ಕಾಸರಗೋಡು: ದೇಶವನ್ನು ಶಿಥಿಲಗೊಳಿಸುವ ಭಯೋತ್ಪಾದನೆ ಮತ್ತು ವಿಧ್ವಂಸಕ ಶಕ್ತಿಗಳ ನಿಮರ್ೂಲನೆಗೆ ದೇಶದ ಜನತೆ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ರಾಜ್ಯ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಶನಿವಾರ ಇಲ್ಲಿ ಕರೆ ನೀಡಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಲ್ಲಿನ ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ಧ್ವಜಾರೋಹಣಗೊಳಿಸಿ ಅವರು ಮಾತನಾಡಿದರು.
ನೂರಿಪ್ಪತ್ತು ಕೋಟಿಯಷ್ಟು ಜನರಿರುವ ದೇಶವನ್ನು ಭಯೋತ್ಪಾದನೆಯಿಂದ ಬಗ್ಗು ಬಡಿಯಲು ಸಾಧ್ಯವಿಲ್ಲ. ಆದರೆ ವಿಧ್ವಂಸಕ ಶಕ್ತಿಗಳು ಧರ್ಮ, ರಾಜಕೀಯದ ಹೆಸರಲ್ಲಿ ಸಮಾಜದಲ್ಲಿ ಆತಂಕ ಸೃಷ್ಠಿಸುತ್ತಿದೆ. ಈ ರೀತಿಯ ಭಯೋತ್ಪಾದನೆಯಿಂದ ಜನರ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಮುಂಬೈ ಸ್ಫೋಟದ ಬಳಿಕ ವಿಧ್ವಂಸಕ ಚಟುವಟಿಕೆ ದೇಶದಲ್ಲಿ ನಿಂತಿಲ್ಲ. ಈ ಬಗ್ಗೆ ಜನರು ಅತೀವ ಜಾಗ್ರತೆವಹಿಸಬೇಕಿದೆ. ಇದಕ್ಕಾಗಿ ಜನರು ಪೊಲೀಸ್, ಸೈನ್ಯದ ಜತೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ವ್ಯಾಪಕಗೊಳಿಸಲಾಗುವುದು ಎಂದವರು ತಿಳಿಸಿದರು.
ಶಾಸಕರಾದ ಸಿ.ಟಿ.ಅಹಮ್ಮದಾಲಿ, ಕೆ.ಕುಞ್ಞಿರಾಮನ್, ಸಿ.ಎಚ್.ಕುಞ್ಞಂಬು, ಜಿಲ್ಲಾ ಪಂಚಾಯತು ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್, ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹಿಂ, ಜಿಲ್ಲಾಧಿಕಾರಿ ಆನಂದ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್ ಹಾಜರಿದ್ದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment