ಕಾಸರಗೋಡು: ನವದೆಹಲಿಯ ಇಂಡಿಯನ್ ಆರ್ಗನೈಸೇಶನ್ ಫಾರ್ ರಿಸಚರ್್ ಆ್ಯಂಡ್ ಡೆವಲಪ್ಮೆಂಟ್ 2009ನೇ ಸಾಲಿನ ರಾಷ್ಟ್ರೀಯ ಉದ್ಯೋಗ ರತ್ನ ಪ್ರಶಸ್ತಿ ಸಹಿತ ಚಿನ್ನದ ಪದಕವನ್ನು ಕಾಸರಗೋಡಿನ ಗ್ರಾಮೀಣ ಸೂಪರ್ ಮಾಕರ್ೆಟ್ ಲಿಮಿಟೆಡ್ನ ಮೇನೇಜಿಂಗ್ ಡೈರೆಕ್ಟರ್ ರಾಜೇಶ್ ಆಳ್ವ ಬದಿಯಡ್ಕ ಅವರಿಗೆ ನೀಡಲು ತೀಮರ್ಾನಿಸಿದೆ.
ಇದೇ 26ರಂದು ನವದೆಹಲಿಯ ಪಿ.ಎಸ್.ಕೆ. ಸಭಾಂಗಣದಲ್ಲಿ ಜರುಗುವ ಆಥರ್ಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪೂರಕವಾದ ವ್ಯಕ್ತಿಗತ ಸಾಧನೆ ಎಂಬ ವಿಷಯದ ಕುರಿತು ನಡೆಯುವ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವ್ಯಾಪಾರ ರಂಗದಲ್ಲಿ ರಾಜೇಶ್ ಆಳ್ವ ಅವರ ಗಣನೀಯ ಸಾಧನೆ ಗುರುತಿಸಿ 2008ರಲ್ಲಿ ನವದೆಹಲಿಯ ಇಂಟರ್ನ್ಯಾಶನಲ್ ಕ್ವಾಲಿಟಿ ಎಕ್ಸಲೆಂಟ್ ಪುರಸ್ಕಾರ ಲಭಿಸಿತ್ತು. ಉದ್ಯಮ ರಂಗದಲ್ಲಿ ಅತ್ಯಲ್ಪ ಕಾಲಾವಧಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಇವರು ತುಳುವೆರೆ ಆಯನೊ ಕಾರ್ಯಕ್ರಮದ ಮೂಲಕ ತುಳು ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದು, ಪ್ರಸಕ್ತ ಕೇರಳ ತುಳು ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇಂದು ಅಭಿವೃದ್ಧಿ ವಿಚಾರಸಂಕಿರಣ
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಉದ್ಘಾಟಿಸುವರು.
ವನಸಂರಕ್ಷಣೆ ವಿಚಾರಸಂಕಿರಣ
ಕಾಲೇಜಿನ ಪ್ರಾಂಶುಪಾಲ ಪ್ರೊ.ಮಾಧವನ್ ನಂಬ್ಯಾರ್ ಉದ್ಘಾಟಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.
ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಅಜಿತ್ ಕುಮಾರ್, ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಮುಹಮ್ಮದಾಲಿ ಪೆರ್ಲ, ರತ್ನಾಕರ ಮಲ್ಲಮೂಲೆ ಹಾಜರಿದ್ದರು.
ಎನ್.ಎಸ್.ಎಸ್. ಕಾರ್ಯದಶರ್ಿ ನಯನ ಸ್ವಾಗತಿಸಿ, ಜಿನೇಶ್ ವಂದಿಸಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್, ಬಹರೈನ್ ಕಾಸರಗೋಡು ಅಸೋಸಿಯೇಶನ್ ಕಾರ್ಯದಶರ್ಿ ರಾಘವನ್, ಕೆ.ವಿ.ಬಾಲಕೃಷ್ಣನ್, ಸರ್ವಮಂಗಳಾ ರಾವ್ ಹಾಜರಿದ್ದರು.
ಪಿ.ಸುಧೀರ್ ಸ್ವಾಗತಿಸಿ, ಕೆ.ಕೆ.ರಾಜನ್ ವಂದಿಸಿದರು. ಸೂರ್ಯಭಟ್ ಕಾರ್ಯಕ್ರಮ ನಿರೂಪಿಸಿದರು.
ಉಚಿತ ವೈದ್ಯಕೀಯ ಶಿಬಿರ
ಇದೇ 19ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 3ರ ವರೆಗೆ ಸೀತಾಂಗೋಳಿ ಸಮೀಪದ ಮುಹಿಮ್ಮಾತ್ ಪ್ರೌಢಶಾಲೆಯ ವಠಾರದಲ್ಲಿ ಶಿಬಿರ ಜರುಗಲಿದೆ.
ಶಿಬಿರಕ್ಕೆ ಸಂಬಂಧಿಸಿ ಕುಂಬಳೆ, ಉಪ್ಪಳ, ಹೊಸಂಗಡಿ, ಕಾಸರಗೋಡು, ಬದಿಯಡ್ಕ, ಸೀತಾಂಗೋಳಿ, ಪೆರ್ಲ, ಮುಂಡಿತ್ತಡ್ಕ ಎಂಬಲ್ಲಿ ಕೌಂಟರ್ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗೆ 9447395038, 9496404020 ಎಂಬ ದೂರವಾಣಿಯನ್ನು ಸಂಪಕರ್ಿಸಬಹುದು.
12ರಂದು ಪತ್ವಾಡಿ ಸೇತುವೆ ಉದ್ಘಾಟನೆ
ಉಪ್ಪಳದಲ್ಲಿ ನಡೆಯುವ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಞ್ಞಂಬು ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಕರುಣಾಕರನ್ ಮತ್ತು ಇತರ ಗಣ್ಯರು ಭಾಗವಹಿಸುವರು.
ನಾಳೆ ನಾಟಕ ಸಾಹಿತ್ಯ ಸಮಿತಿ ಉದ್ಘಾಟನೆ
ಅಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಕನರ್ಾಟಕ ವಿಧಾನ ಪರಿಷತ್ತು ಸಭಾಪತಿ ವೀರಣ್ಣ ಮತ್ತಿ ಉದ್ಘಾಟಿಸುವರು.ಘಟಕದಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು. ನಾಟಕ ಸಾಹಿತ್ಯ ಸಮಿತಿಯನ್ನು ಹರಿಕೃಷ್ಣ ಪುನರೂರು ಉದ್ಘಾಟಿಸುವರು. ಶಾಸಕ ಸಿ.ಎಚ್.ಕುಞ್ಞಂಬು ಕನ್ನಡ ಪತ್ರಿಕೆಗಳನ್ನು ಹಸ್ತಾಂತರಿಸುವರು.
ಮಂಗಳೂರಿನ ಸೃಷ್ಠಿ ಕಲಾವಿದರಿಂದ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ.
No comments:
Post a Comment