Friday, August 14, 2009

ಕೊಲೆ ಪ್ರಕರಣ


ಕೋಟಾ : ದಿನಾಂಕ 11/08/09 ರಂದು ಕಾವಡಿ ಗ್ರಾಮದ ವಾಸಿ ಆಶಾ (25 ವರ್ಷ)ರವರು ಕೋಟಾ ಠಾಣೆಯಲ್ಲಿ ದೂರು ನೀಡಿದ್ದು ತನ್ನ ದೂರಿನಲ್ಲಿ ಅವರು ತಾನು 4 ವರ್ಷದ ಹಿಂದೆ ಕೋಟೇಶ್ವರ ಮೂಡು ಗೋಪಾಡಿಯ ರಾಘುರವರನ್ನು ವಿವಾಹವಾಗಿದ್ದು ಆತನಿಗೆ ತಾನು ಎರಡನೇ ಹೆಂಡತಿಯಾಗಿದ್ದು, ನಂತರದ ದಿನಗಳಲ್ಲಿ ಅವರೊಳಗೆ ಸಂಸಾರದಲ್ಲಿ ಸರಿ ಹೋಗದೇ ತನ್ನನ್ನು ಗಂಡ ತೊರೆದು ಹೋಗಿದ್ದು ನಂತರ ತನಗೆ ಆರೋಪಿ ರಘು ಪೂಜಾರಿ (25 ವರ್ಷ)ರವರ ಪರಿಚಯವಾಗಿ ಪ್ರೇಮ ಉಂಟಾಗಿ ತನ್ನನ್ನು ಆರೋಪಿಯು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿ ತಾನು ಗರ್ಭವತಿಯಾದ ಸಮಯ ಗರ್ಭ ತೆಗೆಸಲು ಒತ್ತಾಯ ಮಾಡುತ್ತಿದ್ದು ತಾನು ಒಪ್ಪಿರುವುದಿಲ್ಲ, ನಂತರ ಆರೋಪಿಯು ಆರು ತಿಂಗಳ ಕಾಲ ತನ್ನ ಮನೆಗೆ ಬಾರದೇ ಇದ್ದು, ತಾನು ದಿನಾಂಕ 26/03/09 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಭವಾನಿ ಎಂದು ನಾಮಕರಣ ಮಾಡಲಾಗಿದ್ದು ನಂತರ ಮಗುವಿಗೆ 1 ತಿಂಗಳು 10 ದಿನ ತುಂಬಿದ ಬಳಿಕ ಆರೋಪಿ ರಘು ಪೂಜಾರಿಯು ದಿನಾಂಕ 02/05/09 ರಂದು ತನ್ನ ಮನೆಗೆ ಬಂದು ತಾನು ಬೇಡವೆಂದರೂ ಒತ್ತಾಯ ಪೂರ್ವಕವಾಗಿ ತನ್ನ ಮಗುವನ್ನು ನೋಡಿಕೊಳ್ಳುತ್ತೇನೆ ಎಂದು ಆರೋಪಿ ತನ್ನ ಮನೆಯಾದ ಗಿಳಿಯಾರಿಗೆ ಕೊಂಡು ಹೋಗುವುದಾಗಿ ತಿಳಿಸಿ ಮಗುವಿನೊಂದಿಗೆ ಹೋಗಿರುತ್ತಾನೆ. ತಾನು 2-3 ತಿಂಗಳು ಕಳೆದರೂ ಈವರೆಗೆ ಮಗುವನ್ನಾಗಲೀ ಆರೋಪಿಯನ್ನಾಗಲೀ ನೋಡಿರುವುದಿಲ್ಲ. ಆರೋಪಿಯು ತನ್ನೊಂದಿಗಿನ ಸಂಬಂಧ ಬೆಳಕಿಗೆ ಬರುತ್ತದೆ ಎಂಬ ಕಾರಣಕ್ಕಾಗಿ ಮಗುವನ್ನು ಎಲ್ಲಿಯೋ ಕೊಂಡು ಹೋಗಿ ನಾಶ ಮಾಡಿರಬಹುದು ಎಂಬುದಾಗಿ ತಿಳಿಸಿದ ಮೇರೆಗೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 190/09 ಕಲಂ 364 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ದಿನಾಂಕ 14/08/2009ರಂದು ಆರೋಪಿ ಪತ್ತೆಗೆ ಹೋದ ಕೋಟಾ ಠಾಣಾ ಸಿಬ್ಬಂದಿಯವರು ಠಾಣೆಗೆ ಹಾಜರಾಗಿ ಮಣಿಪಾಲದ ಇಂದ್ರಾಳಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ನಿಮರ್ಾಣ ಹಂತದ ಬಿಲ್ಡಿಂಗ್ನಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಆರೋಪಿ ರಘು ಪೂಜಾರಿಯನ್ನು ವಶಕ್ಕೆ ತೆಗೆದುಕೊಂಡು ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್ರವರ ಮುಂದೆ ಹಾಜರುಪಡಿಸಿದ್ದು, ಅವರು ಆರೋಪಿ ರಘು ಪೂಜಾರಿಯನ್ನು ಕೂಲಂಕುಶವಾಗಿ ವಿಚಾರಿಸಲಾಗಿ, ಆರೋಪಿಯು ತನಗೆ ಹಾಗೂ ಆಶಾಳಿಗೆ ಪ್ರೇಮ ಸಂಬಂಧ ಇದ್ದು ತಾನು ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭವತಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅದಕ್ಕೆ ಭವಾನಿ ಎಂದು ಹೆಸರಿಸಿ, ನಾಮಕರಣ ಮಾಡಿದೆವು. ತಾನು ಆಶಾಳ ಮನೆಗೆ ಬಂದಾಗ ಮಗುವಿನ ಮುಂದಿನ ಭವಿಷ್ಯದ ಬಗ್ಗೆ ಆಕೆಯನ್ನು ಮುದುವೆಯಾಗಲು ಪೀಡಿಸುತ್ತಿದ್ದಳು. ಮದುವೆಯಾಗದ್ದಿದಲ್ಲಿ ಈ ಮಗುವೆ ನಮ್ಮಿಬ್ಬರ ದೈಹಿಕ ಸಂಪರ್ಕದ ಸಾಕ್ಷಿ ಎಂದು ಹೇಳುತ್ತಿದ್ದಳು, ಆಗ ನಾನು ಈ ಮಗವನ್ನು ಕೊಲ್ಲಲು ಯೋಚಿಸಿದೆನು ಹಾಗೆ ದಿನಾಂಕ 02/05/09 ರಂದು ಆ ಮಗುವನ್ನು ತಾನು ತನ್ನ ತಂದೆ ತಾಯಿಗೆ ತೋರಿಸಿಕೊಂಡು ವಾಪಾಸು ಕರೆ ತರುವುದಾಗಿ ಆಶಾಳನ್ನು ಹಾಗೂ ತಾಯಿಯನ್ನು ಒಪ್ಪಿಸಿ ಸುಮಾರು ಒಂದೂವರೆ ತಿಂಗಳ ಮಗುವನ್ನು ಕರೆದುಕೊಂಡು ತನ್ನ ಮನೆಯಲ್ಲಿ ಕೊಲ್ಲಲು ಬಂದಾಗ ಅಲ್ಲಿ ತಂದೆ -ಅಕ್ಕ ಇರುವುದರಿಂದ ಆ ಮಗುವನ್ನು ಕೊಲ್ಲಲು ಆಗಲಿಲ್ಲ. ಬಳಿಕ ಪಕ್ಕದ ಮನೆಯ ಗಂಗಕ್ಕನವರ ಮನೆಯಲ್ಲಿ ಕೊಲ್ಲಲು ಹೋದಾಗ ಅಲ್ಲಿ ಗಂಗಕ್ಕ ಇದ್ದುದ್ದರಿಂದ ಕೊಲ್ಲಲು ಆಗದೇ ಅಲ್ಲಿಂದ ಕೋಟ ಹಿರೆಮಹಾಲಿಂಗೇಶ್ವರ ದೇವಸ್ಥಾನದ ಕಡೆಗೆ ಹೋಗುವಾಗ ದಾರಿ ಮಧ್ಯೆ ಸಾಯಂಕಾಲ 6 ಘಂಟೆಗೆ ಮೂಡು ಗಿಳಿಯಾರು ಗ್ರಾಮದ ರಾಘವೇಂದ್ರ ಐತಾಳರ ಹಡುಬಿದ್ದ ಗದ್ದೆಯ ನಡುಕಟ್ಟೆಯ ಮಧ್ಯೆ ಅಕೇಶಿಯಾ ಮರದ ಬುಡದಲ್ಲಿ ಮಗುವಿನ ಕುತ್ತಿಗೆಯನ್ನು ಒತ್ತಿ ಹಿಡಿದು ಕೊಂದು ಅಲ್ಲಿದ್ದ ಜಬಲಿ ಹುಲ್ಲಿನಿಂದ ಮುಚ್ಚಿ ಬೆಂಕಿ ಕಡ್ಡಿುಂದ ಬೆಂಕಿ ಕೊಟ್ಟು ಮಗುವನ್ನು ಸುಟ್ಟು ಬೂದಿ ಮಾಡಿದ್ದಾಗಿ ಆರೋಪಿ ಕಬೂಲಾತಿ ಹೇಳಿಕೆ ನೀಡಿದ್ದು ಆತನ ಹೇಳಿಕೆಯ ಮೇರೆಗೆ ಈಗಾಗಲೇ ದಾಖಲಾದ ಪ್ರಕರಣದಲ್ಲಿಯ ಕಲಂ 364 ಐಪಿಸಿಯನ್ನು 302, 201 ಐಪಿಸಿಯನ್ನಾಗಿ ಪರಿವತರ್ಿಸಲಾಗಿದೆ.
 
ಅಂದರ್ ಬಾಹರ್ - 7 ಜನರ ಬಂಧನ
 
ಕಾರ್ಕಳ : ದಿನಾಂಕ 13/08/09 ರಂದು ಸುಮಾರು 23:15 ಘಂಟೆ ಸಮಯಕ್ಕೆ ಕಾರ್ಕಳ ಗ್ರಾಮಾಂತರ ಠಾಣಾ ಸರಹದ್ದಿನ ಮಾಳ ಗ್ರಾಮದ ಮಾಳ ಚೌಕಿಯಂಗಡಿ ಸುರೇಶ ಆಚಾರಿ ಎಂಬವರಿಗೆ ಸೇರಿದ ಗೂಡಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ 1) ಕೃಷ್ಣಪ್ಪ ಮೂಲ್ಯ (40 ವರ್ಷ) ತಂದೆ. ಅಣ್ಣಪ್ಪ ಮೂಲ್ಯ ವಾಸ. ಸುಂಟಿಕುಮೇರು ಮನೆ ಮಾಳ ಗ್ರಾಮ ಕಾರ್ಕಳ ತಾಲೂಕು 2) ಜಯ ಪೂಜಾರಿ (36 ವರ್ಷ) ತಂದೆ ದಿವಂಗತ ವೀರಪ್ಪ ಪೂಜಾರಿ ವಾಸ. ಮಾಳ ಚೌಕಿ ಮಾಳ ಗ್ರಾಮ, ಕಾರ್ಕಳ ತಾಲೂಕು 3) ರಾಮ ಶೆಟ್ಟಿ (45 ವರ್ಷ) ತಂದೆ ನರಂಗ ಶೆಟ್ಟಿ ವಾಸ. ಹೆಕ್ಕರೊಟ್ಟು ಮನೆ ಮಾಳ ಗ್ರಾಮ, ಕಾರ್ಕಳ ತಾಲೂಕು 4) ಪ್ರಭಾಕರ ಶೆಟ್ಟಿ (38 ವರ್ಷ) ತಂದೆ ದಿವಂಗತ ವಿಠಲ ಶೆಟ್ಟಿ ವಾಸ ಪಜಿರ ಮನೆ ಮಾಳ ಗ್ರಾಮ, ಕಾರ್ಕಳ ತಾಲೂಕು 5) ನಾಗೇಶ ಆಚಾರಿ (48 ವರ್ಷ) ತಂದೆ ಲಕ್ಮಣ್ ಆಚಾರಿ ವಾಸ. ದಖರ್ಾಸು ಮನೆ ಮಾಳ ಗ್ರಾಮ ಕಾರ್ಕಳ ತಾಲೂಕು 6) ಶೇಖರ ದೇವಾಡಿಗ (35 ವರ್ಷ) ತಂದೆ ಬಾಬು ದೇವಡಿಗ ವಾಸ ಹಾಡಿ ಮನೆ ಮಾಳ ಚೌಕಿ ಮಾಳ ಗ್ರಾಮ ಕಾರ್ಕಳ ತಾಲೂಕು ಮತ್ತು 7) ಕರುಣಾಕರ ಮಡಿವಾಳ (23 ವರ್ಷ) ತಂದೆ ರಾಘು ಮಡಿವಾಳ ವಾಸ ಪೆರಿಯಡ್ಕ ಮನೆ, ಮಾಳ ಚೌಕಿ, ಮಾಳ ಗ್ರಾಮ ಕಾರ್ಕಳ ತಾಲೂಕುರವರನ್ನು ಖಚಿತ ವರ್ತಮಾನದ ಮೇರೆಗೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ.ರವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ದಸ್ತಗಿರಿ ಮಾಡಿ ಆಟಕ್ಕೆ ಬಳಸಿದ ಪರಿಕರಗಳನ್ನು ಹಾಗೂ ನಗದು ರೂಪಾಯಿ 890/-ನ್ನು ಸ್ವಾಧೀನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 93/09 ಕಲಂ 87 ಕನರ್ಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಸ್ವಾಭಾವಿಕ ಮರಣ
 
ಕಾಪು : ಕಾಪು ಠಾಣಾ ಸರಹದ್ದಿನ ಉಳಿಯಾರಗೋಳಿ ಗ್ರಾಮದ ಕೈಪುಂಜಾಲ್ನ ಪ್ರಿಯಾ ನಿವಾಸದ ಸತೀಶ. ಬಿ. ಶ್ರೀಯಾನ್ (31 ವರ್ಷ) ತಂದೆ ಬೀರ. ಬಿ.ಶ್ರೀಯಾನ್ರವರ ಅಣ್ಣನಾದ ಸುರೇಶ.ಬಿ. ಶ್ರೀಯಾನ್ (32 ವರ್ಷ)ರವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ದುಬಾಯಲ್ಲಿ ನರ ದೌಬಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಅಸೌಖ್ಯ ತೀವ್ರಗೊಂಡು ಊರಿಗೆ ಬಂದಿದ್ದವರು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 13/07/09 ರಂದು 18:15 ಗಂಟೆಗೆ ಅಸೌಖ್ಯದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದವರನ್ನು ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿರುತ್ತಾರೆ ಎಂಬುದಾಗಿ ಸತೀಶ. ಬಿ. ಶ್ರೀಯಾನ್ರವರು ದಿನಾಂಕ 14/08/2009ರಂದು ದೂರು ನೀಡಿದ ಮೇರೆಗೆ ಕಾಪು ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 18/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 

--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment