಿರ್ಯಾದಿದಾರರನ್ನು ಊರು ಬಿಟ್ಟು ಹೋಗದಿದ್ದರೆ ನಿನ್ನನ್ನು ಹೊಡೆದು ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿದ್ದು ನಂತರ ಮಹಿಳಾ ಸಂಘದವರೊಂದಿಗೆ ಪುನಹ ಭಟ್ಕಳದಲ್ಲಿರುವ ಹಾಡುಹಳ್ಳಿಗೆ ಪಿರ್ಯಾದಿದಾರರು ಹೋಗಿ ಆಪಾದಿತರ ಮನವೊಲಿಸಲು ಪ್ರಯತ್ನಿಸಿದಾಗ ಯಾವುದೇ ಪ್ರಯೋಜನವಾಗಿರಲಿಲ್ಲ ಎಂಬುದಾಗಿ ಸಾರಾಂಶವಾಗಿರುತ್ತದೆ. ಶ್ರೀಮತಿ ಶ್ರೀಲತಾ ಬಿ. ಶೆಟ್ಟಿರವರ ದೂರಿನಂತೆ ಕುಂದಾಪುರ ಮಹಿಳಾ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 06/09 ಕಲಂ 498 (ಎ), 323, 506 (2), 295 (ಎ), ಜೊತೆಗೆ 34 ಐಪಿಸಿ ಮತ್ತು ಕಲಂ 3 ವರದಕ್ಷಿಣೆ ನಿಷೇಧ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಭಯೋತ್ಪಾದನೆ ವಿರುದ್ಧ ಹೋರಾಡಬೇಕು : ಗೃಹ ಸಚಿವ

  

ಕಾಸರಗೋಡು: ದೇಶವನ್ನು ಶಿಥಿಲಗೊಳಿಸುವ ಭಯೋತ್ಪಾದನೆ ಮತ್ತು ವಿಧ್ವಂಸಕ ಶಕ್ತಿಗಳ ನಿಮರ್ೂಲನೆಗೆ ದೇಶದ ಜನತೆ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ರಾಜ್ಯ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಶನಿವಾರ ಇಲ್ಲಿ ಕರೆ ನೀಡಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಲ್ಲಿನ ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ಧ್ವಜಾರೋಹಣಗೊಳಿಸಿ ಅವರು ಮಾತನಾಡಿದರು.
ನೂರಿಪ್ಪತ್ತು ಕೋಟಿಯಷ್ಟು ಜನರಿರುವ ದೇಶವನ್ನು ಭಯೋತ್ಪಾದನೆಯಿಂದ ಬಗ್ಗು ಬಡಿಯಲು ಸಾಧ್ಯವಿಲ್ಲ. ಆದರೆ ವಿಧ್ವಂಸಕ ಶಕ್ತಿಗಳು ಧರ್ಮ, ರಾಜಕೀಯದ ಹೆಸರಲ್ಲಿ ಸಮಾಜದಲ್ಲಿ ಆತಂಕ ಸೃಷ್ಠಿಸುತ್ತಿದೆ. ಈ ರೀತಿಯ ಭಯೋತ್ಪಾದನೆಯಿಂದ ಜನರ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಮುಂಬೈ ಸ್ಫೋಟದ ಬಳಿಕ ವಿಧ್ವಂಸಕ ಚಟುವಟಿಕೆ ದೇಶದಲ್ಲಿ ನಿಂತಿಲ್ಲ. ಈ ಬಗ್ಗೆ ಜನರು ಅತೀವ ಜಾಗ್ರತೆವಹಿಸಬೇಕಿದೆ. ಇದಕ್ಕಾಗಿ ಜನರು ಪೊಲೀಸ್, ಸೈನ್ಯದ ಜತೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ವ್ಯಾಪಕಗೊಳಿಸಲಾಗುವುದು ಎಂದವರು ತಿಳಿಸಿದರು.
ಶಾಸಕರಾದ ಸಿ.ಟಿ.ಅಹಮ್ಮದಾಲಿ, ಕೆ.ಕುಞ್ಞಿರಾಮನ್, ಸಿ.ಎಚ್.ಕುಞ್ಞಂಬು, ಜಿಲ್ಲಾ ಪಂಚಾಯತು ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್, ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ, ಜಿಲ್ಲಾಧಿಕಾರಿ ಆನಂದ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್ ಹಾಜರಿದ್ದರು.

 
 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ನಲಂದಾ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ


ಕಾಸರಗೋಡು: ಪೆರ್ಲ ನಲಂದಾ ಕಾಲೇಜಿನ ಎನ್.ಎಸ್.ಎಸ್. ಘಟಕದ ಆಶ್ರಯದಲ್ಲಿ ಶನಿವಾರ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಪೆರ್ಲ ಚೆಕ್ ಪೋಸ್ಟ್ನ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಿರೀಶ್ ಧ್ವಜಾರೋಹಣ ಮಾಡಿದರು. ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಉದಯರಾಜ ಅರಳಿತ್ತಾಯ, ಕಾಲೇಜಿನ ಉಪನ್ಯಾಸಕರಾದ ಸುರೇಶ್ ಕೆ.ಎಡನಾಡು, ಹಸೈನಾರ್ ಹಾಜರಿದ್ದರು. ಬಳಿಕ ವಿದ್ಯಾಥರ್ಿಗಳಿಂದ ವಿವಿಧ ಕಾರ್ಯಕ್ರಮಗಳು ಜರುಗಿತು.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ದಣಿವರಿಯದ ಕಯ್ಯಾರರಿಗೆ ಕ.ಸಾ.ಪ. ಗೌರವ ಸದಸ್ಯತ್ವ


ಕಾಸರಗೋಡು: ಕಾಸರಗೋಡು ನೆಲದಲ್ಲಿ ಮಂಜೇಶ್ವರ ಗೋವಿಂದ ಪೈಗಳನ್ನು ಹೊರತುಪಡಿಸಿದರೆ ಅಖಿಲ ಕನರ್ಾಟಕ ಮಟ್ಟದಲ್ಲಿ ಕನ್ನಡಮ್ಮನ ಬಾವುಟವನ್ನು ಬೀಸಿದ ಹಾಗೂ ಬೀಸುತ್ತಿರುವ ಹೆಮ್ಮೆಯ ಕನ್ನಡಿಗ ಕವಿ ಕಯ್ಯಾರ.
ಕವಿ, ಗ್ರಂಥಕರ್ತ, ಸ್ವಾತಂತ್ರ್ಯಯೋಧ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ, ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಕನರ್ಾಟಕ ಏಕೀಕರಣ ಹೋರಾಟಗಾರ ಹಾಗೂ ನಾಡೋಜ ಗೌರವ ಪಡೆದ ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇದೀಗ ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯುನ್ನತ ಮನ್ನಣೆಯಾದ ಗೌರವ ಸದಸ್ಯತ್ವಕ್ಕೂ ಪಾತ್ರರಾಗಿದ್ದಾರೆ.
1915 ಜೂನ್ 8ರಂದು ಬಂಟ ಸಮುದಾಯದ ದುಗ್ಗಪ್ಪ ರೈ-ದೈಯ್ಯಕ್ಕೆ ದಂಪತಿಗಳಿಗೆ ಜನಿಸಿದ ಕಯ್ಯಾರರ ಮಾತೃಭಾಷೆ ತುಳು. 12 ವರ್ಷದ ಬಾಲಕನಾಗಿದ್ದಾಗಲೇ ಶಾಲೆಯಲ್ಲಿ `ಸುಶೀಲಾ' ಎಂಬ ಕೈ ಬರಹದ ವಿಶೇಷ ಸಂಚಿಕೆ ಪ್ರಕಟಿಸಿದ್ದರು. ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ನಿಪುಣರೆನಿಸಿದರು. ಬ್ರಾಹ್ಣಣರ ಶಾಲೆಯಲ್ಲಿ ಬ್ರಾಹ್ಮಣೇತರ ವ್ಯಕ್ತಿಯೊಬ್ಬ ಸಂಸ್ಕೃತ ವಿದ್ವಾನ್ ಆಗಿ ಹೊರಬಂದದ್ದೇ ಮಹತ್ಸಾಧನೆಯಾಗಿತ್ತು.
ಗಾಂಧೀಜಿಯವರ ಆಕರ್ಷಣೆಗೆ ಒಳಗಾದ ಅಂದಿನಿಂದ ಕಯ್ಯಾರರು ಖಾದಿಯನ್ನೇ ಮೆಚ್ಚಿಕೊಂಡರು. ಮಂಗಳೂರಿನಲ್ಲಿ ಪತ್ರಕರ್ತನಾಗಿ ದುಡಿಯುತ್ತಿರುವ ವೇಳೆ ಸ್ವಾತಂತ್ರ್ಯ ಚಳವಳಿ(ಭೂಗತ)ಗಾರರಿಗೆ ಕೊಂಡಿಯಾಗಿ ಸಹಕರಿಸಿದರು.
ಬದಿಯಡ್ಕದ ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಅದರ್ಶ ಶಿಕ್ಷಕನೆಂಬ ಪುರಸ್ಕಾರಕ್ಕೆ ಪಾತ್ರರಾದರು. ಈ ಕಾಲಘಟ್ಟದಲ್ಲೇ ಇವರ ಸಾಹಿತ್ಯದ ಬೆಳವಣಿಗೆಯೂ ಆಯಿತು.
ಕವನ ಸಂಕಲನಗಳು:
ಶ್ರೀಮುಖ, ಐಕ್ಯಗಾನ, ಪುನರ್ಣವ, ಚೇತನ, ಪಂಚಮೀ, ಕೊರಗ, ಶತಮಾನದ ಗಾನ, ಪ್ರತಿಭಾ ಪಯಸ್ವಿನಿ, ಗಂಧವತೀ, ಆಶಾನರ ಖಂಡ ಕಾವ್ಯಗಳು(ಅನುವಾದ), ಎನ್ನಪ್ಪೆ ತುಳುವಪ್ಪೆ(ತುಳು ಕವಿತೆಗಳು) ಮತ್ತು ಮಕ್ಕಳ ಮದ್ಯಮಂಜರಿ ಭಾಗ 1 ಮತ್ತು 2
ಗದ್ಯ ಕೃತಿಗಳು:
ರತ್ನರಾಶಿ(ಜೀವನ ಚಿತ್ರಣ), ಲಕ್ಷ್ಮೀಶನ ಲಲಿತ ಕಥೆಗಳು, ಅನ್ನದೇವರು ಮತ್ತು ಇತರ ಕಥೆಗಳು, ಪರಶುರಾಮ(ಜೀವನ ಚಿತ್ರಣ), ಎ.ಬಿ.ಶೆಟ್ಟಿ(ಜೀವನ ಚಿತ್ರಣ), ಕನ್ನಡ ಶಕ್ತಿ(ಜೀವನ ಚರಿತ್ರೆ), ಕಾನರ್ಾಡು ಸದಾಶಿವ ರಾವ್(ಜೀವನ ಚರಿತ್ರೆ), ನಾರಾಯಣ ಕಿಲ್ಲೆ(ಜೀವನ ಚರಿತ್ರೆ), ರಾಷ್ಟಕವಿ ಗೋವಿಂದ ಪೈ(ಜೀವನ ಚರಿತ್ರೆ), ಗೋವಿಂದ ಪೈ ಸ್ಮೃತಿ-ಕೃತಿ, ಮಲೆಯಾಳ ಸಾಹಿತ್ಯ ಚರಿತ್ರೆ, ಸಾಹಿತ್ಯ ದೃಷ್ಟಿ, ಸಂಸ್ಕೃತಿಯ ಹೆಗ್ಗುರುತುಗಳು, ವ್ಯಾಕರಣ ಮತ್ತು ಪ್ರಬಂಧ(ಭಾಗ 1, 2, 3, 4), ನವೋದಯ ವಾಚನ ಮಾಲೆ(ಪಠ್ಯ ಪುಸ್ತಕಮಾಲೆ 1ರಿಂದ 8)
ವಿರಾಗಿನಿ(ನಾಟಕ), ದುಡಿತವೇ ನನ್ನ ದೇವರು(ಆತ್ಮಕಥೆ). ಗಡಿನಾಡಿನ ಕಿಡಿ(ಅಭಿನಂದನಾ ಗ್ರಂಥ,
ಪ್ರಶಸ್ತಿ-ಪುರಸ್ಕಾರ:
ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ(1969), ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1969-70), ರಾಜ್ಯೋತ್ಸವ ಪ್ರಶಸ್ತಿ(1985), ಅತ್ಯುತ್ತಮ ಜೀವನ ಚರಿತ್ರೆ ಪ್ರಶಸ್ತಿ(1948), ಉತ್ತಮ ಕವನ ಪುಸ್ತಕ ಪ್ರಶಸ್ತಿ-1963(ಪುನರ್ನವ ಕೃತಿಗೆ), ನಾಡೋಜ ಗೌರವ ಮೊದಲಾದುವುಗಳು ಕಯ್ಯಾರರಿಗೆ ಲಭಿಸಿದ ಪ್ರಮುಖ ಪುರಸ್ಕಾರಗಳು.
ಆ.19ರಂದು ಗೌರವ ಸದಸ್ಯತ್ವ ಪ್ರದಾನ
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಸಮಾರಂಭ ಇದೇ 19ರಂದು ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಜರುಗಲಿದೆ.
ಅಂದು ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಆರ್.ಕೆ. ಗೌರವ ಸದಸ್ಯತ್ವ ಪ್ರದಾನ ಮಾಡುವರು. 
ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು.
ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಅಧ್ಯಕ್ಷ ಅಂಬಾತನಯ ಮುದ್ರಾಡಿ ಮತ್ತು ದ.ಕ. ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಭಾಗವಹಿಸುವರು.
 


 


 
 


 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Friday, August 14, 2009

ಕೊಲೆ ಪ್ರಕರಣ


ಕೋಟಾ : ದಿನಾಂಕ 11/08/09 ರಂದು ಕಾವಡಿ ಗ್ರಾಮದ ವಾಸಿ ಆಶಾ (25 ವರ್ಷ)ರವರು ಕೋಟಾ ಠಾಣೆಯಲ್ಲಿ ದೂರು ನೀಡಿದ್ದು ತನ್ನ ದೂರಿನಲ್ಲಿ ಅವರು ತಾನು 4 ವರ್ಷದ ಹಿಂದೆ ಕೋಟೇಶ್ವರ ಮೂಡು ಗೋಪಾಡಿಯ ರಾಘುರವರನ್ನು ವಿವಾಹವಾಗಿದ್ದು ಆತನಿಗೆ ತಾನು ಎರಡನೇ ಹೆಂಡತಿಯಾಗಿದ್ದು, ನಂತರದ ದಿನಗಳಲ್ಲಿ ಅವರೊಳಗೆ ಸಂಸಾರದಲ್ಲಿ ಸರಿ ಹೋಗದೇ ತನ್ನನ್ನು ಗಂಡ ತೊರೆದು ಹೋಗಿದ್ದು ನಂತರ ತನಗೆ ಆರೋಪಿ ರಘು ಪೂಜಾರಿ (25 ವರ್ಷ)ರವರ ಪರಿಚಯವಾಗಿ ಪ್ರೇಮ ಉಂಟಾಗಿ ತನ್ನನ್ನು ಆರೋಪಿಯು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿ ತಾನು ಗರ್ಭವತಿಯಾದ ಸಮಯ ಗರ್ಭ ತೆಗೆಸಲು ಒತ್ತಾಯ ಮಾಡುತ್ತಿದ್ದು ತಾನು ಒಪ್ಪಿರುವುದಿಲ್ಲ, ನಂತರ ಆರೋಪಿಯು ಆರು ತಿಂಗಳ ಕಾಲ ತನ್ನ ಮನೆಗೆ ಬಾರದೇ ಇದ್ದು, ತಾನು ದಿನಾಂಕ 26/03/09 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಭವಾನಿ ಎಂದು ನಾಮಕರಣ ಮಾಡಲಾಗಿದ್ದು ನಂತರ ಮಗುವಿಗೆ 1 ತಿಂಗಳು 10 ದಿನ ತುಂಬಿದ ಬಳಿಕ ಆರೋಪಿ ರಘು ಪೂಜಾರಿಯು ದಿನಾಂಕ 02/05/09 ರಂದು ತನ್ನ ಮನೆಗೆ ಬಂದು ತಾನು ಬೇಡವೆಂದರೂ ಒತ್ತಾಯ ಪೂರ್ವಕವಾಗಿ ತನ್ನ ಮಗುವನ್ನು ನೋಡಿಕೊಳ್ಳುತ್ತೇನೆ ಎಂದು ಆರೋಪಿ ತನ್ನ ಮನೆಯಾದ ಗಿಳಿಯಾರಿಗೆ ಕೊಂಡು ಹೋಗುವುದಾಗಿ ತಿಳಿಸಿ ಮಗುವಿನೊಂದಿಗೆ ಹೋಗಿರುತ್ತಾನೆ. ತಾನು 2-3 ತಿಂಗಳು ಕಳೆದರೂ ಈವರೆಗೆ ಮಗುವನ್ನಾಗಲೀ ಆರೋಪಿಯನ್ನಾಗಲೀ ನೋಡಿರುವುದಿಲ್ಲ. ಆರೋಪಿಯು ತನ್ನೊಂದಿಗಿನ ಸಂಬಂಧ ಬೆಳಕಿಗೆ ಬರುತ್ತದೆ ಎಂಬ ಕಾರಣಕ್ಕಾಗಿ ಮಗುವನ್ನು ಎಲ್ಲಿಯೋ ಕೊಂಡು ಹೋಗಿ ನಾಶ ಮಾಡಿರಬಹುದು ಎಂಬುದಾಗಿ ತಿಳಿಸಿದ ಮೇರೆಗೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 190/09 ಕಲಂ 364 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ದಿನಾಂಕ 14/08/2009ರಂದು ಆರೋಪಿ ಪತ್ತೆಗೆ ಹೋದ ಕೋಟಾ ಠಾಣಾ ಸಿಬ್ಬಂದಿಯವರು ಠಾಣೆಗೆ ಹಾಜರಾಗಿ ಮಣಿಪಾಲದ ಇಂದ್ರಾಳಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ನಿಮರ್ಾಣ ಹಂತದ ಬಿಲ್ಡಿಂಗ್ನಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಆರೋಪಿ ರಘು ಪೂಜಾರಿಯನ್ನು ವಶಕ್ಕೆ ತೆಗೆದುಕೊಂಡು ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್ರವರ ಮುಂದೆ ಹಾಜರುಪಡಿಸಿದ್ದು, ಅವರು ಆರೋಪಿ ರಘು ಪೂಜಾರಿಯನ್ನು ಕೂಲಂಕುಶವಾಗಿ ವಿಚಾರಿಸಲಾಗಿ, ಆರೋಪಿಯು ತನಗೆ ಹಾಗೂ ಆಶಾಳಿಗೆ ಪ್ರೇಮ ಸಂಬಂಧ ಇದ್ದು ತಾನು ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭವತಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅದಕ್ಕೆ ಭವಾನಿ ಎಂದು ಹೆಸರಿಸಿ, ನಾಮಕರಣ ಮಾಡಿದೆವು. ತಾನು ಆಶಾಳ ಮನೆಗೆ ಬಂದಾಗ ಮಗುವಿನ ಮುಂದಿನ ಭವಿಷ್ಯದ ಬಗ್ಗೆ ಆಕೆಯನ್ನು ಮುದುವೆಯಾಗಲು ಪೀಡಿಸುತ್ತಿದ್ದಳು. ಮದುವೆಯಾಗದ್ದಿದಲ್ಲಿ ಈ ಮಗುವೆ ನಮ್ಮಿಬ್ಬರ ದೈಹಿಕ ಸಂಪರ್ಕದ ಸಾಕ್ಷಿ ಎಂದು ಹೇಳುತ್ತಿದ್ದಳು, ಆಗ ನಾನು ಈ ಮಗವನ್ನು ಕೊಲ್ಲಲು ಯೋಚಿಸಿದೆನು ಹಾಗೆ ದಿನಾಂಕ 02/05/09 ರಂದು ಆ ಮಗುವನ್ನು ತಾನು ತನ್ನ ತಂದೆ ತಾಯಿಗೆ ತೋರಿಸಿಕೊಂಡು ವಾಪಾಸು ಕರೆ ತರುವುದಾಗಿ ಆಶಾಳನ್ನು ಹಾಗೂ ತಾಯಿಯನ್ನು ಒಪ್ಪಿಸಿ ಸುಮಾರು ಒಂದೂವರೆ ತಿಂಗಳ ಮಗುವನ್ನು ಕರೆದುಕೊಂಡು ತನ್ನ ಮನೆಯಲ್ಲಿ ಕೊಲ್ಲಲು ಬಂದಾಗ ಅಲ್ಲಿ ತಂದೆ -ಅಕ್ಕ ಇರುವುದರಿಂದ ಆ ಮಗುವನ್ನು ಕೊಲ್ಲಲು ಆಗಲಿಲ್ಲ. ಬಳಿಕ ಪಕ್ಕದ ಮನೆಯ ಗಂಗಕ್ಕನವರ ಮನೆಯಲ್ಲಿ ಕೊಲ್ಲಲು ಹೋದಾಗ ಅಲ್ಲಿ ಗಂಗಕ್ಕ ಇದ್ದುದ್ದರಿಂದ ಕೊಲ್ಲಲು ಆಗದೇ ಅಲ್ಲಿಂದ ಕೋಟ ಹಿರೆಮಹಾಲಿಂಗೇಶ್ವರ ದೇವಸ್ಥಾನದ ಕಡೆಗೆ ಹೋಗುವಾಗ ದಾರಿ ಮಧ್ಯೆ ಸಾಯಂಕಾಲ 6 ಘಂಟೆಗೆ ಮೂಡು ಗಿಳಿಯಾರು ಗ್ರಾಮದ ರಾಘವೇಂದ್ರ ಐತಾಳರ ಹಡುಬಿದ್ದ ಗದ್ದೆಯ ನಡುಕಟ್ಟೆಯ ಮಧ್ಯೆ ಅಕೇಶಿಯಾ ಮರದ ಬುಡದಲ್ಲಿ ಮಗುವಿನ ಕುತ್ತಿಗೆಯನ್ನು ಒತ್ತಿ ಹಿಡಿದು ಕೊಂದು ಅಲ್ಲಿದ್ದ ಜಬಲಿ ಹುಲ್ಲಿನಿಂದ ಮುಚ್ಚಿ ಬೆಂಕಿ ಕಡ್ಡಿುಂದ ಬೆಂಕಿ ಕೊಟ್ಟು ಮಗುವನ್ನು ಸುಟ್ಟು ಬೂದಿ ಮಾಡಿದ್ದಾಗಿ ಆರೋಪಿ ಕಬೂಲಾತಿ ಹೇಳಿಕೆ ನೀಡಿದ್ದು ಆತನ ಹೇಳಿಕೆಯ ಮೇರೆಗೆ ಈಗಾಗಲೇ ದಾಖಲಾದ ಪ್ರಕರಣದಲ್ಲಿಯ ಕಲಂ 364 ಐಪಿಸಿಯನ್ನು 302, 201 ಐಪಿಸಿಯನ್ನಾಗಿ ಪರಿವತರ್ಿಸಲಾಗಿದೆ.
 
ಅಂದರ್ ಬಾಹರ್ - 7 ಜನರ ಬಂಧನ
 
ಕಾರ್ಕಳ : ದಿನಾಂಕ 13/08/09 ರಂದು ಸುಮಾರು 23:15 ಘಂಟೆ ಸಮಯಕ್ಕೆ ಕಾರ್ಕಳ ಗ್ರಾಮಾಂತರ ಠಾಣಾ ಸರಹದ್ದಿನ ಮಾಳ ಗ್ರಾಮದ ಮಾಳ ಚೌಕಿಯಂಗಡಿ ಸುರೇಶ ಆಚಾರಿ ಎಂಬವರಿಗೆ ಸೇರಿದ ಗೂಡಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ 1) ಕೃಷ್ಣಪ್ಪ ಮೂಲ್ಯ (40 ವರ್ಷ) ತಂದೆ. ಅಣ್ಣಪ್ಪ ಮೂಲ್ಯ ವಾಸ. ಸುಂಟಿಕುಮೇರು ಮನೆ ಮಾಳ ಗ್ರಾಮ ಕಾರ್ಕಳ ತಾಲೂಕು 2) ಜಯ ಪೂಜಾರಿ (36 ವರ್ಷ) ತಂದೆ ದಿವಂಗತ ವೀರಪ್ಪ ಪೂಜಾರಿ ವಾಸ. ಮಾಳ ಚೌಕಿ ಮಾಳ ಗ್ರಾಮ, ಕಾರ್ಕಳ ತಾಲೂಕು 3) ರಾಮ ಶೆಟ್ಟಿ (45 ವರ್ಷ) ತಂದೆ ನರಂಗ ಶೆಟ್ಟಿ ವಾಸ. ಹೆಕ್ಕರೊಟ್ಟು ಮನೆ ಮಾಳ ಗ್ರಾಮ, ಕಾರ್ಕಳ ತಾಲೂಕು 4) ಪ್ರಭಾಕರ ಶೆಟ್ಟಿ (38 ವರ್ಷ) ತಂದೆ ದಿವಂಗತ ವಿಠಲ ಶೆಟ್ಟಿ ವಾಸ ಪಜಿರ ಮನೆ ಮಾಳ ಗ್ರಾಮ, ಕಾರ್ಕಳ ತಾಲೂಕು 5) ನಾಗೇಶ ಆಚಾರಿ (48 ವರ್ಷ) ತಂದೆ ಲಕ್ಮಣ್ ಆಚಾರಿ ವಾಸ. ದಖರ್ಾಸು ಮನೆ ಮಾಳ ಗ್ರಾಮ ಕಾರ್ಕಳ ತಾಲೂಕು 6) ಶೇಖರ ದೇವಾಡಿಗ (35 ವರ್ಷ) ತಂದೆ ಬಾಬು ದೇವಡಿಗ ವಾಸ ಹಾಡಿ ಮನೆ ಮಾಳ ಚೌಕಿ ಮಾಳ ಗ್ರಾಮ ಕಾರ್ಕಳ ತಾಲೂಕು ಮತ್ತು 7) ಕರುಣಾಕರ ಮಡಿವಾಳ (23 ವರ್ಷ) ತಂದೆ ರಾಘು ಮಡಿವಾಳ ವಾಸ ಪೆರಿಯಡ್ಕ ಮನೆ, ಮಾಳ ಚೌಕಿ, ಮಾಳ ಗ್ರಾಮ ಕಾರ್ಕಳ ತಾಲೂಕುರವರನ್ನು ಖಚಿತ ವರ್ತಮಾನದ ಮೇರೆಗೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ.ರವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ದಸ್ತಗಿರಿ ಮಾಡಿ ಆಟಕ್ಕೆ ಬಳಸಿದ ಪರಿಕರಗಳನ್ನು ಹಾಗೂ ನಗದು ರೂಪಾಯಿ 890/-ನ್ನು ಸ್ವಾಧೀನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 93/09 ಕಲಂ 87 ಕನರ್ಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಸ್ವಾಭಾವಿಕ ಮರಣ
 
ಕಾಪು : ಕಾಪು ಠಾಣಾ ಸರಹದ್ದಿನ ಉಳಿಯಾರಗೋಳಿ ಗ್ರಾಮದ ಕೈಪುಂಜಾಲ್ನ ಪ್ರಿಯಾ ನಿವಾಸದ ಸತೀಶ. ಬಿ. ಶ್ರೀಯಾನ್ (31 ವರ್ಷ) ತಂದೆ ಬೀರ. ಬಿ.ಶ್ರೀಯಾನ್ರವರ ಅಣ್ಣನಾದ ಸುರೇಶ.ಬಿ. ಶ್ರೀಯಾನ್ (32 ವರ್ಷ)ರವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ದುಬಾಯಲ್ಲಿ ನರ ದೌಬಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಅಸೌಖ್ಯ ತೀವ್ರಗೊಂಡು ಊರಿಗೆ ಬಂದಿದ್ದವರು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 13/07/09 ರಂದು 18:15 ಗಂಟೆಗೆ ಅಸೌಖ್ಯದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದವರನ್ನು ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿರುತ್ತಾರೆ ಎಂಬುದಾಗಿ ಸತೀಶ. ಬಿ. ಶ್ರೀಯಾನ್ರವರು ದಿನಾಂಕ 14/08/2009ರಂದು ದೂರು ನೀಡಿದ ಮೇರೆಗೆ ಕಾಪು ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 18/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಲೋಕಕಲ್ಯಾಣಕ್ಕಾಗಿ ಕೃಷ್ಣಾವತಾರ/Ashtami

 
ಕಾಸರಗೋಡು: ದೇವತಾರಾಧನೆ ಮತ್ತು ಧಾಮರ್ಿಕ ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ವಿದ್ಯಾಲಯಗಳಲ್ಲಿ ಅಂತಹ ಧಾಮರ್ಿಕ ಮೌಲ್ಯದ ದಿನಗಳನ್ನು ಆಚರಿಸುವುದು ಸ್ತುತ್ಯರ್ಹವಾಗಿದೆ ಎಂದು ಕಾಸರಗೋಡು ಸರಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಸಿ.ಎಚ್.ರಾಮ ಭಟ್ ಹೇಳಿದರು.
ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಗುರುವಾರ ಜರುಗಿದ ಶ್ರೀಕೃಷ್ಣ ಜಯಂತಿ ಉತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧರ್ಮದ ಮೇರೆ ಮೀರಿದಾಗ ಅವತಾರವೆತ್ತಿದ ಕೃಷ್ಣ ಪರಮಾತ್ಮನು ಧರ್ಮದ ಪುನಃಸ್ಥಾಪನೆ ಮಾಡಿದನು. ಸತ್ಯ, ಧರ್ಮದಿಂದ ಬಾಳಿ ಬದುಕುವ ಜನರ ಏಳಿಗೆಗಾಗಿ ಶ್ರೀಕೃಷ್ಣ ಶ್ರಮಿಸಿದನು ಎಂದೂ ಅವರು ನುಡಿದರು.
ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ವಿದ್ಯಾಥರ್ಿ ಮುಖಂಡ ಪ್ರವೀಣ್ ಕುಮಾರ್ ವರದಿ ವಾಚಿಸಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ರವಿಕೃಷ್ಣ ಯು. ಸ್ವಾಗತಿಸಿ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕ  ಚಂದ್ರಶೇಖರ ರೈ ನಿರೂಪಿಸಿದರು.
ಜನ್ಮಾಷ್ಟಮಿಯ ಅಂಗವಾಗಿ ಏರ್ಪಡಿಸಿದ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮನರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾಥರ್ಿಗಳಿಂದ `ಶ್ರೀಕೃಷ್ಣ ಲೀಲೆ' ಎಂಬ ಯಕ್ಷಗಾನ ಬಯಲಾಟ ಜರುಗಿತು. ವಿದ್ಯಾಥರ್ಿಗಳಾದ ನವನೀತ ಕೃಷ್ಣ.ಯು, ವಿಜೇಶ.ಬಿ, ಅನೀಶ್, ವಿನೀತ್ ಶಂಕರ್.ಎಚ್, ಪ್ರವೀಣ್ ಕುಮಾರ, ಅವಿನಾಶ್, ಅಭಿಲಾಷ್, ರಾಮ ನಾಯ್ಕ, ಶಂಕರ ತೇಜಸ್ವಿ, ಯಜ್ಞೇಶ.ಎಂ, ವಿನಾಯಕ.ಎಂ, ಮಂಜುನಾಥ, ಮನೀಶ್.ಬಿ, ಶಬರೀಶ ಪಾತ್ರವರ್ಗದಲ್ಲಿ ಮಿಂಚಿದರು. ಸುರೇಶ ಆಚಾರ್ಯ ನೀಚರ್ಾಲ್ ಮತ್ತು ಉಂಡೆಮನೆ ಕೃಷ್ಣ ಭಟ್ ಭಾಗವತರಾಗಿ ಸಹಕರಿಸಿದರು. ಬಾಲಕೃಷ್ಣ ಆಚೆಗೋಳಿ, ಈಶ್ವರ ಮಲ್ಲ, ಪ್ರಕಾಶ ನೀಚರ್ಾಲು ಮತ್ತು ಭಾಸ್ಕರ ಕಲ್ಲಕಟ್ಟ ಹಿಮ್ಮೇಳದಲ್ಲಿ ಸಹಕರಿಸಿದರು.
ದಿವಾಣ ಶಿವಶಂಕರ ಭಟ್ ನಿದರ್ೇಶಿಸಿದರು, ದೇವಕಾನ ಕೃಷ್ಣ ಭಟ್ ವಸ್ತ್ರಾಲಂಕಾರದಲ್ಲಿ ಸಹಕರಿಸಿದರು.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಜ್ವರ: ಯುವತಿ ಸಾವು/Fever Lady Death


ಕಾಸರಗೋಡು: ಜ್ವರ ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಇಲ್ಲಿನ ಪಟ್ಲ ಕೋಟೆಕಣಿ ನಿವಾಸಿ ಅಪ್ಪಕುಞ್ಞಿ ಅವರ ಪುತ್ರಿ ರಜಿತ(17) ಸಾವನ್ನಪ್ಪಿದ ಯುವತಿ. ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಯುವತಿ ಗುರುವಾರ ಸಾವನ್ನಪ್ಪಿದಳು.

 
 
16 ಲಕ್ಷ ರೂ. ಮೌಲ್ಯದ ಸ್ಪಿರಿಟ್ ವಶ
 
ಕಾಸರಗೋಡು: ಮಂಗಳೂರಿನಿಂದ ಕೇರಳಕ್ಕೆ ಸಾಗಿಸಲು ಯತ್ನಿಸಿದ 16 ಲಕ್ಷ ರೂ. ಮೌಲ್ಯದ 10,500 ಲೀ. ಸ್ಪಿರಿಟನ್ನು ಅಬಕಾರಿ ದಳ ಗುರುವಾರ ಇಲ್ಲಿನ ಪಿಲಾತ್ತರದಲ್ಲಿ ವಶಪಡಿಸಿದೆ.
ಲಾರಿ ಚಾಲಕ ಪಾಲಕ್ಕಾಡು ನಿವಾಸಿ ಆರ್.ಬಾಬು, ಕ್ಲೀನರ್ ಉಡುಪಿಯ ನೀರ್ಮಾರ್ಗದ ರವೀಂದ್ರ ಬಂಧನಕ್ಕೊಳಗಾದ ಆರೋಪಿಗಳು.


 

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಉಪ್ಪಳದಲ್ಲಿ ಸಿ.ಪಿ.ಐ. ಧರಣಿ/CPI Protest


ಮಂಜೇಶ್ವರ: ಆಸಿಯಾನ್ ಒಪ್ಪಂದ ವಿರೋಧಿಸಿ ಸಿ.ಪಿ.ಐ. ನೇತೃತ್ವದಲ್ಲಿ ಉಪ್ಪಳದಲ್ಲಿ ಗುರುವಾರ ಸಂಜೆ ಧರಣಿ ನಡೆಯಿತು.
ಸಿ.ಪಿ.ಐ. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇ.ಚಂದ್ರಶೇಖರನ್ ಉದ್ಘಾಟಿಸುವರು. ಎಂ. ಸಂಜೀವ ಶೆಟ್ಟಿ ಅಧ್ಯಕ್ಷ ವಹಿಸಿದ್ದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ರಾಜನ್, ಪಿ.ರಾಘವನ್, ರಾಮಕೃಷ್ಣ ಕಡಂಬಾರು, ಎಂ.ಜಿ.ಹೆಗ್ಡೆ, ಲಾರೆನ್ಸ್ ಡಿ' ಸೋಜಾ, ಜಯರಾಮ, ನಯನಾ ಶೆಟ್ಟಿ, ವಾಣಿಶ್ರೀ, ಆನಂದ ಶೆಟ್ಟಿ, ಸುದಾನಂದ, ಎಸ್.ರಾಮಚಂದ್ರ ಹಾಜರಿದ್ದರು.

 
 
ಬಿ.ಜೆ.ಪಿ. ಸದಸ್ಯತ್ವ ಅಭಿಯಾನ
 
ಮಂಜೇಶ್ವರ:  ಮಂಜೇಶ್ವರ ಮಂಡಲ ಬಿ.ಜೆ.ಪಿ. ಸದಸ್ಯತ್ವ ಅಭಿಯಾನವನ್ನು ಯುವಮೋಚರ್ಾ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಉದ್ಘಾಟಿಸಿದರು.
ಹೊಸಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಎಂ.ಕೆ.ಅಶೋಕ್ ಕುಮಾರ್ ಹೊಳ್ಳ , ವಿ.ಬಾಲಕೃಷ್ಣ ಶೆಟ್ಟಿ, ಪುಷ್ಪರಾಜ್ ಕೆ.ಐಲ್, ಬಾಲಕೃಷ್ಣ ಅಂಬಾರ್, ಕೆ.ಪಿ.ವಲ್ಸರಾಜ್, ಎಂ.ಬಾಬು ರೈ, ಸಿ.ಬಿ.ಕೃಷ್ಣ ಹೆಬ್ಬಾರ್, ದಿನೇಶ್ ಚೆರುಗೋಳಿ, ವಿಜಯ ರೈ ಹಾಜರಿದ್ದರು.

ಬಸ್ಸಿಗೆ ಕಲ್ಲೆಸೆತ : ಬಂಧನ
 
ಮಂಜೇಶ್ವರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಖಾಸಗಿ ಎಕ್ಸ್ಪ್ರೆಸ್ ಬಸ್ಸಿಗೆ ಕಲ್ಲೆಸೆತ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿ ಅಶ್ರಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಕುಂಜತ್ತೂರಿನಲ್ಲಿ ಬಸ್ಸು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಖಾಸಗಿ ಬಸ್ಸನ್ನು ಕಲ್ಲೆಸೆದು ಹಾನಿಗೊಳಿಸಲಾಗಿತ್ತು. ಇದೇ ಬಸ್ಸು ದುರಸ್ತಿಗೊಂಡು ನಿನ್ನೆ ರಸ್ತೆಗಿಳಿದಿರುವುದನ್ನು ತಿಳಿದು ಹೊಂಚು ಹಾಕಿ ಕಲ್ಲೆಸೆಯಲಾಗಿದೆ.
 
ಮಟ್ಕಾ ದಂಧೆ: ಐವರ ಸೆರೆ


ಮಂಜೇಶ್ವರ: ಇಲ್ಲಿನ ಹೊಸಂಗಡಿಯಲ್ಲಿ ಮಟ್ಕಾದಲ್ಲಿ ನಿರತರಾಗಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 1,435 ರೂ. ವಶಪಡಿಸಿಕೊಳ್ಳಲಾಗಿದೆ. ಹೊಸಂಗಡಿಯ ತಾರಾನಾಥ, ಚಂದ್ರಹಾಸ, ಅಂಗಡಿಪದವು ನಿವಾಸಿ ಪ್ರಕಾಶ, ವಿಶ್ವರಾಜ್, ಸುನಿಲ್ ಎಂಬವರು ಬಂಧಿತರು.


 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಆ.17ರಂದು ಕೃಷಿಕರ ದಿನಾಚರಣೆ-ಸೋಣೊಗು ಸುಗಿಪು/Farmars Day


ಕಾಸರಗೋಡು: ಕೇರಳ ತುಳು ಅಕಾಡೆಮಿ, ಕಿಸಾನ್ ಸೇನೆ, ತುಳುವೆರೆ ಆಯನೊ ಕೂಟ, ಫೋಕ್ ಲ್ಯಾಂಡ್ ಮತ್ತು ಗ್ರಾಮೀಣ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಜಂಟಿ ಆಶ್ರಯದಲ್ಲಿ ಇದೇ 17ರಂದು ಕೃಷಿಕರ ದಿನಾಚರಣೆ ಮತ್ತು ಸೋಣೊಗು ಸುಗಿಪು ಕಾರ್ಯಕ್ರಮ ಸೀತಾಂಗೋಳಿ ಸಮೀಪದ ಗುಂಡ್ಯಡ್ಕ ಜಿ.ಪಾಕರ್್ನಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ ನಡೆಯುವ ಸಮಾರಂಭವನ್ನು ಶಾಸಕ ಸಿ.ಎಚ್.ಕುಞ್ಞಂಬು ಉದ್ಘಾಟಿಸುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ ಪ್ರಶಸ್ತಿ ವಿತರಿಸುವರು. ಉಳಿಯತ್ತಾಯ ವಿಷ್ಣು ಆಸ್ರ, ಡಾ.ಕೆ.ಕಮಲಾಕ್ಷ, ಪುತ್ತಿಗೆ ಪಂಚಾಯ್ತಿ ಅಧ್ಯಕ್ಷ ತೋಮಸ್ ಡಿ'ಸೋಜಾ ಮತ್ತಿತರರು ಭಾಗವಹಿಸುವರು.
ಸಂಜೆ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಕೇರಳ ಲಲಿತ ಕಲಾ ಅಕಾಡೆಮಿಯ ಮಾಜಿ ಸದಸ್ಯ ಕೆ.ಕೆ.ಮಾರಾರ್ ಉದ್ಘಾಟಿಸುವರು. ಕಿಸಾನ್ ಸೇನೆಯ ಅಧ್ಯಕ್ಷ ಗುಂಡ್ಯಡ್ಕ ವೆಂಕಟರಮಣ ಭಟ್ ಅಧ್ಯಕ್ಷತೆ ವಹಿಸುವರು. ಪಾತರ್ಿಸುಬ್ಬ ಯಕ್ಷಗಾನ ಕಲಾ ಕೇಂದ್ರದ ಅಧ್ಯಕ್ಷ ಶಂಕರ ರೈ ಮಾಸ್ಟರ್, ಕೇಶವ ಶೆಟ್ಟಿ ಆದೂರು ಮತ್ತು ಇತರರು ಭಾಗವಹಿಸುವರು.

 
ಆ.19ರಂದು ಭಗತ್ ಸಿಂಗ್ ಸಂಸ್ಮರಣೆ
 
ಕಾಸರಗೋಡು: ರಾಜ್ಯ ಯುವಜನ ಕಲ್ಯಾಣ ಮಂಡಳಿಯ ಆಶ್ರಯದಲ್ಲಿ ಭಗತ್ ಸಿಂಗ್ ಸಂಸ್ಮರಣಾ ರಾಜ್ಯ ಮಟ್ಟದ ಉದ್ಘಾಟನೆ ಇದೇ 19ರಂದು ಇಲ್ಲಿನ ಪೆರುಂಬಳದಲ್ಲಿ ನಡೆಯಲಿದೆ.
ಪೆರುಂಬಳ ಯೂತ್ ಕ್ಲಬ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಸಂಸದ ಪಿ.ಕರುಣಾಕರನ್ ಉದ್ಘಾಟಿಸುವರು. ಮಂಡಳಿಯ ಉಪಾಧ್ಯಕ್ಷ ಪಿ.ಶ್ರೀರಾಮ ಕೃಷ್ಣ ಅಧ್ಯಕ್ಷತೆ ವಹಿಸುವರು. ಪಿ.ವಿ.ಕೆ.ಪನೆಯಾಲ್ ಸಂಸ್ಮರಣಾ ಭಾಷಣ ಮಾಡುವರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಭಾಗವಹಿಸುವರು. ಬಳಿಕ ಭಗತ್ ಸಿಂಗ್ ನಾಟಕ ಪ್ರದರ್ಶನ ನಡೆಯಲಿದೆ.
 
 
17ರಂದು ಉಪ್ಪಳದಲ್ಲಿ ಸಾಮೂಹಿಕ ವಿವಾಹ
 
ಕಾಸರಗೋಡು: ಮುಸ್ಲಿಂ ಪುನರ್ವಸತಿ ಸಮಿತಿಯ ಆಶ್ರಯದಲ್ಲಿ ಇದೇ 17ರಂದು ಉಪ್ಪಳದಲ್ಲಿ ಸಾಮೂಹಿಕ ವಿವಾಹ ಮತ್ತು ಮನೆಗಳ ಕೀಲಿ ಹಸ್ತಾಂತರ ನಡೆಯಲಿದೆ ಎಂದು ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಡ ಕುಟಂಬದ 7 ಯುವತಿಯರಿಗೆ ವಿವಾಹ ನಡೆಯಲಿದೆ. ಪ್ರತಿ ಮಧುಮಗಳಿಗೆ 10 ಪವನ್ ಚಿನ್ನಾಭರಣ ಮತ್ತು ಉಡುಪುಗಳನ್ನು ವಿತರಿಸಲಾಗುವುದು.
ಉಪ್ಪಳದ ಮರಿಕೆ ಪ್ಲಾಜಾದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ವಿವಾಹ ಮತ್ತು ನೂತನವಾಗಿ ನಿಮರ್ಿಸಿದ ಮನೆಗಳ ಕೀಲಿಗಳ ಹಸ್ತಾಂತರ ನಡೆಯಲಿದೆ.
ಜಿಲ್ಲಾಧಿಕಾರಿ ಆನಂದ ಸಿಂಗ್, ಎ.ಡಿ.ಎಂ. ವಾಸುದೇವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್, ಪಾಣಕ್ಕಾಡ್ ರಶೀದ್ ಆಲಿ ಶಿಹಾಬ್ ತಂಙಳ್, ಕಾಸರಗೋಡು ಖಾಸಿ ಕೆ.ಎಂ.ಬಾವ ಮುಸ್ಲಿಯಾರ್ ಮತ್ತಿತರರು ಭಾಗವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ಆಲುವಾಯ್ ಮೂಸಾ, ವಿ.ಪಿ.ಅಬ್ದುಲ್ ಶುಕೂರ್, ಕೆ.ಎ.ಇಬ್ರಾಹಿಂ, ಹನೀಫ, ಬಹರೈನ್ ಮುಹಮ್ಮದ್, ಎಂ.ಕೆ.ಆಲಿಮಾಸ್ಟರ್, ಕೆ.ಎ.ಅಬ್ದುಲ್ಲ, ಪಿ.ಎಂ.ಸಲೀಂ ಹಾಜರಿದ್ದರು.

 

 


 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Thursday, August 13, 2009

ಆ.16ರಿಂದ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಸಮ್ಮೇಳನ


ಕಾಸರಗೋಡು
: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವಿವಿಧ ಉಪಜಿಲ್ಲಾ ಸಮ್ಮೇಳನಗಳು ಇದೇ 16, 29 ಮತ್ತು 30ರಂದು ನಡೆಯಲಿದೆ.ಕಾಸರಗೋಡು, ಬೇಕಲ-ಹೊಸದುರ್ಗ ಉಪಜಿಲ್ಲಾ ಸಮ್ಮೇಳನ 16ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿದೆ. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಕೆ.ಸವಿತಾ ಉದ್ಘಾಟಿಸುವರು. ಕಾಸರಗೋಡು ಉಪ ಜಿಲ್ಲಾಧ್ಯಕ್ಷ ಸೋಮಶೇಖರ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಉಪ ಜಿಲ್ಲಾ ಸಮ್ಮೇಳನ 29ರಂದು ಬೆಳಗ್ಗೆ 10 ಗಂಟೆಗೆ ಉದ್ಯಾವರ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಉದ್ಘಾಟಿಸುವರು. ಮಂಜೇಶ್ವರ ಸಹಾಯಕ ವಿದ್ಯಾಧಿಕಾರಿ ಕೆ.ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಕುಂಬಳೆ ಉಪ ಜಿಲ್ಲಾ ಸಮ್ಮೇಳನ 30ರಂದು ಬೆಳಗ್ಗೆ 10 ಗಂಟೆಗೆ ಪೆರಡಾಲದ ನವಜೀವನ ಪ್ರೌಢ ಶಾಲೆಯಲ್ಲಿ ನಡೆಯಲಿದೆ. ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಶಾಲೆಯ ಮೇನೇಜರ್ ಶಂಕರ ಮೋಹನದಾಸ ಆಳ್ವ ಉದ್ಘಾಟಿಸುವರು. ಉಪಜಿಲ್ಲಾ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ಅಡ್ಕ ಅಧ್ಯಕ್ಷತೆ ವಹಿಸುವರು.


ಗಣಪತಿ ಮೊಳೆಯಾರರ ಸ್ಮರಣಾರ್ಥ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪಧರ್ೆ ವಿಜೇತರು

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಗಣಪತಿ ಮೊಳೆಯಾರರ ಸ್ಮರಣಾರ್ಥ ಕಾಲೇಜು ವಿದ್ಯಾಥರ್ಿಗಳಿಗೆ ಇತ್ತೀಚೆಗೆ ನಡೆಸಿದ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪಧರ್ೆಯಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿದ್ಯಾಥರ್ಿ ಪ್ರಸಾದ್ ಜಿ. ಅವರ `ನನ್ನ ಕಥೆಯಲ್ಲಿನ ಬಿಡಿ ಚಿತ್ರಗಳು' ಎಂಬ ಕಥೆಗೆ ಪ್ರಥಮ ಸ್ಥಾನ ಲಭಿಸಿದೆ. ಕುಂದಾಪುರ ಭಂಡಾರಕಾರ್ಸ್ ಕಾಲೇಜಿನ ವಿದ್ಯಾಥರ್ಿನಿ ರೇಷ್ಮಾ ನಾರಾಯಣ ಉಪ್ಪುಂದ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ವಿಜೇತರಿಗೆ ಕ್ರಮವಾಗಿ 2ಸಾವಿರ ರೂ. ಹಾಗೂ 1 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.


ಮೊಗೇರ ಸವರ್ಿಸ್ ಸೊಸೈಟಿಗೆ ಕೇಂದ್ರದ ಅಂಗೀಕಾರ


ಕಾಸರಗೋಡು:ಕಾಸರಗೋಡು ಜಿಲ್ಲಾ ಮೊಗೇರ ಸವರ್ಿಸ್ ಸೊಸೈಟಿಗೆ ಕೇಂದ್ರ ಸಕರ್ಾರದ ಯೋಜನಾ ಆಯೋಗದ ಎನ್.ಜಿ.ಒ. ಸಹಭಾಗಿತ್ವದ ಅಂಗೀಕಾರ ಲಭಿಸಿದೆ. ಸೊಸೈಟಿ ಈಗಾಗಲೇ ನೆಹರೂ ಯುವ ಕೇಂದ್ರ ಮತ್ತು ಯುವ ಜನ ಕ್ಷೇಮಾಭಿವೃದ್ಧಿ ಮಂಡಳಿಯ ಅಂಗೀಕಾರ ಕೂಡಾ ಲಭಿಸಿದೆ.


ಮಲಬಾರ್ ಪ್ಯಾಕೇಜ್: ರಾಜಕೀಯ ದುರುಪಯೋಗ

ಕಾಸರಗೋಡು: ಕೇರಳದ ಮಲಬಾರ್ ಪ್ರದೇಶವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸಕರ್ಾರ ನೀಡುವ ಮಲಬಾರ್ ಪ್ಯಾಕೇಜನ್ನು ರಾಜಕೀಯವಾಗಿ ದುರುಪಯೋಗಪಡಿಸುತ್ತಿದೆ ಎಂದು ಶಾಸಕ ಸಿ.ಟಿ. ಅಹಮ್ಮದಾಲಿ ಆರೋಪಿಸಿದ್ದಾರೆ.ಪೆರಿಯದಲ್ಲಿ ಕೇರಳ ಪಂಚಾಯ್ತಿ ಎಂಪ್ಲಾಯೀಸ್ ಆರ್ಗನೈಸೇಶನ್ನ 27ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೆ.ಪಿ.ಸಿ.ಸಿ. ನಿವರ್ಾಹಕ ಸಮಿತಿ ಸದಸ್ಯ ಸಿ.ಕೆ.ಶ್ರೀಧರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದಶರ್ಿ ಗೋವಿಂದನ್ ನಾಯರ್, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ವಿನೋದ್ ಕುಮಾರ್, ರಾಜ್ಯಾಧ್ಯಕ್ಷ ಉದಯಬಾನು, ರಾಜ್ಯ ಪ್ರಧಾನ ಕಾರ್ಯದಶರ್ಿ ಎಂ.ಪಿ.ಮೋಹನನ್, ರಾಜ್ಯ ಕೋಶಾಧಿಕಾರಿ ತಾರಾನಾಥ ಮಧೂರು, ರಾಜ್ಯ ಸಮಿತಿ ಸದಸ್ಯ ಸಿ.ಕೆ.ಅರವಿಂದನ್, ಹಕೀಂ ಕುನ್ನಿಲ್, ಬಾಬು ರಾಜ್, ನಾರಾಯಣ ಅಡಿಗ, ಜಿಲ್ಲಾ ಅಧ್ಯಕ್ಷ ಸಿ.ದಾಮೋದರನ್, ಪ್ರಧಾನ ಸಂಚಾಲಕ ಪಿ.ದೇವದಾಸ್ ಹಾಜರಿದ್ದರು.


ದಲಿತರಿಗೆ ಶಾಪವಾಗಿ ಮಾರ್ಪಟ್ಟ ಎಡರಂಗ ಸಕರ್ಾರ

ಕಾಸರಗೋಡು: ಕೇರಳದ ಎಡರಂಗ ಸಕರ್ಾರ ದಲಿತರಿಗೆ ಶಾಪವಾಗಿ ಮಾರ್ಪಟ್ಟಿದೆ ಎಂದು ಕೇರಳ ದಲಿತ ಫೆಡರೇಶನ್(ಕೆ.ಡಿ.ಎಫ್) ರಾಜ್ಯಾಧ್ಯಕ್ಷ ಪಿ.ರಾಮಭದ್ರನ್ ಆರೋಪಿಸಿದ್ದಾರೆ.ಕೆ.ಡಿ.ಎಫ್. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ನಡೆದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಪರಿಶಿಷ್ಟ ವಿಭಾಗದ ಮೇಲೆ ಅತಿಕ್ರಮಣ ಹೆಚ್ಚುತ್ತಿದೆ. ಇದನ್ನು ಹತ್ತಿಕ್ಕುವಲ್ಲಿ ಸಕರ್ಾರ ವಿಫಲವಾಗಿದೆ ಎಂದೂ ಅವರು ಆಪಾದಿಸಿದ್ದಾರೆ.ಜಿಲ್ಲಾಧ್ಯಕ್ಷ ಇ.ಕುಞ್ಞಂಬು ಅಧ್ಯಕ್ಷತೆ ವಹಿಸಿದ್ದರು. ಪಿ.ಕೆ.ರಾಧಾ, ಆನಂದ ಮೌವ್ವಾರ್, ಅಜಕ್ಕೋಡು ವಸಂತನ್, ಎಸ್.ಪಿ.ಮಂಜು, ಕೆ.ಕುಞ್ಞಿಕೃಷ್ಣನ್, ರಾಘವನ್, ಪ್ರದೀಪನ್, ವಿನೋದ್, ಅನಿತಾ, ಕೆ.ಆರ್.ಮಧುಸೂದನನ್, ಸುರೇಶ್ ಕೈರಳಿ, ವಿ.ಎಸ್.ಬೈಜು ಹಾಜರಿದ್ದರು.


ತೆರಿಗೆ ಸಂಗ್ರಹ ಯಜ್ಞ : ಯಶಸ್ವಿಗೆ ಕರೆ

ಕಾಸರಗೋಡು: ಮಧೂರು ಗ್ರಾಮ ಪಂಚಾಯ್ತಿನ ಕಟ್ಟಡ ತೆರಿಗೆ, ವೃತ್ತಿ ತೆರಿಗೆ, ಲೈಸೆನ್ಸ್ ಫೀಸ್ ಪಾವತಿಸಿ ತೆರಿಗೆ ಸಂಗ್ರಹ ಯಜ್ಞವನ್ನು ಯಶಸ್ವಿಗೊಳಿಸಬೇಕು ಹಾಗೂ ಪಂಚಾಯ್ತಿ ಪ್ರದೇಶದಲ್ಲಿ ಲೈಸೆನ್ಸ್ ಇಲ್ಲದೆ ಅನಧಿಕೃತ ವ್ಯಾಪಾರ ವ್ಯವಸಾಯ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆ ತಿಳಿಸಿದೆ.




www.kasaragodvartha.com, Malayalam Online Newspaper from Kasaragod brings latest news from our home land. The first comprehensive local web media of KASARAGOD

Wednesday, August 12, 2009

ಹಲ್ಲೆ - ಉಭಯ ತಂಡಗಳಿಂದ ದೂರು ದಾಖಲು


ಮಣಿಪಾಲ: ದಿನಾಂಕ 11/08/09 ರಂದು 11:30 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬನ್ನೂರು ಗ್ರಾಮದ ವಾಸಿ ಅಬ್ದುಲ್ ಹನೀಫ್ (23 ವರ್ಷ)ರವರು ತನ್ನ ಮಣಿಪಾಲ ಆಶ್ಲéೇಷ ಹೋಟೇಲು ಕಟ್ಟಡದಲ್ಲಿರುವ ವಿಂಟೇಜ್ ಫ್ಯಾಷನ್ ಅಂಗಡಿಯಲ್ಲಿದ್ದಾಗ ಆರೋಪಿ ಮಹಮ್ಮದ್ ಶಾರೀಕ್ ಮತ್ತು ಇತರ 3 ಮಂದಿ ಆರೋಪಿತರು ಕೆಎ 20 ಎನ್ 5920 ನಂಬರಿನ ಕಾರಿನಲ್ಲಿ ಬಂದು ಮಹಮ್ಮದ್ ಶಾರೀಕ್ರವರು ಅಬ್ದುಲ್ ಹನೀಫ್ರವರಿಗೆ ಬ್ಯಾಟಿನಿಂದ ಹಲ್ಲೆ ನಡೆಸಿದ್ದು ಉಳಿದವರು ಕೈುಂದ ಹೊಡೆದು ಕಾಲಿನಿಂದ ತುಳಿದು ಅಂಗಡಿಯ ಕ್ಯಾಶ್ ಕೌಂಟರ್ ಹಾಗೂ ಕಂಪ್ಯೂಟರ್ ಜಖಂಗೊಳಿಸಿ ಬೆದರಿಕೆ ಹಾಕಿರುತ್ತಾರೆ. ಹಲ್ಲೆಯಿಂದ ಅಬ್ದುಲ್ ಹನೀಫ್ರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಅಬ್ದುಲ್ ಹನೀಫ್ರವರ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 142/09 ಕಲಂ 323, 324, 506, 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಇದೇ ಘಟನೆಗೆ ಸಂಬಂಧಿಸಿದಂತೆ ಉಡುಪಿಯ ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆಯ ವಾಸಿ ಮೊಹಮ್ಮದ್ ಶಿಹಾನ್ (26)ರವರು ತನ್ನ ದೂರಿನಲ್ಲಿ ತಾನು ದಿನಾಂಕ 11/08/09 ರಂದು 12:30 ಗಂಟೆಗೆ ತನ್ನ ಮೊಟಾರು ಸೈಕಲಿನಲ್ಲಿ ಮಣಿಪಾಲ ಕಡೆಗೆ ಬರುತಿದ್ದಾಗ ಆರೋಪಿತರಾದ ಆಸಿಫ್, ಹಝೀಮ್, ಹನೀಫ್ ಮತ್ತು ಮೌಶಿನ್ ಎಂಬುವವರು ಮಣಿಪಾಲ ಗ್ರೀನ್ ಪಾಕರ್್ ಬಳಿ 2 ಬೈಕಿನಲ್ಲಿ ಬಂದು ತನ್ನನ್ನು ತಡೆದು ನಿಲ್ಲಿಸಿ ಹಾಕಿ ಕೋಲಿನಿಂದ ಹೊಡೆಯಲು ಬಂದಾಗ ತಾನು ತಪ್ಪಿಸಿಕೊಂಡಿದ್ದು ಆರೋಪಿತರು ತನಗೆ ಕೈುಂದ ಹೊಡೆದು ಕಾಲಿನಿಂದ ತುಳಿದು ಜಖಂಗೊಳಿಸಿ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ದೂರಿರುತ್ತಾರೆ. ಹಲ್ಲೆಯಿಂದ ಮೊಹಮ್ಮದ್ ಶಿಹಾನ್ರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಮೊಹಮ್ಮದ್ ಶಿಹಾನ್ರವರ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 143/09 ಕಲಂ 341, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ - ಪ್ರಕರಣ ದಾಖಲು
 
ಕೋಟಾ: ದಿನಾಂಕ 11/08/09 ರಂದು ರಾತ್ರಿ 21:30 ಗಂಟೆಗೆ ಕೋಟಾ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್ರವರು ಠಾಣೆಯಲ್ಲಿರುವಾಗ ದೊರೆತ ಖಚಿತ ಮಾಹಿತಿಯಂತೆ ಕುಂದಾಪುರ ತಾಲೂಕು ಹೊಂಬಾಡಿ ಮಂಡಾಡಿ ಹುಣ್ಸೆಮಕ್ಕಿ ಪಂಚಾಯತ್ ಕಚೇರಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಗುಂಪು ಕೂಡಿಕೊಂಡು ವಿಪರೀತ ಕುಡಿದು ಸ್ಥಳೀಯ ಆರೋಪಿಗಳಾದ 1) ವಿಶ್ವನಾಥ ಪೂಜಾರಿ (20) ತಂದೆ ನಾಗರಾಜ ಪೂಜಾರಿ, 2) ಸುರೇಶ್ ಪ್ರಭು (31) ತಂದೆ ಗೋಪಾಲ ಪ್ರಭು, 3) ರಾಜೇಂದ್ರ ಪ್ರಭು (24) ತಂದೆ ಮಂಜುನಾಥ ಪ್ರಭು, 4) ಗಣೇಶ್ ಪ್ರಭು (30) ತಂದೆ ಶ್ರೀನಿವಾಸ ಪ್ರಭು, 5) ಸಂತೋಷ ಪೂಜಾರಿ (27) ತಂದೆ ಮಂಜು ಪೂಜಾರಿ, 6) ರಾಘವೇಂದ್ರ ಪ್ರಭು (25) ತಂದೆ ಮಂಜುನಾಥ ಪ್ರಭು ಮತ್ತು 7) ಸುರೇಶ್ ಪೂಜಾರಿ (28) ತಂದೆ ಆನಂದ ಪ್ರಜಾರಿಯವರು ತಮ್ಮೊಳಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಕಿರುಚಾಡಿಕೊಂಡು ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ದೂಡಾಡಿಕೊಂಡು ಇದ್ದವರನ್ನು 22:15 ಗಂಟೆಗೆ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ದಸ್ತಗಿರಿ ಮಾಡಿ ಸ್ಥಳದಲ್ಲಿದ್ದ ಕೆ.ಎ 20 ಡಬ್ಲ್ಯು 1573 ನಂಬರಿನ ಮೋಟಾರ್ ಸೈಕಲ್ ಮತ್ತು ಸ್ಥಳದಲ್ಲಿದ್ದ ಖಾಲಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 192/09 ಕಲಂ 160 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಅಶ್ಲೀಲ ಸಿ.ಡಿ. ಮಾರಾಟಗಾರನ ಬಂಧನ - 30 ಅಶ್ಲೀಲ ಸಿ.ಡಿ. ವಶ
 
ದಿನಾಂಕ 12.08.09 ರಂದು ಬೆಳಿಗ್ಗೆ 11 ಗಂಟೆಗೆ ಕುಂದಾಪುರ ತಾಲೂಕಿನ ಚಿತ್ತೂರು ಎಂಬಲ್ಲಿ ಉಡುಪಿ ಜಿಲ್ಲಾ ಅಪರಾಧ ಗುಪ್ತವಾತರ್ಾ ವಿಭಾಗದ ಪೊಲೀಸ್ ನಿರೀಕ್ಷಕರಾದ ಶ್ರೀ ಗಣೇಶ್ ಎಂ. ಹೆಗಡೆರವರು ಸಿಬ್ಬಂದಿಯವರೊಂದಿಗೆ ಗಸ್ತು ಮಾಡುತ್ತಿರುವ ಸಮಯ ಬಂದ ಖಚಿತ ವರ್ತಮಾನದ ಮೇರೆಗೆ ಕೆಎ 20 ಹೆಚ್ 3633 ನಂಬರಿನ ಕೆನೆಟಿಕ್ ಹೋಂಡಾ ಸ್ಕೂಟರನ್ನು ನಿಲ್ಲಿಸಿ ಅದನ್ನು ಚಲಾುಸುತ್ತಿದ್ದ ವಂಡ್ಸೆ ನಿವಾಸಿ ಗೋಪಾಲ ಪೂಜಾರಿ (43) ತಂದೆ ರಾಜೀವ ಪೂಜಾರಿಯನ್ನು ಪರಿಶೀಲಿಸಿದಾಗ ಕೆನೆಟಿಕ್ ಹೋಂಡಾದ ಟೂಲ್ಸ್ ಬಾಕ್ಸ್ನಲ್ಲಿ 30 ಅಶ್ಲೀಲ ಸಿಡಿಗಳು ದೊರೆತಿದ್ದು ಈ ಸಿಡಿಗಳನ್ನು ಹಾಗೂ ಕೆನೆಟಿಕ್ ಹೊಂಡಾವನ್ನು ಮಹಜರು ಮೂಲಕ ಸ್ವಾಧಿನಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಕೊಲ್ಲೂರು ಠಾಣೆಗೆ ಹಸ್ತಾಂತರಿಸಿದ್ದು ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 47/09 ಕಲಂ 292 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ. ಈ ಕಾಯರ್ಾಚರಣೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರವೀನ್ ಮಧುಕರ್ ಪವಾರ್ರವರು ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕಾಶೀನಾಥ್ ತಳಕೇರಿರವರ ಮಾರ್ಗದರ್ಶನದಲ್ಲಿ ನಡೆಸಲಾಗಿದ್ದು, ಕಾಯರ್ಾಚರಣೆಯಲ್ಲಿ ಸಿಬ್ಬಂದಿಯವರಾದ ದಾಮೋದರ, ನಾರಾಯಣ ಸತೀಶ್ ಬಲ್ಲಾಳ್, ಮಹಾಬಲ ಶೆಟ್ಟಿ, ಉದಯ ಕುಂದರ್, ದಿನೇಶ್ ಶೆಟ್ಟಿ, ರತ್ನಾಕರ, ವಾಮನ, ಉದಯ ಮಲ್ಪೆ, ಮತ್ತು ಮನೋಹರ ಉದ್ಯಾವರ ಭಾಗವಹಿಸಿರುತ್ತಾರೆ.
 
 
ಅಪಘಾತ ಪ್ರಕರಣ
 
ದಿನಾಂಕ: 10/08/09 ರಂದು ಮದ್ಯಾಹ್ಮ 13:30 ಗಂಟೆ ಸಮಯಕ್ಕೆ ರಾಹೆ 17 ರ ದೂಫದಕಟ್ಟೆಯ ಬಳಿ ರಸ್ತೆಯ ಬದಿಯಿಂದ ನಡೆದುಕೊಂಡು ಮನೆ ಕಡೆ ಹೋಗುತ್ತಿರುವ ಸಮಯ ಆರೋಪಿಯ ತನ್ನ ಮೋಟಾರು ಸೈಕಲ್ ನಂ ಕೆಎ 20 ಕ್ಯೂ 7164 ನ್ನು ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಕೃಷ್ಣ ಸಾಲಿಯಾನ್ (53ವರ್ಷ) ತಂದೆ: ದಿ.ಐತು ಸುವರ್ಣ ವಾಸ: ಗಾಂದೀನಗರ ಬೈಕಾಡಿ ಗ್ರಾಮ ಎಂಬವರ ಎಡಕೈಗೆ ಜಖಂ ಉಚಿಟಾಗಿರುತ್ತದೆ. ಈ ಬಗ್ಗೆ ಕೃಷ್ಣ ಸಾಲಿಯಾನ್ ರವರು ಬ್ರಹ್ಮಾವರ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 142/09 ಕಲಂ 279, 337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ: 11/08/09 ರಂದು ಸಂಜೆ 6:45 ಗಂಟೆ ಸಮಯಕ್ಕೆ ಶಫೀ(30) ತಂದೆ: ಬಪ್ಪು ಸಾಹೇಬ್ ವಾಸ: 5 ಸೆಂಟ್ಸ್ ಕುಂಭಾಶಿ ಕುಂದಾಪುರ ತನ್ನ ಬಸ್ಸು ನಂಬ್ರ ಕೆ.ಎ 20 ಬಿ 1455 ನೇಯದನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುವರೆ ರಾಹೆ 17 ರಲ್ಲಿ ಚಲಾಯಿಸಿಕೊಂಡು ಬರುತ್ತಿದ್ದು ಉಡುಪಿ ತಾಲೂಕು ಮಣೂರು ಗ್ರಾಮದ ಬಾಳೆಬೆಟ್ಟು ಎಂಬಲ್ಲಿ ತಲುಪುವಾಗ್ಗೆ, ಆರೋಪಿ ದಿನೇಶ್ ನಂಬ್ರ ಕೆ ಎ 20 ಬಿ 3039 ನೇದರ ಚಾಲಕ ತನ್ನ ಬಸ್ಸನ್ನು ಕುಂದಾಪುರ ಕಡೆಯಿಂದ ರಾ ಹೆ 17 ರಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಬಲಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಕಂಡೆಕ್ಟರ್ ಗಣೇಶ್ ಎಂಬವರು ಒಮ್ಮೇಲೆ ಬಸ್ಸಿನೊಳಗೆ ಬಿದ್ದು ಪರಿಣಾಮವಾಗಿ ಅವರ ಬಲ ಕೈಗೆ ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕೋಟೇಶ್ವರದ ಎನ್.ಆರ್ ಆಚಾರ್ಯ ಆಸ್ಪತ್ರೆ ಕರೆದುಕೊಂಡು ಹೋಗಿದ್ದು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿರುದಿಲ್ಲವಾಗಿ ಶಫೀ(30)ರವರು ಕೋಟಾ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 191/09 ಕಲಂ 279, 338 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಹಲ್ಲೆ ಪ್ರಕರಣ
 
ದಿನಾಂಕ 11/08/2009 ರಂದು ಸಂಜೆ 4.30 ಗಂಟೆಗೆ ಶರತ್ರಾಜ್ ,ತಂದೆ:ಮಂಜುನಾತ ದೇವಾಡಿಗ ,ವಾಸ:ಸುಬ್ರಮಣ್ಯ ದೇವಸ್ಥಾನದ ಹತ್ತಿರ ಉಳ್ಳೂರು ,ಕಂದಾವರ ಗ್ರಾಮ ಎಂಬವರ ಗದ್ದೆಯಿಂದ ಹುಲ್ಲಿನ ಕಟ್ಟನ್ನು ತಲೆಯುಲ್ಲಿ ಹೊತ್ತು ಕೊಂಡು ಕಾಲು ದಾರಿಯಲ್ಲಿ ಬರುತ್ತ ಮನೆಯ ಹಿಂಬದಿಯಲ್ಲಿರುವ ಮಕ್ಕಿಗದ್ದೆ ಎಂಬಲ್ಲಿಗೆ ತಲುಪಿದಾಗ ಆರೋಪಿಗಳಾದ ರಾಧಾ ಮತ್ತು ಸುಶೀಲ ಎಂಬವರು ಅಲ್ಲಗೆ ಬಂದು ತಡೆದು ತಲೆಯ ಮೇಲಿನ ಹುಲ್ಲಿನ ಕಟ್ಟಿನ ಸಮೇತ ದೂಡಿ ಹಾಕಿ ರಾಧಾ ಎಂಬವರು ಕೋಲಿನಿಂದ ತಲೆಗೆ ತೊಡೆಗೆ ಮತ್ತು ಸೊಂಟಕ್ಕೆ ಹೊಡೆದು ಸುಶೀಲ ಎಂಬವರು ಕಾಲಿನಿಂದ ಎದೆಗೆ ತುಳಿದರು ಅಲ್ಲಿಗೆ ಬಂದ ಲಕ್ಷ್ಮೀ ಎಂಬವರು ಅವನ ತಲೆಯನ್ನು ಹೊಡೆದು ಹಾಕಿ ಕೈಕಾಲುಗಳನ್ನು ಕಡಿದು ಹಾಕಿ ಎಂದು ಹೇಳಿ ಮೂರು ಜನರು ಸೇರಿ ಅವಾಚ್ಯ ಶಬ್ದಗಳಿಂದ ಬೈದು ಈ ದಾರಿಯಲ್ಲಿ ಮುಂದೆ ಯಾವತ್ತಾದರೂ ಬಂದರೆ ಕೊಂದು ಹಾಕುತ್ತೇವೆ ಎಂಬುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಶರತ್ರಾಜ್ರವರು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 235/09 ಕಲಂ 341 ,323 ,324 ,504 ,506 ಜೊತೆಗೆ 34 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಈ ಹಲ್ಲಗೆ ಫಿರ್ಯಾದಿದಾರರಿಗೂ ಆರೋಪಿಗಳಿಗೂ ಹಿರಿಯರಿಂದ ಬಂದ ಜಾಗದ ಪಾಲಿನ ವಿಚಾರವಾಗಿ ತುಂಬ ವರ್ಷಗಳಿಂದ ದ್ವೇಷವಿದ್ದು ಅದೇ ಪೂರ್ವ ದ್ವೇಶದಿಂದ ಮತ್ತು ಸಮಾನ ಉದ್ದೇಶದಿಂದ ಈ ಹಲ್ಲೆ ನಡೆಸಿರುವುದಾಗಿದೆ.
 
 
ಬಾವಿಗೆ ಬಿದ್ದು ಸಾವು ಪ್ರಕರಣ
 
ದಿನಾಂಕ 10/08/2009 ರಂದು ಸಂಜೆ ಸುರೇಶ್ ನಾಯಕ್ (38) ತಂದೆ: ನಾರಾಯಣ ನಾಯಕ್ ವಾಸ: ಪಡುಸಾಗು ಮನೆ, ಪಟ್ಲ ಅಂಚೆ, ಪೆರ್ಣಂಕಿಲ ಗ್ರಾಮ, ಉಡುಪಿ. ಎಂಬವರು ಮೂಡುಬೆಳ್ಳೆ ಪೇಟೆಗೆಂದು ಹೋದವರು ರಾತ್ರಿ ಮನೆಗೆ ಬಾರದೆ ಇದ್ದು, ರಾತ್ರಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೆ ಇದ್ದು, ದಿನಾಂಕ 11/08/2009 ರಂದು 05:00 ಗಂಟೆಗೆ ಕಟ್ಟಿಂಗೇರಿ ಗ್ರಾಮದ ಮುಳಿಕಂಬಳ ಎಂಬಲ್ಲಿ ಶ್ರೀಮತಿ ಕ್ರಿಶ್ಚಿಯನ್ ಬಾಯಿ ಎಂಬವರ ಮನೆಯ ಪಕ್ಕದ ಹಾಡಿಯಲ್ಲಿರುವ ಅವರಣವಿಲ್ಲದ ಬಾವಿಯ ಬಳಿ ಚಪ್ಪಲಿ ಕಾಣಸಿಕ್ಕಿದ್ದು, ಸಂಶಯಗೊಂಡು ಬಾವಿಯಲ್ಲಿ ಅಗ್ನಿಶಾಮಕ ದಳದವರು ಬಂದು ಹುಡುಕಾಡುತ್ತಿರುವಾಗ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಮೃತರು ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು, ಶರಾಬು ಕುಡಿದು ಒಳ ದಾರಿಯಾಗಿ ಮನೆಗೆ ಬರುತ್ತಿರುವಾಗ ಅವರಣ ವಿಲ್ಲದ ಬಾವಿಗೆ ಆಕಸ್ಮಿಕ ಕಾಲು ಜಾರಿ ಮೃತಪಟ್ಟಿರುವುದಾಗಿದೆ ಈ ಬಗ್ಗೆ ದೇವದಾಸ ನಾಯಕ್ (55) ತಂದೆ: ನಾರಾಯಣ ನಾಯಕ್ ವಾಸ: ಪಡುಸಾಗು ಮನೆ, ಪಟ್ಲ ಅಂಚೆ, ಪೆರ್ಣಂಕಿಲ ಗ್ರಾಮ, ಉಡುಪಿ.ರವರು ಶಿವರ್ಾ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 15/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಇತರೆ ಪ್ರಕರಣಗಳು
 
ದಿನಾಂಕ: 11/08/09 ರಂದು ಮಾನ್ಯ ಕುಂದಾಪುರ ಎ.ಸಿ.ಜೆ(ಕಿ.ವಿ) ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಬಂದ ಖಾಸಗಿ ಪಿರ್ಯಾಧಿ ನಂಬ್ರ 164/09 ರಂತೆ ಆರೋಪಿ ವಿನ್ಸೆಂಟ್ ಮಾಟರ್ಿಸ್(60)ತಂದೆ: ಮಾರ್ಶಲ್ಮಾಟರ್ಿಸ್ ವಾಸ: ಫಾದರ್ ಸೈಂಟ್ ಆಂಟೋನಿ ಚರ್ಚ,ಸಾಸ್ತಾನ ,ಪಾಚಿಡೇಶ್ವರ, ಉಡುಪಿ ತಾಲೂಕು ರವರು ಉಡುಪಿ ತಾಲೂಕು ಪಾಂಡೇಶ್ವರ ಗ್ರಾಮದ, ಸಂತ ಅಂತೋನಿ ಚಚರ್್ನ ಧಮರ್ಾಧಿಕಾರಿಯಾಗಿದ್ದು, ಸಂತ ಅಂತೋನಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಸಿ.ಬಿ.ಎಸ್.ಸಿ ಪಠ್ಯಕ್ರಮ ಆರಂಭಿಸುವುದಾಗಿ ತಪ್ಪು ಮಾಹಿತಿ ನೀಡಿ ಮೋಸ ಮಾಡಿದ್ದು, ಆರೋಪಿಯು ಚಚರ್ಿನ ಆವರಣದಲ್ಲಿರುವ ಫಲಭರಿತ ತೆಂಗಿನ ಮರಗಳನ್ನು ಶಾಲೆಗೆ ಆಟದ ಮೈದಾನ ನಿಮರ್ಿಸುವ ಉದ್ದೇಶದಿಂದ ಕಡಿದು ನಾಶ ಮಾಡಿ ಹಣ ಸಂಪಾದಿಸಿದ್ದಲ್ಲದೆ, ಕೇವಲ ಅಕ್ರಮ ಹಣ ಸಂಪಾದನೆಗಾಗಿ ಚಚರ್ಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ಅಕ್ರಮ ಹಣ ಸಂಪಾದನೆ ಮತ್ತು ಹಣ ದುರುಪಯೋಗ ಮಾಡಿ ವಂಚನೆ ವಿಶ್ವಾಸ ದ್ರೋಹ, ನಕಲಿ ದಾಖಲಾತಿ ಸೃಷ್ಠಿಸುವಂತೆ ಅಪರಾಧ ಎಸಗಿದ್ದಾಗಿದೆ. ಈ ಬಗ್ಗೆ ಸಿಲ್ವೆಸ್ಟರ್ ಡಿ ಸೋಜಾ ತಂದೆ: ದಿ ಲಿಯೋ ಡಿ ಸೋಜಾ ಉಪಾಧ್ಯಕ್ಷರು ಸೈಂಟ್ ಅಂತೋನಿ ಚಚರ್್ ಪಾಂಡೇಶ್ವರ ರವರು ಕೋಟಾ ಠಾಣೆಯಲ್ಲಿ ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 189/09 ಕಲಂ 403,405,406,420,465,467,471,477ಎ ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ: 11/08/09 ರಂದು 18:30 ಗಂಟೆಗೆ ಉಡುಪಿ ತಾಲೂಕು ,ಕಾವಡಿಯ 5 ಸೆಂಟ್ಸ್ ವಾಸಿ ಆಶಾ (24) ಗಂಡ: ರಘುಪೂಜಾರಿ ಎಂಬವರು 4 ವರ್ಷದ ಹಿಂದೆ ಕೋಟೇಶ್ವರ ಮೂಡು ಗೋಪಾಡಿಯ ರಾಘುವನ್ನು ವಿವಾಹವಾಗಿದ್ದು ಅವನಿಗೆ ಫಿರ್ಯಾದಿ ಆಶಾ ಎರಡನೇ ಹೆಂಡತಿಯಾಗಿದ್ದು, ನಂತರದ ದಿನಗಳಲ್ಲಿ ಅವರೊಳಗೆ ಸಂಸಾರದಲ್ಲಿ ಸರಿ ಹೋಗದೇ ಗಂಡ ತೊರೆದು ಹೋಗಿದ್ದಾಗಿದೆ. ನಂತರ ಆರೋಪಿ ರಘು ಪೂಜಾರಿ ತಂದೆ: ಕರಿಯ ಪೂಜಾರಿ ವಾಸ:ಕಾರ್ಕಡ ಎಂಬವರ ಪರಿಚಯವಾಗಿ ಪ್ರೇಮ ಉಂಟಾಗಿ ಆರೋಪಿಯು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿ ಗರ್ಭವತಿಯಾದ ಸಮಯ ಗರ್ಭ ತೆಗೆಸಲು ಒತ್ತಾಯ ಮಾಡುತ್ತಿದ್ದು ಇದಕ್ಕೆ ಒಪ್ಪಿರುವುದಿಲ್ಲ, ನಂತರ ಆರೋಪಿಯು ಆರು ತಿಂಗಳ ಕಾಲ ಮನೆಗೆ ಬಾರದೇ ಇದ್ದು, ದಿನಾಂಕ: 26/03/09 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾರೆ. ನಂತರ ಮಗುವಿಗೆ 1 ತಿಂಗಳು 10 ದಿನ ತುಂಬಿದ ಬಳಿಕ ಆರೋಪಿಯು ದಿನಾಂಕ: 02/05/09 ರಂದು ಪಿರ್ಯಾದಿಯ ಮನೆಗೆ ಬಂದು ಪಿರ್ಯಾಧಿ ಬೇಡವೆಂದರೂ ಒತ್ತಾಯ ಪೂರ್ವಕವಾಗಿ ಪಿರ್ಯಾದಿಯ ಮಗುವನ್ನು ತಾನು ನೋಡಿಕೊಳ್ಳುತ್ತೇನೆ ಎಂದು ಆರೋಪಿ ತನ್ನ ಮನೆಯಾದ ಗಿಳಿಯಾರಿಗೆ ಕೊಂಡು ಹೋಗುವುದಾಗಿ ತಿಳಿಸಿ ಮಗುವಿನೊಂದಿಗೆ ಹೋಗಿರುತ್ತಾನೆ. ಪಿರ್ಯಾಧಿಯು 2-3 ತಿಂಗಳು ಕಳೆದರೂ ಈವರೆಗೆ ಮಗುವನ್ನಾಗಲೀ ಆರೋಪಿಯನ್ನಾಗಲೀ ನೋಡಿರುವುದಿಲ್ಲ. ಆರೋಪಿಯು ಪಿರ್ಯಾದಿಯೊಂದಿಗಿನ ತನ್ನ ಸಂಬಂಧ ಬೆಳಕಿಗೆ ಬರುತ್ತದೆ ಎಂಬ ಕಾರಣಕ್ಕಾಗಿ ಆರೋಪಿ ಮಗುವನ್ನು ಎಲ್ಲಿಯೋ ಕೊಂಡು ಹೋಗಿ ನಾಶ ಮಾಡಿರಬಹುದು. ಈ ಬಗ್ಗೆ ಆಶಾರವರು ಕೋಟಾ ಠಾಣೆಯಲ್ಲಿ ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 190/09 ಕಲಂ 364 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಗಂಡಸು ಕಾಣೆ ಪ್ರಕರಣ
 
ಉಡುಪಿ ತಾಲೂಕು ಎಮರ್ಾಳ್ ಬಡಾ ಗ್ರಾಮದ ಅಂಗಡಿ ಮನೆಯ ವಾಸಿ ಕುಮಾರಿ ಶೆಟ್ಟಿ (45) ತಂದೆ:ಶೇಖರ ಶೆಟ್ಟಿ ಮುಂಬಯಿಲ್ಲಿ ಹೋಟೆಲ್ ವ್ಯವಹಾರ ನಡೆಸಿಕೊಂಡಿದ್ದು, ಅವರ ಮನೆಯಾದ ಎಮರ್ಾಳ್ ಅಂಗಡಿ ಮನೆಯಲ್ಲಿ ಅವರ ಅಣ್ಣ ದಿನೇಶ್ ಶೆಟ್ಟಿ (50ವರ್ಷ) ಎಂಬವರು ಚಿಕ್ಕಮ್ಮನೊಂದಿಗೆ ವಾಸವಾಗಿರುವುದಾಗಿದೆ. ದಿನೇಶ ಶೆಟ್ಟಿರವರು ಮಾನಸಿಕ ಅಸ್ವಸ್ಥರಾಗಿದ್ದು ದಿನಾಂಕ 03/02/09 ರಂದು 10:00 ಘಂಟೆಗೆ ಮನೆಯಿಂದ ಹೋದವರು ಇದುವರೆಗೂ ವಾಪಾಸು ಬಾರದೇ ಕಾಣೆಯಾಗಿರುವುದಾಗಿದೆ. ಸಂಬಂದಿಕರ ಮನೆಯಲ್ಲಿ ಹುಡುಕಿದಲ್ಲಿ ಪತ್ತೆಯಾಗದೇ ಇದ್ದುದರಿಂದ ಕುಮಾರಿ ಶೆಟ್ಟಿ ರವರು ಮುಂಬಯಿಯಿಂದ ಬಂದು ಪಡುಬಿದ್ರಿ ಠಾಣೆಗೆ ಬಂದು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/09 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಹಂದಿಜ್ವರ ಪತ್ತೆ

 
ಕಾಸರಗೋಡು: ಮುಂಬೈಯಿಂದ ಬಂದ ಇಲ್ಲಿನ ಮಧೂರು ಸಮೀಪದ ಕೊಲ್ಲಂಗಾನ ನಿವಾಸಿ ಹಂದಿ ಜ್ವರ ಬಾಧಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
3 ದಿನಗಳ ಹಿಂದೆ ಬಂದ ಈ ಯುವಕನನ್ನು ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ದಾಖಲಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
 
 
 
ತಳಂಗೆರೆಯಿಂದ ಇಬ್ಬರು ಮಕ್ಕಳು ಕಾಣೆ
 
ಕಾಸರಗೋಡು: ತಳಂಗೆರೆ ಸಿರಾಮಿಕ್ಸ್ ರಸ್ತೆ ಬಳಿಯ ಮನೆಯೊಂದರ ಇಬ್ಬರು ಬಾಲಕರು ನಾಪತ್ತೆಯಾದ ಘಟನೆ ನಡೆದಿದೆ.
ಸ್ಥಳೀಯ ಉಮೈಮ ಎಂಬವರ ಪುತ್ರರಾದ ಮುಸ್ತಫಾ(11) ಮತ್ತು ಅನ್ಸಫ್ ಯಾನೆ ಅಚ್ಚು(5) ಎಂಬ ಬಾಲಕರು ಮಂಗಳವಾರ ಅಂಗನವಾಡಿಗೆ ತೆರಳಿದ್ದು, ಬಳಿಕ ಮನೆಗೆ ಬಂದಿಲ್ಲ. ಆದರೆ ಅಂದು ಬೆಳಗ್ಗೆ ಅಂಗನವಾಡಿಗೂ ಹೋಗಿರಲಿಲ್ಲ.
ಎಂದಿನಂತೆ ಜತೆಯಾಗಿಯೇ ಹೋಗುತ್ತಿದ್ದ ಇವರು ಮಂಗಳವಾರ ಅಂಗನವಾಡಿಗೆ ಎಂದು ಹೊರಡುವಾಗ ಬಟ್ಟೆಯನ್ನೊಳಗೊಂಡ ಪೆಟ್ಟಿಗೆಯೊಂದನ್ನು ಒಯ್ದಿದ್ದರು. ಈ ಪೆಟ್ಟಿಗೆಯನ್ನು ಮನೆ ಸಮೀಪದ ಹಳೆಯ ಟೈಲ್ ಫ್ಯಾಕ್ಟರಿಯ ಗೇಟ್ ಬಳಿ ಎಸೆದಿರುವುದು ಪತ್ತೆಯಾಗಿದೆ. ಸ್ಥಳೀಯ ಹಮೀದ್ ಎಂಬವರು ಪೆಟ್ಟಿಗೆಯಲ್ಲಿ ಬಾಂಬ್ ಇರುವ ಸಾಧ್ಯತೆ ಎಂದು ಎಂದು ಪೊಲೀಸರಿಗೆ ತಿಳಿಸಿದ್ದು, ಇದನ್ನು ತೆರೆದಾಗ ಮಕ್ಕಳ ಬಟ್ಟೆ ಪತ್ತೆಯಾಗಿದೆ. ಇದರ ಪರಿಣಾಮ ಮಕ್ಕಳು ನಾಪತ್ತೆಯಾದ ಮಾಹಿತಿ ಪೊಲೀಸರಿಗೆ ತಿಳಿದುಬಂತು. 
ಉಮೈಮಾ ಅವರ ಮೊದಲ ಪತಿ ಮುನೀರ್ 5 ವರ್ಷಗಳ ಹಿಂದೆ ತ್ಯಜಿಸಿದ್ದು, ಅದರ ಬಳಿಕ ಉಳಿಯತ್ತಡ್ಕ ನಿವಾಸಿ ರಫೀಕ್ನನ್ನು 1 ವರ್ಷದ ಹಿಂದೆ ವಿವಾಹ ಆಗಿದ್ದಾರೆ.
ಮಕ್ಕಳನ್ನು ಅಜ್ಜಿ ಸುಹರಾ ನೋಡಿಕೊಳ್ಳುತ್ತಿದ್ದು, ಮಂಗಳವಾರ ಮಕ್ಕಳು 100 ರೂ. ಕದ್ದಿರುವುದು ಕೂಡಾ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
 
ಬಾವಿಗೆ ಬಿದ್ದು ಆತ್ಮಹತ್ಯೆ
 
ಕಾಸರಗೋಡು: ಟಿ.ಟಿ.ಸಿ. ಕೋಸರ್ಿಗೆ ಪ್ರವೇಶ ಲಭಿಸಿಲ್ಲ ಎಂದು ನೊಂದು ವಿದ್ಯಾಥರ್ಿನಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಚೀಮೇನಿ ಸಮೀಪದ ಕೊಡಕ್ಕಾಡು ಎಂಬಲ್ಲಿ ಬುಧವಾರ ನಡೆದಿದೆ.
ಕೊಡಕ್ಕಾಡು ನಿವಾಸಿ ಪಿ.ಸುಕುಮಾರ ಎಂಬವರ ಪುತ್ರಿ ಪ್ರಿಯಾ(18) ಸಾವನ್ನಪ್ಪಿದವಳು. 
  


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಕೊಳವೆ ಬಾವಿ ದುರಸ್ತಿಗೆ ಬಿ.ಜೆ.ಪಿ. ಆಗ್ರಹ


ಮಂಜೇಶ್ವರ: ಇಲ್ಲಿನ ದೈಗೋಳಿ ಭಜನಾ ಮಂದಿರ ಸಮೀಪದ ಕೊಳವೆ ಬಾವಿಯನ್ನು ದುರಸ್ತಿಗೊಳಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹರಿಸಬೇಕು ಎಂದು ಸ್ಥಳೀಯ ಬಿ.ಜೆ.ಪಿ. ಮತ್ತು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಕೊಳವೆ ಬಾವಿ ಸಮಸ್ಯೆ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಫಲಕಾರಿಯಾಗಿಲ್ಲ ಎಂದೂ ಅದು ತಿಳಿಸಿದೆ.

 
ಇಂದು ಪರಿಹಾರ ಧನ ವಿತರಣೆ
 
ಮಂಜೇಶ್ವರ:  ಇತ್ತೀಚೆಗೆ ಅಪಘಾತದಲ್ಲಿ ಸಾವಿಗೀಡಾದ ಹೊಸಂಗಡಿ ನಿವಾಸಿ ಕೌಶಿಕ್ ಬಿ. ಅವರ ಕುಟುಂಬಕ್ಕೆ ಪಿ.ಎ.ಸಿ.ಎಲ್. ಹೂಡಿಕೆದಾರರಿಗೆ ನೀಡುವ ಅಪಘಾತ ಪರಿಹಾರ ನಿಧಿಯ ಯೋಜನೆಯಡಿ ಪರಿಹಾರ ಧನವನ್ನು ಇದೇ 13ರಂದು ಹೊಸಂಗಡಿಯ ಹಿಲ್ ಸೈಡ್ ಸಭಾಂಗಣದಲ್ಲಿ ಯುವ ಮೋಚರ್ಾ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ವಿತರಿಸುವರು.
 
 
 
15ರಂದು ಸ್ವಾತಂತ್ರ್ಯ ಸಂರಕ್ಷಣಾ ಸಂಗಮ
 
ಮಂಜೇಶ್ವರ: ಭಯೋತ್ಪಾದನೆ, ಕೋಮುವಾದ, ಆಸಿಯನ್ ಒಪ್ಪಂದ ಖಂಡಿಸಿ ಇದೇ 15ರಂದು ಸಿ.ಪಿ.ಐ.ನೇತೃತ್ವದಲ್ಲಿ ಸ್ವಾತಂತ್ರ್ಯ ಸಂರಕ್ಷಣಾ ಸಂಗಮ ಹೊಸಂಗಡಿಯಲ್ಲಿ ಜರುಗಲಿದೆ.
ಕಾರ್ಯಕ್ರಮದ ಯಶಸ್ವಿಗೆ ಸಂಬಂಧಿಸಿ ಹೊಸಂಗಡಿಯಲ್ಲಿ ಇತ್ತೀಚೆಗೆ ಸಿಪಿಐ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದಯಕರ ಮಾಡ ಅಧ್ಯಕ್ಷತೆ ವಹಿಸಿದ್ದರು.
ಪಕ್ಷದ ಮುಂದಾಳು ಬಿ.ವಿ.ರಾಜನ್(ಅಧ್ಯಕ್ಷ) ಮತ್ತು ಗಂಗಾಧರ ಕೊಡ್ಡೆ(ಪ್ರಧಾನ ಸಂಚಾಲಕ) ಅವರ ನೇತೃತ್ವದಲ್ಲಿ ಸ್ವಾಗತ ಸಮಿತಿಯಲ್ಲಿ ರೂಪಿಸಲಾಗಿದೆ.

 
ಅಂತರರಾಜ್ಯ ಜೂಜಾಟ ಕೇಂದ್ರಕ್ಕೆ ದಾಳಿ: 42 ಮಂದಿ ಸೆರೆ
 
ಮಂಜೇಶ್ವರ: ತಲಪಾಡಿಯ ಅಂತರರಾಜ್ಯ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು 42 ಮಂದಿ ಸಹಿತ 85 ಸಾವಿರ ರೂ.ಗಳನ್ನು ವಶಪಡಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕೈಕಂಬ ಬಿ.ಸಿ.ರೋಡ್ನ ಶಶಿಧರ ಸಾಲಿಯಾನ್, ಅಡ್ಕ ಪಳ್ಳದ ಸುರೇಶ್ ಕುಮಾರ್, ಕೋಟೆಕ್ಕಾರಿನ ಝೈನುದ್ದೀನ್, ಮಾಡೂರು ಸೈಯಿದ್, ತಲಪಾಡಿ ಚೆಕ್ಪೋಸ್ಟ್ ಸಮೀಪದ ಹನೀಫ್, ರಾಬಟರ್್, ಶ್ರೀನಿವಾಸ ಸಹಿತ 42 ಮಂದಿಯನ್ನು ಡಿವೈಎಸ್ಪಿ ಅಬ್ದುಲ್ ಗಫೂರ್, ಕುಂಬಳೆ ಸಿ.ಐ.ದಾಮೋದರನ್, ಮಂಜೇಶ್ವರ ಎಸ್.ಐ.ವಿ.ವಿ.ಮನೋಜ್ ನೇತೃತ್ವದ ಪೊಲೀಸರು ಬಂಧಿಸಿದರು.
ಜೂಜಾಟ ನಡೆಯುವ ಈ ಕೇಂದ್ರ ರಾಜ್ಯದ ಆಡಳಿತ ಪಕ್ಷದ ಘಟಕ ಪಕ್ಷದ ಪ್ರಾದೇಶಿಕ ನಾಯಕರೊಬ್ಬರ ಸ್ವಾಧೀನ ಹೊಂದಿದೆ ಎಂಬ ಆರೋಪ ಕೇಳಿಬಂದಿದೆ. ಈ ಅಡ್ಡೆಗೆ ಎರಡೂ ರಾಜ್ಯದ ಗಣ್ಯರೂ ಬರುತ್ತಿದ್ದು, ರಾತ್ರಿ ವೇಳೆ ನಡೆಯುತ್ತಿದ್ದರೆ ಭಾರಿ ಕುಳಗಳು ಬಲೆಗೆ ಬೀಳುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

 
ಬಸ್ಸಿಗೆ ಕಲ್ಲೆಸೆದು ಹಾನಿ: ಲಾಠಿ ಪ್ರಹಾರ
 
ಮಂಜೇಶ್ವರ: ಇಲ್ಲಿನ ಉದ್ಯಾವರ 10ನೇ ಮೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ದುಷ್ಕಮರ್ಿಗಳು ಖಾಸಗಿ ಬಸ್ಸಿಗೆ ಕಲ್ಲೆಸೆದ ಘಟನೆ ಮರುಕಳಿಸಿದೆ.
ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಹಿಂಸಾಚಾರದಲ್ಲಿ ನಿರತರಾಗಿದ್ದ ಯುವಕರ ಮೇಲೆ ಲಾಠಿ ಪ್ರಹಾರ ನಡೆಸಿದರು. ಕುಂಜತ್ತೂರು, ಮಾಡ, ಉದ್ಯಾವರ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕೆಲವು ಪಡ್ಡೆ ಹುಡುಗರು ಗುಂಪು ಕಟ್ಟಿಕೊಂಡು ಬಸ್ಸುಗಳಿಗೆ ಕಲ್ಲೆಸೆದು ಉದ್ವಿಗ್ನ ವಾತಾವರಣ ನಿಮರ್ಿಸಲು ಯತ್ನಿಸುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ. 
   
 
ಜಬ್ಬಾರ್ ಬಂಧನ
 
ಮಂಜೇಶ್ವರ: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕಬಡ್ಡಿ ಜಬ್ಬಾರ್ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಈತ ಪಾವೂರಿನಲ್ಲಿ ಅಕ್ರಮ ಸಾರಾಯಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದನು.

 
 
ಹಟ್ಟಿಗೆ ಬೆಂಕಿ: 1 ಲಕ್ಷ ರೂ.ಗಳ ನಷ್ಟ
 
ಮಂಜೇಶ್ವರ: ಇಲ್ಲಿನ ಸುಂಕದಕಟ್ಟೆ ಸಮೀಪದ ದೈಗೋಳಿಯಲ್ಲಿ ದೋಜು ಮೂಲ್ಯ ಎಂಬವರ ಮನೆ ಸಮೀಪದ ಹಟ್ಟಿಗೆ ಬೆಂಕಿ ಬಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಹಟ್ಟಿಯ ಬಳಿ ಸಂಗ್ರಹಿಸಿದ್ದ ಅಡಿಕೆ, ತೆಂಗಿನಕಾಯಿ, ಮರಮಟ್ಟುಗಳು ಉರಿದು 1 ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿದೆ.
  

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ತೆಂಗಿನ ಗಿಡ ನೆಡಲು 500 ಕೋಟಿ ರೂ.

 
ಕಾಸರಗೋಡು: ಕೇರಳದ 4 ಜಿಲ್ಲೆಗಳಲ್ಲಿ ರೋಗಬಾಧಿತ 1 ಕೋಟಿ ತೆಂಗಿನ ಮರಗಳನ್ನು ಕಡಿದುರುಳಿಸಿ ಅಲ್ಲಿ ಅತ್ಯಧಿಕ ಇಳುವರಿ ನೀಡುವ ತೆಂಗಿನ ಗಿಡಗಳನ್ನು ನೆಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿಧಾನಸಭಾ ಉಪಸಮಿತಿಯ ಅಧ್ಯಕ್ಷ ರಾಜಾಜಿ ಮ್ಯಾಥ್ಯೂ ಥೋಮಸ್ ತಿಳಿಸಿದ್ದಾರೆ.
ಇಲ್ಲಿನ ಸಿಪಿಸಿಆರ್ಐನಲ್ಲಿ ಜರುಗಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತೆಂಗಿನ ಮರಗಳನ್ನು ಕಡಿದು ಹಾಕಲು ಪ್ರತಿ ಮರಕ್ಕೆ 500 ರೂ.ಗಳಂತೆ ರಾಜ್ಯದಲ್ಲಿ 500 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ 250 ಕೋಟಿ ರೂ. ಸಕರ್ಾರ ಮತ್ತು 250 ಕೋಟಿ ರೂ. ತೆಂಗು ಅಭಿವೃದ್ಧಿ ಮಂಡಳಿ ವಿನಿಯೋಗಿಸಲಿದೆ.
ತೆಂಗಿನಿಂದ ಮೌಲ್ಯ ವಧರ್ಿತ  ಉತ್ಪನ್ನಗಳ ತಯಾರಿಯ ಬಗ್ಗೆ ನಿಗಾ ವಹಿಸಲಾಗುವುದು ಎಂದವರು ವಿವರಿಸಿದರು.
ಸಿ.ಕೆ.ಪದ್ಮನಾಭನ್, ಕೆ.ಮಹಮ್ಮದ್, ಕೃಷಿ ಅಧಿಕಾರಿ ಶಿವಪ್ರಸಾದ್ ಹಾಜರಿದ್ದರು.

 
ಕುಣಿಕುಳ್ಳಾಯ ಸಂಸ್ಮರಣೆ
 
ಕಾಸರಗೋಡು: ಮಾಜಿ ಶಾಸಕ, ಕನ್ನಡ ಹೋರಾಟಗಾರ ಯು.ಪಿ.ಕುಣಿಕುಳ್ಳಾಯರ ಸಂಸ್ಮರಣಾ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಇದೇ 13ರಂದು ನಗರದ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ನಡೆಯಲಿದೆ.
ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಐ.ವಿ.ಭಟ್ ಸಂಸ್ಮರಣ ಭಾಷಣ ಮಾಡುವರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು. ಎ.ವಿ.ಶ್ಯಾನುಭೋಗ್, ಅಡೂರು ಉಮೇಶ್ ನಾಯ್ಕ್, ಮುರಳೀಧರ ಬಳ್ಳಕ್ಕುರಾಯ ಮಾತನಾಡುವರು. 
 
 
ಮಲೇರಿಯಾ ರೋಗ: ರಾ.ಸೇ.ಯೋ. ಸಮೀಕ್ಷೆ
 
ಕಾಸರಗೋಡು: ಕಾಸರಗೋಡು ಸಕರ್ಾರಿ ಕಾಲೇಜು ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಮಲೇರಿಯಾ ರೋಗದ ಬಗ್ಗೆ ಸಮೀಕ್ಷೆ ನಡೆಯಿತು.
ಸಮೀಕ್ಷಾ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜೋಸ್ ಜಿ. ಡಿಕ್ರೂಸ್ ಉದ್ಘಾಟಿಸಿದರು.
ಚಂದ್ರನ್ ಜಿ. ಅಧ್ಯಕ್ಷತೆ ವಹಿಸಿದ್ದರು. ವಾಡರ್ು ಸದಸ್ಯೆ ದುಗರ್ಾ, ಮಾಜಿ ಕೌನ್ಸಿಲರ್ ನಾರಾಯಣನ್, ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಶ್ರೀನಾಥ್ ಎ, ರಾ.ಸೇ.ಯೋ. ಯೋಜನಾಧಿಕಾರಿಗಳಾದ ಮಹಮ್ಮದಾಲಿ ಪೆರ್ಲ, ರತ್ನಾಕರ ಮಲ್ಲಮೂಲೆ, ಜಿಲ್ಲಾ ಮಲೇರಿಯಾ ಅಧಿಕಾರಿ ವಿ.ಸುರೇಶನ್, ಆರೋಗ್ಯ ಅಧಿಕಾರಿ  ಗೋಪಾಲಕೃಷ್ಣ, ಇಬ್ರಾಹಿಂ, ಸತೀಶ್ ಕುಮಾರ್, ಮಧುಸೂದನ, ರಾ.ಸೇ.ಯೋ. ಕಾರ್ಯದಶರ್ಿಗಳಾದ ಖಾಲಿದ್, ಮಹೇಶ್, ಜಯಕುಮಾರ್, ಪ್ರಜಿತಾ, ನಯನ  ಹಾಜರಿದ್ದರು.
25 ವಿದ್ಯಾಥರ್ಿಗಳು 300ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಸೊಳ್ಳೆ ನಿವಾರಣೆಯ ಬಗ್ಗೆ ಜಾಗೃತಿ ಮೂಡಿಸಿದರು.
 
 
ಆ.19ರಂದು ಕಯ್ಯಾರರಿಗೆ ಗೌರವ ಸದಸ್ಯತ್ವ ಪ್ರದಾನ
 
ಕಾಸರಗೋಡು: ಹಿರಿಯ ಕವಿ ಡಾ.ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಸಮಾರಂಭ ಇದೇ 19ರಂದು ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಜರುಗಲಿದೆ.
ಅಂದು ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಆರ್.ಕೆ. ಗೌರವ ಸದಸ್ಯತ್ವ ಪ್ರದಾನ ಮಾಡುವರು. 
ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು.
ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಅಧ್ಯಕ್ಷ ಅಂಬಾತನಯ ಮುದ್ರಾಡಿ ಮತ್ತು ದ.ಕ. ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
 
 
ನೀಚರ್ಾಲಿನಲ್ಲಿ ಸಂಸ್ಕೃತ ದಿನಾಚರಣೆ

ಕಾಸರಗೋಡು: ದೇವ ಭಾಷೆ ಸಂಸ್ಕೃತ ಮೂಲೆಗುಂಪಾಗುತ್ತಿದೆ. ಅದರ ಪುನರುತ್ಥಾನ ಕಾರ್ಯ ಆಗಬೇಕಿದೆ. ಸಂಸ್ಕೃತದ ಆಶ್ರಯದಲ್ಲಿ ವಿವಿಧ ಭಾಷೆಗಳು ಬೆಳೆಯುತ್ತಿರುವುದು ಸಂತಸದ ವಿಚಾರ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಡಿ.ರಾಮಕೃಷ್ಣ ಭಟ್ ಬೇಳ ಅಭಿಪ್ರಾಯಪಟ್ಟರು.
ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಸಂಸ್ಕೃತ ಕೌನ್ಸಿಲ್ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ಸಂಸ್ಕೃತ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬದಿಯಡ್ಕ ಬಿ.ಆರ್.ಸಿಯ ಬಿ.ಪಿ.ಒ ಪ್ರದೀಪ್ ಕುಮಾರ್ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ ಖಂಡಿಗೆ ಶಾಮ ಭಟ್ಟರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ಉಂಡೆಮನೆ ಗಣಪತಿ ಭಟ್ ಸನ್ಮಾನಿತರ ಕಿರು ಪರಿಚಯ ಮಾಡಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್ ಮತ್ತು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹಾಜರಿದ್ದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಎಸ್.ವಿ.ಭಟ್ ಸ್ವಾಗತಿಸಿ, ಕುಂಬಳೆ ಉಪಜಿಲ್ಲಾ ಸಂಸ್ಕೃತ ಕೌನ್ಸಿಲ್ ಕಾರ್ಯದಶರ್ಿ ಸುಕುಮಾರ  ಬೆಟ್ಟಂಪಾಡಿ ವಂದಿಸಿದರು. ನವಜೀವನ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಡಾ.ಎಸ್.ಸದಾಶಿವ ಭಟ್ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಸಂಸ್ಕೃತ ಶಾಸ್ತ್ರ ಪ್ರದಶರ್ಿನಿಯನ್ನು ಆಯೋಜಿಸಲಾಗಿತ್ತು. ಸಂಸ್ಕೃತ ಸಂಘಗಾನಂ, ಗಾನಾಲಾಪನಂ, ರಸಪ್ರಶ್ನೆ, ಅಷ್ಟಪದಿ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Tuesday, August 11, 2009

ಮೂರೇ ದಿನಗಳಲ್ಲಿ ಪಾಸ್ ಪೋರ್ಟ್!/Passport with in 3 Days!

ಬೆಂಗಳೂರು, ಆ. 11: ಪಾಸ್ ಪೋರ್ಟುಗಳನ್ನು ಚಕಚಕನೆ ಬಿಡುಗಡೆ ಮಾಡಲು ಸಾಧ್ಯವಾಗುವಂತಹ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು (PSK) ಭಾರತದ ಮುಖ್ಯ ನಗರಗಳಲ್ಲಿ ಸ್ಥಾಪಿಸಲು ವಿದೇಶಾಂಗ ಖಾತೆಯ ಮಂತ್ರಾಲಯ ನಿರ್ಧರಿಸಿದೆ. ಸದ್ಯ ಇರುವ 45 ದಿನಗಳ ಕಾಯುವ ಅವಧಿಯನ್ನು ಕೇವಲ, ಕೇವಲ ಮೂರೇ ದಿನಗಳಿಗೆ ಇಳಿಸುವ ಮಹತ್ವಾಕಾಂಕ್ಷೆಯ ಪ್ರಯತ್ನ ಇದಾಗಿದೆ. ತತ್ಕಾಲ್ ಪಾಸ್ ಪೋರ್ಟುಗಳನ್ನು ಅಂದಂದೇ ಬಿಡುಗಡೆ ಮಾಡಲು ಸಾಧ್ಯವಾಗುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.

ರಾಷ್ಟಾದ್ಯಂತ 77 ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದ್ದು ಮೊದಲ ಕೇಂದ್ರ ಬೆಂಗಳೂರು ಮತ್ತು ಚಂಡೀಗಢದಲ್ಲಿ ಆರಂಭವಾಗಲಿವೆ. ಈ ಕೇಂದ್ರಗಳ ಕಾರ್ಯಕ್ಷಮತೆ ಮತ್ತು ಜನಮನ್ನಣೆಯನ್ನು ಗಮನಿಸಿ ಇತರ ನಗರಗಳಲ್ಲಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ವಿದೇಶಾಂಗ ಖಾತೆಯ ರಾಜ್ಯ ಸಚಿವ ಶಶಿ ತರೂರ್ ಹೇಳಿದ್ದಾರೆ.

ಪಾಸ್ ಪೋರ್ಟ್ ಅರ್ಜಿಗಳನ್ನು ಪರಿಷ್ಕರಿಸಲು ಈಗ ತಿನ್ನುತ್ತಿರುವ ಸಮಯವನ್ನು ಕಡಿತಗೊಳಿಸುವುದು ಹಾಗೂ ಪಾಸ್ ಪೋರ್ಟ್ ಕಚೇರಿಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಪಾಸ್ಪೋರ್ಟ್ ಅರ್ಜಿದಾರರಿಂದ ಹಣ ಕೀಳುವ ದಲ್ಲಾಳಿಗಳನ್ನು ನಿವಾರಿಸುವುದು ಇಲಾಖೆಯ ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ ಮತ್ತು ಇದಕ್ಕಾಗಿ ಪೊಲೀಸ್ ಪಡೆಯ ಸಹಾಯ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ. ಮತ್ತು ಪಾರ್ಸೋರ್ಟಿಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಗೆ ಉತ್ತರಿಸಲು ರಾಷ್ಟ್ರ ಮಟ್ಟದಲ್ಲಿ ಎರಡು ಕಾಲ್ ಸೆಂಟರ್ ಗಳನ್ನು ತೆರೆಯುವ ಯೋಜನೆಯೂ ಇದೆ ಅವರು ಹೇಳಿದ್ದಾರೆ.

ಸಾವಿರ ಕೋಟಿ ರು. ಬಂಡವಾಳದ ಪಾರ್ಸೋರ್ಟ್ ಯಾಂತ್ರೀಕರಣ ಯೋಜನೆಯ ಅನುಷ್ಠಾನಕ್ಕೆ ವಿದೇಶಾಂಗ ಸಚಿವಾಲಯ ಸಾಫ್ಟ್ ವೇರ್ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಜೊತೆ ಒಪ್ಪಂದ ಮಾಡಿಕೊಂಡಿದೆ. ರಾಷ್ಟ್ರೀಯ ಇ-ಆಡಳಿತ ಯೋಜನೆಯಡಿ ಕೇಂದ್ರ ಪ್ರಾರಂಭಿಸಿರುವ ಅತಿ ಬೃಹತ್ ಯೋಜನೆ ಇದು.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಅಪಘಾತ ಪ್ರಕರಣ/ Accident In Karkala

ದಿನಾಂಕ 10/8/09 ರಂದು ಸಂಜೆ ಸುಮಾರು 5:20 ಗಂಟೆಯ ಸಮಯಕ್ಕೆ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಹಾಳೆಕಟ್ಟೆ ಎಂಬಲ್ಲಿ ಕಾರ್ಕಳ ಪಡುಬಿದ್ರಿ ರಸ್ತೆಯಲ್ಲಿ, ಸವರ್ಿಸ್ ಬಸ್ಸು ನಂಬ್ರ ಕೆಎ.20.ಎ.7515 ನೇದರ ಚಾಲಕ ರಂಜನ್ ಎಂಬವರು ಬಸ್ಸನ್ನು ಅತಿವೇಗ ಹಾಗೂ ಅಜಾಗರೂಕತೆುಂದ ಚಲಾುಸಿಕೊಂಡು ಬಂದು, ಹಾಳೆಕಟ್ಟೆ ಬಸ್ಸು ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸದೆ, ನಿಲ್ದಾಣದಿಂದ ಸ್ವಲ್ಪ ಮುಂದಕ್ಕೆ ನಿಲ್ಲಿಸಿದ್ದು ಈ ಸಮಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಿಟ್ಟೆ ಕಾಲೇಜಿನ ವಿದ್ಯಾಥರ್ಿ ಸುಜನ್ ಎಂಬಾತನು ಬಸ್ಸಿನಿಂದ ಕೆಳಗೆ ಇಳಿಯಲು ಹೋದಾಗ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ಏಕಾಎಕಿಯಾಗಿ ಬಸ್ಸನ್ನು ಚಲಾುಸಿದ ಪರಿಣಾಮ ಸುಜನ್ ಇವರು ಆಯತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದು ಅವರ ಬಲ ಕಾಲಿಗೆ ರಕ್ತಗಾಯವಾಗಿರುತ್ತದೆ. ಎಂಬುದಾಗಿ ಅಶೋಕ ಎಸ್. ಪೂಜಾರಿ (39), ತಂದೆ: ಸಂಕಪ್ಪ ಪೂಜಾರಿ, ವಾಸ: ದಾರೆದಡ್ಡು ಮನೆ, ಕಲ್ಯಾ ಅಂಚೆ, ನಂದಳಿಕೆ ಗ್ರಾಮ, ಕಾರ್ಕಳ ತಾಲೂಕು ರವರು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/09 ಕಲಂ 279, 337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ವರದಕ್ಷಿಣೆ ಕಿರುಕುಳ ಪ್ರಕರಣ
 
ಉಡುಪಿ ತಾಲೂಕು ಬಡಾನಿಡಿಯೂರು,ಲಕ್ಷ್ಮೀ ನಿಲಯ ವಾಸಿ ಶ್ರೀಮತಿ ಕಕರ್ೇರ (22) ಎಂಬವರು ಕನಕಡ, ಕುತ್ಪಾಡಿಯ, ರಾಜೇಶ್ವರಿ ನಿವಾಸದ, ತಂದೆ: ಅನಂತ ಅಂಚನ್ ರವರನ್ನು ದಿನಾಂಕ: 10/02/08 ರಂದು ಹಿಂದೂ ಸಂಪ್ರದಾಯದಂತೆ ಕೊಡವೂರು ಗ್ರಾಮದ ಮಲ್ಪೆ ಏಳೂರು ಮೊಗವೀರ ಭವನದಲ್ಲಿ ವಿವಾಹವಾಗಿದ್ದು, ಮದುವೆ ಸಮಯ ಹಾಗೂ ಬಳಿಕ ಆರೋಪಿ ವಸಂತ್ ಕುಮಾರ್ ರವರಿಗೆ ನಗದು 1,10,000/- ರೂಪಾು ನೀಡಿದಲ್ಲದೇ 20 ಪವನ್ ಚಿನ್ನವನ್ನು ಆರೋಪಿಯ ಬೇಡಿಕೆಯಂತೆ ಹಾಕಿದ್ದು, ಮದುವೆ ಬಳಿಕ ಲಕ್ಷ್ಮೀಯು ತನ್ನ ಗಂಡನ ಮನೆಯಾದ ಕುತ್ಪಾಡಿಯ ರಾಜೇಶ್ವರಿ ನಿವಾಸದಲ್ಲಿ ಗಂಡನೊಂದಿಗೆ ವಾಸವಾಗಿದ್ದು, ಆ ಸಮಯ ಆರೋಪಿಗಳಾದ 1) ಶ್ರೀಮತಿ ಬೇಬಿ(55) ಗಂಡ: ಅನಂತ ಕಾಂಚನ್, ವಾಸ: ರಾಜೇಶ್ವರಿ ನಿವಾಸ, ಕುತ್ಪಾಡಿ, ಕನಕಡ, ಉಡುಪಿ 2) ಯಶೋಧ(38) ಗಂಡ: ಪೂವಪ್ಪ, ವಾಸ: ವಾಸ: ರಾಜೇಶ್ವರಿ ನಿವಾಸ, ಕುತ್ಪಾಡಿ, ಕನಕಡ, ಉಡುಪಿ 3) ಪದ್ಮನಾಭ(29) ತಂದೆ: ಅನಂತ ಕಾಂಚನ್ ವಾಸ: ರಾಜೇಶ್ವರಿ ನಿವಾಸ, ಕುತ್ಪಾಡಿ, ಕನಕಡ, ಉಡುಪಿ 4) ಕಲಾವತಿ(26) ಗಂಡ: ಜಗದೀಶ ವಾಸ: ರಾಜೇಶ್ವರಿ ನಿವಾಸ, ಕುತ್ಪಾಡಿ, ಕನಕಡ, ಉಡುಪಿ ಎಂಬವರುಗಳು ಮಾನಸಿಕವಾಗಿ ಹಿಂಸೆ ನೀಡಿದಲ್ಲದೇ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದು ತನ್ನ ಮನೆಗೆ ಕರೆದುಕೊಂಡು ಹೋಗದೇ ಇರುವುದರಿಂದ ತನ್ನ ತಾು ಮನೆ ತೊಟ್ಟಂಗೆ ಬಂದು ವಾಸವಾಗಿದ್ದು, ಸಂಬಂಧಿಕರಿಗೆ ತಿಳಿಸಿದರೇ ಜೀವಸಹಿತ ಬಿಡುವುದಿಲ್ಲವಾಗಿ ಆರೋಪಿ ವಸಂತ್ಕುಮಾರ್ ಬೆದರಿಕೆ ಹಾಕಿರುತ್ತಾರೆಂಬುದಾಗಿ ಮಾನ್ಯ ಎಸಿಜೆ(ಜೂಡಿ)& ಜೆಎಂಎಫ್ಸಿ ನ್ಯಾಯಾಲಯದಿಂದ ಬಂದ ಖಾಸಗಿ ಪಿಯರ್ಾದಿ ನಂ: 409/09ನ್ನು ಮಲ್ಪೆ ಠಾಣೆಯಲ್ಲಿ ಸ್ವೀಕರಿಸಿದ್ದು, ಈ ಬಗ್ಗೆ ಶ್ರೀಮತಿ ಕಕರ್ೇರ (22)ರವರ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/09 ಕಲಂ 498 (ಎ), 504,506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಮೋಸ ಪ್ರಕರಣ
 
ಉಡುಪಿ ತಾಲೂಕು ಕುಂಜಿಬೆಟ್ಟುವಿನ, ಅರ್ಚನಾ ಆಕರ್ೇಡ, 4ನೇ ಫ್ಲೋರ್, ಎ ವಿಂಗ್, ನಂ 401 ನೇ ವಾಸಿ ಮಂಜುನಾಥ ಶೇಟ್(30) ತಂದೆ: ನರಸಿಂಹ ಶೇಟ್ ಇವರಿಗೆ ಆರೋಪಿ ಸಂದೀಪ್ ಡಿ. ಜೈನ್, ಕೇರ್ ಆಫ್: ಶ್ರೀನಿವಾಸ ಭಟ್, ಉಚ್ಚಿಲ ರಾಘವೇಂದ್ರ ಮಾತಾ, ಬಾಲಾಜೀ ಲೇ ಔಟ್, ಕನ್ನಪರ್ಾಡಿ, ಉಡುಪಿ. ಎಂಬವರಿಗೆ ಬ್ಯಾಂಕ್ ಮುಖೇನ ಕಡಿಮೆ ದರದಲ್ಲಿ ಚಿನ್ನ ತೆಗೆಸಿಕೊಡುತ್ತೇನೆಂದು ಹೇಳಿದ್ದು, ದಿನಾಂಕ: 17/11/2006 ಕಡೇಕಾರು ಗ್ರಾಮದ ಕನ್ನರ್ಪಾಡಿ ಬಾಲಾಜೀ ಲೇಔಟ್ನಲ್ಲಿರುವ ಆರೋಪಿತನ ಮನೆಯಲ್ಲಿ ಮಾತುಕೆತೆ ಮಾಡಿ 8,30,000/- ರೂ ನಗದನ್ನು ಆರೋಪಿಯು ತಿಳಿಸಿದಂತೆ ಕುಂದಾಪುರದ ಕೃಷ್ಣಮೂತರ್ಿ ಶೇಟ್ರವರ ಖಾತೆ ಕೃಷ್ಣ ಮಾಕರ್ೇಟಿಂಗ್ ಏಜನ್ಸಿಸ್, ಸಿಬಿ.ಸಿ.ಎ-46, ಕಾರ್ಪರೇಶನ್ ಬ್ಯಾಂಕ್, ಉಡುಪಿ ಪೌಂಡಸರ್್ ಶಾಖೆಯಲ್ಲಿ ಜಮಾ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಆರೋಪಿಯು ಅರ್ಧ ಕೆ.ಜಿ ಚಿನ್ನವನ್ನು ಮಾತ್ರ ಬ್ಯಾಂಕಿನಿಂದ ಪಡೆದು ನೀಡಿದ್ದು, ಉಳಿದ ಅರ್ಧ ಕೆ.ಜಿ ಚಿನ್ನವನ್ನು ನಾಳೆ ನೀಡುವುದಾಗಿ ತಿಳಿಸಿ ಚಿನ್ನವನ್ನಾಗಲೀ, ಹಣವನ್ನಾಗಲೀ ಈತನಕ ಕೊಡದೇ ಮೋಸ ಮಾಡಿರುತ್ತಾನೆ ಈ ಬಗ್ಗೆ ಮಾನ್ಯ ಸಿವಿಲ್ ಜಡ್ಜ್(ಹಿರಿಯ ವಿಭಾಗ) & ಸಿ.ಜೆ.ಎಂ ನ್ಯಾಯಾಲಯದಿಂದ ಬಂದ ಖಾಸಗಿ ಪಿಯರ್ಾದಿ ನಂ: 289/09ನ್ನು ಮಲ್ಪೆ ಠಾಣೆಯಲ್ಲಿ ಸ್ವೀಕರಿಸಿದ್ದು ಮಂಜುನಾಥ ಶೇಟ್(30)ರವರು ಮಲ್ಪೆ ಠಾಣೆಗೆ ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/09 ಕಲಂ ಕಲಂ 419, 420 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಅಶ್ಲೀಲ ಸಿ.ಡಿ ಮಾರಾಟಗಾರನ ಬಂಧನ
ದಿನಾಂಕ 11/08/09 ರಂದು ಕುಂದಾಪುರ ತಾಲೂಕಿನ ಕೋಟೇಶ್ವರದ ರಾಧಿಕಾ ಕ್ಯಾಸೆಟ್ ಕಾರ್ನರ್ ಎಂಬ ಅಂಗಡಿಯ ಎದುರಿನಲ್ಲಿ ಹೋಂಡಾ ಆಕ್ಟಿವ್ ಮೋಟಾರು ಬೈಕಿನಲ್ಲಿ ಕುಳಿತು ಅಶ್ಲೀಲ ಸಿ.ಡಿ ಗಳನ್ನು ಮಾರಾಟಮಾಡುತ್ತಿದ್ದ ಅಂಗಡಿ ಮಾಲಿಕ ಪ್ರಕಾಶ್ ಚಂದ್ರ ಕುಮಾರ ಪ್ರಾಯ (38) ವಾಸ: ವಕ್ವಾಡಿ ಕುಂದಾಪುರ ಎಂಬವರನ್ನು ಉಡುಪಿ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕ ಗಣೇಶ್ ಎಂ.ಹೆಗಡೆ ಹಾಗೂ ಸಿಬ್ಬಂದಿಯವರು ಖಚಿತ ಮಾಹಿತಿ ಮೇರೆಗೆ ದಾಳಿನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ ಯಾವುದೇ ಪರವಾನಿಗೆ ಇಲ್ಲದ ಸುಮಾರು 25 ಅಶ್ಲೀಲ ಸಿ.ಡಿಗಳನ್ನು ವಶಪಡಿಸಿಕೊಂಡಿದ್ದು ವಶಪಡಿಸಿಕೊಂಡಿರುವ ಸ್ವತ್ತುಗಳ ಒಟ್ಟು ಮೌಲ್ಯ ರೂ 35,000/-ಆಗಿರುತ್ತದೆ. ಆರೋಪಿ ಹಾಗೂ ಸ್ವತ್ತುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
 
ಚಿನ್ನದ ಸರ ಎಳೆದು ಪರಾರಿ
 
ಶ್ರೀಮತಿ ಬಿ. ಶಂಕರಿ ಭಟ್ (57 ವರ್ಷ) ಗಂಡ: ಡಾ: ಯು. ರಾಮ ಭಟ್, ಪರಾಶರ, ಸುಧೀಂದ್ರ ತೀರ್ಥಮಾರ್ಗ, ಕುಂಜಿಬೆಟ್ಟು, ಉಡುಪಿರವರು ದಿನಾಂಕ 10/08/09 ರಂದು ಸಂಜೆ ಸುಮಾರು 7:30 ಗಂಟೆಗೆ ಎಂದಿನಂತೆ ವಾಕಿಂಗ್ ಮುಗಿಸಿ ತಮ್ಮ ಮನೆಯ ಕಡೆ ಹೋಗುವರೇ ಲಾಲಾಲಜಪತ್ ಮಾರ್ಗದಿಂದ ಶಾರದ ಕಲ್ಯಾಣ ಮಂಟಪದ ಎದುರಾಗಿ ಹೋಗುತ್ತಿರುವಾಗ ಅವರ ಎದುರುಗಡೆಯಿಂದ ಓರ್ವ ಅಪರಿಚಿತ ಸುಮಾರು 30 ವರ್ಷ ಪ್ರಾಯದ ಒಳಗಿನ ತೆಳ್ಳಗಿನ ವ್ಯಕ್ತಿ ಬಗಲಿಗೆ ಚೀಲ ಹಾಕಿಕೊಂಡು ಬರುತ್ತಿದ್ದು ಒಮ್ಮೆಲೆ ಶಂಕರಿ ಭಟ್ರವರ ಕೊರಳಿಗೆ ಕೈ ಹಾಕಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 5 ಪವನ್ ತೂಕದ ಕರಿಮಣಿ ಸರ ಮತ್ತು 2 ಪವನ್ ತೂಕದ ರೋಪ್ ಚೈನನ್ನು ರಭಸದಿಂದ ಎಳೆದು ಶಾರದಾ ಕಲ್ಯಾಣ ಮಂಟಪದ ಎದುರಿನ ರಸ್ತೆ ಅಂದರೆ ಬೀಡಿನಗುಡ್ಡೆ ಕಡೆ ಹೋಗುವ ರಸ್ತೆಯಲ್ಲಿ ಓಡಿ ಹೋಗಿದ್ದು ಎಳೆದುಕೊಂಡು ಹೋದ ಸರಗಳ ಒಟ್ಟು ಮೌಲ್ಯ ಸುಮಾರು ರೂಪಾಯಿ 60,000 ಆಗಬಹುದು ಎಂಬುದಾಗಿ ಶ್ರೀಮತಿ ಶಂಕರಿ ಭಟ್ರವರು ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದು, ಅವರ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 265/09 ಕಲಂ 392 ಐಪಿಸಿಯಂತೆ ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಯ ಬಗ್ಗೆ ಶ್ರಮಿಸಲಾಗುತ್ತಿದೆ.
 
ಜಾತಿ ನಿಂದನೆ - ದೂರು ದಾಖಲು
 
ಗಂಗೊಳ್ಳಿ ಠಾಣಾ ಸರಹದ್ದಿನ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಹಾವಳಿ (60 ವರ್ಷ)ರವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ದಿನಾಂಕ 10-08-09 ರಂದು ಬೆಳಿಗ್ಗೆ 07:30ಗಂಟೆಗೆ ಮನೆಯ ಹತ್ತಿರದ ಸಾರ್ವಜನಿಕ ನಳ್ಳಿಯಿಂದ ನೀರು ತೆಗೆಯಲು ಹೋದಾಗ ಸ್ಥಳೀಯ ನಿವಾಸಿಗಳಾದ ಸಂಜೀವ ಗಾಣಿಗ ಮತ್ತು ಅವರ ಹೆಂಡತಿ ಚಂದು ಅಲಿಯಾಸ್ ಚಂದ್ರಾವತಿ ಗಾಣಿಗರವರು ಹಾವಳಿಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ನಳ್ಳಿಯ ನೀರನ್ನು ತೆಗೆಯಬಾರದಾಗಿ ಬೆದರಿಕೆ ಹಾಕಿದ್ದಲ್ಲದೇ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಹಾವಳಿಯವರು ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 81/09 ಕಲಂ 504, 323, 506 ಜೊತೆಗೆ 34 ಐಪಿಸಿ ಮತ್ತು ಕಲಂ 3 (1) (10) ಎಸ್.ಸಿ./ಎಸ್.ಟಿ ಪಿ.ಎ. ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣ
 
ದಿನಾಂಕ 09/08/2009 ರಂದು 21:00 ಗಂಟೆಗೆ ಕಾಪು ಠಾಣಾ ಸರಹದ್ದಿನ ಮೂಳೂರು ಗ್ರಾಮದ, ಮೂಳೂರು ರಾ.ಹೆ 17 ರಲ್ಲಿ ಪಡುಬಿದ್ರೆ ಕಡೆಯಿಂದ ಕಾಪು ಕಡೆಗೆ ಕೆಎ 20 ಯು 7996 ನೇ ಮೋಟಾರು ಸೈಕಲನ್ನು ಅದರ ಸವಾರರಾದ ಪ್ರಶಾಂತ (28 ವರ್ಷ) ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಮೋಟಾರು ಸೈಕಲ್ ಸವಾರರಾದ ಪ್ರಶಾಂತ ಎಂಬವರಿಗೆ ಸಾಧಾರಣಾ ಸ್ವರೂಪದ ಹಾಗೂ ಸಹ ಸವಾರರದ ಪ್ರವೀಣ್ ಶೆಟ್ಟಿ (25 ವರ್ಷ) ಎಂಬವರಿಗೆ ತೀವ್ರ ತರಹದ ಗಾಯವಾಗಿರುತ್ತದೆ ಎಂಬುದಾಗಿ ಶರತ್ ಶೆಟ್ಟಿ (28 ವರ್ಷ) ತಂದೆ: ಜಯರಾಮ ಶೆಟ್ಟಿ, ವಾಸ: ಅಮಾಸೆಬೈಲು, ಬೇಟ್ಕೇರಿ, ಮೇಲ್ಮನೆ, ಕುಂದಾಪುರರವರು ಕಾಪು ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 161/09 ಕಲಂ 279, 338 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಗಾಯಾಳುಗಳಿಬ್ಬರೂ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದವರಾಗಿರುತ್ತಾರೆ.

ದಿನಾಂಕ 10/08/09 ರಂದು 15:00 ಗಂಟೆಗೆ ಕಾರು ನಂಬ್ರ ಕೆಎ 20 ಎನ್ 5727ನ್ನು ಅದರ ಚಾಲಕ ಕೃಷ್ಣ ಪೂಜಾರಿ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬಂದು ಕಾರ್ಕಳ ತಾಲೂಕು ನೀರೆ ಗ್ರಾಮದ ಅನಂತಬೆಟ್ಟು ಎಂಬಲ್ಲಿ ಸಾರ್ವಜನಿಕ ಮುಖ್ಯರಸ್ತೆಯಲ್ಲಿ ಉಡುಪಿ ಕಡೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ತೂಫಾನ್ ಟ್ರಾಕ್ಸ್ ನಂಬ್ರ ಕೆಎ 27 ಎ 2827ಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಘಟನೆಯಲ್ಲಿ ಯಾರಿಗೂ ಗಾಯವಾಗಿರುವುದಿಲ್ಲ. ಈ ಅಪಘಾತದ ಬಗ್ಗೆ ಹಾವೇರಿ ತಾಲೂಕಿನ ಹೊಸಳ್ಳಿ ಸವಣೂರು ವಾಸಿ ಶಿವರುದ್ರಪ್ಪ (35 ವರ್ಷ) ರವರು ದೂರು ನೀಡಿದ್ದು ಅವರ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 112/09 ಕಲಂ 279 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ 10/08/2009ರಂದು ಸಂಜೆ 19:30ಗೆ ಮನೆಗೆ ಬೇಕಾಗುವ ದಿನಸಿ ಸಾಮಾನುಗಳನ್ನು ತರಲು ಉಡುಪಿ ನಗರ ಠಾಣಾ ಸರಹದ್ದಿನ ಬೈಲೂರು, 76 ಬಡಗಬೆಟ್ಟು ಗ್ರಾಮದಲ್ಲಿ ವಾಸವಿರುವ ಮುದ್ದು ಪೂಜಾರಿ (53 ವರ್ಷ)ರವರು ಕೊರಂಗ್ರಪಾಡಿ ಪೇಟೆಗೆ ಹೋಗುವ ಸಲುವಾಗಿ ಬೈಲೂರು ಸುನೀತಾ ಹೊಲೋ ಬ್ಲಾಕ್ನ ಬಳಿ ಕಾಲು ರಸ್ತೆಯಲ್ಲಿ ನಿಂತುಕೊಂಡಿರುವ ಸಮಯ ಕೆಎ 20 ಯು 3155 ನಂಬ್ರದ ಮೋಟಾರ್ ಬೈಕನ್ನು ಅದರ ಸವಾರನು ಕೊರಂಗ್ರಪಾಡಿ ಕಡೆಯಿಂದ ಕುಕ್ಕಿಕಟ್ಟೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಕಾಲು ರಸ್ತೆಯಲ್ಲಿ ನಿಂತುಕೊಂಡಿದ್ದ ಮುದ್ದುಪೂಜಾರಿಯವರಿಗೆ ಢಿಕ್ಕಿ ಹೊಡೆದ ಪರಿಣಾಮ ಮುದ್ದು ಪೂಜಾರಿಯವರು ಕೆಳಗೆ ಬಿದ್ದು ತಲೆಗೆ ಮತ್ತು ಎಡಕಾಲಿಗೆ ತೀವ್ರ ಸ್ವರೂಪದ ಗಾಯವಾಗಿ ರಕ್ತ ಸುರಿಯುತ್ತಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಕೂಡಲೇ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದಲ್ಲಿ ವೈದ್ಯಾಧಿಕಾರಿಯವರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು. ಚಿಕಿತ್ಸೆಯಲ್ಲಿರುತ್ತಾ ರಾತ್ರಿ 23:45 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ಮೃತ ಮುದ್ದು ಪೂಜಾರಿಯವರ ನೆರೆಕೆರೆಯ ವಾಸಿ ನಾಗರಾಜ (33 ವರ್ಷ) ತಂದೆ: ರಾಮ ಶೆಟ್ಟಿಗಾರವರು ಉಡುಪಿ ನಗರ ಠಾಣೆಯಲ್ಲಿ ಪಿರ್ಯಾದು ನೀಡಿದ್ದು ಅದರಂತೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 266/09 ಕಲಂ 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಮೃತರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆನ್ನಲಾಗಿದೆ.
 
ಸೆಕ್ಯೂರಿಟಿ ಪ್ರಕರಣಗಳು
ಬೈಂದೂರು ಠಾಣಾ ಸರಹದ್ದಿನ ಕುಂದಾಪುರ ತಾಲೂಕಿನ ಗೋಳಿಹೊಳೆ ಗ್ರಾಮ ಪರಿಸರದ ನಿವಾಸಿಗಳಾದ 1) ಶೇಖರ ಪೂಜಾರಿ (34) ತಂದೆ: ಶೀನ ಪೂಜಾರಿ ವಾಸ: ಬಿಜ್ಮಕ್ಕಿ, ಕಾಲ್ತೋಡು ಗ್ರಾಮ 2) ವಿರೇಂದ್ರ ಪೂಜಾರಿ (24) ತಂದೆ: ರಾಮ ಪೂಜಾರಿ ವಾಸ: ಬೈಲುಮನೆ, ಗೋಳಿಹೊಳೆ ಗ್ರಾಮ 3) ಉದಯ ಪೂಜಾರಿ (28) ತಂದೆ: ರಾಮ ಪೂಜಾರಿ ವಾಸ: ಬೈಲುಮನೆ, ಗೋಳಿಹೊಳೆ ಗ್ರಾಮ 4) ಸುಧಾಕರ ಗೌಡ (20) ತಂದೆ: ನಾಗಪ್ಪ ಗೌಡ ವಾಸ: ಹಕ್ಲುಮನೆ, ಗೋಳಿಹೊಳೆ ಗ್ರಾಮ ಮತ್ತು 5) ಸಾಯಿಕುಮಾರ್ (23) ತಂದೆ: ರಾಮ ಪೂಜಾರಿ ವಾಸ: ಹಾಲಿಮನೆ, ಗೋಳಿಹೊಳೆ ಗ್ರಾಮರವರು ತಮ್ಮ ದ್ವೇಷ ಸಾಧನೆಗಾಗಿ ತಮ್ಮ ಸಹಚರರನ್ನು ಕೂಡಿಕೊಂಡು ಕ್ರಿಕೆಟ್ ಆಟದ ವಿಷಯದಲ್ಲಿ ಗೋಳಿಹೊಳೆ ಗ್ರಾಮದಲ್ಲಿ ಘರ್ಷಣೆಯುಂಟು ಮಾಡಿ ಶಾಂತತಾ ಭಂಗವನ್ನುಂಟು ಮಾಡುವ ಸಾಧ್ಯತೆಯಿರುವುದು ಕಂಡು ಬಂದಿದ್ದಲ್ಲದೇ ರಾಜಕೀಯ ಹಿತಾಸಕ್ತಿಗಳು ತಮ್ಮ ಸ್ವಹಿತಕ್ಕಾಗಿ ಮತ್ತು ರಾಜಕೀಯವಾಗಿ ಲಾಭ ಪಡೆಯುವ ಹಿತಾಸಕ್ತಿಗಳು ಮಧ್ಯ ಪ್ರವೇಶಿಸಿ ಪ್ರತಿವಾದಿಯವರನ್ನು ಪುಸಲಾಯಿಸಿ ಅವರೊಳಗೆ ಘರ್ಷಣೆಯುಂಟುಮಾಡಿ ಗೋಳಿಹೊಳೆ ಗ್ರಾಮದಲ್ಲಿ ಗಲಾಟೆ, ದೊಂಬಿ, ರಕ್ತಪಾತವಾಗಿ ಸೊತ್ತು ಹಾನಿ, ಪ್ರಾಣ ಹಾನಿಯುಂಟಾಗಿ ಗೋಳಿಹೊಳೆ ಗ್ರಾಮದಲ್ಲಿ ಸಾರ್ವಜನಿಕ ಶಾಂತಿಗೆ ಹಾಗೂ ನೆಮ್ಮದಿಗೆ ಭಂಗವುಂಟಾಗುವ ಸಾದ್ಯತೆಗಳು ಇರುವುದಾಗಿ ತಿಳಿದು ಬಂದಿದ್ದು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆಯನ್ನು ಕಾಪಾಡುವ ಹಾಗೂ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿವಾದಿಯವರ ವಿರುದ್ಧ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 182/09 ಕಲಂ 107, 116(3) ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ಸೂಕ್ತ ಸಮಯದವರೆಗೆ ಒಳ್ಳೆಯ ಗುಣನಡತೆ ಬಗ್ಗೆ ಮುಚ್ಚಳಿಕೆ ಪಡಕೊಳ್ಳಲು ಕುಂದಾಪುರ ತಾಲೂಕು ದಂಢಾಧಿಕಾರಿಯವರಿಗೆ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ನಾಗೇಗೌಡ ಎನ್.ಸಿ.ರವರು ವರದಿ ಸಲ್ಲಿಸಿರುತ್ತಾರೆ. ಹಾಗೆಯೇ ಇನ್ನೊಂದು ಪ್ರಕರಣದಲ್ಲಿ ಅದೇ ಪರಿಸರದ ನಿವಾಸಿಗಳಾದ 1) ವಾಸು ಮರಾಠಿ (23) ತಂದೆ: ಬಾಲಯ್ಯ ಮರಾಠಿ ವಾಸ: ವಾಸ: ಬೀದಿಕೇರಿ ಮನೆ, ಗೋಳಿಹೊಳೆ ಗ್ರಾಮ 2) ಗಣೇಶ್ ಮರಾಠಿ (24) ತಂದೆ: ಕೃಷ್ಣ ಮರಾಠಿ ವಾಸ: ಗೋಳಿಹೊಳೆ ಗ್ರಾಮ 3) ಗಿರೀಶ್ (21) ತಂದೆ: ಗೋವಿಂದ ಮರಾಠಿ ವಾಸ: ಗೋಳಿಹೊಳೆ ಗ್ರಾಮ 4) ಪುಟ್ಟಯ್ಯ ಮರಾಠಿ (26) ತಂದೆ: ಮಂಜುನಾಥ ಮರಾಠಿ ವಾಸ: ಗೋಳಿಹೊಳೆ ಗ್ರಾಮ ಮತ್ತು 5) ಅಣ್ಣಪ್ಪ ಅಲಿಯಾಸ್ ಪುಟ್ಟಯ್ಯ (26) ತಂದೆ: ಬಚ್ಚ ಮರಾಠಿ ವಾಸ: ಗೋಳಿಹೊಳೆ ಗ್ರಾಮರವರ ವಿರುದ್ಧವೂ ಠಾಣೆಯಲ್ಲಿ ಅಪರಾಧ ಕ್ರಮಾಂಕ 183/09 ಕಲಂ 107, 116(3) ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ಸೂಕ್ತ ಸಮಯದವರೆಗೆ ಒಳ್ಳೆಯ ಗುಣನಡತೆ ಬಗ್ಗೆ ಮುಚ್ಚಳಿಕೆ ಪಡಕೊಳ್ಳಲು ಕುಂದಾಪುರ ತಾಲೂಕು ದಂಢಾಧಿಕಾರಿಯವರಿಗೆ ವರದಿ ಸಲ್ಲಿಸಿರುತ್ತಾರೆ.
 
ಅಪಘಾತ ಪ್ರಕರಣ
ದಿನಾಂಕ 08/08/09 ರಂದು ರಾತ್ರಿ ಹೆಗ್ಗುಂಜೆ ಗ್ರಾಮದ ಪುಟ್ಟಯ್ಯ ನಾಯ್ಕ (38 ವರ್ಷ)ರವರು ತನ್ನ ಭಾವ ಚಂದ್ರ ಎಂಬವರೊಂದಿಗೆ ಮಂದಾತರ್ಿಯಿಂದ ನಡೆದುಕೊಂಡು ಮನೆಯ ಕಡೆಗೆ ಹೋಗುತ್ತಿರುವಾಗ ಮಂದಾತರ್ಿಯಿಂದ ಮೈರ್ಕೋಮೆ ಕಡೆಗೆ ಅಂದರೆ ಹಿಂದಿನಿಂದ ಬಸ್ಸು ನಂಬ್ರ ಕೆಎ 20 ಬಿ 146ನ್ನು ಅದರ ಚಾಲಕ ಸೋಮಶೇಖರ (36 ವರ್ಷ), ಸೊರಬ, ಶಿವಮೊಗ್ಗ ಜಿಲ್ಲೆರವರು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪುಟ್ಟಯ್ಯ ನಾಯ್ಕರವರಿಗೆ ಢಿಕ್ಕಿ ಹೊಡೆದ ಪರಿಣಾಮ ಎಡಕಾಲಿನ ಮೂಳೆ ಮುರಿತವಾಗಿ ತೀವ್ರ ಜಖಂ ಉಂಟಾಗಿರುತ್ತದೆ. ಈ ಅಪಘಾತದ ಬಗ್ಗೆ ಪುಟ್ಟಯ್ಯ ನಾಯ್ಕರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/09 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಇತರೇ ಪ್ರಕರಣ

ದಿನಾಂಕ 09/08/09 ರಂದು ಮಧ್ಯಾಹ್ನ 15:30 ಘಂಟೆಗೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಿ ನಗರದ ವಾಸಿ ಸೈಯದ್ ಕರೀಮ್ (35 ವರ್ಷ)ರವರು ಬಸ್ಸು ನಂಬ್ರ ಕೆಎ 20 ಬಿ 4689ನ್ನು ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಬೆಳಿಗ್ಗೆ ಸುಮಾರು 08:00 ಗಂಟೆ ಸಮಯಕ್ಕೆ ಹೇರಾಡಿ ಬಸ್ಸುಸ್ಟ್ಯಾಂಡ್ ಬಳಿ ತಲುಪುವಾಗ ಆರೋಪಿ ರಮೇಶ್ ಎಂಬಾತನು ಶ್ರೀ ದುಗರ್ಾಂಬ ಬಸ್ಸನ್ನು ಚಲಾಯಿಸಿಕೊಂಡು ಬಂದು ಕರೀಮ್ರವರ ಬಸ್ಸಿಗೆ ಅಡ್ಡ ನಿಲ್ಲಿಸಿಕೊಂಡು ಒಂದು ಕೋಲಿನಿಂದ ಅವರ ಬಲಕೈಗೆ ಹೊಡೆದಿರುವುದಲ್ಲದೇ ಇನ್ನು ಮುಂದಕ್ಕೆ ಓವರ್ ಟೇಕ್ ಮಾಡಿಕೊಂಡು ಬಂದರೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಸೈಯದ್ ಕರೀಮ್ರವರು ಬ್ರಹ್ಮಾವರ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 140/09 ಕಲಂ 341, 324, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ 09/08/09 ರಂದು ರಾತ್ರಿ 10:30 ಗಂಟೆಗೆ ಕೋಟಾ ಠಾಣಾ ಸರಹದ್ದಿನ ತೆಕ್ಕಟ್ಟೆಯ ವಿನಯ ಬಾರ್ನ ಮ್ಯಾನೇಜರ್ ಆದ ಸಂತೋಷ್ ಶೆಟ್ಟಿ (32 ವರ್ಷ) ತಂದೆ: ರಾಜೀವ ಶೆಟ್ಟಿ ಪಾದೇಮಠ ಕೆಂಜೂರು ಗ್ರಾಮರವರು ಬಾರಿನಲ್ಲಿರುವಾಗ ಅವರ ಗುರುತು ಪರಿಚಯದ ಕುಂಭಾಶಿಯ ಕೊರವಡಿಯ ಉಮೇಶ್ ರೆಡ್ಡಿ (26 ವರ್ಷ)ಎಂಬವರು ಬಂದು "ನನಗೆ ಕುಡಿಯಲು ಬ್ರಾಂಡಿ ಕೊಡಬೇಕು ಹಣವನ್ನು ನಾನು ಕೊಡುವುದಿಲ್ಲ" ಎಂದು ಹೇಳಿದ್ದು ಅದಕ್ಕೆ ಸಂತೋಷ್ ಶೆಟ್ಟಿಯವರು ಹಣ ಕೊಡದಿದ್ದರೇ ಬ್ರಾಂಡಿಯನ್ನು ಕೊಡಲಾಗುವುದಿಲ್ಲ ಎಂದು ಹೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಮದ್ಯದ ಬಾಟಲಿಗಳನ್ನು ಇಟ್ಟ ಷೋಕೇಸಿನ ಗಾಜನ್ನು ಕೈಯಿಂದ ಕುಟ್ಟಿ ಪುಡಿಮಾಡಿ ಧಮರ್ಾರ್ಥ ಬ್ರಾಂಡಿ ಕೊಡದಿದ್ದರೆ ಕೈಕಾಲು ಮುರಿಯುವುದಾಗಿ ಜೀವ ಬೆದರಿಕೆ ಹಾಕಿರುತ್ತಾರಾಗಿ ಸಂತೋಷ್ ಶೆಟ್ಟಿಯವರು ಕೋಟಾ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 188/09 ಕಲಂ 504, 427, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಜುಗಾರಿ ದಾಳಿ - 8 ಜನರ ಬಂಧನ
 
ಉಡುಪಿ : ದಿನಾಂಕ 09/08/09ರಂದು ಸಂಜೆ ಉಡುಪಿಯ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರಾದ ಶ್ರೀ ಗಣೇಶ್ ಎಂ. ಹೆಗಡೆ ಮತ್ತು ಸಿಬ್ಬಂದಿಯವರು ಖಚಿತ ವರ್ತಮಾನದಂತೆ, ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಜೋುಷ್ ಕಾಂಪ್ಲೆಕ್ಸ್ನ ಮಹಡಿಯ ಕೋಣೆಯೊಂದರಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದ 8 ಜನರನ್ನು ಬಂಧಿಸಿ, ಅವರಿಂದ ಜುಗಾರಿ ಪರಿಕರ ಮತ್ತು ಆಟಕ್ಕೆ ಬಳಸಿದ ರೂಪಾಯಿ 3,105 ಹಣವನ್ನು ವಶಪಡಿಸಿಕೊಂಡಿರುತ್ತಾರೆ. ಬಂಧಿತರನ್ನು ಕೋಟೇಶ್ವರದ ಸ್ಥಳೀಯ ನಿವಾಸಿಗಳಾದ 1) ಜಯರಾಮ ಶೆಟ್ಟಿ (47), 2) ಸತೀಶ್ ನಾಯಕ್ (38), 3) ಕೇಶವ ನಾಯ್ಕ (38), 4) ರಮೇಶ್ (46), 5) ವಿಜಯ (47), 6) ನಿತ್ಯಾನಂದ (49) 7) ಸತೀಶ್ (49) ಮತ್ತು 8) ಪ್ರಕಾಶ್ ಆಚಾರಿ (32) ಎಂದು ಗುರುತಿಸಲಾಗಿದೆ. ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀ ಪ್ರವೀನ್ ಮಧುಕರ್ ಪವಾರ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕಾಶೀನಾಥ್ ತಳಕೇರಿರವರ ನಿದರ್ೇಶನದಂತೆ ಡಿ.ಸಿ.ಐ.ಬಿ., ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಯವರು ನಡೆಸಿರುತ್ತಾರೆ. ಪ್ರಕರಣದ ಮುಂದಿನ ಕ್ರಮಕ್ಕಾಗಿ ಕುಂದಾಪುರ ಠಾಣೆಗೆ ಹಸ್ತಾಂತರಿಸಲಾಗಿದೆ.
 
 
ಅಪಘಾತ ಪ್ರಕರಣಗಳು
ದಿನಾಂಕ: 08.08.09 ರಂದು ರಾತ್ರಿ 11:20 ಗಂಟೆಗೆ ಆರೋಪಿ ಅಪರಿಚಿತ ಆಟೋರಿಕ್ಷಾ ಚಾಲಕ ತನ್ನ ಆಟೋರಿಕ್ಷಾವನ್ನು ಟೈಗರ್ ಸರ್ಕಲ್ ಕಡೆಯಿಂದ ಸರಳಬೆಟ್ಟು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಗ್ರೀನ್ ಪಾಕರ್್ ಹೋಟೇಲ್ ಬಳಿ ಡಾಮರು ರಸ್ತೆಯಲ್ಲಿ ಟೈಗರ್ ಸರ್ಕಲ್ ಕಡೆಯಿಂದ ಸರಳಬೆಟ್ಟು ಕಡೆಗೆ ಹೋಗುತ್ತಿದ್ದ ಜಯಶೀಲ ಎಂಬವರ ಕೆಎ 20 ಆರ್ 4051 ಟಿ.ವಿ.ಎಸ್ ಮೋಟಾರು ಸೈಕಲ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಜಯಶೀಲ ಎಂಬವರು ಬೈಕ್ ಸಮೇತ ರಸ್ತೆಗೆ ಬಿದ್ದುದರ ಪರಿಣಾಮ ತಲೆಗೆ, ಕಾಲಿಗೆ ಬಲ ಕೈಗೆ ರಕ್ತ ಗಾಯವಾಗಿದ್ದು ಹಾಗೂ ಬೈಕಿನ ಹಿಂಬದಿ ಕುಳಿತಿದ್ದ ಜಗದೀಶ ಎಂಬವರಿಗೆ ತಲೆಗೆ ಗುದ್ದಿದ ಹಾಗೂ ಬಲ ಕೈ ಮೊಣಗಂಟಿಗೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆೆ ಈ ಅಪಘಾತದ ಬಗ್ಗೆ ಜಗದೀಶ ನಾಯ್ಕ(25) ತಂದೆ; ಮುತ್ತು ನಾಯ್ಕ ವಾಸ; ಸಗ್ರಿ ನೋಳೆ ಲಚ್ಚಿಲ್ ಕುಂಜಿಬೆಟ್ಟು ಪೋಸ್ಟ್, ಉಡುಪಿ ತಾಲೂಕು ರವರು ನೀಡಿದ ದೂರಿನ ಮೇರೆಗೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 258/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಿನಾಂಕ 9.08.2009 ರಂದು 14:45 ಗಂಟೆಗೆ ಪಾಂಗಾಳ ಗ್ರಾಮದ ಪಾಂಗಾಳ ಜಂಕ್ಷನ್ ಬಳಿ, ರಾ.ಹೆ 17 ರಲ್ಲಿ ಉಡುಪಿ ಕಡೆಯಿಂದ ಕೆ.ಎ-19-ಬಿ-4857 ನೇ ಬಸ್ನ ಚಾಲಕನು ಬಸ್ನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಮತ್ತು ಅಜಾಗೂರಕತೆಯಿಂದ ಚಲಾಯಿಸಿ ರಸ್ತೆಯ ಬಲಬದಿಯಲ್ಲಿ ನಿಂತಿದ್ದ ಕೆಎ-34-ಕೆ-6627 ನೇ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ನವೀನ್ ಎಂಬವರು ತೀವ್ರ ಗಾಯಗೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೇ 16:20 ಗಂಟೆಗೆ ಮೃತ್ತ ಪಟ್ಟಿರುತ್ತಾರೆ. ಈ ಬಗ್ಗೆ ಉದಯ, 30 ವರ್ಷ, ತಂದೆ: ಕೃಷ್ಣಪ್ಪ ಸಾಲಿಯಾನ್ ವಾಸ: ಕಲ್ಮಾಡಿ, ಮಲ್ಪೆ, ಉಡುಪಿ ತಾಲೂಕು.ರವರು ನೀಡಿದ ದೂರಿನ ಮೇರೆಗೆ ಕಾಪು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 160/09 ಕಲಂ 279,304(ಎ)ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ,
 
ಗಂಡಸು ಕಾಣೆ ಪ್ರಕರಣ
ದಿನಾಂಕ 09-08-09 ರಂದು ಉಡುಪಿ ತಾಲೂಕು ಕಾಪು ಪಡು ಗ್ರಾಮದ ಜನಾರ್ಧನ ಕಾಂಪ್ಲೇಕ್ಸ್ ಕಾಪು ರೆಸಿಡೆನ್ಸಿ,ಯ ವಾಸಿ ಮನೋಜ್ ಶೆಟ್ಟಿ ಎಂಬವರು ಠಾಣೆಗೆ ಬಂದು ಹಾಜರಾಗಿ ತನ್ನ ತಂದೆ ಪಿ. ಬಾಲಕೃಷ್ಣ ಶೆಟ್ಟಿ (72 ವರ್ಷ) ಎಂಬವರು ದಿನಾಂಕ. 08/08/2009 ರಂದು 09:30 ಗಂಟೆಗೆ ಹೊರಗೆ ಹೋದವರು ಈವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮನೋಜ್ ಶೆಟ್ಟಿರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 159/09 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಕಾಣೆಯಾದವರು ಸುಮಾರು 5 ಅಡಿ ಎತ್ತರವಿದ್ದು ಗೋಧಿ ಮೈಬಣ್ಣ, ಬೂದು ಬಣ್ಣದ ತಲೆ ಕೂದಲು ಸಾದಾರಣ ಶರೀರ ಹೊಂದಿದ್ದು ,ಕಪ್ಪು ಚೌಕುಳಿಯಿರುವ ಬಿಳಿ ಬಣ್ಣದ ಶಟರ್್ ಧರಿಸಿರುತ್ತಾರೆ. ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಮೇಲೆ ತಿಳಿಸಿದ ಚಹರೆಯುಳ್ಳ ಗಂಡಸು ಪತ್ತೆಯಾದಲ್ಲಿ ಉಪ ನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಅಥವಾ ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತರವರಿಗೆ ಮಾಹಿತಿ ನೀಡುವಂತೆ ಕೋರಿಕೆ (ದೂರವಾಣಿ ನಂ. 0820-2551033, 0820-2552133) ಅಥವಾ ಪೊಲೀಸ್ ಕಂಟ್ರೋಲ್ ರೂಂ, ಉಡುಪಿ (0820 - 2526444)ರವರಿಗೆ ತಿಳಿಸಲು ಕೋರಲಾಗಿದೆ.
 
ಹಲ್ಲೆ ಪ್ರಕರಣ
 
ದಿನಾಂಕ: 09/8/09 ರಂದು ಫೆಲಿಕ್ಸ್ ರೋಡ್ರಿಗಸ್ (51) ತಂದೆ: ಅಲ್ಬಟರ್್ ರೋಡ್ರಿಗಸ್ ವಾಸ: ಮುರಂತಬೆಟ್ಟು ಮನೆ ಮುಂಡ್ಕೂರು ಗ್ರಾಮ ಮಂಗಳೂರು ತಾಲೂಕು ಎಂಬವರು ಶಂಕರ ಎಂಬಾತನೊಂದಿಗೆ ತಮ್ಮ ವಾಹನದಲ್ಲಿ ಅತ್ತೂರಿನ ವಿಠಲ ಹೆಗ್ಡೆಯವರಿಂದ 2 ಗಂಡು ಹೋರಿಗಳನ್ನು ಪಡೆದುಕೊಂಡು ಬಾಡಿಗೆ ಬಗ್ಗೆ ಹಂಡೇಲಿನ ಕುಂಜಿಮೋನು ಎಂಬವರಿಗೆ ನೀಡುವ ಸಲುವಾಗಿ ಹೋಗುತ್ತಿರುವಾಗ ಕಾರ್ಕಳ ಕಸಬ ಗ್ರಾಮದ ಶಿವತಿಕೆರೆ ಎಂಬಲ್ಲಿ 14:00 ಗಂಟೆ ಸಮಯಕ್ಕೆ 3 ರಿಂದ 4 ಜನ ಆಪಾದಿತರು(ಹೆಸರು ವಿಳಾಸ ಪತ್ತೆಯಾಗಿರುವುದಿಲ್ಲ) ವಾಹನವನ್ನು ಅಡ್ಡಹಾಕಿ ಕಲ್ಲುಗಳಿಂದ ವಾಹನಕ್ಕೆ ಹಾನಿಯುಂಟುಮಾಡಿ ನನಗೂ ಶಂಕರನಿಗೂ ಕೈಗಳಿಂದ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಫೆಲಿಕ್ಸ್ ರೋಡ್ರಿಗಸ್ ರವರು ಕಾರ್ಕಳ ನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 111/09 ಕಲಂ 341, 427, 323 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
ಗೋಹತ್ಯೆ ಪ್ರಕರಣ
 
ದಿನಾಂಕ: 09/8/09 ರಂದು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಹಾರ್ಜಡ್ಡು ವಾಸಿ ರವಿ (30) ತಂದೆ: ರಾಜು ಶೆಟ್ಟಿ ಎಂಬವರು ಮಧ್ಯಾಹ್ನ 2:00 ಗಂಟೆಯ ಸಮಯಕ್ಕೆ ಕಾರ್ಕಳ ಕಸಬ ಗ್ರಾಮದ ಶಿವತಿಕೆರೆ ಎಂಬಲ್ಲಿ ಬೈಪಾಸ್ ರಸ್ತೆಯಲ್ಲಿರುವಾಗ್ಗೆ ಬಂಗ್ಲೆಗುಡ್ಡೆ ಕಡೆಯಿಂದ ಬೈಪಾಸ್ ರಸ್ತೆಯಾಗಿ ಪುಲ್ಕೇರಿ ಕಡೆಗೆ ಹೋಗುತ್ತಿದ್ದ ಟಾಟಾ ಇಎಕ್ಸ್ ನಂ: ಕೆ.ಎ.19.ಬಿ.4115 ರಲ್ಲಿ ಅಕ್ರಮವಾಗಿ ಮಾಂಸಕ್ಕಾಗಿ ಕಡಿಯಲು ದನವನ್ನು ಸಾಗಾಟ ಮಾಡುತ್ತಿದ್ದವರನ್ನು ಸಾರ್ವಜನಿಕರು ನಿಲ್ಲಿಸಿರುತ್ತಾರೆ, ವಾಹನದಲ್ಲಿ 2 ಗಂಡು ಹೋರಿ ಇದ್ದು, ಟಾಟಾ ಇಎಕ್ಸ್ ಚಾಲಕ 1) ಫೆಲಿಕ್ಸ್ ರೋಡ್ರಿಗಸ್ (51) ತಂದೆ: ಅಲ್ಬಟರ್್ ರೋಡ್ರಿಗಸ್ ವಾಸ: ಮುರತ್ತಂಗಡಿ ಮನೆ ಮುಂಡ್ಕೂರು ಗ್ರಾಮ ಮಂಗಳೂರು ತಾಲೂಕು. ಮತ್ತು ಆತನೊಂದಿಗೆ ಇದ್ದ ಶಂಕರ(30) ತಂದೆ: ರಾಮಪ್ಪ ಮೊಯ್ಲಿ ವಾಸ: ಗುರುಬೆಟ್ಟುಮನೆ ಕಲ್ಲ ಮುಂಡ್ಕೂರು ಗ್ರಾಮ ಮಂಗಳೂರು ತಾಲೂಕು. ಎಂಬವರುಗಳು ವಾಹನ ಬಿಟ್ಟು ಓಡಿ ಹೋಗಿರುತ್ತಾರೆ. ಟಾಟಾ ಇಎಕ್ಸ್ ವಾಹನ ಶಿವತಿಕೆರೆ ಬೈಪಾಸ್ ರಸ್ತೆ ಬಳಿ ಇರುತ್ತದೆ ಈ ಬಗ್ಗೆ ರವಿ ಯವರು ಕಾರ್ಕಳ ನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 110/09 ಕಲಂ: 8, 9, 11 ಗೋಹತ್ಯಾ ನಿಷೇಧ ಕಾಯ್ದೆ ಮತ್ತು ಕಲಂ. 192(ಎ) ಐಎಂವಿ ಕಾಯ್ದೆ.ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಪಾವೂರು ಶಾಲಾ ಸ್ಥಳಾಂತರ: ಮುಗಿಯದ ವಿವಾದ/Pavoor School Disputes


ಮಂಜೇಶ್ವರ: ಇಲ್ಲಿನ ಪಾವೂರು ವಿದ್ಯೋದಯ ಕಿರಿಯ ಪ್ರಾಥಮಿಕ ಶಾಲೆಯ ಸ್ಥಳಾಂತರ ವಿವಾದ ವಿನೂತನ ಪ್ರತಿಭಟನೆಯತ್ತ ಸಾಗಿದೆ.
ಶಾಲೆಯ ಹೊರಗೆ ಚಪ್ಪರ ನಿಮರ್ಿಸಿದ ಸ್ಥಳೀಯರು 120 ವಿದ್ಯಾಥರ್ಿಗಳಿಗೆ ಅಧ್ಯಾಪಕರ ಸಹಾಯದಿಂದ ತಾತ್ಕಾಲಿಕ ಶಿಕ್ಷಣದ ವ್ಯವಸ್ಥೆ ಮಾಡಿದರು.
ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುವ ಶಾಲೆಯನ್ನು ಪಾವೂರಿನಿಂದ ಗೇರುಕಟ್ಟೆಯ ಚಚರ್್ ಬಳಿಗೆ ಸ್ಥಳಾಂತರಿಸಲು ಆಡಳಿತ ಮಂಡಳಿ ತೀಮರ್ಾನಿಸಿತ್ತು. ಇದು ಸ್ಥಳೀಯರ ಪ್ರತಿಭಟನೆಗೆ ನಾಂದಿ ಹಾಡಿದೆ. ಪಾವೂರು, ಪೊಯ್ಯೆ, ಮುಡಿಮಾರು, ಮಚ್ಚಂಪಾಡಿ ಎಂಬಲ್ಲಿರುವ ವಿದ್ಯಾಥರ್ಿಗಳಿಗೆ ವರದಾನವಾಗಿದ್ದ ಈ ಶಾಲೆಯನ್ನು 2 ಕಿ.ಮೀ. ದೂರದ ಗೇರುಕಟ್ಟೆಗೆ ಸ್ಥಳಾಂತರಿಸಿದರೆ ಅಲ್ಲಿಗೆ ಹೋಗುವುದು ಕಷ್ಟಸಾಧ್ಯ ಎನ್ನುತ್ತಾರೆ ಸ್ಥಳೀಯರು.
ಸಕರ್ಾರ ಪಾವೂರಿನಲ್ಲಿ ಶಾಲೆಗೆ ಅಂಗೀಕಾರ ನೀಡಿದರೆ ಸ್ಥಳೀಯರ ಸಹಕಾರದಲ್ಲಿ ಕಟ್ಟಡ ನಿಮರ್ಿಸಲಾಗುವುದು ಸೋಮವಾರ ಸಂಜೆ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಶಾಲೆಯನ್ನು ಸ್ಥಳಾಂತರಿಸದಂತೆ ಸಹಾಯಕ ವಿದ್ಯಾಧಿಕಾರಿ, ಜಿಲ್ಲಾ ವಿದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿದೆ.
 

 
ಬಸ್ಸು ಸಿಬ್ಬಂದಿಗಳಿಗೆ ಹಲ್ಲೆ : ನಾಲ್ವರಿಗೆ ಗಾಯ
 
ಮಂಜೇಶ್ವರ: ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಬಸ್ಸಿನ ಸಿಬ್ಬಂದಿಗಳಿಗೆ ತಂಡ ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ತಲಪಾಡಿಯಲ್ಲಿ ನಡೆದಿದೆ.
ಚಾಲಕ, ಕಾಸರಗೋಡಿನ ಎರಿಯಾಲ್ ನಿವಾಸಿ ರವಿ ನಾಯ್ಕ್, ನಿವರ್ಾಹಕ ಜಯನ್, ಕ್ಲೀನರ್ ಸತೀಶ್ ಎಂಬವರು ಗಾಯಗೊಂಡಿದ್ದಾರೆ. ಸತೀಶ್ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳಿದ ಇಬ್ಬರನ್ನು ಮಂಜೇಶ್ವರ ಸಕರ್ಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಿ, ಜಯನ್ ಅವರ ಕೈಲಿದ್ದ 3,500 ರೂ. ಮತ್ತು 2.5 ಪವನ್ ಚಿನ್ನಾಭರಣಗಳನ್ನು ಅಪಹರಿಸಲಾಗಿದೆ  ಎಂದು ಗಾಯಾಳುಗಳು ದೂರಿದ್ದಾರೆ. ಬಸ್ಸಿನ ಗಾಜುಗಳನ್ನು ಹುಡಿ ಮಾಡಲಾಗಿದೆ.
ಕುಂಜತ್ತೂರಿನಲ್ಲಿ ನಡೆದ ಇನ್ನೊಂದು ಪ್ರಕರಣದಲ್ಲಿ ಬಸ್ಸು ಚಾಲಕ ಉಪ್ಪಳದ ಬಶೀರ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.
 
 
ನಕಲಿ ವೈದ್ಯನ ವಂಚನೆ
 
ಮಂಜೇಶ್ವರ: ಉಪ್ಪಳ ಸಮೀಪದ ಪೈವಳಿಕೆಯಲ್ಲಿ ನಕಲಿ ವೈದ್ಯನೋರ್ವ ಜನಸಾಮಾನ್ಯರನ್ನು ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿಕುನ್ಗುನ್ಯಾ ರೋಗಿಗಳ ಸಮೀಕ್ಷೆ ನಡೆಸುವ ನೆಪದಲ್ಲಿ ಹಲವಾರು ಮನೆಗಳಿಂದ ತಲಾ 100 ರೂ.ಗಳಂತೆ ಪಡೆದು ಜನರಿಗೆ ಪಂಗನಾಮ ಹಾಕಿದ್ದಾನೆ. ರೋಗಿಗಳಿಗೆ ಸಕರ್ಾರ 20,000 ರೂ. ನೀಡುತ್ತಿದೆ ಎಂದು ಆಮಿಷ ತೋರಿ ರೇಷನ್ ಕಾಡು ಮತ್ತು ಗುರುತು ಚೀಟಿ ದೃಢೀಕರಿಸುವ ನಾಟಕವಾಡಿದ್ದಾನೆ. ವಂಚಕ ಎಂಬುದು ತಿಳಿಯುವಷ್ಟರಲ್ಲಿ ನಕಲಿ ವೈದ್ಯ ಕಾಲಿಗೆ ಬುದ್ಧಿ ಹೇಳಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
 
 
 
ಬಾವಿಗೆ ಬಿದ್ದು ಸಾವು
ಮಂಜೇಶ್ವರ: ಇಲ್ಲಿನ ಸುಂಕದಕಟ್ಟೆ ಸಮೀಪದ ಕಳಿಯೂರು ಸಿಂತಾಜೆಯ ಮಧ್ಯವಯಸ್ಕರೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮರದ ಕೆಲಸದ ಕಾಮರ್ಿಕರಾಗಿದ್ದ ಹೆನ್ರಿ ಡಿ'ಸೋಜಾ(55) ಎಂದು ಗುರುತಿಸಲಾಗಿದೆ. ಇವರ ಸಾವಿಗೆ ಕಾರಣ ತಿಳಿದುಬಂದಿಲ್ಲ.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಮಾಯಿಪ್ಪಾಡಿ:ರಾಜಮುದ್ರೆ ಹಸ್ತಾಂತರ/ Mayippadi Raja

 
ಕಾಸರಗೋಡು: ಇಲ್ಲಿನ ಮಾಯಿಪ್ಪಾಡಿ ಅರಮನೆಯ 13ನೇ ರಾಜರ ಪೀಠಾರೋಹಣಕ್ಕೆ ಸಂಬಂಧಿಸಿ ಮನೆತನದ ದಾನಮಾತರ್ಾಂಡ ವರ್ಮರಿಗೆ ಮಂಗಳವಾರ ರಾಜಮುದ್ರೆಯನ್ನು ಹಸ್ತಾಂತರಿಸಲಾಯಿತು.
ಸೀಮೆಯ 4 ಗುತ್ತು ಮತ್ತು 8 ಮನೆಯ ರಾಯರು ನೇತೃತ್ವದಲ್ಲಿ ಮಾಯಿಪ್ಪಾಡಿ ಅರಮನೆಯಲ್ಲಿ ಮಧ್ಯಾಹ್ನ ಸಮಾರಂಭ ನಡೆಯಿತು. ಸೀಮೆಯ ದೈವಸ್ಥಾನ ಮತ್ತು ದೇವಸ್ಥಾನಗಳ ಪ್ರತಿನಿಧಿಗಳೂ ಹಾಜರಿದ್ದರು. ಕುಲದೇವರು ಮೂಲ ದುಗರ್ೆಯ ಸನ್ನಿಧಿಯಲ್ಲಿ ಪೂಜಾ ವಿಧಿ-ವಿಧಾನಗಳನ್ನು ನಿರ್ವಹಿಸಿದ ಬಳಿಕ ರಾಜಮುದ್ರೆಯ ಹಸ್ತಾಂತರ ನಡೆಯಿತು.
12ನೇ ರಾಜರಾಗಿದ್ದ ಡಾ.ಎಂ.ಆರ್.ರಾಜ ಯಾನೆ ರಾಮವರ್ಮ ರಾಮಂತರಸುಗಳು ಇತ್ತೀಚೆಗೆ ನಿಧನರಾದ ಸ್ಥಾನಕ್ಕೆ ಈ ನೇಮಕ ನಡೆಯಿತು. ನೂತನ ರಾಜರ ಪಟ್ಟಾಭಿಷೇಕ ಬರುವ ತಿಂಗಳು ನಡೆಯಲಿದೆ ಎಂದು ಮಾಯಿಪ್ಪಾಡಿ ಅರಮನೆಯ ಮೂಲಗಳು ತಿಳಿಸಿವೆ.
 
 
ಹಂದಿಜ್ವರದ ಲಕ್ಷಣ : 7 ಮಂದಿ ಆಸ್ಪತ್ರೆಗೆ
 
ಕಾಸರಗೋಡು: ಹಂದಿಜ್ವರದ ಲಕ್ಷಣ ಕಂಡುಬಂದ ಜಿಲ್ಲೆಯ 7 ಮಂದಿಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಮೇರಿಕಾದಿಂದ ಚೆರ್ವತ್ತೂರು ಕೊವ್ವಲ್ ಎಂಬಲ್ಲಿಗೆ ಬಂದ ತಾಯಿ ಮತ್ತು ಇಬ್ಬರು ಮಕ್ಕಳು, ಸೌದಿ ಅರೇಬಿಯಾದಿಂದ ಬಂದ ಮಯ್ಯಿಚ ನಿವಾಸಿ, ಕೊಲ್ಲಿಯಿಂದ ಬಂದ ಪಡನ್ನ ತಿಮಿರಿ ನಿವಾಸಿಗಳಿಗೆ ರೋಗ ಬಾಧಿಸಿದೆ.
ಜಿಲ್ಲೆಯಲ್ಲಿ ಈಗಾಗಲೇ 28 ಮಂದಿಗೆ ಹಂದಿ ಜ್ವರದ ಲಕ್ಷಣಗಳು ಕಂಡುಬಂದಿದೆ.
ಪರವನಡ್ಕದ ಮಾದರಿ ವಸತಿ ಶಾಲೆಯ ವಿದ್ಯಾಥರ್ಿಗಳಿಗೆ ಸೋಂಕು ಜ್ವರ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿನ 5ನೇ ತರಗತಿಯ ಏಚ್ಚಿಕ್ಕಾನ ನಿವಾಸಿ ನಿತ್ಯಶ್ರೀ, ಮಾವಿಲ ಕಡಪ್ಪುರ ನಿವಾಸಿ ಅನುಶ್ರೀ, 6ನೇ ತರಗತಿಯ ಮಟ್ಟನ್ನೂರು ನಿವಾಸಿ ಹಿಮ, ಪಯ್ಯನ್ನೂರಿನ ಅನುಶ್ರೀ ಎಂಬ ವಿದ್ಯಾಥರ್ಿಗಳಿಗೆ ಚಿಕಿತ್ಸೆ ನೀಡಲಾಗಿದೆ.
 
 
ಡಿವೈಎಫ್ಐ ಮುಂದಾಳು ಕೊಲೆ ಯತ್ನ
 
ಕಾಸರಗೋಡು: ಬೈಕಿನಲ್ಲಿ ಸಂಚರಿಸುತ್ತಿದ್ದ ಡಿವೈಎಫ್ಐ ಅಣಂಗೂರು ಯೂನಿಟ್ ಕಾರ್ಯದಶರ್ಿ,  ಅಣಂಗೂರು ನಿವಾಸಿ ಎಂ.ಎಚ್.ಹಾಷಿಮಿ ಎಂಬವರ ಮೇಲೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸೋಮವಾರ ರಾತ್ರಿ ನಗರದಲ್ಲಿ ನಡೆದಿದೆ.
ಮುಖವಾಡ ಧರಿಸಿದ ಮೂವರನ್ನೊಳಗೊಂಡ ತಂಡ ಕಬ್ಬಿಣದ ಶಲಾಕೆಯಿಂದ ಕಾಲಿಗೆ ಹೊಡೆದಿದೆ.
ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
 
ನಿಧನ
ಎ.ಕೆ.ಅಬ್ದುಲ್ ಹಮೀದ್
ಕಾಸರಗೋಡು: ನಗರದ ಉದ್ಯಮಿ ಅಡ್ಕತ್ತಬೈಲ್ ನಿವಾಸಿ ಎ.ಕೆ.ಅಬ್ದುಲ್ ಹಮೀದ್(63) ಸೋಮವಾರ ಸಂಜೆ ನಿಧನರಾದರು.
ಅಪಘಾತಕ್ಕೊಳಗಾದ ಅವರು ಚಿಕಿತ್ಸೆ ಪಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತ್ನಿ ಮರಿಯಾಂಬಿ ಮೂವರು ಮಕ್ಕಳಿದ್ದಾರೆ.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಚೆಮ್ನಾಡ್ ರಾ.ಸೇ.ಯೋ./Chemnad NSS

ಕಾಸರಗೋಡಿನ ಚೆಮ್ನಾಡ್ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯ ರಾ.ಸೇ.ಯೋ. ಘಟಕದ ವಿದ್ಯಾಥರ್ಿಗಳು ಸೀತಾಂಗೋಳಿ ಸಮೀಪದ ಎಚ್.ಎ.ಎಲ್. ಪ್ರಾಂಗಣದೊಳಗೆ ವನಮಹೋತ್ಸವದ ಅಂಗವಾಗಿ ಇತ್ತೀಚೆಗೆ ಗಿಡಗಳನ್ನು ನೆಟ್ಟರು.

 

 
 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಹನಿಗೂಡಿಸೋಣ' ಸ್ಲೈಡ್ ಶೋ/Water Harvesting

ಕಾಸರಗೋಡಿನ ಕುಂಬಳೆ ಸಮೀಪದ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಚಿಗುರು ಫಾರ್ಮಸರ್್ ಕ್ಲಬ್ ಮತ್ತು ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ `ಹನಿಗೂಡಿಸೋಣ' ಸ್ಲೈಡ್ ಶೋ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಪತ್ರಕರ್ತ ಶ್ರೀಪಡ್ರೆ ಮಾತನಾಡಿದರು.

ಕಾಸರಗೋಡು: ಕರಾವಳಿಯಲ್ಲಿ ನೀರಿಂಗಿಸುವುದರಿಂದ ಧನಾತ್ಮಕ ಫಲಿತಾಂಶ ಸಾಧ್ಯವಿಲ್ಲ ಎಂಬ ತಪ್ಪು ಗ್ರಹಿಕೆಯನ್ನು ಬದಿಗೊತ್ತಿ ಸಕಾರಾತ್ಮಕ ಯಶಸ್ಸು ಗಳಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಪತ್ರಕರ್ತ ಶ್ರೀಪಡ್ರೆ ಅಭಿಪ್ರಾಯಪಟ್ಟರು.
ಭಾನುವಾರ ಕುಂಬಳೆ ಸಮೀಪದ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಚಿಗುರು ಫಾರ್ಮಸರ್್ ಕ್ಲಬ್ ಮತ್ತು ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಆಶ್ರಯದಲ್ಲಿ ಏರ್ಪಡಿಸಿದ `ಹನಿಗೂಡಿಸೋಣ' ಸ್ಲೈಡ್ ಶೋ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಣ್ಯ ನಾಶದಿಂದಾಗಿ ನಮ್ಮ ಮಲೆನಾಡು ಕರಾವಳಿಯಲ್ಲೂ ನೀರಿನ ಕ್ಷಾಮ ಅನುಭವಕ್ಕೆ ಬರುತ್ತಿದೆ. ಕಟ್ಟ, ಮದಕ, ಸುರಂಗ ಇತ್ಯಾದಿ ನಮ್ಮ ನಾಡಿನ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆಗಳನ್ನು ಕಾಪಾಡುವುದರ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಸಾಧ್ಯ ಎಂದೂ ಅವರು ವಿವರಿಸಿದರು.
ನಬಾಡರ್್ ಸಂಸ್ಥೆಯ ಸಹಾಯಕ ಮೇನೇಜರ್ ಎನ್.ಗೋಪಾಲನ್ ಫಾರ್ಮಸರ್್ ಕ್ಲಬ್ಗಳ ಚಟುವಟಿಕೆಯ ರೂಪುರೇಷೆಗಳನ್ನು ವಿವರಿಸಿದರು. ಜನ ಹಿತಕ್ಕಾಗಿ ನಬಾಡರ್್ ಹಮ್ಮಿಕೊಳ್ಳುತ್ತಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸೀತಾಂಗೋಳಿ ಕಿನ್ಫ್ರಾ ಪಾಕರ್ಿನಲ್ಲಿ ಕಾಯರ್ಾಚರಿಸುತ್ತಿರುವ ಪಾಮ್ಸ್ ಇಕೋ ಸಂಸ್ಥೆಯ ಮಾಧವ ಬಯೋ ಪ್ಲೇಟ್ ತಯಾರಿಯಲ್ಲಿ ಸಂಸ್ಥೆಯ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು.
ಇಚ್ಲಂಪಾಡಿ ಹಿರಿಯ ಬುನಾದಿ ಶಾಲಾ ಮುಖ್ಯೋಪಾಧ್ಯಾಯ ಪಿ.ನರಹರಿ ಹಾಜರಿದ್ದರು. ಕಟಾರ ಲಕ್ಷ್ಮೀನಾರಾಯಣ ಭಟ್, ಮಹಾಬಲ ಭಂಡಾರಿ, ಚಂದ್ರಕಾಂತ, ಶ್ಯಾಮ ಭಟ್ ಸಂವಾದದಲ್ಲಿ ಭಾಗವಹಿಸಿದರು.
ಚಿಗುರು ಫಾರ್ಮಸರ್್ ಕ್ಲಬ್ ಅಧ್ಯಕ್ಷೆ ಲಕ್ಷ್ಮಿ. ವಿ. ಭಟ್ ಪ್ರಾಸ್ತಾವಿಕ ಮಾತಾಡಿದರು. ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್.ಶಿವರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕ್ಲಬ್ಬಿನ ಕಾರ್ಯದಶರ್ಿ ರವಿಶಂಕರ ದೊಡ್ಡಮಾಣಿ ಸ್ವಾಗತಿಸಿ, ಬ್ಯಾಂಕ್ ಕಾರ್ಯದಶರ್ಿ ಎ.ಕೃಷ್ಣ ಭಟ್ ವಂದಿಸಿದರು. ಶಾಲಾ ಅಧ್ಯಾಪಕ ಬಾಲಕೃಷ್ಣ ಆಚಾರ್ಯ ನಿರೂಪಿಸಿದರು.



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

Monday, August 10, 2009

ದರೋಡೆ ಹೊಂಚು:ಐವರ ಸೆರೆ

ಮಂಜೇಶ್ವರ: ಉಪ್ಪಳದ ಮಣಿಮುಂಡ ಬೀಚ್ ಬಳಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಐವರು ಕುಖ್ಯಾತ ಚೋರರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ದಗರ್ಾ ಸಮೀಪದ ಮೇಲಂಗಡಿ ನಿವಾಸಿ ಜಲಾಲುದ್ದೀನ್, ಉಳ್ಳಾಲ ಮಾಸ್ತಿಕಟ್ಟೆ ಆಜಾದ್ ನಗರದ ಅಬ್ದುಲ್ಲ ಮಜಾರ್, ಮುಹಮ್ಮದ್ ಫಯಾಜ್, ಮುಹಮ್ಮದ್ ನಿಜಾಂ, ಉಳ್ಳಾಲ ಸಯ್ಯಿದ್ ಮದನಿ ರಸ್ತೆಯ ಮುಹಮ್ಮದ್ ಹನೀಫ್ ಎಂಬವರೇ ಆರೋಪಿಗಳು. ಇವರು ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಚಾಕು, ಗುದ್ದಲಿ ಸಹಿತ ಮಾರಕಾಯುಧಗಳನ್ನು ವಶಪಡಿಸಲಾಗಿದೆ.


ಶ್ರೀಗಂಧ ಮರ ಕಳವು: ಇಬ್ಬರ ಸೆರೆ 


ಕಾಸರಗೋಡು: ಸಕರ್ಾರಿ ರಕ್ಷಿತಾರಣ್ಯದಿಂದ ಶ್ರೀಗಂಧ ಮರ ಕಳವು ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಕುಂಡಂಕುಳಿ ನಿವಾಸಿಗಳಾದ ಮೊಹಮ್ಮದ್ ಕುಞ್ಞಿ ಮತ್ತು ಕೃಷ್ಣನ್ ಎಂಬವರೇ ಆರೋಪಿಗಳು. ಇವರು ಶನಿವಾರ ರಾತ್ರಿ ಅರಣ್ಯದಲ್ಲಿ ಮರ ಕಡಿಯುತ್ತಿರುವ ಸುಳಿವು ಅರಣ್ಯಾಧಿಕಾರಿಗೆ ಲಭಿಸಿತ್ತು.
ತಕ್ಷಣ ಕಾರ್ಯಾಚರಣೆ ನಡೆಸಿದ ಪರಿಣಾಮ 8 ಗಂಧದ ಮರಗಳ ಸಹಿತ 2 ಗರಗಸ, ಕತ್ತಿ ಮತ್ತು ಬೈಕೊಂದನ್ನು ವಶಪಡಿಸಲಾಗಿದೆ.


ಕುಸಿದು ಬಿದ್ದು ಸಾವು
 
ಕಾಸರಗೋಡು: ಇಲ್ಲಿನ ಹೊಸ ಬಸ್ಸು ನಿಲ್ದಾಣದ ಬಳಿ ಪೈಂಟಿಂಗ್ ಕಾಮರ್ಿಕನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಅಣಂಗೂರು ನಿವಾಸಿ ಮಹಾಲಿಂಗ ಎಂಬವರ ಪುತ್ರ ಎಂ.ನಾರಾಯಣ(46) ಸಾವನ್ನಪ್ಪಿದ ವ್ಯಕ್ತಿ. ಪೊಲೀಸರು ತಕ್ಣ ಆಸ್ಪತ್ರೆಗೆ ಸೇರಿಸಿದರೂ ಫಲಕಾರಿಯಾಗಿಲ್ಲ.

 
ನಿಧನ
 
ಅಬ್ದುಲ್ ಹಕೀಂ ಮೌಲವಿ
ಕಾಸರಗೋಡು: ಧಾಮರ್ಿಕ ಮುಂದಾಳು ಹಾಗೂ ನಗರದ ಹಸನತ್ ಅಲ್ ಜಾರಿಯ ಜುಮಾ ಮಸೀದಿಯ ಖತೀಬ್ ಎಂ.ಇ.ಅಬ್ದುಲ್ ಹಕೀಂ ಮೌಲವಿ(63) ಇಲ್ಲಿಗೆ ಸಮೀಪದ ಸೂಲರ್ುವಿನ ಸ್ವಗೃಹದಲಿ ್ಲಸೋಮವಾರ ಮುಂಜಾನೆ ನಿಧನರಾದರು.
3 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಫೌಸಿಯಾ ಮತ್ತು ಮುಮ್ತಾಜ್ ಎಂಬ ಇಬ್ಬರು ಪತ್ನಿಯರ ಸಹಿತ 8 ಮಕ್ಕಳಿದ್ದಾರೆ.
 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಮಂಗಳೂರು-ಬೆಂಗಳೂರು ರೈಲು

 
ಕಣ್ಣೂರು ವಿಸ್ತರಣೆ ಕೈಬಿಡುವುದಿಲ್ಲ : ರೈಲ್ವೇ ಉಪ ಸಚಿವ ಇ.ಅಹಮ್ಮದ್ ಸ್ಪಷ್ಟನೆ


ಕಾಸರಗೋಡು: ಮಂಗಳೂರು-ಬೆಂಗಳೂರು ರೈಲನ್ನು ಕಣ್ಣೂರು ವರೆಗೆ ವಿಸ್ತರಿಸಿದ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಕೇಂದ್ರ ರೈಲ್ವೇ ಉಪ ಸಚಿವ ಇ.ಅಹಮ್ಮದ್ ಸ್ಪಷ್ಟಪಡಿಸಿದ್ದಾರೆ.
ಕೇರಳದ ರೈಲ್ವೇ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಆಯೋಜಿಸಿದ ಜನಸಂಪರ್ಕ ಯಾತ್ರೆಗೆ ಸೋಮವಾರ ಜಿಲ್ಲೆಯ ಮಂಜೇಶ್ವರದಿಂದ ಕೇಂದ್ರ ರೈಲ್ವೇ ಉಪ ಸಚಿವ ಇ.ಅಹಮ್ಮದ್ ಚಾಲನೆ ನೀಡಿ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ವಿಸ್ತರಣೆ ಬಗ್ಗೆ ಉದ್ಭವಗೊಂಡಿರುವ ಸಮಸ್ಯೆಯನ್ನು ಮಂಗಳೂರಿನ ಜನಪ್ರತಿನಿಧಿಗಳೊಂದಿಗೆ ಚಚರ್ಿಸಿ ಬಗೆಯಹರಿಸಲಾಗುವುದು ಎಂದವರು ತಿಳಿಸಿದರು. ಜಿಲ್ಲೆಯ ಮೇಲ್ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದೆ. ರೈಲ್ವೇ ಸ್ಟೇಷನ್ಗಳ ಅಭಿವೃದ್ಧಿಯನ್ನು ಅಲ್ಲಿನ ಆದಾಯಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುವುದು. ಆದರೆ ಮಾದರಿ ರೈಲ್ವೇ ನಿಲ್ದಾಣ ಆಗಿ ಘೋಷಣೆಯಾಗಿರುವ ಕಾಸರಗೋಡು ರೈಲ್ವೇ ಸ್ಟೇಷನ್ನ ಸಮಗ್ರ ಅಭಿವೃದ್ಧಿ ನಡೆಸಲಾಗುವುದು ಎಂದೂ ಅವರು ಭರವಸೆ ನೀಡಿದರು. ಮಂಜೇಶ್ವರದ ರೈಲ್ವೇ ಅಭಿವೃದ್ಧಿ ಮತ್ತು ಮೇಲ್ಸೇತುವೆ ನಿಮರ್ಾಣದ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದವರು ತಿಳಿಸಿದರು.
ದೂರು-ದುಮ್ಮಾನ:
ಮಂಗಳೂರಿನ ರೈಲ್ವೇಯ ಮುಖ್ಯ ಅಧಿಕಾರಿಗಳನ್ನೊಳಗೊಂಡ ವಿಶೇಷ ರೈಲಿನಲ್ಲಿ ಮಂಜೇಶ್ವರದ ಸ್ಥಳೀಯ ಜನರ ದೂರು ದುಮ್ಮಾನಗಳನ್ನು ಮನವರಿಕೆ ಮಾಡಿಕೊಂಡರು. ಇದಕ್ಕೂ ಮೊದಲು ರೈಲ್ವೇ ನಿಲ್ದಾಣದಲ್ಲಿ ಸ್ಥಳೀಯರು, ರೈಲ್ವೇ ನೌಕರರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಚಿವರನ್ನು ಸ್ವಾಗತಿಸಿದರು.
ರೈಲ್ವೇಯ ಅವಗಣನೆ ಸ್ಟಷ್ಟವಾಗಿ ತಮಗೆ ತಿಳಿದಿದೆ ಎಂದೂ, ಇದನ್ನು ಸೂಕ್ತ ರೀತಿಯಲ್ಲಿ ಪರಿಹರಿಸಲು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಳಾಗುವುದು ಎಂದವರು ಆಶ್ವಾಸನೆ ನೀಡಿದರು.
ಕುಂಬಳೆಯಲ್ಲಿ ಕೊಂಚ ಕಾಲ ತಂಗಿದ ವಿಶೇಷ ರೈಲಿನಿಂದ ಅಲ್ಲಿನ ಸ್ಥಳೀಯರ ಗೌರವ ಸ್ವೀಕರಿಸಿದರು.
ಕಾಸರಗೋಡಿಗೆ ಬಂದ ಸಚಿವರಿಗೆ ಹಾಗೂ ರೈಲ್ವೇ ಅಧಿಕಾರಿಗಳಿಗೆ ಭಾರೀ ಸ್ವಾಗತ ಲಭಿಸಿತು. ಸಂಸದ ಪಿ.ಕರುಣಾಕರನ್, ಶಾಸಕ ಸಿ.ಟಿ.ಅಹಮ್ಮಾದಾಲಿ, ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷ ಚೆರ್ಕಳ ಅಬ್ದುಲ್ಲ, ಎಂ.ಸಿ.ಖಮರುದ್ದೀನ್, ಟಿ.ಎ.ಖಾಲಿದ್, ಯಾಹ್ಯಾ ತಳಂಗೆರೆ, ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ ಸ್ವಾಗತ ಕೋರಿದರು.
ಬೇಕಲ, ಕಾಞಂಗಾಡು, ನೀಲೇಶ್ವರ, ಚೆರ್ವತ್ತೂರು, ತೃಕ್ಕರಿಪುರ, ಪಯ್ಯನ್ನೂರು, ಪಯಂಗಡಿ ರೈಲ್ವೇ ನಿಲ್ದಾಣಗಳಲ್ಲಿಯೂ ಸಚಿವರ ಜನಸಂಪರ್ಕ ಯಾತ್ರೆಯಲ್ಲಿ ನೂರಾರು ಜನರು ಪಾಲ್ಗೊಂಡರು. ಕೊಯಿಲಾಂಡಿಯಲ್ಲಿ ಸೋಮವಾರದ ಯಾತ್ರೆ ಸಮಾಪ್ತಿಗೊಂಡಿತು.
ಕೇರಳದ ಚರಿತ್ರೆಯಲ್ಲಿಯೇ ಪ್ರಥಮ ಬಾರಿಗೆ ಓರ್ವ ಕೇಂದ್ರ ರೈಲ್ವೇ ಉಪ ಸಚಿವ ರೈಲ್ವೇ ಅಭಿವೃದ್ಧಿಗೆ ಸಂಬಂಧಿಸಿ ಅಧ್ಯಯನ ನಡೆಸಿ, ಜನರ ಸಮಸ್ಯೆಗಳನ್ನು ಜನ ಸಂಪರ್ಕ ಕಾರ್ಯಕ್ರಮದ ಮೂಲಕ ಮಾಹಿತಿ ಪಡೆದುಕೊಂಡರು.
ಕೇರಳ ರಾಜ್ಯದಲ್ಲಿ 4 ದಿನಗಳ ವರೆಗೆ ಈ ಯಾತ್ರೆ ನಡೆಯಲಿದೆ. 

 
`ಸಂಸ್ಕೃತಿಯ ಅರಿವು ಜನಸಾಮಾನ್ಯರನ್ನು ತಟ್ಟಬೇಕು'
 
 
ಮಂಜೇಶ್ವರ: ತುಳು ಭಾಷೆ ಮತ್ತು ಸಂಸ್ಕೃತಿಯ ಅರಿವು ಜನಸಾಮಾನ್ಯರನ್ನು ತಟ್ಟಬೇಕು ಎಂದು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ.ವಿಶ್ವನಾಥ ಬದಿಕಾನ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
ಕೇರಳ ತುಳು ಅಕಾಡೆಮಿ ಇಲ್ಲಿನ ಮೀಯಪದವು ವಿದ್ಯಾವರ್ಧಕ ಅನುದಾನಿತ ಶಾಲೆಯಲ್ಲಿ ಸ್ಥಳೀಯ ಪಂಚಾಯ್ತಿಯ ಸಹಕಾರದಲ್ಲಿ ಆಯೋಜಿಸಿದ `ಆಟಿ ತಮ್ಮನ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತುಳು ಸಂಸ್ಕೃತಿಯ ಪರಿಣಾಮಕಾರಿ ಮಾಧ್ಯಮಗಳ ಮೂಲಕ ಭಾಷೆಗೆ ಕಸುವು ತುಂಬುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ತುಳು ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಉದ್ಘಾಟಿಸಿದರು.
ಕಾಸರಗೋಡು ಸಕರ್ಾರಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ.ರಾಧಾಕೃಷ್ಣ ಬೆಳ್ಳೂರು `ಶ್ರೀ ಭಾಗವತೊ'ದ ಆಯ್ದ ಭಾಗಗಳನ್ನು ವಾಚಿಸಿದರು. ಕರಿಯ ಅವರನ್ನು ಸನ್ಮಾನಿಸಲಾಯಿತು.
ಪಂಚಾಯ್ತಿ ಅಧ್ಯಕ್ಷ ಕೆ.ಅಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದ ಅಂಗವಾಗಿ ತುಳು ಜನಪದ ಕುಣಿತಗಳ ಪ್ರದರ್ಶನ ನಡೆಯಿತು.
 
15ರಂದು ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಮೀಯಪದವಿಗೆ
 
ಮಂಜೇಶ್ವರ: ಸಿ.ಪಿ.ಐ(ಎಂ) ಮೀಂಜ ಲೋಕಲ್ ಸಮಿತಿ ಇಲ್ಲಿನ ಮೀಯಪದವಿನಲ್ಲಿ ನಿಮರ್ಿಸಿದ ಮುನ್ನಿಪ್ಪಾಡಿ ನಾರಾಯಣ ಅಡ್ಯಂತಾಯ ಸ್ಮಾರಕ ಮಂದಿರವನ್ನು ರಾಜ್ಯ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಇದೇ 15ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟಿಸುವರು.
ಮಂಜೇಶ್ವರ ಶಾಸಕ ಸಿ.ಎಚ್.ಕುಂಞ್ಞಂಬು ಅಧ್ಯಕ್ಷತೆ ವಹಿಸುವರು. ಪಕ್ಷದ ಜಿಲ್ಲಾ ಕಾರ್ಯದಶರ್ಿ ಕೆ.ಪಿ.ಸತೀಶ್ಚಂದ್ರನ್, ಮುಖಂಡರಾದ ಎಂ.ರಾಜಗೋಪಾಲ್, ಎ.ಅಬೂಬಕ್ಕರ್, ಶ್ರೀನಿವಾಸ ಭಂಡಾರಿ, ಕೆ.ಆರ್.ಜಯಾನಂದ ಭಾಗವಹಿಸುವರು.
ಕಾರ್ಯಕ್ರಮದ ಯಶಸ್ವಿಗೆ ಬಾಳಪ್ಪ ಬಂಗೇರ(ಅಧ್ಯಕ್ಷ), ಅಬ್ದುಲ್ ರಸಾಕ್ ಚಿಪ್ಪಾರ್(ಸಂಚಾಲಕ) ಅವರನ್ನೊಳಗೊಂಡ ಸ್ವಾಗತ ಸಮಿತಿ ರೂಪೀಕರಿಸಲಾಗಿದೆ. ಈ ಕುರಿತು ಏರ್ಪಡಿಸಿದ ಸಭೆಯಲ್ಲಿ ಬಿ.ಸದಾಶಿವ ರೈ ಅಧ್ಯಕ್ಷತೆ ವಹಿಸಿದ್ದರು. ವಿ.ನಾರಾಯಣನ್, ಎ.ಅಬೂಬಕ್ಕರ್, ಡಿ.ಕಮಲಾಕ್ಷ ಹಾಜರಿದ್ದರು.
 
 
ಸಿ.ಐ.ಟಿ.ಯು. ಮಂಜೇಶ್ವರ ಸಮ್ಮೇಳನ
 
ಮಂಜೇಶ್ವರ: ಸಿ.ಐ.ಟಿ.ಯು. ಮಂಜೇಶ್ವರ ಏರಿಯಾ ಸಮ್ಮೇಳನ ಭಾನುವಾರ ಹೊಸಂಗಡಿಯ ಕೆ.ಎಸ್.ಟಿ.ಎ.ಭವನದಲ್ಲಿ ಜರುಗಿತು.
ಸಿ.ಐ.ಟಿ.ಯು. ಜಿಲ್ಲಾಧ್ಯಕ್ಷ ಕೆ.ಬಾಲಕೃಷ್ಣನ್ ಉದ್ಘಾಟಿಸಿದರು. ಡಿ.ಕಮಲಾಕ್ಷ ಅಧ್ಯಕ್ಷತೆ ವಹಿಸಿದ್ದರು. ಬೀಡಿ ಲೇಬರ್  ಯೂನಿಯನ್ನ ಜಿಲ್ಲಾ ಕಾರ್ಯದಶರ್ಿ ಸಂಘಟನೆಯ ಹೋರಾಟಗಳ ಬಗ್ಗೆ ವಿವರಣೆ ನೀಡಿದರು. ನಿಮರ್ಾಣ ಕಾಮರ್ಿಕ ಸಂಘಟನೆಯ ಏರಿಯ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಬೀಡಿ ಲೇಬರ್ ಯೂನಿಯನ್ನ ಏರಿಯಾ ಕಾರ್ಯದಶರ್ಿ ಬೇಬಿ ಶೆಟ್ಟಿ, ಸಿ.ಐ.ಟಿ.ಯು. ಏರಿಯ ಕಾರ್ಯದಶರ್ಿ ಚಂದಪ್ಪ ಮಾಸ್ಟರ್, ಗೀತಾ ಉಪ್ಪಳ, ಗೋಪಾಲಕೃಷ್ಣ ವಕರ್ಾಡಿ, ಉಷಾ ಉಪ್ಪಳ, ಬಿ.ಎಂ.ಸದಾನಂದ, ಪೊನ್ನಮ್ಮ ಹಾಜರಿದ್ದರು.
ಬಡತನ ರೇಖೆಯ ಕೆಳಗಿನ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಮೂನು ಕಾಮರ್ಿಕರಿಗೆ ಸಕರ್ಾರದ 2 ರೂ. ದರದ ಅಕ್ಕಿ ವಿತರಿಸದ ರೇಷನ್ ವ್ಯಾಪಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು, ಓಣಂ-ರಂಝಾನ್ ಹಬ್ಬಗಳ ಪ್ರಯುಕ್ತ ಹೆಚ್ಚುವರಿ ಆಹಾರಧಾನ್ಯ ವಿತರಣೆಯನ್ನು ತಿರಸ್ಕರಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಮ್ಮೇಳನದಲ್ಲಿ ನಿರ್ಣಯ ಮಂಡಿಸಲಾಯಿತು.
 
  


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಸಂತಾಪ ಸೂಚಕ ಸಭೆ

ಮಂಜೇಶ್ವರ: ಇಲ್ಲಿಗೆ ಸಮೀಪದ ಮೀಯಪದವಿನಲ್ಲಿ ಮುಸ್ಲಿಂ ಲೀಗ್ ಮುಖಂಡ ಪಾಣಕ್ಕಾಡ್ ಮೊಹಮ್ಮದಲಿ ಶಿಹಾಬ್ ತಂಙಳ್ ಅವರ ಸಂತಾಪ ಸೂಚಕ ಸಭೆ ಇತ್ತೀಚೆಗೆ ಜರುಗಿತು.
ಮುಸ್ಲಿಂ ಲೀಗ್ ಅಧ್ಯಕ್ಷ ಎಂ.ಎಸ್.ಎ.ಸತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ಪ್ರಭಾಕರ ಚೌಟ, ಪಂಚಾಯ್ತಿ ಅಧ್ಯಕ್ಷ ಕೆ.ಅಬ್ದುಲ್ಲ, ಯು.ಗೋಪಾಲಕೃಷ್ಣ ರೈ, ಕರಿಯಪ್ಪ ಶೆಟ್ಟಿ, ಶಂಕರನಾರಾಯಣ ನಾವಡ, ಡಿ.ಕಮಲಾಕ್ಷ, ಹಷರ್ಾದ್ ವಕರ್ಾಡಿ, ರಾಮಕೃಷ್ಣ ಕಡಂಬಾರ್, ಕಂಚಿಲ ಮೊಹಮ್ಮದ್, ದಿವಾಕರ ಎಸ್.ಜೆ, ಅಬ್ದುಲ್ಲ ಕುಞ್ಞಿ, ಹಮೀದ್ ಮೀಯಪದವು ಹಾಜರಿದ್ದರು.

ಕುಂಜತ್ತೂರಿನಲ್ಲಿ ಬಸ್ಸುಗಳಿಗೆ ಕಲ್ಲು ತೂರಾಟ

 
ಮಂಜೇಶ್ವರ: ಬೈಕಿನಲ್ಲಿ ಬಂದ ತಂಡ ಎರಡು ಬಸ್ಸುಗಳಿಗೆ ಕಲ್ಲೆಸೆದು ಹಾನಿ ಮಾಡಿದ ಘಟನೆ ಶನಿವಾರ ರಾತ್ರಿ ಕುಂಜತ್ತೂರು ಚೆಕ್ ಪೋಸ್ಟ್ ಬಳಿ ನಡೆದಿದೆ.
ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಮತ್ತು ಕನರ್ಾಟಕ ಸುವರ್ಣ ಸಾರಿಗೆ ಬಸ್ಸುಗಳು ಹಾನಿಗೊಂಡಿದೆ. ಘಟನೆಯಲ್ಲಿ ಖಾಸಗಿ ಬಸ್ಸಿನ ಚಾಲಕ ಪೆರಿಯ ನಿವಾಸಿ ರವಿ ಎಂಬಾತ ಗಾಯಗೊಂಡಿದ್ದಾನೆ.
ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.




--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಸಂಸ್ಕೃತ ದಿನಾಚರಣೆ

ಕಾಸರಗೋಡು ತಾಲೂಕಿನ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಶನಿವಾರ ಸಂಸ್ಕೃತ ದಿನಾಚರಣೆ ಜರುಗಿತು.
ಬದಿಯಡ್ಕ ಬಿ.ಆರ್.ಸಿ. ಪ್ರೋಗ್ರಾಂ ಆಫೀಸರ್ ಪ್ರದೀಪ್ ಕುಮಾರ್ ಉದ್ಘಾಟಿಸಿದರು. ಡಾ.ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಖಂಡಿಗೆ ಶ್ಯಾಮ್ ಭಟ್ ಅವರನ್ನು ಗೌರವಿಸಲಾಯಿತು.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಸಂಸ್ಕೃತ ದಿನಾಚರಣೆ

ಕಾಸರಗೋಡು ತಾಲೂಕಿನ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಶನಿವಾರ ಜರುಗಿದ ಸಂಸ್ಕೃತ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ನಿವೃತ್ತ ಪ್ರಾಂಶುಪಾಲ ಖಂಡಿಗೆ ಶ್ಯಾಮ್ ಭಟ್ ಅವರನ್ನು ಗೌರವಿಸಲಾಯಿತು.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

ಭರತನಾಟ್ಯ

ಕಾಸರಗೋಡು ಸಮೀಪದ ಎಡನೀರು ಮಠದಲ್ಲಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ 49ನೇ ಚಾತುಮರ್ಾಸ್ಯ ಕಾಯಕ್ರಮದ ಅಂಗವಾಗಿ ಉಡುಪು ಮೂಲೆಯ ಲಾಸ್ಯರಂಜನಿಯ ಅನುಪಮ ರಾಘವೇಂದ್ರ ಮತ್ತು ಬಳಗದಿಂದ ಇತ್ತೀಚೆಗೆ ಭರತನಾಟ್ಯ ಜರುಗಿತು.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::