Thursday, August 13, 2009
ಆ.16ರಿಂದ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಸಮ್ಮೇಳನ
ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವಿವಿಧ ಉಪಜಿಲ್ಲಾ ಸಮ್ಮೇಳನಗಳು ಇದೇ 16, 29 ಮತ್ತು 30ರಂದು ನಡೆಯಲಿದೆ.ಕಾಸರಗೋಡು, ಬೇಕಲ-ಹೊಸದುರ್ಗ ಉಪಜಿಲ್ಲಾ ಸಮ್ಮೇಳನ 16ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿದೆ. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಕೆ.ಸವಿತಾ ಉದ್ಘಾಟಿಸುವರು. ಕಾಸರಗೋಡು ಉಪ ಜಿಲ್ಲಾಧ್ಯಕ್ಷ ಸೋಮಶೇಖರ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಉಪ ಜಿಲ್ಲಾ ಸಮ್ಮೇಳನ 29ರಂದು ಬೆಳಗ್ಗೆ 10 ಗಂಟೆಗೆ ಉದ್ಯಾವರ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಉದ್ಘಾಟಿಸುವರು. ಮಂಜೇಶ್ವರ ಸಹಾಯಕ ವಿದ್ಯಾಧಿಕಾರಿ ಕೆ.ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಕುಂಬಳೆ ಉಪ ಜಿಲ್ಲಾ ಸಮ್ಮೇಳನ 30ರಂದು ಬೆಳಗ್ಗೆ 10 ಗಂಟೆಗೆ ಪೆರಡಾಲದ ನವಜೀವನ ಪ್ರೌಢ ಶಾಲೆಯಲ್ಲಿ ನಡೆಯಲಿದೆ. ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಶಾಲೆಯ ಮೇನೇಜರ್ ಶಂಕರ ಮೋಹನದಾಸ ಆಳ್ವ ಉದ್ಘಾಟಿಸುವರು. ಉಪಜಿಲ್ಲಾ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ಅಡ್ಕ ಅಧ್ಯಕ್ಷತೆ ವಹಿಸುವರು.
ಗಣಪತಿ ಮೊಳೆಯಾರರ ಸ್ಮರಣಾರ್ಥ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪಧರ್ೆ ವಿಜೇತರು
ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಗಣಪತಿ ಮೊಳೆಯಾರರ ಸ್ಮರಣಾರ್ಥ ಕಾಲೇಜು ವಿದ್ಯಾಥರ್ಿಗಳಿಗೆ ಇತ್ತೀಚೆಗೆ ನಡೆಸಿದ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪಧರ್ೆಯಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿದ್ಯಾಥರ್ಿ ಪ್ರಸಾದ್ ಜಿ. ಅವರ `ನನ್ನ ಕಥೆಯಲ್ಲಿನ ಬಿಡಿ ಚಿತ್ರಗಳು' ಎಂಬ ಕಥೆಗೆ ಪ್ರಥಮ ಸ್ಥಾನ ಲಭಿಸಿದೆ. ಕುಂದಾಪುರ ಭಂಡಾರಕಾರ್ಸ್ ಕಾಲೇಜಿನ ವಿದ್ಯಾಥರ್ಿನಿ ರೇಷ್ಮಾ ನಾರಾಯಣ ಉಪ್ಪುಂದ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ವಿಜೇತರಿಗೆ ಕ್ರಮವಾಗಿ 2ಸಾವಿರ ರೂ. ಹಾಗೂ 1 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ಮೊಗೇರ ಸವರ್ಿಸ್ ಸೊಸೈಟಿಗೆ ಕೇಂದ್ರದ ಅಂಗೀಕಾರ
ಕಾಸರಗೋಡು:ಕಾಸರಗೋಡು ಜಿಲ್ಲಾ ಮೊಗೇರ ಸವರ್ಿಸ್ ಸೊಸೈಟಿಗೆ ಕೇಂದ್ರ ಸಕರ್ಾರದ ಯೋಜನಾ ಆಯೋಗದ ಎನ್.ಜಿ.ಒ. ಸಹಭಾಗಿತ್ವದ ಅಂಗೀಕಾರ ಲಭಿಸಿದೆ. ಸೊಸೈಟಿ ಈಗಾಗಲೇ ನೆಹರೂ ಯುವ ಕೇಂದ್ರ ಮತ್ತು ಯುವ ಜನ ಕ್ಷೇಮಾಭಿವೃದ್ಧಿ ಮಂಡಳಿಯ ಅಂಗೀಕಾರ ಕೂಡಾ ಲಭಿಸಿದೆ.
ಮಲಬಾರ್ ಪ್ಯಾಕೇಜ್: ರಾಜಕೀಯ ದುರುಪಯೋಗ
ಕಾಸರಗೋಡು: ಕೇರಳದ ಮಲಬಾರ್ ಪ್ರದೇಶವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸಕರ್ಾರ ನೀಡುವ ಮಲಬಾರ್ ಪ್ಯಾಕೇಜನ್ನು ರಾಜಕೀಯವಾಗಿ ದುರುಪಯೋಗಪಡಿಸುತ್ತಿದೆ ಎಂದು ಶಾಸಕ ಸಿ.ಟಿ. ಅಹಮ್ಮದಾಲಿ ಆರೋಪಿಸಿದ್ದಾರೆ.ಪೆರಿಯದಲ್ಲಿ ಕೇರಳ ಪಂಚಾಯ್ತಿ ಎಂಪ್ಲಾಯೀಸ್ ಆರ್ಗನೈಸೇಶನ್ನ 27ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೆ.ಪಿ.ಸಿ.ಸಿ. ನಿವರ್ಾಹಕ ಸಮಿತಿ ಸದಸ್ಯ ಸಿ.ಕೆ.ಶ್ರೀಧರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದಶರ್ಿ ಗೋವಿಂದನ್ ನಾಯರ್, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ವಿನೋದ್ ಕುಮಾರ್, ರಾಜ್ಯಾಧ್ಯಕ್ಷ ಉದಯಬಾನು, ರಾಜ್ಯ ಪ್ರಧಾನ ಕಾರ್ಯದಶರ್ಿ ಎಂ.ಪಿ.ಮೋಹನನ್, ರಾಜ್ಯ ಕೋಶಾಧಿಕಾರಿ ತಾರಾನಾಥ ಮಧೂರು, ರಾಜ್ಯ ಸಮಿತಿ ಸದಸ್ಯ ಸಿ.ಕೆ.ಅರವಿಂದನ್, ಹಕೀಂ ಕುನ್ನಿಲ್, ಬಾಬು ರಾಜ್, ನಾರಾಯಣ ಅಡಿಗ, ಜಿಲ್ಲಾ ಅಧ್ಯಕ್ಷ ಸಿ.ದಾಮೋದರನ್, ಪ್ರಧಾನ ಸಂಚಾಲಕ ಪಿ.ದೇವದಾಸ್ ಹಾಜರಿದ್ದರು.
ದಲಿತರಿಗೆ ಶಾಪವಾಗಿ ಮಾರ್ಪಟ್ಟ ಎಡರಂಗ ಸಕರ್ಾರ
ಕಾಸರಗೋಡು: ಕೇರಳದ ಎಡರಂಗ ಸಕರ್ಾರ ದಲಿತರಿಗೆ ಶಾಪವಾಗಿ ಮಾರ್ಪಟ್ಟಿದೆ ಎಂದು ಕೇರಳ ದಲಿತ ಫೆಡರೇಶನ್(ಕೆ.ಡಿ.ಎಫ್) ರಾಜ್ಯಾಧ್ಯಕ್ಷ ಪಿ.ರಾಮಭದ್ರನ್ ಆರೋಪಿಸಿದ್ದಾರೆ.ಕೆ.ಡಿ.ಎಫ್. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ನಡೆದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಪರಿಶಿಷ್ಟ ವಿಭಾಗದ ಮೇಲೆ ಅತಿಕ್ರಮಣ ಹೆಚ್ಚುತ್ತಿದೆ. ಇದನ್ನು ಹತ್ತಿಕ್ಕುವಲ್ಲಿ ಸಕರ್ಾರ ವಿಫಲವಾಗಿದೆ ಎಂದೂ ಅವರು ಆಪಾದಿಸಿದ್ದಾರೆ.ಜಿಲ್ಲಾಧ್ಯಕ್ಷ ಇ.ಕುಞ್ಞಂಬು ಅಧ್ಯಕ್ಷತೆ ವಹಿಸಿದ್ದರು. ಪಿ.ಕೆ.ರಾಧಾ, ಆನಂದ ಮೌವ್ವಾರ್, ಅಜಕ್ಕೋಡು ವಸಂತನ್, ಎಸ್.ಪಿ.ಮಂಜು, ಕೆ.ಕುಞ್ಞಿಕೃಷ್ಣನ್, ರಾಘವನ್, ಪ್ರದೀಪನ್, ವಿನೋದ್, ಅನಿತಾ, ಕೆ.ಆರ್.ಮಧುಸೂದನನ್, ಸುರೇಶ್ ಕೈರಳಿ, ವಿ.ಎಸ್.ಬೈಜು ಹಾಜರಿದ್ದರು.
ತೆರಿಗೆ ಸಂಗ್ರಹ ಯಜ್ಞ : ಯಶಸ್ವಿಗೆ ಕರೆ
ಕಾಸರಗೋಡು: ಮಧೂರು ಗ್ರಾಮ ಪಂಚಾಯ್ತಿನ ಕಟ್ಟಡ ತೆರಿಗೆ, ವೃತ್ತಿ ತೆರಿಗೆ, ಲೈಸೆನ್ಸ್ ಫೀಸ್ ಪಾವತಿಸಿ ತೆರಿಗೆ ಸಂಗ್ರಹ ಯಜ್ಞವನ್ನು ಯಶಸ್ವಿಗೊಳಿಸಬೇಕು ಹಾಗೂ ಪಂಚಾಯ್ತಿ ಪ್ರದೇಶದಲ್ಲಿ ಲೈಸೆನ್ಸ್ ಇಲ್ಲದೆ ಅನಧಿಕೃತ ವ್ಯಾಪಾರ ವ್ಯವಸಾಯ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆ ತಿಳಿಸಿದೆ.
www.kasaragodvartha.com, Malayalam Online Newspaper from Kasaragod brings latest news from our home land. The first comprehensive local web media of KASARAGOD
Subscribe to:
Post Comments (Atom)
No comments:
Post a Comment