ಕಾಸರಗೋಡು: ಕಾಸರಗೋಡು ನೆಲದಲ್ಲಿ ಮಂಜೇಶ್ವರ ಗೋವಿಂದ ಪೈಗಳನ್ನು ಹೊರತುಪಡಿಸಿದರೆ ಅಖಿಲ ಕನರ್ಾಟಕ ಮಟ್ಟದಲ್ಲಿ ಕನ್ನಡಮ್ಮನ ಬಾವುಟವನ್ನು ಬೀಸಿದ ಹಾಗೂ ಬೀಸುತ್ತಿರುವ ಹೆಮ್ಮೆಯ ಕನ್ನಡಿಗ ಕವಿ ಕಯ್ಯಾರ.
ಕವಿ, ಗ್ರಂಥಕರ್ತ, ಸ್ವಾತಂತ್ರ್ಯಯೋಧ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ, ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಕನರ್ಾಟಕ ಏಕೀಕರಣ ಹೋರಾಟಗಾರ ಹಾಗೂ ನಾಡೋಜ ಗೌರವ ಪಡೆದ ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇದೀಗ ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯುನ್ನತ ಮನ್ನಣೆಯಾದ ಗೌರವ ಸದಸ್ಯತ್ವಕ್ಕೂ ಪಾತ್ರರಾಗಿದ್ದಾರೆ.
1915 ಜೂನ್ 8ರಂದು ಬಂಟ ಸಮುದಾಯದ ದುಗ್ಗಪ್ಪ ರೈ-ದೈಯ್ಯಕ್ಕೆ ದಂಪತಿಗಳಿಗೆ ಜನಿಸಿದ ಕಯ್ಯಾರರ ಮಾತೃಭಾಷೆ ತುಳು. 12 ವರ್ಷದ ಬಾಲಕನಾಗಿದ್ದಾಗಲೇ ಶಾಲೆಯಲ್ಲಿ `ಸುಶೀಲಾ' ಎಂಬ ಕೈ ಬರಹದ ವಿಶೇಷ ಸಂಚಿಕೆ ಪ್ರಕಟಿಸಿದ್ದರು. ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ನಿಪುಣರೆನಿಸಿದರು. ಬ್ರಾಹ್ಣಣರ ಶಾಲೆಯಲ್ಲಿ ಬ್ರಾಹ್ಮಣೇತರ ವ್ಯಕ್ತಿಯೊಬ್ಬ ಸಂಸ್ಕೃತ ವಿದ್ವಾನ್ ಆಗಿ ಹೊರಬಂದದ್ದೇ ಮಹತ್ಸಾಧನೆಯಾಗಿತ್ತು.
ಗಾಂಧೀಜಿಯವರ ಆಕರ್ಷಣೆಗೆ ಒಳಗಾದ ಅಂದಿನಿಂದ ಕಯ್ಯಾರರು ಖಾದಿಯನ್ನೇ ಮೆಚ್ಚಿಕೊಂಡರು. ಮಂಗಳೂರಿನಲ್ಲಿ ಪತ್ರಕರ್ತನಾಗಿ ದುಡಿಯುತ್ತಿರುವ ವೇಳೆ ಸ್ವಾತಂತ್ರ್ಯ ಚಳವಳಿ(ಭೂಗತ)ಗಾರರಿಗೆ ಕೊಂಡಿಯಾಗಿ ಸಹಕರಿಸಿದರು.
ಬದಿಯಡ್ಕದ ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಅದರ್ಶ ಶಿಕ್ಷಕನೆಂಬ ಪುರಸ್ಕಾರಕ್ಕೆ ಪಾತ್ರರಾದರು. ಈ ಕಾಲಘಟ್ಟದಲ್ಲೇ ಇವರ ಸಾಹಿತ್ಯದ ಬೆಳವಣಿಗೆಯೂ ಆಯಿತು.
ಕವನ ಸಂಕಲನಗಳು:
ಶ್ರೀಮುಖ, ಐಕ್ಯಗಾನ, ಪುನರ್ಣವ, ಚೇತನ, ಪಂಚಮೀ, ಕೊರಗ, ಶತಮಾನದ ಗಾನ, ಪ್ರತಿಭಾ ಪಯಸ್ವಿನಿ, ಗಂಧವತೀ, ಆಶಾನರ ಖಂಡ ಕಾವ್ಯಗಳು(ಅನುವಾದ), ಎನ್ನಪ್ಪೆ ತುಳುವಪ್ಪೆ(ತುಳು ಕವಿತೆಗಳು) ಮತ್ತು ಮಕ್ಕಳ ಮದ್ಯಮಂಜರಿ ಭಾಗ 1 ಮತ್ತು 2
ಗದ್ಯ ಕೃತಿಗಳು:
ರತ್ನರಾಶಿ(ಜೀವನ ಚಿತ್ರಣ), ಲಕ್ಷ್ಮೀಶನ ಲಲಿತ ಕಥೆಗಳು, ಅನ್ನದೇವರು ಮತ್ತು ಇತರ ಕಥೆಗಳು, ಪರಶುರಾಮ(ಜೀವನ ಚಿತ್ರಣ), ಎ.ಬಿ.ಶೆಟ್ಟಿ(ಜೀವನ ಚಿತ್ರಣ), ಕನ್ನಡ ಶಕ್ತಿ(ಜೀವನ ಚರಿತ್ರೆ), ಕಾನರ್ಾಡು ಸದಾಶಿವ ರಾವ್(ಜೀವನ ಚರಿತ್ರೆ), ನಾರಾಯಣ ಕಿಲ್ಲೆ(ಜೀವನ ಚರಿತ್ರೆ), ರಾಷ್ಟಕವಿ ಗೋವಿಂದ ಪೈ(ಜೀವನ ಚರಿತ್ರೆ), ಗೋವಿಂದ ಪೈ ಸ್ಮೃತಿ-ಕೃತಿ, ಮಲೆಯಾಳ ಸಾಹಿತ್ಯ ಚರಿತ್ರೆ, ಸಾಹಿತ್ಯ ದೃಷ್ಟಿ, ಸಂಸ್ಕೃತಿಯ ಹೆಗ್ಗುರುತುಗಳು, ವ್ಯಾಕರಣ ಮತ್ತು ಪ್ರಬಂಧ(ಭಾಗ 1, 2, 3, 4), ನವೋದಯ ವಾಚನ ಮಾಲೆ(ಪಠ್ಯ ಪುಸ್ತಕಮಾಲೆ 1ರಿಂದ 8)
ವಿರಾಗಿನಿ(ನಾಟಕ), ದುಡಿತವೇ ನನ್ನ ದೇವರು(ಆತ್ಮಕಥೆ). ಗಡಿನಾಡಿನ ಕಿಡಿ(ಅಭಿನಂದನಾ ಗ್ರಂಥ,
ಗದ್ಯ ಕೃತಿಗಳು:
ರತ್ನರಾಶಿ(ಜೀವನ ಚಿತ್ರಣ), ಲಕ್ಷ್ಮೀಶನ ಲಲಿತ ಕಥೆಗಳು, ಅನ್ನದೇವರು ಮತ್ತು ಇತರ ಕಥೆಗಳು, ಪರಶುರಾಮ(ಜೀವನ ಚಿತ್ರಣ), ಎ.ಬಿ.ಶೆಟ್ಟಿ(ಜೀವನ ಚಿತ್ರಣ), ಕನ್ನಡ ಶಕ್ತಿ(ಜೀವನ ಚರಿತ್ರೆ), ಕಾನರ್ಾಡು ಸದಾಶಿವ ರಾವ್(ಜೀವನ ಚರಿತ್ರೆ), ನಾರಾಯಣ ಕಿಲ್ಲೆ(ಜೀವನ ಚರಿತ್ರೆ), ರಾಷ್ಟಕವಿ ಗೋವಿಂದ ಪೈ(ಜೀವನ ಚರಿತ್ರೆ), ಗೋವಿಂದ ಪೈ ಸ್ಮೃತಿ-ಕೃತಿ, ಮಲೆಯಾಳ ಸಾಹಿತ್ಯ ಚರಿತ್ರೆ, ಸಾಹಿತ್ಯ ದೃಷ್ಟಿ, ಸಂಸ್ಕೃತಿಯ ಹೆಗ್ಗುರುತುಗಳು, ವ್ಯಾಕರಣ ಮತ್ತು ಪ್ರಬಂಧ(ಭಾಗ 1, 2, 3, 4), ನವೋದಯ ವಾಚನ ಮಾಲೆ(ಪಠ್ಯ ಪುಸ್ತಕಮಾಲೆ 1ರಿಂದ 8)
ವಿರಾಗಿನಿ(ನಾಟಕ), ದುಡಿತವೇ ನನ್ನ ದೇವರು(ಆತ್ಮಕಥೆ). ಗಡಿನಾಡಿನ ಕಿಡಿ(ಅಭಿನಂದನಾ ಗ್ರಂಥ,
ಪ್ರಶಸ್ತಿ-ಪುರಸ್ಕಾರ:
ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ(1969), ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1969-70), ರಾಜ್ಯೋತ್ಸವ ಪ್ರಶಸ್ತಿ(1985), ಅತ್ಯುತ್ತಮ ಜೀವನ ಚರಿತ್ರೆ ಪ್ರಶಸ್ತಿ(1948), ಉತ್ತಮ ಕವನ ಪುಸ್ತಕ ಪ್ರಶಸ್ತಿ-1963(ಪುನರ್ನವ ಕೃತಿಗೆ), ನಾಡೋಜ ಗೌರವ ಮೊದಲಾದುವುಗಳು ಕಯ್ಯಾರರಿಗೆ ಲಭಿಸಿದ ಪ್ರಮುಖ ಪುರಸ್ಕಾರಗಳು.
ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ(1969), ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1969-70), ರಾಜ್ಯೋತ್ಸವ ಪ್ರಶಸ್ತಿ(1985), ಅತ್ಯುತ್ತಮ ಜೀವನ ಚರಿತ್ರೆ ಪ್ರಶಸ್ತಿ(1948), ಉತ್ತಮ ಕವನ ಪುಸ್ತಕ ಪ್ರಶಸ್ತಿ-1963(ಪುನರ್ನವ ಕೃತಿಗೆ), ನಾಡೋಜ ಗೌರವ ಮೊದಲಾದುವುಗಳು ಕಯ್ಯಾರರಿಗೆ ಲಭಿಸಿದ ಪ್ರಮುಖ ಪುರಸ್ಕಾರಗಳು.
ಆ.19ರಂದು ಗೌರವ ಸದಸ್ಯತ್ವ ಪ್ರದಾನ
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಸಮಾರಂಭ ಇದೇ 19ರಂದು ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಜರುಗಲಿದೆ.
ಅಂದು ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಆರ್.ಕೆ. ಗೌರವ ಸದಸ್ಯತ್ವ ಪ್ರದಾನ ಮಾಡುವರು.
ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು.
ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಅಧ್ಯಕ್ಷ ಅಂಬಾತನಯ ಮುದ್ರಾಡಿ ಮತ್ತು ದ.ಕ. ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಭಾಗವಹಿಸುವರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಸಮಾರಂಭ ಇದೇ 19ರಂದು ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಜರುಗಲಿದೆ.
ಅಂದು ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಆರ್.ಕೆ. ಗೌರವ ಸದಸ್ಯತ್ವ ಪ್ರದಾನ ಮಾಡುವರು.
ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು.
ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಅಧ್ಯಕ್ಷ ಅಂಬಾತನಯ ಮುದ್ರಾಡಿ ಮತ್ತು ದ.ಕ. ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಭಾಗವಹಿಸುವರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment