Tuesday, August 11, 2009

ಅಪಘಾತ ಪ್ರಕರಣ/ Accident In Karkala

ದಿನಾಂಕ 10/8/09 ರಂದು ಸಂಜೆ ಸುಮಾರು 5:20 ಗಂಟೆಯ ಸಮಯಕ್ಕೆ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಹಾಳೆಕಟ್ಟೆ ಎಂಬಲ್ಲಿ ಕಾರ್ಕಳ ಪಡುಬಿದ್ರಿ ರಸ್ತೆಯಲ್ಲಿ, ಸವರ್ಿಸ್ ಬಸ್ಸು ನಂಬ್ರ ಕೆಎ.20.ಎ.7515 ನೇದರ ಚಾಲಕ ರಂಜನ್ ಎಂಬವರು ಬಸ್ಸನ್ನು ಅತಿವೇಗ ಹಾಗೂ ಅಜಾಗರೂಕತೆುಂದ ಚಲಾುಸಿಕೊಂಡು ಬಂದು, ಹಾಳೆಕಟ್ಟೆ ಬಸ್ಸು ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸದೆ, ನಿಲ್ದಾಣದಿಂದ ಸ್ವಲ್ಪ ಮುಂದಕ್ಕೆ ನಿಲ್ಲಿಸಿದ್ದು ಈ ಸಮಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಿಟ್ಟೆ ಕಾಲೇಜಿನ ವಿದ್ಯಾಥರ್ಿ ಸುಜನ್ ಎಂಬಾತನು ಬಸ್ಸಿನಿಂದ ಕೆಳಗೆ ಇಳಿಯಲು ಹೋದಾಗ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ಏಕಾಎಕಿಯಾಗಿ ಬಸ್ಸನ್ನು ಚಲಾುಸಿದ ಪರಿಣಾಮ ಸುಜನ್ ಇವರು ಆಯತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದು ಅವರ ಬಲ ಕಾಲಿಗೆ ರಕ್ತಗಾಯವಾಗಿರುತ್ತದೆ. ಎಂಬುದಾಗಿ ಅಶೋಕ ಎಸ್. ಪೂಜಾರಿ (39), ತಂದೆ: ಸಂಕಪ್ಪ ಪೂಜಾರಿ, ವಾಸ: ದಾರೆದಡ್ಡು ಮನೆ, ಕಲ್ಯಾ ಅಂಚೆ, ನಂದಳಿಕೆ ಗ್ರಾಮ, ಕಾರ್ಕಳ ತಾಲೂಕು ರವರು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/09 ಕಲಂ 279, 337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ವರದಕ್ಷಿಣೆ ಕಿರುಕುಳ ಪ್ರಕರಣ
 
ಉಡುಪಿ ತಾಲೂಕು ಬಡಾನಿಡಿಯೂರು,ಲಕ್ಷ್ಮೀ ನಿಲಯ ವಾಸಿ ಶ್ರೀಮತಿ ಕಕರ್ೇರ (22) ಎಂಬವರು ಕನಕಡ, ಕುತ್ಪಾಡಿಯ, ರಾಜೇಶ್ವರಿ ನಿವಾಸದ, ತಂದೆ: ಅನಂತ ಅಂಚನ್ ರವರನ್ನು ದಿನಾಂಕ: 10/02/08 ರಂದು ಹಿಂದೂ ಸಂಪ್ರದಾಯದಂತೆ ಕೊಡವೂರು ಗ್ರಾಮದ ಮಲ್ಪೆ ಏಳೂರು ಮೊಗವೀರ ಭವನದಲ್ಲಿ ವಿವಾಹವಾಗಿದ್ದು, ಮದುವೆ ಸಮಯ ಹಾಗೂ ಬಳಿಕ ಆರೋಪಿ ವಸಂತ್ ಕುಮಾರ್ ರವರಿಗೆ ನಗದು 1,10,000/- ರೂಪಾು ನೀಡಿದಲ್ಲದೇ 20 ಪವನ್ ಚಿನ್ನವನ್ನು ಆರೋಪಿಯ ಬೇಡಿಕೆಯಂತೆ ಹಾಕಿದ್ದು, ಮದುವೆ ಬಳಿಕ ಲಕ್ಷ್ಮೀಯು ತನ್ನ ಗಂಡನ ಮನೆಯಾದ ಕುತ್ಪಾಡಿಯ ರಾಜೇಶ್ವರಿ ನಿವಾಸದಲ್ಲಿ ಗಂಡನೊಂದಿಗೆ ವಾಸವಾಗಿದ್ದು, ಆ ಸಮಯ ಆರೋಪಿಗಳಾದ 1) ಶ್ರೀಮತಿ ಬೇಬಿ(55) ಗಂಡ: ಅನಂತ ಕಾಂಚನ್, ವಾಸ: ರಾಜೇಶ್ವರಿ ನಿವಾಸ, ಕುತ್ಪಾಡಿ, ಕನಕಡ, ಉಡುಪಿ 2) ಯಶೋಧ(38) ಗಂಡ: ಪೂವಪ್ಪ, ವಾಸ: ವಾಸ: ರಾಜೇಶ್ವರಿ ನಿವಾಸ, ಕುತ್ಪಾಡಿ, ಕನಕಡ, ಉಡುಪಿ 3) ಪದ್ಮನಾಭ(29) ತಂದೆ: ಅನಂತ ಕಾಂಚನ್ ವಾಸ: ರಾಜೇಶ್ವರಿ ನಿವಾಸ, ಕುತ್ಪಾಡಿ, ಕನಕಡ, ಉಡುಪಿ 4) ಕಲಾವತಿ(26) ಗಂಡ: ಜಗದೀಶ ವಾಸ: ರಾಜೇಶ್ವರಿ ನಿವಾಸ, ಕುತ್ಪಾಡಿ, ಕನಕಡ, ಉಡುಪಿ ಎಂಬವರುಗಳು ಮಾನಸಿಕವಾಗಿ ಹಿಂಸೆ ನೀಡಿದಲ್ಲದೇ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದು ತನ್ನ ಮನೆಗೆ ಕರೆದುಕೊಂಡು ಹೋಗದೇ ಇರುವುದರಿಂದ ತನ್ನ ತಾು ಮನೆ ತೊಟ್ಟಂಗೆ ಬಂದು ವಾಸವಾಗಿದ್ದು, ಸಂಬಂಧಿಕರಿಗೆ ತಿಳಿಸಿದರೇ ಜೀವಸಹಿತ ಬಿಡುವುದಿಲ್ಲವಾಗಿ ಆರೋಪಿ ವಸಂತ್ಕುಮಾರ್ ಬೆದರಿಕೆ ಹಾಕಿರುತ್ತಾರೆಂಬುದಾಗಿ ಮಾನ್ಯ ಎಸಿಜೆ(ಜೂಡಿ)& ಜೆಎಂಎಫ್ಸಿ ನ್ಯಾಯಾಲಯದಿಂದ ಬಂದ ಖಾಸಗಿ ಪಿಯರ್ಾದಿ ನಂ: 409/09ನ್ನು ಮಲ್ಪೆ ಠಾಣೆಯಲ್ಲಿ ಸ್ವೀಕರಿಸಿದ್ದು, ಈ ಬಗ್ಗೆ ಶ್ರೀಮತಿ ಕಕರ್ೇರ (22)ರವರ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/09 ಕಲಂ 498 (ಎ), 504,506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಮೋಸ ಪ್ರಕರಣ
 
ಉಡುಪಿ ತಾಲೂಕು ಕುಂಜಿಬೆಟ್ಟುವಿನ, ಅರ್ಚನಾ ಆಕರ್ೇಡ, 4ನೇ ಫ್ಲೋರ್, ಎ ವಿಂಗ್, ನಂ 401 ನೇ ವಾಸಿ ಮಂಜುನಾಥ ಶೇಟ್(30) ತಂದೆ: ನರಸಿಂಹ ಶೇಟ್ ಇವರಿಗೆ ಆರೋಪಿ ಸಂದೀಪ್ ಡಿ. ಜೈನ್, ಕೇರ್ ಆಫ್: ಶ್ರೀನಿವಾಸ ಭಟ್, ಉಚ್ಚಿಲ ರಾಘವೇಂದ್ರ ಮಾತಾ, ಬಾಲಾಜೀ ಲೇ ಔಟ್, ಕನ್ನಪರ್ಾಡಿ, ಉಡುಪಿ. ಎಂಬವರಿಗೆ ಬ್ಯಾಂಕ್ ಮುಖೇನ ಕಡಿಮೆ ದರದಲ್ಲಿ ಚಿನ್ನ ತೆಗೆಸಿಕೊಡುತ್ತೇನೆಂದು ಹೇಳಿದ್ದು, ದಿನಾಂಕ: 17/11/2006 ಕಡೇಕಾರು ಗ್ರಾಮದ ಕನ್ನರ್ಪಾಡಿ ಬಾಲಾಜೀ ಲೇಔಟ್ನಲ್ಲಿರುವ ಆರೋಪಿತನ ಮನೆಯಲ್ಲಿ ಮಾತುಕೆತೆ ಮಾಡಿ 8,30,000/- ರೂ ನಗದನ್ನು ಆರೋಪಿಯು ತಿಳಿಸಿದಂತೆ ಕುಂದಾಪುರದ ಕೃಷ್ಣಮೂತರ್ಿ ಶೇಟ್ರವರ ಖಾತೆ ಕೃಷ್ಣ ಮಾಕರ್ೇಟಿಂಗ್ ಏಜನ್ಸಿಸ್, ಸಿಬಿ.ಸಿ.ಎ-46, ಕಾರ್ಪರೇಶನ್ ಬ್ಯಾಂಕ್, ಉಡುಪಿ ಪೌಂಡಸರ್್ ಶಾಖೆಯಲ್ಲಿ ಜಮಾ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಆರೋಪಿಯು ಅರ್ಧ ಕೆ.ಜಿ ಚಿನ್ನವನ್ನು ಮಾತ್ರ ಬ್ಯಾಂಕಿನಿಂದ ಪಡೆದು ನೀಡಿದ್ದು, ಉಳಿದ ಅರ್ಧ ಕೆ.ಜಿ ಚಿನ್ನವನ್ನು ನಾಳೆ ನೀಡುವುದಾಗಿ ತಿಳಿಸಿ ಚಿನ್ನವನ್ನಾಗಲೀ, ಹಣವನ್ನಾಗಲೀ ಈತನಕ ಕೊಡದೇ ಮೋಸ ಮಾಡಿರುತ್ತಾನೆ ಈ ಬಗ್ಗೆ ಮಾನ್ಯ ಸಿವಿಲ್ ಜಡ್ಜ್(ಹಿರಿಯ ವಿಭಾಗ) & ಸಿ.ಜೆ.ಎಂ ನ್ಯಾಯಾಲಯದಿಂದ ಬಂದ ಖಾಸಗಿ ಪಿಯರ್ಾದಿ ನಂ: 289/09ನ್ನು ಮಲ್ಪೆ ಠಾಣೆಯಲ್ಲಿ ಸ್ವೀಕರಿಸಿದ್ದು ಮಂಜುನಾಥ ಶೇಟ್(30)ರವರು ಮಲ್ಪೆ ಠಾಣೆಗೆ ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/09 ಕಲಂ ಕಲಂ 419, 420 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಅಶ್ಲೀಲ ಸಿ.ಡಿ ಮಾರಾಟಗಾರನ ಬಂಧನ
ದಿನಾಂಕ 11/08/09 ರಂದು ಕುಂದಾಪುರ ತಾಲೂಕಿನ ಕೋಟೇಶ್ವರದ ರಾಧಿಕಾ ಕ್ಯಾಸೆಟ್ ಕಾರ್ನರ್ ಎಂಬ ಅಂಗಡಿಯ ಎದುರಿನಲ್ಲಿ ಹೋಂಡಾ ಆಕ್ಟಿವ್ ಮೋಟಾರು ಬೈಕಿನಲ್ಲಿ ಕುಳಿತು ಅಶ್ಲೀಲ ಸಿ.ಡಿ ಗಳನ್ನು ಮಾರಾಟಮಾಡುತ್ತಿದ್ದ ಅಂಗಡಿ ಮಾಲಿಕ ಪ್ರಕಾಶ್ ಚಂದ್ರ ಕುಮಾರ ಪ್ರಾಯ (38) ವಾಸ: ವಕ್ವಾಡಿ ಕುಂದಾಪುರ ಎಂಬವರನ್ನು ಉಡುಪಿ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕ ಗಣೇಶ್ ಎಂ.ಹೆಗಡೆ ಹಾಗೂ ಸಿಬ್ಬಂದಿಯವರು ಖಚಿತ ಮಾಹಿತಿ ಮೇರೆಗೆ ದಾಳಿನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ ಯಾವುದೇ ಪರವಾನಿಗೆ ಇಲ್ಲದ ಸುಮಾರು 25 ಅಶ್ಲೀಲ ಸಿ.ಡಿಗಳನ್ನು ವಶಪಡಿಸಿಕೊಂಡಿದ್ದು ವಶಪಡಿಸಿಕೊಂಡಿರುವ ಸ್ವತ್ತುಗಳ ಒಟ್ಟು ಮೌಲ್ಯ ರೂ 35,000/-ಆಗಿರುತ್ತದೆ. ಆರೋಪಿ ಹಾಗೂ ಸ್ವತ್ತುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
 
ಚಿನ್ನದ ಸರ ಎಳೆದು ಪರಾರಿ
 
ಶ್ರೀಮತಿ ಬಿ. ಶಂಕರಿ ಭಟ್ (57 ವರ್ಷ) ಗಂಡ: ಡಾ: ಯು. ರಾಮ ಭಟ್, ಪರಾಶರ, ಸುಧೀಂದ್ರ ತೀರ್ಥಮಾರ್ಗ, ಕುಂಜಿಬೆಟ್ಟು, ಉಡುಪಿರವರು ದಿನಾಂಕ 10/08/09 ರಂದು ಸಂಜೆ ಸುಮಾರು 7:30 ಗಂಟೆಗೆ ಎಂದಿನಂತೆ ವಾಕಿಂಗ್ ಮುಗಿಸಿ ತಮ್ಮ ಮನೆಯ ಕಡೆ ಹೋಗುವರೇ ಲಾಲಾಲಜಪತ್ ಮಾರ್ಗದಿಂದ ಶಾರದ ಕಲ್ಯಾಣ ಮಂಟಪದ ಎದುರಾಗಿ ಹೋಗುತ್ತಿರುವಾಗ ಅವರ ಎದುರುಗಡೆಯಿಂದ ಓರ್ವ ಅಪರಿಚಿತ ಸುಮಾರು 30 ವರ್ಷ ಪ್ರಾಯದ ಒಳಗಿನ ತೆಳ್ಳಗಿನ ವ್ಯಕ್ತಿ ಬಗಲಿಗೆ ಚೀಲ ಹಾಕಿಕೊಂಡು ಬರುತ್ತಿದ್ದು ಒಮ್ಮೆಲೆ ಶಂಕರಿ ಭಟ್ರವರ ಕೊರಳಿಗೆ ಕೈ ಹಾಕಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 5 ಪವನ್ ತೂಕದ ಕರಿಮಣಿ ಸರ ಮತ್ತು 2 ಪವನ್ ತೂಕದ ರೋಪ್ ಚೈನನ್ನು ರಭಸದಿಂದ ಎಳೆದು ಶಾರದಾ ಕಲ್ಯಾಣ ಮಂಟಪದ ಎದುರಿನ ರಸ್ತೆ ಅಂದರೆ ಬೀಡಿನಗುಡ್ಡೆ ಕಡೆ ಹೋಗುವ ರಸ್ತೆಯಲ್ಲಿ ಓಡಿ ಹೋಗಿದ್ದು ಎಳೆದುಕೊಂಡು ಹೋದ ಸರಗಳ ಒಟ್ಟು ಮೌಲ್ಯ ಸುಮಾರು ರೂಪಾಯಿ 60,000 ಆಗಬಹುದು ಎಂಬುದಾಗಿ ಶ್ರೀಮತಿ ಶಂಕರಿ ಭಟ್ರವರು ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದು, ಅವರ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 265/09 ಕಲಂ 392 ಐಪಿಸಿಯಂತೆ ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಯ ಬಗ್ಗೆ ಶ್ರಮಿಸಲಾಗುತ್ತಿದೆ.
 
ಜಾತಿ ನಿಂದನೆ - ದೂರು ದಾಖಲು
 
ಗಂಗೊಳ್ಳಿ ಠಾಣಾ ಸರಹದ್ದಿನ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಹಾವಳಿ (60 ವರ್ಷ)ರವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ದಿನಾಂಕ 10-08-09 ರಂದು ಬೆಳಿಗ್ಗೆ 07:30ಗಂಟೆಗೆ ಮನೆಯ ಹತ್ತಿರದ ಸಾರ್ವಜನಿಕ ನಳ್ಳಿಯಿಂದ ನೀರು ತೆಗೆಯಲು ಹೋದಾಗ ಸ್ಥಳೀಯ ನಿವಾಸಿಗಳಾದ ಸಂಜೀವ ಗಾಣಿಗ ಮತ್ತು ಅವರ ಹೆಂಡತಿ ಚಂದು ಅಲಿಯಾಸ್ ಚಂದ್ರಾವತಿ ಗಾಣಿಗರವರು ಹಾವಳಿಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ನಳ್ಳಿಯ ನೀರನ್ನು ತೆಗೆಯಬಾರದಾಗಿ ಬೆದರಿಕೆ ಹಾಕಿದ್ದಲ್ಲದೇ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಹಾವಳಿಯವರು ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 81/09 ಕಲಂ 504, 323, 506 ಜೊತೆಗೆ 34 ಐಪಿಸಿ ಮತ್ತು ಕಲಂ 3 (1) (10) ಎಸ್.ಸಿ./ಎಸ್.ಟಿ ಪಿ.ಎ. ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಅಪಘಾತ ಪ್ರಕರಣ
 
ದಿನಾಂಕ 09/08/2009 ರಂದು 21:00 ಗಂಟೆಗೆ ಕಾಪು ಠಾಣಾ ಸರಹದ್ದಿನ ಮೂಳೂರು ಗ್ರಾಮದ, ಮೂಳೂರು ರಾ.ಹೆ 17 ರಲ್ಲಿ ಪಡುಬಿದ್ರೆ ಕಡೆಯಿಂದ ಕಾಪು ಕಡೆಗೆ ಕೆಎ 20 ಯು 7996 ನೇ ಮೋಟಾರು ಸೈಕಲನ್ನು ಅದರ ಸವಾರರಾದ ಪ್ರಶಾಂತ (28 ವರ್ಷ) ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಮೋಟಾರು ಸೈಕಲ್ ಸವಾರರಾದ ಪ್ರಶಾಂತ ಎಂಬವರಿಗೆ ಸಾಧಾರಣಾ ಸ್ವರೂಪದ ಹಾಗೂ ಸಹ ಸವಾರರದ ಪ್ರವೀಣ್ ಶೆಟ್ಟಿ (25 ವರ್ಷ) ಎಂಬವರಿಗೆ ತೀವ್ರ ತರಹದ ಗಾಯವಾಗಿರುತ್ತದೆ ಎಂಬುದಾಗಿ ಶರತ್ ಶೆಟ್ಟಿ (28 ವರ್ಷ) ತಂದೆ: ಜಯರಾಮ ಶೆಟ್ಟಿ, ವಾಸ: ಅಮಾಸೆಬೈಲು, ಬೇಟ್ಕೇರಿ, ಮೇಲ್ಮನೆ, ಕುಂದಾಪುರರವರು ಕಾಪು ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 161/09 ಕಲಂ 279, 338 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಗಾಯಾಳುಗಳಿಬ್ಬರೂ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದವರಾಗಿರುತ್ತಾರೆ.

ದಿನಾಂಕ 10/08/09 ರಂದು 15:00 ಗಂಟೆಗೆ ಕಾರು ನಂಬ್ರ ಕೆಎ 20 ಎನ್ 5727ನ್ನು ಅದರ ಚಾಲಕ ಕೃಷ್ಣ ಪೂಜಾರಿ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬಂದು ಕಾರ್ಕಳ ತಾಲೂಕು ನೀರೆ ಗ್ರಾಮದ ಅನಂತಬೆಟ್ಟು ಎಂಬಲ್ಲಿ ಸಾರ್ವಜನಿಕ ಮುಖ್ಯರಸ್ತೆಯಲ್ಲಿ ಉಡುಪಿ ಕಡೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ತೂಫಾನ್ ಟ್ರಾಕ್ಸ್ ನಂಬ್ರ ಕೆಎ 27 ಎ 2827ಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಘಟನೆಯಲ್ಲಿ ಯಾರಿಗೂ ಗಾಯವಾಗಿರುವುದಿಲ್ಲ. ಈ ಅಪಘಾತದ ಬಗ್ಗೆ ಹಾವೇರಿ ತಾಲೂಕಿನ ಹೊಸಳ್ಳಿ ಸವಣೂರು ವಾಸಿ ಶಿವರುದ್ರಪ್ಪ (35 ವರ್ಷ) ರವರು ದೂರು ನೀಡಿದ್ದು ಅವರ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 112/09 ಕಲಂ 279 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ 10/08/2009ರಂದು ಸಂಜೆ 19:30ಗೆ ಮನೆಗೆ ಬೇಕಾಗುವ ದಿನಸಿ ಸಾಮಾನುಗಳನ್ನು ತರಲು ಉಡುಪಿ ನಗರ ಠಾಣಾ ಸರಹದ್ದಿನ ಬೈಲೂರು, 76 ಬಡಗಬೆಟ್ಟು ಗ್ರಾಮದಲ್ಲಿ ವಾಸವಿರುವ ಮುದ್ದು ಪೂಜಾರಿ (53 ವರ್ಷ)ರವರು ಕೊರಂಗ್ರಪಾಡಿ ಪೇಟೆಗೆ ಹೋಗುವ ಸಲುವಾಗಿ ಬೈಲೂರು ಸುನೀತಾ ಹೊಲೋ ಬ್ಲಾಕ್ನ ಬಳಿ ಕಾಲು ರಸ್ತೆಯಲ್ಲಿ ನಿಂತುಕೊಂಡಿರುವ ಸಮಯ ಕೆಎ 20 ಯು 3155 ನಂಬ್ರದ ಮೋಟಾರ್ ಬೈಕನ್ನು ಅದರ ಸವಾರನು ಕೊರಂಗ್ರಪಾಡಿ ಕಡೆಯಿಂದ ಕುಕ್ಕಿಕಟ್ಟೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಕಾಲು ರಸ್ತೆಯಲ್ಲಿ ನಿಂತುಕೊಂಡಿದ್ದ ಮುದ್ದುಪೂಜಾರಿಯವರಿಗೆ ಢಿಕ್ಕಿ ಹೊಡೆದ ಪರಿಣಾಮ ಮುದ್ದು ಪೂಜಾರಿಯವರು ಕೆಳಗೆ ಬಿದ್ದು ತಲೆಗೆ ಮತ್ತು ಎಡಕಾಲಿಗೆ ತೀವ್ರ ಸ್ವರೂಪದ ಗಾಯವಾಗಿ ರಕ್ತ ಸುರಿಯುತ್ತಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಕೂಡಲೇ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದಲ್ಲಿ ವೈದ್ಯಾಧಿಕಾರಿಯವರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು. ಚಿಕಿತ್ಸೆಯಲ್ಲಿರುತ್ತಾ ರಾತ್ರಿ 23:45 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ಮೃತ ಮುದ್ದು ಪೂಜಾರಿಯವರ ನೆರೆಕೆರೆಯ ವಾಸಿ ನಾಗರಾಜ (33 ವರ್ಷ) ತಂದೆ: ರಾಮ ಶೆಟ್ಟಿಗಾರವರು ಉಡುಪಿ ನಗರ ಠಾಣೆಯಲ್ಲಿ ಪಿರ್ಯಾದು ನೀಡಿದ್ದು ಅದರಂತೆ ಉಡುಪಿ ನಗರ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 266/09 ಕಲಂ 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಮೃತರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆನ್ನಲಾಗಿದೆ.
 
ಸೆಕ್ಯೂರಿಟಿ ಪ್ರಕರಣಗಳು
ಬೈಂದೂರು ಠಾಣಾ ಸರಹದ್ದಿನ ಕುಂದಾಪುರ ತಾಲೂಕಿನ ಗೋಳಿಹೊಳೆ ಗ್ರಾಮ ಪರಿಸರದ ನಿವಾಸಿಗಳಾದ 1) ಶೇಖರ ಪೂಜಾರಿ (34) ತಂದೆ: ಶೀನ ಪೂಜಾರಿ ವಾಸ: ಬಿಜ್ಮಕ್ಕಿ, ಕಾಲ್ತೋಡು ಗ್ರಾಮ 2) ವಿರೇಂದ್ರ ಪೂಜಾರಿ (24) ತಂದೆ: ರಾಮ ಪೂಜಾರಿ ವಾಸ: ಬೈಲುಮನೆ, ಗೋಳಿಹೊಳೆ ಗ್ರಾಮ 3) ಉದಯ ಪೂಜಾರಿ (28) ತಂದೆ: ರಾಮ ಪೂಜಾರಿ ವಾಸ: ಬೈಲುಮನೆ, ಗೋಳಿಹೊಳೆ ಗ್ರಾಮ 4) ಸುಧಾಕರ ಗೌಡ (20) ತಂದೆ: ನಾಗಪ್ಪ ಗೌಡ ವಾಸ: ಹಕ್ಲುಮನೆ, ಗೋಳಿಹೊಳೆ ಗ್ರಾಮ ಮತ್ತು 5) ಸಾಯಿಕುಮಾರ್ (23) ತಂದೆ: ರಾಮ ಪೂಜಾರಿ ವಾಸ: ಹಾಲಿಮನೆ, ಗೋಳಿಹೊಳೆ ಗ್ರಾಮರವರು ತಮ್ಮ ದ್ವೇಷ ಸಾಧನೆಗಾಗಿ ತಮ್ಮ ಸಹಚರರನ್ನು ಕೂಡಿಕೊಂಡು ಕ್ರಿಕೆಟ್ ಆಟದ ವಿಷಯದಲ್ಲಿ ಗೋಳಿಹೊಳೆ ಗ್ರಾಮದಲ್ಲಿ ಘರ್ಷಣೆಯುಂಟು ಮಾಡಿ ಶಾಂತತಾ ಭಂಗವನ್ನುಂಟು ಮಾಡುವ ಸಾಧ್ಯತೆಯಿರುವುದು ಕಂಡು ಬಂದಿದ್ದಲ್ಲದೇ ರಾಜಕೀಯ ಹಿತಾಸಕ್ತಿಗಳು ತಮ್ಮ ಸ್ವಹಿತಕ್ಕಾಗಿ ಮತ್ತು ರಾಜಕೀಯವಾಗಿ ಲಾಭ ಪಡೆಯುವ ಹಿತಾಸಕ್ತಿಗಳು ಮಧ್ಯ ಪ್ರವೇಶಿಸಿ ಪ್ರತಿವಾದಿಯವರನ್ನು ಪುಸಲಾಯಿಸಿ ಅವರೊಳಗೆ ಘರ್ಷಣೆಯುಂಟುಮಾಡಿ ಗೋಳಿಹೊಳೆ ಗ್ರಾಮದಲ್ಲಿ ಗಲಾಟೆ, ದೊಂಬಿ, ರಕ್ತಪಾತವಾಗಿ ಸೊತ್ತು ಹಾನಿ, ಪ್ರಾಣ ಹಾನಿಯುಂಟಾಗಿ ಗೋಳಿಹೊಳೆ ಗ್ರಾಮದಲ್ಲಿ ಸಾರ್ವಜನಿಕ ಶಾಂತಿಗೆ ಹಾಗೂ ನೆಮ್ಮದಿಗೆ ಭಂಗವುಂಟಾಗುವ ಸಾದ್ಯತೆಗಳು ಇರುವುದಾಗಿ ತಿಳಿದು ಬಂದಿದ್ದು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆಯನ್ನು ಕಾಪಾಡುವ ಹಾಗೂ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿವಾದಿಯವರ ವಿರುದ್ಧ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 182/09 ಕಲಂ 107, 116(3) ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ಸೂಕ್ತ ಸಮಯದವರೆಗೆ ಒಳ್ಳೆಯ ಗುಣನಡತೆ ಬಗ್ಗೆ ಮುಚ್ಚಳಿಕೆ ಪಡಕೊಳ್ಳಲು ಕುಂದಾಪುರ ತಾಲೂಕು ದಂಢಾಧಿಕಾರಿಯವರಿಗೆ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ನಾಗೇಗೌಡ ಎನ್.ಸಿ.ರವರು ವರದಿ ಸಲ್ಲಿಸಿರುತ್ತಾರೆ. ಹಾಗೆಯೇ ಇನ್ನೊಂದು ಪ್ರಕರಣದಲ್ಲಿ ಅದೇ ಪರಿಸರದ ನಿವಾಸಿಗಳಾದ 1) ವಾಸು ಮರಾಠಿ (23) ತಂದೆ: ಬಾಲಯ್ಯ ಮರಾಠಿ ವಾಸ: ವಾಸ: ಬೀದಿಕೇರಿ ಮನೆ, ಗೋಳಿಹೊಳೆ ಗ್ರಾಮ 2) ಗಣೇಶ್ ಮರಾಠಿ (24) ತಂದೆ: ಕೃಷ್ಣ ಮರಾಠಿ ವಾಸ: ಗೋಳಿಹೊಳೆ ಗ್ರಾಮ 3) ಗಿರೀಶ್ (21) ತಂದೆ: ಗೋವಿಂದ ಮರಾಠಿ ವಾಸ: ಗೋಳಿಹೊಳೆ ಗ್ರಾಮ 4) ಪುಟ್ಟಯ್ಯ ಮರಾಠಿ (26) ತಂದೆ: ಮಂಜುನಾಥ ಮರಾಠಿ ವಾಸ: ಗೋಳಿಹೊಳೆ ಗ್ರಾಮ ಮತ್ತು 5) ಅಣ್ಣಪ್ಪ ಅಲಿಯಾಸ್ ಪುಟ್ಟಯ್ಯ (26) ತಂದೆ: ಬಚ್ಚ ಮರಾಠಿ ವಾಸ: ಗೋಳಿಹೊಳೆ ಗ್ರಾಮರವರ ವಿರುದ್ಧವೂ ಠಾಣೆಯಲ್ಲಿ ಅಪರಾಧ ಕ್ರಮಾಂಕ 183/09 ಕಲಂ 107, 116(3) ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ಸೂಕ್ತ ಸಮಯದವರೆಗೆ ಒಳ್ಳೆಯ ಗುಣನಡತೆ ಬಗ್ಗೆ ಮುಚ್ಚಳಿಕೆ ಪಡಕೊಳ್ಳಲು ಕುಂದಾಪುರ ತಾಲೂಕು ದಂಢಾಧಿಕಾರಿಯವರಿಗೆ ವರದಿ ಸಲ್ಲಿಸಿರುತ್ತಾರೆ.
 
ಅಪಘಾತ ಪ್ರಕರಣ
ದಿನಾಂಕ 08/08/09 ರಂದು ರಾತ್ರಿ ಹೆಗ್ಗುಂಜೆ ಗ್ರಾಮದ ಪುಟ್ಟಯ್ಯ ನಾಯ್ಕ (38 ವರ್ಷ)ರವರು ತನ್ನ ಭಾವ ಚಂದ್ರ ಎಂಬವರೊಂದಿಗೆ ಮಂದಾತರ್ಿಯಿಂದ ನಡೆದುಕೊಂಡು ಮನೆಯ ಕಡೆಗೆ ಹೋಗುತ್ತಿರುವಾಗ ಮಂದಾತರ್ಿಯಿಂದ ಮೈರ್ಕೋಮೆ ಕಡೆಗೆ ಅಂದರೆ ಹಿಂದಿನಿಂದ ಬಸ್ಸು ನಂಬ್ರ ಕೆಎ 20 ಬಿ 146ನ್ನು ಅದರ ಚಾಲಕ ಸೋಮಶೇಖರ (36 ವರ್ಷ), ಸೊರಬ, ಶಿವಮೊಗ್ಗ ಜಿಲ್ಲೆರವರು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪುಟ್ಟಯ್ಯ ನಾಯ್ಕರವರಿಗೆ ಢಿಕ್ಕಿ ಹೊಡೆದ ಪರಿಣಾಮ ಎಡಕಾಲಿನ ಮೂಳೆ ಮುರಿತವಾಗಿ ತೀವ್ರ ಜಖಂ ಉಂಟಾಗಿರುತ್ತದೆ. ಈ ಅಪಘಾತದ ಬಗ್ಗೆ ಪುಟ್ಟಯ್ಯ ನಾಯ್ಕರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/09 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಇತರೇ ಪ್ರಕರಣ

ದಿನಾಂಕ 09/08/09 ರಂದು ಮಧ್ಯಾಹ್ನ 15:30 ಘಂಟೆಗೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಿ ನಗರದ ವಾಸಿ ಸೈಯದ್ ಕರೀಮ್ (35 ವರ್ಷ)ರವರು ಬಸ್ಸು ನಂಬ್ರ ಕೆಎ 20 ಬಿ 4689ನ್ನು ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಬೆಳಿಗ್ಗೆ ಸುಮಾರು 08:00 ಗಂಟೆ ಸಮಯಕ್ಕೆ ಹೇರಾಡಿ ಬಸ್ಸುಸ್ಟ್ಯಾಂಡ್ ಬಳಿ ತಲುಪುವಾಗ ಆರೋಪಿ ರಮೇಶ್ ಎಂಬಾತನು ಶ್ರೀ ದುಗರ್ಾಂಬ ಬಸ್ಸನ್ನು ಚಲಾಯಿಸಿಕೊಂಡು ಬಂದು ಕರೀಮ್ರವರ ಬಸ್ಸಿಗೆ ಅಡ್ಡ ನಿಲ್ಲಿಸಿಕೊಂಡು ಒಂದು ಕೋಲಿನಿಂದ ಅವರ ಬಲಕೈಗೆ ಹೊಡೆದಿರುವುದಲ್ಲದೇ ಇನ್ನು ಮುಂದಕ್ಕೆ ಓವರ್ ಟೇಕ್ ಮಾಡಿಕೊಂಡು ಬಂದರೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಸೈಯದ್ ಕರೀಮ್ರವರು ಬ್ರಹ್ಮಾವರ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 140/09 ಕಲಂ 341, 324, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ 09/08/09 ರಂದು ರಾತ್ರಿ 10:30 ಗಂಟೆಗೆ ಕೋಟಾ ಠಾಣಾ ಸರಹದ್ದಿನ ತೆಕ್ಕಟ್ಟೆಯ ವಿನಯ ಬಾರ್ನ ಮ್ಯಾನೇಜರ್ ಆದ ಸಂತೋಷ್ ಶೆಟ್ಟಿ (32 ವರ್ಷ) ತಂದೆ: ರಾಜೀವ ಶೆಟ್ಟಿ ಪಾದೇಮಠ ಕೆಂಜೂರು ಗ್ರಾಮರವರು ಬಾರಿನಲ್ಲಿರುವಾಗ ಅವರ ಗುರುತು ಪರಿಚಯದ ಕುಂಭಾಶಿಯ ಕೊರವಡಿಯ ಉಮೇಶ್ ರೆಡ್ಡಿ (26 ವರ್ಷ)ಎಂಬವರು ಬಂದು "ನನಗೆ ಕುಡಿಯಲು ಬ್ರಾಂಡಿ ಕೊಡಬೇಕು ಹಣವನ್ನು ನಾನು ಕೊಡುವುದಿಲ್ಲ" ಎಂದು ಹೇಳಿದ್ದು ಅದಕ್ಕೆ ಸಂತೋಷ್ ಶೆಟ್ಟಿಯವರು ಹಣ ಕೊಡದಿದ್ದರೇ ಬ್ರಾಂಡಿಯನ್ನು ಕೊಡಲಾಗುವುದಿಲ್ಲ ಎಂದು ಹೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಮದ್ಯದ ಬಾಟಲಿಗಳನ್ನು ಇಟ್ಟ ಷೋಕೇಸಿನ ಗಾಜನ್ನು ಕೈಯಿಂದ ಕುಟ್ಟಿ ಪುಡಿಮಾಡಿ ಧಮರ್ಾರ್ಥ ಬ್ರಾಂಡಿ ಕೊಡದಿದ್ದರೆ ಕೈಕಾಲು ಮುರಿಯುವುದಾಗಿ ಜೀವ ಬೆದರಿಕೆ ಹಾಕಿರುತ್ತಾರಾಗಿ ಸಂತೋಷ್ ಶೆಟ್ಟಿಯವರು ಕೋಟಾ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 188/09 ಕಲಂ 504, 427, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಜುಗಾರಿ ದಾಳಿ - 8 ಜನರ ಬಂಧನ
 
ಉಡುಪಿ : ದಿನಾಂಕ 09/08/09ರಂದು ಸಂಜೆ ಉಡುಪಿಯ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರಾದ ಶ್ರೀ ಗಣೇಶ್ ಎಂ. ಹೆಗಡೆ ಮತ್ತು ಸಿಬ್ಬಂದಿಯವರು ಖಚಿತ ವರ್ತಮಾನದಂತೆ, ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಜೋುಷ್ ಕಾಂಪ್ಲೆಕ್ಸ್ನ ಮಹಡಿಯ ಕೋಣೆಯೊಂದರಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದ 8 ಜನರನ್ನು ಬಂಧಿಸಿ, ಅವರಿಂದ ಜುಗಾರಿ ಪರಿಕರ ಮತ್ತು ಆಟಕ್ಕೆ ಬಳಸಿದ ರೂಪಾಯಿ 3,105 ಹಣವನ್ನು ವಶಪಡಿಸಿಕೊಂಡಿರುತ್ತಾರೆ. ಬಂಧಿತರನ್ನು ಕೋಟೇಶ್ವರದ ಸ್ಥಳೀಯ ನಿವಾಸಿಗಳಾದ 1) ಜಯರಾಮ ಶೆಟ್ಟಿ (47), 2) ಸತೀಶ್ ನಾಯಕ್ (38), 3) ಕೇಶವ ನಾಯ್ಕ (38), 4) ರಮೇಶ್ (46), 5) ವಿಜಯ (47), 6) ನಿತ್ಯಾನಂದ (49) 7) ಸತೀಶ್ (49) ಮತ್ತು 8) ಪ್ರಕಾಶ್ ಆಚಾರಿ (32) ಎಂದು ಗುರುತಿಸಲಾಗಿದೆ. ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀ ಪ್ರವೀನ್ ಮಧುಕರ್ ಪವಾರ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕಾಶೀನಾಥ್ ತಳಕೇರಿರವರ ನಿದರ್ೇಶನದಂತೆ ಡಿ.ಸಿ.ಐ.ಬಿ., ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಯವರು ನಡೆಸಿರುತ್ತಾರೆ. ಪ್ರಕರಣದ ಮುಂದಿನ ಕ್ರಮಕ್ಕಾಗಿ ಕುಂದಾಪುರ ಠಾಣೆಗೆ ಹಸ್ತಾಂತರಿಸಲಾಗಿದೆ.
 
 
ಅಪಘಾತ ಪ್ರಕರಣಗಳು
ದಿನಾಂಕ: 08.08.09 ರಂದು ರಾತ್ರಿ 11:20 ಗಂಟೆಗೆ ಆರೋಪಿ ಅಪರಿಚಿತ ಆಟೋರಿಕ್ಷಾ ಚಾಲಕ ತನ್ನ ಆಟೋರಿಕ್ಷಾವನ್ನು ಟೈಗರ್ ಸರ್ಕಲ್ ಕಡೆಯಿಂದ ಸರಳಬೆಟ್ಟು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಗ್ರೀನ್ ಪಾಕರ್್ ಹೋಟೇಲ್ ಬಳಿ ಡಾಮರು ರಸ್ತೆಯಲ್ಲಿ ಟೈಗರ್ ಸರ್ಕಲ್ ಕಡೆಯಿಂದ ಸರಳಬೆಟ್ಟು ಕಡೆಗೆ ಹೋಗುತ್ತಿದ್ದ ಜಯಶೀಲ ಎಂಬವರ ಕೆಎ 20 ಆರ್ 4051 ಟಿ.ವಿ.ಎಸ್ ಮೋಟಾರು ಸೈಕಲ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಜಯಶೀಲ ಎಂಬವರು ಬೈಕ್ ಸಮೇತ ರಸ್ತೆಗೆ ಬಿದ್ದುದರ ಪರಿಣಾಮ ತಲೆಗೆ, ಕಾಲಿಗೆ ಬಲ ಕೈಗೆ ರಕ್ತ ಗಾಯವಾಗಿದ್ದು ಹಾಗೂ ಬೈಕಿನ ಹಿಂಬದಿ ಕುಳಿತಿದ್ದ ಜಗದೀಶ ಎಂಬವರಿಗೆ ತಲೆಗೆ ಗುದ್ದಿದ ಹಾಗೂ ಬಲ ಕೈ ಮೊಣಗಂಟಿಗೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆೆ ಈ ಅಪಘಾತದ ಬಗ್ಗೆ ಜಗದೀಶ ನಾಯ್ಕ(25) ತಂದೆ; ಮುತ್ತು ನಾಯ್ಕ ವಾಸ; ಸಗ್ರಿ ನೋಳೆ ಲಚ್ಚಿಲ್ ಕುಂಜಿಬೆಟ್ಟು ಪೋಸ್ಟ್, ಉಡುಪಿ ತಾಲೂಕು ರವರು ನೀಡಿದ ದೂರಿನ ಮೇರೆಗೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 258/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಿನಾಂಕ 9.08.2009 ರಂದು 14:45 ಗಂಟೆಗೆ ಪಾಂಗಾಳ ಗ್ರಾಮದ ಪಾಂಗಾಳ ಜಂಕ್ಷನ್ ಬಳಿ, ರಾ.ಹೆ 17 ರಲ್ಲಿ ಉಡುಪಿ ಕಡೆಯಿಂದ ಕೆ.ಎ-19-ಬಿ-4857 ನೇ ಬಸ್ನ ಚಾಲಕನು ಬಸ್ನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಮತ್ತು ಅಜಾಗೂರಕತೆಯಿಂದ ಚಲಾಯಿಸಿ ರಸ್ತೆಯ ಬಲಬದಿಯಲ್ಲಿ ನಿಂತಿದ್ದ ಕೆಎ-34-ಕೆ-6627 ನೇ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ನವೀನ್ ಎಂಬವರು ತೀವ್ರ ಗಾಯಗೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೇ 16:20 ಗಂಟೆಗೆ ಮೃತ್ತ ಪಟ್ಟಿರುತ್ತಾರೆ. ಈ ಬಗ್ಗೆ ಉದಯ, 30 ವರ್ಷ, ತಂದೆ: ಕೃಷ್ಣಪ್ಪ ಸಾಲಿಯಾನ್ ವಾಸ: ಕಲ್ಮಾಡಿ, ಮಲ್ಪೆ, ಉಡುಪಿ ತಾಲೂಕು.ರವರು ನೀಡಿದ ದೂರಿನ ಮೇರೆಗೆ ಕಾಪು ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 160/09 ಕಲಂ 279,304(ಎ)ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ,
 
ಗಂಡಸು ಕಾಣೆ ಪ್ರಕರಣ
ದಿನಾಂಕ 09-08-09 ರಂದು ಉಡುಪಿ ತಾಲೂಕು ಕಾಪು ಪಡು ಗ್ರಾಮದ ಜನಾರ್ಧನ ಕಾಂಪ್ಲೇಕ್ಸ್ ಕಾಪು ರೆಸಿಡೆನ್ಸಿ,ಯ ವಾಸಿ ಮನೋಜ್ ಶೆಟ್ಟಿ ಎಂಬವರು ಠಾಣೆಗೆ ಬಂದು ಹಾಜರಾಗಿ ತನ್ನ ತಂದೆ ಪಿ. ಬಾಲಕೃಷ್ಣ ಶೆಟ್ಟಿ (72 ವರ್ಷ) ಎಂಬವರು ದಿನಾಂಕ. 08/08/2009 ರಂದು 09:30 ಗಂಟೆಗೆ ಹೊರಗೆ ಹೋದವರು ಈವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮನೋಜ್ ಶೆಟ್ಟಿರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 159/09 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಕಾಣೆಯಾದವರು ಸುಮಾರು 5 ಅಡಿ ಎತ್ತರವಿದ್ದು ಗೋಧಿ ಮೈಬಣ್ಣ, ಬೂದು ಬಣ್ಣದ ತಲೆ ಕೂದಲು ಸಾದಾರಣ ಶರೀರ ಹೊಂದಿದ್ದು ,ಕಪ್ಪು ಚೌಕುಳಿಯಿರುವ ಬಿಳಿ ಬಣ್ಣದ ಶಟರ್್ ಧರಿಸಿರುತ್ತಾರೆ. ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಮೇಲೆ ತಿಳಿಸಿದ ಚಹರೆಯುಳ್ಳ ಗಂಡಸು ಪತ್ತೆಯಾದಲ್ಲಿ ಉಪ ನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಅಥವಾ ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತರವರಿಗೆ ಮಾಹಿತಿ ನೀಡುವಂತೆ ಕೋರಿಕೆ (ದೂರವಾಣಿ ನಂ. 0820-2551033, 0820-2552133) ಅಥವಾ ಪೊಲೀಸ್ ಕಂಟ್ರೋಲ್ ರೂಂ, ಉಡುಪಿ (0820 - 2526444)ರವರಿಗೆ ತಿಳಿಸಲು ಕೋರಲಾಗಿದೆ.
 
ಹಲ್ಲೆ ಪ್ರಕರಣ
 
ದಿನಾಂಕ: 09/8/09 ರಂದು ಫೆಲಿಕ್ಸ್ ರೋಡ್ರಿಗಸ್ (51) ತಂದೆ: ಅಲ್ಬಟರ್್ ರೋಡ್ರಿಗಸ್ ವಾಸ: ಮುರಂತಬೆಟ್ಟು ಮನೆ ಮುಂಡ್ಕೂರು ಗ್ರಾಮ ಮಂಗಳೂರು ತಾಲೂಕು ಎಂಬವರು ಶಂಕರ ಎಂಬಾತನೊಂದಿಗೆ ತಮ್ಮ ವಾಹನದಲ್ಲಿ ಅತ್ತೂರಿನ ವಿಠಲ ಹೆಗ್ಡೆಯವರಿಂದ 2 ಗಂಡು ಹೋರಿಗಳನ್ನು ಪಡೆದುಕೊಂಡು ಬಾಡಿಗೆ ಬಗ್ಗೆ ಹಂಡೇಲಿನ ಕುಂಜಿಮೋನು ಎಂಬವರಿಗೆ ನೀಡುವ ಸಲುವಾಗಿ ಹೋಗುತ್ತಿರುವಾಗ ಕಾರ್ಕಳ ಕಸಬ ಗ್ರಾಮದ ಶಿವತಿಕೆರೆ ಎಂಬಲ್ಲಿ 14:00 ಗಂಟೆ ಸಮಯಕ್ಕೆ 3 ರಿಂದ 4 ಜನ ಆಪಾದಿತರು(ಹೆಸರು ವಿಳಾಸ ಪತ್ತೆಯಾಗಿರುವುದಿಲ್ಲ) ವಾಹನವನ್ನು ಅಡ್ಡಹಾಕಿ ಕಲ್ಲುಗಳಿಂದ ವಾಹನಕ್ಕೆ ಹಾನಿಯುಂಟುಮಾಡಿ ನನಗೂ ಶಂಕರನಿಗೂ ಕೈಗಳಿಂದ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಫೆಲಿಕ್ಸ್ ರೋಡ್ರಿಗಸ್ ರವರು ಕಾರ್ಕಳ ನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 111/09 ಕಲಂ 341, 427, 323 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 
ಗೋಹತ್ಯೆ ಪ್ರಕರಣ
 
ದಿನಾಂಕ: 09/8/09 ರಂದು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಹಾರ್ಜಡ್ಡು ವಾಸಿ ರವಿ (30) ತಂದೆ: ರಾಜು ಶೆಟ್ಟಿ ಎಂಬವರು ಮಧ್ಯಾಹ್ನ 2:00 ಗಂಟೆಯ ಸಮಯಕ್ಕೆ ಕಾರ್ಕಳ ಕಸಬ ಗ್ರಾಮದ ಶಿವತಿಕೆರೆ ಎಂಬಲ್ಲಿ ಬೈಪಾಸ್ ರಸ್ತೆಯಲ್ಲಿರುವಾಗ್ಗೆ ಬಂಗ್ಲೆಗುಡ್ಡೆ ಕಡೆಯಿಂದ ಬೈಪಾಸ್ ರಸ್ತೆಯಾಗಿ ಪುಲ್ಕೇರಿ ಕಡೆಗೆ ಹೋಗುತ್ತಿದ್ದ ಟಾಟಾ ಇಎಕ್ಸ್ ನಂ: ಕೆ.ಎ.19.ಬಿ.4115 ರಲ್ಲಿ ಅಕ್ರಮವಾಗಿ ಮಾಂಸಕ್ಕಾಗಿ ಕಡಿಯಲು ದನವನ್ನು ಸಾಗಾಟ ಮಾಡುತ್ತಿದ್ದವರನ್ನು ಸಾರ್ವಜನಿಕರು ನಿಲ್ಲಿಸಿರುತ್ತಾರೆ, ವಾಹನದಲ್ಲಿ 2 ಗಂಡು ಹೋರಿ ಇದ್ದು, ಟಾಟಾ ಇಎಕ್ಸ್ ಚಾಲಕ 1) ಫೆಲಿಕ್ಸ್ ರೋಡ್ರಿಗಸ್ (51) ತಂದೆ: ಅಲ್ಬಟರ್್ ರೋಡ್ರಿಗಸ್ ವಾಸ: ಮುರತ್ತಂಗಡಿ ಮನೆ ಮುಂಡ್ಕೂರು ಗ್ರಾಮ ಮಂಗಳೂರು ತಾಲೂಕು. ಮತ್ತು ಆತನೊಂದಿಗೆ ಇದ್ದ ಶಂಕರ(30) ತಂದೆ: ರಾಮಪ್ಪ ಮೊಯ್ಲಿ ವಾಸ: ಗುರುಬೆಟ್ಟುಮನೆ ಕಲ್ಲ ಮುಂಡ್ಕೂರು ಗ್ರಾಮ ಮಂಗಳೂರು ತಾಲೂಕು. ಎಂಬವರುಗಳು ವಾಹನ ಬಿಟ್ಟು ಓಡಿ ಹೋಗಿರುತ್ತಾರೆ. ಟಾಟಾ ಇಎಕ್ಸ್ ವಾಹನ ಶಿವತಿಕೆರೆ ಬೈಪಾಸ್ ರಸ್ತೆ ಬಳಿ ಇರುತ್ತದೆ ಈ ಬಗ್ಗೆ ರವಿ ಯವರು ಕಾರ್ಕಳ ನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 110/09 ಕಲಂ: 8, 9, 11 ಗೋಹತ್ಯಾ ನಿಷೇಧ ಕಾಯ್ದೆ ಮತ್ತು ಕಲಂ. 192(ಎ) ಐಎಂವಿ ಕಾಯ್ದೆ.ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment