Wednesday, August 12, 2009

ತೆಂಗಿನ ಗಿಡ ನೆಡಲು 500 ಕೋಟಿ ರೂ.

 
ಕಾಸರಗೋಡು: ಕೇರಳದ 4 ಜಿಲ್ಲೆಗಳಲ್ಲಿ ರೋಗಬಾಧಿತ 1 ಕೋಟಿ ತೆಂಗಿನ ಮರಗಳನ್ನು ಕಡಿದುರುಳಿಸಿ ಅಲ್ಲಿ ಅತ್ಯಧಿಕ ಇಳುವರಿ ನೀಡುವ ತೆಂಗಿನ ಗಿಡಗಳನ್ನು ನೆಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿಧಾನಸಭಾ ಉಪಸಮಿತಿಯ ಅಧ್ಯಕ್ಷ ರಾಜಾಜಿ ಮ್ಯಾಥ್ಯೂ ಥೋಮಸ್ ತಿಳಿಸಿದ್ದಾರೆ.
ಇಲ್ಲಿನ ಸಿಪಿಸಿಆರ್ಐನಲ್ಲಿ ಜರುಗಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತೆಂಗಿನ ಮರಗಳನ್ನು ಕಡಿದು ಹಾಕಲು ಪ್ರತಿ ಮರಕ್ಕೆ 500 ರೂ.ಗಳಂತೆ ರಾಜ್ಯದಲ್ಲಿ 500 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ 250 ಕೋಟಿ ರೂ. ಸಕರ್ಾರ ಮತ್ತು 250 ಕೋಟಿ ರೂ. ತೆಂಗು ಅಭಿವೃದ್ಧಿ ಮಂಡಳಿ ವಿನಿಯೋಗಿಸಲಿದೆ.
ತೆಂಗಿನಿಂದ ಮೌಲ್ಯ ವಧರ್ಿತ  ಉತ್ಪನ್ನಗಳ ತಯಾರಿಯ ಬಗ್ಗೆ ನಿಗಾ ವಹಿಸಲಾಗುವುದು ಎಂದವರು ವಿವರಿಸಿದರು.
ಸಿ.ಕೆ.ಪದ್ಮನಾಭನ್, ಕೆ.ಮಹಮ್ಮದ್, ಕೃಷಿ ಅಧಿಕಾರಿ ಶಿವಪ್ರಸಾದ್ ಹಾಜರಿದ್ದರು.

 
ಕುಣಿಕುಳ್ಳಾಯ ಸಂಸ್ಮರಣೆ
 
ಕಾಸರಗೋಡು: ಮಾಜಿ ಶಾಸಕ, ಕನ್ನಡ ಹೋರಾಟಗಾರ ಯು.ಪಿ.ಕುಣಿಕುಳ್ಳಾಯರ ಸಂಸ್ಮರಣಾ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಇದೇ 13ರಂದು ನಗರದ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ನಡೆಯಲಿದೆ.
ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಐ.ವಿ.ಭಟ್ ಸಂಸ್ಮರಣ ಭಾಷಣ ಮಾಡುವರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು. ಎ.ವಿ.ಶ್ಯಾನುಭೋಗ್, ಅಡೂರು ಉಮೇಶ್ ನಾಯ್ಕ್, ಮುರಳೀಧರ ಬಳ್ಳಕ್ಕುರಾಯ ಮಾತನಾಡುವರು. 
 
 
ಮಲೇರಿಯಾ ರೋಗ: ರಾ.ಸೇ.ಯೋ. ಸಮೀಕ್ಷೆ
 
ಕಾಸರಗೋಡು: ಕಾಸರಗೋಡು ಸಕರ್ಾರಿ ಕಾಲೇಜು ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಮಲೇರಿಯಾ ರೋಗದ ಬಗ್ಗೆ ಸಮೀಕ್ಷೆ ನಡೆಯಿತು.
ಸಮೀಕ್ಷಾ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜೋಸ್ ಜಿ. ಡಿಕ್ರೂಸ್ ಉದ್ಘಾಟಿಸಿದರು.
ಚಂದ್ರನ್ ಜಿ. ಅಧ್ಯಕ್ಷತೆ ವಹಿಸಿದ್ದರು. ವಾಡರ್ು ಸದಸ್ಯೆ ದುಗರ್ಾ, ಮಾಜಿ ಕೌನ್ಸಿಲರ್ ನಾರಾಯಣನ್, ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಶ್ರೀನಾಥ್ ಎ, ರಾ.ಸೇ.ಯೋ. ಯೋಜನಾಧಿಕಾರಿಗಳಾದ ಮಹಮ್ಮದಾಲಿ ಪೆರ್ಲ, ರತ್ನಾಕರ ಮಲ್ಲಮೂಲೆ, ಜಿಲ್ಲಾ ಮಲೇರಿಯಾ ಅಧಿಕಾರಿ ವಿ.ಸುರೇಶನ್, ಆರೋಗ್ಯ ಅಧಿಕಾರಿ  ಗೋಪಾಲಕೃಷ್ಣ, ಇಬ್ರಾಹಿಂ, ಸತೀಶ್ ಕುಮಾರ್, ಮಧುಸೂದನ, ರಾ.ಸೇ.ಯೋ. ಕಾರ್ಯದಶರ್ಿಗಳಾದ ಖಾಲಿದ್, ಮಹೇಶ್, ಜಯಕುಮಾರ್, ಪ್ರಜಿತಾ, ನಯನ  ಹಾಜರಿದ್ದರು.
25 ವಿದ್ಯಾಥರ್ಿಗಳು 300ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಸೊಳ್ಳೆ ನಿವಾರಣೆಯ ಬಗ್ಗೆ ಜಾಗೃತಿ ಮೂಡಿಸಿದರು.
 
 
ಆ.19ರಂದು ಕಯ್ಯಾರರಿಗೆ ಗೌರವ ಸದಸ್ಯತ್ವ ಪ್ರದಾನ
 
ಕಾಸರಗೋಡು: ಹಿರಿಯ ಕವಿ ಡಾ.ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಸಮಾರಂಭ ಇದೇ 19ರಂದು ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಜರುಗಲಿದೆ.
ಅಂದು ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಆರ್.ಕೆ. ಗೌರವ ಸದಸ್ಯತ್ವ ಪ್ರದಾನ ಮಾಡುವರು. 
ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು.
ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಅಧ್ಯಕ್ಷ ಅಂಬಾತನಯ ಮುದ್ರಾಡಿ ಮತ್ತು ದ.ಕ. ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
 
 
ನೀಚರ್ಾಲಿನಲ್ಲಿ ಸಂಸ್ಕೃತ ದಿನಾಚರಣೆ

ಕಾಸರಗೋಡು: ದೇವ ಭಾಷೆ ಸಂಸ್ಕೃತ ಮೂಲೆಗುಂಪಾಗುತ್ತಿದೆ. ಅದರ ಪುನರುತ್ಥಾನ ಕಾರ್ಯ ಆಗಬೇಕಿದೆ. ಸಂಸ್ಕೃತದ ಆಶ್ರಯದಲ್ಲಿ ವಿವಿಧ ಭಾಷೆಗಳು ಬೆಳೆಯುತ್ತಿರುವುದು ಸಂತಸದ ವಿಚಾರ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಡಿ.ರಾಮಕೃಷ್ಣ ಭಟ್ ಬೇಳ ಅಭಿಪ್ರಾಯಪಟ್ಟರು.
ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಸಂಸ್ಕೃತ ಕೌನ್ಸಿಲ್ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ಸಂಸ್ಕೃತ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬದಿಯಡ್ಕ ಬಿ.ಆರ್.ಸಿಯ ಬಿ.ಪಿ.ಒ ಪ್ರದೀಪ್ ಕುಮಾರ್ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ ಖಂಡಿಗೆ ಶಾಮ ಭಟ್ಟರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ಉಂಡೆಮನೆ ಗಣಪತಿ ಭಟ್ ಸನ್ಮಾನಿತರ ಕಿರು ಪರಿಚಯ ಮಾಡಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್ ಮತ್ತು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹಾಜರಿದ್ದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಎಸ್.ವಿ.ಭಟ್ ಸ್ವಾಗತಿಸಿ, ಕುಂಬಳೆ ಉಪಜಿಲ್ಲಾ ಸಂಸ್ಕೃತ ಕೌನ್ಸಿಲ್ ಕಾರ್ಯದಶರ್ಿ ಸುಕುಮಾರ  ಬೆಟ್ಟಂಪಾಡಿ ವಂದಿಸಿದರು. ನವಜೀವನ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಡಾ.ಎಸ್.ಸದಾಶಿವ ಭಟ್ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಸಂಸ್ಕೃತ ಶಾಸ್ತ್ರ ಪ್ರದಶರ್ಿನಿಯನ್ನು ಆಯೋಜಿಸಲಾಗಿತ್ತು. ಸಂಸ್ಕೃತ ಸಂಘಗಾನಂ, ಗಾನಾಲಾಪನಂ, ರಸಪ್ರಶ್ನೆ, ಅಷ್ಟಪದಿ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು.


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment