Monday, August 10, 2009

ಮಂಗಳೂರು-ಬೆಂಗಳೂರು ರೈಲು

 
ಕಣ್ಣೂರು ವಿಸ್ತರಣೆ ಕೈಬಿಡುವುದಿಲ್ಲ : ರೈಲ್ವೇ ಉಪ ಸಚಿವ ಇ.ಅಹಮ್ಮದ್ ಸ್ಪಷ್ಟನೆ


ಕಾಸರಗೋಡು: ಮಂಗಳೂರು-ಬೆಂಗಳೂರು ರೈಲನ್ನು ಕಣ್ಣೂರು ವರೆಗೆ ವಿಸ್ತರಿಸಿದ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಕೇಂದ್ರ ರೈಲ್ವೇ ಉಪ ಸಚಿವ ಇ.ಅಹಮ್ಮದ್ ಸ್ಪಷ್ಟಪಡಿಸಿದ್ದಾರೆ.
ಕೇರಳದ ರೈಲ್ವೇ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಆಯೋಜಿಸಿದ ಜನಸಂಪರ್ಕ ಯಾತ್ರೆಗೆ ಸೋಮವಾರ ಜಿಲ್ಲೆಯ ಮಂಜೇಶ್ವರದಿಂದ ಕೇಂದ್ರ ರೈಲ್ವೇ ಉಪ ಸಚಿವ ಇ.ಅಹಮ್ಮದ್ ಚಾಲನೆ ನೀಡಿ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ವಿಸ್ತರಣೆ ಬಗ್ಗೆ ಉದ್ಭವಗೊಂಡಿರುವ ಸಮಸ್ಯೆಯನ್ನು ಮಂಗಳೂರಿನ ಜನಪ್ರತಿನಿಧಿಗಳೊಂದಿಗೆ ಚಚರ್ಿಸಿ ಬಗೆಯಹರಿಸಲಾಗುವುದು ಎಂದವರು ತಿಳಿಸಿದರು. ಜಿಲ್ಲೆಯ ಮೇಲ್ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದೆ. ರೈಲ್ವೇ ಸ್ಟೇಷನ್ಗಳ ಅಭಿವೃದ್ಧಿಯನ್ನು ಅಲ್ಲಿನ ಆದಾಯಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುವುದು. ಆದರೆ ಮಾದರಿ ರೈಲ್ವೇ ನಿಲ್ದಾಣ ಆಗಿ ಘೋಷಣೆಯಾಗಿರುವ ಕಾಸರಗೋಡು ರೈಲ್ವೇ ಸ್ಟೇಷನ್ನ ಸಮಗ್ರ ಅಭಿವೃದ್ಧಿ ನಡೆಸಲಾಗುವುದು ಎಂದೂ ಅವರು ಭರವಸೆ ನೀಡಿದರು. ಮಂಜೇಶ್ವರದ ರೈಲ್ವೇ ಅಭಿವೃದ್ಧಿ ಮತ್ತು ಮೇಲ್ಸೇತುವೆ ನಿಮರ್ಾಣದ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದವರು ತಿಳಿಸಿದರು.
ದೂರು-ದುಮ್ಮಾನ:
ಮಂಗಳೂರಿನ ರೈಲ್ವೇಯ ಮುಖ್ಯ ಅಧಿಕಾರಿಗಳನ್ನೊಳಗೊಂಡ ವಿಶೇಷ ರೈಲಿನಲ್ಲಿ ಮಂಜೇಶ್ವರದ ಸ್ಥಳೀಯ ಜನರ ದೂರು ದುಮ್ಮಾನಗಳನ್ನು ಮನವರಿಕೆ ಮಾಡಿಕೊಂಡರು. ಇದಕ್ಕೂ ಮೊದಲು ರೈಲ್ವೇ ನಿಲ್ದಾಣದಲ್ಲಿ ಸ್ಥಳೀಯರು, ರೈಲ್ವೇ ನೌಕರರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಚಿವರನ್ನು ಸ್ವಾಗತಿಸಿದರು.
ರೈಲ್ವೇಯ ಅವಗಣನೆ ಸ್ಟಷ್ಟವಾಗಿ ತಮಗೆ ತಿಳಿದಿದೆ ಎಂದೂ, ಇದನ್ನು ಸೂಕ್ತ ರೀತಿಯಲ್ಲಿ ಪರಿಹರಿಸಲು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಳಾಗುವುದು ಎಂದವರು ಆಶ್ವಾಸನೆ ನೀಡಿದರು.
ಕುಂಬಳೆಯಲ್ಲಿ ಕೊಂಚ ಕಾಲ ತಂಗಿದ ವಿಶೇಷ ರೈಲಿನಿಂದ ಅಲ್ಲಿನ ಸ್ಥಳೀಯರ ಗೌರವ ಸ್ವೀಕರಿಸಿದರು.
ಕಾಸರಗೋಡಿಗೆ ಬಂದ ಸಚಿವರಿಗೆ ಹಾಗೂ ರೈಲ್ವೇ ಅಧಿಕಾರಿಗಳಿಗೆ ಭಾರೀ ಸ್ವಾಗತ ಲಭಿಸಿತು. ಸಂಸದ ಪಿ.ಕರುಣಾಕರನ್, ಶಾಸಕ ಸಿ.ಟಿ.ಅಹಮ್ಮಾದಾಲಿ, ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷ ಚೆರ್ಕಳ ಅಬ್ದುಲ್ಲ, ಎಂ.ಸಿ.ಖಮರುದ್ದೀನ್, ಟಿ.ಎ.ಖಾಲಿದ್, ಯಾಹ್ಯಾ ತಳಂಗೆರೆ, ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ ಸ್ವಾಗತ ಕೋರಿದರು.
ಬೇಕಲ, ಕಾಞಂಗಾಡು, ನೀಲೇಶ್ವರ, ಚೆರ್ವತ್ತೂರು, ತೃಕ್ಕರಿಪುರ, ಪಯ್ಯನ್ನೂರು, ಪಯಂಗಡಿ ರೈಲ್ವೇ ನಿಲ್ದಾಣಗಳಲ್ಲಿಯೂ ಸಚಿವರ ಜನಸಂಪರ್ಕ ಯಾತ್ರೆಯಲ್ಲಿ ನೂರಾರು ಜನರು ಪಾಲ್ಗೊಂಡರು. ಕೊಯಿಲಾಂಡಿಯಲ್ಲಿ ಸೋಮವಾರದ ಯಾತ್ರೆ ಸಮಾಪ್ತಿಗೊಂಡಿತು.
ಕೇರಳದ ಚರಿತ್ರೆಯಲ್ಲಿಯೇ ಪ್ರಥಮ ಬಾರಿಗೆ ಓರ್ವ ಕೇಂದ್ರ ರೈಲ್ವೇ ಉಪ ಸಚಿವ ರೈಲ್ವೇ ಅಭಿವೃದ್ಧಿಗೆ ಸಂಬಂಧಿಸಿ ಅಧ್ಯಯನ ನಡೆಸಿ, ಜನರ ಸಮಸ್ಯೆಗಳನ್ನು ಜನ ಸಂಪರ್ಕ ಕಾರ್ಯಕ್ರಮದ ಮೂಲಕ ಮಾಹಿತಿ ಪಡೆದುಕೊಂಡರು.
ಕೇರಳ ರಾಜ್ಯದಲ್ಲಿ 4 ದಿನಗಳ ವರೆಗೆ ಈ ಯಾತ್ರೆ ನಡೆಯಲಿದೆ. 

 
`ಸಂಸ್ಕೃತಿಯ ಅರಿವು ಜನಸಾಮಾನ್ಯರನ್ನು ತಟ್ಟಬೇಕು'
 
 
ಮಂಜೇಶ್ವರ: ತುಳು ಭಾಷೆ ಮತ್ತು ಸಂಸ್ಕೃತಿಯ ಅರಿವು ಜನಸಾಮಾನ್ಯರನ್ನು ತಟ್ಟಬೇಕು ಎಂದು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ.ವಿಶ್ವನಾಥ ಬದಿಕಾನ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
ಕೇರಳ ತುಳು ಅಕಾಡೆಮಿ ಇಲ್ಲಿನ ಮೀಯಪದವು ವಿದ್ಯಾವರ್ಧಕ ಅನುದಾನಿತ ಶಾಲೆಯಲ್ಲಿ ಸ್ಥಳೀಯ ಪಂಚಾಯ್ತಿಯ ಸಹಕಾರದಲ್ಲಿ ಆಯೋಜಿಸಿದ `ಆಟಿ ತಮ್ಮನ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತುಳು ಸಂಸ್ಕೃತಿಯ ಪರಿಣಾಮಕಾರಿ ಮಾಧ್ಯಮಗಳ ಮೂಲಕ ಭಾಷೆಗೆ ಕಸುವು ತುಂಬುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ತುಳು ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಉದ್ಘಾಟಿಸಿದರು.
ಕಾಸರಗೋಡು ಸಕರ್ಾರಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ.ರಾಧಾಕೃಷ್ಣ ಬೆಳ್ಳೂರು `ಶ್ರೀ ಭಾಗವತೊ'ದ ಆಯ್ದ ಭಾಗಗಳನ್ನು ವಾಚಿಸಿದರು. ಕರಿಯ ಅವರನ್ನು ಸನ್ಮಾನಿಸಲಾಯಿತು.
ಪಂಚಾಯ್ತಿ ಅಧ್ಯಕ್ಷ ಕೆ.ಅಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದ ಅಂಗವಾಗಿ ತುಳು ಜನಪದ ಕುಣಿತಗಳ ಪ್ರದರ್ಶನ ನಡೆಯಿತು.
 
15ರಂದು ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಮೀಯಪದವಿಗೆ
 
ಮಂಜೇಶ್ವರ: ಸಿ.ಪಿ.ಐ(ಎಂ) ಮೀಂಜ ಲೋಕಲ್ ಸಮಿತಿ ಇಲ್ಲಿನ ಮೀಯಪದವಿನಲ್ಲಿ ನಿಮರ್ಿಸಿದ ಮುನ್ನಿಪ್ಪಾಡಿ ನಾರಾಯಣ ಅಡ್ಯಂತಾಯ ಸ್ಮಾರಕ ಮಂದಿರವನ್ನು ರಾಜ್ಯ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಇದೇ 15ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟಿಸುವರು.
ಮಂಜೇಶ್ವರ ಶಾಸಕ ಸಿ.ಎಚ್.ಕುಂಞ್ಞಂಬು ಅಧ್ಯಕ್ಷತೆ ವಹಿಸುವರು. ಪಕ್ಷದ ಜಿಲ್ಲಾ ಕಾರ್ಯದಶರ್ಿ ಕೆ.ಪಿ.ಸತೀಶ್ಚಂದ್ರನ್, ಮುಖಂಡರಾದ ಎಂ.ರಾಜಗೋಪಾಲ್, ಎ.ಅಬೂಬಕ್ಕರ್, ಶ್ರೀನಿವಾಸ ಭಂಡಾರಿ, ಕೆ.ಆರ್.ಜಯಾನಂದ ಭಾಗವಹಿಸುವರು.
ಕಾರ್ಯಕ್ರಮದ ಯಶಸ್ವಿಗೆ ಬಾಳಪ್ಪ ಬಂಗೇರ(ಅಧ್ಯಕ್ಷ), ಅಬ್ದುಲ್ ರಸಾಕ್ ಚಿಪ್ಪಾರ್(ಸಂಚಾಲಕ) ಅವರನ್ನೊಳಗೊಂಡ ಸ್ವಾಗತ ಸಮಿತಿ ರೂಪೀಕರಿಸಲಾಗಿದೆ. ಈ ಕುರಿತು ಏರ್ಪಡಿಸಿದ ಸಭೆಯಲ್ಲಿ ಬಿ.ಸದಾಶಿವ ರೈ ಅಧ್ಯಕ್ಷತೆ ವಹಿಸಿದ್ದರು. ವಿ.ನಾರಾಯಣನ್, ಎ.ಅಬೂಬಕ್ಕರ್, ಡಿ.ಕಮಲಾಕ್ಷ ಹಾಜರಿದ್ದರು.
 
 
ಸಿ.ಐ.ಟಿ.ಯು. ಮಂಜೇಶ್ವರ ಸಮ್ಮೇಳನ
 
ಮಂಜೇಶ್ವರ: ಸಿ.ಐ.ಟಿ.ಯು. ಮಂಜೇಶ್ವರ ಏರಿಯಾ ಸಮ್ಮೇಳನ ಭಾನುವಾರ ಹೊಸಂಗಡಿಯ ಕೆ.ಎಸ್.ಟಿ.ಎ.ಭವನದಲ್ಲಿ ಜರುಗಿತು.
ಸಿ.ಐ.ಟಿ.ಯು. ಜಿಲ್ಲಾಧ್ಯಕ್ಷ ಕೆ.ಬಾಲಕೃಷ್ಣನ್ ಉದ್ಘಾಟಿಸಿದರು. ಡಿ.ಕಮಲಾಕ್ಷ ಅಧ್ಯಕ್ಷತೆ ವಹಿಸಿದ್ದರು. ಬೀಡಿ ಲೇಬರ್  ಯೂನಿಯನ್ನ ಜಿಲ್ಲಾ ಕಾರ್ಯದಶರ್ಿ ಸಂಘಟನೆಯ ಹೋರಾಟಗಳ ಬಗ್ಗೆ ವಿವರಣೆ ನೀಡಿದರು. ನಿಮರ್ಾಣ ಕಾಮರ್ಿಕ ಸಂಘಟನೆಯ ಏರಿಯ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಬೀಡಿ ಲೇಬರ್ ಯೂನಿಯನ್ನ ಏರಿಯಾ ಕಾರ್ಯದಶರ್ಿ ಬೇಬಿ ಶೆಟ್ಟಿ, ಸಿ.ಐ.ಟಿ.ಯು. ಏರಿಯ ಕಾರ್ಯದಶರ್ಿ ಚಂದಪ್ಪ ಮಾಸ್ಟರ್, ಗೀತಾ ಉಪ್ಪಳ, ಗೋಪಾಲಕೃಷ್ಣ ವಕರ್ಾಡಿ, ಉಷಾ ಉಪ್ಪಳ, ಬಿ.ಎಂ.ಸದಾನಂದ, ಪೊನ್ನಮ್ಮ ಹಾಜರಿದ್ದರು.
ಬಡತನ ರೇಖೆಯ ಕೆಳಗಿನ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಮೂನು ಕಾಮರ್ಿಕರಿಗೆ ಸಕರ್ಾರದ 2 ರೂ. ದರದ ಅಕ್ಕಿ ವಿತರಿಸದ ರೇಷನ್ ವ್ಯಾಪಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು, ಓಣಂ-ರಂಝಾನ್ ಹಬ್ಬಗಳ ಪ್ರಯುಕ್ತ ಹೆಚ್ಚುವರಿ ಆಹಾರಧಾನ್ಯ ವಿತರಣೆಯನ್ನು ತಿರಸ್ಕರಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಮ್ಮೇಳನದಲ್ಲಿ ನಿರ್ಣಯ ಮಂಡಿಸಲಾಯಿತು.
 
  


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment