Wednesday, August 12, 2009

ಹಲ್ಲೆ - ಉಭಯ ತಂಡಗಳಿಂದ ದೂರು ದಾಖಲು


ಮಣಿಪಾಲ: ದಿನಾಂಕ 11/08/09 ರಂದು 11:30 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬನ್ನೂರು ಗ್ರಾಮದ ವಾಸಿ ಅಬ್ದುಲ್ ಹನೀಫ್ (23 ವರ್ಷ)ರವರು ತನ್ನ ಮಣಿಪಾಲ ಆಶ್ಲéೇಷ ಹೋಟೇಲು ಕಟ್ಟಡದಲ್ಲಿರುವ ವಿಂಟೇಜ್ ಫ್ಯಾಷನ್ ಅಂಗಡಿಯಲ್ಲಿದ್ದಾಗ ಆರೋಪಿ ಮಹಮ್ಮದ್ ಶಾರೀಕ್ ಮತ್ತು ಇತರ 3 ಮಂದಿ ಆರೋಪಿತರು ಕೆಎ 20 ಎನ್ 5920 ನಂಬರಿನ ಕಾರಿನಲ್ಲಿ ಬಂದು ಮಹಮ್ಮದ್ ಶಾರೀಕ್ರವರು ಅಬ್ದುಲ್ ಹನೀಫ್ರವರಿಗೆ ಬ್ಯಾಟಿನಿಂದ ಹಲ್ಲೆ ನಡೆಸಿದ್ದು ಉಳಿದವರು ಕೈುಂದ ಹೊಡೆದು ಕಾಲಿನಿಂದ ತುಳಿದು ಅಂಗಡಿಯ ಕ್ಯಾಶ್ ಕೌಂಟರ್ ಹಾಗೂ ಕಂಪ್ಯೂಟರ್ ಜಖಂಗೊಳಿಸಿ ಬೆದರಿಕೆ ಹಾಕಿರುತ್ತಾರೆ. ಹಲ್ಲೆಯಿಂದ ಅಬ್ದುಲ್ ಹನೀಫ್ರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಅಬ್ದುಲ್ ಹನೀಫ್ರವರ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 142/09 ಕಲಂ 323, 324, 506, 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಇದೇ ಘಟನೆಗೆ ಸಂಬಂಧಿಸಿದಂತೆ ಉಡುಪಿಯ ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆಯ ವಾಸಿ ಮೊಹಮ್ಮದ್ ಶಿಹಾನ್ (26)ರವರು ತನ್ನ ದೂರಿನಲ್ಲಿ ತಾನು ದಿನಾಂಕ 11/08/09 ರಂದು 12:30 ಗಂಟೆಗೆ ತನ್ನ ಮೊಟಾರು ಸೈಕಲಿನಲ್ಲಿ ಮಣಿಪಾಲ ಕಡೆಗೆ ಬರುತಿದ್ದಾಗ ಆರೋಪಿತರಾದ ಆಸಿಫ್, ಹಝೀಮ್, ಹನೀಫ್ ಮತ್ತು ಮೌಶಿನ್ ಎಂಬುವವರು ಮಣಿಪಾಲ ಗ್ರೀನ್ ಪಾಕರ್್ ಬಳಿ 2 ಬೈಕಿನಲ್ಲಿ ಬಂದು ತನ್ನನ್ನು ತಡೆದು ನಿಲ್ಲಿಸಿ ಹಾಕಿ ಕೋಲಿನಿಂದ ಹೊಡೆಯಲು ಬಂದಾಗ ತಾನು ತಪ್ಪಿಸಿಕೊಂಡಿದ್ದು ಆರೋಪಿತರು ತನಗೆ ಕೈುಂದ ಹೊಡೆದು ಕಾಲಿನಿಂದ ತುಳಿದು ಜಖಂಗೊಳಿಸಿ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ದೂರಿರುತ್ತಾರೆ. ಹಲ್ಲೆಯಿಂದ ಮೊಹಮ್ಮದ್ ಶಿಹಾನ್ರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಮೊಹಮ್ಮದ್ ಶಿಹಾನ್ರವರ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 143/09 ಕಲಂ 341, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ - ಪ್ರಕರಣ ದಾಖಲು
 
ಕೋಟಾ: ದಿನಾಂಕ 11/08/09 ರಂದು ರಾತ್ರಿ 21:30 ಗಂಟೆಗೆ ಕೋಟಾ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್ರವರು ಠಾಣೆಯಲ್ಲಿರುವಾಗ ದೊರೆತ ಖಚಿತ ಮಾಹಿತಿಯಂತೆ ಕುಂದಾಪುರ ತಾಲೂಕು ಹೊಂಬಾಡಿ ಮಂಡಾಡಿ ಹುಣ್ಸೆಮಕ್ಕಿ ಪಂಚಾಯತ್ ಕಚೇರಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಗುಂಪು ಕೂಡಿಕೊಂಡು ವಿಪರೀತ ಕುಡಿದು ಸ್ಥಳೀಯ ಆರೋಪಿಗಳಾದ 1) ವಿಶ್ವನಾಥ ಪೂಜಾರಿ (20) ತಂದೆ ನಾಗರಾಜ ಪೂಜಾರಿ, 2) ಸುರೇಶ್ ಪ್ರಭು (31) ತಂದೆ ಗೋಪಾಲ ಪ್ರಭು, 3) ರಾಜೇಂದ್ರ ಪ್ರಭು (24) ತಂದೆ ಮಂಜುನಾಥ ಪ್ರಭು, 4) ಗಣೇಶ್ ಪ್ರಭು (30) ತಂದೆ ಶ್ರೀನಿವಾಸ ಪ್ರಭು, 5) ಸಂತೋಷ ಪೂಜಾರಿ (27) ತಂದೆ ಮಂಜು ಪೂಜಾರಿ, 6) ರಾಘವೇಂದ್ರ ಪ್ರಭು (25) ತಂದೆ ಮಂಜುನಾಥ ಪ್ರಭು ಮತ್ತು 7) ಸುರೇಶ್ ಪೂಜಾರಿ (28) ತಂದೆ ಆನಂದ ಪ್ರಜಾರಿಯವರು ತಮ್ಮೊಳಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಕಿರುಚಾಡಿಕೊಂಡು ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ದೂಡಾಡಿಕೊಂಡು ಇದ್ದವರನ್ನು 22:15 ಗಂಟೆಗೆ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ದಸ್ತಗಿರಿ ಮಾಡಿ ಸ್ಥಳದಲ್ಲಿದ್ದ ಕೆ.ಎ 20 ಡಬ್ಲ್ಯು 1573 ನಂಬರಿನ ಮೋಟಾರ್ ಸೈಕಲ್ ಮತ್ತು ಸ್ಥಳದಲ್ಲಿದ್ದ ಖಾಲಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 192/09 ಕಲಂ 160 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಅಶ್ಲೀಲ ಸಿ.ಡಿ. ಮಾರಾಟಗಾರನ ಬಂಧನ - 30 ಅಶ್ಲೀಲ ಸಿ.ಡಿ. ವಶ
 
ದಿನಾಂಕ 12.08.09 ರಂದು ಬೆಳಿಗ್ಗೆ 11 ಗಂಟೆಗೆ ಕುಂದಾಪುರ ತಾಲೂಕಿನ ಚಿತ್ತೂರು ಎಂಬಲ್ಲಿ ಉಡುಪಿ ಜಿಲ್ಲಾ ಅಪರಾಧ ಗುಪ್ತವಾತರ್ಾ ವಿಭಾಗದ ಪೊಲೀಸ್ ನಿರೀಕ್ಷಕರಾದ ಶ್ರೀ ಗಣೇಶ್ ಎಂ. ಹೆಗಡೆರವರು ಸಿಬ್ಬಂದಿಯವರೊಂದಿಗೆ ಗಸ್ತು ಮಾಡುತ್ತಿರುವ ಸಮಯ ಬಂದ ಖಚಿತ ವರ್ತಮಾನದ ಮೇರೆಗೆ ಕೆಎ 20 ಹೆಚ್ 3633 ನಂಬರಿನ ಕೆನೆಟಿಕ್ ಹೋಂಡಾ ಸ್ಕೂಟರನ್ನು ನಿಲ್ಲಿಸಿ ಅದನ್ನು ಚಲಾುಸುತ್ತಿದ್ದ ವಂಡ್ಸೆ ನಿವಾಸಿ ಗೋಪಾಲ ಪೂಜಾರಿ (43) ತಂದೆ ರಾಜೀವ ಪೂಜಾರಿಯನ್ನು ಪರಿಶೀಲಿಸಿದಾಗ ಕೆನೆಟಿಕ್ ಹೋಂಡಾದ ಟೂಲ್ಸ್ ಬಾಕ್ಸ್ನಲ್ಲಿ 30 ಅಶ್ಲೀಲ ಸಿಡಿಗಳು ದೊರೆತಿದ್ದು ಈ ಸಿಡಿಗಳನ್ನು ಹಾಗೂ ಕೆನೆಟಿಕ್ ಹೊಂಡಾವನ್ನು ಮಹಜರು ಮೂಲಕ ಸ್ವಾಧಿನಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಕೊಲ್ಲೂರು ಠಾಣೆಗೆ ಹಸ್ತಾಂತರಿಸಿದ್ದು ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 47/09 ಕಲಂ 292 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ. ಈ ಕಾಯರ್ಾಚರಣೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರವೀನ್ ಮಧುಕರ್ ಪವಾರ್ರವರು ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕಾಶೀನಾಥ್ ತಳಕೇರಿರವರ ಮಾರ್ಗದರ್ಶನದಲ್ಲಿ ನಡೆಸಲಾಗಿದ್ದು, ಕಾಯರ್ಾಚರಣೆಯಲ್ಲಿ ಸಿಬ್ಬಂದಿಯವರಾದ ದಾಮೋದರ, ನಾರಾಯಣ ಸತೀಶ್ ಬಲ್ಲಾಳ್, ಮಹಾಬಲ ಶೆಟ್ಟಿ, ಉದಯ ಕುಂದರ್, ದಿನೇಶ್ ಶೆಟ್ಟಿ, ರತ್ನಾಕರ, ವಾಮನ, ಉದಯ ಮಲ್ಪೆ, ಮತ್ತು ಮನೋಹರ ಉದ್ಯಾವರ ಭಾಗವಹಿಸಿರುತ್ತಾರೆ.
 
 
ಅಪಘಾತ ಪ್ರಕರಣ
 
ದಿನಾಂಕ: 10/08/09 ರಂದು ಮದ್ಯಾಹ್ಮ 13:30 ಗಂಟೆ ಸಮಯಕ್ಕೆ ರಾಹೆ 17 ರ ದೂಫದಕಟ್ಟೆಯ ಬಳಿ ರಸ್ತೆಯ ಬದಿಯಿಂದ ನಡೆದುಕೊಂಡು ಮನೆ ಕಡೆ ಹೋಗುತ್ತಿರುವ ಸಮಯ ಆರೋಪಿಯ ತನ್ನ ಮೋಟಾರು ಸೈಕಲ್ ನಂ ಕೆಎ 20 ಕ್ಯೂ 7164 ನ್ನು ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಕೃಷ್ಣ ಸಾಲಿಯಾನ್ (53ವರ್ಷ) ತಂದೆ: ದಿ.ಐತು ಸುವರ್ಣ ವಾಸ: ಗಾಂದೀನಗರ ಬೈಕಾಡಿ ಗ್ರಾಮ ಎಂಬವರ ಎಡಕೈಗೆ ಜಖಂ ಉಚಿಟಾಗಿರುತ್ತದೆ. ಈ ಬಗ್ಗೆ ಕೃಷ್ಣ ಸಾಲಿಯಾನ್ ರವರು ಬ್ರಹ್ಮಾವರ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 142/09 ಕಲಂ 279, 337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ: 11/08/09 ರಂದು ಸಂಜೆ 6:45 ಗಂಟೆ ಸಮಯಕ್ಕೆ ಶಫೀ(30) ತಂದೆ: ಬಪ್ಪು ಸಾಹೇಬ್ ವಾಸ: 5 ಸೆಂಟ್ಸ್ ಕುಂಭಾಶಿ ಕುಂದಾಪುರ ತನ್ನ ಬಸ್ಸು ನಂಬ್ರ ಕೆ.ಎ 20 ಬಿ 1455 ನೇಯದನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುವರೆ ರಾಹೆ 17 ರಲ್ಲಿ ಚಲಾಯಿಸಿಕೊಂಡು ಬರುತ್ತಿದ್ದು ಉಡುಪಿ ತಾಲೂಕು ಮಣೂರು ಗ್ರಾಮದ ಬಾಳೆಬೆಟ್ಟು ಎಂಬಲ್ಲಿ ತಲುಪುವಾಗ್ಗೆ, ಆರೋಪಿ ದಿನೇಶ್ ನಂಬ್ರ ಕೆ ಎ 20 ಬಿ 3039 ನೇದರ ಚಾಲಕ ತನ್ನ ಬಸ್ಸನ್ನು ಕುಂದಾಪುರ ಕಡೆಯಿಂದ ರಾ ಹೆ 17 ರಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಬಲಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಕಂಡೆಕ್ಟರ್ ಗಣೇಶ್ ಎಂಬವರು ಒಮ್ಮೇಲೆ ಬಸ್ಸಿನೊಳಗೆ ಬಿದ್ದು ಪರಿಣಾಮವಾಗಿ ಅವರ ಬಲ ಕೈಗೆ ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕೋಟೇಶ್ವರದ ಎನ್.ಆರ್ ಆಚಾರ್ಯ ಆಸ್ಪತ್ರೆ ಕರೆದುಕೊಂಡು ಹೋಗಿದ್ದು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿರುದಿಲ್ಲವಾಗಿ ಶಫೀ(30)ರವರು ಕೋಟಾ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 191/09 ಕಲಂ 279, 338 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಹಲ್ಲೆ ಪ್ರಕರಣ
 
ದಿನಾಂಕ 11/08/2009 ರಂದು ಸಂಜೆ 4.30 ಗಂಟೆಗೆ ಶರತ್ರಾಜ್ ,ತಂದೆ:ಮಂಜುನಾತ ದೇವಾಡಿಗ ,ವಾಸ:ಸುಬ್ರಮಣ್ಯ ದೇವಸ್ಥಾನದ ಹತ್ತಿರ ಉಳ್ಳೂರು ,ಕಂದಾವರ ಗ್ರಾಮ ಎಂಬವರ ಗದ್ದೆಯಿಂದ ಹುಲ್ಲಿನ ಕಟ್ಟನ್ನು ತಲೆಯುಲ್ಲಿ ಹೊತ್ತು ಕೊಂಡು ಕಾಲು ದಾರಿಯಲ್ಲಿ ಬರುತ್ತ ಮನೆಯ ಹಿಂಬದಿಯಲ್ಲಿರುವ ಮಕ್ಕಿಗದ್ದೆ ಎಂಬಲ್ಲಿಗೆ ತಲುಪಿದಾಗ ಆರೋಪಿಗಳಾದ ರಾಧಾ ಮತ್ತು ಸುಶೀಲ ಎಂಬವರು ಅಲ್ಲಗೆ ಬಂದು ತಡೆದು ತಲೆಯ ಮೇಲಿನ ಹುಲ್ಲಿನ ಕಟ್ಟಿನ ಸಮೇತ ದೂಡಿ ಹಾಕಿ ರಾಧಾ ಎಂಬವರು ಕೋಲಿನಿಂದ ತಲೆಗೆ ತೊಡೆಗೆ ಮತ್ತು ಸೊಂಟಕ್ಕೆ ಹೊಡೆದು ಸುಶೀಲ ಎಂಬವರು ಕಾಲಿನಿಂದ ಎದೆಗೆ ತುಳಿದರು ಅಲ್ಲಿಗೆ ಬಂದ ಲಕ್ಷ್ಮೀ ಎಂಬವರು ಅವನ ತಲೆಯನ್ನು ಹೊಡೆದು ಹಾಕಿ ಕೈಕಾಲುಗಳನ್ನು ಕಡಿದು ಹಾಕಿ ಎಂದು ಹೇಳಿ ಮೂರು ಜನರು ಸೇರಿ ಅವಾಚ್ಯ ಶಬ್ದಗಳಿಂದ ಬೈದು ಈ ದಾರಿಯಲ್ಲಿ ಮುಂದೆ ಯಾವತ್ತಾದರೂ ಬಂದರೆ ಕೊಂದು ಹಾಕುತ್ತೇವೆ ಎಂಬುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಶರತ್ರಾಜ್ರವರು ಕುಂದಾಪುರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 235/09 ಕಲಂ 341 ,323 ,324 ,504 ,506 ಜೊತೆಗೆ 34 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಈ ಹಲ್ಲಗೆ ಫಿರ್ಯಾದಿದಾರರಿಗೂ ಆರೋಪಿಗಳಿಗೂ ಹಿರಿಯರಿಂದ ಬಂದ ಜಾಗದ ಪಾಲಿನ ವಿಚಾರವಾಗಿ ತುಂಬ ವರ್ಷಗಳಿಂದ ದ್ವೇಷವಿದ್ದು ಅದೇ ಪೂರ್ವ ದ್ವೇಶದಿಂದ ಮತ್ತು ಸಮಾನ ಉದ್ದೇಶದಿಂದ ಈ ಹಲ್ಲೆ ನಡೆಸಿರುವುದಾಗಿದೆ.
 
 
ಬಾವಿಗೆ ಬಿದ್ದು ಸಾವು ಪ್ರಕರಣ
 
ದಿನಾಂಕ 10/08/2009 ರಂದು ಸಂಜೆ ಸುರೇಶ್ ನಾಯಕ್ (38) ತಂದೆ: ನಾರಾಯಣ ನಾಯಕ್ ವಾಸ: ಪಡುಸಾಗು ಮನೆ, ಪಟ್ಲ ಅಂಚೆ, ಪೆರ್ಣಂಕಿಲ ಗ್ರಾಮ, ಉಡುಪಿ. ಎಂಬವರು ಮೂಡುಬೆಳ್ಳೆ ಪೇಟೆಗೆಂದು ಹೋದವರು ರಾತ್ರಿ ಮನೆಗೆ ಬಾರದೆ ಇದ್ದು, ರಾತ್ರಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೆ ಇದ್ದು, ದಿನಾಂಕ 11/08/2009 ರಂದು 05:00 ಗಂಟೆಗೆ ಕಟ್ಟಿಂಗೇರಿ ಗ್ರಾಮದ ಮುಳಿಕಂಬಳ ಎಂಬಲ್ಲಿ ಶ್ರೀಮತಿ ಕ್ರಿಶ್ಚಿಯನ್ ಬಾಯಿ ಎಂಬವರ ಮನೆಯ ಪಕ್ಕದ ಹಾಡಿಯಲ್ಲಿರುವ ಅವರಣವಿಲ್ಲದ ಬಾವಿಯ ಬಳಿ ಚಪ್ಪಲಿ ಕಾಣಸಿಕ್ಕಿದ್ದು, ಸಂಶಯಗೊಂಡು ಬಾವಿಯಲ್ಲಿ ಅಗ್ನಿಶಾಮಕ ದಳದವರು ಬಂದು ಹುಡುಕಾಡುತ್ತಿರುವಾಗ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಮೃತರು ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು, ಶರಾಬು ಕುಡಿದು ಒಳ ದಾರಿಯಾಗಿ ಮನೆಗೆ ಬರುತ್ತಿರುವಾಗ ಅವರಣ ವಿಲ್ಲದ ಬಾವಿಗೆ ಆಕಸ್ಮಿಕ ಕಾಲು ಜಾರಿ ಮೃತಪಟ್ಟಿರುವುದಾಗಿದೆ ಈ ಬಗ್ಗೆ ದೇವದಾಸ ನಾಯಕ್ (55) ತಂದೆ: ನಾರಾಯಣ ನಾಯಕ್ ವಾಸ: ಪಡುಸಾಗು ಮನೆ, ಪಟ್ಲ ಅಂಚೆ, ಪೆರ್ಣಂಕಿಲ ಗ್ರಾಮ, ಉಡುಪಿ.ರವರು ಶಿವರ್ಾ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 15/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಇತರೆ ಪ್ರಕರಣಗಳು
 
ದಿನಾಂಕ: 11/08/09 ರಂದು ಮಾನ್ಯ ಕುಂದಾಪುರ ಎ.ಸಿ.ಜೆ(ಕಿ.ವಿ) ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಬಂದ ಖಾಸಗಿ ಪಿರ್ಯಾಧಿ ನಂಬ್ರ 164/09 ರಂತೆ ಆರೋಪಿ ವಿನ್ಸೆಂಟ್ ಮಾಟರ್ಿಸ್(60)ತಂದೆ: ಮಾರ್ಶಲ್ಮಾಟರ್ಿಸ್ ವಾಸ: ಫಾದರ್ ಸೈಂಟ್ ಆಂಟೋನಿ ಚರ್ಚ,ಸಾಸ್ತಾನ ,ಪಾಚಿಡೇಶ್ವರ, ಉಡುಪಿ ತಾಲೂಕು ರವರು ಉಡುಪಿ ತಾಲೂಕು ಪಾಂಡೇಶ್ವರ ಗ್ರಾಮದ, ಸಂತ ಅಂತೋನಿ ಚಚರ್್ನ ಧಮರ್ಾಧಿಕಾರಿಯಾಗಿದ್ದು, ಸಂತ ಅಂತೋನಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಸಿ.ಬಿ.ಎಸ್.ಸಿ ಪಠ್ಯಕ್ರಮ ಆರಂಭಿಸುವುದಾಗಿ ತಪ್ಪು ಮಾಹಿತಿ ನೀಡಿ ಮೋಸ ಮಾಡಿದ್ದು, ಆರೋಪಿಯು ಚಚರ್ಿನ ಆವರಣದಲ್ಲಿರುವ ಫಲಭರಿತ ತೆಂಗಿನ ಮರಗಳನ್ನು ಶಾಲೆಗೆ ಆಟದ ಮೈದಾನ ನಿಮರ್ಿಸುವ ಉದ್ದೇಶದಿಂದ ಕಡಿದು ನಾಶ ಮಾಡಿ ಹಣ ಸಂಪಾದಿಸಿದ್ದಲ್ಲದೆ, ಕೇವಲ ಅಕ್ರಮ ಹಣ ಸಂಪಾದನೆಗಾಗಿ ಚಚರ್ಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ಅಕ್ರಮ ಹಣ ಸಂಪಾದನೆ ಮತ್ತು ಹಣ ದುರುಪಯೋಗ ಮಾಡಿ ವಂಚನೆ ವಿಶ್ವಾಸ ದ್ರೋಹ, ನಕಲಿ ದಾಖಲಾತಿ ಸೃಷ್ಠಿಸುವಂತೆ ಅಪರಾಧ ಎಸಗಿದ್ದಾಗಿದೆ. ಈ ಬಗ್ಗೆ ಸಿಲ್ವೆಸ್ಟರ್ ಡಿ ಸೋಜಾ ತಂದೆ: ದಿ ಲಿಯೋ ಡಿ ಸೋಜಾ ಉಪಾಧ್ಯಕ್ಷರು ಸೈಂಟ್ ಅಂತೋನಿ ಚಚರ್್ ಪಾಂಡೇಶ್ವರ ರವರು ಕೋಟಾ ಠಾಣೆಯಲ್ಲಿ ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 189/09 ಕಲಂ 403,405,406,420,465,467,471,477ಎ ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ: 11/08/09 ರಂದು 18:30 ಗಂಟೆಗೆ ಉಡುಪಿ ತಾಲೂಕು ,ಕಾವಡಿಯ 5 ಸೆಂಟ್ಸ್ ವಾಸಿ ಆಶಾ (24) ಗಂಡ: ರಘುಪೂಜಾರಿ ಎಂಬವರು 4 ವರ್ಷದ ಹಿಂದೆ ಕೋಟೇಶ್ವರ ಮೂಡು ಗೋಪಾಡಿಯ ರಾಘುವನ್ನು ವಿವಾಹವಾಗಿದ್ದು ಅವನಿಗೆ ಫಿರ್ಯಾದಿ ಆಶಾ ಎರಡನೇ ಹೆಂಡತಿಯಾಗಿದ್ದು, ನಂತರದ ದಿನಗಳಲ್ಲಿ ಅವರೊಳಗೆ ಸಂಸಾರದಲ್ಲಿ ಸರಿ ಹೋಗದೇ ಗಂಡ ತೊರೆದು ಹೋಗಿದ್ದಾಗಿದೆ. ನಂತರ ಆರೋಪಿ ರಘು ಪೂಜಾರಿ ತಂದೆ: ಕರಿಯ ಪೂಜಾರಿ ವಾಸ:ಕಾರ್ಕಡ ಎಂಬವರ ಪರಿಚಯವಾಗಿ ಪ್ರೇಮ ಉಂಟಾಗಿ ಆರೋಪಿಯು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿ ಗರ್ಭವತಿಯಾದ ಸಮಯ ಗರ್ಭ ತೆಗೆಸಲು ಒತ್ತಾಯ ಮಾಡುತ್ತಿದ್ದು ಇದಕ್ಕೆ ಒಪ್ಪಿರುವುದಿಲ್ಲ, ನಂತರ ಆರೋಪಿಯು ಆರು ತಿಂಗಳ ಕಾಲ ಮನೆಗೆ ಬಾರದೇ ಇದ್ದು, ದಿನಾಂಕ: 26/03/09 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾರೆ. ನಂತರ ಮಗುವಿಗೆ 1 ತಿಂಗಳು 10 ದಿನ ತುಂಬಿದ ಬಳಿಕ ಆರೋಪಿಯು ದಿನಾಂಕ: 02/05/09 ರಂದು ಪಿರ್ಯಾದಿಯ ಮನೆಗೆ ಬಂದು ಪಿರ್ಯಾಧಿ ಬೇಡವೆಂದರೂ ಒತ್ತಾಯ ಪೂರ್ವಕವಾಗಿ ಪಿರ್ಯಾದಿಯ ಮಗುವನ್ನು ತಾನು ನೋಡಿಕೊಳ್ಳುತ್ತೇನೆ ಎಂದು ಆರೋಪಿ ತನ್ನ ಮನೆಯಾದ ಗಿಳಿಯಾರಿಗೆ ಕೊಂಡು ಹೋಗುವುದಾಗಿ ತಿಳಿಸಿ ಮಗುವಿನೊಂದಿಗೆ ಹೋಗಿರುತ್ತಾನೆ. ಪಿರ್ಯಾಧಿಯು 2-3 ತಿಂಗಳು ಕಳೆದರೂ ಈವರೆಗೆ ಮಗುವನ್ನಾಗಲೀ ಆರೋಪಿಯನ್ನಾಗಲೀ ನೋಡಿರುವುದಿಲ್ಲ. ಆರೋಪಿಯು ಪಿರ್ಯಾದಿಯೊಂದಿಗಿನ ತನ್ನ ಸಂಬಂಧ ಬೆಳಕಿಗೆ ಬರುತ್ತದೆ ಎಂಬ ಕಾರಣಕ್ಕಾಗಿ ಆರೋಪಿ ಮಗುವನ್ನು ಎಲ್ಲಿಯೋ ಕೊಂಡು ಹೋಗಿ ನಾಶ ಮಾಡಿರಬಹುದು. ಈ ಬಗ್ಗೆ ಆಶಾರವರು ಕೋಟಾ ಠಾಣೆಯಲ್ಲಿ ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 190/09 ಕಲಂ 364 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಗಂಡಸು ಕಾಣೆ ಪ್ರಕರಣ
 
ಉಡುಪಿ ತಾಲೂಕು ಎಮರ್ಾಳ್ ಬಡಾ ಗ್ರಾಮದ ಅಂಗಡಿ ಮನೆಯ ವಾಸಿ ಕುಮಾರಿ ಶೆಟ್ಟಿ (45) ತಂದೆ:ಶೇಖರ ಶೆಟ್ಟಿ ಮುಂಬಯಿಲ್ಲಿ ಹೋಟೆಲ್ ವ್ಯವಹಾರ ನಡೆಸಿಕೊಂಡಿದ್ದು, ಅವರ ಮನೆಯಾದ ಎಮರ್ಾಳ್ ಅಂಗಡಿ ಮನೆಯಲ್ಲಿ ಅವರ ಅಣ್ಣ ದಿನೇಶ್ ಶೆಟ್ಟಿ (50ವರ್ಷ) ಎಂಬವರು ಚಿಕ್ಕಮ್ಮನೊಂದಿಗೆ ವಾಸವಾಗಿರುವುದಾಗಿದೆ. ದಿನೇಶ ಶೆಟ್ಟಿರವರು ಮಾನಸಿಕ ಅಸ್ವಸ್ಥರಾಗಿದ್ದು ದಿನಾಂಕ 03/02/09 ರಂದು 10:00 ಘಂಟೆಗೆ ಮನೆಯಿಂದ ಹೋದವರು ಇದುವರೆಗೂ ವಾಪಾಸು ಬಾರದೇ ಕಾಣೆಯಾಗಿರುವುದಾಗಿದೆ. ಸಂಬಂದಿಕರ ಮನೆಯಲ್ಲಿ ಹುಡುಕಿದಲ್ಲಿ ಪತ್ತೆಯಾಗದೇ ಇದ್ದುದರಿಂದ ಕುಮಾರಿ ಶೆಟ್ಟಿ ರವರು ಮುಂಬಯಿಯಿಂದ ಬಂದು ಪಡುಬಿದ್ರಿ ಠಾಣೆಗೆ ಬಂದು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/09 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 



--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment