ಕಾಸರಗೋಡಿನ ಎಡನೀರು ಮಠದ ಸಭಾಂಗಣದಲ್ಲಿ ಸಮಾವೇಶದ ಕುರಿತು ಶನಿವಾರ ಕರೆದ ಪೂರ್ವಭಾವಿ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿ ಡಾ.ಕೆ.ಮುರಳೀಧರ ಮಾತನಾಡಿದರು.
ಕಾಸರಗೋಡು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ `ಕನ್ನಡ ನುಡಿ ಉತ್ಸವ'ದ ಅಂಗವಾಗಿ ನ.8ರಿಂದ 14ರ ವರೆಗೆ ಕಾಸರಗೋಡಿನಲ್ಲಿ `ಭಾಷಾ ಭಾವೈಕ್ಯತಾ ಸಮಾವೇಶ' ಜರುಗಲಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಡಾ.ಕೆ.ಮುರಳೀಧರ ಶನಿವಾರ ಇಲ್ಲಿ ಪ್ರಕಟಿಸಿದರು.
ಎಡನೀರು ಮಠದ ಸಭಾಂಗಣದಲ್ಲಿ ಸಮಾವೇಶದ ಕುರಿತು ಕರೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಅವರು, ಜಿಲ್ಲೆಯ ಕಾಸರಗೋಡು, ಮಂಜೇಶ್ವರ, ಬದಿಯಡ್ಕ, ಮುಳ್ಳೇರಿಯ, ಪೆರ್ಲ, ಧರ್ಮತ್ತಡ್ಕ, ಕುಂಬಳೆ ಮತ್ತು ಬೇಕಲದಲ್ಲಿ ಸಮಾವೇಶದ ಅಂಗವಾಗಿ ವೈವಿಧ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
8ರಂದು ಕನ್ನಡ ತೇರಿನ ಮೆರವಣಿಗೆಯೊಂದಿಗೆ ಸಮಾವೇಶ ಉದ್ಘಾಟಿಸಲಾಗುವುದು. ಬಳಿಕ ಬಹುಭಾಷಾ ಜನಪದ ಮೇಳ, 9ರಂದು ಬೆಳಗ್ಗೆ ಕುಂಬಳೆಯಲ್ಲಿ ಬಹುಭಾಷಾ ಚಲನಚಿತ್ರೋತ್ಸವದ ಉದ್ಘಾಟನೆ, ಸಂಜೆ ಎಡನೀರು ಮಠದಲ್ಲಿ ರಂಗೋತ್ಸವದ ಉದ್ಘಾಟನೆ, 10ರಿಂದ 13ರ ವರೆಗೆ ರಂದು ಚಲನಚಿತ್ರ ಪ್ರದರ್ಶನ, 10ರಂದು ಎಡನೀರಿನಲ್ಲಿ ನಾಟಕ ಪ್ರದರ್ಶನ, 11ರಂದು ಎಡನೀರಿನಲ್ಲಿ ಯಕ್ಷಗಾನ ಪ್ರದರ್ಶನ, 12ರಂದು ಮುಳ್ಳೇರಿಯಾದಲ್ಲಿ ಬಹುಭಾಷಾ ಗೀತೆ-ನೃತ್ಯೋತ್ಸವ, 13ರಂದು ಸಂಜೆ ಮಂಜೇಶ್ವರದಲ್ಲಿ ಬಹುಭಾಷಾ ಕವಿಗೋಷ್ಠಿ, 14ರಂದು ಬದಿಯಡ್ಕದಲ್ಲಿ ವಿದ್ಯಾಥರ್ಿಗಳಿಂದ ಚಿತ್ರೋತ್ಸವದ ಚಿತ್ರಗಳ ವಿಮಶರ್ೆ-ಸಂವಾದ, ಸಮಾರೋಪ, ಕನ್ನಡ ಗೀತೋತ್ಸವ ನಡೆಯಲಿದೆ ಎಂದವರು ಸಭೆಯಲ್ಲಿ ವಿವರಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ನಾ.ಡಿ.ಸೋಜಾ, ಬಿ.ಸುರೇಶ, ಸಮಾವೇಶದ ಸಂಚಾಲಕ ವಿಷ್ಣು ನಾಯ್ಕ, ಸಿನಿಮಾ ನಿದರ್ೇಶಕ ಬಿ.ಎಂ.ಸುಬ್ರಹ್ಮಣ್ಯ ಹಾಜರಿದ್ದರು. ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದ ಸ್ಥಳೀಯ ಸಂಘಟಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನರ್ಾಟಕ ಸಮಿತಿಯ ಪ್ರಧಾನ ಕಾರ್ಯದಶರ್ಿ ಡಾ.ಕೆ.ಕಮಲಾಕ್ಷ ವಂದಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment