Friday, August 14, 2009

ಉಪ್ಪಳದಲ್ಲಿ ಸಿ.ಪಿ.ಐ. ಧರಣಿ/CPI Protest


ಮಂಜೇಶ್ವರ: ಆಸಿಯಾನ್ ಒಪ್ಪಂದ ವಿರೋಧಿಸಿ ಸಿ.ಪಿ.ಐ. ನೇತೃತ್ವದಲ್ಲಿ ಉಪ್ಪಳದಲ್ಲಿ ಗುರುವಾರ ಸಂಜೆ ಧರಣಿ ನಡೆಯಿತು.
ಸಿ.ಪಿ.ಐ. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇ.ಚಂದ್ರಶೇಖರನ್ ಉದ್ಘಾಟಿಸುವರು. ಎಂ. ಸಂಜೀವ ಶೆಟ್ಟಿ ಅಧ್ಯಕ್ಷ ವಹಿಸಿದ್ದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ರಾಜನ್, ಪಿ.ರಾಘವನ್, ರಾಮಕೃಷ್ಣ ಕಡಂಬಾರು, ಎಂ.ಜಿ.ಹೆಗ್ಡೆ, ಲಾರೆನ್ಸ್ ಡಿ' ಸೋಜಾ, ಜಯರಾಮ, ನಯನಾ ಶೆಟ್ಟಿ, ವಾಣಿಶ್ರೀ, ಆನಂದ ಶೆಟ್ಟಿ, ಸುದಾನಂದ, ಎಸ್.ರಾಮಚಂದ್ರ ಹಾಜರಿದ್ದರು.

 
 
ಬಿ.ಜೆ.ಪಿ. ಸದಸ್ಯತ್ವ ಅಭಿಯಾನ
 
ಮಂಜೇಶ್ವರ:  ಮಂಜೇಶ್ವರ ಮಂಡಲ ಬಿ.ಜೆ.ಪಿ. ಸದಸ್ಯತ್ವ ಅಭಿಯಾನವನ್ನು ಯುವಮೋಚರ್ಾ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಉದ್ಘಾಟಿಸಿದರು.
ಹೊಸಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಎಂ.ಕೆ.ಅಶೋಕ್ ಕುಮಾರ್ ಹೊಳ್ಳ , ವಿ.ಬಾಲಕೃಷ್ಣ ಶೆಟ್ಟಿ, ಪುಷ್ಪರಾಜ್ ಕೆ.ಐಲ್, ಬಾಲಕೃಷ್ಣ ಅಂಬಾರ್, ಕೆ.ಪಿ.ವಲ್ಸರಾಜ್, ಎಂ.ಬಾಬು ರೈ, ಸಿ.ಬಿ.ಕೃಷ್ಣ ಹೆಬ್ಬಾರ್, ದಿನೇಶ್ ಚೆರುಗೋಳಿ, ವಿಜಯ ರೈ ಹಾಜರಿದ್ದರು.

ಬಸ್ಸಿಗೆ ಕಲ್ಲೆಸೆತ : ಬಂಧನ
 
ಮಂಜೇಶ್ವರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಖಾಸಗಿ ಎಕ್ಸ್ಪ್ರೆಸ್ ಬಸ್ಸಿಗೆ ಕಲ್ಲೆಸೆತ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿ ಅಶ್ರಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಕುಂಜತ್ತೂರಿನಲ್ಲಿ ಬಸ್ಸು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಖಾಸಗಿ ಬಸ್ಸನ್ನು ಕಲ್ಲೆಸೆದು ಹಾನಿಗೊಳಿಸಲಾಗಿತ್ತು. ಇದೇ ಬಸ್ಸು ದುರಸ್ತಿಗೊಂಡು ನಿನ್ನೆ ರಸ್ತೆಗಿಳಿದಿರುವುದನ್ನು ತಿಳಿದು ಹೊಂಚು ಹಾಕಿ ಕಲ್ಲೆಸೆಯಲಾಗಿದೆ.
 
ಮಟ್ಕಾ ದಂಧೆ: ಐವರ ಸೆರೆ


ಮಂಜೇಶ್ವರ: ಇಲ್ಲಿನ ಹೊಸಂಗಡಿಯಲ್ಲಿ ಮಟ್ಕಾದಲ್ಲಿ ನಿರತರಾಗಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 1,435 ರೂ. ವಶಪಡಿಸಿಕೊಳ್ಳಲಾಗಿದೆ. ಹೊಸಂಗಡಿಯ ತಾರಾನಾಥ, ಚಂದ್ರಹಾಸ, ಅಂಗಡಿಪದವು ನಿವಾಸಿ ಪ್ರಕಾಶ, ವಿಶ್ವರಾಜ್, ಸುನಿಲ್ ಎಂಬವರು ಬಂಧಿತರು.


 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment