ಕಾಸರಗೋಡು: ಕೇರಳ ತುಳು ಅಕಾಡೆಮಿ, ಕಿಸಾನ್ ಸೇನೆ, ತುಳುವೆರೆ ಆಯನೊ ಕೂಟ, ಫೋಕ್ ಲ್ಯಾಂಡ್ ಮತ್ತು ಗ್ರಾಮೀಣ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಜಂಟಿ ಆಶ್ರಯದಲ್ಲಿ ಇದೇ 17ರಂದು ಕೃಷಿಕರ ದಿನಾಚರಣೆ ಮತ್ತು ಸೋಣೊಗು ಸುಗಿಪು ಕಾರ್ಯಕ್ರಮ ಸೀತಾಂಗೋಳಿ ಸಮೀಪದ ಗುಂಡ್ಯಡ್ಕ ಜಿ.ಪಾಕರ್್ನಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ ನಡೆಯುವ ಸಮಾರಂಭವನ್ನು ಶಾಸಕ ಸಿ.ಎಚ್.ಕುಞ್ಞಂಬು ಉದ್ಘಾಟಿಸುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಚೆರ್ಕಳ ಅಬ್ದುಲ್ಲ ಪ್ರಶಸ್ತಿ ವಿತರಿಸುವರು. ಉಳಿಯತ್ತಾಯ ವಿಷ್ಣು ಆಸ್ರ, ಡಾ.ಕೆ.ಕಮಲಾಕ್ಷ, ಪುತ್ತಿಗೆ ಪಂಚಾಯ್ತಿ ಅಧ್ಯಕ್ಷ ತೋಮಸ್ ಡಿ'ಸೋಜಾ ಮತ್ತಿತರರು ಭಾಗವಹಿಸುವರು.
ಸಂಜೆ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಕೇರಳ ಲಲಿತ ಕಲಾ ಅಕಾಡೆಮಿಯ ಮಾಜಿ ಸದಸ್ಯ ಕೆ.ಕೆ.ಮಾರಾರ್ ಉದ್ಘಾಟಿಸುವರು. ಕಿಸಾನ್ ಸೇನೆಯ ಅಧ್ಯಕ್ಷ ಗುಂಡ್ಯಡ್ಕ ವೆಂಕಟರಮಣ ಭಟ್ ಅಧ್ಯಕ್ಷತೆ ವಹಿಸುವರು. ಪಾತರ್ಿಸುಬ್ಬ ಯಕ್ಷಗಾನ ಕಲಾ ಕೇಂದ್ರದ ಅಧ್ಯಕ್ಷ ಶಂಕರ ರೈ ಮಾಸ್ಟರ್, ಕೇಶವ ಶೆಟ್ಟಿ ಆದೂರು ಮತ್ತು ಇತರರು ಭಾಗವಹಿಸುವರು.
ಪೆರುಂಬಳ ಯೂತ್ ಕ್ಲಬ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಸಂಸದ ಪಿ.ಕರುಣಾಕರನ್ ಉದ್ಘಾಟಿಸುವರು. ಮಂಡಳಿಯ ಉಪಾಧ್ಯಕ್ಷ ಪಿ.ಶ್ರೀರಾಮ ಕೃಷ್ಣ ಅಧ್ಯಕ್ಷತೆ ವಹಿಸುವರು. ಪಿ.ವಿ.ಕೆ.ಪನೆಯಾಲ್ ಸಂಸ್ಮರಣಾ ಭಾಷಣ ಮಾಡುವರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಭಾಗವಹಿಸುವರು. ಬಳಿಕ ಭಗತ್ ಸಿಂಗ್ ನಾಟಕ ಪ್ರದರ್ಶನ ನಡೆಯಲಿದೆ.
ಬಡ ಕುಟಂಬದ 7 ಯುವತಿಯರಿಗೆ ವಿವಾಹ ನಡೆಯಲಿದೆ. ಪ್ರತಿ ಮಧುಮಗಳಿಗೆ 10 ಪವನ್ ಚಿನ್ನಾಭರಣ ಮತ್ತು ಉಡುಪುಗಳನ್ನು ವಿತರಿಸಲಾಗುವುದು.
ಉಪ್ಪಳದ ಮರಿಕೆ ಪ್ಲಾಜಾದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ವಿವಾಹ ಮತ್ತು ನೂತನವಾಗಿ ನಿಮರ್ಿಸಿದ ಮನೆಗಳ ಕೀಲಿಗಳ ಹಸ್ತಾಂತರ ನಡೆಯಲಿದೆ.
ಜಿಲ್ಲಾಧಿಕಾರಿ ಆನಂದ ಸಿಂಗ್, ಎ.ಡಿ.ಎಂ. ವಾಸುದೇವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್, ಪಾಣಕ್ಕಾಡ್ ರಶೀದ್ ಆಲಿ ಶಿಹಾಬ್ ತಂಙಳ್, ಕಾಸರಗೋಡು ಖಾಸಿ ಕೆ.ಎಂ.ಬಾವ ಮುಸ್ಲಿಯಾರ್ ಮತ್ತಿತರರು ಭಾಗವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ಆಲುವಾಯ್ ಮೂಸಾ, ವಿ.ಪಿ.ಅಬ್ದುಲ್ ಶುಕೂರ್, ಕೆ.ಎ.ಇಬ್ರಾಹಿಂ, ಹನೀಫ, ಬಹರೈನ್ ಮುಹಮ್ಮದ್, ಎಂ.ಕೆ.ಆಲಿಮಾಸ್ಟರ್, ಕೆ.ಎ.ಅಬ್ದುಲ್ಲ, ಪಿ.ಎಂ.ಸಲೀಂ ಹಾಜರಿದ್ದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment