ಮಂಜೇಶ್ವರ: ಇಲ್ಲಿನ ದೈಗೋಳಿ ಭಜನಾ ಮಂದಿರ ಸಮೀಪದ ಕೊಳವೆ ಬಾವಿಯನ್ನು ದುರಸ್ತಿಗೊಳಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹರಿಸಬೇಕು ಎಂದು ಸ್ಥಳೀಯ ಬಿ.ಜೆ.ಪಿ. ಮತ್ತು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಕೊಳವೆ ಬಾವಿ ಸಮಸ್ಯೆ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಫಲಕಾರಿಯಾಗಿಲ್ಲ ಎಂದೂ ಅದು ತಿಳಿಸಿದೆ.
ಇಂದು ಪರಿಹಾರ ಧನ ವಿತರಣೆ
ಮಂಜೇಶ್ವರ: ಇತ್ತೀಚೆಗೆ ಅಪಘಾತದಲ್ಲಿ ಸಾವಿಗೀಡಾದ ಹೊಸಂಗಡಿ ನಿವಾಸಿ ಕೌಶಿಕ್ ಬಿ. ಅವರ ಕುಟುಂಬಕ್ಕೆ ಪಿ.ಎ.ಸಿ.ಎಲ್. ಹೂಡಿಕೆದಾರರಿಗೆ ನೀಡುವ ಅಪಘಾತ ಪರಿಹಾರ ನಿಧಿಯ ಯೋಜನೆಯಡಿ ಪರಿಹಾರ ಧನವನ್ನು ಇದೇ 13ರಂದು ಹೊಸಂಗಡಿಯ ಹಿಲ್ ಸೈಡ್ ಸಭಾಂಗಣದಲ್ಲಿ ಯುವ ಮೋಚರ್ಾ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ವಿತರಿಸುವರು.
15ರಂದು ಸ್ವಾತಂತ್ರ್ಯ ಸಂರಕ್ಷಣಾ ಸಂಗಮ
ಮಂಜೇಶ್ವರ: ಭಯೋತ್ಪಾದನೆ, ಕೋಮುವಾದ, ಆಸಿಯನ್ ಒಪ್ಪಂದ ಖಂಡಿಸಿ ಇದೇ 15ರಂದು ಸಿ.ಪಿ.ಐ.ನೇತೃತ್ವದಲ್ಲಿ ಸ್ವಾತಂತ್ರ್ಯ ಸಂರಕ್ಷಣಾ ಸಂಗಮ ಹೊಸಂಗಡಿಯಲ್ಲಿ ಜರುಗಲಿದೆ.
ಕಾರ್ಯಕ್ರಮದ ಯಶಸ್ವಿಗೆ ಸಂಬಂಧಿಸಿ ಹೊಸಂಗಡಿಯಲ್ಲಿ ಇತ್ತೀಚೆಗೆ ಸಿಪಿಐ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದಯಕರ ಮಾಡ ಅಧ್ಯಕ್ಷತೆ ವಹಿಸಿದ್ದರು.
ಪಕ್ಷದ ಮುಂದಾಳು ಬಿ.ವಿ.ರಾಜನ್(ಅಧ್ಯಕ್ಷ) ಮತ್ತು ಗಂಗಾಧರ ಕೊಡ್ಡೆ(ಪ್ರಧಾನ ಸಂಚಾಲಕ) ಅವರ ನೇತೃತ್ವದಲ್ಲಿ ಸ್ವಾಗತ ಸಮಿತಿಯಲ್ಲಿ ರೂಪಿಸಲಾಗಿದೆ.
ಕಾರ್ಯಕ್ರಮದ ಯಶಸ್ವಿಗೆ ಸಂಬಂಧಿಸಿ ಹೊಸಂಗಡಿಯಲ್ಲಿ ಇತ್ತೀಚೆಗೆ ಸಿಪಿಐ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದಯಕರ ಮಾಡ ಅಧ್ಯಕ್ಷತೆ ವಹಿಸಿದ್ದರು.
ಪಕ್ಷದ ಮುಂದಾಳು ಬಿ.ವಿ.ರಾಜನ್(ಅಧ್ಯಕ್ಷ) ಮತ್ತು ಗಂಗಾಧರ ಕೊಡ್ಡೆ(ಪ್ರಧಾನ ಸಂಚಾಲಕ) ಅವರ ನೇತೃತ್ವದಲ್ಲಿ ಸ್ವಾಗತ ಸಮಿತಿಯಲ್ಲಿ ರೂಪಿಸಲಾಗಿದೆ.
ಅಂತರರಾಜ್ಯ ಜೂಜಾಟ ಕೇಂದ್ರಕ್ಕೆ ದಾಳಿ: 42 ಮಂದಿ ಸೆರೆ
ಮಂಜೇಶ್ವರ: ತಲಪಾಡಿಯ ಅಂತರರಾಜ್ಯ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು 42 ಮಂದಿ ಸಹಿತ 85 ಸಾವಿರ ರೂ.ಗಳನ್ನು ವಶಪಡಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕೈಕಂಬ ಬಿ.ಸಿ.ರೋಡ್ನ ಶಶಿಧರ ಸಾಲಿಯಾನ್, ಅಡ್ಕ ಪಳ್ಳದ ಸುರೇಶ್ ಕುಮಾರ್, ಕೋಟೆಕ್ಕಾರಿನ ಝೈನುದ್ದೀನ್, ಮಾಡೂರು ಸೈಯಿದ್, ತಲಪಾಡಿ ಚೆಕ್ಪೋಸ್ಟ್ ಸಮೀಪದ ಹನೀಫ್, ರಾಬಟರ್್, ಶ್ರೀನಿವಾಸ ಸಹಿತ 42 ಮಂದಿಯನ್ನು ಡಿವೈಎಸ್ಪಿ ಅಬ್ದುಲ್ ಗಫೂರ್, ಕುಂಬಳೆ ಸಿ.ಐ.ದಾಮೋದರನ್, ಮಂಜೇಶ್ವರ ಎಸ್.ಐ.ವಿ.ವಿ.ಮನೋಜ್ ನೇತೃತ್ವದ ಪೊಲೀಸರು ಬಂಧಿಸಿದರು.
ಜೂಜಾಟ ನಡೆಯುವ ಈ ಕೇಂದ್ರ ರಾಜ್ಯದ ಆಡಳಿತ ಪಕ್ಷದ ಘಟಕ ಪಕ್ಷದ ಪ್ರಾದೇಶಿಕ ನಾಯಕರೊಬ್ಬರ ಸ್ವಾಧೀನ ಹೊಂದಿದೆ ಎಂಬ ಆರೋಪ ಕೇಳಿಬಂದಿದೆ. ಈ ಅಡ್ಡೆಗೆ ಎರಡೂ ರಾಜ್ಯದ ಗಣ್ಯರೂ ಬರುತ್ತಿದ್ದು, ರಾತ್ರಿ ವೇಳೆ ನಡೆಯುತ್ತಿದ್ದರೆ ಭಾರಿ ಕುಳಗಳು ಬಲೆಗೆ ಬೀಳುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೈಕಂಬ ಬಿ.ಸಿ.ರೋಡ್ನ ಶಶಿಧರ ಸಾಲಿಯಾನ್, ಅಡ್ಕ ಪಳ್ಳದ ಸುರೇಶ್ ಕುಮಾರ್, ಕೋಟೆಕ್ಕಾರಿನ ಝೈನುದ್ದೀನ್, ಮಾಡೂರು ಸೈಯಿದ್, ತಲಪಾಡಿ ಚೆಕ್ಪೋಸ್ಟ್ ಸಮೀಪದ ಹನೀಫ್, ರಾಬಟರ್್, ಶ್ರೀನಿವಾಸ ಸಹಿತ 42 ಮಂದಿಯನ್ನು ಡಿವೈಎಸ್ಪಿ ಅಬ್ದುಲ್ ಗಫೂರ್, ಕುಂಬಳೆ ಸಿ.ಐ.ದಾಮೋದರನ್, ಮಂಜೇಶ್ವರ ಎಸ್.ಐ.ವಿ.ವಿ.ಮನೋಜ್ ನೇತೃತ್ವದ ಪೊಲೀಸರು ಬಂಧಿಸಿದರು.
ಜೂಜಾಟ ನಡೆಯುವ ಈ ಕೇಂದ್ರ ರಾಜ್ಯದ ಆಡಳಿತ ಪಕ್ಷದ ಘಟಕ ಪಕ್ಷದ ಪ್ರಾದೇಶಿಕ ನಾಯಕರೊಬ್ಬರ ಸ್ವಾಧೀನ ಹೊಂದಿದೆ ಎಂಬ ಆರೋಪ ಕೇಳಿಬಂದಿದೆ. ಈ ಅಡ್ಡೆಗೆ ಎರಡೂ ರಾಜ್ಯದ ಗಣ್ಯರೂ ಬರುತ್ತಿದ್ದು, ರಾತ್ರಿ ವೇಳೆ ನಡೆಯುತ್ತಿದ್ದರೆ ಭಾರಿ ಕುಳಗಳು ಬಲೆಗೆ ಬೀಳುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಸ್ಸಿಗೆ ಕಲ್ಲೆಸೆದು ಹಾನಿ: ಲಾಠಿ ಪ್ರಹಾರ
ಮಂಜೇಶ್ವರ: ಇಲ್ಲಿನ ಉದ್ಯಾವರ 10ನೇ ಮೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ದುಷ್ಕಮರ್ಿಗಳು ಖಾಸಗಿ ಬಸ್ಸಿಗೆ ಕಲ್ಲೆಸೆದ ಘಟನೆ ಮರುಕಳಿಸಿದೆ.
ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಹಿಂಸಾಚಾರದಲ್ಲಿ ನಿರತರಾಗಿದ್ದ ಯುವಕರ ಮೇಲೆ ಲಾಠಿ ಪ್ರಹಾರ ನಡೆಸಿದರು. ಕುಂಜತ್ತೂರು, ಮಾಡ, ಉದ್ಯಾವರ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕೆಲವು ಪಡ್ಡೆ ಹುಡುಗರು ಗುಂಪು ಕಟ್ಟಿಕೊಂಡು ಬಸ್ಸುಗಳಿಗೆ ಕಲ್ಲೆಸೆದು ಉದ್ವಿಗ್ನ ವಾತಾವರಣ ನಿಮರ್ಿಸಲು ಯತ್ನಿಸುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ.
ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಹಿಂಸಾಚಾರದಲ್ಲಿ ನಿರತರಾಗಿದ್ದ ಯುವಕರ ಮೇಲೆ ಲಾಠಿ ಪ್ರಹಾರ ನಡೆಸಿದರು. ಕುಂಜತ್ತೂರು, ಮಾಡ, ಉದ್ಯಾವರ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕೆಲವು ಪಡ್ಡೆ ಹುಡುಗರು ಗುಂಪು ಕಟ್ಟಿಕೊಂಡು ಬಸ್ಸುಗಳಿಗೆ ಕಲ್ಲೆಸೆದು ಉದ್ವಿಗ್ನ ವಾತಾವರಣ ನಿಮರ್ಿಸಲು ಯತ್ನಿಸುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ.
ಜಬ್ಬಾರ್ ಬಂಧನ
ಮಂಜೇಶ್ವರ: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕಬಡ್ಡಿ ಜಬ್ಬಾರ್ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಈತ ಪಾವೂರಿನಲ್ಲಿ ಅಕ್ರಮ ಸಾರಾಯಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದನು.
ಈತ ಪಾವೂರಿನಲ್ಲಿ ಅಕ್ರಮ ಸಾರಾಯಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದನು.
ಹಟ್ಟಿಗೆ ಬೆಂಕಿ: 1 ಲಕ್ಷ ರೂ.ಗಳ ನಷ್ಟ
ಮಂಜೇಶ್ವರ: ಇಲ್ಲಿನ ಸುಂಕದಕಟ್ಟೆ ಸಮೀಪದ ದೈಗೋಳಿಯಲ್ಲಿ ದೋಜು ಮೂಲ್ಯ ಎಂಬವರ ಮನೆ ಸಮೀಪದ ಹಟ್ಟಿಗೆ ಬೆಂಕಿ ಬಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಹಟ್ಟಿಯ ಬಳಿ ಸಂಗ್ರಹಿಸಿದ್ದ ಅಡಿಕೆ, ತೆಂಗಿನಕಾಯಿ, ಮರಮಟ್ಟುಗಳು ಉರಿದು 1 ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿದೆ.
ಹಟ್ಟಿಯ ಬಳಿ ಸಂಗ್ರಹಿಸಿದ್ದ ಅಡಿಕೆ, ತೆಂಗಿನಕಾಯಿ, ಮರಮಟ್ಟುಗಳು ಉರಿದು 1 ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿದೆ.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment