ಕಾಸರಗೋಡು: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕನಿಷ್ಠ ಕೂಲಿಯನ್ನು 160ರೂ.ಗೆ ಏರಿಸಲಾಗಿದೆ ಎಂದು ಕಾಮರ್ಿಕ ಸಚಿವ ಪಿ.ಕೆ.ಗುರುದಾಸನ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಉಮ್ಮನ್ಚಾಂಡಿ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದರು.
ಕೇಂದ್ರ ಸಕರ್ಾರ 100 ರೂ. ನಿಗದಿಗೊಳಿಸಿತ್ತು. ಪ್ರಸಕ್ತ ಮುಂಗಡಪತ್ರದಲ್ಲಿ 39,100 ಕೋಟಿ ರೂ. ಉದ್ಯೋಗ ಖಾತರಿ ಯೋಜನೆಗೆ ಮೀಸಲಿಡಲಾಗಿದೆ.
ವೈದ್ಯಕೀಯ ತಪಾಸಣೆ ತರಬೇತಿ ಶಿಬಿರ
ಬೇಳ(ಕಾಸರಗೋಡು): ಮಂಗಳೂರಿನ ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಹಾಗೂ ಸಿ.ಒ.ಡಿ.ಪಿ. ಪ್ರವತರ್ಿತ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಹಿಳಾ ಆರೋಗ್ಯ ಮಾಹಿತಿ, ವೈದ್ಯಕೀಯ ತಪಾಸಣೆ ಕುರಿತು ತರಬೇತಿ ಶಿಬಿರ ಇತ್ತೀಚೆಗೆ ಇಲ್ಲಿನ ಶೋಕ ಮಾತಾ ದೇವಾಲಯದ ಸಭಾಂಗಣದಲ್ಲಿ ಜರುಗಿತು.
ಶೋಕ ಮಾತಾ ದೇವಾಲಯದ ಸಹಾಯಕ ಧರ್ಮಗುರು ಮೈಕೆಲ್ ಮಸ್ಕರೇನಸ್ ಉದ್ಘಾಟಿಸಿದರು. ಸಿ.ಒ.ಡಿ.ಪಿ. ಸಂಯೋಜಕ ರಾಯನ್ ಮಿರಾಂದ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ದೇರಳಕಟ್ಟೆಯ ಫಾ.ಮುಲ್ಲರ್ಸ್ ಹೋಮಿಯೋಪತಿಕ್ ಆಸ್ಪತ್ರೆಯ ಡಾ.ಲಿಡಿಯಾ ಲೋಬೋ ಹಾಜರಿದ್ದರು.
ಲೀನಾ ಕ್ರಾಸ್ತಾ ಸ್ವಾಗತಿಸಿ, ಫಿಯಾದ್ ಕ್ರಾಸ್ತಾ ವಂದಿಸಿದರು. ಐರಿಸ್ ಡಿ'ಸೋಜಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವೈದ್ಯಕೀಯ ತಪಾಸಣೆ ನಡೆಯಿತು.
'ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರಿ'
ಮಂಜೇಶ್ವರ: ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯ್ತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ಖಾದರ್ ಹೇಳಿದರು.
ಬಂದ್ಯೋಡು ಸಮೀಪದ ಇಚ್ಲಂಗೋಡು ಪಚ್ಚಂಬಳದಲ್ಲಿ ಇತ್ತೀಚೆಗೆ ಹಾಲುತ್ಪಾದಕ ಸಹಕಾರಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಲ್ಪಾಡಿ ಪಂಚಾಯ್ತಿ ಅಧ್ಯಕ್ಷ ಎಂ.ಆನಂದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸುಧೀಶ್ಚಂದ್ರ ಶೆಟ್ಟಿ, ಐತ್ತ ಹೇರೂರು, ಹರಿನಾಥ ಭಂಡಾರಿ, ಮಾಜಿ ಸದಸ್ಯೆ ಜಯಲಕ್ಷ್ಮೀ ಮಯ್ಯ, ಮಿಲ್ಮಾ ಅಧಿಕಾರಿ ಕಾತ್ಯರ್ಾಯಿನಿ, ಮಂಗಲ್ಪಾಡಿ ಪಶು ವೈದ್ಯಾಧಿಕಾರಿ ಡಾ.ವಿಜಯ ಕುಮಾರ್ ಸನಗಲ್, ಸಂಘದ ಅಧ್ಯಕ್ಷ ಎ.ಆರ್. ರಾಜೇಶ್ ಶೆಟ್ಟಿ ಹಾಜರಿದ್ದರು.
ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಿ.ಟಿ.ಕೃಷ್ಣ ಹೆಬ್ಬಾರ್ ಸ್ವಾಗತಿಸಿ, ಎಂ.ಆರ್.ಕೊರಗಪ್ಪ ಶೆಟ್ಟಿ ವಂದಿಸಿದರು. ರಾಧಾಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment