ಕಾಸರಗೋಡು: ಇದೇ ತಿಂಗಳಲ್ಲಿ ಕಾಸರಗೋಡು ಸಕರ್ಾರಿ ಕಾಲೇಜಿನಲ್ಲಿ ತುಳು ಅಧ್ಯಯನ ಕೇಂದ್ರ ಆರಂಭಿಸಲು ಕೇರಳ ತುಳು ಅಕಾಡೆಮಿಯ ಸದಸ್ಯರ ಸಭೆ ತೀಮರ್ಾನಿಸಿದೆ.
ಅಕಾಡೆಮಿಯ ತ್ರೈಮಾಸಿಕ 'ತೆಂಬೆರೆ'ಯನ್ನು ಇದೇ ತಿಂಗಳಲ್ಲಿ ಬಿಡುಗಡೆಗೊಳಿಸುವುದು, ಆಗಸ್ಟ್ ತಿಂಗಳಲ್ಲಿ ಕಾಸರಗೋಡಿನ ಚಿನ್ಮಯ ವಿದ್ಯಾಲಯದಲ್ಲಿ 'ತುಳು ಲಿಪಿ ಪರಿಚಯ' ವಿಚಾರಗೋಷ್ಠಿ, ಕಕರ್ಾಟಕ ಮಾಸದಲ್ಲಿ 'ಆಟಿದ ಆಯನೊ ಕಜ್ಜೊ', ಸಿಂಹ ಮಾಸ 1ನ್ನು ಬದಿಯಡ್ಕದಲ್ಲಿ ಆಚರಿಸಲು ಸಭೆಯಲ್ಲಿ ತೀಮರ್ಾನಿಸಲಾಯಿತು.
ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ತುಳು ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವೆಂಕಟರಾಜ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎಚ್.ಕುಞ್ಞಂಬು, ಜಿಲ್ಲಾಧಿಕಾರಿ ಆನಂದ ಸಿಂಗ್, ಹಣಕಾಸು ಅಧಿಕಾರಿ ರಾಜ್ ಮೋಹನ್, ಅಕಾಡೆಮಿ ಸದಸ್ಯರಾದ ಎಸ್.ಸುಧಾಕರ ಮಾಸ್ಟರ್, ಉಮೇಶ್ ಸಾಲಿಯಾನ್, ರಾಜೇಶ್ ಆಳ್ವ, ಗೀತಾ ಸಾಮನಿ, ಸಫಿಯಾ ಹುಸೈನ್, ಅದಿತಿ ಟೀಚರ್, ಸ್ವರ್ಣಲತಾ ಎಸ್., ಶಾಲಿನಿ ಕೆ, ಸಾವಿತ್ರಿ ಎಂ. ಹಾಜರಿದ್ದರು.
ಕಾರ್ಯದಶರ್ಿ ಎಂ.ಜಿ.ನಾರಾಯಣ ರಾವ್ ವರದಿ ಮಂಡಿಸಿದರು.
ಪುತ್ತಿಗೆ ಪಂಚಾಯ್ತಿ : ಅಭಿವೃದ್ಧಿ ವಿಚಾರಸಂಕಿರಣ
ಕಾಸರಗೋಡು: ಪುತ್ತಿಗೆ ಪಂಚಾಯ್ತಿಯ 2009-10ನೇ ಸಾಲಿನ ಅಭಿವೃದ್ಧಿ ವಿಚಾರಸಂಕಿರಣ ಇತ್ತೀಚೆಗೆ ಸೀತಾಂಗೋಳಿ ಎ.ಬಿ.ಎ. ಸಭಾಂಗಣದಲ್ಲಿ ಜರುಗಿತು.
ಪಂಚಾಯ್ತಿ ಅಧ್ಯಕ್ಷ ತೋಮಸ್ ಡಿ'ಸೋಜಾ ಉದ್ಘಾಟಿಸಿದರು. ಉಪಾಧ್ಯಕ್ಷ ಜಯಂತ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯ್ತಿ ಅಭಿವೃದ್ಧಿ ಕುರಿತ ವರದಿಯನ್ನು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಕುಞ್ಞಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪುಷ್ಪಾ ನಾರಾಯಣನ್ ಅವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು. ಗ್ರಾಮ ವಿಸ್ತರಣಾಧಿಕಾರಿ ಬಾಲಕೃಷ್ಣನ್ ಯೋಜನೆಗಳನ್ನು ವಿವರಿಸಿದರು.
ಪಂಚಾಯ್ತಿ ಸದಸ್ಯರಾದ ಸುಬ್ಬಣ್ಣ ಆಳ್ವ, ವಿಮಲ್ರಾಜ್, ಸಿಂಧೂ ಹಾಜರಿದ್ದರು.
ಪಂಚಾಯ್ತಿ ಕಾರ್ಯದಶರ್ಿ ಸ್ವಾಗತಿಸಿ, ಹೆಲ್ಪ್ ಡೆಸ್ಕ್ ಕಾರ್ಯಕರ್ತ ಕೆ.ಎಂ.ಪಾಟಾಳಿ ವಂದಿಸಿದರು.
13ರಿಂದ 18ರ ವರೆಗೆ ಚಟ್ಟಂಚಾಲ್-ಕಳನಾಡು ರಸ್ತೆ ಸಂಚಾರ ಸ್ಥಗಿತ
ಕಾಸರಗೋಡು: ಪೊಲೀಸ್ ಕಾನ್ಸ್ಟೇಬಲ್(ಇಂಡಿಯಾ ರಿಸಚರ್್ ಬೆಟಾಲಿಯನ್-ರೆಗ್ಯುಲರ್ ವಿಂಗ್) ಹುದ್ದೆಗಳಿಗೆ ಅಜರ್ಿ ಸಲ್ಲಿಸಿದ ಜಿಲ್ಲೆಯ ಅಭ್ಯಥರ್ಿಗಳಿಗೆ ಇದೇ 13ರಿಂದ 18ರ ವರೆಗೆ ಚಟ್ಟಂಚಾಲ್-ಕಳನಾಡು ರಸ್ತೆಯಲ್ಲಿ ಕ್ಷಮತಾ ಪರೀಕ್ಷೆ ನಡೆಯಲಿದೆ.
ಸುರಕ್ಷಾ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಯುವ ದಿನಗಳಲ್ಲಿ ಚಟ್ಟಂಚಾಲ್-ಕಳನಾಡು ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು. ಸಾರ್ವಜನಿಕರು ಈ ವಿಷಯವನ್ನು ಗಮನಿಸುವಂತೆ ಪ್ರಕಟನೆ ತಿಳಿಸಿದೆ.
ಸುಧೀಶ್ಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 10 ಸಾವಿರ ರೂ. ಬಿಡುಗಡೆ
ಕಾಸರಗೋಡು: ಪೊಲೀಸ್ ನೇಮಕಾತಿ ದೈಹಿಕ ಕ್ಷಮತಾ ಪರೀಕ್ಷೆ ವೇಳೆ ಆಯತಪ್ಪಿ ಅಪಘಾತಕ್ಕೀಡಾಗಿ ಚಿಕಿತ್ಸೆಯಲ್ಲಿರುವ ಕುಂಬಳೆ ಸಮೀಪದ ಅನಂತಪುರ ನಿವಾಸಿ ಸುಧೀಶ್ಗೆ ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ 10 ಸಾವಿರ ರೂ. ಬಿಡುಗಡೆಗೊಳಿಸಲಾಗಿದೆ.
ಮಂಜೇಶ್ವರ ಶಾಸಕ ಸಿ.ಎಚ್. ಕುಞ್ಞಂಬು ನಿಧಿಯನ್ನು ಸುಧೀಶ್ರ ತಂದೆ ಎ.ಚಂದ್ರಶೇಖರ ಅವರಿಗೆ ವಿತರಿಸಿದರು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆನಂದ ಸಿಂಗ್, ತಹಸೀಲ್ದಾರ್ ಎಂ.ಚನಿಯಪ್ಪ, ಉಪ ತಹಸೀಲ್ದಾರ್ ಇ.ವಿ.ಗೋಪಾಲನ್, ಎಡನಾಡು ಗ್ರಾಮಾಧಿಕಾರಿ ಜಯಶ್ರೀ ಹಾಜರಿದ್ದರು.
ಅಧ್ಯಾಪಕರ ಸಬಲೀಕರಣ ಕಾರ್ಯಕ್ರಮ
ಕಾಸರಗೋಡು: ಅಧ್ಯಾಪಕ ತಾನು ಗಳಿಸಿದ ಅನುಭವಗಳನ್ನು ವಿದ್ಯಾಥರ್ಿಗಳಿಗೆ ಧಾರೆ ಎರೆದು ಅವರ ಕಲಿಕಾ ಮಟ್ಟವನ್ನು ವಿಸ್ತರಿಸಬೇಕು ಎಂದು ಕುಂಬಳೆ ಸಕರ್ಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕರುಣಾಕರ ಅನಂತಪುರ ಕರೆ ನೀಡಿದರು.
ಇತ್ತೀಚೆಗೆ ಕುಂಬಳೆ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಅಧ್ಯಾಪಕರಿಗೆ ಆಯೋಜಿಸಿದ ಜಿಲ್ಲಾ ಮಟ್ಟದ ಅಧ್ಯಾಪಕರ ಸಬಲೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಟಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಪುಷ್ಪಲತಾ ಪಿ, ಚಂದ್ರಕುಮಾರ್ ಕೊಡ್ಲಮೊಗರು ಹಾಜರಿದ್ದರು.
ಸಂಪನ್ಮೂಲ ಅಧ್ಯಾಪಕರಾದ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಚಿದಾನಂದ ಭಟ್ ಶೇಣಿ ವಂದಿಸಿದರು.
ಸಾರ್ವಜನಿಕ ಗಣೇಶೋತ್ಸವ: ಆಯ್ಕೆ
ಮಂಜೇಶ್ವರ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವದ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಹೊಸಂಗಡಿಯಲ್ಲಿ ಜರುಗಿತು.
ರೋಹಿದಾಸ್ ಬಂಗೇರ ಮುಂಬೈ(ಗೌರವಾಧ್ಯಕ್ಷ), ರಾಘವ ಚೇರಾಲ್(ಅಧ್ಯಕ್ಷ), ದಿನಕರ ಬಿ.ಎಂ.ಹೊಸಂಗಡಿ(ಪ್ರಧಾನ ಕಾರ್ಯದಶರ್ಿ), ಕೆ.ನಾರಾಯಣ(ಕೋಶಾಧಿಕಾರಿ) ಆಯ್ಕೆಯಾದರು.
ಬಿ.ಎಂ.ಹೈಮೇಶ್ ವರದಿ ಮಂಡಿಸಿದರು. ಪದ್ಮನಾಭ ಕಡಪ್ಪುರ ಅಧ್ಯಕ್ಷತೆ ವಹಿಸಿದ್ದರು.
ದೇವರಾಜ್ ಸ್ವಾಗತಿಸಿ, ದಿನಕರ್ ಬಿ.ಎಂ. ವಂದಿಸಿದರು.
No comments:
Post a Comment