Saturday, August 15, 2009

ಅಪಘಾತ ಪ್ರಕರಣ/Accident Near Manipal


ದಿನಾಂಕ: 15.08.09 ರಂದು 13:15 ಗಂಟೆಗೆ ಶಿವಳ್ಳಿ ಗ್ರಾಮದ ಇಂದ್ರಾಳಿ ನಿಷಾಂತ್ ಎಂಟರ್ ಪ್ರೈಸಸ್ ಬಳಿ ಆರೋಪಿ ಕೆಎ 20 ಎ 7329 ನೇ ಗಜಾನನ ಬಸ್ ಚಾಲಕ ಬಸ್ಸನ್ನು ಅದರ ಎದುರುಗಡೆ ಹೋಗುತ್ತಿದ್ದ ವಾಹನಗಳನ್ನು ಹಿಂದಕ್ಕೆ ಹಾಕಲು ಮುನ್ನುಗ್ಗಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬಲಬದಿ ಬಂದು ಕಿರಣ್ ಮೆಂಡನ್ ತಂದೆ: ಆನಂದ ಮೆಂಡನ್ ವಾಸ: ಸ್ಮಜಾತ ನಿವಾಸ ಪೊಲಿಪು ಉಳಿಯಾರಗೋಳಿ ಪೋಸ್ಟ್ ಕಾಪು ಉಡುಪಿ ಜಿಲ್ಲೆ ಎಂಬವರ ಅಣ್ಣನ ಮೋಟಾರು ಸೈಕಲ್ ಕೆಎ 20 ಯು 3698 ಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಿರಣ್ ಮೆಂಡನ್ರಿಗೆ ಬೆನ್ನಿಗೆ ಗುದ್ದಿದ ನೋವು ಆಗಿದ್ದು, ಹಾಗೂ ಹಿಂದೆ ಸಹಸವಾರರಾಗಿ ಕುಳಿತ್ತಿದ್ದ ಸೌಮ್ಯ ಎಂಬವರಿಗೆ ತಲೆಗೆ, ಬಲ ಕಾಲಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಅಪಘಾತದ ಬಗ್ಗೆ ಕಿರಣ್ ಮೆಂಡನ್ರವರು ನೀಡಿದ ದೂರಿನ ಮೇರೆಗೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 177/09 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ದಸ್ತಗಿರಿಯಾಗದೇ ಇರುವುದರಿಂದ ಆರೋಪಿಯ ಹೆಚ್ಚಿನ ವಿವರ ತಿಳಿದುಬಂದಿರುವುದಿಲ್ಲ.
 
 
ವರದಕ್ಷಿಣೆ ಕಿರುಕುಳ ಪ್ರಕರಣ
ಮಣಿಪಾಲ ಠಾಣಾ ಸರಹದ್ದಿನ ಉಡುಪಿ ತಾಲೂಕು ಪರ್ಕಳದ ಅಚ್ಚುತ ನಗರ ಹೌಸ್ ನಂಬ್ರ: 23 ರ ವಾಸಿ ಶ್ರೀಮತಿ ಭಾವನಾ ಆರ್ ಪ್ರಭು ಗಂಡ: ರಮೇಶ್ ಪ್ರಭು ರವರು ನ್ಯಾಯಾಲಯದ ಮುಖಾಂತರ ಖಾಸಗಿ ದೂರು ನೀಡಿದ್ದು ದಿನಾಂಕ 12/04/07 ರಂದು ಶ್ರೀಮತಿ ಭಾವನಾ ಆರ್ ಪ್ರಭುರವರು ಹಿಂದೂ ಧಾಮರ್ಿಕ ಪದ್ದತಿಯಂತೆ ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ರಮೇಶ್ ಪ್ರಭು(ಆರೋಪಿ) ತಂದೆ: ಸದಾನಂದ ಎನ್ ಪ್ರಭು ರವರನ್ನು ಮದುವೆಯಾಗಿದ್ದು ಪಿಯರ್ಾದಿದಾರರು ವಿವಾಹದ ಬಳಿಕ ಗಂಡನ ಮನೆಯಲ್ಲಿ ಇದ್ದು ಆರೋಪಿ ರಮೇಶ್ ಪ್ರಭು ಹಾಗೂ ಅವನ ತಂದೆ ಸದಾನಂದ ಪ್ರಭು ತಾಯಿ ಶ್ರೀಮತಿ ಗೀತಾ ಪ್ರಭು ಗಂಡ: ಸದಾನಂದ ಪ್ರಭು ವಾಸ: ಡೋ.ನಂ.1-11-256, ಪರಿಶ್ರಮ ನಿಜಲಿಂಗಪ್ಪ ಕಾಲನಿ, ರಾಯಚೂರು. ವನಿತಾ ಪ್ರಭು ತಂದೆ: ಸದಾನಂದ ಎನ್ ಪ್ರಭು ವಾಸ: ಪ್ರಭು ಮತ್ತು ಪ್ರಭು ಆಡೀಟರ್ 2, ಪ್ಲೋರ್, ವೆಂಕಟೇಶ್ವರ ಕಾಂಪ್ಲಕ್ಸ್, 24/1 ರೇಸ್ ಕ್ರೋಸ್ ರೋಡ್, ಬೆಂಗಳೂರು. ಡಾ. ವಿದ್ಯಾಭಟ್ ತಂದೆ: ಸದಾನಂದ ಎನ್ ಪ್ರಭು, ವಾಸ: ಕಾಂಞಂಗಾಡ್, ಕೇರಳ, ರಾಮಚಂದ್ರ ಫ್ರಭು ಸುಧಾಕರ ಫ್ರಭು ವಾಸ: ಹೋಟೆಲ್ ನೃಪತುಂಗ, ಅಂಬೇಡ್ಕರ್ ಸರ್ಕಲ್, ಸ್ಟೇಶನ್ ರೋಡ್, ರಾಯಚೂರು ಎಂಬವರುಗಳು (ಸಹೋದರಿಯರು ಚಿಕ್ಕಪ್ಪಂದಿರು) ಪ್ರತಿಯೊಂದು ವಿಷಯಕ್ಕೂ ನಿಂದಿಸುವುದು , ಕಿರುಕುಳ ನೀಡಲು ಪ್ರಾರಂಭಿಸಿ ಆರೋಪಿಗೆ ನೀಡಿದ ವರದಕ್ಷಿಣೆ ಕಡಿಮೆಯಾಯಿತು ಎಂದು, ಚಿನ್ನಾಭರಣ ತರಲಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಮಾನಸಿಕ ಹಿಂಸೆ ನೀಡುತ್ತಾ ಪಿರ್ಯಾದಿ ಗಭರ್ಿಣಿಯಾದ ಬಳಿಕ ಕೂಡ ಹೊಟ್ಟೆಯಲ್ಲಿದ್ದ ಭ್ರೂಣ ಯಾರಿಗೆ ಸೇರಿದೆಂದು ನೋಡಬೇಕೆಂದು ಶೀಲ ಶಂಕಿಸಿ ಪಿಯರ್ಾದಿಯನ್ನು ಉಪಾಯದಿಂದ ತವರು ಮನೆಗೆ ಕಳುಹಿಸಿದ್ದು ಅಲ್ಲದೆ ದಿನಾಂಕ 25/07/2009 ರಂದು ಆರೋಪಿ ರಮೇಶ್ ಪ್ರಭು ಫಿಯರ್ಾದಿಗೆ ಫೋನು ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಫಿಯರ್ಾದಿದಾರರು ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದೂರಿನ ಸಾರಾಂಶವಾಗಿರುತ್ತದೆ ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 146/09 ಕಲಂ 498 ಎ, 506, ಐಪಿಸಿ 3 ಮತ್ತು 4 ವರದಕ್ಷಿಣೆ ನಿಷೇಧ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಬಾವಿಗೆ ಹಾರಿ ಆತ್ಮಹತ್ಯೆ ಪ್ರಕರಣ
ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ಕುಂಚೊಟ್ಟು ದಖರ್ಾಸು ನಿವಾಸಿ ದಿನೇಶ ಮಡಿವಾಳ (29), ತಂದೆ: ದಿ.ಲೋಕೇಶ ಕುಂದರ್ ಎಂಬವರ ತಾಯಿ ಸುಮಾರು 65 ವರ್ಷದ ಶ್ರೀಮತಿ ವನಜಾ ಇವರು ತನ್ನ ಗಂಡ ಲೋಕೇಶ್ ಕುಂದರ್ರವರು ಮೃತಪಟ್ಟ ಬಳಿಕ ಮಾನಸಿಕ ಯಾತನೆ ಅನುಭವಿಸುತ್ತಿದ್ದವರು, ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 14/15.8.09 ರಂದು ರಾತ್ರಿ 9 ರಿಂದ ಮರುದಿನ ಬೆಳಗ್ಗೆ 6 ಗಂಟೆಯ ಮಧ್ಯದ ಅವಧಿಯಲ್ಲಿ ತನ್ನ ವಾಸ್ತವ್ಯದ ಮನೆಯ ಅಂಗಳದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಈ ಬಗ್ಗೆ ಮೃತರ ಮಗನಾದ ದಿನೇಶನು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರಂತೆ ಠಾಣೆಯಲ್ಲಿನೀಡಿದ ದೂರಿನ ಮೇರೆಗೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 29/09 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಹಲ್ಲೆ ಪ್ರಕರಣ
ಕುಂದಾಪುರ ತಾಲೂಕು ಆಲೂರು ಗ್ರಾಮದ ಕೊಪ್ಪಟ್ಟಿ, ವಾಸಿ ರತ್ನಾ, ಗಂಡ: ಅಣ್ಣಪ್ಪ ಆಚಾರಿ, ರವರು, ದಿನಾಂಕ 09/08/09 ರಂದು ಪಿರ್ಯಾದಿ ನೀಡಿದ್ದು ಆಪಾದಿತ ಮಂಜುನಾಥ ಆಚಾರಿ 21 ವರ್ಷ ಕೊಪ್ಪಟ್ಟಿ, ಆಲೂರು ಗ್ರಾಮ, ಕುಂದಾಪುರ ತಾಲೂಕು ರವರು ದಿನಾಂಕ 09/08/09ರಂದು ಬೆಳಿಗ್ಗೆ 09;00ಗಂಟೆಗೆ ಪಿರ್ಯಾದಿದಾರರ ಜಾಗದಲ್ಲಿ ಸೊಪ್ಪನ್ನು ಕಡಿಯುತ್ತಿದ್ದಾಗ ಅವರ ಮಗಳು ಸವಿತಳು ಸೊಪ್ಪನ್ನು ಕಡಿಯದಂತೆ ಆಕ್ಷೇಪಿಸಿದಾಗ ಆಪಾದಿತನು ಅವಳಿಗೆ ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ, ಅವಳ 2 ಕೈಗಳನ್ನು ಒತ್ತಿ ಹಿಡಿದು ಕೈಯಿಂದ ಅವಳ ತಲೆಗೆ, ಕಾಲಿಗೆ, ಬೆನ್ನಿಗೆ ಹೊಡೆದು ತುಳಿದಿರುತ್ತಾನೆ. ಬಿಡಿಸಲು ಹೋದ ಶ್ರೀಮತಿ ರತ್ನಾ,ರವರಿಗೆ ಕೈಯಿಂದ ಹೊಡೆದು ದೂಡಿ ಹಾಕಿದ್ದು, ಅವರ ಮಗಳಿಗೆ ಹೊಡೆದ ಪರಿಣಾಮ ಅವಳು ನೆಲಕ್ಕೆ ಬಿದ್ದಾಗ ಆಕೆಯ ತಲೆಗೆ ಕಲ್ಲು ತಾಗಿ ರಕ್ತಗಾಯವಾಗಿದ್ದು, ಅವಳನ್ನು ಕೂಡಲೇ ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೊಗಿಯಾಗಿ ದಾಖಲಾಗಿರುವುದಾಗಿದೆ ಪಿರ್ಯಾದಿದಾರರಿಗೆ ಮತ್ತು ಆಪಾದಿತರಿಗೆ ಜಾಗದ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದು ಇದೇ ವಿಚಾರದಲ್ಲಿ ಆಪಾದಿತನು ಶ್ರೀಮತಿ ರತ್ನ ಮತ್ತು ಮಗಳು ಸವಿತಾಳಿಗೆ ಹಲ್ಲೆ ಮಾಡಿದ್ದಾಗಿರುತ್ತದೆ ಈ ಬಗ್ಗೆ ಶ್ರೀಮತಿ ರತ್ನರವರು ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರಂತೆ ಠಾಣೆಯಲ್ಲಿಅಪರಾಧ ಕ್ರಮಾಂಕ 82/09 ಕಲಂ 504, 323 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಕೊಲೆ ಬೆದರಿಕೆ
ಮಣಿಪಾಲ : ಮಣಿಪಾಲ ಠಾಣಾ ಸರಹದ್ದಿನ ಸರಳೆಬೆಟ್ಟು ವಾಸಿ ಪ್ರಕಾಶ್ ಶೆಟ್ಟಿ (54 ವರ್ಷ) ತಂದೆ ದಿವಂಗತ ನಾರಾಯಣ ಶೆಟ್ಟಿರವರಿಗೆ ಆರೋಪಿ ವೈ.ಎನ್. ರಾಮಚಂದ್ರ ರಾವ್ ಹಾಗೂ ಅವರ ಸಹೋದರ ಇನ್ನೋರ್ವ ಆರೋಪಿ ಬಾಲಕೃಷ್ಣ ರಾವ್ರವರಿಂದ ಕೊಲೆ ಬೆದರಿಕೆ ಬರುತ್ತಿದ್ದು, ದಿನಾಂಕ 12/08/2009 ರಂದು ರಾತ್ರಿ 07:19ಕ್ಕೆ ಪ್ರಕಾಶ್ ಶೆಟ್ಟಿಯವರ ಮೊಬೈಲ್ ದೂರವಾಣಿಗೆ ಆರೋಪಿ ವೈ.ಎನ್. ರಾಮಚಂದ್ರ ರಾವ್ ಅವರು ಮೊಬೈಲ್ ದೂರವಾಣಿ ಸಂಖ್ಯೆ 9844992516 ರಿಂದ ಹಾಗೂ ಪ್ರಕಾಶ್ ಶೆಟ್ಟಿಯವರ ಸುಪದರ್ಿಯಲ್ಲಿರುವ ಅವರ ಮಗ ಶಶಾಂಕನ ಮೊಬೈಲ್ ದೂರವಾಣಿಗೆ ದಿನಾಂಕ 13/08/2009 ರಂದು ಬೆಳಗ್ಗೆ ಸುಮಾರು 09:27 ಗಂಟೆಗೆ ಇನ್ನೋರ್ವ ಆರೋಪಿ ಬಾಲಕೃಷ್ಣ ರಾವ್ ಸ್ಥಿರ ದೂರವಾಣಿ ಸಂಖ್ಯೆ 918040940949ರಿಂದ ಪ್ರಕಾಶ್ ಶೆಟ್ಟಿಯವರಿಗೆ ಕರೆ ಮಾಡಿ ನಿನ್ನನ್ನು ಕೊಲೆ ಮಾಡಲು ಸುಫಾರಿ ನೀಡಿರುತ್ತೇನೆ. ಇನ್ನು ಒಂದೆರಡು ದಿನಗಳಲ್ಲಿ ನಿನ್ನನ್ನು ಕೊಲೆ ಮಾಡಿ ಬಿಸಾಕುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ಪ್ರಕಾಶ್ ಶೆಟ್ಟಿಯವರಿಗೆ ಮತ್ತು ಆರೋಪಿಗಳಿಗೆ ಮಹಾರಾಷ್ಟ್ರ ಅಪೆಕ್ಸ್ ಕೋಅಪರೇಶನ್ ಮತ್ತು ರಾಜಮಹಲ್ ಟ್ರೇಡ್ ಮತ್ತು ಇನ್ ವೆಸ್ಟ್ಮೆಂಟ್ (ಪ್ರೈ) ಲಿಮಿಟೆಡ್ ಹಾಗೂ ಇನ್ನಿತರ ಕೆಲವು ಸಂಸ್ಥೆಗಳಲ್ಲಿನ ತಗಾದೆಗಳ ಕುರಿತು ವೈಮನಸ್ಸು ಇದ್ದು, ಆ ವಿಚಾರಗಳಲ್ಲಿ ಪ್ರಕಾಶ್ ಶೆಟ್ಟಿಯವರು ಆರೋಪಿಗಳಿಗೆ ಕಾನೂನು ಬಾಹಿರವಾಗಿ ಸಹಾಯ ಮಾಡುವರೇ ಕೋರಿದ್ದು ಅದನ್ನು ಅವರು ನಿರಾಕರಿಸಿರುವುದರಿಂದ ಅವರ ಮೇಲೆ ವೈಯಕ್ತಿಕ ದ್ವೇಷ ಸಾಧಿಸಿ ಅವರನ್ನು ಕೊಲೆ ಮಾಡುವರೇ ಸಂಚು ನಡೆಸುತ್ತಿದ್ದಾರೆ ಎಂಬುದಾಗಿ ಆರೋಪಿಸಿ ಪ್ರಕಾಶ್ ಶೆಟ್ಟಿಯವರು ಮಣಿಪಾಲ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದು, ಅದರಂತೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 145/09 ಕಲಂ 506, ಜೊತೆಗೆ 34 ಐ ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳ ದಸ್ತಗಿರಿಯಾಗದೇ ಇರುವುದರಿಂದ ಅವರ ಹೆಚ್ಚಿನ ವಿವರ ತಿಳಿದುಬಂದಿರುವುದಿಲ್ಲ.
 
 
ಲಾರಿ - ಬೈಕ್ ಢಿಕ್ಕಿ : ಬೈಕ್ ಸವಾರನ ಸಾವು
ದಿನಾಂಕ 14/08/2009 ರಂದು 17:15 ಗಂಟೆಗೆ ಕಾಪು ಠಾಣಾ ಸರಹದ್ದಿನ ಮೂಳೂರು ಗ್ರಾಮದ ಮೂಳೂರು ಸವರ್ೆಶ್ವರ ಬೊಬ್ಬರ್ಯ ದೇವಸ್ಥಾನದ ಬಳಿ ರಾ. ಹೆ. 17 ರಲ್ಲಿ ಕೆಎ 17 / 6282 ನಂಬ್ರದ ಲಾರಿಯನ್ನು ಅದರ ಚಾಲಕನಾದ ವಾಗಪ್ಪ (52 ವರ್ಷ), ಬ್ಯಾಡಗಿ, ಹಾವೇರಿ ಜಿಲ್ಲೆರವರು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಮತ್ತು ಅಜಾಗೂರಕತೆಯಿಂದ ಚಲಾಯಿಸಿ ಎದುರಿನಿಂದ ಬರುತ್ತಿದ್ದ ಕೆಎ 04 ಇ.ಡಬ್ಲ್ಯೂ 3043 ನೇ ಮೋಟಾರು ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರರಾದ ಅಭಿಷೇಕ್ ಕಾಶಿ (20 ವರ್ಷ) ತಂದೆ ಅಶೋಕ್ ಕಾಶಿ, ಹೊಸನಗರ, ಶಿವಮೊಗ್ಗ ಜಿಲ್ಲೆ ಎಂಬವರಿಗೆ ತೀವೃ ತರಹದ ಗಾಯವಾಗಿ ಉಡುಪಿ ಹೈ-ಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಮೃತಪಟ್ಟಿರುತ್ತಾರೆ. ಈ ಘಟನೆ ಬಗ್ಗೆ ಮೂಳೂರು ಗ್ರಾಮದ ವಾಸಿ ಕೋಯಾಲಿ ಅಹಮದ್ (42 ವರ್ಷ) ತಂದೆ ಅಹಮದ್ ಬ್ಯಾರಿರವರು ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರಂತೆ ಠಾಣೆಯಲ್ಲಿಅಪರಾಧ ಕ್ರಮಾಂಕ 163/09 ಕಲಂ 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
 
ಇತರೇ ಪ್ರಕರಣ
ಕುಂದಾಪುರ: ದಿನಾಂಕ 14/08/09 ರಂದು ಕೊರಿಯರ್ ಮೂಲಕ ಶ್ರೀಮತಿ ಶ್ರೀಲತಾ ಬಿ. ಶೆಟ್ಟಿ (25 ವರ್ಷ) ಗಂಡ ಭರತ್ ರಾಜ್ ಸಿ.ಎಸ್., ವಾಸ ಸ್ಪೂತರ್ಿಧಾಮ, ಬೇಳೂರು ಗ್ರಾಮ, ಕೆದೂರು ಅಂಚೆ, ಕುಂದಾಪುರ ತಾಲೂಕುರವರು ಕುಂದಾಪುರ ಮಹಿಳಾ ಠಾಣೆಗೆ ದೂರು ನೀಡಿದ್ದು, ದೂರಿನಲ್ಲಿ ನಮೂದಿಸಿದಂತೆ ಪಿರ್ಯಾದಿದಾರರಾದ ಅವರು ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಹಾಡುಹಳ್ಳಿಯ ವಾಸಿ ಪ್ರಸ್ತುತ ಕೆ.ಎಸ್.ಆರ್.ಟಿ.ಸಿ. ಕುಂದಾಪುರ ಡಿಪೋದ ಉದ್ಯೋಗಿ ಭರತ್ ರಾಜ್ (32 ವರ್ಷ)ರವರನ್ನು ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿ ಕುಂದಾಪುರ ತಾಲೂಕಿನ ಶಿರೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ. ಅವರ ಗಂಡ ಭರತ್ ರಾಜ್ರವರು ಮನೆಗೆ ಬಾರದ ಕಾರಣ ಅವರು ಆತನಿಗೆ ದೂರವಾಣಿ ಕರೆ ಮಾಡಿ ಮನೆಗೆ ಬರುವಂತೆ ವಿನಂತಿಸಿದಾಗ ನೀನು ಯಾರೆಂದು ಗೊತ್ತಿಲ್ಲ, ನನಗೂ ನಿನಗೂ ಸಂಬಂಧವಿಲ್ಲ, ನಾನು ನಿನ್ನನ್ನು ಮದುವೆಯಾಗಿರುವುದಿಲ್ಲ, ನೀನು ಏನು ಬೇಕಾದರೂ ಮಾಡಿಕೋ, ನನ್ನನ್ನು ಏನೂ ಮಾಡಲು ಆಗಲ್ಲ ಎಂದು ತಿಳಿಸಿದಕ್ಕೆ ಪಿರ್ಯಾದಿದಾರರು ಗಾಬರಿಗೊಂಡು ಭರತ್ ರಾಜ್ನ ಮನೆಯಾದ ಭಟ್ಕಳದ ಹಾಡುಹಳ್ಳಿಗೆ ಹೋಗಿ ಪ್ರಕರಣದ ಇತರ ಆರೋಪಿತರಾದ ಪಾಯಮ್ಮ ಮತ್ತು ಚಂದ್ರರಾಜ್ ಜೈನ್ರವರಲ್ಲಿ ಭರತ್ ರಾಜ್ನ ಬಗ್ಗೆ ವಿಚಾರಿಸಿದಾಗ ಮನನೋಯುವಂತೆ ಮಾತಾಡಿದ್ದು ಪಿರ್ಯಾದಿದಾರರು ನನ್ನ ಹೊಟ್ಟೆಯಲ್ಲಿ ಭರತ್ ರಾಜ್ರವರ ಮಗು ಬೆಳೆಯುತ್ತಿದೆ ಎಂದು ಹೇಳಿದಾಗ ಪಾಯಮ್ಮ ಮತ್ತು ಚಂದ್ರರಾಜ್ ಜೈನ್ರವರು 5 ಲಕ್ಷ ರೂಪಾಯಿ ವರದಕ್ಷಿಣೆ ಹಣ ತಂದರೆ ಭರತ್ ರಾಜ್ ನಿನ್ನನ್ನು ಮದುವೆಯಾಗಿದ್ದಾನೆ ಎಂದು ಒಪ್ಪುತ್ತೇವೆ ಎಂದು ತಿಳಿಸಿದ್ದಲ್ಲದೆ ಇನ್ನೋರ್ವ ಆಪಾದಿತ ಮಹಾವೀರರವರು ಪಿರ್ಯಾದಿದಾರರನ್ನು ಮನೆಯಿಂದ ಹೊರಗೆ ಎಳೆದು ದೂಡಿದ್ದು ನಂತರ ಪಿರ್ಯಾದಿದಾರರು ಶಿರೂರಿನ ಮನೆಗೆ ಬಂದಿದ್ದು ಆಪಾದಿತರಾದ ಚಂದ್ರರಾಜ್ ಜೈನ್, ಮಹಾವೀರ ಮತ್ತು ಬಾಹುಬಲಿರವರು ಶಿರೂರಿಗೆ ಬಂದು ಪಿರ್ಯಾದಿದಾರರಿಗೆ ನಮ್ಮ ಧರ್ಮಕ್ಕೆ ಸೇರಬೇಕು ಧರ್ಮಕ್ಕೆ ಸೇರಲು ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸಬೇಕು ಎಂದು ತಿಳಿಸಿದ್ದು ಅದಕ್ಕೆ ಪಿರ್ಯಾದಿದಾರರು ಒಪ್ಪದ ಕಾರಣ ಆಪಾದಿತರಾದ ಚಂದ್ರರಾಜ್ ಜೈನ್, ಮಹಾವೀರ ಮತ್ತು ಬಾಹುಬಲಿರವರು ಪಿರ್ಯಾದಿದಾರರನ್ನು ಊರು ಬಿಟ್ಟು ಹೋಗದಿದ್ದರೆ ನಿನ್ನನ್ನು ಹೊಡೆದು ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿದ್ದು ನಂತರ ಮಹಿಳಾ ಸಂಘದವರೊಂದಿಗೆ ಪುನಹ ಭಟ್ಕಳದಲ್ಲಿರುವ ಹಾಡುಹಳ್ಳಿಗೆ ಪಿರ್ಯಾದಿದಾರರು ಹೋಗಿ ಆಪಾದಿತರ ಮನವೊಲಿಸಲು ಪ್ರಯತ್ನಿಸಿದಾಗ ಯಾವುದೇ ಪ್ರಯೋಜನವಾಗಿರಲಿಲ್ಲ ಎಂಬುದಾಗಿ ಸಾರಾಂಶವಾಗಿರುತ್ತದೆ. ಶ್ರೀಮತಿ ಶ್ರೀಲತಾ ಬಿ. ಶೆಟ್ಟಿರವರ ದೂರಿನಂತೆ ಕುಂದಾಪುರ ಮಹಿಳಾ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 06/09 ಕಲಂ 498 (ಎ), 323, 506 (2), 295 (ಎ), ಜೊತೆಗೆ 34 ಐಪಿಸಿ ಮತ್ತು ಕಲಂ 3 ವರದಕ್ಷಿಣೆ ನಿಷೇಧ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 


--

www.kasaragodvartha.com
  
the first local online news paper in Malayalam.

brings latest news in Malayalam & English || links our home land to the world.

::|:: the signature of Kasaragod ::|::

No comments:

Post a Comment