ಕಾಸರಗೋಡು: ಜಿಲ್ಲಾ ಪಂಚಾಯ್ತಿಯ ಯೋಜನೆಯಡಿ 37 ಶಾಲೆಗಳಿಗೆ ಪೀಠೋಪಕರಣಗಳನ್ನು ವಿತರಿಸಲಾಗುವುದು ಎಂದು ಶಿಕ್ಷಣ-ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ನಾರಾಯಣನ್ ಮಂಗಳವಾರ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ತಿಳಿಸಿದರು.
1,500 ಬೆಂಚು ಮತ್ತು ದೆಸ್ಕುಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಅನಸ್ಥೇಶಿಯ ನೀಡಿ ಆಸ್ಕರ್ ಎಂಬ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣದ ಬಗ್ಗೆ ಕ್ರಿಮಿನಲ್ ದಾವೆ ಹೂಡಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಸಭೆಯಲ್ಲಿ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ವೈದ್ಯಾಧಿಕಾರಿ, ಫಾರೆನ್ಸಿಕ್ ಸರ್ಜನ್, ಸರ್ಕಾರಿ ಪ್ಲೀಡರ್, ತಜ್ಞ ವೈದ್ಯರನ್ನೊಳಗೊಂಡ ಸಮಿತಿಯ ಸಭೆ ಇದೇ 7ರಂದು ಸೇರಿ ತನಿಖಾ ವರದಿ ತಯಾರಿಸಲಾಗುವುದು ಎಂದವರು ವಿವರಿಸಿದರು.
ಆರೋಗ್ಯ ಸುರಕ್ಷಾ ಯೋಜನೆಯಡಿ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಎಚ್.ಐ.ವಿ. ಬಾಧಿತರಿಗೆ ಪೋಷಕ ಆಹಾರ ನೀಡಲು ಸಭೆ ತೀರ್ಮಾನಿಸಲಾಗಿದೆ. 10 ಲಕ್ಷ ರೂ.ಗಳನ್ನು ಇದಕ್ಕೆ ಮೀಸಲಿಡಲಾಗಿದೆ. ಈಸ್ಟ್ ಏಳೇರಿ, ವಲಿಯಪರಂಬ, ಪಿಲಿಕ್ಕೋಡ್, ಮಂಜೇಶ್ವರ, ಮಂಗಲ್ಪಾಡಿ ಗ್ರಾಮ ಪಂಚಾಯ್ತಿಗಳ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಪ್ರಾಜೆಕ್ಟ್ಗಳಿಗೆ ಸಭೆ ಅಂಗೀಕಾರ ನೀಡಿತು. ಜಿಲ್ಲೆಯಲ್ಲಿ 5.11 ಕೋಟಿ ರೂ.ವೆಚ್ಚದಲ್ಲಿ 65 ಕಾಮಗಾರಿಗಳನ್ನು ನಿರ್ವಹಣಾ ನಿಧಿ ಮತ್ತು ಯೋನಾ ನಿಧಿಯಲ್ಲಿ ಸೇರಿಸಲು ಸಭೆ ತೀಮರ್ಾನಿಸಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಪಿ.ಪಿ. ಮುಸ್ತಫಾ ಅವರಿಗೆ ಡಾಕ್ಟರೇಟ್ ಲಭಿಸಿದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಜಿ.ಪಂ. ಉಪಾಧ್ಯಕ್ಷೆ ಗೀತಾಕೃಷ್ಣನ್,ಸದಸ್ಯರಾದ ಎಂ.ಸಿ.ಖಮರುದ್ದೀನ್, ರೂಪವಾಣಿ ಆರ್.ಭಟ್, ಕೆ.ರಾಘವನ್, ಎಂ.ವಿ.ಪುಷ್ಪಾಕುಮಾರಿ, ಪ್ರಭಾಕರ ಚೌಟ, ಎಂ.ಅನಂತನ್, ಫರೀದಾ ಸಕೀರ್, ಸಬೂರಾ, ಹಣಕಾಸು ಅಧಿಕಾರಿ ಟಿ.ಕೆ.ಸೋಮನ್, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಪಿ.ಚಂದ್ರಶೇಖರನ್, ವಾಸುದೇವನ್ ನಂಬೂದಿರಿ ಹಾಜರಿದ್ದರು.
--
www.kasaragodvartha.com
the first local online news paper in Malayalam.
brings latest news in Malayalam & English links our home land to the world.
:::: the signature of Kasaragod ::::
No comments:
Post a Comment