ಕಾಸರಗೋಡು: ಇಲ್ಲಿಗೆ ಸಮೀಪದ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ 49ನೇ ಚಾತುರ್ಮಾಸ್ಯ ದೀಕ್ಷಾ ಸಮಾರಂಭ ಮಂಗಳವಾರ ಎಡನೀರು ಮಠದಲ್ಲಿ ಜರುಗಿತು.
ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಸಮಾರಂಭವನ್ನು ಉದ್ಘಾಟಿಸಿದರು. ಮಂಗಳೂರು ನಗರಪಾಲಿಕೆಯ ಮೇಯರ್ ಅಧ್ಯಕ್ಷತೆ ವಹಿಸಿದ್ದರು.
ಮಠದ ಬಗ್ಗೆ ನಿರ್ಮಿಸುವ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕೆ ಮಂಗಳೂರಿನ ಕೆ.ಎಸ್.ಹೆಗ್ಡೆ ವಿದ್ಯಾಸಂಸ್ಥೆಯ ಅಧ್ಯಕ್ಷ ವಿನಯ ಹೆಗ್ಡೆ ಚಾಲನೆ ನೀಡಿದರು.
ಸಚಿವ ಬಿ.ರಮಾನಾಥ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಯ್ಯೂರು ನಾರಾಯಣ ಭಟ್ ಸ್ವಾಗತಿಸಿ, ಕೆ.ರಾಮಕೃಷ್ಣ ರಾವ್ ವಂದಿಸಿದರು. ಡಾ.ರಮಾನಂದ ಬನಾರಿ ಕಾರ್ಯಕ್ರಮ ನಿರೂಪಿಸಿದರು.
Friday, July 10, 2009
Subscribe to:
Post Comments (Atom)
No comments:
Post a Comment